Gokak Sandesha

Gokak Sandesha Power of Information which help people to know current affair News
(1)

ಗೋಕಾಕ ನ್ಯಾಯವಾದಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಗೋಕಾಕ : ನಗರದ ನ್ಯಾಯಾಲಯ ಆವರಣದಲ್ಲಿ ಗೋಕಾಕ ನ್ಯಾಯವಾದಿಗಳ ಸಂಘದಿಂದ ಕಛೇರಿಯಲ್ಲಿ ತಾ...
01/11/2025

ಗೋಕಾಕ ನ್ಯಾಯವಾದಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಗೋಕಾಕ : ನಗರದ ನ್ಯಾಯಾಲಯ ಆವರಣದಲ್ಲಿ ಗೋಕಾಕ ನ್ಯಾಯವಾದಿಗಳ ಸಂಘದಿಂದ ಕಛೇರಿಯಲ್ಲಿ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರು.

ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಎಸ್ ಜಿ ಪಾಟೀಲ್ ಅವರು ಮಾತನಾಡಿ ನಾವು - ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ. ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ ಎಂದರು.

ನಮ್ಮ ಗೋಕಾಕ ನ್ಯಾಯಾಲಯವು ಬ್ರಿಟಿಷ್ ಆಡಳಿತಕ್ಕಿಂತ ಹಾಗೂ ಕನ್ನಡ ಏಕಿಕರಣಕ್ಕಿಂತ ಮುಂಚಿನ ಕಟ್ಟಡವಾಗಿದೆ, ಇಂತಹ ಕಟ್ಟಡಗಳು ಇನಸ್ಕೋ ದಲ್ಲಿ ಸಹಿತ ಮಾನ್ಯತೆ ಪಡೆದಿದೆ ಅವುಗಳನ್ನು ಉಳಿಸಿ ಬೆಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಉಳಿದ ಪದಾದಿಕಾರಿಗಳು , ಹಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು ಶೇಫರ್ಡ್ ಮಿಷನ್ ಸ್ಕೂಲ್ ಗೋಕಾಕ
01/11/2025

ಕರ್ನಾಟಕ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು

ಶೇಫರ್ಡ್ ಮಿಷನ್ ಸ್ಕೂಲ್ ಗೋಕಾಕ

ಸರ್‌ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿಗೋಾಕಾಕ ಪೊಲೀಸ್ ಉಪವಿಭಾಗದ ವತಿಯಿಂದ ಏಕತಾಗಾಗಿ ಓಟ
31/10/2025

ಸರ್‌ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ
ಗೋಾಕಾಕ ಪೊಲೀಸ್ ಉಪವಿಭಾಗದ ವತಿಯಿಂದ ಏಕತಾಗಾಗಿ ಓಟ

ಗೋಕಾಕ ನಗರದಲ್ಲಿ ನಾಳೆ “ಏಕತೆಗಾಗಿ ಓಟ" ಕಾರ್ಯಕ್ರಮ
30/10/2025

ಗೋಕಾಕ ನಗರದಲ್ಲಿ ನಾಳೆ “ಏಕತೆಗಾಗಿ ಓಟ" ಕಾರ್ಯಕ್ರಮ

ಲೋಕೋಪಯೋಗಿ ಇಲಾಖೆ ಸಚಿವರು ಸತೀಶ ಜಾರಕಿಹೊಳಿ ಅವರು ಬೆಂಗಳೂರಿನ ‌ಗೃಹಕಚೇರಿಗೆ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್...
30/10/2025

ಲೋಕೋಪಯೋಗಿ ಇಲಾಖೆ ಸಚಿವರು ಸತೀಶ ಜಾರಕಿಹೊಳಿ ಅವರು ಬೆಂಗಳೂರಿನ ‌ಗೃಹಕಚೇರಿಗೆ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿದರು.

ಈ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿದ್ದರು.

ಗೋಕಾಕ್: ಯುವ ನಾಯಕ ಅಮರನಾಥ ಜಾರಕಿಹೊಳಿ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅ...
29/10/2025

ಗೋಕಾಕ್: ಯುವ ನಾಯಕ ಅಮರನಾಥ ಜಾರಕಿಹೊಳಿ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಜರಗಿತು.

28/10/2025

ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರು ಗೃಹ ಕಚೇರಿಯಲ್ಲಿ

ಕೈ.ವಾ ಶ್ರೀ ಹಣಮಂತ (ಅಜ್ಜಪ್ಪ) ಗೋವಿಂದ ಕರನಿಂಗಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ನಿವಾಸಿಗಳು, ಮಾರುತಿ ಪೆಟ್ರೋಲ್ ಪಂಪ್ಮಾಲೀಕರಾದ ಶ್ರೀ ಹಣಮಂತ ...
28/10/2025

ಕೈ.ವಾ ಶ್ರೀ ಹಣಮಂತ (ಅಜ್ಜಪ್ಪ) ಗೋವಿಂದ ಕರನಿಂಗ
ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ನಿವಾಸಿಗಳು, ಮಾರುತಿ ಪೆಟ್ರೋಲ್ ಪಂಪ್
ಮಾಲೀಕರಾದ ಶ್ರೀ ಹಣಮಂತ ಗೋವಿಂದ ಕರನಿಂಗ ಅವರು ಸೋಮವಾರ ದಿ.27.J0.2025.ರಂದು
ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದು ವಿಷಾಧನೀಯ ಮೃತರ ಆತ್ಮಕ್ಕೆ ಶಾಂತಿ ಹಾಗೂ
ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥನೆ.
ಅಂತ್ಯಕ್ರಿಯೆ: ಮಂಗಳವಾರ ದಿ.28-10-2025.ರಂದು ಮಧ್ಯಾಹ್ನ 2:00.ಗಂಟೆಗೆ
ಸ್ಥಳ: ಕೊಣ್ಣೂರ ಪಟ್ಟಣದ ವಾಲ್ಮೀಕಿ ಸಮಾಜದ ಸ್ಮಶಾನದಲ್ಲಿ ನೆರವೇರುವುದು

