Kendasampige

Kendasampige ಕೆಂಡಸಂಪಿಗೆ ಎಂಬುದು ಕನ್ನಡ ಅಂತರ್ಜಾಲ ಲೋಕ

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ.

ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ

್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ.

ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ.

ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.

08/10/2025
ಕಥೆಯಾದಳು ಸೀತಕ್ಕ..: ವಿನಾಯಕ‌ ಅರಳಸುರಳಿ ಅಂಕಣ    ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ...
30/09/2025

ಕಥೆಯಾದಳು ಸೀತಕ್ಕ..: ವಿನಾಯಕ‌ ಅರಳಸುರಳಿ ಅಂಕಣ

ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ ಮಾಡುತ್ತಿದ್ದರು. ಆಕೆಯ ಬದುಕು ಮೂರು ನಿಮಿಷದಲ್ಲಿ ಕಂಡ ಎಪಿಸೋಡಿನಂತೆ ನನ್ನೆದುರು ಪ್ರಸಾರವಾಗುತ್ತಿತ್ತು.‌ ಊರಿನಲ್ಲಿ ಸೀತಕ್ಕನಿಗೆ ಅವಳದೇ ಆದ ಒಂದಷ್ಟು ಸ್ನೇಹಗಳಿದ್ದವು. ಆಕೆ ಮಾತ್ರ ಮಾಡಬಹುದಾದ, ಅರ್ಧ ಸಂಬಳದ ಕೆಲಸಗಳಿದ್ದವು. ಅದನ್ನು ಆಕೆಗೆ ಕೊಡುವ ಮನೆಯೊಡತಿಯರೇ ಆಕೆಯ ಸ್ನೇಹಿತೆಯರಾಗಿದ್ದರು. ಅವರ ಮನೆಗಳ ಪಾತ್ರೆ ತೊಳೆಯುತ್ತ, ಹೂಗಿಡಗಳಿಗೆ ನೀರು ಹಾಕುತ್ತ, ಯಾರದೋ ಹೂದೋಟದಲ್ಲಿ ಹೂವರಳಿಸುತ್ತ, ಅಂಗಳಕ್ಕೆ ಸಗಣಿ ನೀರು ಬಳಿಯುತ್ತಾ, ಹಬ್ಬಕ್ಕೆ ತೋರಣ ಕಟ್ಟುತ್ತಾ, ಅವರಾಗಿ ಕೊಟ್ಟರಷ್ಟೇ ತಾನೂ ಹೂ ಮುಡಿಯುತ್ತ ಇದ್ದಳು ಆ ಅಜ್ಜಿ.
ವಿನಾಯಕ‌ ಅರಳಸುರಳಿ ಅಂಕಣ “ಆಕಾಶ ಕಿಟಕಿ”

ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ ಮಾಡುತ್ತಿದ್ದರು. ಆಕೆಯ ಬದುಕು ಮೂರು ನಿಮ....

ದೀಪಾ ಗೋನಾಳ ಬರೆದ ಎರಡು ಕವಿತೆಗಳು
30/09/2025

ದೀಪಾ ಗೋನಾಳ ಬರೆದ ಎರಡು ಕವಿತೆಗಳು

-ದೀಪಾ ಗೋನಾಳ ಬರೆದ ಎರಡು ಕವಿತೆಗಳು

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆಮುಂದಿನ ಮೂರು ದಿನಗಳಲ್ಲಿ ಅತ್ತೆಯವರ ತಾಳ್ಮೆ ಸಹನೆಗಳ ಬಗ್ಗೆ ಅತ್ಯದ್ಭುತ ಗೌರವ ಮೂ...
28/09/2025

