Incredible Bagalkote - ನಮ್ಮ ಊರು ನಮ್ಮ ಹೆಮ್ಮೆ

  • Home
  • India
  • Bagalkot
  • Incredible Bagalkote - ನಮ್ಮ ಊರು ನಮ್ಮ ಹೆಮ್ಮೆ

Incredible Bagalkote - ನಮ್ಮ ಊರು ನಮ್ಮ ಹೆಮ್ಮೆ This page is completely about a city, which sacrificed itself in the backwater of Alamatti dam

💥 ವಿಜಯಪುರ - ಹುಬ್ಬಳ್ಳಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ವಿಸ್ತರಿಸಲು 4685 ಕೋಟಿ ರೂಪಾಯಿ ಅನುಮೋದನೆ ಆಗಿದ್ದು, ವಿಸ್ಕ್ತತ ಯೋಜನಾ ವರದಿ ...
17/07/2025

💥 ವಿಜಯಪುರ - ಹುಬ್ಬಳ್ಳಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ವಿಸ್ತರಿಸಲು 4685 ಕೋಟಿ ರೂಪಾಯಿ ಅನುಮೋದನೆ ಆಗಿದ್ದು, ವಿಸ್ಕ್ತತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಗೆ ಇನ್ನೊಂದು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ದೊರೆಯುವುದು ಖಚಿತವಾಗಿದೆ 🚛 ನಾವು ಈ ಕುರಿತು 2023 ರಲ್ಲೇ ಚರ್ಚೆ ಮಾಡಿದ ಹಾಗೆ 2030 ರ ಹೊತ್ತಿಗೆ ಬಾಗಲಕೋಟೆ ನಗರದ ಸುತ್ತ ರಾಷ್ಟ್ರೀಯ ಹೆದ್ದಾರಿಗಳ ರಿಂಗ್ ರೋಡ್ ನಿರ್ಮಾಣವಾಗುವ ಸಂಭವವಿದ್ದು, ನಮ್ಮ ಜನಪ್ರತಿನಿಧಿಗಳು ಈ ರಸ್ತೆಗಳ ಮಧ್ಯದಲ್ಲಿ ಕೈಗಾರಿಕಾ ಪ್ರದೇಶ ಮತ್ತು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಪೂರ್ವ ಯೋಜನೆ ಹಾಕಿಕೊಳ್ಳುವ ಅವಶ್ಯಕತೆ ಇದೆ 💁🏻‍♂️ ಈಗಾಗಲೇ ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ಸಂಬಂಧಪಟ್ಟಂತೆ ಹಲವಾರು ಪ್ರಸ್ತಾವನೆಗಳು ಕೈಚೆಲ್ಲಿ ಹೋಗಿವೆ..‌ ಜನರು ಮತ್ತು ಜನಪ್ರತಿನಿಧಿಗಳು ಇನ್ನೂ ಎಚ್ಚೆತ್ತು ಕೊಳ್ಳದೇ ಇದ್ದರೆ ಬಾಗಲಕೋಟೆ ಜಿಲ್ಲೆಯ ಮುಂದಿನ ಭವಿಷ್ಯ ನಾಶವಾಗುತ್ತದೆ.‌..!

16/07/2025

💥 ಎರಡು ದಿನಗಳಿಂದ ಎಲ್ಲರೂ ಕರ್ನಾಟಕದ 2 ನೇ ಅತೀ ಉದ್ದದ ಸೇತುವೆ ಬಗ್ಗೆ ಮಾತನಾಡ್ತಾ ಇದ್ದಾರೆ, ಹಾಗಾದ್ರೆ ಮೊದಲನೇ ಸ್ಥಾನದಲ್ಲಿರುವ ಸೇತುವೆ ಯಾವುದು?? ಇದೇ ನೋಡಿ.. ಕರ್ನಾಟಕದ ಅತೀ ಉದ್ದನೆಯ ಕೊರ್ತಿ - ಕೊಲ್ಹಾರ ಸೇತುವೆ. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನಡುವೆ ಇರುವ ಈ ಸೇತುವೆ 3 ಕಿ.ಮೀ ಉದ್ದವಿದ್ದು, NH-52 (NH-218) ಹೆದ್ದಾರಿಯ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. 2006 ರಲ್ಲಿ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ 🔥

💥 ಚುರುಕುಗೊಂಡ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಕ್ರಿಯೆ..! 🏥 ರೂ. 526 ಕೋಟಿ ಅನುದಾನ ಹಂಚಿಕೆಗೆ ರಾಜೀವ್ ಗಾಂಧಿ ವೈದ್ಯಕೀಯ ...
12/07/2025

