Jana Aakrosha News

Jana Aakrosha News Contact information, map and directions, contact form, opening hours, services, ratings, photos, videos and announcements from Jana Aakrosha News, News & Media Website, Bangalore.

ಕರಾಳ ಸತ್ಯಗಳ ಅನಾವರಣ ಮತ್ತು ನೀವು ನೊಡದ ಜಗತ್ತಿನ ದರ್ಶನ. ಬನ್ನಿ, ಭ್ರಷ್ಟಾಚಾರಿಗಳ ವಿರುದ್ಧ ಹೋರಾಡೋಣ ಅವರು ಧರಿಸಿದ ಮುಖವಾಡ ಕಳಚೋಣ. ನಾವು ಇನ್ನೊಂದು ಸುತ್ತಿನ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಿದೆ.

15/08/2025

ಯಾದಗಿರಿ ಜಿಲ್ಲೆ ಎನ್ನುವುದು ಅಕ್ರಮಗಳ ತಾಣ. ಇಲ್ಲಿ ನೋ ರೂಲ್ಸ್, ನೋ ಕಾನೂನು!

ನಕಲಿ ಪತ್ರಕರ್ತರ ಹೆಸರಲ್ಲಿ ಭಯೋತ್ಪಾದನೆ ಮತ್ತು ಸುಲಿಗೆ: ‘ವಿಶ್ವ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ’ ಪ್ರೆಸ್ ಕ್ಲಬ್‌ನಲ್ಲಿ ಗಂಭೀರ ಆರೋಪಬೆ...
17/07/2025

ನಕಲಿ ಪತ್ರಕರ್ತರ ಹೆಸರಲ್ಲಿ ಭಯೋತ್ಪಾದನೆ ಮತ್ತು ಸುಲಿಗೆ: ‘ವಿಶ್ವ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ’ ಪ್ರೆಸ್ ಕ್ಲಬ್‌ನಲ್ಲಿ ಗಂಭೀರ ಆರೋಪ

ಬೆಂಗಳೂರು, ಜುಲೈ 17, 2025:
ರಾಜ್ಯ ರಾಜಧಾನಿ ಬೆಂಗಳೂರು ನಗರದ ಪ್ರೆಸ್ ಕ್ಲಬ್‌ನಲ್ಲಿ ಇಂದು ವಿಶ್ವ ನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸೇನೆ (ರಿ.) ವತಿಯಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಯಿತು. ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಶಿವರಾಜ್ ಕೆ.ಎನ್ ಅವರು ಧನಂಜಯ್ ಮತ್ತು ಅಂಜು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳ ಜೊತೆ ಪತ್ರಕರ್ತರೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ‘AK ನ್ಯೂಸ್’ ಎಂಬ ನಕಲಿ ಮಾಧ್ಯಮ ಸಂಸ್ಥೆಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆತ್ಮಾನಂದ @ ಕೃಷ್ಣೇಗೌಡ, ಅಮೃತ ಜಯರಾಮ್ ಮತ್ತು ನವೀನ್ ಎಂಬವರ ವಿರುದ್ಧ ಗಂಭೀರ ಆರೋಪಗಳನ್ನು ಹೊರ ಹಾಕಿದರು. ಆರೋಪಗಳ ಪ್ರಕಾರ, ಈ ಮೂವರು ಪೊಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳು, ವಿವಿಧ ಖಾಸಗಿ ವ್ಯಕ್ತಿಗಳಿಂದ ಹನಿಟ್ರ್ಯಾಪ್, ಕೊಲೆ ಬೆದರಿಕೆ, ಅಕ್ರಮ ಹಣ ವಸೂಲಿ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲೆಗೊಳಿಸಿ, ಬ್ಲಾಕ್‌ಮೇಲ್ ಮಾಡುವ ಕೃತ್ಯಗಳಲ್ಲಿ ತೊಡಗಿದ್ದಾರೆ.

ಅಕ್ರಮ ಚಟುವಟಿಕೆಗಳ ಮಾದರಿ ಬಹಿರಂಗ:
ಅವರು ಅನಧಿಕೃತವಾಗಿ “ಪತ್ರಕರ್ತ” ಎಂಬ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಸರ್ಕಾರಿ ಸೇವೆಯಲ್ಲಿರುವ ಹಲವರ ವಿರುದ್ಧ ಸುಳ್ಳು ಆರೋಪಗಳೊಂದಿಗೆ ದೂರುಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸುತ್ತಿದ್ದಾರೆ. ‘ಗೋ ರಕ್ಷಣೆ’, ‘ಸಾಮಾಜಿಕ ನ್ಯಾಯ’, ಮತ್ತು ಇತರ ಇಮೋಷನಲ್ ವಿಷಯಗಳನ್ನು ಮುನ್ನೆಲೆಗೆ ತಂದು ಸಾರ್ವಜನಿಕರನ್ನು ಗೊಂದಲಕ್ಕೆ ದೂಡುತ್ತಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಲಾಯಿತು.

