News5Kannada

News5Kannada ನಿಮ್ಮ ಧ್ವನಿ'ಗೆ ... ನಮ್ಮ ಬಲ

24/07/2025

Cow : ಕರೆಂಟ್ ಶಾಕ್‌ಗೆ ಹಸು ಸಾವು - electric shock kills cows

24/07/2025

Dr. Namratha : ಡಾ.ನಮ್ರತಾ'ಗೆ ನಾಗರೀಕ ಸನ್ಮಾನ | News5Kannada

ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದೊಂದರಲ್ಲಿಯೇ 21ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಡಾ. ನಮ್ರತಾ ಅವರಿಗೆ ಶಾಸಕ ಎ. ಮಂಜು ಹಾಗೂ ಗ್ರಾಮಸ್ಥರು ಬೀಳ್ಕೊಡುಗೆ ನೀಡಿ ಗೌರವಿಸಿದರು.

News5Kannada - Ravi Dummi

24/07/2025

Anganwadi | Arkalgud : ತಾಲೂಕಿನಲ್ಲಿ ಅಂಗನವಾಡಿ ಕಟ್ಟಡಗಳ ಮುಕ್ತಗೊಳಿಸಿ - ಶಾಸಕ A Manju

ಅರಕಲಗೂಡು : ತಾಲೂಕಿನಲ್ಲಿ ಅಂಗನವಾಡಿಗಳಿಗೆ ಸ್ವಂತಃ ಕಟ್ಟಡ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು,ನಿಗದಿತ ಅವಧಿಯೊಳಗೆ ಬಾಕಿ ಇರುವ 19ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಜಿಲ್ಲೆಯಲ್ಲಿಯೇ ತಾಲೂಕು ಅಂಗನವಾಡಿ ಕಟ್ಟಡಗಳ ಮುಕ್ತಗೊಳಿಸಬೇಕೆಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಸೌಮ್ಯ,ಜಿಪಂ ಎಇಇ ರಮೇಶ್,ಸಿಡಿಪಿಒ ವೆಂಕಟೇಶ್,ಸರ್ವೇ ಇಲಾಖೆ ಅಧಿಕಾರಿ ಸುಂದರ್,ಪಪಂ ಮುಖ್ಯಾಧಿಕಾರಿ ಇದ್ದರು.
News5Kannada - Ravi Dummi

23/07/2025

WALKATHON-2025 | ಹೃದಯಕ್ಕಾಗಿ ನಡಿಗೆ ಜಾಥ ಯಶಸ್ವಿ ! | News5Kannada

ಅರಕಲಗೂಡು ತಾಲೂಕು ಆಡಳಿತ ಮತ್ತು ಅರೋಗ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ಜರುಗಿದ ಹೃದಯಕ್ಕಾಗಿ ನಡಿಗೆ ಯಶಸ್ವಿಯಾಗಿ ಜರುಗಿತು.

ತಾಲೂಕು ಕಚೇರಿಯಿಂದ ಆರಂಭಗೊಂಡ ಜಾಥಕ್ಕೆ ಶಾಸಕರಾದ ಎ. ಮಂಜು ಚಾಲನೆ ನೀಡಿದರು.

ತಹಸೀಲ್ದಾರ್ ಸೌಮ್ಯ, ಟಿ ಹೆಚ್ ಒ ಡಾ. ಪುಷ್ಪಲತಾ, ಬಿ ಇ ಒ ನಾರಾಯಣ್ ಇತರೆ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

ತಾಲೂಕು ಕಚೇರಿಯಿಂದ ಆರಂಭಗೊಂಡ ಜಾಥಾ ಅನಕೃ ವೃತ್ತ ಮೂಲಕ ಸಾಗಿ ಸಂತೆಮರೂರು ಸರ್ಕಲ್ ನಲ್ಲಿ ಅಂತ್ಯಗೊಂಡಿತು.

