Anchor Venky

Anchor Venky A TV Anchor & Newspaper Publisher by Profession. I just live by my name- Venky- which means connecti
(1)

27/05/2026

ಪಂಚಗಂಗಾ ಲೋಕಲ್ ರೈಲು ಇವತ್ತು ಎರಡುವರೆ ಗಂಟೆ ಲೇಟ್ ಮರ್ರೆ...

ಎಂತಾ ಅವಸ್ಥೆ..

25/05/2026

ಶುಭ ಸೋಮವಾರ 🙏. #ಸರ್ವಂಶಿವಂಕಲ್ಪಮಸ್ತು

ನೀವು ಬಳಸಿದ ಮೊದಲ ಮೊಬೈಲ್ ಸಿಮ್ ಕಾರ್ಡ್ ಯಾವ ಕಂಪೆನಿಯದ್ದು ??ನಾನು ಬಳಸಿದ ಸಿಮ್ Airtel India (2005 ರಲ್ಲಿ)
23/05/2026

ನೀವು ಬಳಸಿದ ಮೊದಲ ಮೊಬೈಲ್ ಸಿಮ್ ಕಾರ್ಡ್ ಯಾವ ಕಂಪೆನಿಯದ್ದು ??

ನಾನು ಬಳಸಿದ ಸಿಮ್ Airtel India (2005 ರಲ್ಲಿ)

🎉 Facebook recognized me as a consistent post creator this week!
21/05/2026

🎉 Facebook recognized me as a consistent post creator this week!

ನೆಮ್ಮದಿಯಿಂದ ಊಟ ಮಾಡುವುದಕ್ಕಾದ್ರೂ ಬಿಡ್ರೋ....ಇತ್ತೀಚಿನ ದಿನಗಳಲ್ಲಿ ಮದುವೆ ಮುಂತಾದ ಸಮಾರಂಭಗಳಲ್ಲಿ ಊಟದ ವ್ಯವಸ್ಥೆ ಅತ್ಯಂತ ಯಾತನಾತ್ಮಕವೂ, ನ...
17/05/2026

ನೆಮ್ಮದಿಯಿಂದ ಊಟ ಮಾಡುವುದಕ್ಕಾದ್ರೂ ಬಿಡ್ರೋ....

ಇತ್ತೀಚಿನ ದಿನಗಳಲ್ಲಿ ಮದುವೆ ಮುಂತಾದ ಸಮಾರಂಭಗಳಲ್ಲಿ ಊಟದ ವ್ಯವಸ್ಥೆ ಅತ್ಯಂತ ಯಾತನಾತ್ಮಕವೂ, ನಾಚಿಕೆಗೇಡಿನ ಸಂದರ್ಭವೂ ಆಗಿ ಪರಿಣಮಿಸುತ್ತಿದೆ.

ತಿಳಿದವರೇ, ವಿದ್ಯಾವಂತರೇ ಆದ ಜನರು ಮೊದಲ ಪಂಕ್ತಿಯ ಊಟ ಮಾಡುತ್ತಿದ್ದ ಜನರ ಹಿಂದೆ ಸಾಲಾಗಿ ನಿಂತು ಊಟ ಮಾಡುವವರನ್ನೇ ದಿಟ್ಟಿಸಿ ನೋಡುತ್ತಾ, ಯಾವಾಗ ಏಳುತ್ತಾರೆ, ತಾನು ಎಷ್ಟು ಬೇಗ ಕುಳಿತುಕೊಳ್ಳಬಹುದು ಎಂಬ ತರಾತುರಿಯಲ್ಲಿ ಆಡುವ ರೀತಿ, ನಡೆದುಕೊಳ್ಳುವ ನಡವಳಿಕೆ ನೋಡಿದರೆ ಛೀ... ಥೂ ಹಣೆಬರಹಗೆಟ್ಟವರೇ ನಿಮ್ಮ ಯೋಗ್ಯತೆ ಇಷ್ಟೇನಾ ಎನ್ನಿಸುತ್ತಿದೆ.

ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರೂ ಅತಿಥಿ ಅಭ್ಯಾಗತರೇ.. ಎಲ್ಲರಿಗೂ ಸಮನಾದ ಆತಿಥ್ಯ ಸಿಗಲೇಬೇಕು/ ಸಿಕ್ಕೇ ಸಿಗುತ್ತದೆ. ಆದರೆ ತನಗೆ ಗಡಿಬಿಡಿ ಇದೆ, ತಡವಾಗುತ್ತದೆ ಎಂದು ಊಟಕ್ಕೆ ಕುಳಿತವರ ಮುಂದೆ ಬಕಪಕ್ಷಿಗಳ ರೀತಿಯಲ್ಲಿ ಕಣ್ಣು ಕಣ್ಣು ಬಿಟ್ಟುಕೊಂಡು ಅವರನ್ನೇ ನೋಡುತ್ತಾ ಕುಳಿತರೆ ಪಾಪ ಊಟ ಮಾಡುವವನಿಗೆಷ್ಟು ಮುಜುಗರ ಹಿಂಸೆ ಆಗಬೇಡ.. ಆತ ಊಟ ಮಾಡಬೇಕಾ ಅಥವಾ ಗಬಗಬ ನುಂಗಬೇಕಾ ? ಯೋಚಿಸಿ.

ಮೊದಲನೆಯದಾಗಿ ಚಪ್ಪಲಿ ಧರಿಸಿ ಊಟ ಮಾಡುವ ಸಂಸ್ಕಾರವಂತರು ಅನ್ನಕ್ಕೆ/ ತಾಯಿ ಅನ್ನಪೂರ್ಣೇಶ್ವರಿಗೆ ಅದೆಷ್ಟು ಗೌರವ ಕೊಡುತ್ತಾರೆ ಎಂಬ ಬಗ್ಗೆ ಯೋಚಿಸಿ.
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕೊಳಕು ನಡೆಗಳು ಪ್ರತಿಯೊಬ್ಬರ ಸ್ವಾಭಿಮಾನವನ್ನು ಹಾಳು ಮಾಡುತ್ತಿದೆ.
ತಾಳ್ಮೆ ಇಲ್ಲದ ಗಡಿಬಿಡಿಗೇ ಹುಟ್ಟಿದ
ಜನರ ಈ ವರ್ತನೆ ನಿಜಕ್ಕೂ ಅಸಹ್ಯ ಮತ್ತು ನಾಚಿಕೆಗೇಡು ಕೂಡ ಹೌದು..

ಓ ಜನರೇ ದಯವಿಟ್ಟು ಬದಲಾಗಿ..
ನಿಮ್ಮ ನಡವಳಿಕೆ ತಿದ್ದಿಕೊಳ್ಳಿ..
ಎದುರಿಗೆ ಕುಳಿತವರು ನೆಮ್ಮದಿಯಿಂದ ಊಟ ಮಾಡಲಾದರೂ ಬಿಟ್ಟುಬಿಡಿ..

ಗಮನಿಸಿ : ಇದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೊಳಕು ವ್ಯವಸ್ಥೆ. ದಯವಿಟ್ಟು ಇದರ ತಾತ್ಪರ್ಯ ಅರಿತು ನಾವೂ, ನೀವೂ ಮೊದಲು ಬದಲಾಗೋಣ ಮತ್ತು ಜಾಗೃತಿ ಮೂಡಿಸೋಣ.

ಹೌದು ಅನ್ನಿಸಿದರೆ ಶೇರ್ ಮಾಡಿ.

15/05/2026

PMO India

ಜನ ಹಾಳಾಗ್ ಹೋಗ್ಲಿ..
ಜನ ತಲೆ ತಲೆ ಚಚ್ಕೊಳ್ಲಿ...

ಇಂದನ ಬೆಲೆ ಜನರ ಕೈಗೆಟುಕದಷ್ಟು ಹೆಚ್ಚಳ ಮಾಡಿ..

