Incredible Bagalkote - ನಮ್ಮ ಊರು ನಮ್ಮ ಹೆಮ್ಮೆ

  • Home
  • India
  • Bagalkot
  • Incredible Bagalkote - ನಮ್ಮ ಊರು ನಮ್ಮ ಹೆಮ್ಮೆ

Incredible Bagalkote - ನಮ್ಮ ಊರು ನಮ್ಮ ಹೆಮ್ಮೆ This page is completely about a city, which sacrificed itself in the backwater of Alamatti dam

💥 ವಿಜಯಪುರ - ಬಾಗಲಕೋಟೆ - ಬೆಂಗಳೂರು ನಡುವೆ  ಗದಗ - ಬಳ್ಳಾರಿ - ಗುಂತಕಲ್ - ಅನಂತಪುರ (674 ಕಿ.ಮೀ) ಮೂಲಕ ಹೊಸ ಎಕ್ಸ್‌ಪ್ರೆಸ್ ರೈಲನ್ನು ಆರಂಭಿ...
12/08/2025

💥 ವಿಜಯಪುರ - ಬಾಗಲಕೋಟೆ - ಬೆಂಗಳೂರು ನಡುವೆ ಗದಗ - ಬಳ್ಳಾರಿ - ಗುಂತಕಲ್ - ಅನಂತಪುರ (674 ಕಿ.ಮೀ) ಮೂಲಕ ಹೊಸ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲು ನಾವು South Western Railways - SWR Ashwini Vaishnaw V Somanna ರವರಿಗೆ ವಿನಂತಿಸುತ್ತೇವೆ. 🙏🏻 ಇದು ವಿಜಯಪುರ - ಬಾಗಲಕೋಟೆ- ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.‌
• ಈಗ ಅಸ್ತಿತ್ವದಲ್ಲಿರುವ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲು 719 ಕಿ.ಮೀ ಕ್ರಮಿಸಲು 14 ಗಂಟೆ ತೆಗೆದುಕೊಳ್ಳುತ್ತದೆ ಮತ್ತು ಯಶವಂತಪುರ ಎಕ್ಸ್‌ಪ್ರೆಸ್ 742 ಕಿ.ಮೀ ಕ್ರಮಿಸಲು 15 ಗಂ 20 ನಿ ತೆಗೆದುಕೊಳ್ಳುತ್ತದೆ. ಈ ಹೊಸ ಮಾರ್ಗವು ಪ್ರಯಾಣದ ಅವಧಿಯನ್ನು 12 ಗಂಟೆಗಳಿಗೆ ಕಡಿಮೆಗೊಳಿಸಬಹುದು. 💁🏻‍♂️
• ಈಗಾಗಲೇ ಗೋಲ್ ಗುಂಬಜ್ ರೈಲು ಪ್ರಯಾಣಿಕರಿಂದ ಸದಾ ತುಂಬಿದ್ದು, ಇನ್ನೊಂದು ಸೂಕ್ತ ರೈಲು ಇಲ್ಲದಂತಾಗಿದೆ. ಹಬ್ಬದ ದಿನಗಳಲ್ಲಿ ಅವಳಿ ಜಿಲ್ಲೆಯ‌ ಜನರ ಪರಿಸ್ಥಿತಿ ಹೇಳತೀರದು 😑
• ಈ ಹೊಸ ಎಕ್ಸ್‌ಪ್ರೆಸ್ ರೈಲನ್ನು ಚಾಲುಕ್ಯರ ಹೆಸರಿನಲ್ಲಿ ಪ್ರಾರಂಭಿಸಲು ವಿನಂತಿಸುತ್ತೇವೆ, ಇದು ಈ ಮಾರ್ಗದಲ್ಲಿ ಚಾಲುಕ್ಯರ ಐತಿಹಾಸಿಕ ಮಹತ್ವವನ್ನು ತೋರುತ್ತದೆ. ಮತ್ತು ಈ ಮಾರ್ಗ 2 ಯುನೆಸ್ಕೋ ವಿಶ್ವ ಪರಂಪರೆಯ ಕೇಂದ್ರಗಳನ್ನು ಸಂಪರ್ಕಿಸುತ್ತದೆ (ಬಾದಾಮಿ-ಪಟ್ಟದಕಲ್ಲು-ಐಹೊಳೆ ಮತ್ತು ಹಂಪಿ) 🛕

💥 ಬಾಗಲಕೋಟೆ ರೈಲು ನಿಲ್ದಾಣವು ಸರಕು ಸಾಗಾಣಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ತೋರುತ್ತಿದ್ದು, 🌾🌻ಜೋಳ, ಗೋಧಿ, ಗೋವಿನತೆನೆ, ಶೇಂಗಾ, ...
08/08/2025