22/07/2025

Arkalgud Malnad P U College : ಮಲ್ನಾಡ್ ಪಿ ಯು ಕಾಲೇಜಿನಲ್ಲಿ ಪ್ರೆಷರ್ಸ್ ಡೇ ಸಡಗರ News5Kannada

ಅರಕಲಗೂಡು : ವಿದ್ಯೆಯಿಂದ ಮಾತ್ರ ಸಮಾಜದಲ್ಲಿ ಉತ್ತಮ‌ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಶಾಸಕ ಎ.ಮಂಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಚಿಲುವೆ ಮಠದ ಸಮುದಾಯ ಭವನದಲ್ಲಿ‌ ನಡೆದ ಮಲ್ನಾಡ್ ಪಿ.ಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು, ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಖಾಸಗಿ ಪಿಯು ಕಾಲೇಜುಗಳು ಕಾರ್ಯನಿರ್ವಾಹಿಸುತ್ತಿವೆ ಆ ಪೈಕಿ ಈ ಕಾಲೇಜು ಉತ್ತಮ ಪರಿಸರವನ್ನು ಹೊಂದಿರುವುದು ಸ್ವಾಗತಾರ್ಹ , ಇಲ್ಲಿ ದಾಖಲಾಗಿರುವ ಬಹುತೇಕ ಮಕ್ಕಳು ರೈತಾಪಿ ವರ್ಗದಿಂದ ಬಂದವರೆ ಆಗಿದ್ದಾರೆ. ಈ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ ಮುಂದಿನ ಶಿಕ್ಷಣವನ್ನು ಯಶಸ್ವಿಯಾಗಿ ಪಡೆಯುವ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರು ಕಾರ್ಯನಿರ್ವಹಿಸಿ ವಿಶ್ವಾಸಗಳಿಸಬೇಕೆಂದು ಸಲಹೆ ಮಾಡಿದರು.

ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಆಯ್ಕೆಗೊಂಡಿರುವ 5 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರೀ ಜಯದೇವ ಸ್ವಾಮೀಜಿ, ಕಾಲೇಜಿನ ಪ್ರಾಂಶುಪಾಲ ಶಶಿಕುಮಾರ್, ಉಪನ್ಯಾಸಕರು ಹಾಜರಿದ್ದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

22/07/2025

Arkalgud : ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಚಾಲನೆ News5Kannada

ಅರಕಲಗೂಡು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಲಾದ ವಿಜ್ಞಾನ ವಿಭಾಗಕ್ಕೆ ಶಾಸಕ ಎ.ಮಂಜು ಸೋಮವಾರ ಚಾಲನೆ ನೀಡಿದರು.

ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಅಗತ್ಯವಿತ್ತು. ಹಲವು ವರ್ಷಗಳಿಂದ ಇದಕ್ಕಾಗಿ ಪ್ರಯತ್ನ ನಡೆಸಲಾಗಿತ್ತು ಎಂದರು.

ಪ್ರಾಂಶುಪಾಲ ಮಹೇಶ್, 2025-26 ನೇ ಸಾಲಿನ ಪ್ರಥಮ ವರ್ಷದ ಪಿಸಿಎಂ ವಿಭಾಗಕ್ಕೆ 22 ವಿದ್ಯಾರ್ಥಿಗಳು ದಾಖಲಾಗಿದ್ದು ಎಲ್ಲರ ಪ್ರವೇಶ ಶುಲ್ಕವನ್ನು ದಾನಿಗಳ ನೆರವನಿಂದ ಭರಿಸಿರುವುದಾಗಿ ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಾಲಾಜಿ ಮಾತನಾಡಿದರು. ಸದಸ್ಯರಾದ ರವಿ ಕುಮಾ‌ರ್, ವೆಂಕಟೇಶ್, ಸುಬ್ಬರಾವ್‌, ಚಿದಂಬರ, ನಿರ್ಮಲ, ಉದೇಶ, ಮಂಜುನಾಥ್‌, ನರಸೇಗೌಡ ಉಪಸ್ಥಿತರಿದ್ದರು.