ಟ್ರಾಫಿಕ್ ಕಮ್ಮಿ ಆಗುತ್ತದೆ..
ಜನ ಹೊಟೆಲ್ ಗೇ ಹೋಗೊಲ್ಲ..
ಸಾರಿಗೆ ವಾಹನಗಳ ಬಳಕೆ ಹೆಚ್ಚುತ್ತದೆ.
ವ್ಯವಹಾರಸ್ಥರು ಮಕಾಡೆ ಮಲಗ್ತಾರೆ.
ಕಾರ್ಮಿಕರು ಬದಿಗೆ ಬೀಳ್ತಾರೆ..

ನೀವು ರಾಜಕಾರಣಿಗಳು ಹಣ ಲೂಟಿ ಹೊಡೆದು ಆರಾಮಾಗಿರಿ..

#ಕಹಿಸತ್ಯ

ಪ್ರಸ್ತುತ ಯಾವ ಪಕ್ಷ ದೆಹಲಿಯಲ್ಲಿ ಆಡಳಿತ ನಡೆಸುತ್ತಿದೆ ???
15/05/2026

ಪ್ರಸ್ತುತ ಯಾವ ಪಕ್ಷ ದೆಹಲಿಯಲ್ಲಿ ಆಡಳಿತ ನಡೆಸುತ್ತಿದೆ ???

14/05/2026

ಸಿಗಂದೂರು ಸೇತುವೆ..

13/05/2026

ಇದ್ಯಾವುದು ಮಾಸ್ಟರ್ ಪೀಸ್ ??

ತನ್ನೊಳಗೆ ದ್ವೇಷ, ಅಸೂಯೆ, ಮತ್ಸರ ತುಂಬಿಸಿಕೊಂಡ ಈ ನಾಲಾಯಕ್ ಕಾವಿ ವಸ್ತ್ರ ಧರಿಸಿರೋದೇ ಅಕ್ಷಮ್ಯ ಅಪರಾಧ.

ಕೊಲಂಬೋದಲ್ಲಿ ಬ್ರಾಹ್ಮಣ ಪುರೋಹಿತರು ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರಂತೆ...

ಒಂದುವೇಳೆ ಸಿಕ್ಕಿಬಿದ್ದಿದ್ದರೂ ಅದಕ್ಕೂ RSS ಗೂ ಏನಿದೆ ನಂಟು ?

#ಚೋರಗುರುಚಾಂಡಾಲಶಿಷ್ಯರು

12/05/2026

ಉಡುಪಿಯ ಅನಂತೇಶ್ವರ

ಉಡುಪಿಯ ಕೃಷ್ಣಮಠದ ಎದುರೇ ಎರಡು ದೇವಸ್ಥಾನಗಳಿವೆ. ಒಂದು ಚಂದ್ರಮೌಳೀಶ್ವರನದ್ದು, ಇನ್ನೊಂದು ಅನಂತೇಶ್ವರನದ್ದು. ಈ ಎರಡೂ ದೇವಾಲಯಗಳು ಕೃಷ್ಣಮಠಕ್ಕಿಂತ ಹಳೆಯವು. ಕೃಷ್ಣಮಠ ಹದಿಮೂರನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದದ್ದು; ಅದಕ್ಕಿಂತ ೪೦೦-೫೦೦ ವರ್ಷಗಳಿಗೆ ಹಿಂದಿನವು ಚಂದ್ರಮೌಳೀಶ್ವರನ ಮತ್ತು ಅನಂತೇಶ್ವರನ ಆಲಯಗಳು. ಎರಡೂ ಕಡೆ ಲಿಂಗರೂಪದಲ್ಲಿ ಭಗವಂತನ ಅಭ್ಯರ್ಚನೆ ನಡೆಯುತ್ತದೆ. ಎರಡೂ ಕಡೆ ಮಹಾಶಿವರಾತ್ರಿ ತುಂಬಾ ಮುಖ್ಯವಾದ ಆಚರಣೆ.