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ

ಮುಂದಿನ ಮೂರು ದಿನಗಳಲ್ಲಿ ಅತ್ತೆಯವರ ತಾಳ್ಮೆ ಸಹನೆಗಳ ಬಗ್ಗೆ ಅತ್ಯದ್ಭುತ ಗೌರವ ಮೂಡಿತ್ತು ನಂದಿನಿಗೆ. ಮಾವ ದೇವರಂಥವರು. ಊಟ, ತಿಂಡಿ ವಿಷಯಗಳಲ್ಲಿ ಒಂದು ಸಣ್ಣ ಆಕ್ಷೇಪಣೆಯನ್ನೂ ಎತ್ತುತ್ತಿರಲಿಲ್ಲ. ನಂದಿನಿಗೆ ನುಂಗಲಾರದ ತುತ್ತಾಗಿದ್ದುದು ಕಳೆದ ಆರೇಳು ದಿನಗಳಿಂದ ಮಾವನವರು ನೀಡುತ್ತಿದ್ದ ಅರ್ಜೆಂಟು ಕೂಗುಗಳು. ಇವಳು ಬರಬೇಕು ಅವರು ಕೂಗಿದೊಡನೆ. ಅವರು ಯಾವುದೋ ಸುದ್ದಿಯನ್ನೋ, ಚಿತ್ರವನ್ನೋ ತೋರಿಸಬೇಕು ಟೀವಿ ಯಾ ವೃತ್ತಪತ್ರಿಕೆಯಲ್ಲಿ. ನಂದಿನಿ ಈಗಿನ ಕಾಲ ಯುವತಿ. ನಾಗಲಕ್ಷ್ಮಮ್ಮನವರಷ್ಟು ಸೈರಣೆ, ತಾಳ್ಮೆ ಎಲ್ಲಿಂದ ಬರಬೇಕು? ಇನ್ನು ತಡೆಯಲಾಗದೇ ಒಂದು ರಾತ್ರಿ ಪಿಸುಮಾತಿನಲ್ಲಿ ಪತಿಗೆ ಹೇಳಿದಳು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ “ಉಭಯ ಸಂಕಟ”

ಮುಂದಿನ ಮೂರು ದಿನಗಳಲ್ಲಿ ಅತ್ತೆಯವರ ತಾಳ್ಮೆ ಸಹನೆಗಳ ಬಗ್ಗೆ ಅತ್ಯದ್ಭುತ ಗೌರವ ಮೂಡಿತ್ತು ನಂದಿನಿಗೆ. ಮಾವ ದೇವರಂಥವರು. ಊಟ, ತಿಂಡಿ ವಿ...

ಅಪ್ಪ, ಸೈಕಲ್‌ ಮತ್ತು ಮಗ: ದರ್ಶನ್‌ ಜಯಣ್ಣ ಸರಣಿಬಹಳ ಮಂದಿ ಭಾರತೀಯರು, ಪಾಕಿಗಳು, ಬಾಂಗ್ಲಾ, ಅಫ್ಘಾನೀಯರು ಮತ್ತು ಇತರೆ ಏಷಿಯಾ ಮತ್ತು ಅರಬ್ ದೇಶ...
27/09/2025

ಅಪ್ಪ, ಸೈಕಲ್‌ ಮತ್ತು ಮಗ: ದರ್ಶನ್‌ ಜಯಣ್ಣ ಸರಣಿ

ಬಹಳ ಮಂದಿ ಭಾರತೀಯರು, ಪಾಕಿಗಳು, ಬಾಂಗ್ಲಾ, ಅಫ್ಘಾನೀಯರು ಮತ್ತು ಇತರೆ ಏಷಿಯಾ ಮತ್ತು ಅರಬ್ ದೇಶಗಳಿಂದ ಇಲ್ಲಿಗೆ ದುಡಿಯಲು ಬರುವವರು ಒಂಟಿಯಾಗಿರುತ್ತಾರೆ. ಮೂರೋ ನಾಲ್ಕೋ ವರ್ಷಗಳಿಗೊಮ್ಮೆ ತಮ್ಮ ಊರಿಗೆ ಮೂರ್ನಾಲ್ಕು ತಿಂಗಳುಗಳು ಹೋಗಿಬರುತ್ತಾರೆ. ಕೆಲವೊಮ್ಮೆ ಬರುವಾಗ ಕೆಲಸ ಇರುವ ಭರವಸೆ ಇರದು. ಮತ್ತೆ ಕೆಲವೊಮ್ಮೆ ಹೋಗುವಾಗ ಇವರು ಹಿಂದಿರುಗುವ ಸಂಶಯ ಇಲ್ಲಿನ ಕಾಂಟ್ರಾಕ್ಟ್ ನವನೀಗಿದ್ದರೆ ಅವನು ಅವರಿಗೆ ಸಂಪೂರ್ಣ ಹಣ ಸೆಟಲ್ ಮಾಡದೆ ಅವರನ್ನು ಹಿಡಿದಿಟ್ಟುಕೊಳ್ಳುತ್ತಾನೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹತ್ತನೆಯ ಕಂತು

ಬಹಳ ಮಂದಿ ಭಾರತೀಯರು, ಪಾಕಿಗಳು, ಬಾಂಗ್ಲಾ, ಅಫ್ಘಾನೀಯರು ಮತ್ತು ಇತರೆ ಏಷಿಯಾ ಮತ್ತು ಅರಬ್ ದೇಶಗಳಿಂದ ಇಲ್ಲಿಗೆ ದುಡಿಯಲು ಬರುವವರು ಒಂಟ...