💥 ಚುರುಕುಗೊಂಡ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಕ್ರಿಯೆ..! 🏥 ರೂ. 526 ಕೋಟಿ ಅನುದಾನ ಹಂಚಿಕೆಗೆ ರಾಜೀವ್ ಗಾಂಧಿ ವೈದ್ಯಕೀಯ ವಿ.ವಿ ದಿಂದ ತಾತ್ವಿಕ ಒಪ್ಪಿಗೆ 💁🏻‍♀️💁🏻‍♂️

💥 ಕುಂದರಗಿಯ ಶ್ರಿ ಭುವನೇಶ್ವರಿ ದೇವಿ ಕ್ಷೇತ್ರದ ದರ್ಶನ 🙏🏻 🔹ಈ ದೇವತೆಯ ಸನ್ನಿಧಾನದಲ್ಲಿ ಸಿಗುವ ಅಂಬಲಿ ಪ್ರಸಾದ ಅಮೃತವಿದ್ದಂತೆ. ಅದನ್ನು ಸೇವಿಸಿ...
11/07/2025

💥 ಕುಂದರಗಿಯ ಶ್ರಿ ಭುವನೇಶ್ವರಿ ದೇವಿ ಕ್ಷೇತ್ರದ ದರ್ಶನ 🙏🏻
🔹ಈ ದೇವತೆಯ ಸನ್ನಿಧಾನದಲ್ಲಿ ಸಿಗುವ ಅಂಬಲಿ ಪ್ರಸಾದ ಅಮೃತವಿದ್ದಂತೆ. ಅದನ್ನು ಸೇವಿಸಿದರೆ ಕಾಯಿಲೆಗಳು ಮಾಯವಾಗುತ್ತೆ, ಮಕ್ಕಳಾಗದವರ ಒಡಲು ತುಂಬುತ್ತೆ. ದೇವರ ಸನ್ನಿಧಾನದಲ್ಲಿ ಸಿಗುವ ಆ ಅಂಬಲಿ ಪ್ರಸಾದಕ್ಕೆ ಭಕ್ತರು ದಿನಗಟ್ಟಲೆ ಕಾಣುತ್ತಾರೆ 💁🏻‍♀️
🔹ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದಲ್ಲಿ ಕಳೆದ 20 ವರ್ಷದಿಂದ ಈ ದೇವಸ್ಥಾನದಲ್ಲಿ ಪವಾಡ ನಡೆಯುತ್ತಾ ಬಂದಿದೆ. ಪ್ರತಿ ಶುಕ್ರವಾರ ದೇವಿ ಸನ್ನಿಧಿಗೆ ಸಹಸ್ರಾರು ಭಕ್ತರು ಬರುತ್ತಾರೆ. ಇನ್ನು ಇಲ್ಲಿ ಅಂಬಲಿ ಪ್ರಸಾದವನ್ನು ಮಾಡುವುದರಲ್ಲೂ ಪರಿಶುದ್ದತೆ ಪಾವಿತ್ರತೆ ಇದೆ. 🙏🏻
🔹 ನದಿ‌ ನೀರನ್ನು‌ ತಂದು ಕೇವಲ ಉಪ್ಪು ಹಿಟ್ಟಿನಿಂದ ಅಂಬಲಿ‌ ಮಾಡುತ್ತಾರೆ. ಅಂಬಲಿ ಮಾಡೋದು ರಾಮನಗೌಡ ಮುದಕಣ್ಣವರ ಎಂಬುವರ ಮನೆಯವರು ಮಾತ್ರ. ಅಂಬಲಿ ಮಾಡಿ ಅದನ್ನು ದೇವಿ ಮುಂದೆ ಇಟ್ಟು ಪೂಜೆ ಮಾಡಿ ನಂತರ ಬಂದ ಭಕ್ತರಿಗೆ ಹತ್ತಿ ಎಲೆ‌ ಮೂಲಕ ಪ್ರಸಾದದ ರೂಪದಲ್ಲಿ ನೀಡಲಾಗುವುದು. ಆದರೆ ದೇವಿ ಮುಂದಿಟ್ಟು ಪೂಜೆ ಮಾಡಿದಾಗ ಅಂಬಲಿ ಔಷಧಿ ರೂಪ ಪಡೆಯುತ್ತದೆ ಎಂಬುದು ನಂಬಿಕೆ 🛕

