Holaya Brigade - ಹೊಲಯ ಬ್ರಿಗೇಡ್

Holaya Brigade - ಹೊಲಯ ಬ್ರಿಗೇಡ್ Contact information, map and directions, contact form, opening hours, services, ratings, photos, videos and announcements from Holaya Brigade - ಹೊಲಯ ಬ್ರಿಗೇಡ್, News & Media Website, Bangalore.

ಹೊಲಯ, ಪರಯ, ಪುಲಯ, ಮಹರ್, ಮಾಲಾ,ಮೇರ, ಮನ್ಸ, ಪರವ, ಪಂಬದ, ನಲಿಕೆ, ಕೆಂಬಟ್ಟಿ, ಹಗ್ಗ , ಮಗ್ಗ , ಮೊಗೇರ, ಹಸಲ ಹಾಗೂ ಇತರೆ ಕೃಷಿ ಪ್ರಧಾನ ಪರಿಶಿಷ್ಟರ ಸಮಗ್ರ ಮಾಹಿತಿಯನ್ನು ತೆರೆದಿಡುವ ಪುಟ.

ಹೊಲಯ ಬ್ರಿಗೇಡ್ ಸಂಸ್ಥಾಪಕರು: ಲಕ್ಷ್ಮೀರಾಮ್.

ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸಿದೆ.‌ ಹೈಕೋರ್ಟ್ ನಲ್ಲಿ ಆಕ್ಷೇಪಸಿ ಸಲ್ಲಿಸಿದ್ದ ಸಾರ್...
27/09/2025

ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸಿದೆ.‌ ಹೈಕೋರ್ಟ್ ನಲ್ಲಿ ಆಕ್ಷೇಪಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಹಾಗಾಗಿ ಇಂದಿನಿಂದ ಬಹುತೇಕ ಪ್ರದೇಶಗಳಲ್ಲಿ ಸಮೀಕ್ಷೆಯು ಆರಂಭವಾಗುತ್ತಿದೆ.

ಹಿನ್ನೆಲೆ:
ಸಂವಿಧಾನದ (ಪರಿಶಿಷ್ಟ ಪಟ್ಟಿಯ ಜಾತಿಗಳು) ಆದೇಶ, 1950 ಪ್ರಕಾರ, ಕರ್ನಾಟಕ (ಆಗ ಮೈಸೂರು ರಾಜ್ಯ)ದ ಯಾವ ಯಾವ ಜಾತಿಗಳು ಪರಿಶಿಷ್ಟ ಪಟ್ಟಿಯ ಜಾತಿಗಳಾಗಿವೆ ಎಂಬುದನ್ನು ರಾಷ್ಟ್ರಪತಿಗಳು 341(1)ರ ಅಡಿಯಲ್ಲಿ ಘೋಷಿಸಿದ್ದರು. ಮೊದಲು ಆ ಜಾತಿಗಳಲ್ಲಿ — ಮುಖ್ಯವಾಗಿ ಹಿಂದೂಗಳನ್ನು (ಮತ್ತೆ 1956ರ ತಿದ್ದುಪಡಿಯ ನಂತರ ಸಿಖ್‌ಗಳನ್ನೂ) — ಪರಿಶಿಷ್ಟ ಪಟ್ಟಿಯ ಜಾತಿಗಳೆಂದು ಪರಿಗಣಿಸಲಾಗುತ್ತಿತ್ತು.

1990ರ ತಿದ್ದುಪಡಿಯ ನಂತರ Constitution (Scheduled Castes) Orders (Amendment) Act,
1990 ಎಲ್ಲಾ ರಾಜ್ಯಗಳಿಗೆ ಅನ್ವಯಿಸಿತು; ಇದರಿಂದ ಆದೇಶದ ಪರಿಚ್ಛೇದ 3ರಲ್ಲಿನ ನಿಯಮಕ್ಕನುಸಾರ 1990ರ ತಿದ್ದುಪಡಿಯ ನಂತರ “ಹಿಂದೂ, ಸಿಖ್ ಅಥವಾ ಬೌದ್ಧಧರ್ಮಕ್ಕೆ ಸೇರಿದವರಿಗೆ ಮಾತ್ರ ಎಲ್ಲಾ ರೀತಿಯ ಸವಲತ್ತುಗಳು ಮುಂದುವರಿಯುತ್ತದೆ, ಆದರೆ ಅನ್ಯದೇಶದ ಧರ್ಮಗಳಾದ ಕ್ರೈಸ್ತ ಹಾಗೂ ಇಸ್ಲಾಂ ಧರ್ಮವನ್ನು ಪಾಲಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯನೆಂದಾಗಿ ಪರಿಗಣಿಸಲಾಗುವುದಿಲ್ಲ.” ಎಂದು ತಿಳಿಸುತ್ತದೆ.

ಈ ಹಿಂದೆ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗವು ಒಳಮೀಸಲಾತಿಗಾಗಿ ನಡೆಸಿದ ಗಣತಿಯಲ್ಲಿ ಪರಿಶಿಷ್ಟ ಜಾತಿಯ 'ಹೊಲಯ' ಸಮುದಾಯವು ಯಾವ ರೀತಿ ಜಾತಿ, ಉಪಜಾತಿಯ ಹೆಸರನ್ನು 'ಹೊಲಯ' ನಮೂದಿಸಬೇಕೆಂದು ಕೋಡ್ ಸಂಕೇತಗಳನ್ನು ತಿಳಿಸಿ 'ಹೊಲಯ ಬ್ರಿಗೇಡ್' ವ್ಯಾಪಕವಾಗಿ ಪೋಸ್ಟರ್ ಗಳ‌ ಮೂಲಕ ಪ್ರಚಾರ ಮಾಡಿತ್ತು. ರಾಜ್ಯಾದ್ಯಂತ ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಬಲಗೈ ಸಂಬಂಧಿತ ಜಾತಿಗಳು ಗರಿಷ್ಟ ಸಂಖ್ಯೆಯಲ್ಲಿ 'ಹೊಲಯ' ಎಂದು ನಮೂದಿಸಿದರು.‌ ಇದು ನಿಜಕ್ಕೂ 'ಹೊಲಯ ಬ್ರಿಗೇಡ್'ನ ಪ್ರಯತ್ನಕ್ಕೆ ಸಂದ ಜಯ ಎಂದು ಹೇಳಬಹುದು.

