Kahale - ಕಹಳೆ

Kahale - ಕಹಳೆ ರಾಷ್ಟ್ರಧರ್ಮದ ಕಹಳೆ - ಸಮಾಜದ ಏಳ್ಗೆಗಾಗಿ, ಒಳಿತಿಗಾಗಿ, ಅಭ್ಯುದಯಕ್ಕಾಗಿ...

ಕಿಡ್ನ್ಯಾಪ್ ಮತ್ತು ಮರ್ಡರ್!ಇಲ್ಲಿಗೆ ಬಂತು ನಿಂತಿದೆ ಲಾ ಆಂಡ್ ಆರ್ಡರ್.
01/08/2025

ಕಿಡ್ನ್ಯಾಪ್ ಮತ್ತು ಮರ್ಡರ್!

ಇಲ್ಲಿಗೆ ಬಂತು ನಿಂತಿದೆ ಲಾ ಆಂಡ್ ಆರ್ಡರ್.

ಸತ್ತ ಆರ್ಥಿಕತೆಯೆ? ಭಾರತ ಎಂದೂ ಇಲ್ಲದಷ್ಟು ಉತ್ತಮವಾದ ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ ಮತ್ತು ಜಗತ್ತನ್ನು ಮುನ್ನಡೆಸುತ್ತಿದೆ 🇮🇳✅ ಸುಮಾರು $4...
31/07/2025

ಸತ್ತ ಆರ್ಥಿಕತೆಯೆ?
ಭಾರತ ಎಂದೂ ಇಲ್ಲದಷ್ಟು ಉತ್ತಮವಾದ ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ ಮತ್ತು ಜಗತ್ತನ್ನು ಮುನ್ನಡೆಸುತ್ತಿದೆ 🇮🇳

✅ ಸುಮಾರು $4 ಟ್ರಿಲಿಯನ್ ಡಾಲರ್ ಆರ್ಥಿಕತೆ, ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ.
✅ $650+ ಬಿಲಿಯನ್ ಫಾರೆಕ್ಸ್ ಸಂಗ್ರಹ, ಜಗತ್ತಿನಲ್ಲಿ ಮೂರನೇ ಸ್ಥಾನ.
✅ ₹34 ಲಕ್ಷ ಕೋಟಿ ಡಿಬಿಟಿ ಮೂಲಕ 50+ ಕೋಟಿ ನಾಗರಿಕರಿಗೆ.
✅ ₹11 ಲಕ್ಷ ಕೋಟಿ ಕ್ಯಾಪೆಕ್ಸ್ ಆಧಾರ ಸೌಲಭ್ಯಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಶಕ್ತಿ ನೀಡುತ್ತಿದೆ
✅ದಾಖಲೆಯ ರಸ್ತೆಗಳು, ವಿಮಾನನಿಲ್ದಾಣಗಳು, ಮೆಟ್ರೋಗಳು ನಿರ್ಮಾಣವಾಗಿವೆ
✅13.5 ಕೋಟಿ ಉದ್ಯೋಗಗಳು ಆಧಾರ, ಸ್ಟಾರ್ಟ್‌ಅಪ್‌ಗಳು ಮತ್ತು MSMEಗಳ ಮೂಲಕ
✅ ಪ್ರತಿ ತಿಂಗಳು 14+ ಬಿಲಿಯನ್ ಯುಪಿಐ ವ್ಯವಹಾರ
✅ $53 ಬಿಲಿಯನ್ ಕೃಷಿ ರಫ್ತು, ಎಲ್ಲಾ ಕಾಲದ ಅತ್ಯಧಿಕ
✅ ಸೇವೆಗಳ ರಫ್ತು ದಾಖಲೆ ಮಟ್ಟದಲ್ಲಿ

ಇದು "ಮರಣಗೊಂಡ ಆರ್ಥಿಕತೆಯ" ಚಿತ್ರವೇ?

ರಾಷ್ಟ್ರವನ್ನು ದಿನವಿಡೀ ತೆಗಳೋದು,
ಚುನಾವಣೆಯಲ್ಲಿ ಸೋತಾಗ ಒಂದು ದಿನ EVM ಮತ್ತು ಮತ್ತೊಂದು ದಿನ ಮತದಾರರ ಪಟ್ಟಿಯ ಮೇಲೆ ಕಣ್ಣೀರು ಸುರಿಸುವುದು...