💥 ಬಾಗಲಕೋಟೆಯಲ್ಲಿ ಈ ಸ್ಥಳ ಎಲ್ಲಿದೆ ಎಂದು ಹೇಳಬಲ್ಲಿರಾ..? 💁🏻‍♀️💁🏻‍♂️
07/07/2025

💥 ಬಾಗಲಕೋಟೆಯಲ್ಲಿ ಈ ಸ್ಥಳ ಎಲ್ಲಿದೆ ಎಂದು ಹೇಳಬಲ್ಲಿರಾ..? 💁🏻‍♀️💁🏻‍♂️

💥 ಇವೇ ನೋಡಿ ಕರ್ನಾಟಕದ ಅತೀ ಹೆಚ್ಚಿನ ಪ್ರಯಾಣಿಕರ ಫುಟ್ ಫಾಲ್ ಹೊಂದಿರುವ ಟಾಪ್ 25 ರೈಲು ನಿಲ್ದಾಣಗಳು 💁🏻‍♂️ ಬಾಗಲಕೋಟೆ ರೈಲು ನಿಲ್ದಾಣವು ಟಾಪ್ ...
05/07/2025

💥 ಇವೇ ನೋಡಿ ಕರ್ನಾಟಕದ ಅತೀ ಹೆಚ್ಚಿನ ಪ್ರಯಾಣಿಕರ ಫುಟ್ ಫಾಲ್ ಹೊಂದಿರುವ ಟಾಪ್ 25 ರೈಲು ನಿಲ್ದಾಣಗಳು 💁🏻‍♂️ ಬಾಗಲಕೋಟೆ ರೈಲು ನಿಲ್ದಾಣವು ಟಾಪ್ 20 ನೇ ಸ್ಥಾನದಲ್ಲಿದ್ದು, 2023-24 ನೇ ಸಾಲಿನಲ್ಲಿ 19.19 ಲಕ್ಷ ಜನರು ಪ್ರಯಾಣಿಸಿದ್ದಾರೆ ಹಾಗೂ ಅದರಿಂದ ರೂ. 15.50 ಕೋಟಿಗಳ‌ ಆದಾಯ ಬಂದಿರುತ್ತದೆ 💁🏻‍♀️ 🚂🚃🚃🚃

💥 ವಿಜಯಪುರ – ಬಾಗಲಕೋಟೆ -  ಮಂಗಳೂರು ಸೆಂಟ್ರಲ್ (07377/07378) ವಿಶೇಷ ತಾತ್ಕಾಲಿಕ ರೈಲನ್ನು ಶಾಶ್ವತವಾಗಿ ಓಡಿಸಬೇಕು ಎನ್ನುವುದು ಈ ಭಾಗದ ಜನರ ...
29/06/2025

💥 ವಿಜಯಪುರ – ಬಾಗಲಕೋಟೆ - ಮಂಗಳೂರು ಸೆಂಟ್ರಲ್ (07377/07378) ವಿಶೇಷ ತಾತ್ಕಾಲಿಕ ರೈಲನ್ನು ಶಾಶ್ವತವಾಗಿ ಓಡಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. 💁🏻‍♂️ ಈ ಮೊದಲು ಈ ವಿಶೇಷ ರೈಲನ್ನು ಕೆಲ ತಿಂಗಳಿಗೊಮ್ಮೆ ವಿಸ್ತರಿಸಲಾಗುತ್ತಿತ್ತು. ಇದೀಗ ವಿಜಯಪುರ – ಮಂಗಳೂರು ಸೆಂಟ್ರಲ್ (17377/17378) ಎಕ್ಸ್‌ಪ್ರೆಸ್‌ ಶಾಶ್ವತ ರೈಲನ್ನಾಗಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅದರ ವೇಳಾಪಟ್ಟಿ ಈ ಕೆಳಗಿನಂತಿದೆ 💁🏻‍♀️ 🚂🚃🚃🚃🚃🚃

💥 ಬಹು ನಿರೀಕ್ಷೆಯ ಬಾಗಲಕೋಟೆ ಹೊಸ ಮಾರುಕಟ್ಟೆಯ ಬ್ಲೋ-ಪ್ರಿಂಟ್ ರೆಡಿ 🔥 ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ.‌..! 💁🏻‍♂️💁🏻‍♀️
28/06/2025

💥 ಬಹು ನಿರೀಕ್ಷೆಯ ಬಾಗಲಕೋಟೆ ಹೊಸ ಮಾರುಕಟ್ಟೆಯ ಬ್ಲೋ-ಪ್ರಿಂಟ್ ರೆಡಿ 🔥 ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ.‌..! 💁🏻‍♂️💁🏻‍♀️