ಈ ದೇಶಕ್ಕಾಗಿ ಅತ್ಯುನ್ನತ ಸಂವಿಧಾನ ರಚಿಸಿದ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರು ದೇಶದ ಸಮಸ್ತ ಅಸ್ಪೃಶ್ಯ ಸಮುದಾಯಗಳಿಗೆ ಧಾರ್ಮಿಕ ವಿಮೋಚನೆಯ ಸ್ಪಷ್ಟವಾದ ಮಾರ್ಗ ತೋರಿಸಿದ್ದಾರೆ. ಅಸ್ಪೃಶ್ಯ ಸಮುದಾಯವಾದ ನಾವು ಅಂಬೇಡ್ಕರ್ ಅವರ ದಾರಿಯನ್ನು ಅನುಸರಿಸುತ್ತಾ ಬಂದಿದ್ದೇವೆ‌‌. ಹಾಗಾಗಿ ಯಾವುದೇ ಗೊಂದಲವಿಲ್ಲದೆ, ಆತಂಕವಿಲ್ಲದೆ ಈ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿ. ಮುಂದುವರೆದು ಮೌಡ್ಯಗಳ ಸಂಕೋಲೆಯಿಂದ ಬಿಡಿಸಿಕೊಳ್ಳಲು ಬಯಸುವವರು ಧರ್ಮದ ಕಾಲಂನಲ್ಲಿ 'ಬೌದ್ಧ' ಎಂದು ನಮೂದಿಸಲು ಅವಕಾಶವಿರುತ್ತದೆ. ಬೌದ್ಧ ಧರ್ಮದ ಮುಖೇನ ಜಗತ್ತಿನ ಸಂಪರ್ಕ ಪಡೆದು ಎಲ್ಲೆಡೇ ವ್ಯಾಪಿಸೊಣ .

- ಡಾ. ಗೌತಮ್ ಆವರ್ತಿ.

16/09/2025

ಭಾರತೀಯ ಭಾಷಾ ಸಂಸ್ಥಾನ ಮೈಸೂರು(CIIL) ನಲ್ಲಿ ಅಧಿಕಾರಿಯಾಗಿರುವ ಬಿ ಎಂ ಲಿಂಗರಾಜ್ ರವರು ಕಳೆದ ಎಂಟು ವರ್ಷಗಳಿಂದ "ನವಯಾನ ಬುದ್ಧ ಧಮ್ಮ ಒಕ್ಕೂಟ"ಎಂಬ ಸಂಸ್ಥೆಯ ಮೂಲಕ ಬಾಬಾಸಾಹೇಬರು ತೋರಿಸಿದ ದಾರಿಯಲ್ಲಿ ಹಲವಾರು ಬುದ್ಧ ಧಮ್ಮದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದಾರೆ.

ಸಧ್ಯದ ಪರಿಸ್ಥಿಯಲ್ಲಿ ಬಾಬಾಸಾಹೇಬರು ರೂಪಿಸಿದ ಈ ರೀತಿಯ ಕಾರ್ಯಕ್ರಮಗಳು ನಮ್ಮ ಸಮುದಾಯಕ್ಕೆ ಹೆಚ್ಚು ಅವಶ್ಯಕವಾಗಿದ್ದು, ಈ ಸಕಾರಣದಿಂದ ಸಂಘಟನೆಯ FB ಪುಟವನ್ನು ಹಂಚಿಕೊಳ್ಳುತ್ತಿದ್ದೇವೆ.

ಈ ಪುಟವನ್ನು ಫಾಲೋ ಮತ್ತು ಮರುಹಂಚಿಕೆ ಮಾಡಿ ಮುಂದಿನ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳಿ.

ಧನ್ಯವಾದಗಳು.
Holaya Brigade - ಹೊಲಯ ಬ್ರಿಗೇಡ್ , ಕರ್ನಾಟಕ.

https://www.facebook.com/share/1FdnLq5scr/

Dr. B. R. Ambedkar left an indelible mark on Indian society by uplifting the grief-stricken indigenous people of India through his relentless efforts and meticulous work. On October 14, 1956, embraced Buddhism.

- B M Lingaraj
Chief Convener

ಬಾಬಾಸಾಹೇಬರಿಗೆ ದ್ರೋಹ ಬಗೆಯುವಂತಹ ಈ ರೀತಿಯ ನವರಂಗಿ ನಾಟಕಗಳನ್ನು ಸರ್ಕಾರ ಮಾಡಬಾರದು. ಇದನ್ನು ಸಮುದಾಯದ ಮಂತ್ರಿಗಳು ನೋಡಿಕೊಂಡು ಕಣ್ಣಿದ್ದೂ ಕು...
15/09/2025

ಬಾಬಾಸಾಹೇಬರಿಗೆ ದ್ರೋಹ ಬಗೆಯುವಂತಹ ಈ ರೀತಿಯ ನವರಂಗಿ ನಾಟಕಗಳನ್ನು ಸರ್ಕಾರ ಮಾಡಬಾರದು. ಇದನ್ನು ಸಮುದಾಯದ ಮಂತ್ರಿಗಳು ನೋಡಿಕೊಂಡು ಕಣ್ಣಿದ್ದೂ ಕುರುಡುತನ ಪ್ರದರ್ಶಿಸಿದ್ದು ನಾಚಿಕೆಗೇಡಿನ ಸಂಗತಿ.

ಇದನ್ನು ಹೊಲಯ ಬ್ರಿಗೇಡ್ ಉಗ್ರವಾಗಿ ಖಂಡಿಸುತ್ತದೆ. ಈ ನಿಮ್ಮ ನಡೆಯನ್ನು ಜಗತ್ತೂ ಕೂಡಾ ಗಮನಿಸುತ್ತದೆ.

