Best News Kannada

Best News Kannada ವಿಶ್ವಾಸಾರ್ಹ ಮಾದ್ಯಮ
Believable Link Of Meadia
bestnewskannada https://youtube.com/c/BestNewsKannada

📍ಬೆಳಗಾವಿ | ಸಮಾಜ ಸೇವೆಗೆ ಮುಂದಾದ ವ್ಯಕ್ತಿಯನ್ನು ಹತ್ತಿಕ್ಕಲು ನಡೀತಾ ಪಿತೂರಿ..? || ಸ್ವಯಂ ಪ್ರೇರಿತ ಅಧಿಕಾರಿಗಳ ಮಟ್ಟದಲ್ಲಿ ದೂರು ದಾಖಲಿಸಿ ...
16/05/2026

📍ಬೆಳಗಾವಿ | ಸಮಾಜ ಸೇವೆಗೆ ಮುಂದಾದ ವ್ಯಕ್ತಿಯನ್ನು ಹತ್ತಿಕ್ಕಲು ನಡೀತಾ ಪಿತೂರಿ..?
|| ಸ್ವಯಂ ಪ್ರೇರಿತ ಅಧಿಕಾರಿಗಳ ಮಟ್ಟದಲ್ಲಿ ದೂರು ದಾಖಲಿಸಿ ವಂಚನೆ ಎಂಬ ಸುಳ್ಳು ಆರೋಪ ||

ಶಿವಾನಂದ ನೀಲಣ್ಣವರ ಇತ್ತೀಚೆಗೆ ಬೆಳಗಾವಿ ಜಿಲ್ಲೆಯಲ್ಲಿ ಹೆಸರು ವಾಸಿಯಾದ ವ್ಯಕ್ತಿ. ಶಿವಂ ಅಸೋಸಿಯೇಟ್ಸ್ ಸಂಸ್ಥೆ ನಿರ್ಮಿಸಿ ಹಲವು ವರ್ಷಗಳಿಂದ ಸಾಮಾಜಿಕ, ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿ ತನ್ನದೇಯಾದ ಮನ್ನಣೆ ಗಳಿಸಿದ ವ್ಯಕ್ತಿ. ಬಡವರಿಗೆ, ದೀನದಲಿತರಿಗೆ, ನಿರ್ಗತಿಗರಿಗೆ, ಸಹಾಯ ಮಾಡುತ್ತಾ ರೈತರು ಸೇರಿದಂತೆ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಗಳಿಗೆ ಸನ್ಮಾನ ಮಾಡುತ್ತ ಪ್ರೋತ್ಸಾಹಿಸುವ ವ್ಯಕ್ತಿ. ಯಾವುದೇ ರಾಜಕೀಯ ಆಸಕ್ತಿ ಹೊಂದದೆ ಬಡಜನರ ಸೇವೆಗೆ ಮುಂದಾದ ವ್ಯಕ್ತಿಯ ವಿರುದ್ಧ ಪಿತೂರಿ ನಡೀತಾ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಇದೇ ಮೇ 17ರಂದು “ಸ್ವಚ್ಚ ಬೆಳಗಾವಿ ಸಂಭ್ರಮ” ಹೆಸರಿನಲ್ಲಿ 25 ಸಾವಿರ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದ ಹಿನ್ನೆಲೆ ಜಿಲ್ಲಾಡಳಿತ ಈಗಾಗಲೇ ಅನುಮತಿ ನಿರಾಕರಿಸಿ ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪಾಲಿಕೆಯ ಅನುಮತಿ ಪಡೆಯದೇ ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ. ಎಲ್ಲಿ ಶಿವಾನಂದ ನೀಲಣ್ಣವರ ರಾಜಕೀಯಕ್ಕೆ ಪ್ರವೇಶ ಮಾಡ್ತಾರ ಎಂಬ ಭಯ ಶುರುವಾಯ್ತ ಎಂಬ ಅನುಮಾನಗಳು ಮೂಡಿವೆ. ಪಿತೂರಿ ಹಿಂದೆ ಯಾವೆಲ್ಲ ಕಾಣದ ಕೈಗಳ ಕೈವಾಡವಿದೆ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ....!

