News5Kannada

News5Kannada MEDIA

14/05/2026

Arkalgud : ಗ್ರಾಮ ಪಂಚಾಯಿತಿ ಚುನಾವಣೆಗೂ ವ್ಯಾಪಿಸಿದ ಗ್ಯಾರಂಟಿ...!

ಗ್ರಾಮ ಪಂಚಾಯಿತಿ ಚುನಾವಣೆ ಮುನ್ನವೆ ವ್ಯಕ್ತಿಯೋರ್ವ ಜನರಿಗೆ ಅಸೆ, ಭರವಸೆಯನ್ನು ಗ್ರಾಮ ಪಂಚಾಯತಿ ಕಚೇರಿ ಮುಂದೆ ನಿಂತ್ತು ಘೋಷಣೆ ಮಾಡಿರುವ ವಿಡಿಯೋ ವೈರಲ್!...

ಅರಕಲಗೂಡು ತಾಲೂಕು ದೊಡ್ಡಬೆಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾವಣೆ ಅಪೇಕ್ಷಿತಾ ಅಭ್ಯರ್ಥಿ ಯೋರ್ವನಿಂದ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆ ಗ್ರಾಮ ಪಂಚಾಯಿತಿ ಚುನಾವಣಾ ಮಟ್ಟಕ್ಕೂ ವ್ಯಾಪಿಸಿರುವ ಗ್ಯಾರಂಟಿ ಯೋಜನಾ ಭರಪೂರ..

11/05/2026

ಹೊಳೆನರಸೀಪುರ ಆಸ್ಪತ್ರೆಯಲ್ಲಿ ಗ್ಲಾಸ್ ಒಡೆದ ಕಥೆ ! ; ಜನರೆಲ್ಲ ಕಕ್ಕಾಬಿಕ್ಕಿ

ಹೊಳೆನರಸೀಪುರ; ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ಸಿಬ್ಬಂದಿ ವರ್ತನೆಗೆ ಬೇಸತ್ತ ವ್ಯಕ್ತಿಯೊಬ್ಬ ಗ್ಲಾಸ್ ಒಡೆದು ರಾದ್ದಾಂತ ಎಬ್ಬಿಸಿದ ಘಟನೆ ನಡೆಯಿತು.
ಆಸ್ಪತ್ರೆಯಲ್ಲಿ ಮಗು ಕರೆತಂದು ಚೀಟಿ ಪಡೆಯಲು ಕೆಲಕಾಲ ಕಾದು ನಿಂತಿದ್ದ‌ ವ್ಯಕ್ತಿ ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ಶುರುವಾಯಿತು. ಸಾಕಷ್ಟು ಹೊತ್ತು ಚೀಟಿಗಾಗಿ ಕಾದು ನಿಂತಿದ್ದರೂ ತಮಗಿಷ್ಟ ಬಂದವರಿಗೆ ಚೀಟಿ ನೀಡಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಮಹಿಳಾ ಸಿಬ್ಬಂದಿಯೊಂದಿಗೆ ವಾಗ್ವಾದ ಹೆಚ್ಚಾಗಿ ರೋಸಿ ಹೋದ ವ್ಯಕ್ತಿ ಗ್ಲಾಸ್ ಬಡಿದಿದ್ದರಿಂದು ಗಾಜು ಚುರಾಗಿ ಅಪ್ಪಳಿಸಿ ಮಹಿಳಾ ಸಿಬ್ಬಂದಿ ಆತಂಕಕ್ಕೀಡಾದರು. ಇದು ಕಿಕ್ಕಿರಿದು ಸೇರಿದ್ದ ಜನರನ್ನು ಬೆಚ್ಚಿಬೀಳಿಸಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದ ಬಳಿಕ ಪರಿಸ್ಥಿತಿ ಶಾಂತವಾಯಿತು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ರೋಗಿಗಳಷ್ಟೇ ಅಲ್ಲದೆ ಸಿಬ್ಬಂದಿಗೆ ರಕ್ಷಣೆ ಇಲ್ಲವೆಂಬುದು ಯಕ್ಷಪ್ರಶ್ನೆ

08/05/2026

Arkalgud | ಬಲಿಗಾಗಿ ಕಾದಿರುವ ಗುಂಡಿಗಳು ; ದುರಸ್ತಿ ಯಾವಾಗ..?

