News star Kannada

News star Kannada ರಾಜಕೀಯ, ಕ್ರೀಡೆ, ಮನರಂಜನೆ, ತಂತ್ರಜ್ಞಾನ, ಆರೋಗ್ಯ ಮತ್ತು ಇನ್ನೂ ಹೆಚ್ಚಿನವುಗಳ ಇತ್ತೀಚಿನ ಸುದ್ದಿಗಳಿಗಾಗಿ A Small Mirror Of Karnataka. Culture

18/02/2025

ರಸ್ತೆಗೆ ಬಂದ ದೈತ್ಯಾಕಾರದ ಕಾಡಾನೆ

ರಸ್ತೆಗೆ ಬಂದ ದೈತ್ಯಾಕಾರದ ಕಾಡಾನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅರೇಹಳ್ಳಿ ಬಳಿ ರಸ್ತೆಗೆ ಬಂದ ದೈತ್ಯಾಕಾರದ ಒಂಟಿಸಲಗ ಒಂಟಿಸಲಗ ಕಂಡ ಕೂಡಲೇ ವಾಹನ ನಿಲ್ಲಿಸಿಕೊಂಡು ನಿಂತ ಸವಾರರು ನಿಧಾನವಾಗಿ ರಸ್ತೆ ದಾಟಿ ಹೋದ ಒಂಟಿಸಲಗ
ರಸ್ತೆಯಲ್ಲಿ ಸಾಗಿ ಕಾಫಿ ತೋಟದೊಳಗೆ ಹೋದ ಒಂಟಿಸಲಗ ಕಾಡಾನೆಯ ವಿಡಿಯೋ ಮಾಡುತ್ತ ನಿಂತ ಯುವಕರು ಮಲೆನಾಡು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ

18/02/2025

ಮೂರು ಕಾರುಗಳ ನಡುವೆ ಬೆಂಗಳೂರಿನ ನೈಸ್ ರೋಡ್ ನಲ್ಲಿ ಭೀಕರ ಸರಣಿ ಅಪಘಾತ..

ಬೆಂಗಳೂರಿನ ನೈಸ್ ರೋಡ್ ನಲ್ಲಿ ಭೀಕರ ರಸ್ತೆ ಅಪಘಾತ..

ಮೂರು ಕಾರುಗಳ ನಡುವೆ ಸರಣಿ ಅಪಘಾತ..

ವೇಗವಾಗಿ ಬಂದ ಕಾರು ಮುಂದಿನ ಎರಡು ಕಾರುಗಳಿಗೆ ಡಿಕ್ಕಿ..

ಎರಡು ಕಾರುಗಳು ಜಖಂ, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯದಿಂದ ಪಾರು..

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್..

ವಿಡಿಯೋ ಅಧಾರಿಸಿ ನೈಸ್ ರೋಡ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪರಿಶೀಲನೆ..

ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಅಪಘಾತ ಪ್ರಕರಣ..

ಅಪಘಾತದ ದೃಶ್ಯ ಡಿಕ್ಕಿ ಹೊಡೆದ ಕಾರಿನ ಡ್ಯಾಶ್ ಕ್ಯಾಮರಾ ದಲ್ಲಿ ಸೆರೆ..

18/02/2025

ಚಾಲಕನ ಎಡವಟ್ಟು, ಸಾವಿನ ದವಡೆಯಿಂದ ಮಹಿಳೆ ಜಸ್ಟ್ ಮಿಸ್ ಹಿಟ್ ಆಂಡ್ ರನ್ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಚಾಲಕನ ಎಡವಟ್ಟು, ಸಾವಿನ ದವಡೆಯಿಂದ ಮಹಿಳೆ ಜಸ್ಟ್ ಮಿಸ್

ಹಿಟ್ ಆಂಡ್ ರನ್ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾದ ಹಿಟ್ ಆಂಡ್ ರನ್.

ಸೋಷಿಯಲ್ ಮೀಡಿಯಾದಲ್ಲಿ ಹಿಟ್ ಆಂಡ್ ರನ್ ವಿಡಿಯೋ ವೈರಲ್.

ಫೆಬ್ರವರಿ 14 ರಂದು ಮಧ್ಯಾಹ್ನ ನಡೆದ ಘಟನೆ.

ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು.

ಕಾರಿನ ವೇಗ ಕಂಡು ಒಮ್ಮೆ ಗಾಬರಿಯಾದ ಮಹಿಳೆ.

ಈ ವೇಳೆ ಮಹಿಳೆಗೆ ತಾಗಿಕೊಂಡು ವೇಗವಾಗಿ ನುಗ್ಗಿದ ಕಾರು.

ಕಾರು ತಾಗುತ್ತಿದ್ದಂತೆ ಮುಂದೆ ಬಿದ್ದ ಮಹಿಳೆ.

ಕಾರು ಟಚ್ ಆಗಿ ಮಹಿಳೆಗೆ ಗಾಯ.

ಸದ್ಯ ವಿಡಿಯೋ ಪೊಲೀಸರಿಗೆ ಟ್ಯಾಗ್ ಮಾಡಿ ದೂರು.

ಫಾರ್ಚೂನರ್ ಕಾರು ಚಲಿಸುವ ಮೂರು ಸಿಸಿಟಿವಿ ದೃಶ್ಯಾವಳಿ ಪತ್ತೆ.

ವಾಹನ ಸವಾರನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ದೂರು.

18/02/2025

ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಅನಾನುಕೂಲಗಳೆ ಹೆಚ್ಚು..! - ಡಾ|| ಚಿನ್ನಪ್ಪ ವೈ ಚಿಕ್ಕಹಾಗಡೆ

ಆನೇಕಲ್ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆ ಏರಿಸುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದ್ದು ಕೂಡಲೇ ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಇಲ್ಲಿಗೆ ಕೈಬಿಡಬೇಕು ಎಂದು ಕರ್ನಾಟಕ ಜೈ ಬೀಮ್ ಜನ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಡಾ|| ಚಿನ್ನಪ್ಪ ಚಿಕ್ಕಹಾಗಡೆ ರವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

18/02/2025

ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಸುದ್ದಿಗೋಷ್ಠಿ

18/02/2025

ಇಡಿ ಕರ್ನಾಟಕ ರಾಜ್ಯದಲ್ಲಿ ಶಾಂತಿಗೆ ಅವಕಾಶ ಇಲ್ಲದೆ ಇರುವ ಹಾಗಿದೆ ಶಾಂತಿಗೆ ಬರ ಬಂದು ಕೂತೈತೆ :-ಎಚ್ ವಿಶ್ವನಾಥ್

18/02/2025

ನಾನು ನನ್ನ ಸಂಪುಟದ ಯಾರು ಏನೇ ಮಾತಾಡುದ್ರು ರೀಯಾಕ್ಟ್ ಮಾಡೋಕೆ ಆಗಲ್ಲ ನಾನು ಈ ವಿಚಾರದಲ್ಲಿ ಏನು ಮಾತನಾಡಿ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ :- ಸಚಿವ ಚಲುವರಾಯಸ್ವಾಮಿ

18/02/2025

ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ವಾಹನಗಳು,ಅಗ್ನಿಶಾಮಕ ದಳದವರ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

16/02/2025

ಮರಸೂರು ಡಾ|| ಎಂ.ಕೃಷ್ಣಪ್ಪರವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಯೋಜನೆ

ಆನೇಕಲ್ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ಆನೇಕಲ್ ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮರಸೂರು ಡಾ|| ಎಂ.ಕೃಷ್ಣಪ್ಪರವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇನ್ನು ಆನೇಕಲ್ ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ರಾಜ್ಯ ಮತ್ತು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಕ್ಕೆ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಜವಬ್ದಾರಿ ಪತ್ರಗಳನ್ನು ವಿತರಣೆ ಮಾಡಿದ ಆನೇಕಲ್ ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮರಸೂರು ಡಾ|| ಎಂ.ಕೃಷ್ಣಪ್ಪರವರು.
ಇನ್ನೂ ಕಾರ್ಯಕ್ರಮದಲ್ಲಿ ಆನೇಕಲ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬೊಮ್ಮಸಂದ್ರ ರೇಣುಕಾರವರು, ಸಂಘದ ಪದಾದಿಕಾರಿಗಳಾದ ಭೀಮ ಪುತ್ರಿ ಪವಿತ್ರ, ಮೀಸೆ ರಾಮಣ್ಣ, ಪಿ.ಮಂಜುನಾಥ್. ಭದ್ರಪ್ಪ, ರವಿ, ಯೋಗೇಶ್, ಜಗದೀಶ್, ಶೇಖರ್, ಚಿಂತಾಮಣಿ ಚಂದ್ರಶೇಖರ್, ಶಿವು, ಮಾದೇಶ್, ಅಂಬರೀಶ್ ರೆಡ್ಡಿ, ಭಾಸ್ಕರ್, ಪಟಾಸ್ ರವಿ, ಚಂದ್ರಕಲಾ ಗೌಡ, ವರಲಕ್ಷ್ಮೀ, ನಂದಿನಿ, ಪಾರ್ವತಿ, ಲಕ್ಷ್ಮೀ, ಅಂಬಿಕಾ ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

