Punch News Media Shirguppi

Punch News Media Shirguppi Faithfuuy and truth news

27/06/2025

ಹಳೆ ವಿದ್ಯಾರ್ಥಿಗಳಿಂದ ಶುದ್ಧ ಕುಡಿಯುವ ನೀರಿನ ಘಟಕ; 2005-06 ನೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶ್ಲಾಘನೀಯ ಕಾರ್ಯ.!

ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಕೆಎಸ್‌ಎಸ್ ಪ್ರೌಢ ಶಾಲೆಗೆ ಸನ್ 2005-06 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆ ವಿದ್ಯಾರ್ಥಿಗಳು ಸೇರಿ, ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಿ, ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

25/06/2025

ಉಗಾರನಲ್ಲಿ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ; ಶಿವಶರಣ ಗುಂಡಯ್ಯನವರ ಜೀವನ ಎಲ್ಲರಿಗೂ ಸ್ಪೂರ್ತಿ: ಬಸವಲಿಂಗ ಶ್ರೀಗಳು..!

ಮಣ್ಣು ತುಳಿಯುತ್ತ, ಕುಣಿಯುತ್ತ ತನ್ನ ಭಕ್ತಿಯಲ್ಲಿ ಲೀನನಾದ ಶಿವಶರಣ ಕುಂಬಾರ ಗುಂಡಯ್ಯನನ್ನು ಕಂಡ ಶಿವ ಕೈಲಾಸದಲ್ಲಿ ಕುಣಿಯಲಾರಂಭಿಸಿದ್ದ. ಅಂತಹ ಮಹಾನ ವ್ಯಕ್ತಿಯ ವಂಶಜರಾದ ಕುಂಬಾರರು, ಜೇನು ನೊಣಗಳಂತೆ ದಿನವೆಲ್ಲಾ ಸುತ್ತಿ, ಜೇಣು ಸಂಗ್ರಹಿಸಿ, ಸಂಜೆ ಒಂದೇ ಗೂಡಿಗೆ ಬಂದು ಸೇರುವಂತೆ, ಒಕ್ಕಟ್ಟಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ವಿಜಯಪೂರ ಜ್ಞಾನಯೋಗಾಶ್ರಮದ ಪಪೂ ಬಸವಲಿಂಗ ಶ್ರೀಗಳು ತಿಳಿಸಿದ್ದಾರೆ.

24/06/2025

ಮೋದಿ ಸರ್ಕಾರಕ್ಕೆ 11 ವರ್ಷ..! ಸೇವೆ, ಸುಶಾಸನ, ಬಡವರ ಕಲ್ಯಾಣದ ವಿಕಸಿತ ಭಾರತದ ಅಮೃತಕಾಲ..!! ಬಿಜೆಪಿ ಕಾಗವಾಡ ಮಂಡಲದ ವತಿಯಿಂದ ಸಂಕಲ್ಪ ಸಭೆ..!!!

ಬಡವರ ಕಲ್ಯಾಣ, ಸೇವೆ, ಸುಶಾಸನ, ವಿಕಸಿತ ಭಾರತದ ಅಮೃತಕಾಲಕ್ಕೆ ಸಾಕ್ಷಿಯಾದ ಮೋದಿ ಸರ್ಕಾರಕ್ಕೆ 11 ವರ್ಷಗಳು ಪೂರೈಕೆಯಾಗಿದ್ದು, ಬಿಜಿಪಿ ಕಾಗವಾಡ ಮಂಡಲದ ವತಿಯಿಂದ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಸೋಮವಾರ ದಿ. 23 ರಂದು ಮಾಜಿ ಸಚಿವರು ಹಾಗೂ ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರ ನೇತೃತ್ವದಲ್ಲಿ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ್ ಅಪ್ಪಾಜಿಗೋಳ, ಮಾಜಿ ಶಾಸಕ ಹಾಗೂ ಬಿಜೆಪಿ ಚಿಕ್ಕೋಡಿ ವಿಭಾಗದ ಪ್ರಭಾರಿ ಸಂಜಯ ಪಾಟೀಲ ಅವರ ಉಪಸ್ಥಿತಿಯಲ್ಲಿ ಸಂಪನ್ನಗೊAಡಿತು.