- Holaya Brigade - ಹೊಲಯ ಬ್ರಿಗೇಡ್ , #ಕರ್ನಾಟಕ

ಬುದ್ಧ ಧಮ್ಮ- ಅನಾಗಾರಿಕ ಧರ್ಮಪಾಲ | ಹಿಂದೂ ಧರ್ಮ - ವಿವೇಕಾನಂದ.- ಡಾ. ಗೌತಮ್ ಆವರ್ತಿ -----------------------------------------------...
11/09/2025

ಬುದ್ಧ ಧಮ್ಮ- ಅನಾಗಾರಿಕ ಧರ್ಮಪಾಲ | ಹಿಂದೂ ಧರ್ಮ - ವಿವೇಕಾನಂದ.
- ಡಾ. ಗೌತಮ್ ಆವರ್ತಿ ------------------------------------------------------------------------------
1893ರ ಸೆಪ್ಟೆಂಬರ್ 11ರಂದು, ಅನಾಗಾರಿಕ ಧರ್ಮಪಾಲರು ಅಮೇರಿಕಾದ ಶಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಬೌದ್ಧ ಲೋಕವನ್ನು ಪ್ರತಿನಿಧಿಸಿ ಪಾಲ್ಗೊಂಡರು. ಅವರು ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ “ಬುದ್ಧನಿಗೆ ಜಗತ್ತು ಸಲ್ಲಿಸಬೇಕಾದ ಋಣ”ಎಂಬ ಮಹತ್ವದ ಉಪನ್ಯಾಸವನ್ನು ಆರ್‍ಟ್ ಪ್ಯಾಲೆಸ್‌ನಲ್ಲಿ, ವಿಶ್ವ ಕೊಲಂಬಿಯನ್ ಎಕ್ಸ್‌ಪೋಸಿಷನ್ ಜೊತೆಗೆ ನಡೆಸಲಾದ ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಈ ಘಟನೆಯು ಪಾಶ್ಚಾತ್ಯ ಜಗತ್ತಿಗೆ, ಬೌದ್ಧ ಧರ್ಮವನ್ನು ಬೌದ್ಧರೊಬ್ಬರ ಪ್ರತಿನಿಧಿತ್ವದ ಮೂಲಕ ಪ್ರಥಮ ಬಾರಿಗೆ ಅಧಿಕೃತವಾಗಿ ಪರಿಚಯಿಸಿದ ಮಹತ್ವದ ಸಂದರ್ಭವಾಯಿತು.

ಭಾರತದಿಂದ ಹಿಂದೂ ಧರ್ಮದ ಕುರಿತು ಉಪನ್ಯಾಸ ನೀಡಲು ಸ್ವಾಮಿ ವಿವೇಕಾನಂದರು ತೆರಳಿದ್ದರೆ, ಭಾರತದ ಬುದ್ಧ ಧಮ್ಮದ ಕುರಿತು ಉಪನ್ಯಾಸ ನೀಡಲು ಶ್ರೀಲಂಕಾದಿಂದ ಅನಾಗಾರಿಕ ಧರ್ಮಪಾಲರು ಭಾಗವಹಿಸಿದ್ದರು.

ಮಾನ್ಯ ಹೊಲಯ ಕುಲ ಬಂಧುಗಳೇ, ಕಳೆದ ಜನವರಿ ತಿಂಗಳಲ್ಲಿ ಹೊಲಯರ ಇತಿಹಾಸ ಮತ್ತು ಸಂಸ್ಕೃತಿ  ಕುರಿತು ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಲು ಮತ್ತು...
08/09/2025

ಮಾನ್ಯ ಹೊಲಯ ಕುಲ ಬಂಧುಗಳೇ,

ಕಳೆದ ಜನವರಿ ತಿಂಗಳಲ್ಲಿ ಹೊಲಯರ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಲು ಮತ್ತು ನಮಗೆ ದಕ್ಕಿದ ಮಾಹಿತಿಗಳನ್ನು ಹಂಚಲು ನಾನು ಮತ್ತು ನಾಡಿನ ಖ್ಯಾತ ಮಾನವಶಾಸ್ತ್ರಜ್ಞರಾದ ಡಾ.ಗೌತಮ್ ಆವರ್ತಿ ರವರು ಸೇರಿಕೊಂಡು ಹೊಲಯ ಬ್ರಿಗೇಡ್ ಅನ್ನೋ ಹೆಸರಲ್ಲಿ ಪೇಜ್ ಶುರು ಮಾಡಿದೆವು.

ಈ ಸೊಗಸಾದ ಲೋಗೋ ವಿನ್ಯಾಸವನ್ನು ತುಂಬ ಚಿಂತಿಸಿ ಬೌದ್ಧ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿ ಒಳಗೊಂಡಂತೆ ಇರಲಿ ಎಂದು ನಮ್ಮ ಡಾ. ಗೌತಮ್ ಆವರ್ತಿಯವರು ವಿನ್ಯಾಸಗೊಳಿಸಿದರು.

ಈಗ ಈ ಲೋಗೋವನ್ನು ಬೇರೆ ಬೇರೆ ಸಂಘ ಸಂಸ್ಥೆ ಗಳು ಬಳಸುತಿದ್ದಿರಿ ಬಹಳಾ ಸಂತೋಷ ಆದರೆ ಅದನ್ನು ವಿಕೃತಿ ಮಾಡದೆ ಮೂಲ ಲೋಗೋವನ್ನೇ ಬಳಸಿ.

ಇದಷ್ಟೇ ನಮ್ಮ ಆಶಯ.

- ಲಕ್ಷ್ಮಿರಾಮ್ ಮೈಸೂರು
Link : https://www.facebook.com/share/1DvZJVQk9V/

ಹೊಲಯ ಬ್ರಿಗೇಡ್ ಎಂಬುದು ಹೊಲಯ ಸಮುದಾಯದ ಹಲವು ಸಂಶೋಧಕರು, ವಕೀಲರುಗಳು ಮತ್ತು ಸಮುದಾಯದ ಚಿಂತಕರು ಒಗ್ಗೂಡಿ ಪ್ರಾರಂಭಿಸಿರುವ ಸ್ವತಂತ್ರ ಸಂಘಟನೆಯಾ...
29/08/2025