ಗೋಕಾಕ ನಗರದಲ್ಲಿ ಪ್ರಥಮ ಬಾರಿಗೆ ಶ್ರೀ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಸುಪ್ರಸಿದ್ಧ ಕಾಶಿ ಮಾದರಿಯ ಗಂಗಾ ಆರತಿ ಕಾರ್ಯಕ್ರಮ.
28/10/2025

ಗೋಕಾಕ ನಗರದಲ್ಲಿ ಪ್ರಥಮ ಬಾರಿಗೆ ಶ್ರೀ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಸುಪ್ರಸಿದ್ಧ ಕಾಶಿ ಮಾದರಿಯ ಗಂಗಾ ಆರತಿ ಕಾರ್ಯಕ್ರಮ.

ಅಭಿಮಾನಿ ಬಳಗದ ವತಿಯಿಂದ ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ.ಗೋಕಾಕ : ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನ...
26/10/2025

ಅಭಿಮಾನಿ ಬಳಗದ ವತಿಯಿಂದ ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ.

ಗೋಕಾಕ : ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಸಂತೋಷ್ ಜಾರಕಿಹೊಳಿ ಅವರ ಅಭಿಮಾನಿ ಬಳಗ ವತಿಯಿಂದ ಯುವ ನಾಯಕ ಸಂತೋಷ ಜಾರಕಿಹೊಳಿ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.

ನಂತರ ಗೋಕಾಕ ಹಾಗೂ ಯರಗಟ್ಟಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಉಪಹಾರವನ್ನು ವಿತರಿಸುವ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ, ಮುಖಂಡರಾದ ಪ್ರಶಾಂತ ಜೋರಾಪುರ, ಪ್ರವೀಣ್ ನಾಯ್ಕ್, ನಾಗಣ್ಣ ಹಟ್ಟಿ, ಶೇಷಾಚಲ ಹೊನ್ನತ್ತಿ, ಪ್ರವೀಣ ಅವಡಖಾನ, ಸಲಿಲ್ ಜಾಡವಾಲೆ, ಸಚಿನ್ ಕಲಾಲ , ಮಂಜುನಾಥ್ ಮುರಘೋಡ , ರಘು, ವಿನಾಯಕ ಹಾಗೂ ಸಂತೋಷ್ ಗುಡ್ಡನ್ನವರ, ಕಿಶೋರ್ ಕಲಾಲ ಹಾಗೂ ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿಗಳು ಉಪಸ್ಥಿತರಿದ್ದರು

ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
26/10/2025

ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಮೂರು ದಿನಗಳ ಕಾಲ ಭವ್ಯವಾಗಿ ಜರುಗಿದ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ – 2...
26/10/2025

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಮೂರು ದಿನಗಳ ಕಾಲ ಭವ್ಯವಾಗಿ ಜರುಗಿದ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ – 2025 ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಭಾಗವಹಿಸಿದರು.

ನಮ್ಮ ನಾಡಿನ ಗೌರವ ಮತ್ತು ಸ್ವಾತಂತ್ರ್ಯದ ಸಂಕೇತವಾದ ವೀರರಾಣಿ ಕಿತ್ತೂರು ಚನ್ನಮ್ಮನವರ ಶೌರ್ಯಗಾಥೆ,
ಕಿತ್ತೂರಿನ ಮಣ್ಣು ಶೌರ್ಯ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಪ್ರೇರಣೆಯಾಗಿ ನಾಡಿನ ಯುವ ಪೀಳಿಗೆಗೆ ಸ್ಪೂರ್ತಿ ನೀಡುತ್ತಿದರು.

ಈ ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು, ವಿಧಾನ ಪರಿಷತ್ ನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ವಿಧಾನಸಭೆಯ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಆಸಿಫ್ ಸೇಠ್, ವಿಜಯಾನಂದ ಕಾಶಪ್ಪನವರ್, ಎನ್.ಎಚ್.ಕೋನರೆಡ್ಡಿ, ವಿಶ್ವಾಸ್ ವೈದ್ಯ, ವಿ.ಪ.‌ ಸದಸ್ಯರಾದ ಚನ್ನರಾಜ‌ ಹಟ್ಟಿಹೊಳಿ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲೆಯ ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Address

Opp PWD Office Underground Of Shetty Lunch Home , , Gokak Sandesha Office
Gokak
591307

Opening Hours

Monday 9am - 8pm
Tuesday 9am - 8pm
Wednesday 9am - 8pm
Thursday 9am - 8pm
Friday 9am - 8pm
Saturday 9am - 8pm
Sunday 9am - 8pm

Telephone

+918722672906

Website

Alerts

Be the first to know and let us send you an email when Gokak Sandesha posts news and promotions. Your email address will not be used for any other purpose, and you can unsubscribe at any time.

Contact The Business

Send a message to Gokak Sandesha:

Share