16/02/2025

ನಟ ದರ್ಶನ್‌ರವರ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಆಚರಿಸಿದ ಡಿ.ಕಂಪನಿ ಪ್ಯಾನ್ಸ್ ಅಸೋಶಿಯೇಶನ್ ಆನೇಕಲ್

ಆನೇಕಲ್ ಪಟ್ಟಣದಲ್ಲಿರುವ ಅನ್ನಪರ‍್ಣೇಶ್ವರಿ ಚಿತ್ರಮಂದಿರ ಆವರಣದಲ್ಲಿ ಡಿ.ಕಂಪನಿ ಪ್ಯಾನ್ಸ್ ಅಸೋಶಿಯೇಶನ್ ಆನೇಕಲ್ ಅವರಿಂದ ಡಿ ಬಾಸ್ ಖ್ಯಾತಿಯ ನಟ ರ‍್ಶನ್ ರವರ 48 ನೇ ರ‍್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇನ್ನೂ ಇದೆ ಸಂರ‍್ಭದಲ್ಲಿ ಅಭಿಮಾನಿಗಳು ರ‍್ಶನ್ ರವರ ಕಟೌಟ್ಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ, ಸಿಹಿ ಹಂಚಿ ಹಾಗೂ ಕೇಕ್ ಕತ್ತರಿಸುವ ಮೂಲಕ ಡಿ ಬಾಸ್ ಖ್ಯಾತಿಯ ನಟ ರ‍್ಶನ್ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಇದೇ ಸಂರ‍್ಭದಲ್ಲಿ ಆಶ್ರಮಕ್ಕೆ ಒಂದು ದಿನದ ಅನ್ನದಸೋಹ ಹಾಗೂ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಇನ್ನು ಕರ‍್ಯಕ್ರಮದಲ್ಲಿ ಡಿ.ಕಂಪನಿ ಪ್ಯಾನ್ಸ್ ಅಸೋಶಿಯೇಶನ್ ನ ದೊಡ್ಡಹಾಗಡೆ ಮಹೇಂದ್ರ, ಮಧು, ಶುಬಾಕರ್, ಧನುಷ್, ಮದನ್ ಗೌಡ, ಶೇಕರ್, ಗಣೇಶ್, ಅಪ್ಪಿ ಮಹೇಶ್, ಪ್ರಮೋದ್, ಕೆಂಚ, ರಮೇಶ್, ರವಿ, ಗೌತಮ್, ನಿಖಿಲ್, ಬಸವ, ಹೇಮಂತ್, ಶಿವು, ವೆಂಕಟೇಶ್, ಜಗದೀಶ್,ಗಣೇಶ್. ಕಾಂತರಾಜ್ ಮತ್ತಿತರು ಹಾಜರಿದ್ದರು.

