News5Kannada

News5Kannada ನಿಮ್ಮ ಧ್ವನಿ'ಗೆ ... ನಮ್ಮ ಬಲ

12/09/2025

Accident News : ಹಾಸನ : ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭಾರಿ ಅವಘಡ | ಮೆರವಣಿಗೆ ಹೋಗುತ್ತಿದ್ದವರ ಮೇಲೆ ಹರಿದ ಟ್ರಕ್ | ಐದಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವು | News5Kannada

ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಹಾಸನ ತಾಲ್ಲೂಕಿನ, ಮೊಸಳೆಹೊಸಳ್ಳಿ ಗ್ರಾಮದಲ್ಲಿ ಘಟನೆ

ಸ್ಥಳಕ್ಕೆ ಎಸ್ಪಿ ಮಹಮದ್‌ ಸುಜೇತಾ ದೌಡು

ಹಾಸನ: ಗಣೇಶ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಟ್ರಕ್ ನುಗ್ಗಿದ್ದರಿಂದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಹಾಸನ ತಾಲೂಕಿನ ಮೊಸಳೆಹೊಸಹಳ್ಳಿಯಲ್ಲಿ ನಡೆದಿದೆ.

ಅದ್ಧೂರಿಯಾಗಿ ಗಣೇಶ ಮೆರವಣಿಗೆ ಸಾಗುತ್ತಿರುವ ವೇಳೆ ಟ್ರಕ್ವೊಂದು ಜನರ ಮೇಲೆ ನುಗ್ಗಿದೆ. ಚಾಲಕನ ಅಜಾಗುರಕತೆಯಿಂದ ಈ ಘಟನೆ ನಡೆದಿದೆ. ಡಿವೈಡರ್ಗೆ ಡಿಕ್ಕಿ ಆಗಿ ಜನರ ಮೇಲೆ ಟ್ರಕ್ ಹರಿದಿದೆ. ಇದರ ಪರಿಣಾಮ ಮೆರವಣಿಗೆಯಲ್ಲಿದ್ದ ಎಂಟು ಜನ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆಯ ಹೆಚ್ಚಾಗುವ ಸಾಧ್ಯತೆ ಇದೆ.

11/09/2025

Murder News | ಗಂಡ, ಹೆಂಡತಿ ಜಗಳ ;
ಮಧ್ಯೆ ಎಂಟ್ರಿ ಕೊಟ್ಟ ಅತ್ತೆಯ ಹತ್ಯೆ | ಹೆಂಡತಿ ಸ್ಥಿತಿ ಗಂಭೀರ

ಗಂಡ ಹೆಂಡತಿ ನಡುವಿನ ಜಗಳದಲ್ಲಿ ಹತ್ಯೆಯಾದ ಅತ್ತೆ

ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನಡೆದಿರುವ ಘಟನೆ

ಸ್ಥಳಕ್ಕೆ ಪೊಲೀಸರ ದೌಡು

ರಾಮನಾಥಪುರ ಜನತೆಯನ್ನು ಬೆಚ್ಚಿ ಬೀಳಿಸಿದ ಘಟನೆ

ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಅಮಾನುಷ್ಯ ಘಟನೆ.

ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವ ಪೊಲೀಸರು

10/09/2025

ಭಾನುಮುಷ್ತಕ್ ರಾಜ್ಯ ಸರ್ಕಾರದ ಆಹ್ವಾನ ತಿರಸ್ಕರಿಸುವುದು ಸೂಕ್ತ - ಶಾಸಕ ಎ.ಮಂಜು | A Manju

09/09/2025

ಇಂದು ನಾವೆಲ್ಲರೂ ಶಿಕ್ಷಣವಂತರಾಗಿದ್ದೇವೆ ವಿನಃ ಪ್ರಜ್ಞಾವಂತರು, ವಿಚಾರವಂತರಾಗಿಲ್ಲ ; ಖ್ಯಾತ ವಾಗ್ಮಿ ಸುಧಾ ಬರಗೂರು