💥 ಬಾಗಲಕೋಟೆ ರೈಲು ನಿಲ್ದಾಣವು ಸರಕು ಸಾಗಾಣಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ತೋರುತ್ತಿದ್ದು, 🌾🌻ಜೋಳ, ಗೋಧಿ, ಗೋವಿನತೆನೆ, ಶೇಂಗಾ, ಸೂರ್ಯಕಾಂತಿ, ಹತ್ತಿ, ಮೆಣಸಿನಕಾಯಿ, ದಾಳಿಂಬೆ, ದ್ರಾಕ್ಷಿ ಮತ್ತು‌ 🍇🍑 ಇನ್ನಿತರೆ ಹಲವಾರು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ದೇಶ ವಿದೇಶದ ವಿವಿಧೆಡೆ ರಫ್ತು ಮಾಡಲಾಗುತ್ತಿದೆ. 💁🏻‍♂️ ಬಾಗಲಕೋಟೆ - ಕುಡಚಿ ಮಾರ್ಗ ಮುಗಿದರೆ ರಫ್ತಿನ ಪ್ರಮಾಣ ಹೆಚ್ಚುವುದಲ್ಲದೇ, ಇನ್ನೂ ಹೆಚ್ಚಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ತೆರೆಯಲಿದೆ. 🚂🚃🚃🚃🚃 ಬಾಗಲಕೋಟೆ - ವಂದಾಲ ನಡುವಿನ ದ್ವಿಪಥ ರೈಲು ಮಾರ್ಗ + ವಿದ್ಯುತ್ತೀಕರಣ ಮತ್ತು ಕುಡುಚಿ - ಬಾಗಲಕೋಟೆ ಮಾರ್ಗದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವುದು ಅತೀ ಅವಶ್ಯಕವಿದೆ 💁🏻‍♀️
Ashwini Vaishnaw V Somanna South Western Railways - SWR Hubballi Divisional Railway Manager

💥 ನಮ್ಮ ಮನೆ ಹಿರಿಯರು ಪಕ್ಕದ ಮನೆಯವರನ್ನು ನೋಡಿ ಕಲಿಯೋದು ತುಂಬಾ ಇದೆ.. 🥲 ಇನ್ನೂ ನಮ್ಮ ಜನಾನೋ...🙆🏻 ಏನಾದರೂ ಒಂದು ಬಂದ್ರೆ ಸಾಕು, ಅದು ಬೇಡ, ಇ...
06/08/2025

💥 ನಮ್ಮ ಮನೆ ಹಿರಿಯರು ಪಕ್ಕದ ಮನೆಯವರನ್ನು ನೋಡಿ ಕಲಿಯೋದು ತುಂಬಾ ಇದೆ.. 🥲 ಇನ್ನೂ ನಮ್ಮ ಜನಾನೋ...🙆🏻 ಏನಾದರೂ ಒಂದು ಬಂದ್ರೆ ಸಾಕು, ಅದು ಬೇಡ, ಇದು ಬೇಡ ಅಂತ ಬಂದಿದ್ದನ್ನ ವಾಪಾಸ್ ಕಳಿಸೋದ್ರಲ್ಲೇ ಇದ್ದಾರೆ..‌! 💁🏻‍♀️ Anyway ಅಭಿನಂದನೆಗಳು ವಿಜಯಪುರ 💐

💥 ರೈಲು ಪ್ರಯಾಣಿಕರು ಗಮನಿಸಬೇಕು 🚂 ಹುಬ್ಬಳ್ಳಿ ವಿಭಾಗದ ಅಡಿಯಲ್ಲಿ ಬರುವ ವಿಜಯಪುರ - ಬಾಗಲಕೋಟೆ ಭಾಗದ 35 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣದ ಭಾ...
04/08/2025

💥 ರೈಲು ಪ್ರಯಾಣಿಕರು ಗಮನಿಸಬೇಕು 🚂 ಹುಬ್ಬಳ್ಳಿ ವಿಭಾಗದ ಅಡಿಯಲ್ಲಿ ಬರುವ ವಿಜಯಪುರ - ಬಾಗಲಕೋಟೆ ಭಾಗದ 35 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ, ಆಲಮಟ್ಟಿ– ಜಡ್ರಾಮಕುಂಟಿ – ಮುಗಳೊಳ್ಳಿ – ಬಾಗಲಕೋಟೆ ನಡುವಿನ ಡಬ್ಲಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಅವುಗಳ ವಿವರ ಈ ಕೆಳಗಿನಂತಿವೆ. 💁🏻‍♂️💁🏻‍♀️ South Western Railways - SWR

💥 Linen Club & Kgp Gold Palace opening soon at Bagalkote..!
03/08/2025

💥 Linen Club & Kgp Gold Palace opening soon at Bagalkote..!