ಹೊಲಯ ಬ್ರಿಗೇಡ್ ಎಂಬುದು ಹೊಲಯ ಸಮುದಾಯದ ಹಲವು ಸಂಶೋಧಕರು, ವಕೀಲರುಗಳು ಮತ್ತು ಸಮುದಾಯದ ಚಿಂತಕರು ಒಗ್ಗೂಡಿ ಪ್ರಾರಂಭಿಸಿರುವ ಸ್ವತಂತ್ರ ಸಂಘಟನೆಯಾಗಿದ್ದು ತನ್ನದೇ ಆದ ರಿಜಿಸ್ಟರ್ ಮಾಡಿಸಿರುವ ಲೋಗೋ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಯವರು ನಮ್ಮ ಲೋಗೋವನ್ನು ಮತ್ತು ಹೆಸರನ್ನು ಬಳಸಿಕೊಂಡು ವಾಟ್ಸಾಪ್ ಗ್ರೂಪ್ಗಳನ್ನು ಮಾಡಿ
ಸಮುದಾಯದ ಹೆಸರು ಹೇಳಿಕೊಂಡು ಹಣ ವಸೂಲಿಗಾಗಿ
ಬಳಸಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಹಾಗಾಗಿ ಈ ಬಗ್ಗೆ ನಮ್ಮ ಸ್ಪಷ್ಟನೆ ಏನೆಂದರೆ,
ಕಾಪಿರೈಟ್ ಹೊಂದಿರುವ ಹೊಲಯ ಬ್ರಿಗೇಡ್ ಲೋಗೋವನ್ನು ಮತ್ತು ಹೆಸರನ್ನು ಬಳಸುವುದು ನ್ಯಾಯಸಮ್ಮತವಲ್ಲ, ಕಾಪಿರೈಟ್ ಉಲ್ಲಂಘನೆ ಮಾಡುವುದು ಯಾವುದೇ ಸಂಘಟನೆಗಳಿಗೂ ಶೋಭೆ ತರುವುದಿಲ್ಲ. ನಮ್ಮ ಸಂಘಟನೆಯ ಯಾವುದೇ ವಾಟ್ಸಾಪ್ ಗ್ರೂಪ್ ಇಲ್ಲದಿರುವುದರಿಂದ, ಮೋಸ ಹೋದರೆ ನೀವೇ
ಜವಾಬ್ದಾರರು, ಇದನ್ನು ಮೀರಿಯೂ ಲೋಗೋ ಮತ್ತು ಹೆಸರು ಬಳಸಿರುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ.

ನಮ್ಮ ಅಧಿಕೃತ ಪುಟ ಇದೊಂದೇ ಆದ್ದರಿಂದ, ಇದನ್ನಷ್ಟೇ ಅನುಸರಿಸಿ.

- ಹೊಲಯ ಬ್ರಿಗೇಡ್, ಕರ್ನಾಟಕ - 2025

ದೇವರ ಸಾಮ್ರಾಜ್ಯವಾದ ಕೇರಳದಲ್ಲಿ ಮಾನವಹಕ್ಕುಗಳನ್ನು ಮೊದಲ ಬಾರಿಗೆ ಸ್ಥಾಪಿಸಿದ  ಹೋರಾಟಗಾರ ಅಯ್ಯನ್ ಕಾಳಿ.- ಗೌತಮ ಆವರ್ತಿ-------------------...
28/08/2025

ದೇವರ ಸಾಮ್ರಾಜ್ಯವಾದ ಕೇರಳದಲ್ಲಿ ಮಾನವಹಕ್ಕುಗಳನ್ನು ಮೊದಲ ಬಾರಿಗೆ ಸ್ಥಾಪಿಸಿದ ಹೋರಾಟಗಾರ ಅಯ್ಯನ್ ಕಾಳಿ.

- ಗೌತಮ ಆವರ್ತಿ
------------------------------------------------------------------------------
ಇದು ೧೮೮೧ರ ಮಾತು. ಆ ದಿನಗಳಲ್ಲಿ ಒಬ್ಬ ಚೇರುಮಾನ್ನ ಬೆಲೆ ಕೇವಲ ಆರರಿಂದ ಒಂಬತ್ತು ರೂಪಾಯಿ ಮಾತ್ರ, ಚೇರುಮಾನ್ ಎಂದರೆ ಪುಲಯರು (ಹೊಲಯರು). ಅಂದರೆ ಯಾರಾದರೂ ಚೇರುಮಾನ್ನನ್ನು ಕೊಂಡುಕೊಳ್ಳಬಹುದು ಅಥವಾ ಮಾರಬಹುದು, ಬಾಡಿಗೆಗೆ ತೆಗೆದುಕೊಳ್ಳಬಹುದು. ಬೇಡವೆಂದರೆ ದಾನ ಕೊಡಬಹುದು. ಆ ದಿನಗಳಲ್ಲಿ ಮದುಮಗಳು ಅತ್ತೆಯ ಮನೆಗೆ ಹೋಗುತ್ತಿದ್ದರೆ ದಕ್ಷಿಣೆಯಾಗಿ ಕೊಟ್ಟು ಕಳುಹಿಸುವ ಜೀವವಿಲ್ಲದ ವಸ್ತುಗಳ ನಡುವೆ ಚೇರುಮಾನ್ ಇರುತ್ತಿದ್ದ. ಗುಡಿಗಳಿಗೆ, ಗೋಪುರಗಳಿಗೆ ಚೇರುಮಾನ್ನನ್ನು ಬಹುಮಾನವಾಗಿ ಕೊಡುವವರೂ ಇದ್ದರು.

ಸಮಾಜದಲ್ಲಿ ಇಂತಹ ಅನ್ಯಾಯ ರಾಜ್ಯವಾಳುತ್ತಿದ್ದ ದಿನಗಳಲ್ಲಿ ಹುಟ್ಟಿದ ಅಯ್ಯನ್ಕಾಳಿ ಅಸ್ಪೃಶ್ಯರ ಜೀವನದಲ್ಲಿ ಬದಲಾವಣೆ ತರುವುದಕ್ಕೆ ಅವರ ಹೋರಾಟಗಳಿಗೆ ನಾಯಕತ್ವ ವಹಿಸಿದ. ಅಸ್ಪೃಶ್ಯರ ಕತ್ತಲ ಬದುಕಿನಲ್ಲಿ ಬೆಳಕನ್ನು ತುಂಬಲು ತನ್ನ ಜೀವನವನ್ನೇ ಚಳವಳಿಯಾಗಿ ಪರಿವರ್ತಿಸಿಕೊಂಡ ಅಯ್ಯನ್ ಕಾಳಿ.

ಅಸ್ಪೃಶ್ಯರು ರಸ್ತೆಯ ಮೇಲೆ ನಡೆಯುವುದಕ್ಕೆ ನಿಷೇಧವಿದ್ದ ದಿನಗಳಲ್ಲಿ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿ, ತಾನೇ ಎಲ್ಲ ನಿಷೇಧಗಳನ್ನು ಉಲ್ಲಂಘಿಸಿ, ರಸ್ತೆಯ ಮೇಲೆ ದಿಟ್ಟತನದಿಂದ ನಡೆದು, ಎಲ್ಲ ರಸ್ತೆಗಳನ್ನು ಅಸ್ಪೃಶ್ಯರಿಗೆ ತೆರೆಸಿ, ಅಸ್ಪೃಶ್ಯರನ್ನು ರಸ್ತೆಯ ಮೇಲೆ ನಡೆಸಿ, ಆ ಹಕ್ಕಿಗಾಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿ, ಅಸ್ಪೃಶ್ಯರ ಹಕ್ಕುಗಳನ್ನು ಮೊದಲ ಬಾರಿಗೆ ಸ್ಥಾಪಿಸಿದ ಹೋರಾಟಗಾರ ಅಯ್ಯನ್ಕಾಳಿ. ಸವರ್ಣೀಯರ ಹೊಡೆತಗಳಿಗೆ ನೆತ್ತರು ಸುರಿಯುತ್ತಿದ್ದರೂ ರಸ್ತೆಯ ಮೇಲೆ ನಡೆಯುವ ಹಕ್ಕನ್ನು ಉಳಿಸಿಕೊಂಡ ಹೋರಾಟ ಚರಿತ್ರೆ ಬಹುಶಃ ಭಾರತದಲ್ಲಿ ಬೇರೆಲ್ಲಿಯೂ ಇಲ್ಲ!