ಅತ್ಯುತ್ತಮ ಜೋಕರ್ 🤡

ಕಳೆದ ವರ್ಷ ಭಾರತವು ಅತ್ಯಧಿಕ ಬೆಳವಣಿಗೆ ಕಂಡ ಕ್ಷೇತ್ರಗಳು,GST ಸಂಗ್ರಹಣೆ - $270 ಬಿಲಿಯನ್; ವಾಹನ ಮಾರಾಟ - 25 ಮಿಲಿಯನ್; ತೆರಿಗೆದಾರರು - 104...
31/07/2025

ಕಳೆದ ವರ್ಷ ಭಾರತವು ಅತ್ಯಧಿಕ ಬೆಳವಣಿಗೆ ಕಂಡ ಕ್ಷೇತ್ರಗಳು,

GST ಸಂಗ್ರಹಣೆ - $270 ಬಿಲಿಯನ್;
ವಾಹನ ಮಾರಾಟ - 25 ಮಿಲಿಯನ್;
ತೆರಿಗೆದಾರರು - 104 ಮಿಲಿಯನ್;
ಉತ್ಪಾದನಾ PMI - 59.2;
ರಫ್ತು - $825 ಬಿಲಿಯನ್;
ಸೃಷ್ಟಿಸಲಾದ ಉದ್ಯೋಗಗಳು - 46 ಮಿಲಿಯನ್;
ವಿದೇಶಿ ವಿನಿಮಯ ಶೇಖರ - $704 ಬಿಲಿಯನ್;
ಸೆನ್ಸೆಕ್ಸ್ - 85,900.
ಭಾರತ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆ.

ಇವು ಸತ್ತ ಆರ್ಥಿಕತೆಯ ಕಥೆ ಹೇಳುತ್ತಿರುವ ಕುರುಹುಗಳು!

ಪಹಲ್ಗಾಮ್ ನಲ್ಲಿ ಹಿಂದೂಗಳ ನರಸಂಹಾರ ಮಾಡಿದ ಉಗ್ರರನ್ನು ಬೇಟೆಯಾಡಲು ಭಾರತೀಯ ಸೇನೆ, ಇಂಟೆಲಿಜೆನ್ಸ್ ಬ್ಯೂರೊ, R&AW, , ರಾಷ್ಟ್ರೀಯ ರೈಫಲ್ ವಿಶೇಷ...
31/07/2025

ಪಹಲ್ಗಾಮ್ ನಲ್ಲಿ ಹಿಂದೂಗಳ ನರಸಂಹಾರ ಮಾಡಿದ ಉಗ್ರರನ್ನು ಬೇಟೆಯಾಡಲು ಭಾರತೀಯ ಸೇನೆ, ಇಂಟೆಲಿಜೆನ್ಸ್ ಬ್ಯೂರೊ, R&AW, , ರಾಷ್ಟ್ರೀಯ ರೈಫಲ್ ವಿಶೇಷ ಪ್ಯಾರಾ ಕಮಾಂಡೋಗಳು ಕಾಶ್ಮೀರದ ಕಣಿವೆಯಲ್ಲಿ ಹುಡುಕದ ಜಾಗವೇ ಇರಲಿಲ್ಲ. ಆದರೂ ಅವರು ಅವಿತಿರುವ ಜಾಗದ ಕುರಿತು ಒಂದು ಸಣ್ಣ ಎಳೆ ಕೂಡ ಸಿಕ್ಕಿರಲಿಲ್ಲ.
ಗುಪ್ತಚರ ಇಲಾಖೆ ಹಣದ ಥೈಲಿ ಹಿಡಿದು ಹೊರಟರೂ ಯಾರೂ ಉಗ್ರರ ಕುರಿತು ಸುಳಿವು ನೀಡಿರಲಿಲ್ಲ.

ಆಪರೇಶನ್ ಮಹಾದೇವ್ ನಲ್ಲಿ ಪಹಲ್ಗಾಮ್ ದಾಳಿಯಲ್ಲಿ ಶಾಮೀಲಾಗಿದ್ದ ಎಲ್ಲಾ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಸಂಹರಿಸಿವೆ.

ಹಾಗಾದ್ರೆ, ಉಗ್ರರ ಇರುವಿಕೆ ಸುಳಿವು ಹೇಗೆ ದೊರೆಯಿತು, ಹೆಜ್ಜೆಗುರುತಾ? ಅಥವಾ ಗುಂಡಿನ ಶಬ್ದ? ಅಥವಾ ಲೋಕಲ್ ಖಬರಿಗಳ ಟಿಪ್ ಆಫ್? ಊಹೂಂ ಇದ್ಯಾವುದು ಅಲ್ಲ.

