Punch News Media Shirguppi

  • Home
  • Punch News Media Shirguppi

Punch News Media Shirguppi Faithfuuy and truth news

24/07/2025

ಕಲಿತ ಶಾಲೆಯ ಕೀರ್ತಿ ಹೆಚ್ಚಿಸಿ: ಶ್ರೀಮಂತ ಪಾಟೀಲ; ತಾವು ಕಲಿತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ..!!

ನಾನು ಕಲಿತ ಶಾಲೆಯಲ್ಲಿಯೇ ನೀವು ಕೂಡಾ ಕಲಿಯುತ್ತಿದ್ದೀರಿ. ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಅಲ್ಲಿಯ ಶಿಕ್ಷಕರ ಮಾರ್ಗದರ್ಶನವೇ ಕಾರಣವಾಗಿದ್ದು, ನೀವು ಕೂಡಾ ಚನ್ನಾಗಿ ಓದಿ, ಜೀವನದಲ್ಲಿ ಯಶಸ್ಸು ಸಾಧಿಸಿ, ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಅಥಣಿ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಶ್ರೀಮಂತ ಪಾಟೀಲ ಹೇಳಿದ್ದಾರೆ.

20/07/2025

ನಿಡಸೋಶಿ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯ ಈಗ ಕರ್ನಾಟಕದ ಟಾಪ್ ಟೆನ್ ಇಂಜಿನಿಯರಿAಗ್ ಕಾಲೇಜಿನಲ್ಲಿ ಸೇರ್ಡಡೆ..!

ಹುಕ್ಕೇರಿ ತಾಲೂಕಿನ ನಿಡಸೋಶಿಯ ಹಿರಾಶುಗರ ತಾಂತ್ರಿಕ ಮಹಾವಿದ್ಯಾಲವು ಸಿಲಿಕಾನ್ ಇಂಡಿಯಾ ಮ್ಯಾಗಜೀನ್‌ನಿಂದ ಸಿಲಿಕಾನ್ ಇಂಡಿಯಾ ಕರ್ನಾಟಕದ ಟಾಪ್ 10 ಇಂಜಿನಿಯರಿAಗ್ ಕಾಲೇಜಿನಲ್ಲಿ ಗುರುತಿಸಿಕೊಂಡಿದೆ.

20/07/2025

ಹಳೆಯ ದ್ವೇಷಕ್ಕೆ ಶೇಡಬಾಳದಲ್ಲಿ ವ್ಯಕ್ತಿಯ ಭೀಕರ ಕೊಲೆ..!! ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನನ್ನು ಕಬ್ಬಿನ ಗದ್ದೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ಘಟನೆಯು ರವಿವಾರ ದಿ. 20 ರಂದು ಬೆಳಕಿಗೆ ಬಂದಿದೆ.

14/07/2025

ಮಲ್ಲಿಕಾರ್ಜುನ ಕೋರೆ ಅವರ 60ನೇ ಹುಟ್ಟಹಬ್ಬ; ಜನ್ಮದಿನಂದು ಸಸಿ ನೆಟ್ಟು, ಪರಿಸರ ರಕ್ಷಿಸಿ: ಭರತೇಶ ಬನವಣೆ..!
ಹಸಿರಿದ್ದರೆ ಉಸಿರು, ಹಸಿರು ಇಡೀ ಜೀವಸಂಕುಲನದ ಅಸ್ತಿತ್ವದ ಮೂಲ ಬೇರಾಗಿದ್ದು, ನಾವೆಲ್ಲ ಪರಿಸರ ಸಂರಕ್ಷಣೆಗೆ ಮುಂದಾದರೇ ಮಾತ್ರ ಜೀವಸಂಕುಲದ ಉಳಿಕೆ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬದಂದು ಒಂದು ಸಸಿ ನೆಟ್ಟು, ಅದರ ಪಾಲನೆ, ಪೋಷಣ ಮಾಡುವುದು ಮುಖ್ಯವಾಗಿದೆಯೆಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಭರತೇಶ ಬನವಣೆ ಹೇಳಿದ್ದಾರೆ.

10/07/2025

ಸಂಕೇಶ್ವರ ಪಟ್ಟಣದ ಸನ್‌ಶೈನ್ ಪ್ರಿ ಪ್ರೆöÊಮರಿ ಶಾಲೆಯ ಪುಟ್ಟ ವಿದ್ಯಾರ್ಥಿಗಳಿಂದ ಆಷಾಢ ಏಕಾದಶಿ ಆಚರಣೆ..! ವಾರಕರಿ ಉಡುಗೆಯಲ್ಲಿ ಮಿಂಚಿದ ಮುದ್ದು ಮಕ್ಕಳು..!!