ಹೇಗಿದೆ ಸಿನಿಮಾ ಕಾಮೆಂಟ್ ಮಾಡಿ
30/04/2026

ಹೇಗಿದೆ ಸಿನಿಮಾ ಕಾಮೆಂಟ್ ಮಾಡಿ

ಪೊಲೀಸ್ ಪೇದೆ ಮದುವೆಗೆ ಮುಧೋಳಕ್ಕೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್...!ಬೆಳಗಾವಿ : ಸದಾಕಾಲವೂ ತಮ್ಮ ಬೆನ್ನೆಲುಬಾಗಿ ನಿಂತು‌ ಭದ್ರತೆ ಒದಗಿಸುವ ಸಿ...
28/04/2026

ಪೊಲೀಸ್ ಪೇದೆ ಮದುವೆಗೆ ಮುಧೋಳಕ್ಕೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್...!

ಬೆಳಗಾವಿ : ಸದಾಕಾಲವೂ ತಮ್ಮ ಬೆನ್ನೆಲುಬಾಗಿ ನಿಂತು‌ ಭದ್ರತೆ ಒದಗಿಸುವ ಸಿಬ್ಬಂದಿ ಮದುವೆಗೆ ರಾಜ್ಯಪಾಲರು ಓಡೋಡಿ ಬಂದು ಆಶಿರ್ವದಿಸಿದ ಅಪರೂಪದ ಘಟನೆ ನಡೆದಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭದ್ರತಾ ಸಿಬ್ಬಂದಿ ಪೊಲೀಸ್ ಕಾನ್ಸ್ಟೇಬಲ್ ಪರಮಾನಂದ ‌ಮಂಟೂರ್ ಮದುವೆ ಕಾರ್ಯಕ್ರಮಕ್ಕೆ ಸ್ವತಃ ರಾಜ್ಯಪಾಲರೇ ಆಗಮಿಸಿ ಶುಭಾಶಯ ತಿಳಿಸಿದ ಅಪರೂಪದ ‌ಘಟನೆ ಕಳೆದ ಶನಿವಾರ ನಡೆದಿದೆ.

ಮುಧೋಳ ‌ಪಟ್ಟಣದಲ್ಲಿ ನಡೆದ ಪರಮಾನಂದ ಮಂಟೂರ್ ಅವರ ಮದುವೆ ಸಮಾರಂಭಕ್ಕೆ ಬೆಂಗಳೂನಿಂದ ಬೆಳಗಾವಿಗೆ ವಿಮಾನ ಮೂಲಕ‌ ಆಗಮಿಸಿ‌ ಶುಭಾಶಯ ತಿಳಿಸಿದ್ದಾರೆ.‌

ಸಧ್ಯ ರಾಜ್ಯಪಾಲರ‌ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಭದ್ರತೆಗೆ ನೇಮಿಸಿರುವ ಕೆಳ ಹಂತದ ಸಿಬ್ಬಂದಿಗೂ ಅವರು ನೀಡುವ ಗೌರವ ಇತರರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ಜಯಮೃತುಂಜಯ ಸ್ವಾಮೀಜಿಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆಯಾ? ಅಥವಾ ಶ್ರೀಗಳದ್ದು ತಪ್ಪಿದೆಯಾ ಕಾಮೆಂಟ್ ಮಾಡಿ.!
07/04/2026

ಜಯಮೃತುಂಜಯ
ಸ್ವಾಮೀಜಿಗಳ ವಿರುದ್ಧ
ಷಡ್ಯಂತ್ರ ನಡೆಯುತ್ತಿದೆಯಾ?
ಅಥವಾ ಶ್ರೀಗಳದ್ದು ತಪ್ಪಿದೆಯಾ
ಕಾಮೆಂಟ್ ಮಾಡಿ.!

ಬೆಳಗಾವಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಬಯಲು: ಫ್ಯಾಶನ್ ಡಿಸೈನರ್ ದೀಪಾ ಅವಟಗಿ ಬಂಧನ #ಬೆಳಗಾವಿ: ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ವ್ಯಕ್ತಿಗಳನ್...
10/03/2026

ಬೆಳಗಾವಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಬಯಲು: ಫ್ಯಾಶನ್ ಡಿಸೈನರ್ ದೀಪಾ ಅವಟಗಿ ಬಂಧನ

#ಬೆಳಗಾವಿ:
ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದ ಫ್ಯಾಶನ್ ಡಿಸೈನರ್ ದೀಪಾ ಅವಟಗಿ (33) ಯನ್ನು ಟಿಳಕವಾಡಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ಈಕೆ, ಹುಕ್ಕೇರಿ ತಾಲೂಕಿನ ಶಿವಾನಂದ್ ಮಠಪತಿ ಎಂಬಾತನ ಸಹಾಯದಿಂದ ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದಳು.