22/07/2025

A Manju : ಗಂಗನಾಳು ಏತಾ ನೀರಾವರಿ ಮುಂದುವರಿದ ಕಾಮಗಾರಿಗೆ 5ಕೋಟಿ ಬಿಡುಗಡೆ - ಶಾಸಕ ಮಂಜು News5Kannada

ಅರಕಲಗೂಡು : ತಾಲ್ಲೂಕಿನ ಕಸಬಾ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮಹಾತ್ವಾಕಾಂಕ್ಷೆ ಯೋಜನೆ ಗಂಗನಾಳು ಏತಾ ನೀರಾವರಿ ಮುಂದುವರಿದ ಕಾಮಗಾರಿಗೆ 5ಕೋಟಿ ರೂ ಬಿಡುಗಡೆಯಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ಇಂದು ಗಂಗನಾಳು ಏತನೀರಾವರಿ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಸುಮಾರು 88 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದ್ದಾಗಿದ್ದು 44 ಗ್ರಾಮಗಳ ಕೃಷಿ ಜಮೀನಿಗೆ ನೀರು ಹರಿಯಲಿದೆ ಇದ್ದರಿಂದ ರೈತರು ನೀರಾವರಿ ಅರೆ ನೀರವಾರಿ ಬೆಳೆಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ಮಾಡಿದರು.

ಈ ಯೋಜನೆ ವ್ಯಾಪ್ತಿಯ ಉಳಿದ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಇಂಜಿನೀಯರ್ ಗಳಾದ ಸಿದ್ದರಾಜು, ಸಂದರ್ಸ್,ಶಿವಕುಮಾರ್ , ಮುಖಂಡರಾದ ನಟೇಶ್ , ಜಯರಾಮ್ ,ಕೇಶವ , ಯೋಗೇಶ್ , ಶ್ರೀನಿವಾಸ್ ಇದ್ದರು.

News5 - Ravi Dummi

22/07/2025

Heart Check : ಅರಕಲಗೂಡಿನಲ್ಲಿ ಜು.23ರಂದು ಹೃದಯಕ್ಕಾಗಿ ನಡಿಗೆ ಜಾಥಾ | ಉಚಿತ ಹೃದಯತಪಾಸಣಾ ಆರೋಗ್ಯ ಮೇಳ | News5Kannada

ಅರಕಲಗೂಡು : ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹೃದಯಕ್ಕಾಗಿ ನಡಿಗೆ ಜಾಥಾ ಕಾರ್ಯಕ್ರಮವನ್ನು ಜು.23ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು,ಇಲಾಖೆ ಅಧಿಕಾರಿಗಳು,ಸಿಬ್ಬಂದಿ,ಸಂಘ ಸಂಸ್ಥೆಗಳ ಮುಖಂಡರು,ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಎ.ಮಂಜು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಅವರು ಮಾತನಾಡಿ,ಅಂದು ಬೆಳಗ್ಗೆ 7-30ಕ್ಕೆ ಹೃದಯಕ್ಕಾಗಿ ನಡೆಗೆ ಕಾರ್ಯಕ್ರಮ ಶಾಸಕರಾದ ಎ.ಮಂಜು ಅವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳಲಿದೆ.ಜಾಥದಲ್ಲಿ ಭಾಗವಹಿಸುವ ಎಲ್ಲರೂ ಕೂಡ ಕಡ್ಡಾಯವಾಗಿ ಕೆಂಪು ಬಣ್ಣದ ಉಡುಗೆಗಳನ್ನು ತೊಟ್ಟು ಭಾಗವಹಿಸಬೇಕೆಂದು ನಿರ್ಧರಿಸಲಾಗಿದೆ.
ಜಾಥ ಬಳಿಕ ಓಲ್ವೋ ಕಂಪನಿ,ನಾರಾಯಣ ಹೆಲ್ತಕೇರ್ ವತಿಯಿಂದ ಉಚಿತ ಹೃದಯತಪಾಸಣೆ ನಡೆಯಲಿದೆ.ಇಸಿಜಿ,ಎಕೋ,ಹೆಣ್ಣುಮಕ್ಕಳಿಗೆ ಸ್ತನಪರೀಕ್ಷೆ ಮತ್ತು ಗರ್ಭಕೊರಳಿನ ಪರೀಕ್ಷೆ ಕೂಡ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು,ಹೆಣ್ಣುಮಕ್ಕಳು ಭಾಗವಹಿಸಿ ಪ್ರಯೋಜನಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ತಹಸೀಲ್ದಾರ್ ಸೌಮ್ಯ,ಪಿಎಸ್‌ಐ ಕಾವ್ಯ,ಪಪಂ ಮುಖ್ಯಾಧಿಕಾರಿ,ಸರ್ವೇ ಇಲಾಖೆ ಅಧಿಕಾರಿ,ಮುಖಂಡರು ಉಪಸ್ಥಿತರಿದ್ದರು.