23/06/2025

ರಾಜ್ಯ ಸರ್ಕಾರ ಲಂಚದ ರೇಟ್‌ಕಾರ್ಡ ಹಾಕಿಸಲಿ; ರಾಯಬಾಗದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಶಾಸಕ ಪಿ.ರಾಜೀವ್..!

ಮನೆಗಳ ಹಂಚಿಕೆ ವಿಚಾರದಲ್ಲಿ ಆಳಂದ ಕ್ಷೇತ್ರದ ಕಾಂಗ್ರೆಸ್ ಸರ್ಕಾರದ ಶಾಸಕ ಬಿ.ಆರ್. ಪಾಟೀಲ ಅವರು ಮನೆ ಹಂಚಿಕೆ ವಿಚಾರದಲ್ಲಿ ಸರ್ಕಾರ ಎಂಜೆಟ್‌ಗಳ ಮೂಲಕ ಹಣ ವಸೂಲಿ ಮಾಡುತ್ತಿದೆ. ಎಂಬ ಹೇಳಿಕೆ ಕಟು ಸತ್ಯವಾಗಿದ್ದು, ಒಂದು ಕಡೆ ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಇನ್ನೊಂದೆಡೆ ಲಂಚವತಾರದಲ್ಲಿ ಮುಳಗಿ ಜನರ ರಕ್ತ ಹೀರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಕಳದ 2 ವರ್ಷಗಳಿಂದ ರಾಜ್ಯ ಸರ್ಕಾರ ಬಸವ ವಸತಿ ಯೋಜನೆ ಅಡಿಯಲ್ಲಿ ಒಂದು ಮನೆಯನ್ನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆಯ ಮನೆಗಳ ಜಿಪಿಎಸ್ ಮಾಡಲು 10 ರಿಂದ 20 ಸಾವಿರ ಲಂಚ ಕೇಳುತ್ತಿದ್ದಾರೆ. ನಿಮಗೆ ಜನರಿಂದ ಎಷ್ಟಾದರೂ ಲಂಚ ಬೇಕು ಎಂದು ರೇಟ್ ಕಾರ್ಡ ಹಾಕಿ ಎಂದು ಕುಡಚಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆಕ್ರೋಶ ಹೊರಹಾಕಿದ್ದಾರೆ.

22/06/2025

ಬೆಳಗಾವಿ ‘ಜಲಯೋಗ ಪ್ರಶಸ್ತಿ’ಗೆ ಕಬ್ಬೂರಿನ ಡಾ. ಪ್ರಕಾಶ ಬೆಲ್ಲದ ಆಯ್ಕೆ..!!

ಬೆಳಗಾವಿಯ ಜಲಯೋಗ ಪ್ರಶಸ್ತಿಯನ್ನು ಚಿಕ್ಕೋಡಿ ತಾಲೂಕಿನ ಕಬ್ಬೂರಿನ ಜಲಯೋಗ ಸಾಧಕ ಡಾ. ಪ್ರಕಾಶ ಬೆಲ್ಲದ ಮುಡಿಗೇರಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಶನಿವಾರ ದಿ. 21 ರಂದು ಬೆಳಗಾವಿಯ ಕೆಎಲ್‌ಇಯ ಜೆಎನ್‌ಎಂಸಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಉಮೇಶ ಕಲಘಟಗಿ ನೇತೃತ್ವದ ಹಾಗೂ ಸ್ವಿಮರ್ಸ ಕ್ಲಬ್ ಬೆಳಗಾವಿ ಇವರ ಪ್ರಾಯೋಜಕತ್ವದಲ್ಲಿ ಜಲಯೋಗವನ್ನು ಹಮ್ಮಿಕೊಳ್ಳಲಾಗಿತ್ತು.

