Manu16

Manu16 ❤️ಹೆಮ್ಮೆಯ ಕನ್ನಡಿಗ💛
❤️RCB FOREVER💛
🏏Cricket ❤️Cinema🎥Trending Topics🎭
💌[email protected]

18/04/2026

ಇಂದು ನಮ್ಮ ಹುಡುಗ ನಮ್ಮ ಟೀಮ್❤️❤️ Manu16 Royal Challengers Bengaluru KL Rahul Delhi Capitals

ಕೆ. ಎಲ್. ರಾಹುಲ್ ಕಣ್ಣೂರು ಲೋಕೇಶ್ ರಾಹುಲ್ ಅವರು ಏಪ್ರಿಲ್ 18, 1992 ರಂದು ಬೆಂಗಳೂರಿನಲ್ಲಿ ಜನಿಸಿದರು, ಆದರೆ ಕೆ ಎಲ್ ರಾಹುಲ್ ಬೆಳೆದದ್ದು ಮಂ...
18/04/2026

ಕೆ. ಎಲ್. ರಾಹುಲ್ ಕಣ್ಣೂರು ಲೋಕೇಶ್ ರಾಹುಲ್ ಅವರು ಏಪ್ರಿಲ್ 18, 1992 ರಂದು ಬೆಂಗಳೂರಿನಲ್ಲಿ ಜನಿಸಿದರು, ಆದರೆ ಕೆ ಎಲ್ ರಾಹುಲ್ ಬೆಳೆದದ್ದು ಮಂಗಳೂರಿನಲ್ಲಿ.

ತಂದೆ ಕೆ.ಎನ್. ಲೋಕೇಶ್ ಅವರು ಸುರತ್ಕಲ್‌ನ NITK ಯಲ್ಲಿ ಪ್ರೊಫೆಸರ್ ಆಗಿದ್ದರು,
ತಾಯಿ ರಾಜೇಶ್ವರಿ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ.

ಮಂಗಳೂರಿನ ಎನ್.ಐ.ಟಿ.ಕೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು.

ರಾಹುಲ್ ತಮ್ಮ 10ನೇ ವಯಸ್ಸಿನಲ್ಲಿ ಮಂಗಳೂರಿನಲ್ಲಿ ಕ್ರಿಕೆಟ್ ತರಬೇತಿ ಆರಂಭಿಸಿದರು,ಆರಂಭದಲ್ಲಿ ಸ್ಯಾಮ್ಯುಯೆಲ್ ಜಯರಾಜ್ ಅವರ ಬಳಿ ತರಬೇತಿ ಪಡೆದರು.
18ನೇ ವಯಸ್ಸಿನಲ್ಲಿ ಕ್ರಿಕೆಟ್‌ಗಾಗಿ ಬೆಂಗಳೂರಿಗೆ ಶಿಫ್ಟ್ ಆದರು. 2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಕರ್ನಾಟಕ ತಂಡದ ಪರವಾಗಿ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. 2013-14ರಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2014ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು,

ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ
ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಐಪಿಎಲ್‌ನಲ್ಲಿ RCB,SRH,PUNJAB ಮತ್ತು LSG ತಂಡಗಳ ಪರವಾಗಿ ಆಡಿದ್ದಾರೆ,
ಸಧ್ಯ DC ಪರವಾಗಿ ಆಡುತ್ತಿದ್ದಾರೆ.

ಟೀಮ್ ಇಂಡಿಯಾದ ಓಪನರ್, ಮಿಡಲ್ ಆರ್ಡರ್ ಬ್ಯಾಟ್ಸ್ ಮ್ಯಾನ್,ಫಿನಿಷಾರ್,
ವಿಕೆಟ್ ಕೀಪರ್, ವೈಸ್ ಕ್ಯಾಪ್ಟನ್,ಕ್ಯಾಪ್ಟನ್,
ಒಂದ ಎರಡ ಕೆ ಎಲ್ ರಾಹುಲ್ ಅವರು ನಿಭಾಯಿಸುತ್ತಿರುವ ಕರ್ತವ್ಯಗಳು🙏

ಇಂದು ನಮ್ಮ ಕೆ ಎಲ್ ರಾಹುಲ್ ಅವರ ಹುಟ್ಟಿದ ದಿನ. ಹುಟ್ಟುಹಬ್ಬದ ಶುಭಾಶಯಗಳು ಕೆ ಎಲ್ ರಾಹುಲ್✨🎂
Manu16 KL Rahul

