News star Kannada

News star Kannada ರಾಜಕೀಯ, ಕ್ರೀಡೆ, ಮನರಂಜನೆ, ತಂತ್ರಜ್ಞಾನ, ಆರೋಗ್ಯ ಮತ್ತು ಇನ್ನೂ ಹೆಚ್ಚಿನವುಗಳ ಇತ್ತೀಚಿನ ಸುದ್ದಿಗಳಿಗಾಗಿ A Small Mirror Of Karnataka. Culture

25/09/2025

ಆನೇಕಲ್ ಪಟ್ಟಣದಲ್ಲಿರುವ ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿತ್ತು.

ಇನ್ನು ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಆನೇಕಲ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಹೆನ್ನಾಗರ ಹಾಪ್ ಕಾಮ್ಸ್ ಬಾಬುರೆಡ್ಡಿ ರವರು ವಹಿಸಿದ್ದರು.
ಇನ್ನು ಸಭೆಯಲ್ಲಿ ಸಂಘದ ಸದಸ್ಯರು ತಮ್ಮ ತಮ್ಮ ಸಮಸ್ಯೆಯನ್ನು ಹೇಳಿಕೊಂಡ ದೃಶ್ಯ ಕಂಡು ಬಂತು ಹಾಗೆಯೇ ಸಂಘದ ಅಧ್ಯಕ್ಷರಾದ ಹಾಪ್ ಕಾಮ್ಸ್ ಬಾಬುರೆಡ್ಡಿ ರವರು ಮಾತನಾಡಿ ಸಂಘದ ಸದಸ್ಯರು ತಿಳಿಸಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಸಾಮಾನ್ಯ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮುನಿಚೌಡಪ್ಪ. ನಿರ್ದೇಶಕರುಗಳಾದ ವೆಂಕಟಸ್ವಾಮಿ. ರಾಮಕೃಷ್ಣಪ್ಪ. ತಿಲಕ್ ಕುಮಾರ್. ವಿನೀತ್. ಮುರಳಿಕೃಷ್ಣ, ಮಂಜುನಾಥ್. ಗಿರಿಜಮ್ಮ. ನೇತ್ರ ದನುಂಜಯ್ಯ. ಶಿವಾನಂದ. ಹರೀಶ್. ಬಿಜೆ ಆಂಜಿನಪ್ಪ. ವೆಂಕಟೇಶ್. ಮುಖ್ಯ ಕಾರ್ಯ ನಿರ್ವಾಹಣಾದಿಕಾರಿ ತಿಲಕ್ ಮತ್ತು ಗಣ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಘದ ಸದಸ್ಯರು ಬಾಗವಹಿಸಿದ್ದರು.

25/09/2025

ಹುಲಿಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ ರೆಡ್ಡಿರವರ ಹುಟ್ಟು ಹಬ್ಬ ಅಂಗವಾಗಿ ಹಲವು ಸಮಾಜ ಮುಖಿ ಕಾರ್ಯಕ್ರಮ ಆಯೋಜನೆ
ಆನೇಕಲ್ ತಾಲೂಕಿನ ಚಂದಾಪುರ ಸಮೀಪದಲ್ಲಿರುವ ಸಿಪಾನಿ ಸೇವಾ ಸದನದ ಆವರಣದಲ್ಲಿ ಹುಲಿಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ ರೆಡ್ಡಿರವರ ಹುಟ್ಟು ಹಬ್ಬ ಅಂಗವಾಗಿ ಅವರ ಅಭಿಮಾನಿಗಳು. ಸ್ನೇಹಿತರು ಒಂದು ದಿನದ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು
ಇನ್ನು ಕಾರ್ಯಕ್ರಮದ ನೇತೃತ್ವವನ್ನು ಯುವ ಮುಖಂಡರಾದ ಹೆಬ್ಬಗೋಡಿ ಲೋಕೇಶ್ ರವರು ವಹಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಹುಲಿಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇಶ್ ರೆಡ್ಡಿ ರವರ ಸುಪುತ್ರ ಮಹೇಶ್. ಯುವ ಮುಖಂಡರಾದ ಪವನ್. ಅನಿಲ್. ಪ್ರಮೋದ್.
ಹರ್ಷಿತ್, ರಷಿತ್, ಯೋಗಿ, ಗಗನ್ ,ಕೀರ್ತಿ, ಮೋಹಿತ್, ಸಾಗರ್,ಮೊನಿಶ್ ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.