ಅರಕಲಗೂಡು : ಇಂದಿನ ಮಕ್ಕಳ ಚಲನವಲನಗಳನ್ನು ಅವಲೋಕಿಸಿದರೇ ತುಂಬಾ ಆತಂಕ ಮತ್ತು ಭಯ ಎದುರಾಗುತ್ತಿದೆ.ಇದಕ್ಕೆ ಇಂದಿನ ಶಿಕ್ಷಣ ಪದ್ಧತಿಯೋ, ಮನೆಯಲ್ಲಿನ ಪೋಷಕರ ನಿರ್ಲಕ್ಷö್ಯತೆಯೋ ಹಾಗೂ ಸಮಾಜದ ದಷ್ಠಿಕೋನವೋ ಎಂಬುವ ಪ್ರಶ್ನೆ ಕಾಡುತ್ತಿದೆ.ಮಕ್ಕಳೇ ಮುಂದಿನ ಭವಿಷ್ಯದ ಪ್ರಜೆಗಳು ಎಂದು ಕರೆಯುವ ಸುದಂರ್ಭದಲ್ಲಿ ಪಾಠ ಹೇಳುವ ಮೇಸ್ಟುç,ಮನೆಯ ಮೊದಲ ಗುರುಗಳಾದ ತಂದೆ ತಾಯಿಗಳು ಮಕ್ಕಳಿಗೆ ಸಮಾಜದ ಅಭ್ಯುದಯಕ್ಕೆ ಉತ್ತೇಜಿತವಾದ ಸಂಸ್ಕಾರಗಳನ್ನು ಕಲಿಸಬೇಕಿದೆ.ಕೇವಲ ಉದ್ಯೋಗ ಕಲ್ಪಿಸುವಂತಹ ಶಿಕ್ಷಣಕ್ಕಿಂತ ಬದುಕಿನ ಮೌಲ್ಯಗಳನ್ನು ನೀಡುವ ಶಿಕ್ಷಣ ಬೇಕಿದೆ.ಇದು ನಮ್ಮ ಗುರುಹಿರಿಯರು,ತಂದೆ ತಾಯಿಗಳಿಂದ ಮಾತ್ರ ಸಾಧ್ಯ.ಇದಕ್ಕೆ ಇಂದು ನಡೆಯುತ್ತಿರುವ ಗುರತೋರಿದ ದಾರಿ-ತಿಂಗಳಮಾಮನ ತೇರು ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಖ್ಯಾತ ವಾಗ್ಮಿ ಸುಧಾ ಬರಗೂರು ಬಣ್ಣಿಸಿದರು.

ಪಟ್ಟಣದ ಚಿಲುಮೆಮಠದ ಶ್ರೀಗುರು ವಿಜಯ ಸಿದ್ಧ ಶಿವದೇವ ಮಂಗಳ ಮಂದಿರದಲ್ಲಿ ನಡೆದ 132ನೇ ಗುರುತೋರಿದ ದಾರಿ -ತಿಂಗಳಮಾಮನ ತೇರು ಕಾರ್ಯಕ್ರಮದಲ್ಲಿ ಭಾಗವಹಿ ಮಾತನಾಡಿದ ಅವರು ಇಂದಿನ ಮಕ್ಕಳಿಗೆ ಕುಟುಂಬ ಎಂಬುವುದರ ಬಗ್ಗೆ ಕಿಂಚಿತ್ತು ಅರಿವು ಇಲ್ಲ.ಯಾಕೆಂದರೇ ಪೋಷಕರು ತಮ್ಮ ಕನಸನ್ನು ಭವಿಷ್ಯದ ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ.ಪ್ರತಿ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ.ಕೇವಲ ಎಂಜಿನಿಯರಿAಗ್,ಮೆಡಿಕಲ್ ಪದವಿಯಿಂದ ಅಲ್ಲ.ಇಂದು ನಾವೆಲ್ಲರೂ ಶಿಕ್ಷಣವಂತರಾಗಿದ್ದೇವೆ ವಿನಃ ಪ್ರಜ್ಞಾವಂತರು,ವಿಚಾರವಂತರಾಗಿಲ್ಲ.ಇದರಿಂದ ಇಂದಿನ ಸಮಾಜದಲ್ಲಿ ಮತ್ತೊಷ್ಟು ಅಸಮಾನತೆ,ಅಂಧಕಾರ,ಮಾನವೀಯ ಮೌಲ್ಯಗಳಿಂದ ದೂರವಿದ್ದೇವೆ ಎಂದರು.

