Vikas.Tv

Vikas.Tv Contact information, map and directions, contact form, opening hours, services, ratings, photos, videos and announcements from Vikas.Tv, TV Network, Bangalore.

15/07/2025

ಹಂಸ ಸಂಘಟನೆಯ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪ್ರೇರಣೆ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು

ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕೆ.ಎನ್ ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಹಂಸ ಸಂಘಟನೆಯ ವತಿಯಿಂದ ಪ್ರತಿಭಾ ಪ್ರೇರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಇನ್ನು ಪ್ರತಿಭಾ ಪ್ರೇರಣೆ ಕಾರ್ಯಕ್ರಮಕಕ್ಕೆ ಜನಪ್ರತಿನಿಧಿಗಳು. ಗಣ್ಯರು ಚಾಲನೆ ನೀಡಿ ಶುಭ ಹಾರೈಸಿದರು.

ಇನ್ನು ಪ್ರತಿಭಾ ಪ್ರೇರಣೆ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ 40 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೆಯೇ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇನ್ನು ಹಂಸ ಸಂಘಟನೆಯ 5ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತವಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.

ಇನ್ನು ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣರವರು. ಲೇಖಕರಾದ ಪ್ರೊ.ಕೃಷ್ಣೇಗೌಡ. ಬೆಂಗಳೂರು ಯಲಹಂಕ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ ಸ್ವಾಮೀಜಿ ವಿಧಾನ ಪರಿಷತ್ ಸದಸ್ಯರಾದ ರಾಮೋಜಿ ಗೌಡರು , ಪುಟ್ಟಣ್ಣ, ಕ್ಯಾಮ್ಸ್ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್, ಹಂಸ ಸಂಘಟನೆಯ ಅಧ್ಯಕ್ಷ ಎನ್. ಪ್ರಹ್ಲಾದ ಗೌಡ, ಗೌರವ ಅಧ್ಯಕ್ಷ ಚಂದ್ರಯ ನಾಯ್ಡು , ಪಳ್ಳಪ್ಪ ಯಾದವ್, ರವಿಕುಮಾರ್, ಪದಾಧಿಕಾರಿಗಳಾದ ಅಂಬರೀಷ್, ವಿಜಯಕುಮಾರ್ ಗೌಡ, ಯೋಗೇಶ್, ಶಿವಪ್ಪ, ಕಾಳಿನಾಥ್, ಭರತ್, ವಿನಯ್ ಬಾಬು, ಅನಂತರಾಜು, ನಾಗರಾಜ್, ಲೋಕೇಶ್, ಅಜಯ್, ಮಂಜುನಾಥ್, ಗೀತಾ ಮತ್ತು ಶಿಕ್ಷಕರು ಹಾಜರಿದ್ದರು.

15/07/2025

ಕೆಎಸ್.ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಶಕ್ತಿ ಯೋಜನೆ ಯಡಿಯಲ್ಲಿ ೫೦೦ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಯಾದ ಶಕ್ತಿ ಯೋಜನೆ ಯಡಿಯಲ್ಲಿ ೫೦೦ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಇಂದು ಆನೇಕಲ್ ಪಟ್ಟಣದಲ್ಲಿರುವ ಕೆಎಸ್. ಆರ್ ಟಿಸಿ ಬಸ್ ನಿಲ್ದಾಣದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಸಂಭ್ರಮದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಆನೇಕಲ್ ಕ್ಷೇತ್ರದ ಶಾಸಕರಾದ ಬಿ.ಶಿವಣ್ಣ ರವರು ೫೦೦ನೇ ಕೋಟಿಯ ಟಿಕೆಟನ್ನು ಮಹಿಳೆಯರಿಗೆ ಸಾಂಕೇತಿಕವಾಗಿ ಉಚಿತವಾಗಿ ವಿತರಣೆ ಮಾಡಿದರು.