ದೀಪಾ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಶ್ರೀಮಂತರೊಂದಿಗೆ ಪರಿಚಯ ಮಾಡಿಕೊಂಡು, ನಂತರ ಆಪ್ತವಾಗಿ ಮಾತನಾಡಿ ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು. ವ್ಯಕ್ತಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಅವರ ಮೊಬೈಲ್, ಹಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದಳು. ಬಳಿಕ ಹಣ ಕೊಡದಿದ್ದರೆ ಅಸಭ್ಯವಾಗಿ ವರ್ತಿಸಿದ್ದಾರೆಂದು ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರೆಂದು ತಿಳಿದುಬಂದಿದೆ.

ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಬೆಳಗಾವಿಯ ಹೋಟೆಲ್‌ನಲ್ಲಿ ದೀಪಾಳನ್ನು ಬಂಧಿಸಿದ್ದಾರೆ. ಆರೋಪಿಯಿಂದ ಒಂದು ಫಾರ್ಚುನ್ ಕಾರು, ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್, ಒಂದು ಟ್ಯಾಬ್, ಡೊಂಗಲ್, ಮೂರು ಕಾರ್ ಕೀ ಹಾಗೂ ₹14 ಸಾವಿರ ನಗದು ಸೇರಿ ಒಟ್ಟು ₹32.86 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್ ಪರಶುರಾಮ್ ಪೂಜೇರಿ ನೇತೃತ್ವದಲ್ಲಿ ನಡೆಸಲಾಗಿದ್ದು, ಪರಾರಿಯಾಗಿರುವ ಸಹಆರೋಪಿ ಶಿವಾನಂದ್ ಮಠಪತಿ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಗೋಕಾಕ:ಕಾರಿನಲ್ಲಿ ರಿವಾಲ್ವರ್ ಇಟ್ಟುಕೊಂಡು ಓಡಾಡ್ತಿದ್ದವನು ಲಾಕ್ಬೆಳಗಾವಿ ಜಿಲ್ಲೆ ಗೋಕಾಕ್ ನಗರತ ಕೋರ್ಟ್ ಸರ್ಕಲ್ ನಲ್ಲಿ ಪತ್ತೆ.ಅನುಮಾನಾಸ್ಪದ ...
17/02/2026

ಗೋಕಾಕ:ಕಾರಿನಲ್ಲಿ ರಿವಾಲ್ವರ್ ಇಟ್ಟುಕೊಂಡು ಓಡಾಡ್ತಿದ್ದವನು ಲಾಕ್

ಬೆಳಗಾವಿ ಜಿಲ್ಲೆ ಗೋಕಾಕ್ ನಗರತ ಕೋರ್ಟ್ ಸರ್ಕಲ್ ನಲ್ಲಿ ಪತ್ತೆ.
ಅನುಮಾನಾಸ್ಪದ ಕಾರನ್ನ ತಡೆದು ಗೋಕಾಕ್ ಪೊಲೀಸರಿಂದ ಪರಿಶೀಲನೆ.
ಆಗ ಲೈಸನ್ಸ್ ರಿವಾಲ್ವಾರ್ ಕಾರ್ ಡ್ಯಾಶ್ ಬೋರ್ಡ್ ನಲ್ಲಿ ಪತ್ತೆ.
ಕಾರ್ ಚಾಲಕ ಬಾಗಲಕೋಟೆ ಜಿಲ್ಲೆ ನಿವಾಸಿ ರಮೇಶ ಕೇಸರಗೊಪ್ಪ ಚೌವಾಣ 52 ಅರೇಸ್ಟ್.
ರಿವಾಲ್ವಾರ್ ಲೈಸನ್ಸ್ ಬಾಗಲಕೋಟೆ ಜಿಲ್ಲೆಗೆ ಮಾತ್ರ ಸಿಮೀತ.
ರಿವಾಲ್ವಾರ್ ನವೀಕರಣ ಮುಗಿದಿದ್ದರೂ ಪೊಲೀಸ್ ಠಾಣೆ ಜಮಾ ಮಾಡಿಲ್ಲ.
ಹೀಗಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲು.
ಬೆಳಗಾವಿ ಜಿಲ್ಲೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.