ಅಸ್ಪೃಶ್ಯರಿಗಾಗಿ ದೇವಾಲಯದ ಬಾಗಿಲುಗಳನ್ನು ತೆರೆಸಿದ ಮೊದಲ ನಾಯಕ ಅಯ್ಯನ್ಕಾಳಿ. ಈ ಹೋರಾಟಕ್ಕೆ ಸಾಟಿಯಾಗುವ ಹೋರಾಟ ಬೇರೆಲ್ಲಿಯೂ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಅಸ್ಪೃಶ್ಯರನ್ನು ಶಾಲೆಗೆ ಸೇರಿಸದಿರುವ ದಿನಗಳವು. ತಿರುವಾಂಕೂರ್ ಮಹಾರಾಜ ಶಾಲೆಗಳಿಗೆ ಅಸ್ಪೃಶ್ಯ ಮಕ್ಕಳನ್ನು ಸೇರಿಸಿಕೊಳ್ಳಬೇಕೆಂದು ಆದೇಶ ನೀಡಿದರೂ ಸವರ್ಣೀಯರು ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ಹೋರಾಟ ಮಾಡಿದ ಅಯ್ಯನ್ಕಾಳಿ. ಎಲ್ಲವೂ ಬೀದಿ ಹೋರಾಟಗಳೇ. ಎರಡೂ ಕಡೆಯವರು ಬಡಿಗೆಗಳನ್ನಿಡಿದುಕೊಂಡು ತಲೆಗಳನ್ನು ಒಡೆದಿಕ್ಕಿಕೊಳ್ಳುತ್ತಿದ್ದರು. ಸ್ವತಃ ಅಯ್ಯನ್ಕಾಳಿ ಬಡಿಗೆ ಹಿಡಿದು ಹೋರಾಟ ಮಾಡುತ್ತಿದ್ದ. ಆರು ಅಡಿ ಎತ್ತರವಿದ್ದ ಆಜಾನುಬಾಹು ಬಡಿಗೆ ಹಿಡಿದು ರಸ್ತೆಯ ಮೇಲೆ ನಿಂತರೆ ಸವರ್ಣೀಯರು ಓಡಿ ಹೋಗುತ್ತಿದ್ದರು. ಪ್ರತಿ ಹೋರಾಟದಲ್ಲಿ ನೆತ್ತರು ಹರಿಯುತ್ತಿತ್ತು. ಹಲವು ಸಾರಿ ಆತನನ್ನು ಕೊಲ್ಲಲು ಪ್ರಯತ್ನಿಸಿದರು. ಆ ವೀರನ ಹತ್ತಿರ ಹೋಗುವುದಕ್ಕೆ ಕುಖ್ಯಾತ ರೌಡಿಗಳು ಭಯಪಡುತ್ತಿದ್ದರು. ಶಾಲೆಗಳಿಗೆ ಪ್ರವೇಶವನ್ನು ಸಂಪಾದಿಸಿದ್ದಲ್ಲದೆ ಆತನೇ ಸ್ವತಃ ಪಾಠಶಾಲೆಗಳನ್ನು ಸ್ಥಾಪಿಸಿದ. ವಿಚಿತ್ರವೇನೆಂದರೆ ಆತ ಓದು ಬರಹ ಬಲ್ಲವನಲ್ಲ. ಆದರೆ ಶಿಕ್ಷಣದ ಮಹತ್ವವನ್ನು ಆತ ಅರಿತಿದ್ದ.

ಅಸ್ಪೃಶ್ಯರನ್ನು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿಸಿದ್ದಲ್ಲದೆ ರೈತಕೂಲಿಗಳನ್ನು ಒಗ್ಗೂಡಿಸಿದ. ಅವರ ವೇತನದ ಬಗ್ಗೆ, ಕೂಲಿದರಗಳ ಬಗ್ಗೆ, ಕೆಲಸಕ್ಕೆ ಸಂಬಂಧಿಸಿದ ಇತರೆ ಅಂಶಗಳ ಬಗ್ಗೆ ಹಲವು ಹೋರಾಟಗಳನ್ನು ಮಾಡಿಸಿದ. ಕೇರಳದಲ್ಲಿ ಕಮ್ಯೂನಿಸ್ಟ್ ಚಳುವಳಿ ಹುಟ್ಟುವ ಮೊದಲೇ ಅಯ್ಯನ್ಕಾಳಿ ಕೂಲಿಕಾರರ ಸಂಘಗಳನ್ನು ಸ್ಥಾಪಿಸಿ ಮೊಟ್ಟಮೊದಲ ಕೂಲಿ ಮುಷ್ಕರವನ್ನು ಮಾಡಿಸಿದ. ೧೯೦೭ರಲ್ಲಿ ಮಾಡಿಸಿದ ಮುಷ್ಕರ ಬಹುಶಃ ಜಗತ್ತಿನ ಚರಿತ್ರೆಯಲ್ಲೇ ಮೊದಲ ರೈತಕೂಲಿಗಳ ಮುಷ್ಕರ ಎನ್ನುತ್ತಾರೆ ಚರಿತ್ರೆಕಾರರು. ಈ ವಿಷಯವನ್ನು ಕಮ್ಯೂನಿಸ್ಟರು ನಮಗೆ ಹೇಳಲಿಲ್ಲ. ಭಾರತಕ್ಕೆ ಅಗತ್ಯವಾದ ಕ್ರಾಂತಿಗೆ ಅಯ್ಯನ್ಕಾಳಿ ನಾಂದಿ ಹಾಡಿದ.