ಇನ್ನು ಇದೇ ಸಂದರ್ಭದಲ್ಲಿ ಆನೇಕಲ್ ಕ್ಷೇತ್ರದ ಶಾಸಕರಾದ ಬಿ.ಶಿವಣ್ಣ ರವರ ವರ‍್ಸ್ ಕಾಲೋನಿಯ ವಾರ್ಡ್ ನಂಬರ್ ೧೭ ರಲ್ಲಿ ಆಯೋಜಿಸಿದ್ದ ಅಣ್ಣಮ್ಮ ದೇವಿ. ಶ್ರೀ ಚೌಡೇಶ್ವರಿ ದೇವಿ. ಶ್ರೀ ಮಾರಮ್ಮ ದೇವಿ ಮತ್ತು ಸೌರಮ್ಮದೇವಿಯ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಇನ್ನು ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ಪುರುಷೋತ್ತಮ್ ರೆಡ್ಡಿ. ಆನೇಕಲ್ ಪುರಸಭೆ ಅಧ್ಯಕ್ಷ ಶ್ರೀಮತಿ ಸುಧಾ ನಿರಂಜನ್. ಉಪಾಧ್ಯಕ್ಷರಾದ ಶ್ರೀಮತಿ ಭವಾನಾ ದಿನೇಶ್. ಸ್ಥಾಯಿ ಸಮಿತಿ ಅಧ್ಯಕ್ಷ ಮುನಾವರ್. ಪುರಸಭೆ ಸದಸ್ಯರಾದ ಪದ್ಮನಾಭ ಗೌಡ. ಶ್ರೀಮತಿ ಕವಿತಾ ಅಶ್ವಥ್ ನಾರಾಯಣ್. ರಾಜೇಂದ್ರ ಪ್ರಸಾದ್. ಆನೇಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ. ಕೆಎಸ್ ಆರ್ ಟಿಸಿ ಮಹಿಳಾ ರಾಜ್ಯ ಅಧ್ಯಕ್ಷರಾದ ಸುಲೋಚನ, ಆನೇಕಲ್ ಘಟಕ ವ್ಯವಸ್ಥಾಪಕರಾದ ಬೇಬಿ ಬಾಯ್. ಎ ಟಿ.ಐ ಉಜ್ವಾಲ. ಹೇಮಾವತಿ , ರಾಜಶೇಖರ್, ಶ್ರೀನಿವಾಸ್. ವತ್ಸಲಾ, ಬಾಲಿ ರೆಡ್ಡಿ, ಇಬ್ರಾಹಿಂ, ಟಿ.ಸಿ ಕುಮಾರ್, ಟಿ.ಸಿ ದೇವರಾಜ್ ,ಸುಮ , ಕೋಮಲಾ ,ಕೆ.ಎಸ್ ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಭಾಗವಹಿಸಿದ

15/07/2025

ಭ್ರಷ್ಠ ಅದಿಕಾರಿಗಳ ದೋರಣೆಯನ್ನು ಖಂಡಿಸಿ ಹೋರಾಟಗಾರರಾದ ಕೆ.ಎನ್.ಬ್ಯಾಟ್‌ರಾಜ್ ಮತ್ತು ಚೇತನ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ

ಸರ್ಕಾರಿ ಭೂಮಿಗಳನ್ನು ಬಲಾಡ್ಯರು ಕಬಳಿಸುತ್ತಿದ್ದರು ಕಣ್ಣು ಮುಚ್ಚಿ ಕುಳಿತಿರುವ ತಾಲ್ಲೂಕಿನ ಭ್ರಷ್ಠ ಅದಿಕಾರಿಗಳ ದೋರಣೆಯನ್ನು ಖಂಡಿಸಿ ಹಾಗೂ ಐದು ವರ್ಷ ಮೇಲ್ಪಟ್ಟು ಕಾರ್ಯ ನಿರ್ವಹಿಸುತ್ತಿರುವ ಅದಿಕಾರಿಗಳನ್ನು ಈ ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರ ವನ್ನು ಒತ್ತಾಯಿಸಿ ಇಂದು ಬಾರತೀಯ ಬೀಮ ಸೇನೆ (ಕರ್ನಾಟಕ) ಹಾಗೂ ಬಹುಜನ ಭಾಗ್ಯ ವಿದಾತ ವೇದಿಕೆ ರಾಜ್ಯ ಸಮಿತಿ ವತಿಯಿಂದ ಆನೇಕಲ್ ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇನ್ನು ಪ್ರತಿಭಟನಾಕಾರರು ಭ್ರಷ್ಠ ಅದಿಕಾರಿಗಳ ವಿರುದ್ದ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಇನ್ನು ಪ್ರತಿಭಟನೆಯ ನೇತೃತ್ವವನ್ನು ಬಾರತೀಯ ಬೀಮ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಎನ್. ಬ್ಯಾಟ್ ರಾಜ್ ರವರು ಮತ್ತು ಬಹುಜನ ಭಾಗ್ಯ ವಿದಾತ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಚೇತನ್ ಕುಮಾರ್ ರವರು ವಹಿಸಿದ್ದರು.