ಪೊಲೀಸ್ ದಾಖಲೆಗಳಲ್ಲಿ ಆರೋಪಗಳ ಪಟ್ಟಿ:
ಈ ಮೂವರು ಆರೋಪಿತರ ಮೇಲಿನ ಪ್ರಕರಣಗಳ ಸಂಖ್ಯೆಯು ಆತ್ಮಾನಂದ ವಿರುದ್ಧ ಹತ್ತಕ್ಕೂ ಹೆಚ್ಚು, ಅಮೃತ ಜಯರಾಮ್ ವಿರುದ್ಧ ನಾಲ್ಕು, ಮತ್ತು ನವೀನ್ ವಿರುದ್ಧ ಹಲವಾರು ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಲಾಯಿತು. ಅವರು ಹಲವಾರು ಸರ್ಕಾರಿ ಅಧಿಕಾರಿಗಳ ಮತ್ತು ಖಾಸಗಿ ಉದ್ಯಮಿಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದು, ಬಲಾತ್ಕಾರ, ಕೊಲೆ ಯತ್ನ, ಲಂಚ, ಗೋರಕ್ಷಣೆ ಹೆಸರಿನಲ್ಲಿ ಸುಲಿಗೆ ಮೊದಲಾದ ಆರೋಪಗಳು ದಾಖಲಾಗಿವೆ.

ಸರ್ಕಾರದ ತಕ್ಷಣದ ಕ್ರಮಕ್ಕೆ ಆಗ್ರಹ:
ಡಾ. ಬಿ.ಆರ್. ಅಂಬೇಡ್ಕರ್ ಸೇನೆಯ ಮುಖಂಡರು ಈ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿತ ಇಲಾಖೆಗಳಿಗೆ ವಿನಂತಿ ಸಲ್ಲಿಸಿದ್ದಾರೆ. ಇಂತಹ ನಕಲಿ ಪತ್ರಕರ್ತರಿಂದ ಸಾರ್ವಜನಿಕರು ಮತ್ತು ಅಧಿಕಾರಿಗಳು ನರಳುತ್ತಿರುವುದರಿಂದ, ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಲಾಯಿತು.

17/07/2025

ರಾಯಚೂರು, ಜುಲೈ 15, 2025: ರಾಯಚೂರು ಜಿಲ್ಲೆಯ ಮಾಜಿ ಶಾಸಕ ಕೆ. ಶಿವನಗೌಡ ನಾಯಕ ಅವರು ತಮ್ಮ 48ನೇ ಹುಟ್ಟುಹಬ್ಬದಂದು ಬೃಹತ್ ನವಿಲುಗರಿ ಹಾರ ಧರಿಸ...

05/03/2025

ಎಸ್ಸಿಪಿ/ಟಿಎಸ್ಪಿ ಅನುದಾನ ದುರ್ಬಳಕೆ: ಕಲಬುರಗಿಯಲ್ಲಿ ಬಿಜೆಪಿಯಿಂದ ಪ್ತರಿಭಟನೆ

ಎತ್ತಿನ ಹೊಳೆ ಕುಡಿಯುವ ನೀರಿಗೆ ಪ್ರಾಮುಖ್ಯತೆ: ಉಪಮುಖ್ಯಮಂತ್ರಿ
04/03/2025

ಎತ್ತಿನ ಹೊಳೆ ಕುಡಿಯುವ ನೀರಿಗೆ ಪ್ರಾಮುಖ್ಯತೆ: ಉಪಮುಖ್ಯಮಂತ್ರಿ

ಬೆಂಗಳೂರು, ಮಾ.4- ಎತ್ತಿನ ಹೊಳೆ ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಉಪಮುಖ....

ಸಿದ್ರಾಮಣ್ಣನ ಖಜಾನೆ ಖಾಲಿ: ಜೆಡಿಎಸ್
04/03/2025

ಸಿದ್ರಾಮಣ್ಣನ ಖಜಾನೆ ಖಾಲಿ: ಜೆಡಿಎಸ್

ಶಾಸಕ ಎಂ.ಪಿ.ಕೃಷ್ಣಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಯ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕು. ಚುನಾವಣೆ ಬಂದಾಗ 2 ಸಾವಿರ ಗೃಹಲಕ್ಷ್ಮಿ ....