15/02/2025

ಅನೇಕಲ್ ನಲ್ಲಿ ಮುತ್ತಿನ ಪಲ್ಲಕ್ಕಿ ಮತ್ತು ರಥ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅದ್ದೂರಿಯಾಗಿ ನಡೆದ 3ನೇ ವರ್ಷದ 101 ಪಲ್ಲಕ್ಕಿ ಉತ್ಸವ

ಮುತ್ತಿನ ಪಲ್ಲಕ್ಕಿ ಮತ್ತು ರಥ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದಲ್ಲಿ 3ನೇ ವರ್ಷದ "101 ಪಲ್ಲಕ್ಕಿ ಉತ್ಸವ" ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಆನೇಕಲ್ ಪಟ್ಟಣದಲ್ಲಿ 101 ಪಲ್ಲಕ್ಕಿ ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ವೈಭವದಿಂದ ನೆರವೇರಿತು.
ಇನ್ನು ಆನೇಕಲ್ ತಾಲ್ಲೂಕಿನ ವಿವಿಧ ಗ್ರಾಮಗಳ 101 ದೇವರ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಆನೇಕಲ್‌ ನಲ್ಲಿ 3ನೇ ಬಾರಿ ನಡೆದ ವಾರ್ಷಿಕೋತ್ಸವದ ಉತ್ಸವು ಜನರ ಕಣ್ಮನ ಸೆಳೆಯಿತು.
ಆನೇಕಲ್ ಪಟ್ಟಣದ ವೆಂಕಟೇಶ್ವರ ಚಿತ್ರ ಮಂದಿರದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಪಲ್ಲಕ್ಕಿಗಳ ಸಾಲು 1 ಕಿಲೋಮೀಟರ್ ಗೂ ಹೆಚ್ಚು ದೂರವಿತ್ತು.
ಏಕಕಾಲದಲ್ಲಿ 101 ಮೂರ್ತಿಗಳ ಪಲ್ಲಕ್ಕಿಗಳನ್ನು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು. ಮೆರವಣಿಗೆಯ ಬಳಿಕ ಆನೇಕಲ್ ನ ಎ.ಎಸ್‌.ಬಿ ಶಾಲೆಯ ಆಟದ ಮೈದಾನದಲ್ಲಿ ಪಲ್ಲಕ್ಕಿಗಳು ಜಮಾವಣೆಯಾದವು.
ಸಂಜೆ ವೇಳೆ ಪಲ್ಲಕ್ಕಿಗಳಿಗೆ ಆಕರ್ಷಕ ವಿದ್ಯುತ್‌ ಅಲಂಕಾರ ಮಾಡಿದ್ದರಿಂದ ಆನೇಕಲ್ ಪಟ್ಟಣದ ಎ.ಎಸ್‌.ಬಿ ಶಾಲೆಯ ಆಟದ ಮೈದಾನ ಬೆಳಕಿನಿಂದಾಗಿ ಜಗಮಗಿಸುತ್ತಿತ್ತು. ಪಲ್ಲಕ್ಕಿ ಉತ್ಸವದ ಪ್ರಯುಕ್ತ ವಿವಿಧ ಮನರಂಜನೆ, ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮಗಳು ನಡೆದವು.
ರಸಮಂಜರಿ ಕಾರ್ಯಕ್ರಮದಲ್ಲಿ ಸ್ವಾಮೀಜಿ, ಪಲ್ಲಕ್ಕಿ ಕುಟುಂಬದ ಹಿರಿಯರು, ಗಣ್ಯರು, ಪುರಸಭೆ - ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಮುತ್ತಿನ ಪಲ್ಲಕ್ಕಿ ಮತ್ತು ರಥ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಆಕರ್ಷಣೆಯಾಗಿ ಎತ್ತರವಾಗಿ ಕಾಣುತ್ತಿದ್ದ ಮುತ್ತಿನ ಪಲ್ಲಕ್ಕಿ ಮಾಲಿಕರಿಗೆ 5 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು.
ಮುತ್ತಿನ ಪಲ್ಲಕ್ಕಿ ಮತ್ತು ರಥ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ಸಂಘದ ಕಾರ್ಯದರ್ಶಿ ಉಲ್ಲಾಸ್, ಮಾಜಿ ಅಧ್ಯಕ್ಷ ‌ಎನ್. ನವೀನ್‌ ಕುಮಾರ್, ಗೌರವ ಅಧ್ಯಕ್ಷರಾದ ನಾಗರಾಜು, ಬಸವರಾಜು, ಉಪಾಧ್ಯಕ್ಷರಾದ ಲೋಕೇಶ್, ಶ್ರೀನಿವಾಸ್, ಕಾರ್ಯಾಧ್ಯಕ್ಷರಾದ ದಯಾನಂದ್, ನವೀನ್, ಪ್ರಧಾನ ಕಾರ್ಯದರ್ಶಿ ಆನಂದ್, ಮಂಜುನಾಥ್, ಪ್ರಚಾರ ಸಮಿತಿ ಅಧ್ಯಕ್ಷ ವೇಣುಗೋಪಾಲ್, ಸಹ ಕಾರ್ಯದರ್ಶಿ ನವೀನ್ರಾಜು ಖಜಾಂಚಿ ನಾಗೇಶ್, ಪಲ್ಲಕ್ಕಿ ಮತ್ತು ರಥ ಮಾಲೀಕರು, ಕುಟುಂಬದವರು ಚಾಲಕರು ಸಾರ್ವಜನಿಕರು ತಾಲೂಕಿನ ಜನತೆ ಭಾಗವಹಿಸಿದ್ದರು.