💥 ಇದು 1818 ರ ಬಾಗಲಕೋಟೆ ಪಟ್ಟಣದ ನಕಾಶೆ..‌! ಈ ನಕಾಶೆ 207 ವರ್ಷಗಳಷ್ಟು ಹಳೇಯದು..‌ ಅಂದಿನ ಕಾಲದಲ್ಲಿ ಮುಖ್ಯ ಕೋಟೆಯ ಒಳಗಡೆ 400 ಮನೆಗಳಿದ್ದವು...
25/06/2025

💥 ಇದು 1818 ರ ಬಾಗಲಕೋಟೆ ಪಟ್ಟಣದ ನಕಾಶೆ..‌! ಈ ನಕಾಶೆ 207 ವರ್ಷಗಳಷ್ಟು ಹಳೇಯದು..‌ ಅಂದಿನ ಕಾಲದಲ್ಲಿ ಮುಖ್ಯ ಕೋಟೆಯ ಒಳಗಡೆ 400 ಮನೆಗಳಿದ್ದವು ಮತ್ತು ಹೊರವಲಯದ ಕೋಟೆಯಲ್ಲಿ 1300 ಮನೆಗಳಿದ್ದವು, ಉತ್ತಮ ವ್ಯವಸ್ಥೆ ಹೊಂದಿದ್ದ ದೊಡ್ಡ ಜನನಿಭಿಡ ಮಾರುಕಟ್ಟೆ ಇತ್ತು, ಊರಿಗೆ 5 ದ್ವಾರಗಳಿದ್ದವು, ಉತ್ತರಕ್ಕೆ ಅರಮನೆ ದ್ವಾರದ ರೀತಿ ಕಟ್ಟಡವಿತ್ತು ಎಂದು ಜಾನ್ ಜೆಫೆರಿ ಓ' ಡೋನ್ಯಾಗೋ ಎಂಬ ಬ್ರಿಟಿಷ್ ಅಧಿಕಾರಿ "1817, 1818, ಮತ್ತು 1819 ರ ಮರಾಠಾ ಯುದ್ಧದ ಸಮಯದಲ್ಲಿ ಭಾರತದಲ್ಲಿ ಬ್ರಿಟಿಷ್ ಸೈನ್ಯದ ಕಾರ್ಯಾಚರಣೆಗಳ ನೆನಪುಗಳು" ಎಂಬ ಪುಸ್ತಕದಲ್ಲಿ ದಾಖಲು ಮಾಡಿದ್ದಾನೆ 💁🏻‍♂️💁🏻‍♀️

💥 ಅವಳಿ ಜಿಲ್ಲೆಯ 136 ಹಳ್ಳಿಗಳ ಮತ್ತು ಬಾಗಲಕೋಟೆ ನಗರದ ತ್ಯಾಗದ ಪ್ರತಿಫಲ ⏩ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ (ಆಲಮಟ್ಟಿ ಡ್ಯಾಂ) 🌊 ಉತ್ತರ ಕರ್...
23/06/2025

💥 ಅವಳಿ ಜಿಲ್ಲೆಯ 136 ಹಳ್ಳಿಗಳ ಮತ್ತು ಬಾಗಲಕೋಟೆ ನಗರದ ತ್ಯಾಗದ ಪ್ರತಿಫಲ ⏩ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ (ಆಲಮಟ್ಟಿ ಡ್ಯಾಂ) 🌊 ಉತ್ತರ ಕರ್ನಾಟಕದ ಪವರ್ ಹೌಸ್..! 🔥

22/06/2025

ಆಲಮಟ್ಟಿ: ರಾಜಕಾರಣಿಗಳ ಆಟ, ರೈತರ ಕಣ್ಣೀರು ಮತ್ತು ಒಂದು ಲಕ್ಷ ಕೋಟಿಯ ಪ್ರಶ್ನೆ

ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಬದುಕನ್ನು ಬದಲಿಸಬಲ್ಲ ಒಂದು ಬೃಹತ್ ಯೋಜನೆ. ಕೋಟ್ಯಂತರ ಜನರ ಕಣ್ಣಲ್ಲಿ ಭರವಸೆಯ ಬೆಳಕಾಗಬೇಕಿದ್ದ ಒಂದು ಮಹಾನ್ ಕನಸು. ನ್ಯಾಯಮಂಡಳಿಯ ಅಂಗಳದಲ್ಲಿ ಗೆದ್ದು, ರಾಜಕಾರಣದ ಅಂಗಳದಲ್ಲಿ ಸೋತು ಸುಣ್ಣವಾಗಿ ಬಿದ್ದಿರುವ ಒಂದು ದುರಂತ ಕಥೆ. ಇದು ಆಲಮಟ್ಟಿ ಅಣೆಕಟ್ಟಿನ ಎತ್ತರ ಏರಿಕೆಯ ಮುಗಿಯದ ವ್ಯಥೆ. ಒಂದು ದಶಕದಿಂದ ಈ ಯೋಜನೆ ಉತ್ತರ ಕರ್ನಾಟಕದ ಜನರ ಪಾಲಿಗೆ ಭರವಸೆಯಾಗಿಯೇ ಉಳಿದಿದ್ದರೆ, ಆಳುವವರ ಪಾಲಿಗೆ ಅದೊಂದು ಚದುರಂಗದಾಟದ ಕಾಯಿ ಮಾತ್ರವಾಗಿದೆ.
ಒಂದು ನೋಟದಲ್ಲಿ ವಾಸ್ತವ