💥 ಬಾಗಲಕೋಟೆಗೆ ಬರಲಿದೆ ಸ್ಟಾರ್ಟ್ಅಪ್ ಇನ್ಕ್ಯುಬೇಟರ್‌..! 🌿 ಬಯೋಟೆಕ್, ಐಸಿಟಿ, ರೊಬೊಟಿಕ್ಸ್, ಕ್ಲೀನ್-ಟೆಕ್ ಇತ್ಯಾದಿಗಳಲ್ಲಿನ ಸ್ಟಾರ್ಟ್‌ಅಪ್‌ಗ...
31/07/2025

💥 ಬಾಗಲಕೋಟೆಗೆ ಬರಲಿದೆ ಸ್ಟಾರ್ಟ್ಅಪ್ ಇನ್ಕ್ಯುಬೇಟರ್‌..! 🌿 ಬಯೋಟೆಕ್, ಐಸಿಟಿ, ರೊಬೊಟಿಕ್ಸ್, ಕ್ಲೀನ್-ಟೆಕ್ ಇತ್ಯಾದಿಗಳಲ್ಲಿನ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ಕರ್ನಾಟಕವು ರಾಜ್ಯಾದ್ಯಂತ 11 ಹೊಸ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್‌ಗಳನ್ನು (ಟಿ.ಬಿ.ಐ) ಪ್ರಾರಂಭಿಸುವುದಾಗಿ ಘೋಷಿಸಿದೆ. ಅವುಗಳಲ್ಲಿ ಬಾಗಲಕೋಟೆಯೂ ಒಂದಾಗಿದ್ದು, ಬಾಗಲಕೋಟೆಯ ಟಿ.ಬಿ.ಐ ಯನ್ನಾಗಿ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ (UHS) ವನ್ನು ಘೋಷಿಸಲಾಗಿದ್ದು, 🌾🌱 ಇದು ಕೃಷಿ-ಬಯೋಟೆಕ್ ಸ್ಟಾರ್ಟ್ಅಪ್ ಗಳ ಮೇಲೆ ಕೇಂದ್ರೀಕರಿಸಲಿದೆ. 💁🏻‍♂️💁🏻‍♀️

💥 ವಿಜಯಪುರದ ಹೊನಗನಹಳ್ಳಿ ಯಿಂದ ಹುಬ್ಬಳ್ಳಿಯವರೆಗೆ ರಾಷ್ಟ್ರೀಯ ಹೆದ್ದಾರಿ NH-52 ರಸ್ತೆಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ವಿಸ್ತರಣೆ ಮಾಡಲು ವಿ...
27/07/2025

💥 ವಿಜಯಪುರದ ಹೊನಗನಹಳ್ಳಿ ಯಿಂದ ಹುಬ್ಬಳ್ಳಿಯವರೆಗೆ ರಾಷ್ಟ್ರೀಯ ಹೆದ್ದಾರಿ NH-52 ರಸ್ತೆಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ವಿಸ್ತರಣೆ ಮಾಡಲು ವಿಸ್ಕೃತ ಯೋಜನಾ ವರದಿ (ಡಿ.ಪಿ.ಆರ್) ತಯಾರಿಕೆಗಾಗಿ ರೂ. 6.56 ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗಿದೆ 💁🏻‍♂️💁🏻‍♀️

💥 ಬಾಗಲಕೋಟೆ - ವಿಜಯಪುರ ಜಿಲ್ಲೆಗಳನ್ನು ಸಂಪರ್ಕಿಸುವ ಈ 5 ಸೇತುವೆಗಳು, ಕೇವಲ ಸೇತುವೆಗಳು ಅಲ್ಲ..💁🏻‍♀️ ಬದಲಿಗೆ ನಮ್ಮ ಜನರೊಂದಿಗೆ ಭಾವನಾತ್ಮಕವ...
22/07/2025

💥 ಬಾಗಲಕೋಟೆ - ವಿಜಯಪುರ ಜಿಲ್ಲೆಗಳನ್ನು ಸಂಪರ್ಕಿಸುವ ಈ 5 ಸೇತುವೆಗಳು, ಕೇವಲ ಸೇತುವೆಗಳು ಅಲ್ಲ..💁🏻‍♀️ ಬದಲಿಗೆ ನಮ್ಮ ಜನರೊಂದಿಗೆ ಭಾವನಾತ್ಮಕವಾಗಿ ಬೆರೆತಿರುವ ಕೊಂಡಿಗಳು..! 😍 ಒಂದೊಂದು ಸೇತುವೆ ಒಂದೊಂದು ವಿಶೇಷ..!