18/04/2026

ಕೋಟೆ ಕಟ್ಟಿ ಮೆರೆದವರೆಲ್ಲಾ ಏನ್ ಆದರೂ😜🙏 Manu16 Royal Challengers Bengaluru Kolkata Knight Riders

ಹಾಸನದ ಭುವನಹಳ್ಳಿಯಲ್ಲಿ ಜನವರಿ 8, 1986ರಂದು ಜನಿಸಿದ ನವೀನ್ ಕುಮಾರ್ ಗೌಡ , ಬಿಎಂಟಿಸಿ ಚಾಲಕನ ಮಗನಾಗಿ, ಕೇವಲ 300 ರೂ. ಹಿಡಿದು ಬೆಂಗಳೂರಿಗೆ ಬ...
17/04/2026

ಹಾಸನದ ಭುವನಹಳ್ಳಿಯಲ್ಲಿ ಜನವರಿ 8, 1986ರಂದು ಜನಿಸಿದ ನವೀನ್ ಕುಮಾರ್ ಗೌಡ , ಬಿಎಂಟಿಸಿ ಚಾಲಕನ ಮಗನಾಗಿ,
ಕೇವಲ 300 ರೂ. ಹಿಡಿದು ಬೆಂಗಳೂರಿಗೆ ಬಂದು.ನಂದಗೋಕುಲ ಧಾರಾವಾಹಿಯ ಮೂಲಕ ಕಿರುತೆರೆಗೆ ಜಿಗಿದು,
2007ರಲ್ಲಿ ಜಂಭದ ಹುಡುಗಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿ, ನಂತರ ಮೊಗ್ಗಿನ ಮನಸ್ಸು ಚಿತ್ರದಲ್ಲಿ ದಲ್ಲಿ ನಾಯಕನಾಗಿ ನಟನೆ,
ಕಿರಾತಕ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಮಿ.ಮಿಸ್ಟರ್ ರಾಮಚಾರಿ ಚಿತ್ರಗಳಿಂದ
ಸ್ಯಾಂಡಲ್ ವುಡ್ನ ರಾಕಿಂಗ್ ಸ್ಟಾರ್ ಆಗಿ ಬೆಳೆದು.
ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ರಾಕಿ ಭಾಯ್ ಆಗಿ.

ಈಗ ಪ್ಯಾನ್ ವರ್ಲ್ಡ್ ಚಿತ್ರಗಳದ ಟ್ಯಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳ ಬಗ್ಗೆ, ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ CinemaCon 2026 ಕಾರ್ಯಕ್ರಮದಲ್ಲಿ ಭಾಗವಹಿಸಿ,
ಅಲ್ಲಿನ ಪ್ರಮುಖ ಮಾಧ್ಯಮಗಳಿಗೆ
ಸಂದರ್ಶನ ನೀಡಿದ್ದಾರೆ.

ಒಂದು ಕಾಲದಲ್ಲಿ ಇವರು ಹೊಸಬರು ಆಗಿದ್ದಾಗ ಇವರನ್ನ ಇಂಟರ್ವ್ಯೂ ಮಾಡಲು ಹಿಂದೇಟು ಹಾಕಿದ್ದರು, ಇವರ ಚಿತ್ರದ ಪ್ರಚಾರಗಳನ್ನ ಆಟೋಗಳಲ್ಲಿ ಬಸ್ ಗಳಲ್ಲಿ ಪಾಂಪ್ಲೆಟ್ ಹಚ್ಚುವ ಮುಖಾಂತರ ಪ್ರಚಾರ ಮಾಡಿದ್ದರು.

ಈಗ ಯಶ್ ಅವರ ಚಿತ್ರದ ಪ್ರಚಾರ ಅಮೇರಿಕಾದಲ್ಲಿ🔥🔥

ಎಲ್ಲಿಂದ ಎಲ್ಲಿಯವರೆಗೂ💥🔥✨

ನಾವು ಕಣೋ ಕನಸ್ಸು ದೊಡ್ಡದಾಗಿರಲಿ👍
Manu16 Yash

17/04/2026

ಚಿಕ್ಕ ಮಕ್ಕಳು ತರ ಕಂಪ್ಲೇಂಟ್ ಮಾಡ್ತಾರಲ್ಲ ಗುರು 😂🙏🙂 Manu16 Royal Challengers Bengaluru

ಐಪಿಎಲ್​ನ 11ನೇ ಪಂದ್ಯದಲ್ಲಿ RCB ಹಾಗೂ CSK ಮುಖಾಮುಖಿಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಆರ್​ಸಿಬಿ...
16/04/2026

ಐಪಿಎಲ್​ನ 11ನೇ ಪಂದ್ಯದಲ್ಲಿ RCB ಹಾಗೂ CSK ಮುಖಾಮುಖಿಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಆರ್​ಸಿಬಿ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಬಿಸಿಸಿಐಗೆ ದೂರು ನೀಡಿದ್ದಾರೆ.