22/07/2025

A Manju | ಕಟ್ಟೇಪುರ ಡ್ಯಾಂ ಭರ್ತಿ- ಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿದ ಶಾಸಕ ಎ.ಮಂಜು | ನಾಲೆಗಳಿಗೂ ನೀರು ಬಿಡುಗಡೆ | News5Kannada

ಅರಕಲಗೂಡು : - ತಾಲೂಕಿನ ಕಟ್ಟೇಪುರ ಬಳಿ ಪಶ್ಚಿಮಕ್ಕೆ ಅಭಿಮುಖವಾಗಿ ಹರಿಯುವ ಕಾವೇರಿ ನದಿಗೆ ಅಂದಿನ ಮೈಸೂರು ರಾಜರು ಮೊದಲ ಅಣೆಕಟ್ಟೆ ನಿರ್ಮಿಸಿದ ಪರಿಣಾಮ ಮೊದಲ ಬಾರಿಗೆ ಅರಕಲಗೂಡು,ಪಿರಿಯಾಪಟ್ಟಣ ಮತ್ತು ಕೆಆರ್‌ನಗರ ತಾಲೂಕಿನ ಸಾವಿರಾರು ಎಕರೆ ಕೃಷಿ ಪ್ರದೇಶದಲ್ಲಿ ಖಾರಿಫ್ ಬೆಳೆಯನ್ನು ರೈತರು ಕೈಗೊಳ್ಳಲು ಸಹಾಯವಾಯಿತು ಎಂದು ಶಾಸಕ ಎ.ಮಂಜು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ,ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಮೂರ್ತಿ, ಸಹಾಯಕ ಎಂಜಿನಿಯರ್ ವೆಂಕಟೇಶ್,ಮುಖಂಡರಾದ ಚೌಡೇಗೌಡ,ಕಂಬೇಗೌಡ ಇತರರು ಹಾಜರಿದ್ದರು.

#ಕಟ್ಟೇಪುರ_ಡ್ಯಾಂ

21/07/2025

Siddaramaiah | ಸಿದ್ದರಾಮಯ್ಯ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿನಾ..? ಕಾಂಗ್ರೆಸ್‌ಗೆ ಮುಖ್ಯಮಂತ್ರಿಯ | A Manju -ಶಾಸಕ ಎ.ಮಂಜು ಪ್ರಶ್ನೆ -ಅನುದಾನ ತಾರತಮ್ಯ ವಿರುದ್ಧ ಆಕ್ಷೇಪ | News5Kannada

ಅರಕಲಗೂಡು : ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ 224ವಿಧಾನ ಸಭಾ ಕ್ಷೇತ್ರಕ್ಕೂ ಸಮಾನವಾದ ಅನುದಾನ ನೀಡುವುದು ರಾಜ್ಯದ ಮುಖ್ಯಮಂತ್ರಿಯವರ ಶಾಸನಬದ್ಧ ಅಧಿಕಾರವಾಗಿದೆ.ಆದರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಶಾಸಕರಿಗೆ 50ಕೋಟಿರೂ ಮತ್ತು ಬಿಜೆಪಿ,ಜೆಡಿಎಸ್ ಇತರೆ ಪಕ್ಷದ ಶಾಸಕರಿಗೆ 25ಕೋಟಿ ಅನುದಾನ ಪ್ರಕಟಿಸಿ ತಾರತಮ್ಯ ಎಸಗಿರುವುದು ಸರಿಯಲ್ಲ ಎಂದು ಶಾಸಕ ಎ.ಮಂಜು ಆಕ್ಷೇಪ ವ್ಯಕ್ತಪಡಿಸಿದರು.