NTRO ತಾಂತ್ರಿಕ ಇಂಟೆಲಿಜೆನ್ಸ್ ಘಟಕ ಡಾಟಾ ಹೊಯ್ದಾಟದ ಜಾಡು ಹಿಡಿದು ಉಗ್ರರ ಪತ್ತೆಹಚ್ಚಿದೆ.

ಡಿಜಿಟಲ್ ಹೆಜ್ಜೆಗುರುತು ಹಾಗೂ ಡಿಜಿಟಲ್ ಎಕ್ಸ್ಪೋಸರ್ ಆಪರೇಶನ್ ಮಹಾದೇವಗೆ ನಾಂದಿ ಹಾಡಿದೆ.
ಜುಲೈ 11 ರಂದು ಪತ್ತೆಯಾದ ಒಂದು ಕಾಡಿನಲ್ಲಿ ಕಾಣಸಿಗದ ಒಂದು ಭಿನ್ನ ರೀತಿಯ ಸಿಗ್ನಲ್ ಗುಪ್ತಚರ ವಿಭಾಗದ ನಿದ್ದೆ ಗೆಡಿಸಿತ್ತು.

ಕಾಡಿನಲ್ಲಿ ಅಡಗಿದ ಉಗ್ರರು ತಮ್ಮ ಹ್ಯಾಂಡ್ಲರ್ಸ್ ಜೊತೆ ಸಂಪರ್ಕ ಸಾಧಿಸಲು ಅತ್ಯಾಧುನಿಕ ಸ್ಯಾಟಲೈಟ್ ಉಪಕರಣ ಬಳಸುತ್ತಿದ್ರು, ಅದು ಭಾರತದ ಮೊಬೈಲ್ ನೆಟ್ವರ್ಕ್ ಬಳಸದೇ ರೇಡಿಯೋ ಫ್ರೀಕ್ವೆನ್ಸಿ ಬಳಸಿ ಸನಿಹದಲ್ಲಿರುವ ಮತ್ತೊಂದು ಉಪಕರಣದ ಜೊತೆ ಸಂಪರ್ಕ ಸಾಧಿಸಿ ಸ್ಯಾಟಲೈಟ್ ಮೂಲಕ ಕ್ಲಿಷ್ಟವಾಗಿ ಗುಪ್ತ ಸಂದೇಶ ರವಾನೆ ಮಾಡ್ತಿತ್ತು ಹೀಗಾಗಿ ಮಿಲಿಟರಿ ಸಿಗ್ನಲ್ ಇಂಟೆಲಿಜೆನ್ಸ್ ಅನ್ನು ಬೈಪಾಸ್ ಮಾಡಿದ್ದರು.

ಚೀನಿ ಹುವಾವೇ ಕಂಪನಿಯ ಸ್ಮಾರ್ಟ್ ಫೋನ್ ನಲ್ಲಿ ಸ್ಯಾಟಲೈಟ್ ಸಂಪರ್ಕ ಕ್ಷಮತೆಯ ಚಿಪ್ ಇರುತ್ತೆ, ಅದು ಚೀನಿ Tiantong - 1 ನೆಟ್ವರ್ಕ್ ಕನೆಕ್ಟ್ ಆಗಲು ಸ್ಥಳೀಯ ಟವರ್ ಅಥವಾ ಸಿಮ್ ಕಾರ್ಡ್ ಬಳಸುವುದಿಲ್ಲ. ಈ ಫೋನ್ ಗಳು ಸಾಮಾನ್ಯ ಆಂಡ್ರಾಯ್ಡ್ ಫೋನ್ ನಂತೆ ಕಾಣುತ್ತವೆ ಆದರೆ ಗುಪ್ತ ಸಂದೇಶ ಕಳಿಸಲು ಹಾಗೂ ಸಿಗ್ನಲ್ ಕಣ್ಗಾವಲು ವ್ಯವಸ್ಥೆ ಬೇಧಿಸಲು ಇದನ್ನು ಬಳಸಬಹುದು.