ಏಪ್ರಿಲ್ 5 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಆರ್​ಸಿಬಿ ಡಿಜೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ಅವಮಾನಿಸಿಳು. ಉದ್ದೇಶಪೂರ್ವಕವಾಗಿಯೇ "ದೋಸೆ ಇಡ್ಲಿ ಚಟ್ನಿ ಚಟ್ನಿ"ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ.

ಆರ್‌ಸಿಬಿ ಡಿಜೆ ಉದ್ದೇಶಪೂರ್ವಕವಾಗಿ ಆ ಹಳೆಯ ಹಾಡನ್ನು ಪ್ಲೇ ಮಾಡಿ ಸಿಎಸ್‌ಕೆ ಆಟಗಾರರನ್ನು ಮತ್ತು ತಮಿಳುನಾಡಿನ ಸಂಸ್ಕೃತಿಯನ್ನು ಅವಹೇಳನ ಮಾಡಿದ್ದಾರೆ. ಹೋಮ್ ಟೀಮ್ ಬೆಂಬಲಿಸುವುದು ಸಹಜ, ಆದರೆ ಎದುರಾಳಿ ತಂಡದ ಆಟಗಾರರನ್ನು ಹೀಗಳೆಯುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅಸಮಾಧಾನ ವ್ಯಕ್ತಪಡಿಸಿ, ಬಿಸಿಸಿಐಗೆ ದೂರು ನೀಡಿದ್ದಾರೆ.

2025 ರಲ್ಲಿ ಆರ್​ಸಿಬಿ ನಡೆಸಿದ ಚಿಟ್​ ಚಾಟ್​ನಲ್ಲಿ “ಚೆನ್ನೈ ಎಂದ ತಕ್ಷಣ ನಿಮ್ಮ ನೆನಪಿಗೆ ಬರುವುದು ಏನು? ಎಂದು ಕೇಳಲಾಗಿತ್ತು.
ಈ ವೇಳೆ ಜಿತೇಶ್ ಶರ್ಮಾ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಎಂಬ ಹಾಡನ್ನು ಹಾಡಿದ್ದರು.

ಇದಕ್ಕೆ ಪ್ರತಿಯಾಗಿ ಚೆನ್ನೈನ ಚೇಪಾಕ್ ಕ್ರೀಡಾಂಗಣದಲ್ಲಿ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ ಔಟಾಗುತ್ತಿದ್ದಂತೆ ಸಿಎಸ್‌ಕೆ ಡಿಜೆ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಹಾಡನ್ನು ಪ್ಲೇ ಮಾಡಿ ತಿರುಗೇಟು ನೀಡಿದ್ದರು.

ಈಗ RCB ಡಿಜೆ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದಾರೆ ಅಷ್ಟೇ, ಇದಕ್ಕೆ ಇತರ ದೂರು ಕೊಟ್ಟರೆ ಯಾಗೆ ಗುರು,ಇವರು RCB ಬಗ್ಗೆ ಪ್ಲೇಯರ್ಸ್ ಬಗ್ಗೆ ಏನು ಬೇಕಾದ್ರು ಮಾತಾಡಬಹುದು ಅವಮಾನ ಮಾಡಬಹುದು. ಅದಕ್ಕೆ RCB ಅವರು ಉತ್ತರ ಕೊಟ್ಟರೆ, RCB ಅವರು ಸರಿ ಇಲ್ಲಾ ಅಂತ ಕಂಪ್ಲೇಂಟ್ ಮಾಡುವುದು ಎಷ್ಟು ಸರಿ🤔
Manu16 Royal Challengers Bengaluru Chennai Super Kings

19 ವರ್ಷದ ಹುಡುಗ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಸಚಿನ್ ಅವರನ್ನು ಡಾಕ್ ಔಟ್ ಮಾಡ್ತಾನೆ, ಸಚಿನ್ ಅವರು ಇದುವರೆಗೂ ಡೊಮೆಸ್ಟಿಕ್ ಕ್ರಿಕೆಟ್ ಅಲ್ಲಿ ...
16/04/2026

