05/06/2026
#ಬೆಂಗಳೂರು
ಖಾತೆ ಹಂಚಿಕೆ ಅಸಮಾಧಾನ, ರಾಹುಲ್ ಗಾಂಧಿ ಭೇಟಿ ಮಾಡಿದ ಕೆ.ಎಚ್.ಮುನಿಯಪ್ಪ
ದೇವನಹಳ್ಳಿ : ಖಾತೆ ಹಂಚಿಕೆ ಬಗ್ಗೆ ರಾಮಲಿಂಗರೆಡ್ಡಿ ರಾಜೀನಾಮೆ ನೀಡಿದ ಬೆನ್ನಲೇ ಕೆ.ಎಚ್.ಮುನಿಯಪ್ಪ ಅಸಮಾಧನ ಹೊರಹಾಕಿದ್ದಾರೆ, 8 ಭಾರಿ ಗೆದ್ದಿರುವ ನನಗೆ ಮತ್ತೆ ಆಹಾರ ಖಾತೆಯನ್ನ ಕೊಟ್ಟಿದ್ದಾರೆ, ಜನ ಸೇವೆ ಮಾಡುವ ಸಮಾಜ ಕಲ್ಯಾಣ, ಕೃಷಿ ಖಾತೆಯನ್ನ ಕೊಡುವಂತೆ ಅಕ್ರೋಶ ಹೊರಹಾಕಿದ್ದಾರೆ.
ದೇವನಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,
ಖಾತೆ ಹಂಚಿಕೆಯಲ್ಲಿ ಸಚಿವ ಕೆಹೆಚ್ ಮುನಿಯಪ್ಪ ಭಾರಿ ಅಸಮಾಧಾನ, ನಾನು 8 ಭಾರಿ ಗೆದ್ದಿದ್ದೇನೆ, ಖಾತೆ ಹಂಚಿಕೆಯಲ್ಲಿ ಸಿನಿಯಾರಿಟಿ ಮೈಂಟೆನ್ ಆಗಿಲ್ಲ, ನಾನು ಪಕ್ಷದಲ್ಲಿ ತಾಯಿ ಸ್ಥಾನದಲ್ಲಿ ಇದ್ದೇನೆ, ಎಲ್ಲಾ ಮಕ್ಕಳನ್ನ ಒಂದೇ ರೀತಿ ನೋಡಬೇಕು ಖಾತೆ ಸರಿಯಾಗಿಲ್ಲ, ಈ ರೀತಿ ಮಾಡಿದ್ರೆ ಮುಂದೆ 2028ಕ್ಕೆ ಕಷ್ಟವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿನಿಯಾರಿಟಿ ನೋಡಿಲ್ಲ, ಸಮತೋಲನವಾಗಿ ನೋಡಬೇಕಿತ್ತು ಅದನ್ನ ನೋಡಿಲ್ಲ, ನಾನು ಎಐಸಿಸಿ ಅಧ್ಯಕ್ಷರನ್ನ ರಾಹುಲ್ ಗಾಂಧಿಯನ್ನ ಭೇಟಿ ಮಾಡಿದ್ದೇನೆ, ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಬೇಕು ಅಂತಾ ಹೇಳಿದ್ದೇನೆ ಎಂದರು.
ನನ್ನ ಖಾತೆಯನ್ನ ಬದಲಾವಣೆ ಮಾಡಿ ಜನಸೇವ ಮಾಡಬೇಕಾದ ಖಾತೆ ನೀಡುವಂತೆ ಮನವಿ ಮಾಡ್ತೇನೆ, ನನಗೆ ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ಅಂತಹ ಖಾತೆಯನ್ನ ಕೊಡಬೇಕು ಅಂತಾ ಹೇಳಿದ್ದೆ, ಈಗಾಗಲೇ ಮೂರು ವರ್ಷಗಳಿಂದ ಆಹಾರ ಇಲಾಖೆ ನಿಭಾಹಿಸಿದ್ದೇನೆ,ಪ್ರೊಟೋಕಾಲ್ ಪ್ರಕಾರ ಸಿನಿಯಾರಿಟಿ ನೋಡಿಕೊಂಡು ಖಾತೆ ಹಂಚಿಕೆಯಾಗಬೇಕು, ಗೊಂದಲ ಆಗಬಾರದು , ಸರಿ ಮಾಡ್ತಾರೆ ಅನ್ನೊದನ್ನ ನಂಬಿದ್ದೇನೆ ಎಂದರು.