Nammabijapur28

Nammabijapur28 Contact information, map and directions, contact form, opening hours, services, ratings, photos, videos and announcements from Nammabijapur28, Digital creator, Bijapur.

30/11/2025

Dec-1-2025

29/11/2025

ಡಿಸೆಂಬರ 1' ರಂದು ವಿಜಯಪುರ ನಗರದಲ್ಲಿ ಬೃಹತ್ ಪ್ರಮಾಣದ ಪ್ರತಿಭಟನಾ ಮೆರವಣಿಗೆ
ಎಲ್ಲರೂ ಭಾಗವಹಿಸಿ...

ಬಿಡಿಇ ಸೊಸೈಟಿ ಮಹಿಳಾ ಕಾಲೇಜು, ಪಿಡಿಜೆ ವಿಜ್ಞಾನ ಕಾಲೇಜು, ಬಂಜಾರಾ ಪಿಯು ಕಾಲೇಜು, ಸರ್ಕಾರಿ ಐಟಿಐ ಕಾಲೇಜುಗಳಿಗೆ ಭೇಟಿ ನೀಡಿ ವೈದ್ಯಕೀಯ ಕಾಲೇಜು...
29/11/2025

ಬಿಡಿಇ ಸೊಸೈಟಿ ಮಹಿಳಾ ಕಾಲೇಜು, ಪಿಡಿಜೆ ವಿಜ್ಞಾನ ಕಾಲೇಜು, ಬಂಜಾರಾ ಪಿಯು ಕಾಲೇಜು, ಸರ್ಕಾರಿ ಐಟಿಐ ಕಾಲೇಜುಗಳಿಗೆ ಭೇಟಿ ನೀಡಿ ವೈದ್ಯಕೀಯ ಕಾಲೇಜು ಹೋರಾಟ ಹಾಗೂ ಡಿಸೆಂಬರ್ 01 ರ ಜನಾಕ್ರೋಶ ಮೆರವಣಿಗೆ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ, ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ...
26/11/2025

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ, ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ.

26/11/2025

ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ಇವರಿಗೆ,

ಮಕ್ಕೆ ಜೋಳ ಖರೀದಿ ಕೇಂದ್ರ ತರೆಯುವ ಕುರಿತು ಹಾಗೂ ಬೆಂಬಲ ಬೆಲೆ 3000ದೂ ನಿಗದಿಪಡಿಸುವ ಕುರಿತು.
ಅತಿವೃಷ್ಠಿಯಿಂದ ಬೆಳೆಗಳು ಹಾನಿಯಾದ ಪರಿಹಾರ ಕೊಡುವ ಕುರಿತು.
ಶೀಘ್ರದಲ್ಲಿ ಖರೀದಿ ಕೇಂದ್ರ ತೆರೆಯದಿದ್ದಲ್ಲಿ ಎಲ್ಲ ತಾಲ್ಲೂಕಾ ಹಾಗೂ ಜಿಲ್ಲಾ ಎ ಪಿ ಎಂ ಸಿ ಗೇಟುಗಳಿಗೆ ಕೀಲಿ ಹಾಕಿ ವಹಿವಾಟು ಬಂದ ಮಾಡಿ ಖರೀದಿ ಕೇಂದ್ರ ತರೆಯುವರೆಗೆ ಚಳುವಳಿ ಮಾಡಲಾಗುವದು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಇದರ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಈ ಮನವಿ ಮುಖಾಂತರ ಎಚ್ಚರಿಕೆ ಕೊಡುತ್ತಿದ್ದೇವೆ.
ಕಳೆದ ಸೆಪ್ಟೆಂಬರ ಹಾಗೂ ಅಕ್ಟೋಬರ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಸುಮಾರು ಲಕ್ಷ ಲಕ್ಷ ಹೆಕ್ಟರ್ ಬೆಳೆ ಹಾನಿಯಾದ ತೊಗರಿ, ಮೆಕ್ಕೆ, ಇತರೆ ಬೆಳೆಗಳು ಹಾನಿಯಾಗಿದ್ದು ಆದರೆ ಇಲ್ಲಿಯವಲರಿಗೆ ಯಾವುದೇ ರೀತಿ ಬೆಳೆ ಪರಿಹಾರ ರಾಜ್ಯ ಸರಕಾರದಿಂದ ಬಂದಿರುವದಿಲ್ಲ ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಮುಖಾಂತರ ಸನ್ಮಾನ್ಯ ಮುಖ್ಯ ಮಂತ್ರಿಯವರಿಗೆ ಸದರ ಬೆಳೆ ಹಾನಿ ಪರಿಹಾರ ಒಂದು ವಾರದೊಳಗೆ ಕೊಡಬೇಕು ಇಲ್ಲವಾದಲ್ಲಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ. ತಕ್ಷಣ ಪರಿಹಾರ ಹಣ ಬಿಡುಗಡೆ ಮಾಡಬೇಕು ಅಂತಾ ಬೃಹತ್ ಪ್ರತಿಭಟನೆ.