ಇನ್ನು ಪ್ರತಿಭಟನೆಯಲ್ಲಿ ಬಹು ಜನ ಬಾಗ್ಯ ವಿದಾತ ವೇದಿಕೆಯ ಮಹಿಳಾ ಘಟಕದ ರಾಜ್ಯಾದ್ಯಕ್ಷೆ ಪದ್ಮ ರವರು, ಬಾರತೀಯ ಬೀಮ ಸೇನೆಯ ಮಹಿಳಾ ಘಟಕದ ಗೌರವ ಅಧ್ಯಕ್ಷರಾದ ಬಾರತಮ್ಮ. ಹೋರಾಟಗಾರರಾದ ಪ್ರದೀಪ್ ಚಾಲುಕ್ಯ. ಎಂ.ರಾಕೇಶ್. ಎಸ್.ಉಮೇಶ್. ಮೋಹನ್ ಕುಮಾರ್. ಅವಿನಾಶ್. ರಾಜಪ್ಪ. ಸುಶೀಲಮ್ಮ, ಮಂಗಳ ಗೌರಿ. ಗೌತಮ್ ವೆಂಕಿ. ಅಶ್ವಥ್, ಕ್ರಾಂತಿ ಗೋವಿಂದ್. ಮುನಿರಾಜು.
ಮತ್ತಿತರು ಹಾಜರಿದ್ದರು.

09/07/2025

ಧರ್ಮಸಾಗರ ವಿದ್ಯಾಸಂಸ್ಥೆಯ 2014-15ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

09/07/2025

ಶ್ರದ್ದಾಭಕ್ತಿಯಿಂದ ನೆರವೇರಿದ ಶ್ರೀ ಮುತ್ತುರಾಯಸ್ವಾಮಿ ಮತ್ತು ಶ್ರೀ ಲಷ್ಮೀ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವ

09/07/2025

ಜಾನಪದ ಕಲಾವಿದರಾದ ಹೆನ್ನಾಗರ ರಾಮಕೃಷ್ಣ ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ಥಿ ನೀಡಿ ಗೌರವಿಸಬೇಕು ಎಂದು ಆಗ್ರಹ

09/07/2025

ಚಂದಾಪುರ ಪುರಸಭೆಯಲ್ಲಿ ಒಂದೇ ಒಂದು ಅಕ್ರಮ ವಾಗಿದ್ದರೆ ದಾಖಲೆ ಕೊಡಿ- ಪುರಸಭೆ ಸದಸ್ಯ ಹೀಲಲಿಗೆ ಕೃಷ್ಣಾರೆಡ್ಡಿ

09/07/2025

ಬೃಂದಾವನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ವತಿಯಿಂದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು

2019ರಲ್ಲಿ ಪ್ರಾರಂಭಗೊoಡ ಬೃಂದಾವನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟವು ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕೌಶಲ್ಯ ತರಬೇತಿಗಳು ಮತ್ತು ಸ್ವಯಂ ಉದ್ಯೋಗಕ್ಕೆ ಸಂಬAದಿಸಿದ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಮಹಿಳೆಯರು ಸ್ವಯಂ ಉದ್ಯೋಗ ಮಾಡುವಂತೆ ಪ್ರೇರೇಪಣೆ ನೀಡುತ್ತಾ ಬರುತ್ತಿದ್ದು ಇಂದು ಕೂಡ ಆನೇಕಲ್ ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ಬೃಂದಾವನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ವತಿಯಿಂದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇನ್ನು ಬೃಂದಾವನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಸಂರ್ವಧನ ಸಂಸ್ಥೆ ಹಾಗೂ ಅಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
ಮತ್ತು ನೆರಳೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇನ್ನು ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕಕ್ಕೆ ಗಣ್ಯರು ಹಾಗೂ ಅತಿಥಿಗಳು ಚಾಲನೆ ನೀಡಿ ಶುಭ ಹಾರೈಸಿದರು.

ಇನ್ನು ಕಾರ್ಯಕ್ರಮದ ನೇತೃತ್ವವನ್ನು ಬೃಂದಾವನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಮಂಜುಳ ಕಾಂತರಾಜ್. ಕಾರ್ಯದರ್ಶಿಯಾದ ರೂಪಾ ಲೋಕೇಶ್ ಮತ್ತು
ಎನ್.ಆರ್.ಎಲ್ ಎಂ ನ ಮುಖ್ಯ ಪುಸ್ತಕ ಬರಗಾರರಾದ ಶ್ರೀಮತಿ ಸುನೀತಾ ಶಿವಶಂಕರ್ ರವರು ವಹಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ನೆರಳೂರು ಲೋಕೇಶ್. ನೆರಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳ ರಾಮಕೃಷ್ಣ. ಬಾಗ್ಯಮ್ಮ. ಸುಧಾ. ನಂದ ಲೋಕೇಶ್. ಓಬಿಎಲ್ ಎಪ್ ನ ವೈದ್ಯರಾದ ರೂಪಾ. ಅಂಕಿತಾ, ಎನ್.ಆರ್.ಎಲ್ ಎಂ ನ ತಾಲ್ಲೂಕು ಸಿಬ್ಬಂದಿಗಳಾದ ಸುಷ್ಮಾ, ಹೇಮ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಪ್ರಮೀಳ. ನಾಗಮಣಿ. ಶಶಿಕಲಾ. ಕೃಷಿ ಸಕಿಯಾದ ಕವಿತಾ ಮತ್ತು ಬೃಂದಾವನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಪದಾದಿಕಾರಿಗಳು ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.

07/07/2025

ಮಧ್ಯ ವರ್ಜನ ಸಮಿತಿಯ ಅಧ್ಯಕ್ಷರಾದ ಬಿದರಗುಪ್ಪೆ ಬಿ.ರಾಜೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಮಧ್ಯ ವರ್ಜನ ಶಿಬಿರದ ಕಾರ್ಯಕ್ರಮ
ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮದಲ್ಲಿರುವ ಶ್ರೀ ನಂಜುAಡೇಶ್ವರ ಗಾಯತ್ರಿ ಕಲ್ಯಾಣ ಮಂಟಪ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಬಿದರಗುಪ್ಪೆ ಗ್ರಾಮ ಪಂಚಾಯಿತಿ ಹಾಗೂ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಧ್ಯ ವರ್ಜನ ಶಿಬಿರದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಇನ್ನು ಮಧ್ಯ ವರ್ಜನ ಶಿಬಿರ ಕಾರ್ಯಕ್ರಮಕಕ್ಕೆ ಗಣ್ಯರು. ಜನಪ್ರತಿನಿಧಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ಯ ವರ್ಜನ ಸಮಿತಿಯ ಅಧ್ಯಕ್ಷರಾದ ಬಿದರಗುಪ್ಪೆ ಬಿ.ರಾಜೇಶ್ ಅವರು ವಹಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಜಿ ಅಂಜನಪ್ಪ. ಬಿದರಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅನುಪಮ ನಾರಾಯಣ್. ಯುವ ಮುಖಂಡರಾದ ಡಾ ಭಾರ್ಗವ ಶ್ರೀನಾಥ್ ರೆಡ್ಡಿ ರವರು. ಅತ್ತಿಬೆಲೆ ಸಂತೋಷ್ ರೆಡ್ಡಿ. ಡಾ|| ನಿರ್ಮಲ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ನಿರ್ದೇಶಕರಾದ ಉಮರಬ್ಬ. ಮತ್ತು ಸಾರ್ವಜನಿಕರು ಭಾಗವಹಿಸಿದರು