ಈಶ್ವರನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ತುಂಬಾ ಮುಖ್ಯವಾದ ಆಚರಣೆ ಎಂದು ವಿಶೇಷವಾಗಿ ಹೇಳಬೇಕಾದದ್ದೇನಿದೆ ಎಂದು ಕೇಳಬಹುದು. ಒಂದು ಸಂಗತಿಯಿದೆ. ಚಂದ್ರಮೌಳೀಶ್ವರನ ಸನ್ನಿಧಿಯನ್ನೇನೋ ಶಿವಾಲಯವೆಂದು ಎಲ್ಲರೂ ಒಪ್ಪುತ್ತಾರೆ. ಅನಂತೇಶ್ವರನ ಆಲಯವನ್ನು ಮಾತ್ರ ಶಿವಾಲಯವೆಂದು ಕೆಲವರು ಒಪ್ಪರು.

ಅನಂತೇಶ್ವರನ ಆಲಯದಲ್ಲಿ ಲಿಂಗರೂಪದಲ್ಲೇ ಪೂಜೆಗೊಳ್ಳುತ್ತಿರುವ ದೇವರು ಅನಂತಾಸನನೂ ಪರಶುರಾಮನೂ ಆದ ಮಹಾವಿಷ್ಣು ಎಂದು ಕೆಲವರ ನಂಬಿಕೆ. ಈಗ ಆ ದೇವಸ್ಥಾನ ಮಾಧ್ವಮಠಗಳಲ್ಲಿ ಒಂದಾದ ಪುತ್ತಿಗೆ ಮಠಕ್ಕೆ ಸೇರಿದ್ದು, ಆ ಮಠ ತಯಾರುಮಾಡಿಸಿ ದೇವಸ್ಥಾನದ ಆವರಣದಲ್ಲಿರಿಸಿರುವ ಆಧುನಿಕ ಶಿಲಾಫಲಕಗಳೆಲ್ಲಾ ಈ ನಂಬಿಕೆಯನ್ನೇ ಸಾರುತ್ತಿವೆ.

ಲಿಂಗರೂಪದ ದೇವರು, ಮಹಾಶಿವರಾತ್ರಿ ಮುಖ್ಯವಾದ ಆಚರಣೆಯಾಗಿರುವುದು, ಆಂಜನೇಯ-ಗರುಡರು ಕಾಣದೆ ಗಣಪತಿಯ ವಿಗ್ರಹವಿರುವುದು - ಇಂತಹ ವಿವರಗಳು ಪಾಮರರ ಮನಸ್ಸಿನಲ್ಲಿಯೂ ಕೂಡ ಇದು ವಿಷ್ಣುವಿನ ದೇವಸ್ಥಾನವಲ್ಲ, ಶಿವಾಲಯವೇ ಇರಬೇಕು, ಎಂಬ ಸಂದೇಹವನ್ನು ಮೂಡಿಸುತ್ತವೆ. ಉಡುಪಿಯನ್ನು ತುಂಬಾ ಇಷ್ಟಪಡುವ ನಾನು ಮತ್ತೆ ಮತ್ತೆ ಅಲ್ಲಿಗೆ ಹೋಗಿದ್ದೇನೆ, ಹೋದಾಗಲೆಲ್ಲಾ ಅನಂತೇಶ್ವರನನ್ನು ಕುತೂಹಲದಿಂದ ಕಂಡಿದ್ದೇನೆ. ಕಂಡು ಬಂದು ಆ ದೇವರ ಬಗ್ಗೆ ಏನೇನು ಮಾಹಿತಿ ಸಿಗುತ್ತದೆಯೋ ಅದನ್ನೆಲ್ಲಾ ಕಲೆಹಾಕಲು ಯತ್ನಿಸಿದ್ದೇನೆ.

ಸರ್ಕಾರದ ಕೆಲವು ಹಳೆಯ ದಾಖಲೆಗಳಲ್ಲಿ ಅನಂತೇಶ್ವರನ ಆಲಯ ಶಿವಾಲಯವೇ ಎಂದು ಸ್ಪಷ್ಟವಾಗಿ ಇದೆ. ಅಂತೆಯೇ ಶೃಂಗೇರಿ ಮಠದ ಪರಂಪರೆಯಲ್ಲೂ ಕೂಡ ಉಡುಪಿಯು ಅನಂತೇಶ್ವರನೆಂಬ ಪರಮಶಿವನ ಆವಾಸ ಎಂಬ ನೆನಪಿದೆ. ಆದರೆ ಅದನ್ನು ಶಿವಾಲಯವೇ ಎಂದು ನಂಬುವ ಮಾಧ್ವಪರಂಪರೆಯವರೂ ಇದ್ದಾರೆಯೇ ಎಂಬ ಪ್ರಶ್ನೆಯೊಂದು ನನ್ನಲ್ಲಿತ್ತು.