ಕೈಗಾರಿಕೆ ಸ್ಥಾಪನೆ ನಿಲ್ಲಿಸಲು ಡಿಸಿಗೆ ಸಿಎಮ್‌ ಸೂಚನೆ
04/03/2025

ಕೈಗಾರಿಕೆ ಸ್ಥಾಪನೆ ನಿಲ್ಲಿಸಲು ಡಿಸಿಗೆ ಸಿಎಮ್‌ ಸೂಚನೆ

ಕೊಪ್ಪಳ: ಕೊಪ್ಪಳ ಸಮೀಪದಲ್ಲಿ ಬಲ್ಡೋಟ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಕಂಪನಿಯ ಉಕ್ಕು ಕಾರ್ಖಾನೆ ಸ್ಥಾಪನೆಯ ಎಲ್ಲ ಸಿದ್ಧತೆಗಳನ್ನು ನ...

ನೆಲ ಜಲ ಭಾಷೆಯ ವಿಷಯ ಬಂದಾಗ ಚಿತ್ರರಂಗ ಜೊತೆಗಿರಬೇಕು: ಉಪ ಮುಖ್ಯಮಂತ್ರಿ ಡಿಕೆಶಿ
04/03/2025

ನೆಲ ಜಲ ಭಾಷೆಯ ವಿಷಯ ಬಂದಾಗ ಚಿತ್ರರಂಗ ಜೊತೆಗಿರಬೇಕು: ಉಪ ಮುಖ್ಯಮಂತ್ರಿ ಡಿಕೆಶಿ

ಬೆಂಗಳೂರು: ಕನ್ನಡ ಚಲಚಿತ್ರರಂಗದ ವಿಚಾರ ಚರ್ಚೆಯಾಗಲಿ ಎಂಬ ಕಾರಣಕ್ಕಾಗಿಯೇ ತಾವು ನಟ್ಟು, ಬೋಲ್ಟು ವಿಷಯ ಪ್ರಸ್ತಾಪಿಸಿದ್ದಾಗಿ ಉಪಮುಖ....

ರಾಜ್ಯವಿಧಾನಮಂಡಲಗಳ ಮತ್ತು ಅವುಗಳ ಸದಸ್ಯರ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು
03/03/2025

ರಾಜ್ಯವಿಧಾನಮಂಡಲಗಳ ಮತ್ತು ಅವುಗಳ ಸದಸ್ಯರ ಅಧಿಕಾರಗಳು, ವಿಶೇಷಾಧಿಕಾರಗಳು ಮತ್ತು ಉನ್ಮುಕ್ತಿಗಳು

194. ವಿಧಾನಮಂಡಲದ ಸದನಗಳ ಮತ್ತು ಅದರ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ವಿಶೇಷಾಧಿಕಾರಗಳು, ಇತ್ಯಾದಿ:- (1) ಈ ಸಂವಿಧಾನದ ಉಪಬಂಧಗಳಿಗೆ ಮ...

ಅಂತಾರಾಷ್ಟ್ರೀಯ ಉತ್ಸವ. ದೆಹಲಿಗೆ ತಮ್ಮ ಕಥೆಯೊಂದಿಗೆ ಹಾರಲಿರುವ ಡಾ.ಸಿದ್ಧರಾಮ ಹೊನ್ಕಲ್.
02/03/2025

ಅಂತಾರಾಷ್ಟ್ರೀಯ ಉತ್ಸವ. ದೆಹಲಿಗೆ ತಮ್ಮ ಕಥೆಯೊಂದಿಗೆ ಹಾರಲಿರುವ ಡಾ.ಸಿದ್ಧರಾಮ ಹೊನ್ಕಲ್.

ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಇಡೀ ಏಷಿಯಾ ಖಂಡದಲ್ಲಿಯೇ ಬಹುದೊಡ್ಡ ಪ್ರಮಾಣದಲ್ಲಿ ದಿನಾಂಕ 7-3-25 ರಿಂದ ದಿನಾಂಕ 12-3-25 ವರೆಗ.....

Address

Bangalore

Alerts

Be the first to know and let us send you an email when Jana Aakrosha News posts news and promotions. Your email address will not be used for any other purpose, and you can unsubscribe at any time.

Share