ಆಪರೇಶನ್ ಮಹಾದೇವ್ ನಲ್ಲಿ ಭಾರತದ ತಾಂತ್ರಿಕ ನೈಪುಣ್ಯತೆ ಮತ್ತೊಮ್ಮೆ ಸಾಬೀತಾಗಿದೆ. ಚೀನಿ ಸ್ಪೆಕ್ಟ್ರಮ್ ಈಗ ಎಕ್ಸ್ಪೋಸ್ ಆಗಿದೆ, NTRO ಹಿಂದಿರುವ ಇಸ್ರೋ ತಂತ್ರಜ್ಞಾನ ಚೀನೀಯರನ್ನು ಬೆಚ್ಚಿ ಬೀಳಿಸಿದೆ... ಅತ್ತ ಅಮೇರಿಕ ಕೂಡ ಈ ಬೆಳವಣಿಗೆಗಳಿಂದ ಚಿಂತಾಕ್ರಾಂತವಾಗಿರುತ್ತೆ ಯಾಕಂದ್ರೆ ಅವರ ಕಮ್ಯುನಿಕೇಶನ್ ಕೂಡ ಈಗ ಸೇಫಲ್ಲ!!

ಪ್ರತಿ ಆಪರೇಶನ್ ನಲ್ಲಿ ಭಾರತ ಒಂದು ದೈತ್ಯ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮುತ್ತಿದೆ...

ಇದು ರಾಷ್ಟ್ರಭಕ್ತರಿಗೆ ಖುಷಿಯನ್ನುಂಟು ಮಾಡಿದ್ರೆ, ಪಾಕ್ ಪ್ರೇಮಿಗಳು ಆಪರೇಶನ್ ಮಹಾದೇವ್ ನಡೆದ ಸಮಯ ಮತ್ತು "ಮಹಾದೇವ್" ಹೆಸರನ್ನೇ ಪ್ರಶ್ನಿಸುವಂತೆ ಮಾಡಿದೆ ಹಾಗೂ ಅವರ ಓಟ್ ಬ್ಯಾಂಕ್ ಪ್ರೇಮ ಬಹಿರಂಗ ಪಡಿಸಿದೆ.

ಭಾರತ್ ಮಾತಾ ಕೀ ಜಯ್ 🚩

30/07/2025

ನಾಗರ ಪಂಚಮಿಯಂದು ಶಿವಲಿಂಗವೇರಿದ ನಾಗರ ಹಾವು, ತನ್ನೊಡೆಯನ ಕೊರಳ ಬಳಸಿ ತಾನಿರಬೇಕಾದ ಸರಿಯಾದ ಸ್ಥಳ ಸೇರಿದ ನಾಗಪ್ಪ, ಈಶ್ವರಲಿಂಗದ ಚೈತನ್ಯದ ಅನುಭೂತಿ ಪಡೆಯುತ್ತಿದೆ 🙏

27/07/2025

ಇದು ಗುಜರಾತಲ್ಲ
ಇದು ಉತ್ತರ ಪ್ರದೇಶವಲ್ಲ
ಇದು ರಾಜಸ್ತಾನವಲ್ಲ
ಯಾವುದೇ ಉತ್ತರ ಭಾರತದ ರಾಜ್ಯವಲ್ಲ

ಪ್ರಧಾನಿ ಮೋದಿಗೆ ತಮಿಳುನಾಡಿನಲ್ಲಿ ಅಭೂತಪೂರ್ವ ಸ್ಪಂದನೆ...

ದೇವರೇ, ಮೋದಿಗೆ ಜನ ತೋರಿಸುತ್ತಿರುವ ಬೆಂಬಲ, ಪ್ರೀತಿ ಮತಗಳಾಗಿ ಪರಿವರ್ತನೆ ಆಗಲಿ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡ್ತೀನಿ ಅಂದವರು ಸರ್ವನಾಶವಾಗಲಿ !!

27/07/2025

ರೊಕ್ಕಾ ಮಾತಾಡೋವಾಗ
ವ್ಯಾಕರಣ ಯಾರೂ ಗಮನಿಸೋದಿಲ್ಲ !

ಪ್ರಧಾನಿ ನರೇಂದ್ರ ಮೋದಿಯವರ ಒಂದು ಐತಿಹಾಸಿಕ ಮೈಲಿಗಲ್ಲು.ತುರ್ತುಕಾಲ ಹೇರದೇ, ಪ್ರಜಾಪ್ರಭುತ್ವವನ್ನು ಕೊಲೆಗೈಯ್ಯದೆ,ನಿನ್ನೆ ಭಾರತದ ಪ್ರಧಾನಿಯಾಗಿ...
26/07/2025

ಪ್ರಧಾನಿ ನರೇಂದ್ರ ಮೋದಿಯವರ ಒಂದು ಐತಿಹಾಸಿಕ ಮೈಲಿಗಲ್ಲು.