19 ವರ್ಷದ ಹುಡುಗ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಸಚಿನ್ ಅವರನ್ನು ಡಾಕ್ ಔಟ್ ಮಾಡ್ತಾನೆ, ಸಚಿನ್ ಅವರು ಇದುವರೆಗೂ ಡೊಮೆಸ್ಟಿಕ್ ಕ್ರಿಕೆಟ್ ಅಲ್ಲಿ ಡಾಕ್ ಔಟ್ ಆಗಿರೋದು
ಒಂದೇ ಒಂದು ಬಾರಿ,
ಅವರನ್ನ ಡಾಕ್ ಔಟ್ ಮಾಡಿದ ಬೌಲರೇ ಭುವನೇಶ್ವರ್ ಕುಮಾರ್🔥💥

2012 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡ್ತಾರೆ ಅದು ನಮ್ಮ ಚಿನ್ನಸ್ವಾಮಿ ಗ್ರೌಂಡಲ್ಲೇ ಪಾಕಿಸ್ತಾನದ ವಿರುದ್ಧ,

ಅವತ್ತು ಭುವನೇಶ್ವರ್ ಕುಮಾರ್ ಮಾಡಿದಂತಹ ಸ್ವಿಂಗ್ ಬೌಲಿಂಗೆ
ಪಾಕಿಸ್ತಾನದ ಬ್ಯಾಟ್ಸ್ಮ್ಯಾನ್ ಗಳ
ವಿಕೆಟ್ ಗಳು ಎಗರಿ ಹೋಗುತ್ತೆ.

ಅಲ್ಲಿಂದ ಶುರುವಾದ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಜರ್ನಿ ಟಿ20 ಓಡಿಐ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡ್ಕೊಂಡು ಬರ್ತಾರೆ,ಸ್ವಿಂಗ್ ಮಾಸ್ಟರ್ ಅಂತಾನೆ ಹೆಸರು ಮಾಡ್ತಾರೆ💥💥

ಆದರೆ ಅದೇನಾಯ್ತೋ ಏನೋ 2022 ರಿಂದ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ🙂

ಐಪಿಎಲ್ ನಲ್ಲಿ 200 ವಿಕೆಟ್ ತೆಗೆದ ಮೊದಲ ಫಾಸ್ಟ್ ಬೌಲರ್,ಸ್ವಿಂಗ್ ಮಾಸ್ಟರ್,
ಪವರ್ ಪ್ಲೇ,ಡೆತ್ ಓವರ್ ಸ್ಪೆಷಲ್ ಲಿಸ್ಟ್,
ಬೆಸ್ಟ್ ಎಕಾನಮಿ ಫಾಸ್ಟ್ ಬೌಲರ್,
ಸುಧೀರ್ಘ 16 ವರ್ಷಗಳ
ಬೌಲಿಂಗ್ ಅನುಭವ.

ಇಷ್ಟೆಲ್ಲಾ ಇದ್ದರೂ ಟೀಮ್ ಇಂಡಿಯಾದಲ್ಲಿ ಇವರಿಗೆ ಯಾಕೋ ಅವಕಾಶ ಸಿಗುತ್ತಿಲ್ಲ,
ಅದು ಯಾಕೆ ಅಂತ ನನಗೂ ಗೊತ್ತಿಲ್ಲ,
ನಿಮಗೆ ಗೊತ್ತಿದ್ದರೆ,ಕಾಮೆಂಟ್ ಮಾಡಿ ತಿಳಿಸಿ.

ಭುವನೇಶ್ವರ್ ಕುಮಾರ್ ವಿಕೆಟ್ ತೆಗೆದಾಗ ಹಿಗ್ಗಾಲಿಲ್ಲಾ,
ರನ್ ಹೊಡೆಸಿಕೊಂಡಾಗ ಕುಗ್ಗಾಲಿಲ್ಲ, ಅವನೊಬ್ಬ ಭಾರತದ ತಾಳ್ಮೆಯ ವ್ಯಕ್ತಿತ್ವವುಳ್ಳ ಶ್ರೇಷ್ಠ ಬೌಲರ್,