ಸೋಮವಾರ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಮುಖ್ಯಮಂತ್ರಿನಾ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿನಾ ಎಂಬುದನ್ನು ಮೊದಲು ಹೇಳಬೇಕು.ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಎಂದಾದರೇ ನಾವು ಅವರನ್ನು ಪ್ರಶ್ನಿಸುವುದಿಲ್ಲ.ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರು ಅಷ್ಟೇ.ಅಭಿವೃದ್ಧಿ ಎಂಬುದು ಇಡೀ ರಾಜ್ಯಕ್ಕೆ ಸಮಾನಾಗಿರಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.

ಕಾAಗ್ರೆಸ್ ಶಾಸಕರಿಗೆ ನೀಡಿರುವಂತೆಯೇ ನಮಗೂ ಅಷ್ಟೇ ಅನುದಾನ ಕೊಡಬೇಕಿದೆ.ನಮಗೆ ನೀಡಿರುವ 25ಕೋಟಿಯಲ್ಲಿ ಶೇ.50ರಷ್ಟು ಲೋಕೋಪಯೋಗಿ ಇಲಾಖೆಗೆ ಮತ್ತು 15ಕೋಟಿರೂ ಜಿಪಂ ಇತರೆ ಇಲಾಖೆಗೆ ಮೀಸಲಾಗಿದೆ.ಉಳಿದದ್ದು ಕೇವಲ 10ಕೋಟಿಯಾಗಿದೆ.ಇದರಿಂದ ಇಡೀ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ.ಎರಡು ವರ್ಷಗಳ ಬಳಿಕ ಶಾಸಕರಿಗೆ ಅನುದಾನ ನೀಡಿರುವುದನ್ನು ಸ್ವಾಗತಿಸುತ್ತೇನೆ.ಆದರೇ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

21/07/2025



Accident News | ಕಾರು ಅಪಘಾತ: ಓರ್ವ ಸಾವು , ನಾಲ್ವರಿಗೆ ಗಂಭೀರ ಗಾಯ | News5Kannada

ಅರಕಲಗೂಡಿನಿಂದ ಮೈಸೂರು ಹೋಗುವ ದಾರಿ ಮಧ್ಯೆ ರಾಮನಾಥಪುರದ ಹಿರೇಹಳ್ಳಿ ಗೇಟ್ ಬಳಿ ಕಾರು ಅಪಘಾತ

ಚಾಲಕನ ನಿಯಂತ್ರಣ ತಪ್ಪಿ ತೆಂಗಿನ‌ಮರಕ್ಕೆ ಗುದ್ದಿದ ಕಾರು

ಧರೆಗೆ ಉರುಳಿದ ತೆಂಗನ ಮರ

ಚಾಲಕ ಭೈರ (35) ಎಂಬುವರು ಸ್ಥಳದಲ್ಲೇ ಸಾವು

ಸಂಪೂರ್ಣ ನುಜ್ಜುಗುಜ್ಜಾದ ಕಾರು

ಐದು ಜನ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಮೂವರಿಗೆ ಗಂಭೀರ ಗಾಯ

ಉಳಿದ ಮೂವರು ಗಾಯಾಳುಗಳು ಕೊಣನೂರು ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗೆ ದಾಖಲು

ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಟೆದ ಘಟನೆ

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಅರಕಲಗೂಡು ತಾಲೂಕು ರಾಮನಾಥಪುರ ಬಳಿಯ ಹಿರೇಹಳ್ಳಿ ಗೇಟ್ ಬಳಿ ಇಂದು ಸಂಭವಿಸಿದ ವಾಹನ ಅಪಘಾತದಲ್ಲಿ ಓರ್ವ ಮೃತ ಪಟ್ಟಿರುವ ಘಟನೆ ನಡೆದಿದೆ.

ಅರಕಲಗೂಡು ಕಡೆಯಿಂದ ರಾಮನಾಥಪುರದ ಕಡೆಗೆ ಅತೀ ವೇಗವಾಗಿ ಬರುತಿದ್ದ ಕಾರ್ ರಸ್ತೆಯ ಬದಿಯ ಕೃಷಿ ಜಮೀನಿನಲ್ಲಿನ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.