ಬಿಚ್ಚಿಕೊಳ್ಳುತ್ತಿವೆ ಕನಸಿನ ರೆಕ್ಕೆಗಳು: ದೀಪಾ ಹಿರೇಗುತ್ತಿ ಬರಹಪರಂಪರೆಯನ್ನವರು ಸಾರಾಸಗಟಾಗಿ ಗಾಳಿಗೆ ತೂರಿಲ್ಲ, ಆದರೆ ಸಂಪ್ರದಾಯಗಳು ತಮ್ಮ ಕಾ...
27/09/2025

ಬಿಚ್ಚಿಕೊಳ್ಳುತ್ತಿವೆ ಕನಸಿನ ರೆಕ್ಕೆಗಳು: ದೀಪಾ ಹಿರೇಗುತ್ತಿ ಬರಹ

ಪರಂಪರೆಯನ್ನವರು ಸಾರಾಸಗಟಾಗಿ ಗಾಳಿಗೆ ತೂರಿಲ್ಲ, ಆದರೆ ಸಂಪ್ರದಾಯಗಳು ತಮ್ಮ ಕಾಲಿಗೆ ಬೇಡಿಯಾಗಲೂ ಇಂದಿನ ಹುಡುಗಿಯರು ಅವಕಾಶ ಕೊಡುತ್ತಿಲ್ಲ. ನಿಜ, ಬದಲಾಗಬೇಕಾದ ಸಂಪ್ರದಾಯಗಳು ಬದಲಾಗುತ್ತಿರುತ್ತವೆ. ಸತ್ತ ಗಂಡನ ಜತೆಗೇ ಜೀವಂತ ಸುಟ್ಟು ಬೂದಿಯಾಗುವುದೂ ಒಂದು ಮಹಾನ್‌ ಸಂಪ್ರದಾಯವೇ ಆಗಿದ್ದ ಕಾಲವೂ ಇತ್ತು. ಅಂತಹ ಹೆಣ್ಣುಗಳನ್ನು ಮಹಾಸತಿಯೆಂದು ಪೂಜಿಸಲಾಗುತ್ತಿತ್ತು! ಅಕ್ಷರ ಕಲಿಯಹೊರಟ ಹೆಣ್ಣುಮಕ್ಕಳನ್ನು ಸಮಾಜಕ್ಕಂಟಿದ ಶಾಪವೆಂಬಂತೆ ನೋಡಲಾಗುತ್ತಿತ್ತು! ಋತುಮತಿಯಾಗುವ ಮುನ್ನವೇ ವಿವಾಹವಾಗಿಬಿಡಬೇಕಿತ್ತು! ಅವೆಲ್ಲವೂ ಈಗ ಬದಲಾಗಿದೆ, ಹೀಗಾಗಿ ಸಮಾಜ ತಮ್ಮ ಮೇಲೆ ಹೇರಿರುವ ಕಟ್ಟಳೆಗಳು ಬದಲಾಗದಿರುವಂಥದ್ದೇನೂ ಅಲ್ಲ ಎಂಬ ವಾಸ್ತವ ಹೆಣ್ಣುಮಕ್ಕಳಿಗೆ ಅರಿವಾಗಿದೆ. ಅದಕ್ಕಾಗಿ ಅವರು ತಮ್ಮ ಕನಸುಗಳನ್ನು ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.
ದೀಪಾ ಹಿರೇಗುತ್ತಿ ಬರಹ ನಿಮ್ಮ ಓದಿಗೆ

ಪರಂಪರೆಯನ್ನವರು ಸಾರಾಸಗಟಾಗಿ ಗಾಳಿಗೆ ತೂರಿಲ್ಲ, ಆದರೆ ಸಂಪ್ರದಾಯಗಳು ತಮ್ಮ ಕಾಲಿಗೆ ಬೇಡಿಯಾಗಲೂ ಇಂದಿನ ಹುಡುಗಿಯರು ಅವಕಾಶ ಕೊಡುತ್.....