ಕೊಚ್ಚಿಯಲ್ಲಿ ಒಂದು ಸಾರಿ ಅಯ್ಯನ್ಕಾಳಿಗೆ ಎಲ್ಲೂ ಸಮಾವೇಶವನ್ನು ನಡೆಸುವುದಕ್ಕೆ ಅಲ್ಲಿನ ರಾಜ ಅನುಮತಿ ನೀಡಲಿಲ್ಲ. ನೆಲದ ಮೇಲೆ ಎಲ್ಲೂ ಸಮ್ಮೇಳನ ನಡೆಸುವುದಕ್ಕೆ ಅವಕಾಶವಿಲ್ಲವೆಂದಿದ್ದಕ್ಕೆ ಪಕ್ಕದಲ್ಲೇ ಇದ್ದ ನದಿಯ ಮೇಲೆ ಸಾವಿರಾರು ತೆಪ್ಪ ಮತ್ತು ದೋಣಿಗಳನ್ನು ಸೇರಿಸಿ ಕಟ್ಟಿ ನೀರಿನ ಮೇಲೆ ಸಮಾವೇಶ ನಡೆಸಿದ. ಬಹುಶಃ ಜಗತ್ತಿನಲ್ಲೇ ಇದು ಅಪೂರ್ವವಾದ ಘಟನೆ.

ಅಸ್ಪೃಶ್ಯ ಜಾತಿಯಾದ 'ಪುಲಯ 'ರನ್ನು ಒಗ್ಗೂಡಿಸಿದ್ದಲ್ಲದೆ ಅವರು ಮಾಡುತ್ತಿದ್ದ ರೈತ ಕೂಲಿಗಳ ಮುಷ್ಕರವನ್ನು ಜಮೀನ್ದಾರರು ಹತ್ತಿಕ್ಕುವುದಕ್ಕೆ ಪ್ರಯತ್ನಿಸುತ್ತಿದ್ದರೆ ಅಲ್ಲಿನ ಬೆಸ್ತರ ಸಹಾಯವನ್ನು ತೆಗೆದುಕೊಂಡು ಮೀನು ಹಿಡಿಯುವ ಕೆಲಸಕ್ಕೆ ಪುಲಯರನ್ನು ಕಳುಹಿಸಿ ಮುಷ್ಕರ ವಿಫಲವಾಗದಂತೆ ಮಾಡಿದ ಅಯ್ಯನ್ಕಾಳಿ. ವರ್ಣಹೋರಾಟ ವನ್ನು ವರ್ಗಹೋರಾಟವನ್ನಾಗಿ ಪರಿವರ್ತಿಸಿದ ನಿಜವಾದ ಕ್ರಾಂತಿಯೋಧ ಅಯ್ಯನ್ಕಾಳಿ ಯಾವ ಹೋರಾಟವನ್ನೇ ಮಾಡಿದರೂ ಅದು ವಿನೂತನವಾದುದೇ ಆಗಿತ್ತು. ಸಾವಿರಾರು ಜನ ಪಾಲ್ಗೊಳ್ಳುವಂತಹುದೇ ಆಗಿತ್ತು. ಅಸ್ಪೃಶ್ಯರ ನೆತ್ತರಿನಿಂದ ನೆಂದಿರುವುದೇ ಆಗಿತ್ತು.

ಅಯ್ಯನ್ಕಾಳಿ ಸ್ತ್ರೀಯರ ಸಾಂಸ್ಕೃತಿಕ ಸಮಸ್ಯೆಯಲ್ಲಿ ಮತ್ತೊಂದು ಕ್ರಾಂತಿಕಾರಕ ಬದಲಾವಣೆ ತಂದ. ಕೇರಳದಲ್ಲಿ ಅಸ್ಪೃಶ್ಯ ಮಹಿಳೆಯರಿಗೆ ರವಿಕೆ ಹಾಕಿಕೊಳ್ಳುವುದಕ್ಕೆ ಅವಕಾಶವಿರಲಿಲ್ಲ. ವಕ್ಷಸ್ಥಲವನ್ನು ಮುಚ್ಚಿ ಕೊಳ್ಳುವುದಕ್ಕೆ ಕಲ್ಲುಗಳು ಮತ್ತು ಮಣಿಗಳ ಸರವನ್ನು ಹಾಕಿಕೊಳ್ಳಬೇಕು. ಅಯ್ಯನ್ಕಾಳಿ ಆ ಅಭ್ಯಾಸವನ್ನು ಹೋಗಲಾಡಿಸುವುದಕ್ಕೆ ಒಂದು ಚಳುವಳಿಯನ್ನೇ ಮಾಡಿದ. ಮಹಿಳೆಯರಲ್ಲಿ ಲೋಕಪ್ರಜ್ಞೆಯನ್ನು ಜಾಗೃತ ಗೊಳಿಸಿ ಒಂದೇ ದಿನದಲ್ಲಿ ಸಾವಿರಾರು ಮಂದಿ ಮಹಿಳೆಯರ ಸಮಾವೇಶ ಏರ್ಪಡಿಸಿ ಅಲ್ಲಿ ಆತ ಒಂದು ಕರೆಯನ್ನು ನೀಡಿದ ಕೂಡಲೇ ಸಾವಿರಾರು ಮಂದಿ ಸ್ತ್ರೀಯರು ಒಂದೇ ಸಾರಿ ಆ ಕಲ್ಲುಗಳ, ಮಣಿಗಳ ಸರವನ್ನು ಕಿತ್ತೆಸೆದರು. ಅಂದಿನಿಂದ ರವಿಕೆಗಳನ್ನು ಹಾಕಿಕೊಳ್ಳಲು ಆರಂಭಿಸಿದರು.

ಮಹಿಳೆಯರು ರವಿಕೆಗಳನ್ನು ಹಾಕಿಕೊಂಡರೂ ಸಹಿಸಲಾರದ ಸವರ್ಣೀಯರು ಮಹಿಳೆಯರ ಮೇಲೆ ದಾಳಿ ಮಾಡಿದರೆ ಸಾವಿರಾರು ಮಂದಿ ಮಹಿಳೆಯರು ತಟ್ಟನೆ ಜಾಗೃತರಾಗಿ ಎದುರು ದಾಳಿ ಮಾಡಿ ಸವರ್ಣೀಯರನ್ನು ಓಡಿಸಿ ಹೊಡೆದರು. ಅಯ್ಯನ್ಕಾಳಿಯ ಜೀವನವೆಲ್ಲ ಇಂತಹ ಹೋರಾಟಗಳಲ್ಲೇ ಕಳೆದ. ಕೇರಳದಲ್ಲಿ ಅದನ್ನು ಹೋರಾಟಗಳ ಯುಗವೆಂದು ಕರೆಯಲಾಗಿದೆ.