25/11/2025

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ವಿಜಯಪುರ ನಗರದ DySP ಶ್ರೀ ಬಸವರಾಜ ಯಲಿಗಾರ..

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ನ...
25/11/2025

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ನೋವುಂಟು ಮಾಡಿದೆ. ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಮಹಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಯಿಂದಾಗಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು.

ಕ್ರೀಡೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ – ಡಾ|| ಜಾವಿದ ಜಮಾದಾರವಿಜಯಪುರ: ದೃಢ ನಿಶ್ಚಯ, ಕಠಿಣ ಪರಿಶ್ರಂ ಕ್ರೀಡೆಗಳಲ್ಲಿ ನಿರಂತರ ಭಾಗವಹಿಸು...
25/11/2025

ಕ್ರೀಡೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ
ಇದೆ – ಡಾ|| ಜಾವಿದ ಜಮಾದಾರ

ವಿಜಯಪುರ: ದೃಢ ನಿಶ್ಚಯ, ಕಠಿಣ ಪರಿಶ್ರಂ
ಕ್ರೀಡೆಗಳಲ್ಲಿ ನಿರಂತರ
ಭಾಗವಹಿಸುವಿಕೆಯಿಂದ ಶಿಸ್ತು, ಸ್ನೇಹ, ಸೌಹಾರ್ದ
ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಬಹಳ
ಸಹಕಾರಿಯಾಗಿದೆ. ಕ್ರೀಡೆಗೆ ಜಗತ್ತನ್ನು
ಬದಲಾಯಿಸುವ ಶಕ್ತಿ ಇದೆ ಎಂದು ರಾಷ್ಟಿಯ ಯುವ
ಪ್ರಶಸ್ತಿ ಪುರಸ್ಕೃತ ಡಾ|| ಜಾವಿದ ಜಮಾದಾರ
ಅಭಿಪ್ರಾಯಪಟ್ಟರು.
ನಗರದ ಡಾ|| ಬಿ.ಆರ್.ಅಂಬೇಡ್ಕರ
ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ವಿಜಯಪುರ ಜಿಲ್ಲೆಯ ವಿಕಲಚೇತನರ ಸಂಘ
ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ
ವಿಜಯಪುರ ತಾಲ್ಲೂಕಾ ಮಟ್ಟದ
ವಿಕಲಚೇತನರ ಹಾಗೂ ಬೌದ್ದಿಕ ವಿಕಲತೆ
ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಾ
ಕ್ರೀಡೆಯೊಂದಿಗೆ ದೈಹಿಕ ಶಕ್ತಿ, ಸಹಿಷ್ಣತೆ
ಸಮಾಜಿಕ ಏಕೀಕರಣ ಮತ್ತು ಮಾನಸಿಕ
ಯೋಗಕ್ಷೇಮ ಹೆಚ್ಚಾಗುತ್ತದೆ. ವಿಶೇಷ