💥 ವಿಜಯಪುರ - ಹುಬ್ಬಳ್ಳಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ವಿಸ್ತರಿಸಲು 4685 ಕೋಟಿ ರೂಪಾಯಿ ಅನುಮೋದನೆ ಆಗಿದ್ದು, ವಿಸ್ಕ್ತತ ಯೋಜನಾ ವರದಿ ...
17/07/2025

💥 ವಿಜಯಪುರ - ಹುಬ್ಬಳ್ಳಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ವಿಸ್ತರಿಸಲು 4685 ಕೋಟಿ ರೂಪಾಯಿ ಅನುಮೋದನೆ ಆಗಿದ್ದು, ವಿಸ್ಕ್ತತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಗೆ ಇನ್ನೊಂದು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ದೊರೆಯುವುದು ಖಚಿತವಾಗಿದೆ 🚛 ನಾವು ಈ ಕುರಿತು 2023 ರಲ್ಲೇ ಚರ್ಚೆ ಮಾಡಿದ ಹಾಗೆ 2030 ರ ಹೊತ್ತಿಗೆ ಬಾಗಲಕೋಟೆ ನಗರದ ಸುತ್ತ ರಾಷ್ಟ್ರೀಯ ಹೆದ್ದಾರಿಗಳ ರಿಂಗ್ ರೋಡ್ ನಿರ್ಮಾಣವಾಗುವ ಸಂಭವವಿದ್ದು, ನಮ್ಮ ಜನಪ್ರತಿನಿಧಿಗಳು ಈ ರಸ್ತೆಗಳ ಮಧ್ಯದಲ್ಲಿ ಕೈಗಾರಿಕಾ ಪ್ರದೇಶ ಮತ್ತು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಪೂರ್ವ ಯೋಜನೆ ಹಾಕಿಕೊಳ್ಳುವ ಅವಶ್ಯಕತೆ ಇದೆ 💁🏻‍♂️ ಈಗಾಗಲೇ ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ಸಂಬಂಧಪಟ್ಟಂತೆ ಹಲವಾರು ಪ್ರಸ್ತಾವನೆಗಳು ಕೈಚೆಲ್ಲಿ ಹೋಗಿವೆ..‌ ಜನರು ಮತ್ತು ಜನಪ್ರತಿನಿಧಿಗಳು ಇನ್ನೂ ಎಚ್ಚೆತ್ತು ಕೊಳ್ಳದೇ ಇದ್ದರೆ ಬಾಗಲಕೋಟೆ ಜಿಲ್ಲೆಯ ಮುಂದಿನ ಭವಿಷ್ಯ ನಾಶವಾಗುತ್ತದೆ.‌..!

16/07/2025

💥 ಎರಡು ದಿನಗಳಿಂದ ಎಲ್ಲರೂ ಕರ್ನಾಟಕದ 2 ನೇ ಅತೀ ಉದ್ದದ ಸೇತುವೆ ಬಗ್ಗೆ ಮಾತನಾಡ್ತಾ ಇದ್ದಾರೆ, ಹಾಗಾದ್ರೆ ಮೊದಲನೇ ಸ್ಥಾನದಲ್ಲಿರುವ ಸೇತುವೆ ಯಾವುದು?? ಇದೇ ನೋಡಿ.. ಕರ್ನಾಟಕದ ಅತೀ ಉದ್ದನೆಯ ಕೊರ್ತಿ - ಕೊಲ್ಹಾರ ಸೇತುವೆ. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನಡುವೆ ಇರುವ ಈ ಸೇತುವೆ 3 ಕಿ.ಮೀ ಉದ್ದವಿದ್ದು, NH-52 (NH-218) ಹೆದ್ದಾರಿಯ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. 2006 ರಲ್ಲಿ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ 🔥

💥 ಚುರುಕುಗೊಂಡ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಕ್ರಿಯೆ..! 🏥 ರೂ. 526 ಕೋಟಿ ಅನುದಾನ ಹಂಚಿಕೆಗೆ ರಾಜೀವ್ ಗಾಂಧಿ ವೈದ್ಯಕೀಯ ...
12/07/2025