ಆರ್ಥಿಕ ನಷ್ಟ: ಕಳೆದ 12 ವರ್ಷಗಳ ವಿಳಂಬದಿಂದಾಗಿ, ಯೋಜನೆಯ ವೆಚ್ಚವು ದಿನವೊಂದಕ್ಕೆ ಸರಾಸರಿ ₹18 ಕೋಟಿಯಷ್ಟು ಹೆಚ್ಚಾಗಿದೆ.

ಸಂಗ್ರಹಣಾ ಸಾಮರ್ಥ್ಯ: ಪೂರ್ಣಗೊಂಡಾಗ ಆಲಮಟ್ಟಿಯ ಸಂಗ್ರಹಣಾ ಸಾಮರ್ಥ್ಯ (ಸುಮಾರು 222 ಟಿಎಂಸಿ ಅಡಿ) ಕನ್ನಂಬಾಡಿ ಕಟ್ಟೆ (KRS) ಸಾಮರ್ಥ್ಯದ (49.45 ಟಿಎಂಸಿ ಅಡಿ) ನಾಲ್ಕೂವರೆ ಪಟ್ಟು ಹೆಚ್ಚಾಗಲಿದೆ.

ವ್ಯಾಪ್ತಿ: ಯೋಜನೆಯಿಂದ ಮುಳುಗಡೆಯಾಗಲಿರುವ 1.3 ಲಕ್ಷ ಎಕರೆ ಭೂಮಿಯು, ಬೆಂಗಳೂರು ನಗರದ ಒಟ್ಟು ವಿಸ್ತೀರ್ಣದ ಶೇ. 70ಕ್ಕಿಂತ ಹೆಚ್ಚಾಗಿದೆ.

1. ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ
ಆಲಮಟ್ಟಿ ಎತ್ತರ 524 ಮೀಟರ್‌ಗೆ ಏರಿದ್ದರೆ ಏನಾಗುತ್ತಿತ್ತು?
ಇದು ಕೇವಲ ಅಂಕಿ-ಅಂಶಗಳ ಆಟವಲ್ಲ. ಇದು ಬಾಗಲಕೋಟೆಯ ರೈತನ ಮಗಳ ಮದುವೆಯ ಖರ್ಚು, ರಾಯಚೂರಿನ ಯುವಕನ ಬೆಂಗಳೂರು ವಲಸೆ ತಪ್ಪಿಸುವ ದಾರಿ, ಯಾದಗಿರಿಯ ತಾಯಿಯೊಬ್ಬಳ ಮುಖದಲ್ಲಿ ನಗು ತರಿಸುವ ಭರವಸೆ.

15 ಲಕ್ಷ ಎಕರೆ ಭೂಮಿ ಹಸಿರಾಗುತ್ತಿತ್ತು. ವರ್ಷಕ್ಕೆ ₹20,000 ಕೋಟಿ ಹೊಸ ಸಂಪತ್ತು ಆ ನೆಲದಲ್ಲಿ ಸೃಷ್ಟಿಯಾಗುತ್ತಿತ್ತು. 3 ಲಕ್ಷಕ್ಕೂ ಅಧಿಕ ಯುವಕರಿಗೆ ತಮ್ಮ ಊರಿನಲ್ಲೇ ಉದ್ಯೋಗ ಸಿಗುತ್ತಿತ್ತು. ಉತ್ತರ ಕರ್ನಾಟಕದ ಆರ್ಥಿಕ ಶಕ್ತಿಯೇ ಇಡೀ ರಾಜ್ಯದ ದಿಕ್ಕನ್ನು ಬದಲಿಸುತ್ತಿತ್ತು.
ಈ ಕನಸು ನನಸಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ನ್ಯಾಯಾಲಯದ ಅನುಮತಿಯೂ ಇತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಯಾಕೆ?