07/07/2025

ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ನ 2025 -26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಆನೇಕಲ್ ತಾಲ್ಲೂಕಿನ ಹಳೆ ಚಂದಾಪುರದಲ್ಲಿರುವ ಖಾಸಗಿ ಹೋಟೆಲ್ ಆವರಣದಲ್ಲಿ ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ನ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಇನ್ನು ಇನ್ನು ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ನ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್. ಕಾರ್ಯದರ್ಶಿಯಾಗಿ ದಿನೇಶ್. ಖಜಾಂಚಿ ಗೋಪಾಲ್ ರೆಡ್ಡಿ ಹಾಗೂ ಇತರೇ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.

ಇನ್ನು ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಲಯನ್ ಡಾ.ಪಿಆರ್‌ಎಸ್. ಚೇತನ್ ರವರು ಮಾತನಾಡಿ
ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ಸಂಸ್ಥೆಯು ನಿಸ್ವಾರ್ಥವಾಗಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಚಂದಾಪುರದಲ್ಲಿ ಮಾದರಿ ಕ್ಲಬ್ ಆಗಿದೆ ಎಂದರು. ಸಮಾಜದಲ್ಲಿನ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಲಯನ್ಸ್ ಕ್ಲಬ್ ವೇದಿಕೆಯಾಗಿದೆ. ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ದಂತ ಚಿಕಿತ್ಸೆ ತಪಾಸಣಾ ಶಿಬಿರ, ಉಚಿತ ನೇತ್ರ ಪೊರೆ ಶಸ್ತ್ರ ಚಿಕಿತ್ಸೆ, ಶಾಲಾ-ಕಾಲೇಜುಗಳಿಗೆ ಅಗತ್ಯ ಪರಿಕರಗಳನ್ನು ನೀಡುವುದು, ಅಂಗವಿಕಲರ ಶಾಲೆಗಳ ಅಭಿವೃದ್ಧಿಗೆ ಸಹಾಯ, ಬಡ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಲಯನ್ಸ್ ಸಂಸ್ಥೆಯು ಬೆಳಕಾಗುತ್ತಿದೆ ಎಂದು ಹೇಳಿದರು.

ಹಾಗೆಯೇ ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ನ ನೂತನ ಅಧ್ಯಕ್ಷರಾದ ಸಂತೋಷ್ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಈ ಹಿಂದೆ ನಡೆಸಿಕೊಂಡು ಬಂದAತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮುಂದುವರೆಸಿಕೊAಡು ಹೋಗುತ್ತೇವೆ. ಜೊತೆಗೆ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಮಾಜ ಸೇವೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗುವುದು ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ೨ನೇ ಉಪರಾಜ್ಯಪಾಲ ಡಾ. ಏನ್.ಟಿ. ರಂಗಾರೆಡ್ಡಿ, ಲಯನ್ ಸಿ.ವಿ.ಭಾನುಮೂರ್ತಿ ರೆಡ್ಡಿ, ಲಯನ್ ರೇಣುಕಾ ಪ್ರಕಾಶ್, ಲಯನ್ ಮಂಜುನಾಥ್. ಲಯನ್ ದೇವರಾಜ್ ನಾಯಕ್. ಲಯನ್ ಮಧು ರೆಡ್ಡಿ, ಸೋಮಶೇಖರ್ ರೆಡ್ಡಿ, ಲಯನ್ ಅರುಣ್ ಕುಮಾರ್, ಮಾಜಿ ಅಧ್ಯಕ್ಷರುಗಳು, ಕ್ಲಬ್ ನ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

