Punch News Media Shirguppi

  • Home
  • Punch News Media Shirguppi

Punch News Media Shirguppi Faithfuuy and truth news

13/11/2025

ತೀವ್ರಗೊಂಡ ರೈತರ ಹೋರಾಟ....!!
ಸೈದಾಪುರ್ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಕಬ್ಬು ತುಂಬಿದ ಟ್ಯಾಕ್ಟರ್ ಗಳಿಗೆ ಬೆಂಕಿ...! 20 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಅಗ್ನಿಗೆ ಆಹುತಿ...!!!

12/11/2025

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ; ಸದನದಲ್ಲಿ ಧ್ವನಿ ಎತ್ತುವೆ: ರಾಜು ಕಾಗೆ; ನಾನೂ ಸಚಿವ ಸ್ಥಾನದ ಆಕಾಂಕ್ಷಿ..!!

ಅನುದಾನ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಡಿಸೆಂಬರ್ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವೆ. ಸರ್ಕಾರ ಸ್ಪಂದಿಸದೇ ಇದ್ದಲ್ಲಿ, ನಾನೇ ಮುಂದಾಳತ್ವ ವಹಿಸಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ತೀವೃಗೊಳಿಸಲಾಗುವುದೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕಿನ ನೂತನ ಉಪಾಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದ್ದಾರೆ.

07/11/2025

ಹತ್ತರಗಿ ಟೋಲ್ ಬಳಿ ಕಲ್ಲುತುರಾಟ..! ಗಂಭೀರ ಸ್ವರೂಪ ಪಡೆದ ರೈತರ ಹೋರಾಟ..!!

24/07/2025

ಕಲಿತ ಶಾಲೆಯ ಕೀರ್ತಿ ಹೆಚ್ಚಿಸಿ: ಶ್ರೀಮಂತ ಪಾಟೀಲ; ತಾವು ಕಲಿತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ..!!

ನಾನು ಕಲಿತ ಶಾಲೆಯಲ್ಲಿಯೇ ನೀವು ಕೂಡಾ ಕಲಿಯುತ್ತಿದ್ದೀರಿ. ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಅಲ್ಲಿಯ ಶಿಕ್ಷಕರ ಮಾರ್ಗದರ್ಶನವೇ ಕಾರಣವಾಗಿದ್ದು, ನೀವು ಕೂಡಾ ಚನ್ನಾಗಿ ಓದಿ, ಜೀವನದಲ್ಲಿ ಯಶಸ್ಸು ಸಾಧಿಸಿ, ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಅಥಣಿ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಶ್ರೀಮಂತ ಪಾಟೀಲ ಹೇಳಿದ್ದಾರೆ.

20/07/2025

ನಿಡಸೋಶಿ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯ ಈಗ ಕರ್ನಾಟಕದ ಟಾಪ್ ಟೆನ್ ಇಂಜಿನಿಯರಿAಗ್ ಕಾಲೇಜಿನಲ್ಲಿ ಸೇರ್ಡಡೆ..!

ಹುಕ್ಕೇರಿ ತಾಲೂಕಿನ ನಿಡಸೋಶಿಯ ಹಿರಾಶುಗರ ತಾಂತ್ರಿಕ ಮಹಾವಿದ್ಯಾಲವು ಸಿಲಿಕಾನ್ ಇಂಡಿಯಾ ಮ್ಯಾಗಜೀನ್‌ನಿಂದ ಸಿಲಿಕಾನ್ ಇಂಡಿಯಾ ಕರ್ನಾಟಕದ ಟಾಪ್ 10 ಇಂಜಿನಿಯರಿAಗ್ ಕಾಲೇಜಿನಲ್ಲಿ ಗುರುತಿಸಿಕೊಂಡಿದೆ.

20/07/2025

ಹಳೆಯ ದ್ವೇಷಕ್ಕೆ ಶೇಡಬಾಳದಲ್ಲಿ ವ್ಯಕ್ತಿಯ ಭೀಕರ ಕೊಲೆ..!! ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನನ್ನು ಕಬ್ಬಿನ ಗದ್ದೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ಘಟನೆಯು ರವಿವಾರ ದಿ. 20 ರಂದು ಬೆಳಕಿಗೆ ಬಂದಿದೆ.

14/07/2025

ಮಲ್ಲಿಕಾರ್ಜುನ ಕೋರೆ ಅವರ 60ನೇ ಹುಟ್ಟಹಬ್ಬ; ಜನ್ಮದಿನಂದು ಸಸಿ ನೆಟ್ಟು, ಪರಿಸರ ರಕ್ಷಿಸಿ: ಭರತೇಶ ಬನವಣೆ..!
ಹಸಿರಿದ್ದರೆ ಉಸಿರು, ಹಸಿರು ಇಡೀ ಜೀವಸಂಕುಲನದ ಅಸ್ತಿತ್ವದ ಮೂಲ ಬೇರಾಗಿದ್ದು, ನಾವೆಲ್ಲ ಪರಿಸರ ಸಂರಕ್ಷಣೆಗೆ ಮುಂದಾದರೇ ಮಾತ್ರ ಜೀವಸಂಕುಲದ ಉಳಿಕೆ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬದಂದು ಒಂದು ಸಸಿ ನೆಟ್ಟು, ಅದರ ಪಾಲನೆ, ಪೋಷಣ ಮಾಡುವುದು ಮುಖ್ಯವಾಗಿದೆಯೆಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಭರತೇಶ ಬನವಣೆ ಹೇಳಿದ್ದಾರೆ.