 #ಹಾಸನ ಕುಟುಂಬದವರ ಆತಂಕ ಗಂಡನ ಅಳಲು ನೋಡಿದರೆ ಎಂತಹವರಿಗು ಮರುಕ ಬಾರದಿರದು.ಈಕೆ ಮಾಡಿದ  #ಪ್ಲಾನ್ ಪೊಲೀಸರಿಗೂ ಒತ್ತಡ ತಂದು ಸುಕದ ತುತ್ತತುದಿಯನ...
16/02/2026

#ಹಾಸನ ಕುಟುಂಬದವರ ಆತಂಕ ಗಂಡನ ಅಳಲು ನೋಡಿದರೆ ಎಂತಹವರಿಗು ಮರುಕ ಬಾರದಿರದು.
ಈಕೆ ಮಾಡಿದ #ಪ್ಲಾನ್ ಪೊಲೀಸರಿಗೂ ಒತ್ತಡ ತಂದು ಸುಕದ ತುತ್ತತುದಿಯನ್ನು ಮುಟ್ಟಲೊರಟ ಮಾಯಾಂಗಿನಿ ಕೊನೆಗೂ #ಪ್ರಿಯಾಂಕಾ ಬದುಕುಳಿದಿದ್ದಾಳೆ ಹಳೆ ಬಟ್ಟೆ ಹೊಗೆದು ಪ್ಯಾಂಟ್ ಟೀ ಶರ್ಟ್ ತೊಟ್ಟು ಪ್ರೇಮಿಗಳ ದಿನದಂದು #ಬೆಚ್ಚಗಿನ ಅಪ್ಪುಗೆ ಪಡೆಯಲು ಪ್ರೀಯಕರ #ಡೇವಿಡ್ ನೊಟ್ಟಿಗೆ ಎಲ್ಲೂ ದೂರ ಹೊಗದೆ #ಕುಣಿಗಲ್ ಗೆ ಬಂದು ಸುರಕ್ಷಿತಳಾಗಿದ್ದಾಳೆ.
* #ಹೈಡ್ರಾಮ ಕ್ರಿಯೇಟ್ ಮಾಡಿ ಕುಣಿಗಲ್‌ನಲ್ಲಿ ಗೆಳೆಯ ಡೇವಿಡ್ ಜೊತೆ ಆತನ ಮನೆಯಲ್ಲಿ ನೆನ್ನೆ ರಾತ್ರಿ 11 ಘಂಟೆಗೆ ಸಿಕ್ಕಿಬಿದ್ದ ಖತರ್ನಾಕ್ ಕಿಲಾಡಿ ಪ್ರಿಯಾಂಕ. ಇಬ್ಬರನ್ನು ವಶಕ್ಕೆ ಪಡೆದ #ಪೊಲೀಸರು*

30/01/2026

LandLord ಚಲನಚಿತ್ರದ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿದ ಮಠಾಧೀಶರು.

ಹೆಮ್ಮೆಗೆ ಪಾತ್ರರಾದ ಕರ್ನಾಟಕದ ಪೊಲೀಸ್ ಅಧಿಕಾರಿಗಳು.2026ರ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕೆಳಕಂಡ ಪೊಲೀಸ್ ಅಧಿಕಾರ...
25/01/2026

ಹೆಮ್ಮೆಗೆ ಪಾತ್ರರಾದ ಕರ್ನಾಟಕದ ಪೊಲೀಸ್ ಅಧಿಕಾರಿಗಳು.

2026ರ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕೆಳಕಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾನ್ಯ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುತ್ತಾರೆ.

Address

Jnanbharati
Bangalore
560056

Telephone

+917090897101

Website

Alerts

Be the first to know and let us send you an email when Best News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Best News Kannada:

Share