ಮಾಧ್ವ ಪರಂಪರೆಯ ಬಗ್ಗೆ ಗೌರವಾದರಗಳನ್ನು ಇಟ್ಟುಕೊಂಡಿರುವ ಬಿ.ಎನ್.ಹೆಬ್ಬಾರ್ ಎಂಬ ಲೇಖಕರೊಬ್ಬರು The Sri Krishna Temple at Udupi ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಲೇಖಕರು ಪುಸ್ತಕದ ಬರವಣಿಗೆಯ ಸಂದರ್ಭದಲ್ಲಿ ಮಾಧ್ವಮಠವಾದ ಅದಮಾರು ಮಠದಲ್ಲೇ ತಂಗಿದ್ದು ಆ ಮಠದ ಸ್ವಾಮಿಗಳ ನೆರವನ್ನೂ ಪರಿಶೀಲನೆಯನ್ನೂ ತಮ್ಮ ಕಾರ್ಯದಲ್ಲಿ ಯಥೇಷ್ಟವಾಗಿ ಪಡೆದಿದ್ದರು. ಬನ್ನಂಜೆ ಗೋವಿಂದಾಚಾರ್ಯರು ಈ ಪುಸ್ತಕ ಪ್ರಕಟಣೆಗಾಗಿ ವಿಶೇಷವಾದ ಮುತುವರ್ಜಿಯನ್ನು ವಹಿಸಿದ್ದರು. ಇದನ್ನು ಕೃತಜ್ಞತೆಯಿಂದ ಸ್ಮರಿಸುವ ಲೇಖಕರು ತಮ್ಮ ಪುಸ್ತಕವನ್ನು ಬನ್ನಂಜೆಯವರಿಗೇ ಅರ್ಪಿಸಿದ್ದಾರೆ.

ಹೆಬ್ಬಾರ್ ಅವರ ಪುಸ್ತಕದಲ್ಲಿ ಸ್ಪಷ್ಟವಾಗಿ ಬಂದಿದೆ: ಅನಂತೇಶ್ವರ ವಸ್ತುತಃ ಶಿವನೇ. ಆ ದೇವಸ್ಥಾನದಲ್ಲಿ ಸ್ಮಾರ್ತ-ಶಿವಪಂಚಾಯತನ ಪದ್ಧತಿಯಲ್ಲಿ ಪೂಜೆಗಳು ನಡೆಯುತ್ತಿದ್ದವಂತೆ. ೧೬ ನೇ ಶತಮಾನದಲ್ಲಿದ್ದ ವಾದಿರಾಜ ಸ್ವಾಮಿಗಳ ಪ್ರಭಾವದಿಂದ ಆ ಹಳೆಯ ಪದ್ಧತಿ ಹೋಗಿ ಮಾಧ್ವ ಸಂಪ್ರದಾಯದ ಪೂಜಾಕ್ರಮಗಳು ಅಲ್ಲಿ ಶುರುವಾದುವಂತೆ. ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಅನಂತೇಶ್ವರನನ್ನು “ಶೈವೀಂ ಶಿಲಾಮಾಶ್ರಿತಃ” ಅಂದರೆ ಶಿವನ ಶಿಲೆಯನ್ನು ಹೊಕ್ಕಿರುವ ವಿಷ್ಣು ಎಂದು ಸ್ತುತಿಸುತ್ತಾರೆ! ಶಿವನು ಮೊದಲು ಶೇಷನಾಗಿ ವಿಷ್ಣುವಿಗೆ ಆಸನನಾಗಿ ಅನಂತರ ಮುಕ್ತನಾಗುತ್ತಾನೆಂಬುದು ಮಾಧ್ವರ ನಂಬಿಕೆ. ಇದನ್ನು ಸೂಚಿಸಲು ಶೇಷಶಾಯಿಯಾದ ವಿಷ್ಣುವು ಅನಂತೇಶ್ವರ ಲಿಂಗದಲ್ಲಿ ನೆಲೆಸಿದ ಎಂದು ವಿವರಿಸುತ್ತಾರೆ. (ಅನಂತ=ಶೇಷ)