#132ನೇ_ಗುರುತೋರಿದ_ದಾರಿ_ತಿಂಗಳಮಾಮನ_ತೇರು

09/09/2025

ಅರಕಲಗೂಡಿನ ಕುವೆಂಪು ಭವನ ಚುಂಚನಗಿರಿ ಮಠಕ್ಕೆ - ಶಾಸಕ ಎ. ಮಂಜು

ಭವನದ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಸ್ವಾಮೀಜಿಯವರಲ್ಲಿ ಮನವಿ ಮಾಡಿದ ಶಾಸಕ ಮಂಜು.

ಅರಕಲಗೂಡು : ಪಟ್ಟಣದಲ್ಲಿ ತಾಂತ್ರಿಕ ಕಾರಣದಿಂದ ಅಪೂರ್ಣಗೊಂಡಿರುವ ಕುವೆಂಪು ಭವನವನ್ನು ಆದಿ ಚುಂಚನಗಿರಿ ಮಠಕ್ಕೆ ವಹಿಸಲಾಗಿದ್ದು,ಕೂಡಲೇ ಉಳಿಕೆ ಕಾಮಗಾರಿ ಪೂರ್ಣಗೊಳಿಸಿ ಸಮಾಜದ ಎಲ್ಲಾ ಕಾರ್ಯಕ್ರಮಗಳು ಅಲ್ಲಿ ನಡೆಯುವಂತೆ ಶ್ರೀಶಂಭುನಾಥಸ್ವಾಮೀಜಿಯವರು ಗಮನಹರಿಸಬೇಕೆಂದು ಶಾಸಕ ಎ.ಮಂಜು ಅವರು ಮನವಿ ಮಾಡಿದರು.

ಪಟ್ಟಣದ ಚಿಲುಮೆಮಠದ ಶ್ರೀಗುರು ವಿಜಯ ಸಿದ್ಧ ಶಿವದೇವ ಮಂಗಳ ಮಂದಿರದಲ್ಲಿ ನಡೆದ 132ನೇ ಗುರುತೋರಿದ ದಾರಿ -ತಿಂಗಳಮಾಮನ ತೇರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಒಕ್ಕಲಿಗ ಸಮಾಜದ ಕುವೆಂಪು ಭವನ ಕಾಮಗಾರಿ ನೆನಗುದಿಗೆ ಬಿದ್ದಿದೆ.ನನ್ನ ಅವಧಿಯಲ್ಲಿ ಲಕ್ಷಾಂತರರೂ ಹಣವನ್ನು ಭವನಕ್ಕೆ ಕಲ್ಪಿಸಲಾಗಿದೆ.ಇನ್ನು ಸಾಕಷ್ಟು ಹಣದ ಅವಶ್ಯಕತೆ ಇದೆ.ನಾನು ಸೇರಿದಂತೆ ಇಡೀ ಸಮಾಜ ಭವನದ ಅಭಿವೃದ್ಧಿಗೆ ಕೈಜೋಡಿಸಲಿದೆ.ಮಠದ ಸುಪರ್ತಿಗೆ ನೀಡಲಾಗಿದ್ದು,ಉಳಿಕೆ ಕೆಲಸವನ್ನು ಕೂಡಲೇ ಪೂರ್ಣಗೊಳಿಸಿ ಮುಂದಿನ ಎಲ್ಲಾ ಸಮಾಜದ ಕಾರ್ಯಕ್ರಮಗಳು ನೂತನ ಭವನದಲ್ಲಿ ಆಗಬೇಕಿದೆ.ಡಾ.ನಿರ್ಮಲಾನಂದನಾಥಸ್ವಾಮೀಜಿಯವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.

