VartaGuru

VartaGuru ವಿಶ್ವಗುರು ಅಲ್ಲ ವಿಶ್ವಮಾನವ
☎ 7760194015

06/06/2026

#ದೊಡ್ಡಬಳ್ಳಾಪುರ

ಎಲ್ಲೆಂದರಲ್ಲಿ ಕಸ ಎಸೆಯುವರಿಗೆ ಶಾಸಕರ ಎಚ್ಚರಿಕೆ.

ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಜನರಿಗೆ ನಮ್ಮೂರು ನಮ್ ಏರಿಯಾ ಎಂಬ ಅಭಿಮಾನ ಇಲ್ಲ, ಕಸವನ್ನ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ, ಅಂತವರ ಮೇಲೆ ನಿಗಾ ಇಡಲು ಕ್ರಮ ತೆಗೆದುಕೊಳ್ಳಲಾಗಿದೆ.

5 ದಿನ ಕಸದ ಗಾಡಿಗೆ ಕಸ ಹಾಕದಿದ್ದಾರೆ 6ನೇ ದಿನ ಆ ಮನೆಗೆ 1 ಸಾವಿರ ದಂಡ, ನೂತನ ತಂತ್ರಜ್ಞಾನದ ಮೂಲಕ ಕಸ ಹಾಕದವರ ಪತ್ತೆ, ಕಸದ ಗಾಡಿ ಬಂದರು ಕಸ ಹಾಕದಿದ್ದಾರೆ ಅದು ಅವರ ತಪ್ಪು.
-ಧೀರಜ್ ಮುನಿರಾಜು, ಶಾಸಕ

06/06/2026

#ದೊಡ್ಡಬಳ್ಳಾಪುರ
ಡಿ.ಕೆ.ಸಾಹೇಬ್ರು ಪಕ್ಷದ ಒಬ್ಬ ಕಾರ್ಯಕರ್ತನಾಗಿ ಮುಖ್ಯಮಂತ್ರಿಯಾಗಿರುವುದು ಆದರ್ಶವಾಗಿದೆ.
-ಧೀರಜ್ ಮುನಿರಾಜು.

06/06/2026

#ದೊಡ್ಡಬಳ್ಳಾಪುರ
ನರೇಂದ್ರ ಮೋದಿಯವರ ಶಕ್ತಿ ಕುಂದಿಸುವ, ದೇಶದ ಆರ್ಥಿಕತೆ ದುರ್ಬಲಗೊಳಿಸುವ ಒಳ ಸಂಚು CJP ಹೋರಾಟ

 #ಮಧ್ಯಪ್ರದೇಶಗಂಡನ ಕೊಂದು ಶವದ ಜೊತೆ 8 ಗಂಟೆ ಕೂತ ಹೆಂಡತಿ,ದೇವಸ್ಥಾನಕ್ಕೆ ಬಂದು ದೇವರಿಗೆ ಕ್ಷಮಾಪಣೆ ಕೋರಿದಳು,ಪೊಲೀಸ್ ಠಾಣೆಗೆ ಬಂದು ಶರಣಾದಳು ...
06/06/2026

#ಮಧ್ಯಪ್ರದೇಶ
ಗಂಡನ ಕೊಂದು ಶವದ ಜೊತೆ 8 ಗಂಟೆ ಕೂತ ಹೆಂಡತಿ,
ದೇವಸ್ಥಾನಕ್ಕೆ ಬಂದು ದೇವರಿಗೆ ಕ್ಷಮಾಪಣೆ ಕೋರಿದಳು,
ಪೊಲೀಸ್ ಠಾಣೆಗೆ ಬಂದು ಶರಣಾದಳು

ಮಧ್ಯಪ್ರದೇಶ : ಕೌಟುಂಬಿಕ ಕಲಹದಿಂದ ದೊಣ್ಣೆಯಿಂದ ಹಲ್ಲೆ ಮಾಡಿ ಗಂಡನನ್ನ ಕೊಂದ ಹೆಂಡತಿ, ಗಂಡನ ಶವದ ಜೊತೆ 8 ತಾಸು ಕುಳಿತ್ತಿದ್ದಾಳೆ, ಅನಂತರ ದೇವಸ್ಥಾನಕ್ಕೆ ತೆರಳಿದ ಆಕೆ ದೇವರಲ್ಲಿ ಕ್ಷಮಾಪಣೆ ಕೋರಿದ್ದಾಳೆ, ಅಲ್ಲಿಂದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.