ರಾಜರೋಷವಾಗಿ ಜೀವಕ್ಕೆ ಕುತ್ತು ತರಲು ಕಾಯುತ್ತಿರುವ ಹದಗೆಟ್ಟ ರಸ್ತೆಗಳು

ಅರಕಲಗೂಡು ತಾಲೂಕಿನಲ್ಲಿ ಗುಂಡಿ ಹೊಂಡಗಳ ಕಾರುಬಾರು

ಮುಂಗಾರು ಪೂರ್ವ ಮಳೆಗೆ ಮುನ್ನವೇ ಬಾಯ್ತರೆದ ಗುಂಡಿಗಳು

ಅರಕಲಗೂಡು-ಇಬ್ಬಡಿ-ಬೆಳವಾಡಿ ಮಾರ್ಗದ ರಸ್ತೆಯಲ್ಲಿ ಕೆಸರು ರಸ್ತೆಗಳು ತಕತೈ

ವಾಹನ ಸವಾರರನ್ನು ಬೆಚ್ಚಿ ಬೀಳಿಸುತ್ತಿರುವ ಹೊಂಡ ಗುಂಡಿಗಳು

05/05/2026

ಅರಕಲಗೂಡಿನಲ್ಲಿ ವರುಣನ ಅಬ್ಬರ..!

05/05/2026

ಅರಕಲಗೂಡಿನಲ್ಲಿ ವರುಣನ ಅಬ್ಬರ

04/05/2026

Arkalgud News : ಕಾಡಾನೆಗಳ ಬಳಿಕ ಕಾಡುಕೋಣಗಳ ಹಾವಳಿ

ಕಾಟಿಗಳ ಹಾವಳಿ ಕಾಡಾನೆಗಳ ನಿಯಂತ್ರಣಕ್ಕೆ ರೈತರ ಆಗ್ರಹ

ಕಾಫಿ ಅಡಿಕೆ ತೋಟದಲ್ಲಿ ಲೂಟಿಗಿಳಿದ ಕಾಟಿಗಳು

ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಡಾನೆಗಳ ಹಾವಳಿ ಆಯ್ತು ಈಗ ಕಾಟಿಗಳ ಕಾಟಕ್ಕೆ ಬೇಸತ್ತ ರೈತರು

ಅರಕಲಗೂಡು ತಾಲೂಕು ಮಲ್ಲಿಪಟ್ಟಣ ಹೋಬಳಿ ಭಾಗದಾಳು ಗ್ರಾಮದ ಕಾಫಿ ಬೆಳೆಗಾರ ಸಂಘದ ಎಎಚ್‌ಡಿಪಿಎ ನಿರ್ದೇಶಕರಾದ ಬಿಜೆ ಕಾಂತರಾಜು ಎಂಬುವರ ಕಾಫಿ ತೋಟದಲ್ಲಿ ಎರೆಡು ಕಾಟಿಗಳು ಕಂಡುಬಂಧಿವೆ ಮತ್ತು ಅಲ್ಲಿಯೇ ಪಕ್ಕದಲ್ಲಿರುವ ಬೈಸೂರು ಅರಣ್ಯ ಹಾಗೂ ಗಂಗವಾರ ಅರಣ್ಯದಲ್ಲಿ ಬೀಡು ಬಿಟ್ಟು ಬೆಳೆ ಲೂಟಿ ರೈತರ ಆತಂಕ

ನಾಳೆ ಅಂಬೇಡ್ಕರ್​ ನೂತನ ಕಂಚಿನ ಮೂರ್ತಿ ಅನಾವರಣಅರಕಲಗೂಡು : ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ಬೆಳವಾಡಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕಂ...
02/05/2026

ನಾಳೆ ಅಂಬೇಡ್ಕರ್​ ನೂತನ ಕಂಚಿನ ಮೂರ್ತಿ ಅನಾವರಣ

ಅರಕಲಗೂಡು : ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ಬೆಳವಾಡಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ ಹಾಗೂ 135ನೇ ಜಯಂತಿ ಕಾರ್ಯಕ್ರಮ ನಾಳೆ (ಭಾನುವಾರ) ಬೆಳಗ್ಗೆ 10-30ಕ್ಕೆ ಹಮ್ಮಿಕೊಂಡಿದೆ.