ತುರ್ತುಕಾಲ ಹೇರದೇ, ಪ್ರಜಾಪ್ರಭುತ್ವವನ್ನು ಕೊಲೆಗೈಯ್ಯದೆ,

ನಿನ್ನೆ ಭಾರತದ ಪ್ರಧಾನಿಯಾಗಿ ಮೋದಿ (ಜುಲೈ 25, 2025) 4,078 ದಿನಗಳನ್ನು ಪೂರೈಸಿದ್ದಾರೆ.

ಇದು ಇಂದಿರಾ ಗಾಂಧಿಯ 4077 ದಿನದಗಳ ವರೆಗೆ ಪ್ರಧಾನಿಯಾದ ದಾಖಲೆ ಮುರಿದಂತಾಗಿದೆ.

ಇದು ಒಂದು ಅವಿರತವಾದ ಆಡಳಿತದ ದಾಖಲೆಯಾಗಿದ್ದು, ಭಾರತದ ಚುನಾವಣಾತ್ಮಕ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಿದೆ.

ಆದರೆ ಇದು ಪ್ರಧಾನಿ ಮೋದಿ ಅವರ 24 ವರ್ಷಗಳ ಚುನಾವಣಾತ್ಮಕ ಆಡಳಿತ ಜೈತ್ರ ಯಾತ್ರೆಯ ಕೇವಲ ಒಂದು ಮಜಲು ಮಾತ್ರ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಪ್ರಜಾಸತ್ತಾತ್ಮಕವಾಗಿ ಆಡಳಿತ ಚುಕ್ಕಾಣಿ ಹಿಡಿದ ನಾಯಕರಲ್ಲಿ ಅವರು ಅತ್ಯಂತ ದೀರ್ಘವಾದ ಕಾಲಾವಧಿಯಲ್ಲಿ ಸರ್ಕಾರದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರ ದಾಖಲೆಗಳ ಸಾರಾಂಶ:

* ಭಾರತ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಮತ್ತು ಏಕೈಕ ಪ್ರಧಾನಿ.
*ಅತ್ಯಂತ ಧೀರ್ಘ ಕಾಲಾವಧಿ ಹೊಂದಿರುವ ಕಾಂಗ್ರೆಸ್ಸೇತರ ಪ್ರಧಾನಿ
*ಹಿಂದಿ ಭಾಷೆಯಲ್ಲದ ರಾಜ್ಯದಿಂದ ಆಯ್ಕೆಯಾದ ಅತ್ಯಂತ ಧೀರ್ಘ ಕಾಲಾವಧಿ ಪ್ರಧಾನಿ
*ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡರಲ್ಲಿ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿದ ಏಕೈಕ ನಾಯಕ.
*ಎರಡು ಪೂರ್ಣ ಕಾಲಾವಧಿಗಳನ್ನು ಪೂರೈಸಿದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ
*ಎರಡು ಬಾರಿ ಪುನರಾಯ್ಕೆಯಾದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ
*ತಮ್ಮದೇ ಆದ ಬಹುಮತದಿಂದ ಲೋಕಸಭೆಯಲ್ಲಿ ಗೆದ್ದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ನಾಯಕ
*ನೆಹರು ಅವರ ನಂತರ ಮೂರು ಸತತ ರಾಷ್ಟ್ರೀಯ ಚುನಾವಣೆಗಳಲ್ಲಿ ಗೆದ್ದ ಏಕೈಕ ಪ್ರಧಾನಿ.
*ಒಂದು ಪಕ್ಷದ ನಾಯಕನಾಗಿ ಸತತ ಆರು ಚುನಾವಣೆಗಳಲ್ಲಿ ಗೆದ್ದ ಏಕೈಕ ನಾಯಕ:
2002 ಗುಜರಾತ್
2007 ಗುಜರಾತ್
2012 ಗುಜರಾತ್
2014 ಲೋಕಸಭೆ
2019 ಲೋಕಸಭೆ
2024 ಲೋಕಸಭೆ

ಮೋದಿಯವರ ಈ ಚುನಾವಣಾ ಜೈತ್ರಯಾತ್ರೆ ಸ್ಥಿರತೆ, ನಿರಂತರತೆ ಮತ್ತು ಜನರ ನಂಬಿಕೆಯ ಪ್ರತೀಕವಾಗಿದೆ.
ನಿಜಕ್ಕೂ, ಐತಿಹಾಸಿಕ ಪ್ರಾಮಾಣ್ಯದ ನಾಯಕ.