ಮಧ್ಯಪ್ರದೇಶದ ಛತ್ತರ್ ಪುರ ಪಟ್ಟಣದಲ್ಲಿ ಜೂನ್ 1 ರಂದು ಘಟನೆ ನಡೆದಿದೆ, 27 ವರ್ಷದ ನೀಲಂ ಕುಶ್ವಹಾ ತನ್ನ ಗಂಡ ದಿನದಯಾಳ್ ಕುಶ್ವಹಾ ನನ್ನ ಕೊಂದು, ಅನಂತ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಬಂದು ಗಂಡನನ್ನು ಕೊಂದಿರುವುದ್ದಾಗಿ ಹೇಳಿ ಶರಣಾಗಿದ್ದಾಳೆ.

ಆರೋಪಿ ನೀಲಂ ನಾಲ್ಕು ವರ್ಷದ ಹಿಂದೆ ದಿನದಯಾಳ್ ಕುಶ್ವಾಹನನ್ನ ಮದುವೆಯಾಗಿದ್ದಳು, ಇವರ ದಾಪಂತ್ಯಕ್ಕೆ ಒಬ್ಬ ಮಗನಿದ್ದಾನೆ. ಕೌಟುಂಬಿಕ ಕಲಹದಿಂದ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಳು ನೀಲಂ. ಹೆಂಡತಿಯನ್ನ ಮನೆಗೆ ಕರೆದುಕೊಂಡು ಬರಲು ಗಂಡ ಬಂದಿದ್ದ ವೇಳೆ ಕೊಲೆ ಕೃತ್ಯ ಸಂಭವಿಸಿದೆ.

ಜೂನ್ 1 ರಂದು ದಿನದಯಾಳ್ ಹೆಂಡತಿ ನೀಲಂ ಮನೆಗೆ ಬಂದಿದ್ದಾನೆ, ಈ ವೇಳೆ ಅತ್ತೆ ಮನೆಯಲ್ಲಿ ಇರಲಿಲ್ಲ, ಗಂಡನನ್ನ ನೋಡಿದ ಹೆಂಡತಿ ಮನೆಯ ಬಾಗಿಲು ಹಾಕಿಕೊಂಡಿದ್ದಾಳೆ, ಇದರಿಂದ ಕೋಪಗೊಂಡ ಆತ ತನ್ನ ಮಗನನ್ನ ತಲೆಕೆಳಗೆ ಮಾಡಿ ಕೈಯಲ್ಲಿ ಹಿಡಿದುಕೊಂಡಿದ್ದಾನೆ, ತನ್ನ ಮಗನನ್ನು ಕೊಂದು ಬಿಡ್ತಾನೆ ಎಂಬ ಭಯದಲ್ಲಿ ಆಕೆ ಮನೆಯಲ್ಲಿಂದ ದೊಣ್ಣೆಯಿಂದ ಗಂಡನ ಮೇಲೆ ಹಲ್ಲೆ ಮಾಡಿದ್ದಾಳೆ, ದೊಣ್ಣೆಯ ಹಲ್ಲೆಗೆ ಆತ ಅಲ್ಲಿಯೇ ಕುಸಿದು ಪ್ರಾಣ ಬಿಟ್ಟಿದ್ದಾನೆ.

 #ದೆಹಲಿಹೊಟೇಲ್ ಬೆಂಕಿ ದುರಂತದಲ್ಲಿ  9 ಜನರ ಜೀವ ಉಳಿಸಿದ ದೆಹಲಿ ಹೀರೋಗಳು,9 ಪ್ರಾಣ ಉಳಿಸಿದ 22 ಹಾಸಿಗೆಗಳು, ಹಾಸಿಗೆ ಅಂಗಡಿಯ ಅಪ್ಪ-ಮಗ ದೆಹಲಿ ...
06/06/2026

#ದೆಹಲಿ
ಹೊಟೇಲ್ ಬೆಂಕಿ ದುರಂತದಲ್ಲಿ 9 ಜನರ ಜೀವ ಉಳಿಸಿದ ದೆಹಲಿ ಹೀರೋಗಳು,
9 ಪ್ರಾಣ ಉಳಿಸಿದ 22 ಹಾಸಿಗೆಗಳು, ಹಾಸಿಗೆ ಅಂಗಡಿಯ ಅಪ್ಪ-ಮಗ

