Live Haveri

Live Haveri Contact information, map and directions, contact form, opening hours, services, ratings, photos, videos and announcements from Live Haveri, Media/News Company, Haveri.

ಹಾವೇರಿ ಜಿಲ್ಲೆಯ ವಿಶ್ವಾಸಾರ್ಹ ಮತ್ತು ಕ್ಷಣ ಕ್ಷಣದ ಸುದ್ದಿ ತಾಣ.
📍 ಹಾವೇರಿ | ರಾಣೆಬೆನ್ನೂರು | ಬ್ಯಾಡಗಿ | ಸವಣೂರು | ಹಾನಗಲ್ | ಶಿಗ್ಗಾಂವ್ | ಹಿರೇಕೆರೂರು

ಬ್ರೇಕಿಂಗ್ ನ್ಯೂಸ್, ರಾಜಕೀಯ, ಅಪರಾಧ, ಅಭಿವೃದ್ಧಿ, ಕೃಷಿ, APMC ರೇಟ್, ಹವಾಮಾನ ವರದಿ - ಹಾವೇರಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳು

ಜೂನ್ ಹತ್ತಿರ ಬಂದರೂ ಇನ್ನೂ ರೈತರ ಕೈ ಸೇರದ ಬಿತ್ತನೆ ಬೀಜಗಳು.. ಕಾಮೆಂಟ್ ಬಾಕ್ಸ್ ನೋಡಿ ಕಾಮೆಂಟ್ ಮಾಡಿ..
26/05/2026

ಜೂನ್ ಹತ್ತಿರ ಬಂದರೂ ಇನ್ನೂ ರೈತರ ಕೈ ಸೇರದ ಬಿತ್ತನೆ ಬೀಜಗಳು..
ಕಾಮೆಂಟ್ ಬಾಕ್ಸ್ ನೋಡಿ ಕಾಮೆಂಟ್ ಮಾಡಿ..

ಶಿಗ್ಗಾಂವ ಪಟ್ಟಣದ 3ನೇ ನಂಬರ್ ಅಂಗನವಾಡಿ ಕೇಂದ್ರದಲ್ಲಿ ಇಂದು ಬೆಳಿಗ್ಗೆ 29 ವರ್ಷದ ಸುಮಾ ವನಹಳ್ಳಿ ಎನ್ನುವ ಅಂಗನವಾಡಿ ಕಾರ್ಯಕರ್ತೆ ಅನುಮಾನಾಸ್ಪ...
25/05/2026

ಶಿಗ್ಗಾಂವ ಪಟ್ಟಣದ 3ನೇ ನಂಬರ್ ಅಂಗನವಾಡಿ ಕೇಂದ್ರದಲ್ಲಿ ಇಂದು ಬೆಳಿಗ್ಗೆ 29 ವರ್ಷದ ಸುಮಾ ವನಹಳ್ಳಿ ಎನ್ನುವ ಅಂಗನವಾಡಿ ಕಾರ್ಯಕರ್ತೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಹಾವೇರಿ SP ಯಶೋದಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SP ಹೇಳಿಕೆ ಪ್ರಕಾರ, ಮೃತಳ ಸಹೋದರನನ್ನು ಕೊಲೆ ಆರೋಪದಡಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದ ಉದ್ದೇಶ ಇನ್ನೂ ತಿಳಿದುಬಂದಿಲ್ಲ.

ಶಿಗ್ಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸೂಚನೆ: ಇದು ಘಟನೆಯ ಬಗ್ಗೆ ವರದಿ ಉದ್ದೇಶವಾಗಿದ್ದು, ಪೊಲೀಸ್ ತನಿಖೆ ಹಾಗೂ ಕೋರ್ಟ್ ವಿಚಾರಣೆ ಬಾಕಿ ಇದೆ.

ಅಪರೂಪದ ಪುನಗು ಬೆಕ್ಕು ರಸ್ತೆ ಅಪಘಾತದಲ್ಲಿ ಸಾವು! ಹಾವೇರಿಯಲ್ಲಿ ದುರ್ಘಟನೆಹಾನಗಲ್ಲ ತಾಲೂಕಿನ ಕೂಸನೂರ ಬಳಿ ಅಪರೂಪದ ವನ್ಯಜೀವಿ ಬಲಿ. ರಾತ್ರಿ ವೇ...
24/05/2026

ಅಪರೂಪದ ಪುನಗು ಬೆಕ್ಕು ರಸ್ತೆ ಅಪಘಾತದಲ್ಲಿ ಸಾವು! ಹಾವೇರಿಯಲ್ಲಿ ದುರ್ಘಟನೆ

ಹಾನಗಲ್ಲ ತಾಲೂಕಿನ ಕೂಸನೂರ ಬಳಿ ಅಪರೂಪದ ವನ್ಯಜೀವಿ ಬಲಿ. ರಾತ್ರಿ ವೇಳೆ ರಸ್ತೆ ದಾಟುತ್ತಿದ್ದ ಪುನಗು ಬೆಕ್ಕಿಗೆ ವಾಹನ ಡಿಕ್ಕಿ. ಸ್ಥಳದಲ್ಲೇ ಸಾವು.