ಶಾಸಕ ಎ.ಮಂಜು‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ತಹಸೀಲ್ದಾರ್ ಸೌಮ್ಯ ರವರು ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದು ಡಾ. ಜಿ.ಆ‌ರ್. ಅಂಬೇಡ್ಕರ್‌ರವರ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

02/05/2026

Arkalgud News : ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಲತಾ ಕುಮಾರಿ ಭೇಟಿ; ಬೆಳೆ ಹಾನಿಯ ಪರಿಹಾರದ ಭರವಸೆ

ಅರಕಲಗೂಡು : ತಾಲೂಕಿನ ಕಸಬಾ ಹೋಬಳಿಯ ಬಸವನಹಳ್ಳಿ ಗ್ರಾಮದ ರೈತ ನಾಗರಾಜು ಜಮೀನಿನಲ್ಲಿ ಮೊನ್ನೆ ಬಿದ್ದ ಮಳೆ ಹಾಗೂ ಭಾರಿ ಗಾಳಿಯಿಂದಾಗಿ ಹಾನಿಯಾದ ಬಾಳೆ ತಾಕನ್ನು ಜಿಲ್ಲಾಧಿಕಾರಿ ಲತಾ ಕುಮಾರಿ ಇಂದು ವೀಕ್ಷಿಸಿದರು, ಹಾಗೂ ರೈತರೊಂದಿಗೆ ಚರ್ಚಿಸಿ ಆದ ನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಹಾರದ ಭರವಸೆ ನೀಡಿದರು.

ಬಾಳೆ ತೋಟವು ಹಾನಿ ಆಗಿರುವುದರಿಂದ, ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ಪರಿಹಾರವನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

02/05/2026

Arkalgud News : ಕುವೆಂಪುರವರ ಆಶಯದಂತೆ ಮಂತ್ರ ಮಾಂಗಲ್ಯ ವಿವಾಹವಾದ ಸರ್ಕಾರಿ ವೈದ್ಯ.!

ಕೇವಲ ಅರ್ಧ ತಾಸಲ್ಲಿ ಮದುವೆಯಾದ ಜೋಡಿ, ಕುವೆಂಪು ಆಶಯದಂತೆ
ಮಂತ್ರ ಮಾಂಗಲ್ಯ..!