ದೆಹಲಿ : ದಕ್ಷಿಣ ದೆಹಲಿಯ ಮಾಳವೀಯ ನಗರದ ಹೊಟೇಲ್ ಅಗ್ನಿ ದುರಂತದಲ್ಲಿ 21 ಜನರು ಸಾವನ್ನಪ್ಪಿದರು, ಬೆಂಕಿಯಲ್ಲಿ ಸಿಲುಕಿದ 9 ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಮಾಳವೀಯ ನಗರದ ಫ್ಲೋರಿಶ್ ಸ್ಟೇ ಬಿಅಂಡ್ ಬಿ ಹೊಟೇಲ್ ನಡೆದ ಅಗ್ನಿ ದುರಂತದಲ್ಲಿ 21 ಜನರು ಸಾವನ್ನಪ್ಪಿದ್ದಾರೆ, 28 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಬೆಂಕಿ ಅವಘಡದಲ್ಲಿ ಸಿಲುಕಿ 9 ಜನರನ್ನು ಸ್ಥಳೀಯರು ರಕ್ಷಣೆ ಮಾಡುವ ಮೂಲಕ ಮನವೀಯತೆ ಮರೆದಿದ್ದಾರೆ.

ಹೊಟೇಲ್ ನಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ ಹೊಟೇಲ್ ನಿಂದ ಹೊರಗೆ ಬರಲಾರದೆ ಹೊಟೇಲ್ ಒಳಗೆ ಜನರು ಸಿಲುಕಿದ್ದರು, ಕಿಟಕಿಯ ಬಳಿ ಬಂದು ರಕ್ಷಣೆ ಮಾಡುವಂತೆ ಕೂಗಿಕೊಳ್ಳುತ್ತಿದ್ದರು, ಈ ವೇಳೆ ಹೊಟೇಲ್ ಸಮೀಪ ಹಾಸಿಗೆ ಅಂಗಡಿ ಇಟ್ಟುಕೊಂಡಿದ್ದ ರಿಯಾಜುದ್ದೀನ್ ಮನ್ಸೂರಿ ಮತ್ತು ಅವರ ಮಗ ಆರ್ಮಾನ್ ಅಂಗಡಿಯಲ್ಲಿದ್ದ ಹಾಸಿಗೆಗಳನ್ನು ಹೊಟೇಲ್ ನ ಕಿಟಕಿ ಬಳಿ ಹರಡಿದ್ದಾರೆ.

ನೆಲದಲ್ಲಿ ಹಾಸಿಗೆಗಳನ್ನು ಹರಡಿದ್ದು ಹೊಟೇಲ್ ನಲ್ಲಿ ಸಿಲುಕಿದ ಜನರು ಕಿಟಕಿಯಿಂದ ಜಿಗಿದಿದ್ದಾರೆ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸಿಗೆ ಅಂಗಡಿಯ ಅಪ್ಪ ಮಗ ಸುಮಾರು 2 ಲಕ್ಷ ಮೌಲ್ಯದ 22 ಹಾಸಿಗೆಗಳನ್ನು ಜನರ ಪ್ರಾಣ ರಕ್ಷಣೆಗೆ ಬಳಸಿದ್ದಾರೆ, ಅಪ್ಪ ಮಗನಿಂದಾಗಿ 9 ಜನರ ಪ್ರಾಣ ರಕ್ಷಣೆ ಮಾಡಲಾಗಿದೆ.

ಹಾಗೆಯೇ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ವಸೀಂ ರಾಜ್, ಹೊಟೇಲ್ ನಲ್ಲಿ ಸಿಲುಕಿ ಹೊರಗೆ ಬರಲಾಗದೆ ಕಷ್ಟಪಡುತ್ತಿದ್ದ ಜನರನ್ನ ಕಬ್ಬಿಣದ ಗ್ರೀಲ್ ಮುರಿದು ಹೊರಗೆ ತಂದಿದ್ದಾರೆ, ಅಸ್ವಸ್ಥರಾಗಿದ್ದ ಜನರನ್ನು ಸಿಪಿಆರ್ ಮಾಡಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಸ್ಥಳೀಯ ಜನರು ತೋರಿದ ಧೈರ್ಯ ಮತ್ತು ಮಾನವೀಯತೆಯಿಂದಾಗಿ 9 ಜನರ ಪ್ರಾಣ ಉಳಿದಿದೆ, ದೆಹಲಿಯ ರಿಯಲ್ ಹೀರೋ ಆಗಿದ್ದಾರೆ ಅವರಿಂದು.