ಕಾರಿನಲ್ಲಿ 5ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಈ ಪೈಕಿ ಬೈರ ಎಂಬುವ ವ್ಯಕ್ತಿ ಸ್ಥಳದಲ್ಲಿ ಸಾವನಪ್ಪಿದ್ದು ಇತರೆ ನಾಲ್ವರ ಸ್ಥಿತಿ ಗಂಭೀರವಾಗಿ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

21/07/2025

ಕನ್ನಡ ಸಾಹಿತ್ಯಕ್ಕೆ ಅನಕೃ ಕೊಡುಗೆ ಅಪಾರ - ಡಾ. ಹಂ.ಪ ನಾಗರಾಜಯ್ಯ News5Kannada

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಹಂಪನಾಗರಾಜಯ್ಯ ಅಭಿಮತ

ಅರಕಲಗೂಡು : ಕನ್ನಡ ಕಾದಂಬರಿ ಸಾರ್ವಭೌಮ ಅನಕೃಷ್ಣರಾಯರು ಕರುನಾಡಿಗೆ ಸಿಂಹ ಘರ್ಜನೆಯಂತೆ ಕನ್ನಡ ಭಾಷೆ ಮತ್ತು ಸಾಹಿತ್ಯ ಸಾಂಸ್ಕೃ ತಿಕ ಲೋಕಕ್ಕೆ ದೊಡ್ಡಸಂದೇಶವನ್ನು ಕೊಡುಗೆಯಾಗಿ ನೀಡಿದ ಹಿನ್ನೆಲೆ ಪ್ರಸ್ತುತ ಕನ್ನಡ ಸಾಹಿತ್ಯಲೋಕ ಅತ್ಯಂತ ಉತ್ತುಂಗದಲ್ಲಿದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಹಂ. ಪ ನಾಗರಾಜಯ್ಯ ತಿಳಿಸಿದರು.

ಭಾನುವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಡಾ.ಆ‌ರ್.ಕೆ.ಪದ್ಮನಾಭಅಭಿಮಾನಿಗಳ ಬಳಗ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿ ದ್ದ ಕಾರ್ಯಕ್ರಮದಲ್ಲಿ 2025ರ ಅನಕೃ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾ ನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಅವರು ಅನಕೃ, ಆ‌ರ್. ಕೆ.ಪದ್ಮನಾಭ ಮತ್ತು ಹಂಪನಾ ಕುರಿತು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶಗೌಡ, ತಹಶೀಲ್ದಾರ್ ಸೌಮ್ಯ, ಪೊಲೀಸ್ ಅಧಿಕಾರಿ ಕಾವ್ಯ, ತಹಶೀಲ್ದಾರ್ ಸ್ವಾಮಣ್ಣವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನಕೃ ಕುರಿತ ಪ್ರಬಂಧ ಸ್ಪರ್ಧೆ ಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು.ವಾಸವಿ ಭಜನಾ ಮಂಡಳಿಯವರು ಪ್ರಾರ್ಥನೆ ಮಾಡಿದರೆ, ಲಹರಿ ಕಲಾ ತಂಡದವರು ನಾಡಗೀತೆ ಹಾಡಿದರು. ಪ್ರವೀಣ್ ಸ್ವಾಗತಿಸಿ, ಗುರುಪ್ರಸಾದ್ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನಾ ಹಂಪನಾ, ಆರ್.ಕೆ.ಪದ್ಮನಾಭ ಅವ ರನ್ನು ಬೆಳ್ಳಿ ಸಾರೋಟಿನಲ್ಲಿ ಕೂರಿಸಿ ಕುಂಭಕಳಸಗಳು, ವಿವಿಧ ಕಲಾತಂಡ ಗಳು, ವಾದ್ಯಗಳಿಂದ ಮೆರವಣಿಗೆ ಮಾಡಿ ವೇದಿಕೆಗೆ ಕರೆತರಲಾಯಿತು.


#ಡಾ_ಹಂಪನಾಗರಾಜಯ್ಯ

Address


Alerts

Be the first to know and let us send you an email when News5Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News5Kannada:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share