#132ನೇ_ಗುರುತೋರಿದ_ದಾರಿ_ತಿಂಗಳಮಾಮನ_ತೇರು

09/09/2025

ಜೀವನದಲ್ಲಿ ಬೆಳಕನ್ನು ಕಾಣಬೇಕಾದರೇ ಭಗವಂತನ ಸ್ಮರಿಸಬೇಕಿದೆ ; ಶ್ರೀಶಂಭುನಾಥಸ್ವಾಮೀಜಿ

ಅರಕಲಗೂಡು : ಇಂದು ನಡೆಯುತ್ತಿರುವ 132ನೇ ತಿಂಗಳಮಾಮನ ತೇರು ಅತ್ಯಂತ ವಿಶೇಷತೆಯಿಂದ ಕೂಡಿದೆ.ಯಾಕೇಂದರೆ ಇದು ಅನಂತ ಹುಣ್ಣಿಮೆಯಾಗಿದೆ.ಇದು ಎಂದಿಗೂ ಅಂತಿಮವಾದುದಲ್ಲ.ಸದಾ ಮುಂದುವರಿಯುವ ಗುರುತೋರಿದ ದಾರಿಯಾಗಿದೆ.ಜೀವನದಲ್ಲಿ ಬೆಳಕನ್ನು ಕಾಣಬೇಕಾದರೇ ಭಗವಂತನ ಸ್ಮರಿಸಬೇಕಿದೆ.ಆದರೇ ನಾವು ಅಜ್ಞಾನದಿಂದ ಕೂಡಿ,ಬದುಕಿನಲ್ಲಿ ಜ್ಞಾನದ ಬೆಳಕನ್ನು ಕಂಡುಕೊಳ್ಳದೇ ಅಜ್ಞಾನಿಗಳಾಗಿದ್ದೇವೆ.ಜೀವನದಲ್ಲಿ ಧೀರ್ಘಕಾಲ ಬಾಳುವುದನ್ನು ಎಲ್ಲರು ಕಲಿಯಬೇಕಿದೆ ಎಂದು ಹಾಸನ ಮತ್ತು ಕೊಡಗು ಶಾಖಾ ಮಠದ ಶ್ರೀಶಂಭುನಾಥಸ್ವಾಮೀಜಿ ಆರ್ಶೀಚನ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಎ.ಮಂಜು , ಕಾಂಗ್ರೆಸ್ ಮುಖಂಡ ಶ್ರೀಧರ್‌ಗೌಡ,ಸ್ವಸ್ಥ ಸಮಾಜ ನಿರ್ಮಾಣ ವೇದಿಕೆ ಅಧ್ಯಕ್ಷ ಪ್ರದೀಪ್‌ರಾಮಸ್ವಾಮಿ,ಬೆಮ್ಮತ್ತಿ ಸುರೇಶ್,ರಶ್ಮೀ,ಮೊಗಣ್ಣ,ಪ್ರಾಂಶುಪಾಲ ಮಹೇಶ್ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

#132ನೇ_ತಿಂಗಳಮಾಮನ_ತೇರು

09/09/2025

Sports News : ವಿದ್ಯಾರ್ಥಿಗಳು ಶಿಕ್ಷಣದಂತೆ ಕ್ರೀಡಾ ಚಟುವಟಿಕೆಗು ಒತ್ತುನೀಡಿ-ಶಾಸಕ ಎ.ಮಂಜು |

ಅರಕಲಗೂಡು : ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತುನೀಡುವಂತೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ವಿಶ್ವನಾಥ್,ಮಾಜಿ ತಾಪಂ ಅಧ್ಯಕ್ಷ ನರಸೇಗೌಡ,ಗ್ರಾಪಂ ಅಧ್ಯಕ್ಷ ಪ್ರಕಾಶ್,ಪ್ರಾಂಶುಪಾಲರಾದ ಚಂದ್ರಕಲಾ,ಅನAತರಾಮ್,ಫರ್ಜಾನ ಅಂಜುA,ಸರ್ವಮAಗಳ,ಹರೀಶ್,ಗಿರೀಶ್,ಕುಮಾರಯ್ಯ,ಪದ್ಮ,ದೈಹಿಕ ಶಿಕ್ಷಕ ಸಂಜೀವ್‌ಕುಮಾರ್ ಇತರರು ಉಪಸ್ಥಿತರಿದ್ದರು.

03/09/2025

ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ-ಕ್ರಿಸ್ತಜ್ಯೋತಿ(ಬಾಲಕಿಯರು),ಶಾಂತಿನಿಕೇತನಾ (ಬಾಲಕರು)ಶಾಲೆಗಳಿಗೆ ಸಮಗ್ರ ಪ್ರಶಸ್ತಿ