2. ಇಚ್ಛಾಶಕ್ತಿಯ ಕೊರತೆ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಆಟ
ಯಾವುದೇ ದೊಡ್ಡ ಯೋಜನೆ ವಿಫಲವಾಗಲು ಸಂಕೀರ್ಣ ಕಾರಣಗಳಿರುತ್ತವೆ. ಆದರೆ ಆಲಮಟ್ಟಿಯ ವಿಷಯದಲ್ಲಿ, ಕಾರಣಗಳು ಸರಳ ಮತ್ತು ಸ್ಪಷ್ಟ.

ರಾಜಕೀಯ ಚದುರಂಗದಾಟ: ದಶಕದಿಂದೀಚೆಗೆ, ಪ್ರತಿಯೊಂದು ಸರ್ಕಾರವೂ ಈ ಯೋಜನೆಯನ್ನು ಒಂದು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿತೇ ಹೊರತು, ಅದನ್ನು ಕಾರ್ಯಗತಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ.

ಅಗಾಧ ಆರ್ಥಿಕ ನಷ್ಟ: ಈ ಆಟದ ಅತಿ ದೊಡ್ಡ ದುರಂತವೆಂದರೆ ರಾಜ್ಯದ ಬೊಕ್ಕಸಕ್ಕೆ ಬಿದ್ದ ಹೊರೆ. ಅಂದು ₹17,000 ಕೋಟಿಯಲ್ಲಿ ಆಗಬೇಕಿದ್ದ ಯೋಜನೆಗೆ ಇಂದು ₹1 ಲಕ್ಷ ಕೋಟಿ ಬೇಕು. ಈ ಅಗಾಧ ನಷ್ಟಕ್ಕೆ, ಈ ವಿಳಂಬಕ್ಕೆ ಯಾರು ಹೊಣೆ? ಇದು ಆಡಳಿತ ವ್ಯವಸ್ಥೆಯ ವೈಫಲ್ಯವಲ್ಲದೆ ಮತ್ತೇನು?

ಅತಂತ್ರಗೊಂಡ ಜನರ ಬದುಕು: ಈ ರಾಜಕೀಯ ಆಟದಲ್ಲಿ ನಿಜವಾದ ಬೆಲೆ ತೆತ್ತವರು ಮುಳುಗಡೆ ಪ್ರದೇಶದ 20,000ಕ್ಕೂ ಹೆಚ್ಚು ಕುಟುಂಬಗಳು. ಒಂದು ದಶಕದಿಂದ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾರೆ. ಅವರ ಬದುಕಿನ ಸ್ಥಿರತೆಯನ್ನು ಕಸಿದುಕೊಂಡ ಪಾಪ ಯಾರದ್ದು?

3. ಅಂತರರಾಜ್ಯ ವಿವಾದಗಳು: ಹೊಸ ಮತ್ತು ಹಳೆಯ ಸವಾಲುಗಳು

ಕರ್ನಾಟಕದ ಆಂತರಿಕ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜೊತೆಗೆ, ನೆರೆಯ ರಾಜ್ಯಗಳ ವಿರೋಧವು ಈ ಯೋಜನೆಗೆ ಬಹುದೊಡ್ಡ ತಡೆಗೋಡೆಯಾಗಿ ನಿಂತಿದೆ.

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ: ದಶಕಗಳ ವಿವಾದದ ಹಿನ್ನೋಟ

ತೆಲಂಗಾಣ ಮತ್ತು ಆಂಧ್ರಪ್ರದೇಶ: ದಶಕದ ಕಾನೂನು ಸಮರ
ಒಂದು ರಾಜ್ಯವು ಇಬ್ಭಾಗವಾದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದಕ್ಕೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೇ ಪ್ರತ್ಯಕ್ಷ ಸಾಕ್ಷಿ. ರಾಜ್ಯ ವಿಭಜನೆಯ ನಂತರ ಉಂಟಾದ ರಾಜಕೀಯ ಗೊಂದಲ ಮತ್ತು ದೂರದೃಷ್ಟಿಯ ಕೊರತೆಯಿಂದಾಗಿ, ಭೂಪ್ರದೇಶ ಹಂಚಿಕೆಯಾದರೂ ಸಂಪನ್ಮೂಲ ಹಂಚಿಕೆಯ ವಿವಾದಗಳು ಭುಗಿಲೆದ್ದವು. ಇದರ ಪರಿಣಾಮವಾಗಿ, ಎರಡೂ ರಾಜ್ಯಗಳು ಹೆಚ್ಚಿನ ನೀರಿಗಾಗಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯ ಮುಂದೆ ಹೊಸದಾಗಿ ಹೋರಾಟ ಆರಂಭಿಸಿವೆ.