  All Gave SomeSome Gave All कोई सिख, कोई जाट मराठा, कोई गुरखा, कोई मदरासीसरहद पर मरनेवाला, हर वीर था भारतवासीजो खून गिर...
26/07/2025



All Gave Some
Some Gave All

कोई सिख, कोई जाट मराठा, कोई गुरखा, कोई मदरासी
सरहद पर मरनेवाला, हर वीर था भारतवासी
जो खून गिरा पर्वत पर, वो खून था हिंदुस्तानी
जो शहीद हुए हैं उनकी, ज़रा याद करो क़ुरबानी !

ಭಾರತ್ ಮಾತಾ ಕೀ ಜಯ್ 🚩
ಜೈ ಹಿಂದ್ 🇮🇳

26/07/2025

"ವಿಶ್ವರೂಪ ಅಂಜಲಿ ವರದ ಆಂಜನೇಯರ" ದಿವ್ಯ ದರ್ಶನ.

ದಿಂಡಿಗಲ್ ಬಳಿ ಇರುವ ಚಿನ್ನಾಲಪಟ್ಟಿಯಲ್ಲಿದೆ ಈ ರಾಮಭಕ್ತ ಹನುಮನ ದೇವಾಲಯ.

ನೇಪಾಳದ ಗಂಡಕಿ ನದಿಯಿಂದ ತಂದ ಸಾಲಿಗ್ರಾಮ ಸ್ಪಟಿಕ ಶಿಲೆಯಲ್ಲಿ 16 ಅಡಿ ಎತ್ತರವಿರುವ ಏಕಶಿಲಾ ಆಂಜನೇಯನ ಮೂರ್ತಿ ಕೆತ್ತಲಾಗಿದೆಯಂತೆ.

ತಮಿಳು ಪುರಟ್ಟಾಸಿ ತಿಂಗಳಲ್ಲಿ ಪ್ರತೀ ಶನಿವಾರ ಮಾರುತಿಗೆ ವಿಶೇಷವಾದ ಅಲಂಕಾರ ಮಾಡ್ತಾರಂತೆ.

ಜಯ ಶ್ರೀರಾಮ್ 🚩

ಕೊನೆಗೂ ಸುಪ್ರೀಂಕೋರ್ಟ್ "ಉದಯಪುರ ಫೈಲ್ಸ್" ಮೇಲಿನ ನಿರ್ಭಂದ ತೆರವುಗೊಳಿಸಿದೆ.ವಿಚಿತ್ರ ಅಂದ್ರೆ ಅವ್ರು ಹಾಡುಹಗಲೇ ಬರ್ಬರವಾಗಿ ಹಿಂದೂಗಳ ಹತ್ಯೆ ಮ...
25/07/2025

ಕೊನೆಗೂ ಸುಪ್ರೀಂಕೋರ್ಟ್ "ಉದಯಪುರ ಫೈಲ್ಸ್" ಮೇಲಿನ ನಿರ್ಭಂದ ತೆರವುಗೊಳಿಸಿದೆ.

ವಿಚಿತ್ರ ಅಂದ್ರೆ ಅವ್ರು ಹಾಡುಹಗಲೇ ಬರ್ಬರವಾಗಿ ಹಿಂದೂಗಳ ಹತ್ಯೆ ಮಾಡಬಹುದು ಆದ್ರೆ ನಾವು ಅದರ ಕುರಿತು ಮಾತನಾಡಬಾರದು.
ಅವ್ರು ಕೊಂದಾಗ ಹಾಳಾಗದ ಸಾಮಾಜಿಕ ಸಾಮರಸ್ಯ ನಾವು ಸತ್ಯ ಹೇಳಿದ್ರೆ ಹಾಳಾಗುತ್ತಂತೆ, ಇಲ್ಲಿಗೆ ಬಂದು ನಿಂತಿದೆ ಈ ಸೋ ಕಾಲ್ಡ್ ಸೆಕ್ಯುಲರಿಸಂ !

ನಾವೆಲ್ಲ ಚಿತ್ರ ಟಾಕೀಸ್ ನಲ್ಲಿಯೇ ನೋಡೋಣ !!

Address

Bangalore

Alerts

Be the first to know and let us send you an email when Kahale - ಕಹಳೆ posts news and promotions. Your email address will not be used for any other purpose, and you can unsubscribe at any time.

Share