ಅರಕಲಗೂಡು : ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ.ಆದರೆ ಭಾಗವಹಿಸುವಿಕೆ ಅತೀ ಮುಖ್ಯವಾಗಿದೆ.ಶೈಕ್ಷಣಿಕ ಹಂತದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೊನ್ನವಳ್ಳಿ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ಕ್ರೀಡಾಕೂಟದ ಬಾಲಕರ ಸಮಗ್ರ ಪ್ರಶಸ್ತಿಯನ್ನು ಶಾಂತಿನೀಕೇತನ ಶಾಲೆಯ ತಂಡ ಹಾಗೂ ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಕ್ರಿಸ್ತಜ್ಯೋತಿ ಶಾಲೆಯ ತಂಡ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜು,ಸದಸ್ಯರಾದ ಸಣ್ಣದೇವಯ್ಯ,ಯೋಗೇಶ್,ಜಯರಾಮ್,ರವಿಕುಮಾರ್,ಉಪ ಪ್ರಾಂಶುಪಾಲ ಬೋರಣ್ಣಗೌಡ,ಟಿಪಿಒ ನಿಂಗಯ್ಯ,ದೈಹಿಕ ಶಿಕ್ಷಕ ಸಂಜೀವ್‌ಕುಮಾರ್,ಸಹ ಶಿಕ್ಷಕರು ಭಾಗವಹಿಸಿದ್ದರು.
ಬೆಳಗ್ಗೆಯಿಂದ ಸುರಿಯಲಾರಂಭಿಸಿದ ಜಿಡಿ ಜಿಡಿ ಮಳೆಯನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

03/09/2025

ಸಾಲಬಾಧೆ: ಅರಕಲಗೂಡಿನಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ | ಮೃತ ರೈತನ ಮನೆಗೆ ತಹಸೀಲ್ದಾರ್ ಸೌಮ್ಯ ಭೇಟಿ | ತ್ವರಿತವಾಗಿ ಪರಿಹಾರ,ಸೌಕರ್ಯ ಕಲ್ಪಿಸುವ ಭರವಸೆ

ಅರಕಲಗೂಡು :- ಸಾಲಬಾಧೆಯಿಂದ ಕೀಟನಾಶಕ ಸೇವನೆ ಮಾಡಿ ಅತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಹಂಪಾಪುರ ಗ್ರಾಮದ ಮೃತ ರೈತ ಜಯಣ್ಣ ಮನೆಗೆ ಬುಧವಾರ ಅಧಿಕಾರಿಗಳೊಂದಿಗೆ ತಹಸೀಲ್ದಾರ್ ಸೌಮ್ಯ ಅವರು ಭೇಟಿನೀಡಿ ಕುಟುಂಬಸ್ತರಿಗೆ ಸಾಂತ್ವನಾ ಹೇಳಿದರು.
ಮೃತ ರೈತನ ಕುಟುಂಬ ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವುದನ್ನು ಕಂಡು ತಹಸೀಲ್ದಾರ್ ಮರುಕ ವ್ಯಕ್ತಪಡಿಸಿದರು.ಮೂಲಸೌಕರ್ಯದಿಂದ ವಂಚನೆಗೆ ಒಳಗಾಗಿ ಕೃಷಿ ಜಮೀನಿನ ಬಳಿ ಸಂಕಷ್ಟದಲ್ಲಿ ಈ ಕುಟುಂಬವಿದ್ದು,ಸ್ಥಳೀಯ ಗ್ರಾಪಂ ವತಿಯಿಂದ ಮನೆ ಅಥವಾ ಮತ್ಯಾವ ಸವಲತ್ತುಗಳನ್ನು ಕಲ್ಪಿಸಿಲ್ಲದಿರುವುದನ್ನು ಕಂಡು ಅವರು ಬೇಸರ ವ್ಯಕ್ತಪಡಿಸಿದರು.ಕೂಡಲೇ ಗ್ರಾಪಂ ಆಡಳಿತ ವತಿಯಿಂದ ಮನೆ ಇತರೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ದೂರವಾಣಿ ಮೂಲಕ ಪಿಡಿಒ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಸ್ವಾಮಿ,ಕಂದಾಯ ಅಧಿಕಾರಿ ಭಾಸ್ಕರ್ ಹಾಗೂ ಇತರರು ಹಾಜರಿದ್ದರು.

02/09/2025

ಪಟ್ಟಣ ಪಂಚಾಯತಿ ನೀರು, ಗ್ರಾಮ‌ ಪಂಚಾಯತಿ'ಗೆ ತೆರಿಗೆ ಇದು ಯಾವ ನ್ಯಾಯ?..