ಶಿವಕ್ಷೇತ್ರವನ್ನು ವಿಷ್ಣುಕ್ಷೇತ್ರವನ್ನಾಗಿಸಿ, ಸ್ಮಾರ್ತ ಪೂಜಾಪದ್ಧತಿಯನ್ನು ಹೋಗಲಾಡಿಸಿ ವೈಷ್ಣವ ಪದ್ಧತಿಯನ್ನು ಏರ್ಪಡಿಸಿದ ಈ ಸಂಗತಿಯ ಸತ್ಯಾಸತ್ಯತೆಯ ಬಗ್ಗೆ ಸಿದ್ಧಾಂತವಾಗಿ ಹೇಳುವುದು ಕಷ್ಟ. ಆದರೆ ಮೇಲೆ ಹೇಳಿದ ರೀತಿಯಲ್ಲೇ ಬದಲಾವಣೆಯೊಂದು ಘಟಿಸಿರಬಹುದು ಎಂದು ತೋರುತ್ತದೆ.

ಇಡೀ ಪ್ರಕರಣ ಕೆಲವರಿಗೆ - ವಿಶೇಷವಾಗಿ ಸ್ಮಾರ್ತರಿಗೆ ಮತ್ತು ಶೈವರಿಗೆ - ಬೇಸರವನ್ನುಂಟು ಮಾಡಬಹುದು. ಆದರೆ ಸ್ಮಾರ್ತನೇ ಆಗಿರುವ ನನಗೆ ವೈಯಕ್ತಿಕವಾಗಿ ಇಂತಹ ವಿಚಾರಗಳಿಂದ ಅಷ್ಟೇನೂ ಕಳವಳವಿಲ್ಲ. ಚರಿತ್ರೆಯಲ್ಲಿ ಇಂತಹ ಘಟನೆಗಳು ಬೇಕಾದಷ್ಟು ಆಗಿಹೋಗಿವೆ, ಮುಂದೆಯೂ ಆಗುತ್ತವೆ. ಇವನ್ನೆಲ್ಲಾ ದೊಡ್ಡದು ಮಾಡಿಕೊಂಡು ಈ ಹೊತ್ತಿನ ಸ್ಮಾರ್ತ-ಮಾಧ್ವ ಸಾಮರಸ್ಯಕ್ಕೆ ಭಂಗ ತಂದುಕೊಳ್ಳುವುದು ಅವಿವೇಕ.

ಹಾಗಾದರೆ ಇಂತಹ ವಿಷಯಗಳನ್ನು ಸಾರ್ವಜನಿಕವಾಗಿ ಗಮನಿಸಲೇಬಾರದು ಎಂಬ ಸೋಮಾರಿತನದ ಉಪದೇಶ ಮಾತ್ರ ಸರ್ವಥಾ ಅಗ್ರಾಹ್ಯ. ಎಲ್ಲವನ್ನೂ ಸತ್ಯಪ್ರೀತಿಯಿಂದ ಅಭ್ಯಸಿಸಬೇಕು, ಗ್ರಹಿಸಬೇಕು. ಮಾನುಷಚರ್ಯೆಯ ಸಣ್ಣತನ ದೊಡ್ಡತನಗಳನ್ನು ಚೆನ್ನಾಗಿ ಗಮನಿಸಬೇಕು. ಅಂತಹ ಗಮನಿಸುವಿಕೆಯಿಂದಲೇ ಒಂದು ಸಮಗ್ರದೃಷ್ಟಿ ಸಿದ್ಧಿಸುವುದು. ಸಮಗ್ರದೃಷ್ಟಿಯೇ ವ್ಯಕ್ತಿ-ವ್ಯಕ್ತಿಗಳ ನಡುವೆ, ಸಮುದಾಯಗಳ ನಡುವೆ, ಉಚ್ಛೋಹಂ ನೀಚಸ್ತ್ವಂ ಎಂಬ ಭಾವಗಳನ್ನು ಹೋಗಲಾಡಿಸಿ ಸಾಮರಸ್ಯವನ್ನು ತರುವುದು. ಪರಮಶಿವನಾದ ಅನಂತೇಶ್ವರನು ಅಂತಹ ವಿವೇಕದಿಂದ ಪುಷ್ಟವಾದ ಸಾಮರಸ್ಯವನ್ನು ಅನುಗ್ರಹಿಸಲಿ.