ಕಾಫಿ ಪ್ರಿಯರಿಗೆ ಗೊತ್ತಿರೋ ಈ ಪುನಗು ಬೆಕ್ಕಿನ ಹಿಕ್ಕೆಯಿಂದಲೇ ವಿಶ್ವದ ದುಬಾರಿ "ಸಿವೆಟ್ ಕಾಫಿ" ತಯಾರಾಗುತ್ತೆ. ಹಣ್ಣು ತಿಂದು ಬದುಕುವ ಈ ಮೂಕ ಪ್ರಾಣಿ ಕಾಡು ನಾಶ, ರಸ್ತೆ ಅಗಲೀಕರಣದಿಂದ ಸಂಕಷ್ಟಕ್ಕೆ ಸಿಲುಕಿದೆ.

ಅಭಿವೃದ್ಧಿ ಹೆಸರಲ್ಲಿ ಕಾಡು ಕಡಿದ್ರೆ, ರಸ್ತೆ ಮಾಡಿದ್ರೆ ವನ್ಯಜೀವಿಗಳ ಗತಿ ಏನು? ಪ್ರಾಣಿ, ಪಕ್ಷಿ, ಕೀಟಗಳು ಇಲ್ಲದಿದ್ದರೆ ಮನುಷ್ಯನ ಜೀವನವೇ ಇಲ್ಲ.

ವಾಹನ ಚಾಲಕರು ಕಾಡು ಪ್ರದೇಶದಲ್ಲಿ, ರಾತ್ರಿ ವೇಳೆ ನಿಧಾನವಾಗಿ, ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಒಂದು ಜೀವ ಉಳಿಸಿ




ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಇಚ್ಚಂಗಿ ಗ್ರಾಮದ ಕೊನೆಯ ಹಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮಕ್ಕೆ ಸಂಪರ್ಕಿಸು...
24/05/2026

ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಇಚ್ಚಂಗಿ ಗ್ರಾಮದ ಕೊನೆಯ ಹಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಮಳೆ ಬಂದಾಗ ರಸ್ತೆ ಕೆಸರಿನ ಹೊಂಡಗಳಾಗಿ ಮಾರ್ಪಟ್ಟು ಬೈಕ್ ಸವಾರರು ಮತ್ತು ವಾಹನ ಚಾಲಕರು ಅಪಘಾತದ ಭೀತಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯನ್ನು ಪ್ರತಿದಿನ ಶಾಲಾ ಮಕ್ಕಳು, ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಬಳಸುತ್ತಿದ್ದು, ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಕ್ಷಣ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಾವೇರಿಯಾಗ್ ಇವತ್ ಏನ್ ಸುದ್ದಿ..ಅಂತ ಡೀಟೈಲಾಗಿ ನೋಡಾಕ್ @ಸಮಗ್ರಕರ್ನಾಟಕ ಪೇಜ್ ಫಾಲೋ ಮಾಡ್ರಿ     #ಸಮಗ್ರಕರ್ನಾಟಕ
24/05/2026

ಹಾವೇರಿಯಾಗ್ ಇವತ್ ಏನ್ ಸುದ್ದಿ..

ಅಂತ ಡೀಟೈಲಾಗಿ ನೋಡಾಕ್ @ಸಮಗ್ರಕರ್ನಾಟಕ ಪೇಜ್ ಫಾಲೋ ಮಾಡ್ರಿ
#ಸಮಗ್ರಕರ್ನಾಟಕ

ಹೊಂಬರಡಿ ಫೈರಿಂಗ್ ರೇಂಜ್‌ನಲ್ಲಿ ಹಾವೇರಿ ಪೊಲೀಸರ Annual Firing Practiceಹಾವೇರಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪೊಲೀಸ್‌ ಅಧಿಕಾರಿ ಮತ್...
23/05/2026

ಹೊಂಬರಡಿ ಫೈರಿಂಗ್ ರೇಂಜ್‌ನಲ್ಲಿ ಹಾವೇರಿ ಪೊಲೀಸರ Annual Firing Practice

ಹಾವೇರಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ವಾರ್ಷಿಕ ಗುಂಡು ಗುರಿ ಅಭ್ಯಾಸವನ್ನು ಹೊಂಬರಡಿ ಫೈರಿಂಗ್ ರೇಂಜ್‌ನಲ್ಲಿ ಆಯೋಜಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು, ತುರ್ತು ಪರಿಸ್ಥಿತಿ ಎದುರಿಸಲು ಪೊಲೀಸರ ಸನ್ನದ್ಧತೆ ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷ ಈ ಅಭ್ಯಾಸ ನಡೆಸಲಾಗುತ್ತದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿ ಶೂಟಿಂಗ್ ತರಬೇತಿ ಪಡೆದರು.