ಈ ಹಿನ್ನೆಲೆಯಲ್ಲಿ, ಕೆಳಹರಿವಿನ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ, ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದ ಪ್ರಬಲ ವಿರೋಧಿಗಳಾಗಿವೆ. ಕರ್ನಾಟಕವು ಅಣೆಕಟ್ಟಿನ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಿದರೆ, ತಮ್ಮ ರಾಜ್ಯಗಳಿಗೆ ಹರಿಯುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ಅವರ ಪ್ರಮುಖ ಆತಂಕ. ಈ ಕಾರಣಕ್ಕಾಗಿ, ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-2 ನೀಡಿದ ತೀರ್ಪನ್ನು ಪ್ರಶ್ನಿಸಿ, ಅವರು 2011ರಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕಾನೂನು ಸಮರವೇ ಇಂದು ಯೋಜನೆಗೆ ಎದುರಾಗಿರುವ ಅತಿ ದೊಡ್ಡ ಅಡಚಣೆಯಾಗಿದೆ. ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು ತೀರ್ಪಿನ ಅಂತಿಮ ಗೆಜೆಟ್ ಅಧಿಸೂಚನೆಯನ್ನು ಹೊರಡಿಸದೆ ವಿಳಂಬ ಮಾಡುತ್ತಿದೆ.

ಮಹಾರಾಷ್ಟ್ರ: 'ಹಿನ್ನೀರು' ಸೃಷ್ಟಿಸಿದ ಹೊಸ ತಲೆನೋವು
ಒಂದೆಡೆ ದಶಕದ ಕಾನೂನು ಹೋರಾಟ ಮುಂದುವರಿದಿದ್ದರೆ, ಇನ್ನೊಂದೆಡೆ ಮೇಲ್ಹರಿವಿನ ರಾಜ್ಯವಾದ ಮಹಾರಾಷ್ಟ್ರವು ಇತ್ತೀಚೆಗೆ ಹೊಸ ವಾದವನ್ನು ಹುಟ್ಟುಹಾಕಿದೆ. ಆಲಮಟ್ಟಿಯ ಎತ್ತರ ಹೆಚ್ಚಳದಿಂದ ಉಂಟಾಗುವ 'ಹಿನ್ನೀರು' (Backwater) ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಭೀಕರ ಪ್ರವಾಹಕ್ಕೆ ಕಾರಣವಾಗುತ್ತದೆ ಎಂಬುದು ಅವರ ಆರೋಪ. 2019 ಮತ್ತು 2021ರಲ್ಲಿ ಈ ಜಿಲ್ಲೆಗಳಲ್ಲಿ ಸಂಭವಿಸಿದ ಮಹಾ ಪ್ರವಾಹಕ್ಕೆ ಆಲಮಟ್ಟಿಯೇ ಕಾರಣ ಎಂದು ದೂರುತ್ತಾ, ಕರ್ನಾಟಕವನ್ನು ಗುರಿಯಾಗಿಸಿಕೊಂಡು ಮಹಾರಾಷ್ಟ್ರ ಸರ್ಕಾರ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ.

ತನ್ನದೇ ಅವೈಜ್ಞಾನಿಕ ಮತ್ತು ಅಸಮರ್ಪಕ ಪ್ರವಾಹ ನಿರ್ವಹಣೆಯ ವೈಫಲ್ಯವನ್ನು ಮುಚ್ಚಿಕೊಳ್ಳಲು, ಮಹಾರಾಷ್ಟ್ರವು ಆಲಮಟ್ಟಿ ಅಣೆಕಟ್ಟಿನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಕರ್ನಾಟಕ ವಾದಿಸುತ್ತದೆ. ನ್ಯಾಯಮಂಡಳಿಯ ವಿಚಾರಣೆಯ ಸಮಯದಲ್ಲಿ ಇಲ್ಲದಿದ್ದ ಈ 'ಹಿನ್ನೀರು' ವಾದವನ್ನು ಈಗ ರಾಜಕೀಯ ಕಾರಣಗಳಿಗಾಗಿ ಮುನ್ನೆಲೆಗೆ ತರಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ, ಕರ್ನಾಟಕದ ಅಧಿಕಾರಿಗಳು ನಡೆಸಿದ ಸಮೀಕ್ಷೆಯು ಮಹಾರಾಷ್ಟ್ರದ ಪ್ರವಾಹಕ್ಕೂ ಆಲಮಟ್ಟಿ ಅಣೆಕಟ್ಟಿನ ಎತ್ತರಕ್ಕೂ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಆದಾಗ್ಯೂ, ಮಹಾರಾಷ್ಟ್ರದ ಈ ಹಠಮಾರಿ ಧೋರಣೆಯು ಯೋಜನೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

