ನಮ್ಮ ಹುಲಸೂರ ಸುದ್ದಿ -Hulsoor news

  • Home
  • India
  • Bidar
  • ನಮ್ಮ ಹುಲಸೂರ ಸುದ್ದಿ -Hulsoor news

ನಮ್ಮ ಹುಲಸೂರ ಸುದ್ದಿ -Hulsoor news ಸುದ್ದಿಗಳು ಸಾರ್ವಜನಿಕ ರಿಗೆ ಮುಟ್ಟಿಸುವ ಕೆಲಸವೇ ನಮ್ಮ ಹುಲಸೂರ ಅಪಡೇಟ್ ಕೆಲಸ

02/09/2025

*ಮಳೆ ಹಾಗು ಮಾಂಜ್ರಾ ನದಿ ಪ್ರವಾಹಕ್ಕೆ ಬೆಳೆ ಹಾನಿ;ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಭೇಟಿ ನೀಡಿ ಪರಿಶೀಲನೆ..!!*
👇👇👇👇
https://youtu.be/DLSh5iXWZTQ?si=vZuCvC6EGhhu1cX3
👇👇👇👇
Hulsoor update you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ...🙏

01/09/2025

*ಸತತ ಸುರಿದ ಮಳೆ ಹಾಗು ಮಾಂಜ್ರಾ ನದಿಗೆ ಬಂದ ಪ್ರವಾಹಕ್ಕೆ ಭಾರಿ ಬೆಳೆ ಹಾನಿ ಆಗಿರುವುದಕ್ಕೆ ಪರಿಹಾರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹುಲಸೂರ ತಾಲ್ಲುಕಾ ಘಟಕದ ವತಿಯಿಂದ ರಾಜ್ಯ ಸರಕಾರಕ್ಕೆ ಆಗ್ರಹ..!!*
👇👇👇👇
https://youtu.be/SkezPcGLV3s?si=ciZOdQo3Xyd4o0T-
👇👇👇👇
Hulsoor update you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ ..👏

01/09/2025

ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೆ ಸೆಪ್ಟೆಂಬರ್ 2 ರಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

01/09/2025

*ವಾಂಜರಖೇಡ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯ...!!*
👇👇👇👇
"ಸಂಕಷ್ಟದಲ್ಲಿ ಚಂದ್ರಕಾಂತ ಪಾಟೀಲ ಪರಿವಾರ;ವಿಷ ಜಂತುಗಳಿಗೆ ಹೆದರುತ್ತಿರುವ ಪಾಟೀಲ ಪರಿವಾರ ಹಾಗು ಸಾರ್ವಜನಿಕರು"
👇👇👇👇
https://youtu.be/5ROonWBlq9Y?si=G1o0h2gWT-7_RM5N
👇👇👇👇
Hulsoor update you tube Chanel subscribe ಮಾಡಿ like ಮಾಡಿ comment ಮಾಡಿ share ಮಾಡಿ...👏

ಇಂದು ಬಸವಕಲ್ಯಾಣ ತಾಲೂಕಿನ ಘೋಟಳ, ಮನ್ನಳ್ಳಿ, ಹೊನ್ನಾಳಿ, ಚಿಟ್ಟಾ (ಕೆ), ಹಂದ್ರಾಳ, ಅಲಗುಡ್, ಸರಜವಳಗ ಗ್ರಾಮಗಳಿಗೆ ಭೇಟಿ ಮಾಡಿ ಇತ್ತೀಚಿಗೆ ಭಾರ...
01/09/2025

ಇಂದು ಬಸವಕಲ್ಯಾಣ ತಾಲೂಕಿನ ಘೋಟಳ, ಮನ್ನಳ್ಳಿ, ಹೊನ್ನಾಳಿ, ಚಿಟ್ಟಾ (ಕೆ), ಹಂದ್ರಾಳ, ಅಲಗುಡ್, ಸರಜವಳಗ ಗ್ರಾಮಗಳಿಗೆ ಭೇಟಿ ಮಾಡಿ ಇತ್ತೀಚಿಗೆ ಭಾರಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಹಾಗು ರೈತರ ಹೊಲಗಳಿಗೆ ಮಾಜಿ ವಿಧಾನ ಪರಿಷತ್ ಸದಸ್ಯರಾಗ ವಿಜಯಸಿಂಗ್ ರವರು ಭೇಟಿ ನೀಡಿ ರೈತರ ಬೆಳೆ ವೀಕ್ಷಣೆ ಮಾಡಿದರು.

ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅದಷ್ಟು ಬೇಗ ಸರ್ಕಾರದಿಂದ ರೈತರ ಬೆಳೆ ಪರಿಹಾರ ಒದಗಿಸಲು ಹೇಳಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಲಕಂಠ ರಾಠೋಡ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆನಂದ್ ಪಾಟೀಲ್, ಮುಖಂಡರು ರವೀಂದ್ರ ಬೋರಳೆ,ಮಹೇಶ್ ಪಾಟೀಲ್, ಜೈದೀಪ್ ತೇಲಂಗ್, ಪ್ರದೀಪ್ ನಾಗ್ಡೆ, ಮೇಘನಾತ ಕಾರಬರಿ, ರಾಮ್ ಭಕನಾಳ, ಶಿವಕುಮಾರ್ ಕಾಲೋಜಿ, ವೀರಣ್ಣ ಮೂಲಗೆ, ವಿಷ್ಣು ಪಾಟೀಲ್, ಸಂದೀಪ್ ಜಾಧವ್, ಶಾಂತಕುಮಾರ್ ಬೀರಬಿಟ್ಟೆ, ಕಪಿಲ್ದೇವ್, ಬಾಳು ಉಕ್ಕವಲೆ, ವಿದೇಶ ಸಾಗರ್, ಹರಿನಾಥ, ಪುರುಷೋತ್ತಮ, ಅನಂತ ವಾಡೇಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ್ Bidar Voice Vijay Singh ನಮ್ಮ ಬಸವಕಲ್ಯಾಣ

ಬೀದರ ಜಿಲ್ಲಾ ಪೊಲೀಸರಿಂದ ಜಿಲ್ಲೆಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಅತೀ ದೊಡ್ಡ ಕಲಬೆರಿಕೆ ಪಾನ ಮಸಾಲಾ, ಕೆಮಿಕಲ್, ತಂಬಾಕು ಪದಾರ್ಥ ವಶ, ವಾಹನ ಜಪ್...
01/09/2025

ಬೀದರ ಜಿಲ್ಲಾ ಪೊಲೀಸರಿಂದ ಜಿಲ್ಲೆಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಅತೀ ದೊಡ್ಡ ಕಲಬೆರಿಕೆ ಪಾನ ಮಸಾಲಾ, ಕೆಮಿಕಲ್, ತಂಬಾಕು ಪದಾರ್ಥ ವಶ, ವಾಹನ ಜಪ್ತಿ ಆರೋಪಿರ ಬಂಧನ

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಗಾಂಧಿಗಂಜ ಪೊಲೀಸ್ ಠಾಣಾ ವ್ಯಾಪ್ತಿಯ ಚಿದ್ರಿ ಬುತ್ತಿ ಬಸವಣ್ಣಾ ಹತ್ತಿರದ ಮನೆಯೊಂದರಲ್ಲಿ ಅಕ್ರಮವಾಗಿ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ವಿವಿಧ ನಮೂನೆಯ ಪಾನ್ ಮಸಾಲಾ ಮತ್ತು ತಂಬಾಕು ವಸ್ತುಗಳನ್ನು ಕಲಬೆರಕೆ ಮಾಡಿ ಗುಟಕಾ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟು, ಅವುಗಳನ್ನು ಸಾಗಾಣಿಕೆ ಮಾಡಲು ಲಾರಿಯಲ್ಲಿ ಲೋಡ್ ಮಾಡುತ್ತಿರುವ ಮಾಹಿತಿಯಂತೆ, ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಎಮ್.ಡಿ ಸನದಿ ಪೊಲೀಸ್ ಉಪಾಧೀಕ್ಷಕರು, ಸೆನ್ ಪೊಲೀಸ್ ಠಾಣೆ ಬೀದರ ರವರ ನೇತೃತ್ವದಲ್ಲಿ, ಶ್ರೀ ಆನಂದರಾವ್ ಎಸ್.ಎನ್. ಪಿ.ಐ ಗಾಂಧಿಗಂಜ ಪೊಲೀಸ್ ಠಾಣೆ, ಶ್ರೀ ಶಿವಾನಂದ ಘಾಣಿಗೇರ್ ಪಿ.ಐ ಸೆನ್ ಪೊಲೀಸ್ ಠಾಣೆ ಮತ್ತು ಶ್ರೀ ದಶರಥ ಪಿ.ಎಸ್.ಐ ಗಾಂಧಿಗಂಜ ಪೊಲೀಸ್ ಠಾಣೆ ಹಾಗೂ ಗಾಂಧಿಗಂಜ ಪೊಲೀಸ್ ಠಾಣಾ ಸಿಬ್ಬಂಧಿರವರಾದ ಶ್ರೀ ಅನಿಲ, ಶ್ರೀ ಗಂಗಾಧರ, ಶ್ರೀ ಸುಧೀರ, ಶ್ರೀ ಅಜಯಸಿಂಗ್, ಶ್ರೀ ರಾಜಕುಮಾರ, ಶ್ರೀ ಇಸ್ಮಾಯಿಲ್, ಶ್ರೀ ರಾಜಕಿರಣ, ಶ್ರೀ ಸಂತೋಷ, ಚಿಂತಾಕಿ ಠಾಣೆ, ಅದರಂತೆ ಬೀದರ ನೂತನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೋಳಾರ ಕೈಗಾರಿಕಾ ಪ್ರದೇಶದ ಗೊದಾಮಿನಲ್ಲಿ ಪಾನ್ ಮಸಾಲಾ ತಯಾರಿಸಲು ಬೇಕಾದ ಕಚ್ಚಾ ಮಾಲು, ಕೆಮಿಕಲ್ ಪದಾರ್ಥವನ್ನು ಸಂಗ್ರಹಿಸಿಟ್ಟಿರುವ ಮಾಹಿತಿಯಂತೆ ಶ್ರೀ ವಿಜಯಕುಮಾರ, ಪಿ.ಐ ನೂತನ ನಗರ ಠಾಣೆ ರವರು ಶ್ರೀ ಸಂತೋಷ ಸಿ.ಹೆಚ್.ಸಿ-599 ಡಿ.ಎಸ್.ಬಿ ಘಟಕ ಬೀದರ, ಶ್ರೀ ಸಂತೋಷ, ಚಿಂತಾಕಿ ಠಾಣೆ, ಮತ್ತು ನೂತನ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ ಪ್ರಕಾಶ ರವರೊಂದಿಗೆ ದಾಳಿ ಮಾಡಿ ಗಾಂಧಿಗಂಜ ಪೊಲೀಸ್ ಠಾಣೆ ರವರು ಮತ್ತು ನೂತನ ನಗರ ಪೊಲೀಸ್ ಠಾಣೆ ರವರು ಪ್ರತ್ಯೇಕವಾಗಿ ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ ಒಟ್ಟು 2,44,90,525=00 ರೂಪಾಯಿ ಮೌಲ್ಯದ ಪಾನ್ ಮಸಾಲಾ ತಯಾರಿಸಲು ಬೇಕಾದ ಮತ್ತು ಮಾನವನ ಆರೋಗ್ಯಕ್ಕೆ ಹಾನಿಯಾಗುವಂತಹ ಕಚ್ಚಾ ಮಾಲು ಹಾಗೂ ಕೆಮಿಕಲ್ ಪಾದಾರ್ಥವನ್ನು ಜಪ್ತಿ ಮಾಡಿಕೊಂಡು 8 ಜನ ಆರೋಪಿತರ ವಿರುದ್ದ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗಿದೆ.