25/09/2025

ಆನೇಕಲ್ ಪಟ್ಟಣಕ್ಕೆ ಸಮೀಪದ ಗುಮ್ಮಳಾಪುರ ಗೌರಿ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕರ್ನಾಟಕ ಮತ್ತು ತಮಿಳುನಾಡಿನ ಭಕ್ತರು ವೈಭವದ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು

25/09/2025

ಆನೇಕಲ್ ವಿಧಾನ ಸಭಾ ಕ್ಷೇತ್ರದ ವಣಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಶ್ರೀಮತಿ ಸವಿತಾ ಸನತ್ ಕುಮಾರ್ ರವರು ವಣಕನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಇನ್ನು ಇದೇ ಸಂಧರ್ಭದಲ್ಲಿ ವಣಕನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಶ್ರೀಮತಿ ಸವಿತಾ ಸನತ್ ಕುಮಾರ್ ರವರಿಗೆ ಸ್ಥಳೀಯ ಮುಖಂಡರು ಬೃಹತ್ ಹಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಶುಭ ಕೋರಿದರು.
ಇನ್ನು ಸ್ಥಳದಲ್ಲಿ ವಣಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ದೇವರಾಜ್. ಗ್ರಾಮ ಪಂಚಾಯಿತಿ ಸದಸ್ಯರಾದ ಚೈತ್ರಬಾಬು. ವಾಸು. ನಾರಾಯಣಸ್ವಾಮಿ. ಕಾರ್ತಿಕ್ ರೆಡ್ಡಿ. ಚಂದ್ರಾರೆಡ್ಡಿ. ರತ್ನಮ್ಮ. ವೆಂಕಟಲಷ್ಮಮ್ಮ. ರಾಮಕ್ಕ. ಮುಖಂಡರಾದ ಮೆಣಸಿಗನಹಳ್ಳಿ ರಘು. ಸರಸತ್ವತ್ತಮ್ಮ ಅಶ್ವಥ್. ರಾಮಚಂದ್ರೇಗೌಡ. ಮಂಜುನಾಥ್. ಪ್ರಸನ್ನಕುಮಾರ್,ರಾಮುಮೂರ್ತಿ. ಬಾಬು ಮತ್ತು ವೀರ ಶೈವ ಲಿಂಗಾಯಿತ ಸಮುದಾಯದವರು. ಗ್ರಾಮಸ್ಥರು ಹಾಜರಿದ್ದರು.

25/09/2025

ಬೊಮ್ಮಸಂದ್ರದಿAದ ವಿಧಾನಸೌಧದವರೆಗೂ ಮೆಟ್ರೋದಲ್ಲಿ ಪ್ರಯಾಣಿಸಿದ ಆನೇಕಲ್ ಶಾಸಕ ಬಿ ಶಿವಣ್ಣನವರು...

25/09/2025

ಚಲಿಸುತ್ತಿದ್ದ ಕಾರಿನ ಮೇಲೆ ಎಗರಿದ ವ್ಯಕ್ತಿ..

ಬೆಳ್ಳಂದೂರಿನ ಔಟರ್ ರಿಂಗ್ ರೋಡ್ ನಲ್ಲಿ ನಡೆದ ಘಟನೆ..

ವ್ಯಕ್ತಿಯೊಬ್ಬ ಹಾರಿ ಕುಳಿತುಕೊಳ್ಳೋ ದೃಶ್ಯ ಕಾರಿನ ಡ್ಯಾಶ್ ಕ್ಯಾಮರದಲ್ಲಿ ಸೆರೆ..

ಬಳಿಕ ತಾನಾಗಿಯೇ ಕಾರಿನ ಬಾನೆಟ್ ನಿಂದ ಇಳಿದು ಹೋದ ವ್ಯಕ್ತಿ..