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ
ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ

ಚಿತ್ರಗಳು:

೧. ಅನಂತೇಶ್ವರ ಲಿಂಗ
೨. ಅನಂತೇಶ್ವರ ದೇವಸ್ಥಾನ
೩. ಸರ್ಕಾರದ Udupi District Gazeteer ನ ಭಾಗ
೪. ವಾದಿರಾಜರ ತೀರ್ಥಪ್ರಬಂಧದಲ್ಲಿ ಅನಂತೇಶ್ವರನ ಸ್ತುತಿ
೫. ಹೆಬ್ಬಾರ್ ಅವರ ಪುಸ್ತಕದ ಆಯ್ದ ಭಾಗ

ಸರ್ಕಾರದ ದಾಖಲೆ: Udupi District Gazette

https://statearchives.karnataka.gov.in/gazetteer/public/storage/pdf-files/Udupi%202012%20Chapter%20(16).pdf

ಹೆಬ್ಬಾರಾರ ಪುಸ್ತಕ: The Sri Krishna Temple at Udupi

https://drive.google.com/file/d/1VGC6-fI30TdxGqQV-iFLN3PcLlV8fBdM/view

ಶೃಂಗೇರಿ ಮಠದ ಪರಂಪರೆಯಲ್ಲಿ ಅನಂತೇಶ್ವರ ಶಿವನ ಕ್ಷೇತ್ರವಾಗಿ ಉಡುಪಿಯ ಸ್ಮರಣೆ

https://www.youtube.com/live/Uk--cmOgmNA?si=e6kudxK6_57pOaVD&t=3854

ಮೂಲ ಲೇಖನನ G L Krishna 🙏🙏

ಶೃಂಗೇರಿ ಶಂಕರ ಮಠ ಕುಂಭಕಾಶಿ
11/05/2026

ಶೃಂಗೇರಿ ಶಂಕರ ಮಠ ಕುಂಭಕಾಶಿ

ಕರಾವಳಿ ಪ್ರದೇಶದಲ್ಲಿ ಅವನತಿಯ ಅಂಚಿನಲ್ಲಿರುವ ಸ್ಮಾರ್ತ ಪರಂಪರೆಗೆ ಸಂಜೀವಿನಿ ರೀತಿಯಲ್ಲಿ ಉದ್ಭವ ಆಗಿದೆ ಕುಂಭಕಾಶಿಯ ಶೃಂಗೇರಿ ಶಂಕರ ಮಠ.

ಅನ್ಯರ ಅತಿಯಾದ ಮತಾಂಧತೆ, ದೇವಸ್ಥಾನ, ದೇವರುಗಳ ಪೂಜೆಗಳಲ್ಲಿ ಬದಲಾವಣೆ, ಆಚಾರ ವಿಚಾರಗಳಲ್ಲಿ ಅತಿಯಾದ ತಾರತಮ್ಯಭಾವದಿಂದ ನಲುಗಿದ್ದ ಸ್ಮಾರ್ತರಿಗೆ ಇಂತದ್ದೊಂದು ಬದಲಾವಣೆಯ ಅವಶ್ಯಕತೆಯೂ ಬಹಳವೇ ಇದ್ದಿತ್ತು.