‘ಹುಲಿಯಪ್ಪ’ – ಪ್ರಕೃತಿ ಮತ್ತು ಮನುಷ್ಯನ ನಡುವಿನ ಬಹುಮುಖಿ ಸಂಬಂಧದ ವ್ಯಾಖ್ಯಾನ: ಶಶಾಂಕ ಪರಾಶರ ಬರಹಮೊದಲ ನೋಟಕ್ಕೇ ಕಾಣುವ ಮನುಷ್ಯ ಮತ್ತು ಹುಲಿಯ...
25/09/2025

‘ಹುಲಿಯಪ್ಪ’ – ಪ್ರಕೃತಿ ಮತ್ತು ಮನುಷ್ಯನ ನಡುವಿನ ಬಹುಮುಖಿ ಸಂಬಂಧದ ವ್ಯಾಖ್ಯಾನ: ಶಶಾಂಕ ಪರಾಶರ ಬರಹ

ಮೊದಲ ನೋಟಕ್ಕೇ ಕಾಣುವ ಮನುಷ್ಯ ಮತ್ತು ಹುಲಿಯ ನಡುವಿನ ಸಂಘರ್ಷದ ವಿವರಗಳು ಇಲ್ಲಿ ಕಂಡರೆ, ಅದರ ಜೊತೆಗೇ ಹುಲಿಯಪ್ಪನ ಪೂಜೆಯ ಹಿಂದಿನ ಮಿಥಕ, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗುವ ಸಾಂಸ್ಕೃತಿಕ ಆಚರಣೆಗಳು, ಹಳ್ಳಿಗಳಿಂದ ಪಟ್ಟಣಕೆ ಜನರ ವಲಸೆ, ವೃದ್ಧಾಶ್ರಮಗಳಂತಾಗಿರುವ ಹಳ್ಳಿಗಳು ಹೀಗೆ ಬಹುಮುಖೀ ಸಮಸ್ಯೆಯನ್ನು ಇದು ಹಿಡಿದಿಡುತ್ತದೆ. ಹುಲಿಯು ಹಳ್ಳಿಗರನ್ನು ಕಾಡಿ ಅವರ ಪ್ರಾಣಿಗಳನ್ನೂ ಕೊಲ್ಲುತ್ತಿರುವ ಸಂದರ್ಭದಲ್ಲಿ, ಅದು ಹೇಗೆ ದೈವವಾಯಿತು ಎನ್ನುವುದೇ ಒಂದು ಅನೂಹ್ಯವಾದ ಸಂಗತಿ. ಈ ಆಚರಣೆಯ ಹಿನ್ನೆಲೆಯಲ್ಲಿರುವ ಮಿಥಕ ಒಂದು ಮನುಷ್ಯ ಮತ್ತು ಹುಲಿಯ ನಡುವಿನ ಸಂಬಂಧಕ್ಕೆ ಹೇಗೆ ಅತಿಮಾನುಷ ಆಯಾಮವನ್ನು ನೀಡುತ್ತದೆ ಎನ್ನುವುದು ಈ ಸಾಕ್ಷ್ಯಚಿತ್ರದಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ.
ಸೌರಭ ರಾವ್‌ ನಿರ್ದೇಶನದ “ಹುಲಿಯಪ್ಪ” ಸಾಕ್ಷ್ಯಚಿತ್ರದ ಕುರಿತು ಶಶಾಂಕ ಪರಾಶರ ಬರಹ

ಮೊದಲ ನೋಟಕ್ಕೇ ಕಾಣುವ ಮನುಷ್ಯ ಮತ್ತು ಹುಲಿಯ ನಡುವಿನ ಸಂಘರ್ಷದ ವಿವರಗಳು ಇಲ್ಲಿ ಕಂಡರೆ, ಅದರ ಜೊತೆಗೇ ಹುಲಿಯಪ್ಪನ ಪೂಜೆಯ ಹಿಂದಿನ ಮಿಥ....