ಸಂಕೇಶ್ವರ ಪಟ್ಟಣದ ಸನ್‌ಶೈನ್ ಪ್ರಿ ಪ್ರೆöÊಮರಿ ಇಂಗ್ಲಿಷ್ ಮಿಡಿಯಮ ಶಾಲೆಯ ಪುಟ್ಟ ಬಾಲಕರು ಇತ್ತಿಚಿಗೆ ಸಂಪನ್ನಗೊAಡ ಆಷಾಢ ಏಕಾದಶಿ ನಿಮಿತ್ಯವಾಗಿ ವಾರಕಾರಿ ಸಂಪ್ರದಾಯದ ವೇಶ ಧರಿಸಿ, ದಿಂಡಿ ಯಾತ್ರೆಯ ರೂಪಕ ಪ್ರದರ್ಶನ ಮಾಡುವ ಮೂಲಕ ನಮ್ಮ ದೇಶದ ಭವ್ಯ ಪರಂಪರೆಯನ್ನು ಮತ್ತು ವಾರಕರಿ ಸಂಪ್ರದಾಯದ ಆಚರಣೆಗಳನ್ನು ಜಗತ್ತಿಗೆ ಸಾರಿದರು.

10/07/2025

ಮುಗಳಿ ಗ್ರಾಮದಲ್ಲಿ ಅದ್ದೂರಿಯಾಗಿ ಸಂಪನ್ನಗೊAಡ ಚಿಕ್ಕಾರ ಹುಣ್ಣಿಮೆ ಸಂಭ್ರಮ..! ರಂಗುತAದ ಎತ್ತುಗಳ ಮೆರವಣಿಗೆ ಮತ್ತು ಪ್ರದರ್ಶನ..!!

ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಕಾರ ಹುಣ್ಣಿಮೆಯ ದಿನದಂದು ಪ್ರತಿ ವರ್ಷದಂತೆ ಈ ವರ್ಷವು ಚಿಕ್ಕಾರ ಹುಣ್ಣಿಮೆಯ ಪ್ರಯುಕ್ತವಾಗಿ ಶ್ರೀ ಬಸವಜ್ಯೋತಿ ಯುಥ್ ಫೆಡರೇಶನ್ ಹಾಗೂ ಕಾರ ಹುಣ್ಣಿಮೆ ಕಮಿಟಿ ಮುಗಳಿ ಇವರ ಸಂಯುಕ್ತಾಶ್ರಯದಲ್ಲಿ ಕಾರ ಹುಣ್ಣಿಮೆಯ ಮೆರವಣಿಗೆ ಎತ್ತುಗಳ ಪ್ರದರ್ಶನ ಅದ್ದೂರಿಯಾಗಿ ಸಂಪನ್ನಗೊAಡಿತು.

05/07/2025

ಎಂಟು ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ; ಕ್ಷೇತ್ರಕ್ಕೆ 25 ಕೋಟಿ ವಿಶೇಷ ಅನುದಾನ ಮಂಜೂರು: ರಾಜು ಕಾಗೆ..!!

ನನ್ನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನದಲ್ಲಿ ರೂ. 25 ಕೋಟಿ ನೀಡಿದ್ದು, ಅದರಲ್ಲಿ 12 ಕೋಟಿ ಅನುದಾನದಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಹಾಗೂ 13 ಕೋಟಿ ಅನುದಾನದಲ್ಲಿ ವಿವಿಧ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.

03/07/2025

ನಸಲಾಪೂರದ ಮುಸ್ಲಿಂ ಮುಖಂಡ ಅಬ್ದುಲ ತಾಂಬಾಟ ಅವರ 56 ನೇ ಹುಟ್ಟು ಹಬ್ಬ..! ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಣೆ..!!

ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ತಾಂಬಾಟ್ ಇವರ ಐವತ್ತಾರನೆಯ ಹುಟ್ಟು ಹಬ್ಬವನ್ನು ಅವರ ಸ್ನೇಹಿತರು ಮತ್ತು ಮುಖಂಡರ ಪರಿವಾರ ಮತ್ತು ಬಳಗ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.

27/06/2025

ಹಳೆ ವಿದ್ಯಾರ್ಥಿಗಳಿಂದ ಶುದ್ಧ ಕುಡಿಯುವ ನೀರಿನ ಘಟಕ; 2005-06 ನೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶ್ಲಾಘನೀಯ ಕಾರ್ಯ.!

ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಕೆಎಸ್‌ಎಸ್ ಪ್ರೌಢ ಶಾಲೆಗೆ ಸನ್ 2005-06 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆ ವಿದ್ಯಾರ್ಥಿಗಳು ಸೇರಿ, ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಿ, ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

25/06/2025

ಉಗಾರನಲ್ಲಿ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ; ಶಿವಶರಣ ಗುಂಡಯ್ಯನವರ ಜೀವನ ಎಲ್ಲರಿಗೂ ಸ್ಪೂರ್ತಿ: ಬಸವಲಿಂಗ ಶ್ರೀಗಳು..!