15/02/2025

ಡಾಲಿ-ಧನ್ಯತಾ ಅದ್ಧೂರಿ ಆರತಕ್ಷತೆ ನೇರಪ್ರಸಾರ

15/02/2025

ಫೆಬ್ರವರಿ 16 ರಂದು ಮರಸೂರು ಪಂಚಾಯಿತಿ ಪ್ರೀಮಿಯರ್ ಲೀಗ್ ನ 4ನೇ ಸೀಜನ್ ಪ್ರಾರಂಭ
ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಜೊತೆಗೆ ಯುವಕರನ್ನು ದುಶ್ಚಟಗಳಿಂದ ದೂರ ಮಾಡುವ ಉದ್ದೇಶದಿಂದ ಈಗಾಗಲೇ ಐಪಿಎಲ್ ಮಾದರಿಯಲ್ಲಿಯೇ ಮರಸೂರು ಪಂಚಾಯಿತಿ ಪ್ರೀಮಿಯರ್ ಲೀಗ್ 1.2.3 ಸೀಜನ್ ಆಯೋಜಿಸಿ ಪಂದ್ಯಾವಳಿಯು ಕೂಡ ಯಶಸ್ಸು ಕಂಡಿದ್ದು ಮುಂದುವರೆದ ಬಾಗವಾಗಿ
ಫೆಬ್ರವರಿ 16 ರಂದು ಮರಸೂರು ಪಂಚಾಯಿತಿ ಪ್ರೀಮಿಯರ್ ಲೀಗ್ ನ 4ನೇ ಸೀಜನ್ ಪ್ರಾರಂಭವಾಗಲಿದೆ ಎನ್ನಲಾಗಿದೆ.
ಇನ್ನು ಈ ಬಾರಿ ಮರಸೂರು ಪಂಚಾಯಿತಿ ಪ್ರೀಮಿಯರ್ ಲೀಗ್ 4ನೇ ಸೀಜನ್ ನ ಜವಬ್ದಾರಿಯನ್ನು ಟೀಮ್ ಜ್ಯೋತಿ ಬಾಪುಲೆ ಎಂ.ಮಡಿವಾಳ ತಂಡದವರು ವಹಿಸಿಕೊಂಡಿದ್ದರೆ.
ಹಾಗೆಯೇ ಮರಸೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇನ್ನು ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ವಕೀಲರಾದ ಮಂಜುನಾಥ್, ಶಂಕರ್ ನಾಗ್. ಕಿರಣ್. ನಾಗರಾಜ್. ಎಸ್ಟೇಟ್ ಮಂಜು. ಹರೀಶ್. ಮಾದೇಶ್. ಸೂರಿ. ಸುದೀಪ್. ಅನಿಲ್. ಸತ್ಯನಾರಾಯಣ್. ಶಶಾಂಕ್. ಬಂಡಾಪುರ ಹರೀಶ್. ಶಾಮ್. ಪಾರ್ಥ. ಗೋಪಾಲ್. ಪೋಲಿಸ್ ಶಂಕರ್, ಚೇತನ್, ಸಂದೀಪ್ ಸಿಂಹ ಎನ್ನಲಾಗಿದೆ.
ಇನ್ನು ಕಾರ್ಯಕ್ರಮದಲ್ಲಿ ಮಡಿವಾಳ ಮಣಿಕಂಠ. ಕನ್ನಡದ ಮರಿ ಮತ್ತು ಸ್ಥಳೀಯ ಮುಖಂಡರು ಹಾಗೂ ಕ್ರೀಡಾಪಟುಗಳು ಬಾಗವಹಿಸಿದ್ದರು.