25/09/2025

ಬೆಂಗಳೂರಿನಲ್ಲಿ OG ಸಿನಿಮಾ‌ ರಿಲೀಸ್ ವೇಳೆ ಅಭಿಮಾನಿಗಳ ಹುಚ್ಚಾಟ

ಶೋಕಿಗಾಗಿ ಪ್ಲಾಸ್ಟಿಕ್ ಖಡ್ಗ್ ಹಿಡಿದು ಫೋಸ್ ಕೊಟ್ಟವರಿಗೆ ಶಾಕ್

ನಿನ್ನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಸಂಧ್ಯಾ ಥಿಯೇಟರ್ ಮುಂಭಾಗ ಹುಚ್ಚಾಟ

ಪ್ಲಾಸ್ಟಿಕ್ ಖಡ್ಗ್ ಹಿಡಿದು ಹುಚ್ಚಾಟ ಮಾಡಿದವರ ವಶಕ್ಕೆ ಪಡೆದ ಪೊಲೀಸರು

ಪ್ಲಾಸ್ಟಿಕ್ ಖಡ್ಗ ಸೀಜ್ ಮಾಡಿದ ಮಡಿವಾಳ ಪೊಲೀಸರು

ಅತಿರೇಕದ ವರ್ತನೆ ತೋರಿದ ಅಭಿಮಾನಿಗಳ ವಶಕ್ಕೆ ಪಡೆದಿದ್ದ ಪೊಲೀಸರು

ಪ್ಲಾಸ್ಟಿಕ್ ಖಡ್ಗ ವಶಕ್ಕೆ ಪಡೆದು ಬುದ್ದಿವಾದ ಹೇಳಿ ಬಿಟ್ಟು ಕಳುಹಿಸಿದ ಪೊಲೀಸರು

ಸಂಧ್ಯಾ ಥಿಯೇಟರ್ ಮುಂಭಾಗ ಡಿಜಿ ಹಾಕಿದ್ದವರಿಗೆ ಶಾಕ್

ಆಯೋಜಕರನ್ನ ವಶಕ್ಕೆ ಪಡೆದ ಮಡಿವಾಳ ಪೊಲೀಸರು

ಡಿಜೆ ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸರು

ಪೊಲೀಸರು ನೋಟಿಸ್‌ ನೀಡಿದ್ರು ಡಿಜೆ ಹಾಕಿ ಅತಿರೇಕದ ವರ್ತನೆ

25/09/2025

ನಾನು ಕಾವೇರಿ ಆರತಿ ಸ್ಥಳ ಪರಿಶೀಲನೆ ಮಾಡಲು ಹೋಗುತ್ತಿದ್ದೇನೆ ಯಾವ ರೈತರ ವಿರೋಧ ಇಲ್ಲ ಪೂಜೆಗೆ ಯಾರು ವಿರೋಧ ಮಾಡಲ್ಲ - ಡಿಸಿಎಂ ಡಿಕೆ ಶಿವಕುಮಾರ್

25/09/2025

ಶ್ರೀ ಚಕ್ರ ಸಮೇತ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮೂರನೇ ದಿನದ ನವರಾತ್ರಿ ಅಂಗವಾಗಿ ದೇವರಿಗೆ ಸಿಂಹ ವಾಹನ ಅಲಂಕಾರ ಹಾಗೂ ಶ್ರೀಭದ್ರಕಾಳಿ ಹೋಮವನ್ನು ಹಮ್ಮಿಕೊಳ್ಳಲಾಯಿತು

ಆನೇಕಲ್ ತಾಲೂಕಿನ ಕರ್ಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಚಮಾನಹಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀ ಚಕ್ರ ಸಮೇತ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ನವರಾತ್ರಿ ಉತ್ಸವ ಮತ್ತು ಹೋಮಗಳನ್ನು ಭಕ್ತರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು..