ಮಣ್ಣು ತುಳಿಯುತ್ತ, ಕುಣಿಯುತ್ತ ತನ್ನ ಭಕ್ತಿಯಲ್ಲಿ ಲೀನನಾದ ಶಿವಶರಣ ಕುಂಬಾರ ಗುಂಡಯ್ಯನನ್ನು ಕಂಡ ಶಿವ ಕೈಲಾಸದಲ್ಲಿ ಕುಣಿಯಲಾರಂಭಿಸಿದ್ದ. ಅಂತಹ ಮಹಾನ ವ್ಯಕ್ತಿಯ ವಂಶಜರಾದ ಕುಂಬಾರರು, ಜೇನು ನೊಣಗಳಂತೆ ದಿನವೆಲ್ಲಾ ಸುತ್ತಿ, ಜೇಣು ಸಂಗ್ರಹಿಸಿ, ಸಂಜೆ ಒಂದೇ ಗೂಡಿಗೆ ಬಂದು ಸೇರುವಂತೆ, ಒಕ್ಕಟ್ಟಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ವಿಜಯಪೂರ ಜ್ಞಾನಯೋಗಾಶ್ರಮದ ಪಪೂ ಬಸವಲಿಂಗ ಶ್ರೀಗಳು ತಿಳಿಸಿದ್ದಾರೆ.

24/06/2025

ಮೋದಿ ಸರ್ಕಾರಕ್ಕೆ 11 ವರ್ಷ..! ಸೇವೆ, ಸುಶಾಸನ, ಬಡವರ ಕಲ್ಯಾಣದ ವಿಕಸಿತ ಭಾರತದ ಅಮೃತಕಾಲ..!! ಬಿಜೆಪಿ ಕಾಗವಾಡ ಮಂಡಲದ ವತಿಯಿಂದ ಸಂಕಲ್ಪ ಸಭೆ..!!!

ಬಡವರ ಕಲ್ಯಾಣ, ಸೇವೆ, ಸುಶಾಸನ, ವಿಕಸಿತ ಭಾರತದ ಅಮೃತಕಾಲಕ್ಕೆ ಸಾಕ್ಷಿಯಾದ ಮೋದಿ ಸರ್ಕಾರಕ್ಕೆ 11 ವರ್ಷಗಳು ಪೂರೈಕೆಯಾಗಿದ್ದು, ಬಿಜಿಪಿ ಕಾಗವಾಡ ಮಂಡಲದ ವತಿಯಿಂದ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಸೋಮವಾರ ದಿ. 23 ರಂದು ಮಾಜಿ ಸಚಿವರು ಹಾಗೂ ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರ ನೇತೃತ್ವದಲ್ಲಿ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ್ ಅಪ್ಪಾಜಿಗೋಳ, ಮಾಜಿ ಶಾಸಕ ಹಾಗೂ ಬಿಜೆಪಿ ಚಿಕ್ಕೋಡಿ ವಿಭಾಗದ ಪ್ರಭಾರಿ ಸಂಜಯ ಪಾಟೀಲ ಅವರ ಉಪಸ್ಥಿತಿಯಲ್ಲಿ ಸಂಪನ್ನಗೊAಡಿತು.

23/06/2025

ರಾಜ್ಯ ಸರ್ಕಾರ ಲಂಚದ ರೇಟ್‌ಕಾರ್ಡ ಹಾಕಿಸಲಿ; ರಾಯಬಾಗದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಶಾಸಕ ಪಿ.ರಾಜೀವ್..!

ಮನೆಗಳ ಹಂಚಿಕೆ ವಿಚಾರದಲ್ಲಿ ಆಳಂದ ಕ್ಷೇತ್ರದ ಕಾಂಗ್ರೆಸ್ ಸರ್ಕಾರದ ಶಾಸಕ ಬಿ.ಆರ್. ಪಾಟೀಲ ಅವರು ಮನೆ ಹಂಚಿಕೆ ವಿಚಾರದಲ್ಲಿ ಸರ್ಕಾರ ಎಂಜೆಟ್‌ಗಳ ಮೂಲಕ ಹಣ ವಸೂಲಿ ಮಾಡುತ್ತಿದೆ. ಎಂಬ ಹೇಳಿಕೆ ಕಟು ಸತ್ಯವಾಗಿದ್ದು, ಒಂದು ಕಡೆ ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಇನ್ನೊಂದೆಡೆ ಲಂಚವತಾರದಲ್ಲಿ ಮುಳಗಿ ಜನರ ರಕ್ತ ಹೀರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಕಳದ 2 ವರ್ಷಗಳಿಂದ ರಾಜ್ಯ ಸರ್ಕಾರ ಬಸವ ವಸತಿ ಯೋಜನೆ ಅಡಿಯಲ್ಲಿ ಒಂದು ಮನೆಯನ್ನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆಯ ಮನೆಗಳ ಜಿಪಿಎಸ್ ಮಾಡಲು 10 ರಿಂದ 20 ಸಾವಿರ ಲಂಚ ಕೇಳುತ್ತಿದ್ದಾರೆ. ನಿಮಗೆ ಜನರಿಂದ ಎಷ್ಟಾದರೂ ಲಂಚ ಬೇಕು ಎಂದು ರೇಟ್ ಕಾರ್ಡ ಹಾಕಿ ಎಂದು ಕುಡಚಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆಕ್ರೋಶ ಹೊರಹಾಕಿದ್ದಾರೆ.

Address


Alerts

Be the first to know and let us send you an email when Punch News Media Shirguppi posts news and promotions. Your email address will not be used for any other purpose, and you can unsubscribe at any time.

Contact The Business

Send a message to Punch News Media Shirguppi:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share