ಅರಕಲಗೂಡು ಪಟ್ಟಣದ ನಿವಾಸಿ ನಿವೃತ್ತ ಯೋಧ ರಮೇಶ್ ಮತ್ತು ಗೃಹಣಿ ನಾಗಮಣಿ ಅವರ ಪುತ್ರ ಡಾ. ಅಭಿಷೇಕ್ ಮತ್ತು ಮನುಗನಹಳ್ಳಿ ಗ್ರಾಮದ ಶ್ರೀಮತಿ ರುಕ್ಮಿಣಿ,ದಿll.ಹನುಮಂತ ಅವರ ಪುತ್ರಿ ನಿವೇದಿತ ಅವರು ಬುದ್ಧ ಪೂರ್ಣಿಮಾ ದಿನದಂದು ಗೌತಮಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆಯುವ ಮೂಲಕ ಹಾರ ಬದಲಾಹಿಸಿಕೊಂಡು ಮಂತ್ರ ಮಾಂಗಲ್ಯ ಧಾರಣೆ ಮಾಡಿಕೊಂಡು ಸರಳವಾಗಿ ವಿವಾಹ ಮಾಡಿಕೊಂಡರು.
ಅರಕಲಗೂಡು ಪಟ್ಟಣದ ಹೊರವಲಯ ರಾಮನಾಥಪುರ ರಸ್ತೆಯಲ್ಲಿನ ಎಸ್ ಹೆಚ್ ಕೆ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ವಧು, ವರನ ತಂದೆ ತಾಯಿಯನ್ನು ಅಹ್ವಾನಿಸಿದ ಶಿಕ್ಷಕ ಮಲ್ಲೇಶ್ ಅವರು, ಮಂತ್ರ ಮಾಂಗಲ್ಯ ಬಗ್ಗೆ ವಿವರಿಸಿ, ವಿವಾಹಕ್ಕೆ ಸಮ್ಮತಿ ಸೂಚಿಸುವಂತೆ ಮನವಿ ಮಾಡಿದರು.
ತಂದೆ ತಾಯಿ ಹಾಗೂ ಗುರು ಹಿರಿಯರ ಸಮ್ಮತಿ ಮೇರೆಗೆ ವಧು ವರರನ್ನು ವೇದಿಕೆ ಮುಂಭಾಗ ನಿಲ್ಲಿಸಿ ವಿವಾಹ ಸಂಹಿತೆಯನ್ನು ಓದುವ ಮೂಲಕ ಸಹಿ ಹಾಕಿಸಲಾಯಿತು. ಇದಾದ ಬಳಿಕ ಮಾಲಾರ್ಪಣೆ, ಮಾಂಗಲ್ಯ ಧಾರಣೆಯೊಂದಿಗೆ ಮದುವೆ ನಡೆಯಿತು. ಇದಾದ ನಂತರ ವಂದನಾರ್ಪಣೆ ಮೂಲಕ ಮುಕ್ತಾಯಗೊಂಡಿತು.
ಕುವೆಂಪು ಅವರ ನುಡಿಯಂತೆ, ಲೋಕವನ್ನಾಗಲಿ, ಸಮಾಜವನ್ನಾಗಲಿ, ಪುರೋಹಿಶಾಹಿಯನ್ನಾಗಲಿ ಬದಲಾಯಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ ಎಂಬುದಾಗಿದೆ.
ಇಂದಿನ ಸಮಾಜಕ್ಕೆ ಕುವೆಂಪು ಅವರ ಪರಿಕಲ್ಪನೆಯ ಸರಳ ವಿವಾಹ ಹೆಚ್ಚು ಅವಶ್ಯಕತೆಯಾಗಿದೆ. ನಾನು ಸರಕಾರಿ ವೈದ್ಯನಾಗಿ ನನ್ನ ಕೈ ಹಿಡಿದಿರುವ ನಿವೇದಿತ ಕೂಡ ಎಂ ಬಿ ಎ ಪದವೀಧರರು. ಯಾವುದೇ ಆಡಂಭರ, ಶಾಸ್ತ್ರ ಸಂಪ್ರದಾಯವಿಲ್ಲದೆ,ಮಂಗಳ ವಾದ್ಯ, ಅರುಂಧತಿ ನಕ್ಷತ್ರ,ಪುರೋಹಿತರನ್ನು ಅವಲಂಬನೆ ಮಾಡದೆ ಸಮಾಜ ಸುಧಾರಕರಾದ ಬುದ್ಧ, ಬಸವ ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸರಳ ವಿವಾಹ ಮಾಡಿಕೊಂಡು ಸಣ್ಣ ಪ್ರಮಾಣದಲ್ಲಿ ಸಮಾಜ ಬದಲಾವಣೆಗೆ ಕೈಜೋಡಿಸಿದ್ದೇವೆ ಎಂದು ನವ ಜೋಡಿಗಳಾದ ಡಾ. ಅಭಿಷೇಕ್( ಸರಕಾರಿ ವೈದ್ಯಾಧಿಕಾರಿ ) ನಿವೇದಿತ ಸಂತಸ ಹಂಚಿಕೊಂಡರು.

02/05/2026

Arkalgud News : ಅಂಬೇಡ್ಕರ್ ಜಯಂತಿ ಮೆರವಣಿಗೆಗೆ ಪೋಲಿಸ್ ಅಡ್ಡಿ ; ಗ್ರಾಮಸ್ಥರು ಆಕ್ರೋಶ

ಅಂಬೇಡ್ಕರ್ ವಿರೋಧಿ ಪಿಎಸ್ಐ ಎಂದು ದಿಕ್ಕಾರ ಕೂಗಿದ ಗ್ರಾಮಸ್ಥರು

ಅರಕಲಗೂಡು: ದಡದಹಳ್ಳಿ ಗ್ರಾಮದಲ್ಲಿ ೧೩೫ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಗ್ರಾಮದಿಂದ ಪೇಟೆಗೆ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮಾಡಿಕೊಂಡು ಡಿಜೆ ಸೌಂಡ್ ಗೆ ಅನುಮತಿ ಪಡೆದು ಮೆರವಣಿಗೆ ಮಾಡುವ ವೇಳೆ ಗ್ರಾಮಸ್ಥರನ್ನು ತಡೆದು ನಿಮ್ಮ ಊರಿನಲ್ಲಿ ಕಾರ್ಯಕ್ರಮ ಮಾಡಿಕೊಳ್ಳಿ ನಿಮಗೆ ಇಲ್ಲಿ ಅವಕಾಶ ಇಲ್ಲ ಎಂದು ಮೆರವಣಿಗೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.

ಪಿಎಸ್ಐ ವಿರುದ್ಧ ಗ್ರಾಮಸ್ಥರು ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

Address

Bangalore
573201

Alerts

Be the first to know and let us send you an email when News5Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News5Kannada:

Share