ದೂರ ಸರಿದ ಕಾದಂಬರಿ ಬ್ರಹ್ಮ….ಕಲೆ, ಮನುಷ್ಯನ ಸೃಜನಶೀಲ ಮನಸ್ಸಿನ ಅತ್ಯಂತ ಅಪೂರ್ವವಾದ ರೂಪ. ಭೈರಪ್ಪನವರು ಸಂಗೀತ, ಚಿತ್ರಕಲೆ, ನೃತ್ಯವನ್ನು ಆರಾಧಿ...
24/09/2025

ದೂರ ಸರಿದ ಕಾದಂಬರಿ ಬ್ರಹ್ಮ….

ಕಲೆ, ಮನುಷ್ಯನ ಸೃಜನಶೀಲ ಮನಸ್ಸಿನ ಅತ್ಯಂತ ಅಪೂರ್ವವಾದ ರೂಪ. ಭೈರಪ್ಪನವರು ಸಂಗೀತ, ಚಿತ್ರಕಲೆ, ನೃತ್ಯವನ್ನು ಆರಾಧಿಸಿದ ಸಾಹಿತಿ. ಅವರಲ್ಲಿ ಕಲೆಯ ಬಗೆಗೆ ಅಪಾರವಾದ ರುಚಿಯಿತ್ತು. ಜಲಪಾತ, ಸಾರ್ಥ ಮೊದಲಾದ ಕಾದಂಬರಿಗಳಲ್ಲಿ ಅದು ನಿಚ್ಚಳವಾಗಿ ನಿರೂಪಿತವಾಗಿತ್ತು. ಕಲೆ ಹೇಗೆ ಅವರ ಪ್ರೀತಿಯ ದೌರ್ಬಲ್ಯವಾಗಿತ್ತೋ ಹಾಗೇ ಮನುಷ್ಯನ ತ್ಯಾಗ, ನಿಸ್ವಾರ್ಥತೆ ಅವರನ್ನು ಬಲವಾಗಿ ಸೆಳೆಯುತ್ತಿತ್ತು ಎಂದು ಕಾಣುತ್ತದೆ. ಅಂಥ ಪಾತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಿದ್ದರು. ಮಂದ್ರದ ರಾಮಕುಮಾರಿ, ಸಾರ್ಥದ ಚಂದ್ರಿಕೆ, ವಂಶವೃಕ್ಷದ ಶ್ರೋತ್ರಿಗಳು, ಪರ್ವದ ಕುಂತಿ ಈ ಎಲ್ಲ ಪಾತ್ರಗಳು ಅದನ್ನು ಪುಷ್ಟಿಕರಿಸುತ್ತವೆ.
ಇಂದು ತೀರಿಕೊಂಡ ಹಿರಿಯ ಸಾಹಿತಿ, ಜನಪ್ರಿಯ ಕಾದಂಬರಿಕಾರ ಎಸ್.‌ ಎಲ್.‌ ಭೈರಪ್ಪನವರ ಬರಹಗಳ ಕುರಿತು ದೀಪಾ ಫಡ್ಕೆ ಬರಹ

ಕಲೆ, ಮನುಷ್ಯನ ಸೃಜನಶೀಲ ಮನಸ್ಸಿನ ಅತ್ಯಂತ ಅಪೂರ್ವವಾದ ರೂಪ. ಭೈರಪ್ಪನವರು ಸಂಗೀತ, ಚಿತ್ರಕಲೆ, ನೃತ್ಯವನ್ನು ಆರಾಧಿಸಿದ ಸಾಹಿತಿ. ಅವರಲ್...

ಫ್ಲಾಪ್ ಆದ ಬಲೂನಿನ ಐಡಿಯಾ: ಬಸವನಗೌಡ ಹೆಬ್ಬಳಗೆರೆ ಸರಣಿನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವ...
23/09/2025