ಆದಷ್ಟು ಬೇಗ ನಮ್ಮ ಭುವಿಗೆ ಟೀಮ್ ಇಂಡಿಯಾದಲ್ಲಿ,ಅವಕಾಶ ಸಿಗಲಿ🙏

ನಮ್ಮ ಭುವನೇಶ್ವರ್ ಕುಮಾರ್ ಗೆ
ಬರಲಿ ಒಂದು ಮೆಚ್ಚುಗೆ❤️✨🙏
Manu16 Royal Challengers Bengaluru
Bhuvneshwar Kumar

ಕರೆಕ್ಟ್ಆಗಿ ಸಮವಾಗಿ ಹಂಚ್ಕೊಂಡ್ ಇದಾರೆ ಗುರು😀Royal Challengers Bengaluru Manu16
16/04/2026

ಕರೆಕ್ಟ್ಆಗಿ ಸಮವಾಗಿ ಹಂಚ್ಕೊಂಡ್ ಇದಾರೆ ಗುರು😀
Royal Challengers Bengaluru Manu16

16/04/2026

ಟೀಮ್ ಅಲ್ಲಿ ಇರೋರೆಲ್ಲಾ ಗ್ಯಾಂಗ್ ಸ್ಟಾರ್ ಗಳೇ🔥🔥 Royal Challengers Bengaluru Manu16 Virat Kohli

Royal Challengers Bengaluru Manu16
15/04/2026

Royal Challengers Bengaluru Manu16

ABD ಮತ್ತು  RCB ನಡುವಿನ ಸಂಬಂಧ ಕ್ರಿಕೆಟ್‌ಗಿಂತ ಮಿಗಿಲಾದ ಅಭಿಮಾನಿಗಳ ಪಾಲಿನ ಭಾವನಾತ್ಮಕ ಸಂಬಂಧ.2011ರಲ್ಲಿ ಆರ್‌ಸಿಬಿ ಸೇರಿದ 'Mr. 360' ಡಿವ...
15/04/2026

ABD ಮತ್ತು RCB ನಡುವಿನ ಸಂಬಂಧ ಕ್ರಿಕೆಟ್‌ಗಿಂತ ಮಿಗಿಲಾದ ಅಭಿಮಾನಿಗಳ ಪಾಲಿನ ಭಾವನಾತ್ಮಕ ಸಂಬಂಧ.

2011ರಲ್ಲಿ ಆರ್‌ಸಿಬಿ ಸೇರಿದ 'Mr. 360' ಡಿವಿಲಿಯರ್ಸ್, 10ಕ್ಕೂ ಹೆಚ್ಚು ಸೀಸನ್‌ಗಳಲ್ಲಿ ತಂಡದ ಆಪತ್ಬಾಂಧವನಾಗಿ, ಅಸಾಧ್ಯ ಪಂದ್ಯಗಳನ್ನು ಗೆಲ್ಲಿಸಿಕೊಟ್ಟು, RCB ಅಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರನಗಿದ್ದರೂ ABD❤️

ಒಂದು ಕಾಲದಲ್ಲಿ, ABD ಇಡೀ ಆರ್‌ಸಿಬಿ ಮಧ್ಯಮ ಕ್ರಮಾಂಕವನ್ನು ಏಕಾಂಗಿಯಾಗಿ ಮುನ್ನಡೆಸುತ್ತಿದ್ದರು🙏

ಇಂದು ನಮ್ಮ ಮಿಡಲ್ ಆರ್ಡರ್ ಬ್ಯಾಟ್ಸಮನ್ ಗಳ ಜೊತೆ ನಮ್ಮ ABD ಈಗ ಇದಿದ್ದರೆ ಅವನ ಆಟವಂತೂ ಇನ್ನು ಭಯಂಕರ ವಾಗಿರುತಿತ್ತು 🔥🔥

ನಮ್ಮ RCB ಯ ಆಪದ್ಬಾಂಧವ ಓಜಿ ಮಿಡಲ್ ಆರ್ಡರ್ ಬ್ಯಾಟ್ಸಮನ್ ಎಬಿಡಿ ವಿಲಿಯರ್ಸ್ ಗೆ ಬರಲಿ ಒಂದು ಮೆಚ್ಚುಗೆ❤️✨
Manu16 AB de Villiers Royal Challengers Bengaluru

Address

Bangalore

Website

Alerts

Be the first to know and let us send you an email when Manu16 posts news and promotions. Your email address will not be used for any other purpose, and you can unsubscribe at any time.

Contact The Business

Send a message to Manu16:

Share