ಹಂತ ಹಂತವಾಗಿ ಒಂದೊಂದೇ ದೇವಸ್ಥಾನಗಳು, ಹೆಣ್ಣು ಕೊಟ್ಟ ಅಥವಾ ಹೆಣ್ಣು ತಂದ ಮನೆತನದ ಸಂಪ್ರದಾಯಗಳಿಗೇ ಕೊಡಲಿ ಪೆಟ್ಟು ನೀಡುತ್ತಾ ತಮ್ಮದೇ ಸತ್ಯ, ತಮ್ಮ ಮತವೇ ಶ್ರೇಷ್ಠ ಎಂದು ಎಲ್ಲಾ ಪಂಥದವರನ್ನೂ ಮೂದಲಿಸುವ ಈ ಅನ್ಯಮತಗಳ ಆಟಾಟೋಪಕ್ಕೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆಯೂ ಇತ್ತು.

ಇದೀಗ ನಲುಗಿ ಹೋಗಿದ್ದ ಸ್ಮಾರ್ತ ಪರಂಪರೆಯ ಸಮೂದಾಯಕ್ಕೆ ಹೊಸ ಆಶಾಕಿರಣ ಕಾಣಿಸಿದೆ. ತಮ್ಮ ಶಿಷ್ಯ ಸಮೂಹದ ಅಭ್ಯುದಯಕ್ಕೆ ಶೃಂಗೇರಿ ಜಗದ್ಗುರುಗಳ ಆಶೀರ್ವಾದವೂ ಸಿಕ್ಕಿದೆ. ಇದರ ಪರಿಣಾಮವಾಗಿ ಕುಂಭಕಾಶಿ ಶಂಕರ ಮಠ ಒಂದೇ ವರ್ಷದ ಅವಧಿಯಲ್ಲಿ ಇನ್ನಿಲ್ಲದಂತೆ ಬೆಳೆದು ನಿಂತಿದೆ.
ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಸರಿಸಮಾನವಾಗಿ ಅವಕಾಶ, ಆಹ್ವಾನಗಳನ್ನು ಕೊಟ್ಟು ಸಮಾನತೆಯನ್ನು ಸಾರುತ್ತಿದೆ.
ಧರ್ಮ ಕರ್ಮಗಳು, ಆಚಾರ ವಿಚಾರಗಳನ್ನು ನಿರಂತರವಾಗಿ ನಡೆಸುತ್ತ ಶಂಕರರ ತತ್ವ ಸಿದ್ದಾಂತಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತಿದೆ.

ಈ ಅದ್ಬುತ ಸಾಧನೆಯ ತೆರೆಮರೆಯಲ್ಲಿ ಶೃಂಗೇರಿ ಶಂಕರ ಮಠದ ಪ್ರಾಂತೀಯ ಧರ್ಮಾಧಿಕಾರಿಗಳಾದ ಬಡಾಕೆರೆ ಶ್ರೀ ಲೋಕೇಶ ಅಡಿಗರು( ನಾಗಪಾತ್ರಿಗಳು) ಮತ್ತವರ ಸಹೋದರರ ಅವಿರಥ ಪರಿಶ್ರಮ, ದಣಿವರಿಯದ ಹೋರಾಟವನ್ನು ನಾವು ಸ್ಮರಿಸಲೇಬೇಕು.

ಮುಂದಿನ ದಿನಗಳಲ್ಲಿ ಕುಂಭಕಾಶಿ ಶಂಕರ ಮಠ ಮತ್ತಷ್ಟು ವಿಜೃಂಭಿಸಲಿ, ಧರ್ಮ ಕರ್ಮಗಳು ಇನ್ನಷ್ಟು ಹೆಚ್ಚಲಿ ಎಂದು ತಾಯಿ ಶಾರದಾಂಬೆಯನ್ನೂ, ಜಗದ್ಗುರು ಶಂಕರಾಚಾರ್ಯರನ್ನೂ ಪ್ರಾರ್ಥನೆ ಮಾಡೋಣ.

#ಸರ್ವಂಶಿವಸಂಕಲ್ಪಮಸ್ತು

Address

Bangalore
560003

Website

Alerts

Be the first to know and let us send you an email when Anchor Venky posts news and promotions. Your email address will not be used for any other purpose, and you can unsubscribe at any time.

Contact The Business

Send a message to Anchor Venky:

Share