05/06/2026

#ದೊಡ್ಡಬಳ್ಳಾಪುರ
STRR ರಸ್ತೆ ಅಗಲೀಕರಣದಲ್ಲಿ ರಸ್ತೆ ಬದಿಯ ಸಾವಿರಾರು ಮರಗಳನ್ನ ಕಡಿಯಲಾಗಿತ್ತು, ಅದಕ್ಕೆ ಪರ್ಯಾಯವಾಗಿ ದೊಡ್ಡಬಳ್ಳಾಪುರ ತಾಲೂಕಿನ 35 ಕಿ.ಮೀ ವ್ಯಾಪ್ತಿಯ ಹೆದ್ದಾರಿಯಲ್ಲಿ 3 ಸಾವಿರ ಗಿಡಗಳನ್ನ ನೇಡಲಾಗಿದೆ.
-ಧೀರಜ್ ಮುನಿರಾಜು, ಶಾಸಕ

 #ಬೆಂಗಳೂರುಡಿ.ಕೆ.ಶಿವಕುಮಾರ್ ದೇವರ ಭಕ್ತಿಬೆಂಗಳೂರು ನಗರ ಕಾಯುವ ಅಧಿದೇವತೆ ಶ್ರೀಅಣ್ಣಮ್ಮ ದೇವಿ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ...
05/06/2026

#ಬೆಂಗಳೂರು
ಡಿ.ಕೆ.ಶಿವಕುಮಾರ್ ದೇವರ ಭಕ್ತಿ
ಬೆಂಗಳೂರು ನಗರ ಕಾಯುವ ಅಧಿದೇವತೆ ಶ್ರೀಅಣ್ಣಮ್ಮ ದೇವಿ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

05/06/2026

#ಬೆಂಗಳೂರು
ಖಾತೆ ಹಂಚಿಕೆ ಅಸಮಾಧಾನ, ರಾಹುಲ್ ಗಾಂಧಿ ಭೇಟಿ ಮಾಡಿದ ಕೆ.ಎಚ್.ಮುನಿಯಪ್ಪ

 #ಬೆಂಗಳೂರುಖಾತೆ ಹಂಚಿಕೆ ಅಸಮಾಧಾನ, ರಾಹುಲ್ ಗಾಂಧಿ ಭೇಟಿ ಮಾಡಿದ ಕೆ.ಎಚ್.ಮುನಿಯಪ್ಪ ದೇವನಹಳ್ಳಿ :  ಖಾತೆ ಹಂಚಿಕೆ ಬಗ್ಗೆ ರಾಮಲಿಂಗರೆಡ್ಡಿ ರಾಜೀ...
05/06/2026

#ಬೆಂಗಳೂರು
ಖಾತೆ ಹಂಚಿಕೆ ಅಸಮಾಧಾನ, ರಾಹುಲ್ ಗಾಂಧಿ ಭೇಟಿ ಮಾಡಿದ ಕೆ.ಎಚ್.ಮುನಿಯಪ್ಪ

ದೇವನಹಳ್ಳಿ : ಖಾತೆ ಹಂಚಿಕೆ ಬಗ್ಗೆ ರಾಮಲಿಂಗರೆಡ್ಡಿ ರಾಜೀನಾಮೆ ನೀಡಿದ ಬೆನ್ನಲೇ ಕೆ.ಎಚ್.ಮುನಿಯಪ್ಪ ಅಸಮಾಧನ ಹೊರಹಾಕಿದ್ದಾರೆ, 8 ಭಾರಿ ಗೆದ್ದಿರುವ ನನಗೆ ಮತ್ತೆ ಆಹಾರ ಖಾತೆಯನ್ನ ಕೊಟ್ಟಿದ್ದಾರೆ, ಜನ ಸೇವೆ ಮಾಡುವ ಸಮಾಜ ಕಲ್ಯಾಣ, ಕೃಷಿ ಖಾತೆಯನ್ನ ಕೊಡುವಂತೆ ಅಕ್ರೋಶ ಹೊರಹಾಕಿದ್ದಾರೆ.

ದೇವನಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,
ಖಾತೆ ಹಂಚಿಕೆಯಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಭಾರಿ ಅಸಮಾಧಾನ, ನಾನು 8 ಭಾರಿ ಗೆದ್ದಿದ್ದೇನೆ, ಖಾತೆ ಹಂಚಿಕೆಯಲ್ಲಿ ಸಿನಿಯಾರಿಟಿ ಮೈಂಟೆನ್ ಆಗಿಲ್ಲ, ನಾನು ಪಕ್ಷದಲ್ಲಿ ತಾಯಿ ಸ್ಥಾನದಲ್ಲಿ ಇದ್ದೇನೆ, ಎಲ್ಲಾ ಮಕ್ಕಳನ್ನ ಒಂದೇ ರೀತಿ ನೋಡಬೇಕು ಖಾತೆ ಸರಿಯಾಗಿಲ್ಲ, ಈ ರೀತಿ ಮಾಡಿದ್ರೆ ಮುಂದೆ 2028ಕ್ಕೆ ಕಷ್ಟವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.


ಸಿನಿಯಾರಿಟಿ ನೋಡಿಲ್ಲ, ಸಮತೋಲನವಾಗಿ ನೋಡಬೇಕಿತ್ತು ಅದನ್ನ ನೋಡಿಲ್ಲ, ನಾನು ಎಐಸಿಸಿ ಅಧ್ಯಕ್ಷರನ್ನ ರಾಹುಲ್ ಗಾಂಧಿಯನ್ನ ಭೇಟಿ ಮಾಡಿದ್ದೇನೆ, ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಬೇಕು ಅಂತಾ ಹೇಳಿದ್ದೇನೆ ಎಂದರು.

ನನ್ನ ಖಾತೆಯನ್ನ ಬದಲಾವಣೆ ಮಾಡಿ ಜನಸೇವ ಮಾಡಬೇಕಾದ ಖಾತೆ ನೀಡುವಂತೆ ಮನವಿ ಮಾಡ್ತೇನೆ, ನನಗೆ ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ಅಂತಹ ಖಾತೆಯನ್ನ ಕೊಡಬೇಕು ಅಂತಾ ಹೇಳಿದ್ದೆ, ಈಗಾಗಲೇ ಮೂರು ವರ್ಷಗಳಿಂದ ಆಹಾರ ಇಲಾಖೆ ನಿಭಾಹಿಸಿದ್ದೇನೆ,ಪ್ರೊಟೋಕಾಲ್ ಪ್ರಕಾರ ಸಿನಿಯಾರಿಟಿ ನೋಡಿಕೊಂಡು ಖಾತೆ ಹಂಚಿಕೆಯಾಗಬೇಕು, ಗೊಂದಲ ಆಗಬಾರದು , ಸರಿ ಮಾಡ್ತಾರೆ ಅನ್ನೊದನ್ನ ನಂಬಿದ್ದೇನೆ ಎಂದರು.

 #ಬೆಂಗಳೂರುಗಂಡ ನೈಟ್ ಶಿಫ್ಟ್.. ಹೆಂಡತಿಗೆ ಡೇ ಶಿಫ್ಟ್,ರಾತ್ರಿ ಮನೆಗೆ ಅತಿಥಿಯಾಗಿದ್ದ ಪ್ರಿಯಕರ,ಅನೈತಿಕ ಸಂಬಂಧಕ್ಕೆ ಬಿದ್ದು ಅಮಾಯಕ ಗಂಡನ ಹೆಣಬ...
05/06/2026

#ಬೆಂಗಳೂರು
ಗಂಡ ನೈಟ್ ಶಿಫ್ಟ್.. ಹೆಂಡತಿಗೆ ಡೇ ಶಿಫ್ಟ್,
ರಾತ್ರಿ ಮನೆಗೆ ಅತಿಥಿಯಾಗಿದ್ದ ಪ್ರಿಯಕರ,
ಅನೈತಿಕ ಸಂಬಂಧಕ್ಕೆ ಬಿದ್ದು ಅಮಾಯಕ ಗಂಡನ ಹೆಣ

ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದ ಅವರಿಗೆ ಕುಟುಂಬದವರ ವಿರೋಧ ಇತ್ತು, ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಗಂಡ-ಹೆಂಡತಿ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ನಡುವೆ ಬಂದ ಸೆಕ್ಯೂರಿಟಿ ಸೂಪರ್ ವೈಸರ್, ಇಬ್ಬರ ದಾಂಪತ್ಯಕ್ಕೆ ಕೊಳ್ಳಿ ಇಟ್ಟಿದ್ದಾನೆ.

ಗಂಡ ಅಭಿಜಿತ್ ಪಂಡಿತ್ ನೈಟ್ ಶಿಫ್ಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ, ಹೆಂಡತಿ ಅರ್ಚನಾ ಚೌಹಾನ್ ಡೇ ಶಿಪ್ಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಳು, ರಾತ್ರಿ ಗಂಡನಿಲ್ಲದ ಸಮಯದಲ್ಲಿ ಸೆಕ್ಯೂರಿಟಿ ಸೂಪರ್ ವೈಸ್ ಪರ್ಸೂಲ್ ಪಾಲ್ ಬಂದು ಹೋಗುತ್ತಿದ್ದ, ಇದೇ ವಿಚಾರಕ್ಕೆ ಗಂಡ ಅಭಿಜಿತ್ ಹೆಣ ಬಿದ್ದಿದೆ.


ಪಶ್ಚಿಮ ಬಂಗಾಳ ಮೂಲದ ಆಭಿಜಿತ್ ಪಂಡಿತ್ ಹಾಗೂ ಯುಪಿ ಮೂಲದ ಅರ್ಚನಾ ಚೌಹಾನ್ ಮದುವೆ ಬಳಿಕ ಬೆಂಗಳೂರಿಗೆ ಬಂದು ಜೀವನ ಸಾಗಿಸುತ್ತಿದ್ರು. ಆದ್ರೆ ಇಬ್ಬರ ಸಂಸಾರದಲ್ಲಿ ಪರ್ಸೂಲ್ ಪಾಲ್ ಎಂಬ ಮೂರನೆಯವ ಎಂಟ್ರಿ ಕೊಟ್ಟ ನೋಡಿ ಅಲ್ಲಿಂದ ಅವರ ಬದುಕಿನ ಚಿತ್ರಣವನ್ನೇ ಹಾಳುಗೆಡುವಿ ಬಿಟ್ಟ.

ಯಲಹಂಕ ನಗರ ಸಮೀಪದ ಪ್ರೆಸಿಡೆನ್ಸಿ ಕಾಲೇಜ್ವಲ್ಲಿ ಅರ್ಚನಾ ಸೆಕ್ಯುರಿಟಿ ಗಾರ್ಡ್ ಆಗಿದ್ರೆ, ಪ್ರಿಯಕರ ಪರ್ಸೂಲ್ ಪಾಲ್ ಅದೇ ಕಾಲೇಜಿನಲ್ಲಿ ಸೆಕ್ಯುರಿಟಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ.ಇತ್ತ ಚೊಕ್ಕನಹಳ್ಳಿ ವಿಲ್ಲಾವೊಂದ್ರಲ್ಲಿ ಪತಿ ಅಭಿಜಿತ್ ಕೂಡ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ.

ಗಂಡ ನೈಟ್ ಶಿಫ್ಟ್ ಕೆಲಸಕ್ಕೆ ತೆರಳುತ್ತಿದ್ದಂತೆ ಹೆಂಡತಿ ಅರ್ಚನಾ ಪ್ರಿಯಕರ ಪರ್ಸೂಲ್ ಪಾಲ್ ನನ್ನು ಮನೆಗೆ ಕರೆಸ್ಕೊಂಡು ಚಕ್ಕಂದವಾಡ್ತಿದ್ರಂತೆ, ಗಂಡನಿಗೆ 6 ತಿಂಗಳ ಹಿಂದೆ ವಿಷಯ ತಿಳಿದು ಹೆಂಡತಿಗೆ ಬೈದು ಬುದ್ದಿ ಹೇಳಿದ್ದಾನೆ, ದಿನ ಕಳೆದಂತೆ ಅವಳ ಅನೈತಿಕ ಸಂಬಂಧಕ್ಕೆ ಪತಿ ಮುಳುವಾಗ್ತಾನೆ ಅಂತ ಪತಿಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಳು ಎನ್ನಲಾಗಿದೆ.