14/02/2025

ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಡಾಪುರ ರಮೇಶ್ ರೆಡ್ಡಿರವರಿಗೆ ಹುಟ್ಟು ಹಬ್ಬದ ಸಂಭ್ರಮ

ಆನೇಕಲ್ ವಿಧಾನ ಸಭಾ ಕ್ಷೇತ್ರದ ಮರಸೂರು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಡಾಪುರ ರಮೇಶ್ ರೆಡ್ಡಿ ರವರು ತಮ್ಮ ಹುಟ್ಟು ಹಬ್ಬವನ್ನು ಪಂಚಾಯಿತಿ ಸದಸ್ಯರ ಮತ್ತು ಹಿತೈಷಿಗಳ ಜೊತೆಗೂಡಿ ಸರಳವಾಗಿ ಆಚರಿಸಿಕೊಂಡರು.
ಇನ್ನು ಇದೇ ಸಂಧರ್ಭದಲ್ಲಿ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಡಾಪುರ ರಮೇಶ್ ರೆಡ್ಡಿರವರಿಗೆ ಹಿತೈಷಿಗಳು ಮತ್ತು ಪಂಚಾಯಿತಿ ಸದಸ್ಯರು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಹುಟ್ಟು ಹಬ್ಬಕ್ಕೆ ಶುಭ ಕೋರಿದರು.
ಇನ್ನು ಕಾರ್ಯಕ್ರಮದಲ್ಲಿ ಬಂಡಾಪುರ ರಾಮಚಂದ್ರ, ಮಡಿವಾಳ ಮಣಿಕಂಠ, ರಶ್ಮಿ ಆನಿಲ್, ವೆಂಕಟಸ್ವಾಮಿರೆಡ್ಡಿ, ಚಂದ್ರಕಲಾ ಯಲ್ಲಪ್ಪ, ಸುದಾ ಮುರುಳಿ, ಪ್ರಬಾಕರ್ ರೆಡ್ಡಿ, ಪಿಡಿಓ ಮುರಳಿ ಹಾಗೂ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು

14/02/2025

ಗುಡ್ಡಹಟ್ಟಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರವಿಕುಮಾರ್.ಉಪಾಧ್ಯಕ್ಷರಾಗಿ ವೆಂಕಟಸ್ವಾಮಿರೆಡ್ಡಿರವರು ಅವಿರೋಧ ಆಯ್ಕೆ

ಆನೇಕಲ್ ತಾಲ್ಲೂಕಿನ ಗುಡ್ಡಹಟ್ಟಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗುಡ್ಡಹಟ್ಟಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರವಿಕುಮಾರ್ ರವರು ಹಾಗೆಯೇ ಉಪಾಧ್ಯಕ್ಷರಾಗಿ ವೆಂಕಟಸ್ವಾಮಿರೆಡ್ಡಿ ರವರು ಅವಿರೋಧವಾಗಿ ಆಯ್ಕೆಗೊಂಡರು.
ಇನ್ನು ಇದೇ ಸಂಧರ್ಭದಲ್ಲಿ ಸಂಘದ ನಿರ್ದೆಶಕರುಗಳು ಮತ್ತು ಸ್ಥಳೀಯ ಮುಖಂಡರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶುಭ ಕೋರಿದರು.
ಇನ್ನು ಕಾರ್ಯಕ್ರಮದಲ್ಲಿ ನೆರಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್. ಗ್ರಾಮ ಪಂಚಾಯಿತಿ ಸದಸ್ಯರಾದ ಗುಡ್ಡಹಟ್ಟಿ ನವೀನ್ ಗೌಡ ಮತ್ತು ಮುಖಂಡರಾದ ಗುಡ್ಡಹಟ್ಟಿ ಶಂಭಪ್ಪ. ಆದಿಗೊಂಡನಹಳ್ಳಿ ಪ್ರಕಾಶ್ ರೆಡ್ಡಿ ಮತ್ತು ಗುಡ್ಡಹಟ್ಟಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಮುನಿರಾಜಪ್ಪ. ಎಸ್.ಶಿವಶಂಕರ್ ರೆಡ್ಡಿ. ಪುರುಷೋತ್ತಮ್ ರೆಡ್ಡಿ. ಮುನಿಸ್ವಾಮಿರೆಡ್ಡಿ. ಎಸ್.ಮಂಜುನಾಥ್. ಆರ್.ವೆಂಕಟೇಶ್. ಆರ್.ಮಮತಾ. ಕೆ.ಸುಕನ್ಯಾ. ವಿ.ಮುನಿಯಲ್ಲಪ್ಪ. ಎಸ್.ವೆಂಕಟೇಶ್ ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.