ಸ್ಥಳ: ಹೊಂಬರಡಿ ಫೈರಿಂಗ್ ರೇಂಜ್, ಹಾವೇರಿ



ಬ್ಯಾಡಗಿ ಪೊಲೀಸ ಠಾಣೆಯಲ್ಲಿ ಹಿಂದೂ ಮುಸ್ಲಿಂ ಸಮಾಜದ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಸಲಾಯಿತು..
23/05/2026

ಬ್ಯಾಡಗಿ ಪೊಲೀಸ ಠಾಣೆಯಲ್ಲಿ ಹಿಂದೂ ಮುಸ್ಲಿಂ ಸಮಾಜದ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಸಲಾಯಿತು..

22/05/2026

8 ತಿಂಗಳಿಂದ ವೇತನವಿಲ್ಲದೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಕ್ರವಾರ ಸಿಂಡಿಕೇಟ್ ಸಭೆಗೂ ಮುನ್ನ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸಿಬ್ಬಂದಿ, ಸಿಂಡಿಕೇಟ್ ಸದಸ್ಯರು ಮತ್ತು ಅಧಿಕಾರಿಗಳ ಪ್ರವೇಶಕ್ಕೆ ತಡೆ ಒಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

"ಗುತ್ತಿಗೆ ಟೆಂಡರ್ ಮುಗಿದಿದೆ" ಎಂದು ಸಂಬಳ ನಿರಾಕರಿಸಲಾಗುತ್ತಿದೆ. ಆದರೆ ಪ್ರತಿದಿನ ಕೆಲಸ ಮಾಡಿದ್ದೇವೆ, ಸಂಬಳ ನೀಡದಿರುವುದು ಅನ್ಯಾಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಿಗೆ 2024-25ರ 6 ತಿಂಗಳು ಹಾಗೂ 2025-26ರ 3 ತಿಂಗಳು ಸೇರಿ ಒಟ್ಟು 9 ತಿಂಗಳ ವೇತನ ಬಾಕಿ ಇದೆ. ಬಾಡಿಗೆ ಕಟ್ಟಲೂ ಹಣವಿಲ್ಲ, ಪ್ರಯಾಣಕ್ಕೂ ಕಾಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಕಾರ್ಮಿಕ ಇಲಾಖೆ ನಿಯಮದಂತೆ ತಕ್ಷಣ ವೇತನ ಪಾವತಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಎಂದು ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಲಾಗಿದೆ.

ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಬೆಳಗಿನ ವಾಕಿಂಗ್ ವೇಳೆ ದುರಂತ. ಹೊಂಡಕ್ಕೆ ಬಿದ್ದ 8 ವರ್ಷದ ವಿಕಲಚೇತನ ಮಗ ಶರತನನ್ನು ರಕ್ಷಿಸಲು ಹೋದ ತ...
22/05/2026

ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಬೆಳಗಿನ ವಾಕಿಂಗ್ ವೇಳೆ ದುರಂತ. ಹೊಂಡಕ್ಕೆ ಬಿದ್ದ 8 ವರ್ಷದ ವಿಕಲಚೇತನ ಮಗ ಶರತನನ್ನು ರಕ್ಷಿಸಲು ಹೋದ ತಂದೆ ಶಂಭುಲಿಂಗಪ್ಪ ಹಂಸಭಾವಿ, 40 ವರ್ಷ, ಕೂಡ ನೀರಿನಲ್ಲಿ ಮುಳುಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರತಿದಿನ ಬೆಳಿಗ್ಗೆ 5:30ಕ್ಕೆ ಮಗನನ್ನು ವಾಕಿಂಗ್ ಕರೆದೊಯ್ಯುತ್ತಿದ್ದ ತಂದೆ, ಇಂದು ಮುಖ ತೊಳೆಯಲು ಹೋದಾಗ ಪಾಚಿಗಟ್ಟಿದ ದಡದಲ್ಲಿ ಕಾಲು ಜಾರಿ ಮಗ ಹೊಂಡಕ್ಕೆ ಬಿದ್ದಿದ್ದಾನೆ. ಮಗನನ್ನು ಉಳಿಸಲು ಹೋದ ತಂದೆಯೂ ಮೃತಪಟ್ಟಿದ್ದಾರೆ. ಜಮೀನಿಗೆ ಹೋಗುತ್ತಿದ್ದ ರೈತರೊಬ್ಬರು ಗಮನಿಸಿ ಮನೆಯವರಿಗೆ ತಿಳಿಸಿದ್ದಾರೆ. ಹಾವೇರಿ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಗ್ರಾಮದಲ್ಲಿ ನೀರವ ಮೌನ.

Address

Haveri
581110

Website

Alerts

Be the first to know and let us send you an email when Live Haveri posts news and promotions. Your email address will not be used for any other purpose, and you can unsubscribe at any time.

Share