12/06/2024
ಕೆ.ಆರ್ ಪುರ : ಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.
ಕೆ.ಆರ್ ಪುರಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.
ಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.ಅತಿಯಾದ ಒತ್ತಡದ ಬದುಕು ಹಾಗೂ ದುಶ್ಚಟಗಳಿಗೆ ಮಾರುಹೋಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡದೆ ಕಿರಿ ವಯಸ್ಸಿನಲ್ಲೇ ಯುವಜನತೆ ಮೃತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಸ್.ಕೆ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ತಿಳಿಸಿದರು.
ರಾಮಮೂರ್ತಿನಗರದ ಎನ್.ಆರ್.ಐ ಬಡಾವಣೆಯಲ್ಲಿ ತಮ್ಮ ಫೌಂಡೇಶನ್ ಮೂಲಕ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಇತ್ತೀಚಿನ ದಿನಗಳಲ್ಲಿ ಯವಜನತೆ ದುಶ್ಚಟಗಳಿಗೆ ಮಾರುಹೋಗಿ ತಮ್ಮ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ, ಹಾಗೇಯೇ ಹೆಚ್ಚಿನ ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ಕೊಡದೇ ಸಣ್ಣ ವಯಸ್ಸಿನಲ್ಲೇ ಮೃತರಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಎಸ್.ಕೆ.ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಆರೋಗ್ಯ ಶಿಬಿರವನ್ನು ಮಾಡುತ್ತಿದ್ದು, ಸಾವಿರಾರು ಜನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿಯೂ ಸಹಕಣ್ಣು ,ಕಿವಿ,ಮೂಗು,ಬಾಯಿ, ಹೃದಯ,ಮೂಳೆ,ದಂತ ಸೇರಿದಂತೆ ಪರಿಣಿತರ ತಂಡಗಳು ಪರಿಕ್ಷೆ ನಡೆಸಿ ಸಮಸ್ಯೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ, ಅವಶ್ಯವಿರುವ ಕಣ್ಣು,ಹೃದಯ ಶಸ್ತ್ರಚಿಕಿತ್ಸೆಗೆ ಖರ್ಚಾಗುವ ಹಣವನ್ನೂ ಫೌಂಡೇಶನ್ ಬರಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಂತಾ ಕೃಷ್ಣ ಮೂರ್ತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕಲ್ಕೆರೆ ಕೃಷ್ಣಮೂರ್ತಿ ಸೇರಿದಂತೆ ಫೌಂಡೇಶನ್ ಸದಸ್ಯರು ಹಾಜರಿದ್ದರು.