4. ಬದಲಾಗದ ವ್ಯವಸ್ಥೆ, ಮುಂದುವರೆದ ನಿರ್ಲಕ್ಷ್ಯ
ಈ ಹನ್ನೊಂದು ವರ್ಷಗಳಲ್ಲಿ ಸರ್ಕಾರಗಳು ಬದಲಾದವು, ಮುಖ್ಯಮಂತ್ರಿಗಳು ಬದಲಾದರು. ಆದರೆ ಆಲಮಟ್ಟಿಯ ವಿಷಯದಲ್ಲಿ ವ್ಯವಸ್ಥೆಯ ಧೋರಣೆ ಮಾತ್ರ ಬದಲಾಗಲಿಲ್ಲ. ಉತ್ತರ ಕರ್ನಾಟಕದ ಜನರ ದಶಕಗಳ ಬೇಡಿಕೆಯು ರಾಜಕೀಯ ಚದುರಂಗದಾಟದಲ್ಲಿ ಕಳೆದುಹೋಗಿದೆ. ಪ್ರತಿಯೊಂದು ಬಜೆಟ್‌ನಲ್ಲೂ ಒಂದಿಷ್ಟು ಹಣವನ್ನು ಘೋಷಿಸುವುದು, ಭರವಸೆಯ ಮಾತುಗಳನ್ನಾಡುವುದು, ನಂತರ ಎಲ್ಲವನ್ನೂ ಮರೆತುಬಿಡುವುದು ಒಂದು ಪರಿಪಾಠವಾಗಿ ಹೋಯಿತು.

ಅಂತಿಮ ಮಾತು
ಹಾಗಾದರೆ, ಆಲಮಟ್ಟಿ ಎತ್ತರವಾಗುವುದು ಯಾವಾಗ?
ಉತ್ತರ ಕರ್ನಾಟಕದ ಜನರ ಕಣ್ಣೀರು ಆಳುವವರ ಮನಸ್ಸನ್ನು ತಟ್ಟುವುದಾದರೂ ಯಾವಾಗ? ಅಥವಾ ಮತ್ತೊಂದು ಚುನಾವಣೆ ಬಂದಾಗ, ಹೊಸ ಭರವಸೆಗಳ ಮಾರಾಟ ಶುರುವಾದಾಗ ಈ ವಿಷಯ ಮತ್ತೆ ಮುನ್ನೆಲೆಗೆ ಬರುತ್ತದೆಯೇ?

ಉತ್ತರ ಯಾರಿಗೂ ತಿಳಿದಿಲ್ಲ. ಸದ್ಯಕ್ಕಂತೂ, ಆಲಮಟ್ಟಿ ಎನ್ನುವುದು ನಮ್ಮ ವ್ಯವಸ್ಥೆಯ ವೈಫಲ್ಯಕ್ಕೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಗೆ ನಿಂತ ಒಂದು ದೊಡ್ಡ ಸ್ಮಾರಕ. ಅಷ್ಟೇ.

💥 ದೇಶದಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಥಮ..! ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌! 📬 🔹ಜಿ...
21/06/2025

💥 ದೇಶದಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಥಮ..! ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌! 📬
🔹ಜಿಲ್ಲೆಯಲ್ಲಿ ಜೂನ್ 17 ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯಾದ್ಯಂತ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ 46 ಅಂಚೆ ಕಚೇರಿಗಳಲ್ಲಿ ಸೌಲಭ್ಯ ದೊರೆಯಲಿದೆ. ಎಲ್ಲ ಕಚೇರಿಗಳು ಗಣಕೀಕರಣಗೊಂಡಿದ್ದು, ಉತ್ತಮ ನೆಟ್ವರ್ಕ್, ತಾಂತ್ರಿಕ ತರಬೇತಿ ಪಡೆದ ಸಿಬ್ಬಂದಿ ಹಾಗೂ ಮೂಲ ಸೌಕರ್ಯವಿರುವ ಕಾರಣ ಜಿಲ್ಲೆ ಪೈಲೆಟ್ ಯೋಜನೆಗೆ ಆಯ್ಕೆಯಾಗಿದೆ.

Address

Bagalkot

Website

Alerts

Be the first to know and let us send you an email when Incredible Bagalkote - ನಮ್ಮ ಊರು ನಮ್ಮ ಹೆಮ್ಮೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to Incredible Bagalkote - ನಮ್ಮ ಊರು ನಮ್ಮ ಹೆಮ್ಮೆ:

Share