ಎರಡೂ ಕೋಟಿಗೂ ಅಧಿಕ ಮೌಲ್ಯದ ನಕಲಿ ಪಾನ ಮಸಾಲಾ ಮತ್ತು ತಂಬಾಕಿನ ಪದಾರ್ಥ, ಕೆಮಿಕಲ್ಗಳ ಪಾಕೇಟಗಳು ವಶ ಪಡಿಸಿಕೊಂಡ ಬೀದರ ಗಾಂಧಿಗಂಜ ಮತ್ತು ನೂತನ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಶಾಘಿಸಿ, ಬಹುಮಾನ ಘೋಷಿಸಲಾಗಿದೆ.

ಬೀದರ ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಸದಾ ಸನ್ನಧರಾಗಿದ್ದು, ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ....

ಪ್ರದೀಪ್ ಗುಂಟಿ, ಐ.ಪಿ.ಎಸ್
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ್ ಜಿಲ್ಲೆ ಬೀದರ್.

01/09/2025
ಬೀದರ ಚೌಬಾರಾ ಬಳಿ ನಡೆದ ಭವ್ಯ ಸಾರ್ವಜನಿಕ ಗಣೇಶ ವಿಸರ್ಜನೆ ಮಹೋತ್ಸವಕ್ಕೆ ಚಾಲನೆ ನೀಡಿ ಭಕ್ತರೊಂದಿಗೆ ಹರ್ಷೋತ್ಸಾಹದಿಂದ ಪಾಲ್ಗೊಳ್ಳಲಾಯಿತು.ಶಾಂತ...
31/08/2025

ಬೀದರ ಚೌಬಾರಾ ಬಳಿ ನಡೆದ ಭವ್ಯ ಸಾರ್ವಜನಿಕ ಗಣೇಶ ವಿಸರ್ಜನೆ ಮಹೋತ್ಸವಕ್ಕೆ ಚಾಲನೆ ನೀಡಿ ಭಕ್ತರೊಂದಿಗೆ ಹರ್ಷೋತ್ಸಾಹದಿಂದ ಪಾಲ್ಗೊಳ್ಳಲಾಯಿತು.

ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವ ತುಂಬಿದ ಈ ಮಹೋತ್ಸವದಲ್ಲಿ ಸಾವಿರಾರು ಗಣೇಶ ಭಕ್ತರು ಭಾಗಿಯಾಗಿ ಅದ್ದೂರಿ ವಿಸರ್ಜನೆಗೆ ಸಾಕ್ಷಿಯಾದರು.

ಗಣಪತಿ ಬಪ್ಪಾ ಮೊರಿಯಾ 🎉

Address

Bidar

Website

Alerts

Be the first to know and let us send you an email when ನಮ್ಮ ಹುಲಸೂರ ಸುದ್ದಿ -Hulsoor news posts news and promotions. Your email address will not be used for any other purpose, and you can unsubscribe at any time.

Contact The Business

Send a message to ನಮ್ಮ ಹುಲಸೂರ ಸುದ್ದಿ -Hulsoor news:

Share