ಇನ್ನು ಮೂರನೇ ದಿನದ ನವರಾತ್ರಿ ಅಂಗವಾಗಿ ದೇವರಿಗೆ ಸಿಂಹ ವಾಹನ ಅಲಂಕಾರ ಹಾಗೂ ಶ್ರೀಭದ್ರಕಾಳಿ ಹೋಮವನ್ನು ಹಮ್ಮಿಕೊಳ್ಳಲಾಯಿತು ಇನ್ನು ದೇವರಿಗೆ ವಿಶೇಷ ಪೂಜೆ ಮತ್ತು ದೇವಾಲಯಕ್ಕೆ ವಿಶೇಷ ಅಲಂಕಾರ ಅನ್ನದಾಸೋಹ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳನ್ನು ಶಾಸ್ತೋಸ್ತವಾಗಿ ಭಕ್ತರ ಹಾಗೂ ಗ್ರಾಮಸ್ಥರ ಸಮುಖದಲ್ಲಿ ನೆರವೇರಿಸಲಾಯಿತು

ಇನ್ನು ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದರ್ಶಿಗಳಾದ ಕೃಷ್ಣಾರೆಡ್ಡಿ ಅರ್ಚಕರಾದ ಕಾರ್ತಿಕೇಯ ಭಟ್ ಹಾಗೂ ಭಕ್ತರ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು...

ಸಾಹಿತ್ಯ ಲೋಕದ ಮೇರುಶಿಖರ, ಪದ್ಮಶ್ರೀ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. SL ಭೈರಪ್ಪ ನಿಧನ. ಓಂ ಶಾಂತಿಃ....
24/09/2025

ಸಾಹಿತ್ಯ ಲೋಕದ ಮೇರುಶಿಖರ, ಪದ್ಮಶ್ರೀ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. SL ಭೈರಪ್ಪ ನಿಧನ.

ಓಂ ಶಾಂತಿಃ....

24/09/2025

ಆಸ್ತಿ ವಿಚಾರವಾಗಿ ಆನೇಕಲ್ ತಾಲೂಕಿನ ಸಿದ್ದನಪಾಳ್ಯ ಚಿನ್ನಯ್ಯನ ಪಾಳ್ಯದಲ್ಲಿ ನಡೆದ ಗಲಾಟೆ ಕುರಿತು ಮುನಿರಾಜುಹಾಗು ಕೃಷ್ಣಪ್ಪ ಅವರ ಕುಟುಂಬದಿಂದ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದರು...

ಆನೇಕಲ್‌ ತಾಲ್ಲೂಕಿನ ಸೊಣ್ಣನಾಯಕನಪುರ ಸರ್ವೆ ನಂ.10ರ ಪೈಕಿ ಕೃಷ್ಣಪ್ಪ ರವರ ಪತ್ನಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲವರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ಆರೋಪಿದ್ದಾರೆ.

ಸೊಣ್ಣನಾಯಕನಪುರ ಗ್ರಾಮದ ಸರ್ವೆ ನಂ 10 ರಲ್ಲಿ 1 ಎಕರೆ 03 ಗುಂಟೆ ಜಮೀನನ್ನು ಚಿಕ್ಕಮುನಿಸ್ವಾಮಿ @ ಮೋಟಪ್ಪ ರವರು ಮಗನಾದ ಮುನಿವೆಂಕಟಪ್ಪ ರವರಿಗೆ ಪಂಚಾಯತಿ ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿರುತ್ತಾರೆ. ಅದರಂತೆ ಮಾನ್ಯ ನ್ಯಾಯಾಲಯದಲ್ಲಿ. ನಮ್ಮ ಪರವಾಗಿ ಆದೇಶವಾಗಿರುತ್ತದೆ. ಆದರೆ ನಮ್ಮ ಗ್ರಾಮದ ವಾಸಿಗಳಾದ ದೇವರಾಜು, ವೆಂಕಟೇಶ್ ಇತರರು ಸದರಿ ಜಮೀನು ತಮಗೆ ಸೇರಿದ್ದೆಂದು ನಾಮವಲಕವನ್ನು ಹಾಕಲು ಬಂದಿದ್ದು ಕೇಳು ಹೋದಾಗೆ, ನಮ್ಮ ಮೇಲೆ ಜಗಳ ತೆಗೆದು ಗಲಾಟೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕೃಷ್ಣಪ್ಪ ಮತ್ತು ಮಗ ಮುನಿರಾಜು ತಿಳಿಸಿದರು.

Address

Https://maps.app.goo.gl/XrM294y5c1ATfy1fA
Anekal
562106

Alerts

Be the first to know and let us send you an email when News star Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News star Kannada:

Share