18/06/2025

ನವಗ್ರಹ ಸೊಸೈಟಿಯ 8ನೇ ಸಭೆ; ಖಡಕಲಾಟದಲ್ಲಿ ಮೊದಲನೇ ಶಾಖೆ ಪ್ರಾರಂಭ: ಭರತಕುಮಾರ ಖೋತ..! ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮದ ನವಗ್ರಹ ಮೈನಾರಿಟಿ ಕೋ-ಆಫ್ ಸೊಸಾಯಟಿಯ 8ನೇ ವಾರ್ಷಿಕ ಸರ್ವಸಾಧಾರಣ ಸಭೆ ಮತ್ತು 7ನೇ ವಾರ್ಷಿಕೋತ್ಸವವು ಬುಧವಾರ ದಿ:. 18 ರಂದು ಸಂಸ್ಥೆಯ ಅಧ್ಯಕ್ಷ ಭರತ್‌ಕುಮಾರ್ ಖೋತ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

12/06/2025

ನಮ್ಮ ಮಗಳ ಸಾವು ಆತ್ಮಹತ್ಯೆ ಅಲ್ಲ.! ಕೊಲೆ..!! ಲೋಕಾಯುಕ್ತ ಅಧಿಕಾರಿಗಳ ಮುಂದೆ ನ್ಯಾಯಕ್ಕಾಗಿ ಅಂಗಲಾಚಿದ ತಂದೆ-ತಾಯಿ..!!
ನಮ್ಮ ಮಗಳು ಎಂಎಸ್‌ಸಿ ಪದವೀಧರೇ, ಆತ್ಮಹತ್ಯ ಮಾಡುಕೊಳ್ಳುವ ಹೇಡಿಯಲ್ಲ.ಅವಳ ಸಾವು ಆತ್ಮಹತ್ಯೆಯಲ್ಲ.ಅದು ಕೊಲೆಯಾಗಿದ್ದು, ರಾಜಕೀಯ ಒತ್ತಡದಿಂದಾಗಿ ಪೋಲಿ ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ನನ್ನ ಮಗಳ ಸಾವಿಗೆ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮಹಾರಾಷ್ಟçದ ಶಿರೋಳ ತಾಲೂಕಿನ ಕವಟೆಸಾರ ಗ್ರಾಮದ ತಂದೆ-ತಾಯಿಗಳು ಕಣ್ಣಿರು ಹಾಕುತ್ತ ಅಂಗಲಾಚಿರುವ ಘಟನೆಗೆ ಪಟ್ಟಣದ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.

10/06/2025

ನರಸಿಂಹರಾಜಪುರದ ಶ್ರೀ ಸಮಂತಭದ್ರ ವಿದ್ಯಾಪೀಠಕ್ಕೆ ಪ್ರವೇಶಾವಕಾಶ..!!

ಪ್ರವೇಶಗಳಿಗೆ ಸಂಪರ್ಕಿಸಿ: ಶ್ರೀ ಸಮಂತಭದ್ರ ವಿದ್ಯಾಪೀಠ, ಸಿಂಹನಗದ್ದೆ, ನರಸಿಂಹರಾಜಪುರ. ಮೊ: 8277741008

09/06/2025

ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಪುನಃಚ್ಛೇತನ ಕಾಮಗಾರಿಗೆ ಚಾಲನೆ; ಕಾಮಗಾರಿಗಳ ಮೇಲೆ ನಿಗಾ ವಹಿಸಿ: ರಾಜು ಕಾಗೆ..!

ಸರ್ಕಾರದ ಯೋಜನೆಗಳು ಸಾರ್ವಜನಿಕರದಾಗಿದ್ದು, ಕಾಮಗಾರಿಗಳು ಗುಣಮಟ್ಟದಿಂದ ಪೂರ್ಣಗೊಳ್ಳಬೇಕಾದರೆ ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಗಾ ವಹಿಸಿದರೆ ಸಾಲದು ಸಾರ್ವಜನಿಕರು ಕೂಡಾ ಕಾಮಗಾರಿ ನಡೆಯುವ ವೇಳೆ ನಿಗಾ ವಹಿಸುವ ಮೂಲಕ ಗುಣಮಟ್ಟದ ಹಾಗೂ ಅವಧಿಯಲ್ಲಿ ಕಾಮಗಾರಿ ಆಗವುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.

09/06/2025

ಉಗಾರ ಬಿಕೆ ಪಿಕೆಪಿಎಸ್‌ನ ಶತಮಾನೋತ್ಸವ; 120 ವರ್ಷಗಳ ಇತಿಹಾಸವಿರುವ ಸಹಕಾರ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಪೂರವಾಗಿದೆ: ಲಕ್ಷö್ಮಣ ಸವದಿ..!