02/07/2025

ವೈಟ್ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ೨೦೨೫-೨೬ ನೇ ಸಾಲಿನ ನಾಯಕತ್ವ ಜವಬ್ದಾರಿ ನೀಡುವ ಕಾರ್ಯಕ್ರಮವನ್ನು

02/07/2025

ಉಪ ವಿಭಾಗಾದಿಕಾರಿ ಅಪೂರ್ವ ಬಿದರಿರವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಜು.11ರಂದು ಬೃಹತ್ ಪೊರಕೆ ಮತ್ತು ಅರೆ ಬೆತ್ತಲೆ ಪ್ರತಿಭಟನೆ

ದಲಿತರ ಭೂಮಿಗಳಿಗೆ ಅಕ್ರಮ ಆದೇಶಗಳನ್ನು ಮಾಡಿರುವ ಉಪ ವಿಭಾಗಾದಿಕಾರಿ ಅಪೂರ್ವ ಬಿದರಿರವರನ್ನು ಮತ್ತು ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯ ನಾಯ್ಕ್ ರವರನ್ನು ಸೇವೆಯಿಂದ ವಜಾಗೊಳಿಸಿ ಇವರ ಅವದಿಯಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ನಿವೃತ್ತ ನ್ಯಾಯಾದೀಶರಿಂದ ಮರು ತನಿಖೆ ಮಾಡುವಂತೆ ಒತ್ತಾಯಿಸಿ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜುಲೈ 11 ರಂದು
ಆನೇಕಲ್ ಪಟ್ಟಣದಲ್ಲಿ ಬೃಹತ್ ಪೊರಕೆ ಮತ್ತು ಅರೆ ಬೆತ್ತಲೆ ಪ್ರತಿಭಟನೆ ಹಮ್ಮಿಕೊಂಡಿದ್ದು. ಇನ್ನು ವಿಶೇಷವಾಗಿ ಆನೇಕಲ್ ಪಟ್ಟಣ ಶಿವಾಜಿ ಸರ್ಕಲ್ ನಿಂದ ಆನೇಕಲ್ ತಾಲ್ಲೂಕು ಪಂಚಾಯಿತಿ ಕಚೇರಿವರೆಗೆ ಬೃಹತ್ ಕಾಲ್ನಡಿಗೆ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಕಾಲಕ್ಕೆ ತಾಲ್ಲೂಕಿನ ಜನತೆ ಮತ್ತು ಬೀ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭ್ರಷ್ಠ ಅದಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪದಾದಿಕಾರಿಗಳು ಚಂದಾಪುರದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ರಾವಣ. ಚಿಕ್ಕನಾಗಮಂಗಲ ವೆಂಕಟೇಶ್ ಗುರು. ವೆಂಕಟೇಶ್ ಮೂರ್ತಿ. ಆನಂದ್ ಚಕ್ರವರ್ತಿ, ಸುರೇಶ್ ಪೋತ. ತ್ರಿಪುರ ಸುಂದರಿ. ಗುಡ್ಟಹಟ್ಟಿ ರಾಮಸ್ವಾಮಿ. ಇಟ್ಟಂಗೂರು ಮಂಜು. ತಿರುಪಾಳ್ಯ ಮಂಜು. ಗೋವಿಂದರಾಜ್ ಮೌರ್ಯ. ಯಮರೆ ವೆಂಕಟಸ್ವಾಮಿ , ಬಿದರಗುಪ್ಪೆ ಶ್ರೀನಿವಾಸ್. ಹಂದೇನಹಳ್ಳಿ ಮುನಿಕೃಷ್ಣ. ಮುನಿರಾಜು ಮತ್ತಿತರು ಹಾಜರಿದ್ದರು.

Address

Bangalore

Website

Alerts

Be the first to know and let us send you an email when Vikas.Tv posts news and promotions. Your email address will not be used for any other purpose, and you can unsubscribe at any time.

Share

Category