ಗ್ರಾಮ ಪಂಚಾಯಿತಿ ಜಾಗದ ಮನೆಗಳಿಗೆ ಪಟ್ಟಣ ಪಂಚಾಯತಿ ಕುಡಿಯುವ ನೀರು ಹೇಗೆ ಕೊಡಲು ಸಾಧ್ಯ!

ಮೊದಲು ಅನಧಿಕೃತವಾಗಿ ಕಟ್ಟಿಸಿಕೊಂಡಿರುವ ಹಣ ಹಿಂದಿರುಗಿಸಿ -ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್ ಖಡಕ್ ಸೂಚನೆ!..

ಮೂಲಭೂತ ಸೌಕರ್ಯ ಕೋರಿ ಮನವಿ ಬರುತ್ತಿದೆ, ಇದು ಸಾಧ್ಯವಾಗದ ಕೆಲಸ | ಪಪಂ ಅಧ್ಯಕ್ಷ ಎಸ್. ಎಸ್. ಪ್ರದೀಪ್ ಕುಮಾರ್

ಅರಕಲಗೂಡು: ಪಪಂ ಗೆ ಹೊಂದಿಕೊಂಡಂತೆ ಇರುವ ಗ್ರಾಪಂಗಳಿಗೆ ಸೇರಿದ ಜಾಗದಲ್ಲಿ ನಿರ್ಮಿಸಿರುವ ಹೊಸ ಬಡಾವಣೆಗಳಿಗೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಮುಂದಾಗಬಾರದು ಎಂದು ಪಪಂ ಅಧ್ಯಕ್ಷ ಎಸ್. ಎಸ್. ಪ್ರದೀಪ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

02/09/2025

Arkalgud | ಬೆಳವಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಸ್ಪರ್ಧಾತ್ಮಕ ಬೋಧನಾ ಕೊಠಡಿ ಉದ್ಘಾಟನೆ | News5Kannada

ಅರಕಲಗೂಡು :- ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಗೆ ಒತ್ತುನೀಡಿದರೇ ಅವರ ಮುಂದಿನ ಶಿಕ್ಷಣ ಬದುಕ ರೂಪಿಸಿಕೊಳ್ಳಲು ನೆರವಾಗಲಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ,
ಶಾಲೆಯ ಮುಖ್ಯಶಿಕ್ಷಕ ಮೋಹನ್,ಇಸಿಒಗಳಾದ ಯೋಹೇಶ್,ಶಿವಪ್ರಕಾಶ್,ಶಿಕ್ಷಕ ಚಲುವಯ್ಯ,ಸಹ ಶಿಕ್ಷಕರು,ಊರಿನ ಪ್ರಮುಖರು ಹಾಜರಿದ್ದರು.

02/09/2025

ತೋಟಗಾರಿಕೆ ಬೆಳೆಗಳ ನಡುವೆ ಅಂತರ್ ಬೇಸಾಯ ಕೈಗೊಳ್ಳಿ-ಶಾಸಕ ಎ.ಮಂಜು ರೈತರಿಗೆ ಸಲಹೆ

ಅರಕಲಗೂಡು :- ತಾಲೂಕಿನಲ್ಲಿ ವರ್ಷಪೂರ್ತಿ ನೀರಾವರಿ ಮೂಲಗಳು ಇರುವ ಹಿನ್ನೆಲೆ ರೈತರು ತೋಟಗಾರಿಕೆ ಬೆಳೆಗಳ ನಡುವೆ ಅಂತರಬೇಸಾಯ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಎ.ಮಂಜು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್,ಮಾಜಿ ತಾಪಂ ಸದಸ್ಯ ನಿಂಗೇಗೌಡ,ಗ್ರಾಪಂ ಅಧ್ಯಕ್ಷ ಮೋಹನ್,ಮುಖಂಡರಾದ ಗೋವಿಂದೇಗೌಡ,ಮಂಜುನಾಥ್,ಕಮಲಮ್ಮ,ರೈತ ಸಂಘದ ಅಧ್ಯಕ್ಷ ಯೋಗಣ್ಣ,ತೋಟಗಾರಿಕೆ ಇಲಾಖೆ ಅಧಿಕಾರಿ,ಸಿಬ್ಬಂದಿಗಳು,ರೈತ ಫಲಾನುಭವಿಗಳು ಇದ್ದರು.

Address

Bangalore
573201

Alerts

Be the first to know and let us send you an email when News5Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News5Kannada:

Share