ಕಳೆದ ಮೇ 27ರಂದು ಎಣ್ಣೆ ಪಾರ್ಟಿ ನೆಪದಲ್ಲಿ ಅಭಿಜಿತ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಪ್ರಿಯಕರ ಪರ್ಸೂಲ್ ಪಾಲ್ ಮತ್ತು ಆತನ ಸ್ನೇಹಿತ ಶುಭಂಕರ್ ಸೇರಿ ಕಂಠ ಪೂರ್ತಿ ಎಣ್ಣೆ ಕುಡಿಸಿ ಪ್ಲಾಸ್ಟಿಕ್ ದಾರದಿಂದ ಕುತ್ತಿಗೆಗೆ ಬಿಗಿದು, ರಾಡ್‌ನಿಂದ ಬಡಿದು ಹತ್ಯೆ ಮಾಡಿದ್ದಾರೆ.

ಹತ್ಯೆ ಬಳಿಕ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿ ಮತ್ಕೂರ್ ಕೆರೆ ಪಕ್ಕದಲ್ಲಿ ಎಸೆದು ಕಸದ ರಾಶಿಯಲ್ಲಿ ಮುಚ್ಚಿ ಪರಾರಿಯಾಗಿದ್ರು.

ಈ ಸಂಬಂಧ ಯಾವುದೇ ಅನುಮಾನ ಬಾರದಿರಲಿ ಅಂತ ಪೊಲೀಸ್ತ್ರಿಗೆ ದಿಕ್ಕು ತಪ್ಪಿಸಲು ಗಂಡ ಕೆಲಸಕ್ಕೆ ಹೋಗಿ ವಾಪಸ್ ಬಂದಿಲ್ಲ ಅಂತ ಹೆಂಡತಿ ಅರ್ಚನಾ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದು. ಪೊಲೀಸರ ಬಳಿ ಗಂಡನನ್ನ ಹುಡುಕಿ ಕೊಡುವಂತೆ ಅಳುತ್ತಾ ಹೈಡ್ರಾಮಾ ಮಾಡಿದ್ಳು.

ಹೆಂಡತಿ ವರ್ತನೆ ಮೇಲೆ ಅನುಮಾನಗೊಂಡ ಪೊಲೀಸ್ರು ಫೋನ್ ಕಾಲ್ ಡೀಟೈಲ್ಸ್ ಪರಿಶೀಲನೆ ನಡೆಸಿದಾಗ ಹೊರಬಿತ್ತು ನೋಡಿ ಅಸಲಿ ಹಸಿಬಿಸಿ ಕಹಾನಿ, ಆಗ ಪ್ರಿಯಕರ ಪರ್ಸೂಲ್ ಪಾಲ್ ಲಾಕ್ ಆಗಿದ್ದಾನೆ.

ಇನ್ನೂ ಘಟನಾಸ್ಥಳಕ್ಕೆ ಎಸಿಪಿ ರವಿಕುಮಾರ್, ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸದ್ಯ ಪ್ರಕರಣ ದಾಖಲಿಸ್ಕೊಂಡು ರಾಜಾನುಕುಂಟೆ ಪೊಲೀಸ್ರು ಆರೋಪಿ ಅರ್ಚನಾ ಮತ್ತು ಪರ್ಸೂಲ್ ಪಾಲ್ನನ್ನು ಬಂಧಿಸಿದ್ದು, ತಲೆಮರೆಸ್ಕೊಂಡ ಮತ್ತೊಬ್ಬ ಆರೋಪಿ ಶುಭಂಕರ್ಗಾಗಿ ಶೋಧ ಕಾರ್ಯ ನಡೆಸ್ತಿದ್ದಾರೆ.

Address

Someshwara Badavane
Bangalore
561203

Alerts

Be the first to know and let us send you an email when VartaGuru posts news and promotions. Your email address will not be used for any other purpose, and you can unsubscribe at any time.

Contact The Business

Send a message to VartaGuru:

Share