💥 ಚುರುಕುಗೊಂಡ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಕ್ರಿಯೆ..! 🏥 ರೂ. 526 ಕೋಟಿ ಅನುದಾನ ಹಂಚಿಕೆಗೆ ರಾಜೀವ್ ಗಾಂಧಿ ವೈದ್ಯಕೀಯ ವಿ.ವಿ ದಿಂದ ತಾತ್ವಿಕ ಒಪ್ಪಿಗೆ 💁🏻‍♀️💁🏻‍♂️

💥 ಕುಂದರಗಿಯ ಶ್ರಿ ಭುವನೇಶ್ವರಿ ದೇವಿ ಕ್ಷೇತ್ರದ ದರ್ಶನ 🙏🏻 🔹ಈ ದೇವತೆಯ ಸನ್ನಿಧಾನದಲ್ಲಿ ಸಿಗುವ ಅಂಬಲಿ ಪ್ರಸಾದ ಅಮೃತವಿದ್ದಂತೆ. ಅದನ್ನು ಸೇವಿಸಿ...
11/07/2025

💥 ಕುಂದರಗಿಯ ಶ್ರಿ ಭುವನೇಶ್ವರಿ ದೇವಿ ಕ್ಷೇತ್ರದ ದರ್ಶನ 🙏🏻
🔹ಈ ದೇವತೆಯ ಸನ್ನಿಧಾನದಲ್ಲಿ ಸಿಗುವ ಅಂಬಲಿ ಪ್ರಸಾದ ಅಮೃತವಿದ್ದಂತೆ. ಅದನ್ನು ಸೇವಿಸಿದರೆ ಕಾಯಿಲೆಗಳು ಮಾಯವಾಗುತ್ತೆ, ಮಕ್ಕಳಾಗದವರ ಒಡಲು ತುಂಬುತ್ತೆ. ದೇವರ ಸನ್ನಿಧಾನದಲ್ಲಿ ಸಿಗುವ ಆ ಅಂಬಲಿ ಪ್ರಸಾದಕ್ಕೆ ಭಕ್ತರು ದಿನಗಟ್ಟಲೆ ಕಾಣುತ್ತಾರೆ 💁🏻‍♀️
🔹ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದಲ್ಲಿ ಕಳೆದ 20 ವರ್ಷದಿಂದ ಈ ದೇವಸ್ಥಾನದಲ್ಲಿ ಪವಾಡ ನಡೆಯುತ್ತಾ ಬಂದಿದೆ. ಪ್ರತಿ ಶುಕ್ರವಾರ ದೇವಿ ಸನ್ನಿಧಿಗೆ ಸಹಸ್ರಾರು ಭಕ್ತರು ಬರುತ್ತಾರೆ. ಇನ್ನು ಇಲ್ಲಿ ಅಂಬಲಿ ಪ್ರಸಾದವನ್ನು ಮಾಡುವುದರಲ್ಲೂ ಪರಿಶುದ್ದತೆ ಪಾವಿತ್ರತೆ ಇದೆ. 🙏🏻
🔹 ನದಿ‌ ನೀರನ್ನು‌ ತಂದು ಕೇವಲ ಉಪ್ಪು ಹಿಟ್ಟಿನಿಂದ ಅಂಬಲಿ‌ ಮಾಡುತ್ತಾರೆ. ಅಂಬಲಿ ಮಾಡೋದು ರಾಮನಗೌಡ ಮುದಕಣ್ಣವರ ಎಂಬುವರ ಮನೆಯವರು ಮಾತ್ರ. ಅಂಬಲಿ ಮಾಡಿ ಅದನ್ನು ದೇವಿ ಮುಂದೆ ಇಟ್ಟು ಪೂಜೆ ಮಾಡಿ ನಂತರ ಬಂದ ಭಕ್ತರಿಗೆ ಹತ್ತಿ ಎಲೆ‌ ಮೂಲಕ ಪ್ರಸಾದದ ರೂಪದಲ್ಲಿ ನೀಡಲಾಗುವುದು. ಆದರೆ ದೇವಿ ಮುಂದಿಟ್ಟು ಪೂಜೆ ಮಾಡಿದಾಗ ಅಂಬಲಿ ಔಷಧಿ ರೂಪ ಪಡೆಯುತ್ತದೆ ಎಂಬುದು ನಂಬಿಕೆ 🛕

Address

Bagalkot

Website

Alerts

Be the first to know and let us send you an email when Incredible Bagalkote - ನಮ್ಮ ಊರು ನಮ್ಮ ಹೆಮ್ಮೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to Incredible Bagalkote - ನಮ್ಮ ಊರು ನಮ್ಮ ಹೆಮ್ಮೆ:

Share