ಫ್ಲಾಪ್ ಆದ ಬಲೂನಿನ ಐಡಿಯಾ: ಬಸವನಗೌಡ ಹೆಬ್ಬಳಗೆರೆ ಸರಣಿ

ನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲು ಆಗಲಿಲ್ಲ! ಏನೇನೋ ಪ್ರಯತ್ನ ಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದೆವು. ಆದರೆ ಬಲೂನ್ ಒಡೆದ ಕೂಡಲೆ ಬಟ್ಟೆ ಮಡಿಚಿದ ಸ್ಥಿತಿಯಲ್ಲಿರುತ್ತಿತ್ತು! ಅಂದುಕೊಂಡಂತೆ ಅಕ್ಷರ ಕಾಣುತ್ತಲೇ ಇರಲಿಲ್ಲ! ಇದನ್ನು ಸರಿ ಮಾಡಲು ಬಹಳ ಪ್ರಯತ್ನಿಸುತ್ತಾ ಸಮಯ ಕಳೆದು ಹೋದದ್ದು ತಿಳಿಯಲೇ ಇಲ್ಲ. ಅದಾಗಲೇ ಬೆಳಗಿನ ಜಾವ ಮೂರಾಗಿತ್ತು!! ನಿದ್ದೆ ಮಂಪರು ಬೇರೆ, ನನ್ನ ಯೋಜನೆ ಕೈಗೊಡದಿದ್ದುದು ಬೇರೆ. ಯಾಕಾದ್ರೂ ಕಾರ್ಯದರ್ಶಿ ಆದೆನಪ್ಪಾ ಅನಿಸ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ

ನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟ.....

ನವರಾತ್ರಿಯಲ್ಲಿ ನನಗೆ ಅಮ್ಮ ಸಿಕ್ಕಳು…: ಗಾಯತ್ರಿ ರಾಜ್ ಬರಹಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮ...
23/09/2025

ನವರಾತ್ರಿಯಲ್ಲಿ ನನಗೆ ಅಮ್ಮ ಸಿಕ್ಕಳು…: ಗಾಯತ್ರಿ ರಾಜ್ ಬರಹ

ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ನವರಾತ್ರಿ ಆಚರಣೆಯಲ್ಲಿ ಅಮ್ಮನ ನೆನಪುಗಳ ಕುರಿತು ಗಾಯತ್ರಿ ರಾಜ್ ಬರಹ

ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ...

ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ“ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂ...
22/09/2025

ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂರತೆಗೆ ಸಮಾನವಾಗಿ ಆದ್ಯತೆ ನೀಡುತ್ತದೆ, ಮೀನುಗಾರರ ಅರ್ಧ ಮುಳುಗಿದ ಲೋಕಗಳನ್ನು, ಸಮಾಧಿ ಮಾಡಿದ ಮೂಳೆಗಳಲ್ಲಿ ಕಲಕುವ ಭರವಸೆಗಳನ್ನು, ಹೆಣ್ಣುಮಕ್ಕಳನ್ನು ಪ್ರೀತಿಸುವ ತಾಯಂದಿರ ಮತ್ತು ಎಲ್ಲಾ ರೀತಿಯ ತಿಳಿಯಲಾಗದ, ನಿಗೂಢ ಆತ್ಮಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಟ್ರಿನಿಡಾಡ್ ಎಂಡ್ ಟೊಬೇಗೊ (Trinidad and Tobago) ದೇಶದ ಯುವ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ-ರವರ (Danielle Boodoo-Fortuné, 1986) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

“ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂರತೆಗೆ ಸಮಾನವಾಗಿ ಆದ್ಯತೆ ನೀಡುತ್ತದೆ, ಮೀನುಗಾರರ ಅರ್ಧ ಮುಳುಗಿದ ಲೋಕಗಳನ್ನು, ಸ.....

ವಾಣಿ ಭಂಡಾರಿ ಬರೆದ ಗಜಲ್
22/09/2025

ವಾಣಿ ಭಂಡಾರಿ ಬರೆದ ಗಜಲ್

"ಏನೆಂದು ಹಾಡುವುದು ಕಹಿಯ ಗೂಡು ಕಟ್ಟೆ ಒಡೆದಿರುವಾಗ ಯಾರು ಕೇಳರು ಅಪಸ್ವರವನ್ನು ಈ ನೆನಪುಗಳಿಗೇನು ಗೊತ್ತು ಮನ ಮಧುರವಾಗದೆ ಸಮಾಧಿಯಾಯ...

Address


Alerts

Be the first to know and let us send you an email when Kendasampige posts news and promotions. Your email address will not be used for any other purpose, and you can unsubscribe at any time.

Contact The Business

Send a message to Kendasampige:

  • Want your business to be the top-listed Media Company?

Share

Our Story

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ. ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ. ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ. ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.