ಸಹಕಾರ ಚಳುವಳಿಗೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ, ದೇಶದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಹಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 80 ಸಾವಿರ ಕೋಟಿ ರೂ.ಗಳ ಠೇವಣಿಯೊಂದಿಗೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳು ನೀಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷö್ಮಣ ಸವದಿ ಹೇಳಿದ್ದಾರೆ.

04/06/2025

ಛಲ ಬೀಡದ ಆರ್‌ಸಿಬಿ ಅಭಿಮಾನಿಗಳು..!! 18 ವರ್ಷಗಳ ನಿರೀಕ್ಷೆಗೆ ದೊರಕಿದ ಫಲ..!! ಕೊಹ್ಲಿ ಅಭಿಮಾನಿಗಳ ಸಂಭ್ರಮ..!!

2008 ರಲ್ಲಿ ಪ್ರಾರಂಭಗೊAಡ ಇಂಡಿಯನ್ ಪ್ರೀಮಿಯರ್ ಲೀಗ ಪಂದ್ಯಾವಳಿ. ಅಂದಿನಿAದ ಆರ್‌ಸಿಬಿ ತಂಡದಲ್ಲಿರುವ ವಿರಾಟ ಕೊಹ್ಲಿಗೆ ಮತ್ತು ಆರ್‌ಸಿಬಿ ತಂಡಕ್ಕೆ ಐಪಿಲ್ ಕಪ್ ದೊರಕಿರಲಿಲ್ಲ. ಆದರೂ ಆರ್‌ಸಿಬಿ ತಂಡದ ಬೃಹತ ಅಭಿಮಾನಿ ಬಳಗ ಮಾತ್ರ ಆರ್‌ಸಿಬಿ ತಂಡವನ್ನಾಗಲಿ, ವಿರಾಟ ಕೋಹ್ಲಿ ಅವರನ್ನು ಬಿಟ್ಟಿರಲಿಲ್ಲ. ಇಷ್ಟು ದೊಡ್ಡ ಮಟ್ಟದ ಅಭಿಮಾನಿಗಳ ಪ್ರಾರ್ಥನೆ, ನಿರೀಕ್ಷೆಗೆ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಫಲ ದೊರಕಿದ್ದು, ಸಹಸ್ರಾರು ಅಭಿಮಾನಿಗಳು ವಿನೂತರ ರೀತಿಯಲ್ಲಿ ಸಂಭ್ರಮಿಸಿದ್ದಾರೆ.

04/06/2025

ಹಿಂದು-ಮುಸ್ಲಿA ಭಾವೈಕ್ಯತೆಯ ಸಂಗಮಕ್ಕೆ ಸಾಕ್ಷಿಯಾದ ಮಲಾಬಾದ ಜಂಗಲಿಸಾಬ ದರ್ಗಾ ಉರುಸ್..! ವಿವಿಧ ಸ್ಪರ್ಧೆಗಳ ಆಯೋಜನೆ..!!

ಅಥಣಿ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಂಗಲಿಸಾಬ್ ದರ್ಗಾ ಉರುಸ್ ನಡೆಯುತ್ತದೆ. ಒಂದು ಕಡೆ ಆತನಿಗೆ ಹಿಂದೂ ಸಂಪ್ರದಾಯದAತೆ ಪೂಜೆ ಮಾಡಿದರೆ, ಜಂಗಲಿಸಾಬ್ ಬಾಬಾ ಹೆಸರಿನಲ್ಲಿ ಇದೇ ದೇವಸ್ಥಾನದ ಮುಂದೆ ಉರುಸು ಕೂಡ ನೆರವೇರುತ್ತೆದೆ.

Address

Chikodi-Miraj Road, Above Axis Bank ATM, Shirguppi, Tq: Kagwad
Belgaum
591242

Alerts

Be the first to know and let us send you an email when Punch News Media Shirguppi posts news and promotions. Your email address will not be used for any other purpose, and you can unsubscribe at any time.

Contact The Business

Send a message to Punch News Media Shirguppi:

Share