ಅಸ್ಪೃಶ್ಯತೆಯನ್ನು ಹೋಗಲಾಡಿಸಿ, ಮಾನವಹಕ್ಕುಗಳನ್ನು ಸಾಧಿಸಿ ನಾಗರಿಕವಾದ ಜೀವನವನ್ನು ಪುಲಯರು ನಡೆಸುವುದಕ್ಕೆ ಸಾಧುಜನ ಪರಿಪಾಲನ ಸಂಘವನ್ನು ಸ್ಥಾಪಿಸಿದ. ಅವರನ್ನು ಚೈತನ್ಯಗೊಳಿಸುವುದಕ್ಕೆ ಒಂದು ಪತ್ರಿಕೆಯನ್ನು ನಡೆಸಿದ.

ಅಸ್ಪೃಶ್ಯರು ರಸ್ತೆಯ ಮೇಲೆ ನಡೆಯುವುದಕ್ಕೆ ಅವಕಾಶವಿಲ್ಲವೆಂಬ ನಿರ್ಬಂಧವನ್ನು ಹೊಡೆದುಹಾಕಲು ಎತ್ತಿನಗಾಡಿಯನ್ನು ತೆಗೆದುಕೊಂಡು ಎರಡು ಬಿಳಿ ಎತ್ತುಗಳನ್ನು ಕಟ್ಟಿ ಅವುಗಳ ಕೊರಳಿಗೆ ಗಂಟೆ ಕಟ್ಟಿ, ಒಂದು ಬಿಳಿಪಂಚೆ, ಬಿಳಿ ಅಂಗವಸ್ತ್ರ ತೊಟ್ಟುಕೊಂಡು ಆರಡಿಯ ಆಜಾನುಬಾಹು ಗಾಡಿಯ ಮೇಲೆ ಕುಳಿತು ಹಗ್ಗ ಹಿಡಿದುಕೊಂಡು ಬೀದಿಗಳಲ್ಲಿ ಗಾಡಿಯನ್ನು ಓಡಿಸುತ್ತಿದ್ದರೆ ಸವರ್ಣೀಯ ಹಿಂದುಗಳು ನಿಬ್ಬೆರಗಾಗಿ ತಲಾ ಒಂದು ದಿಕ್ಕಿಗೆ ಓಡಿಹೋಗುತ್ತಿದ್ದರು. ಸವರ್ಣೀಯರಿಗೆ ತಮ್ಮ ಎದೆಯ ಮೇಲೆ ಎತ್ತಿನ ಗಾಡಿ ಓಡಿಸಿದಂತಾಗುತ್ತಿತ್ತು. ಅಸ್ಪೃಶ್ಯ ಜಾತಿಯವರಿಗೆ ರಾಜಮಾರ್ಗವನ್ನು ತೆರೆಸಿದ ಸಾಮಾಜಿಕ ಕ್ರಾಂತಿಕಾರಿ ಅಯ್ಯನ್ಕಾಳಿ,

ಕೇರಳದಲ್ಲಿ ನಾರಾಯಣಗುರು ಮಾಡಲಾಗದ ಮೌಲಿಕವಾದ ಬದಲಾವಣೆಯನ್ನು ಅಯ್ಕನ್ಕಾಳಿ ತಂದ. ೧೯೨೪ರಲ್ಲಿ ನಡೆದ ವೈಕಂ ಸತ್ಯಾಗ್ರಹ ಕುರಿತು ನಮಗೆ ಹೇಳಿದರಾದರೂ ೧೯೦೭ರಲ್ಲಿಯೇ ದೇವಾಲಯ ಪ್ರವೇಶಕ್ಕಾಗಿ ಅಯ್ಯನ್ ಕಾಳಿ ಮಾಡಿದ ಹೋರಾಟದ ಬಗ್ಗೆ ಯಾರೂ ಹೇಳಲಿಲ್ಲವೆಂದರೆ ಅಸ್ಪೃಶ್ಯರಿಗೆ ಚರಿತ್ರೆಕಾರರು ಎಷ್ಟು ಅನ್ಯಾಯ ಮಾಡಿದ್ದಾರೆಂದು ತಿಳಿಯುತ್ತದೆ.

#ಹೋರಾಟಗಾರಅಯ್ಯನ್ಕಾಳಿ #ಅಸ್ಪೃಶ್ಯರು #ದೇವಾಲಯಸ್ವಾತಂತ್ರ್ಯ #ರೈತಕೂಲಿ #ಪುಲಯ #ಸವರ್ಣೀಯಹಿಂದುಗಳು #ಕೇರಳಹೋರಾಟ

ಪಾಪ ಕಣ್ರೀ ಈ ಸದಾಶಿವ, ಅಟ್ಲೀಸ್ಟ್ ಯಾರನ್ನು ರೆಫರ್ ಮಾಡ್ತಾ ಇದ್ದೇನೆ ಎನ್ನುವ ಪರಿಜ್ಞಾನ ಕೂಡಾ ಇಲ್ಲ. ಪುಸ್ತಕದ ಹೆಸರು "THE PAST OF THE OUT...
26/08/2025

ಪಾಪ ಕಣ್ರೀ ಈ ಸದಾಶಿವ, ಅಟ್ಲೀಸ್ಟ್ ಯಾರನ್ನು ರೆಫರ್ ಮಾಡ್ತಾ ಇದ್ದೇನೆ ಎನ್ನುವ ಪರಿಜ್ಞಾನ ಕೂಡಾ ಇಲ್ಲ.

ಪುಸ್ತಕದ ಹೆಸರು "THE PAST OF THE OUTCASTE, Readings in Dalit History, edited by Sabyasachi Bhattacharya Yagati Chinna Rao" ಈ ಪುಸ್ತಕ ಆರು ಸಬ್ ಹೆಡ್ ಮತ್ತು 28 ಚಾಪ್ಟರ್ ಗಳನ್ನ ಒಳಗೊಂಡಿದೆ.