ಚೇತನರು ಕ್ರೀಡೆಯ
ಪ್ರಯೋಜನೆಗಳನ್ನು ಅರ್ಥ ಮಾಡಿಕೊಂಡು
ಪ್ಯಾರಾ ಓಲಂಪಿಕದಲ್ಲಿ ಸಾಧನೆ ಮಾಡಲು ನಿರಂತರ
ಪರಿಶ್ರಮ ವಹಿಸಬೇಕೆಂದರು. ವಿಶೇಷ
ಚೇತನರ ಹಕ್ಕುಗಳು ಮತ್ತು
ಯೋಗಕ್ಷೇಮವನ್ನು ಉತ್ತೇಜಿಸಲು ಹಾಗೂ
ಅಂಗವೈಕಲ್ಯದ ಸಾಮಾಜಿಕ ಆರ್ಥಿಕ, ಸಾಂಸ್ಕೃತಿಕ
ಮತ್ತು ರಾಜಕೀಯ ಅಂಶಗಳ ಬಗ್ಗೆ ಅವರಲ್ಲಿ
ಜಾಗೃತಿ ಮೂಡಿಸಿ ವಿಶೇಷ ಚೇನತರಿಗೆ
ಸಮಾಜದಲ್ಲಿ ಸಮಾನಸ್ಥಾನ ನೀಡಬೇಕಾಗಿದೆ.
ಅಂಗವಿಕಲತೆ ಒಂದು ಶಾಪವಲ್ಲ, ಮಾನವನ
ಅಜಾಗುರುಕತೆಯಿಂದ ಬರುವ
ರೋಗವಾಗಿದ್ದು, ಉತ್ತಮ ಚಿಕಿತ್ಸ ಮತ್ತು
ಗರ್ಭಾವಸ್ಥೆಯಲ್ಲಿದ್ದಾಗ ಉತ್ತಮ ಉಪಚಾರ,
ಪೋಲಿಯೋ ಲಸಿಕೆ ಮಾಡಿಕೊಂಡು ಅಂಕವಿಕಲ
ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ
ಎಂದರು.
ಅಧ್ಯಕ್ಷತೆ ವಹಿಸಿದ ಸಹಾಯಕ
ನಿರ್ದೇಶಕರಾದ ರಾಜಶೇಖರ ಧೈವಾಡಿ ಮಾತನಾಡಿ
ವಿಶೇಷ ಚೇತನರು ಕ್ರೀಡೆಗಳಲ್ಲಿ ಹೇಗೆ
ಸೇರಬೇಕೆಂದು ತಿಳುವಳಿಕೆ ಮತ್ತು ಅರವಿನ
ಕೊರತೆ ಇದ್ದು, ಇದರ ಬಗ್ಗೆ ಜಿಲ್ಲೆಯಲ್ಲಿ
ಜಾಗೃತಿ ಮೂಡಿಸಲಾಗುವುದು. ವಿಶೇಷ
ಚೇತನರಿಗೆ ಜಿಲ್ಲಾ ಮತ್ತು ರಾಜ್ಯ,

ರಾಷ್ಟçಮಟ್ಟದಲ್ಲಿ ಉತ್ತಮ ಸಾಧನೆ ಗೈಯಲು
ಕ್ರೀಡಾ ಇಲಾಖೆಯಿಂದ ವಿಶೇಷ ತರಬೇತಿ
ನೀಡಲಾಗುವುದು. ಸರಕಾರ ವಿಕಲಚೇತನರ
ಸಬಲೀಕರಣಕ್ಕಾಗಿ ಅನೇಕ ಯೋಜನೆಗಳು
ಜಾರಿಗೆ ತಂದಿದ್ದು ನಿಜವಾದ ಫಲನುಭವಿಗಳಿಗೆ
ಮುಟ್ಟಿಸಲಾಗುವುದು. ವ್ಹೀಲಚೇರ್, ಕೃತಕ
ಅಂಗವಿಕಲತೆ ಸಾದನ ಸಲಕರಣೆಗಳು
ನೀಡಲಾಗುತ್ತಿದೆ. ಇದರ ಸದುಪಯೋಗ
ಪಡೆದುಕೊಳ್ಳಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ
ಅಧಿಕಾರಿ ಜಗದೀಶ ಕೆಂಪಲಿಂಗಣ್ಣವರ, ವಿಶೇಷ
ಚೇನತರ ಸಂಸ್ಥೆಗಳ ಮುಖ್ಯಸ್ಥರಾದ
ನಿಮಿಷ ಆಚಾರ್ಯ, ಪರಶುರಾಮ
ಗುನ್ನಾಪೂರ, ಮೊದಿನಬಾಶಾ ಜಹಾಗೀರದಾರ,
ಮಹೇಶ ಮುಧೋಳ, ಸುಮಿತ ಪಾಂಡಿಚೇರಿ,
ಉಪಸ್ಥಿತರಿದ್ದರು. ಶಿವಶರಣ ಹರಳಯ್ಯಾ ಅಂಧ
ಮಕ್ಕಳ ವಸತಿ ಶಾಲೆ, ಸ್ವಪ್ನಾ ಕಿವುಡ ಮತ್ತು
ಮೂಕ ಮಕ್ಕಳ ಶಾಲೆ, ದೇಶಪಾಂಡೆ ಬೌದ್ದಿಕ
ವಿಕಲತೆ ಮಕ್ಕಳ ಶಾಲೆ, ವಿಜಯಪುರ ಹಾಗೂ
ಅಪಾರ ಸಂಖ್ಯೆಯ ವಿಕಲಚೇತನರು
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ರವಿ ರಾಠೋಡ,
ಸ್ವಾಗತಿಸಿದರು, ಶ್ರೀಧರ ಜೋಶಿ ವಂದಿಸಿದರು.

Address

Bijapur

Website

Alerts

Be the first to know and let us send you an email when Nammabijapur28 posts news and promotions. Your email address will not be used for any other purpose, and you can unsubscribe at any time.

Share