13/02/2025

ಚಾಮರಾಜಪೇಟೆ ವೆಂಕಟರಮಣ ಸ್ವಾಮಿ ದೇವಸ್ಥಾನ ಹುಂಡಿ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ......

13/02/2025

ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ನಾಗರತ್ನ ಕಾಂತರಾಜು. ಉಪಾಧ್ಯಕ್ಷರಾಗಿ ಮಂಜುಳಾ ರಮೇಶ್ ರೆಡ್ಡಿ ಆಯ್ಕೆ

ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ನಾಗರತ್ನ ಕಾಂತರಾಜು ಹಾಗೂ ಉಪಾಧ್ಯಕ್ಷರಾಗಿ ನಾರಾಯಣಘಟ್ಟ ಶ್ರೀಮತಿ ಮಂಜುಳಾ ರಮೇಶ್ ರೆಡ್ಡಿರವರು ಆಯ್ಕೆಗೊಂಡರು. ಇನ್ನು ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು. ಸ್ಥಳೀಯ ಮುಖಂಡರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶುಭ ಕೋರಿದರು.
ಇನ್ನು ಕಾರ್ಯಕ್ರಮದಲ್ಲಿ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರಾದ ಮುತ್ತಾನಲ್ಲೂರು ವಿಶ್ವನಾಥರೆಡ್ಡಿ. ಆರ್.ಕೃಷ್ಣಾರೆಡ್ಡಿ. ಗೋಪಸಂದ್ರ ಸುಶೀಲಮ್ಮ ಮುನಿರೆಡ್ಡಿ. ಡಾ|| ಚಿನ್ನಪ್ಪ ಚಿಕ್ಕಹಾಗಡೆ. ಜಯಪ್ರಕಾಶ್. ಬಿಬಿಐ ರಾಜು. ನಾಗರಾಜ್ ಸೋನಿ. ಸಮ್ಮನಹಳ್ಳಿ ರವಿ. ಮದು. ಗೋಪಸಂದ್ರ ವೇಣು. ಬಾಬು. ನಾರಾಯಣಘಟ್ಟ ವಿಶ್ವನಾಥರೆಡ್ಡಿ. ಉಮೇಶ್. ಗೋಪಸಂದ್ರ ಹರೀಶ್, ವೀಣಾ ಶ್ರೀನಿವಾಸ್ ರೆಡ್ಡಿ ಮತ್ತು ಸ್ಥಳೀಯ ಮುಖಂಡರು ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಶುಭ ಕೋರಿದರು.

12/02/2025

ಮೋದಿ ಮುಖವಾಡ ಧರಿಸಿದವರಿಂದ ಕಿವಿ ಮೇಲೆ ಹೂವು ಇಟ್ಟುಕೊಂಡು ರಾಜಾಜಿನಗರ ಮೇಟ್ರೋ ನಿಲ್ದಾಣದಿಂದ ಮಂತ್ರಿ ಮಾಲ್ ಮೆಟ್ರೋ ವರೆಗೂ ಕಾಂಗ್ರೆಸ್ ಮುಖಂಡರಿAದ ಪ್ರತಿಭಟನೆ

Address

Https://maps. App. Goo. Gl/XrM294y5c1ATfy1fA
Anekal
562106

Alerts

Be the first to know and let us send you an email when News star Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News star Kannada:

Share