06/06/2026
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರ ಜೀವನಾಧಾರಿತ ಹಿಂದಿ ನಾಟಕ 'ಯುಗ ಪ್ರವರ್ತಕ ಡಾ. ಹೆಡಗೇವಾರ್' ಇಂದು ಜೂನ್ 6, 2026 ಶನಿವಾರ ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರದರ್ಶಿತವಾಯಿತು. ನಾಗ್ಪುರದ ರವೀಂದ್ರ ಸಹಸ್ರಬುದ್ಧೆ ನೇತೃತ್ವದ ನಾದಬ್ರಹ್ಮ ತಂಡವು ಪ್ರಸ್ತುತಪಡಿಸಿದ ಈ ನಾಟಕವು ಜನಮನ್ನಣೆಗೆ ಪಾತ್ರವಾಯಿತು. ಹಿರಿಯ ಕಲಾವಿದ ಸತೀಶ್ ಕೆಖಾಳೆಯವರು ಡಾ॥ ಹೆಡಗೇವಾರರ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸಿದರು. 500ಕ್ಕೂ ಹೆಚ್ಚು ಸಭಾಸದರು ನಾಟಕ ವೀಕ್ಷಿಸಿದರು.
ಜೂನ್ 7, 2026 ಭಾನುವಾರ ಸಂಜೆ 5:00ಕ್ಕೆ ಕಾಡುಬೀಸನಹಳ್ಳಿಯ ಕಾವೇರಪ್ಪ ಲೇಔಟ್ ನಲ್ಲಿರುವ ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಯುಗಪ್ರವರ್ತಕ ಡಾ॥ ಹೆಡಗೇವಾರ್ ನಾಟಕ ಪ್ರದರ್ಶನ ನಡೆಯಲಿದೆ.