10/07/2025

ಸಂಕೇಶ್ವರ ಪಟ್ಟಣದ ಸನ್‌ಶೈನ್ ಪ್ರಿ ಪ್ರೆöÊಮರಿ ಶಾಲೆಯ ಪುಟ್ಟ ವಿದ್ಯಾರ್ಥಿಗಳಿಂದ ಆಷಾಢ ಏಕಾದಶಿ ಆಚರಣೆ..! ವಾರಕರಿ ಉಡುಗೆಯಲ್ಲಿ ಮಿಂಚಿದ ಮುದ್ದು ಮಕ್ಕಳು..!!

ಸಂಕೇಶ್ವರ ಪಟ್ಟಣದ ಸನ್‌ಶೈನ್ ಪ್ರಿ ಪ್ರೆöÊಮರಿ ಇಂಗ್ಲಿಷ್ ಮಿಡಿಯಮ ಶಾಲೆಯ ಪುಟ್ಟ ಬಾಲಕರು ಇತ್ತಿಚಿಗೆ ಸಂಪನ್ನಗೊAಡ ಆಷಾಢ ಏಕಾದಶಿ ನಿಮಿತ್ಯವಾಗಿ ವಾರಕಾರಿ ಸಂಪ್ರದಾಯದ ವೇಶ ಧರಿಸಿ, ದಿಂಡಿ ಯಾತ್ರೆಯ ರೂಪಕ ಪ್ರದರ್ಶನ ಮಾಡುವ ಮೂಲಕ ನಮ್ಮ ದೇಶದ ಭವ್ಯ ಪರಂಪರೆಯನ್ನು ಮತ್ತು ವಾರಕರಿ ಸಂಪ್ರದಾಯದ ಆಚರಣೆಗಳನ್ನು ಜಗತ್ತಿಗೆ ಸಾರಿದರು.

10/07/2025

ಮುಗಳಿ ಗ್ರಾಮದಲ್ಲಿ ಅದ್ದೂರಿಯಾಗಿ ಸಂಪನ್ನಗೊAಡ ಚಿಕ್ಕಾರ ಹುಣ್ಣಿಮೆ ಸಂಭ್ರಮ..! ರಂಗುತAದ ಎತ್ತುಗಳ ಮೆರವಣಿಗೆ ಮತ್ತು ಪ್ರದರ್ಶನ..!!

ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಕಾರ ಹುಣ್ಣಿಮೆಯ ದಿನದಂದು ಪ್ರತಿ ವರ್ಷದಂತೆ ಈ ವರ್ಷವು ಚಿಕ್ಕಾರ ಹುಣ್ಣಿಮೆಯ ಪ್ರಯುಕ್ತವಾಗಿ ಶ್ರೀ ಬಸವಜ್ಯೋತಿ ಯುಥ್ ಫೆಡರೇಶನ್ ಹಾಗೂ ಕಾರ ಹುಣ್ಣಿಮೆ ಕಮಿಟಿ ಮುಗಳಿ ಇವರ ಸಂಯುಕ್ತಾಶ್ರಯದಲ್ಲಿ ಕಾರ ಹುಣ್ಣಿಮೆಯ ಮೆರವಣಿಗೆ ಎತ್ತುಗಳ ಪ್ರದರ್ಶನ ಅದ್ದೂರಿಯಾಗಿ ಸಂಪನ್ನಗೊAಡಿತು.

05/07/2025

ಎಂಟು ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ; ಕ್ಷೇತ್ರಕ್ಕೆ 25 ಕೋಟಿ ವಿಶೇಷ ಅನುದಾನ ಮಂಜೂರು: ರಾಜು ಕಾಗೆ..!!

ನನ್ನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನದಲ್ಲಿ ರೂ. 25 ಕೋಟಿ ನೀಡಿದ್ದು, ಅದರಲ್ಲಿ 12 ಕೋಟಿ ಅನುದಾನದಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಹಾಗೂ 13 ಕೋಟಿ ಅನುದಾನದಲ್ಲಿ ವಿವಿಧ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.

03/07/2025

ನಸಲಾಪೂರದ ಮುಸ್ಲಿಂ ಮುಖಂಡ ಅಬ್ದುಲ ತಾಂಬಾಟ ಅವರ 56 ನೇ ಹುಟ್ಟು ಹಬ್ಬ..! ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಣೆ..!!

ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ತಾಂಬಾಟ್ ಇವರ ಐವತ್ತಾರನೆಯ ಹುಟ್ಟು ಹಬ್ಬವನ್ನು ಅವರ ಸ್ನೇಹಿತರು ಮತ್ತು ಮುಖಂಡರ ಪರಿವಾರ ಮತ್ತು ಬಳಗ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.

Address

Chikodi-Miraj Road, Above Axis Bank ATM, Shirguppi, Tq: Kagwad

591242

Alerts

Be the first to know and let us send you an email when Punch News Media Shirguppi posts news and promotions. Your email address will not be used for any other purpose, and you can unsubscribe at any time.

Contact The Business

Send a message to Punch News Media Shirguppi:

  • Want your business to be the top-listed Media Company?

Share