
31/07/2025
ಇತ್ತೀಚೆಗೆ ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ರವರು ಒಂದು ಕಾರ್ಯಕ್ರಮಕ್ಕೆ ಹೋಗಿದ್ದರ ಬಗ್ಗೆ ಎಲ್ಲಾ ಕಡೆಯಲ್ಲಿಯೂ ಬೇರೆ ಬೇರೆ ಅಭಿಪ್ರಾಯಗಳು ಕೇಳಿಬರುತ್ತಿವೆ.
ಹೋಗಿದ್ದು ತಪ್ಪು ಎನ್ನುವ ರೀತಿಯಲ್ಲಿ ಜಾಸ್ತಿ ಜನ ಅದರಲ್ಲೂ ಪರಿಶಿಷ್ಟರನ್ನು ಒಳಗೊಂಡತೆ ಪರಿಶಿಷ್ಟೇತರರು ಮತ್ತೆ ಅನ್ಯ ಧರ್ಮಿಯರೂ ಕೂಡ ಏನೋ ಮಹಾ ತಪ್ಪು ಆಗಿದೆ ಎನ್ನುವ ರೀತಿಯಲ್ಲಿ ಹಲುಬುತಿದ್ದಾರೆ..ಮುಂದೆ ಬರೆಯುವುದನ್ನು ಗಮನ ವಿಟ್ಟು ಓದಿ.
1)ಪ್ರಜಾಪ್ರಭುತ್ವದಲ್ಲಿ ಯಾವ ಪಕ್ಷ ದಿಂದ ಆಯ್ಕೆ ಆಗಿರುತ್ತೆವೊ ಅದರ ತತ್ವ ಸಿದ್ದಾಂತಕ್ಕೆ ಬದ್ದರಾಗಿರ ಬೇಕು . ಕಾಂಗ್ರೇಸ್ ಪಕ್ಷ ಹಿಂದೂ ಧಾರ್ಮಿಕ ಆಚರಣೆಗೆ ವಿರುದ್ಧ ವಾಗಿದೆಯೆ.
2.) ನಯನ ಮೋಟಮ್ಮ ರವರು ಹಿಂದೂ ಧರ್ಮದ ವಿರೋಧಿ ಎಂದು ಹೇಳಿ ಕೊಂಡಿರುವುದು ಇದೆಯೇ ?
3) ಶಾಸಕಿ ಆಗಿ ಮೊದಲು ನಾನು ಈ ಸಿದ್ಧಾಂತಕ್ಕೆ ಬದ್ಧ ಎಂದು ಹೇಳಿ ಕೊಂಡಿದ್ದಾರೆಯೆ ಉದಾಹರಣೆಗಾಗಿ ಸಮಾಜವಾದಿ. ಮಾರ್ಕ್ಸವಾದಿ ಹೀಗೆ
4) ಅವರೊಬ್ಬ ಜನಪ್ರತಿನಿಧಿ ಆಗಿ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸ ಬೇಕಾದದ್ದು ಅವರ ಕರ್ತವ್ಯ.
ಪರಿಶಿಷ್ಟರು ಎಲ್ಲರು ಅಂಬೇಡ್ಕರ್ ತತ್ವ ಪಾಲಿಸಲೇಬೇಕು ಎಂದು ಆದೇಶ ಹೊರಡಿಸುವ ತಾವು ಒಕ್ಕಲಿಗರಿಗೆ ಯಾರನ್ನು ಪಾಲಿಸಲು ಹೇಳಿದ್ದಿರಿ ಲಿಂಗಾಯತರು ಹಾಲುಮತದವರು ನಾಯಕರು ಇವರಿಗೆಲ್ಲ ಯಾರ್ ಯಾರನ್ನ ಪಾಲಿಸಲು ಆದೇಶ ಕೊಟ್ಟಿದ್ದೀರಿ.
ಪರಿಶಿಷ್ಟೇತರ ಸಚಿವರು ಧರ್ಮಸ್ಥಳ,ರಂಭಾಪುರಿ ಉಡುಪಿ, ಚರ್ಚ್, ಮಸೀದಿ, ದರ್ಗಾಗಳಿಗೆ ಹೋದಾಗ ಅವರನ್ನು ಜನಪ್ರತಿನಿಧಿಗಳು ಎಂದು ಪ್ರಜಾಪ್ರಭುತ್ವದ ಶಿಶುಮಕ್ಕಳ ರೀತಿ ಬಾಯಿ ಮುಚ್ಚಿಕೊಂಡು ಇರುವ ನೀವುಗಳು .
ಈಗಲೂ ಪ್ರಜಾಪ್ರಭುತ್ವದ ವಿವಿಧತೆಯಲ್ಲಿ ಏಕತೆ ಯನ್ನ ನೋಡೋ ಕನ್ನಡಕ ಹಾಕಿ ಕೊಳ್ಳಿ....
- ಲಕ್ಷ್ಮಿರಾಮ್ ಮೈಸೂರು