ಈ ಪುಸ್ತಕದಲ್ಲಿ ಇವರು ಕೊಡುವ ಉದಾಹರಣೆಯ ಚಾಪ್ಟರ್ " VIVEKANAND JHA ಬರೆದಿರುವ Stages in the History of Untouchables, ಪುಟ ಸಂಖ್ಯೆ 104.
ಈತನು ಬರವಣಿಗೆಯಲ್ಲಿ ಬಳಸಿರುವ 99% ರೆಫರೆನ್ಸ್ ಗಳು ವೇದ ಮತ್ತು ಉಪನಿಷತ್ತು ಹಾಗೂ ಎರಡು ಕಮ್ಯುನಿಸ್ಟ್ ಬ್ರಾಹ್ಮಣರ ಪುಸ್ತಕ.. ಒಂದೇ ಸಣ್ಣ ಪುಸ್ತಕ ಅಂಬೇಡ್ಕರ್ ಬರೆದಿರುವುದನ್ನು ಒಪ್ಪಿಸಿದ್ದಾನೆ.

ಈ ವಿವೇಕಾನಂದ ಝಾ ಯಾರು.. ಇವನ ಹಿನ್ನೆಲೆಯೇನು? ಗಮನಿಸಿದರೆ.. ಇವನೊಬ್ಬ ಅಪ್ಪಟ ಕೇಸರಿ.. ಸಂಘಿ... ಇವನನ್ನು ಕರ್ನಾಟಕದ ಸೂಲಿಬೆಲೆಯಂತಹ ವಾಟ್ಸ್ ಆ್ಯಪ್ ಬರಹಗಾರರ ರೀತಿಯಲ್ಲಿ ನೋಡಬಹುದು..... ಇವನನ್ನು ಈ ಪೆದ್ದರಾದ ಸದಾಶಿವರು( ಹೋಪ್ಲೆಸ್ ಫೆಲೋ ) ಸಮರ್ಥನೆಗೆ ಬಳಸಿದ್ದಾರೆ.

- Goutham Avarthi

ಸರ್ಕಾರದ ಆದೇಶ ಸಂಖ್ಯೆ: ಸಕಇ 8 ಎಸ್‌ಎಲ್‌ಪಿ 2024, ಬೆಂಗಳೂರು ದಿನಾಂಕ: 25-8-2025.ಆಯೋಗದ ವರದಿಯಲ್ಲಿನ ಪ್ರವರ್ಗ- ಇ ರಲ್ಲಿನ ಆದಿ ಕರ್ನಾಟಕ, ಆ...
26/08/2025

ಸರ್ಕಾರದ ಆದೇಶ ಸಂಖ್ಯೆ: ಸಕಇ 8 ಎಸ್‌ಎಲ್‌ಪಿ 2024, ಬೆಂಗಳೂರು ದಿನಾಂಕ: 25-8-2025.

ಆಯೋಗದ ವರದಿಯಲ್ಲಿನ ಪ್ರವರ್ಗ- ಇ ರಲ್ಲಿನ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಈ 3 ಸಮುದಾಯಗಳು ತಿಳಿಸದೇ ಇರುವುದರಿಂದ ಸದರಿ 3 ಜಾತಿಗಳು ತಮ್ಮ ಮೂಲ ಜಾತಿಯನ್ನು ಅನುಬಂಧಗಳಲ್ಲಿರುವ ಪ್ರವರ್ಗ-ಎ ಅಥವಾ ಪ್ರವರ್ಗ-ಬಿ ಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದು.

ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.

25/08/2025

ಹೀಗೆ ಸ್ಪಷ್ಟವಾಗಿ ಹೇಳುವುದಕ್ಕೆ ಕೂಡಾ ಜ್ಞಾನ ಮುಖ್ಯ.
ಇದು ಪ್ರತಾಪ, ಶಿವಕುಮಾರ, ಪಾಟೀಲ, .. ಇವರಿಗೆ ಅರ್ಥ ಆಗೋದಿಲ್ಲ... ಶೇಕ್, ಸುಲೈಮಾನ್, ಖಾನ್ಗಳಿಗೆ.. ದರ್ಯವೇ ಇಲ್ಲ.. ಇದನ್ನು ಹೇಳಲಿಕ್ಕೆ ಈ ನೆಲದ ಹೊಲಯರಿಗೆ ಮಾತ್ರ ಸಾಧ್ಯ... ಬಬೂಜಿಗಳಿಗೆ "third week."

25/08/2025

ಐತಿಹಾಸಿಕ ದ್ರೋಹಿಗಳು.

ಇನ್ನು ಮುಂದೆ ಎಲ್ಲಿಯಾದರೂ ಮಾದಿಗ ಸಮುದಾಯ ಬಾಬಾಸಾಹೇಬರ ಭಾವಚಿತ್ರ ಇಟ್ಟಿರುವುದು ಕಂಡುಬಂದಲ್ಲಿ
ತಕ್ಕರೀತಿಯಲ್ಲಿ ಪ್ರತಿಕ್ರಿಯೆ ನೀಡಿ...

ನಿಮಗೆಲ್ಲಾ ತಿಳಿದಿರಲಿ.. ಮೈಸೂರು ವಿಶ್ವವಿದ್ಯಾಲಯದಲ್ಲಿ ಇದನ್ನು ಮಾಡಲು ಶಿಫಾರಸ್ಸು ಮಾಡಿದ ರಾಜಕಾರಣಿ ಮತ್ತು ಅಂದಿನ ಕುಲಪತಿ ಯಾರು ಎಂದು ಗಮನಿಸಿ..

ಈ ನೆಲದ ಹೊಲಯರ ಅಸ್ಮಿತೆಯನ್ನು ನೀರೆರೆದು ಬೆಳೆಸಿದ ಅಪೂರ್ವ ಧೀಮಂತ ನಾಯಕರನ್ನುಹೊಲಯ ಬ್ರಿಗೇಡ್ ಕರ್ನಾಟಕ, ಸದಾ ನೆನಪಿಸಿಕೊಳ್ಳುತ್ತದೆ.
20/08/2025

ಈ ನೆಲದ ಹೊಲಯರ ಅಸ್ಮಿತೆಯನ್ನು ನೀರೆರೆದು ಬೆಳೆಸಿದ
ಅಪೂರ್ವ ಧೀಮಂತ ನಾಯಕರನ್ನು
ಹೊಲಯ ಬ್ರಿಗೇಡ್ ಕರ್ನಾಟಕ, ಸದಾ ನೆನಪಿಸಿಕೊಳ್ಳುತ್ತದೆ.

Address

Bangalore

Website

Alerts

Be the first to know and let us send you an email when Holaya Brigade - ಹೊಲಯ ಬ್ರಿಗೇಡ್ posts news and promotions. Your email address will not be used for any other purpose, and you can unsubscribe at any time.

Share