Supreeth gunavante.

  • Home
  • Supreeth gunavante.

Supreeth gunavante. It is a natural farming and love of nature

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಳಕೋಡ್ - ಹೊನ್ನಾವರ. ಇತ್ತೀಚೆಗೆ ನಡೆದ ವಿನೂತನ ಕಾರ್ಯಕ್ರಮದ ಬಗ್ಗೆ ಹೇಳಲೇಬೇಕು. ಏಳನೆಯ ತರಗತಿ ವಿದ್ಯಾರ್ಥಿಗ...
22/04/2025

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಳಕೋಡ್ - ಹೊನ್ನಾವರ. ಇತ್ತೀಚೆಗೆ ನಡೆದ ವಿನೂತನ ಕಾರ್ಯಕ್ರಮದ ಬಗ್ಗೆ ಹೇಳಲೇಬೇಕು. ಏಳನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವೇ ವಿಭಿನ್ನ ,ವಿಶಿಷ್ಟ ,ವಿನೂತನ. ಮಕ್ಕಳಿಗೆ ನೆನಪಿನ ಕಾಣಿಕೆಯಾಗಿ ನಾನು ಕಸಿ ಮಾಡಿದ ವಿಶಿಷ್ಟ ತಳಿಯ ಹಲಸಿನ ಗಿಡಗಳನ್ನು ಖರೀದಿಸಿ ಮಕ್ಕಳಿಗೆ ಉಡುಗೊರೆಯಾಗಿ ನೀಡಿ ಪರಿಸರ ಕಾಳಜಿ, ತಾನು ಕಲಿತಂತಹ ಶಾಲೆ, ಶಿಕ್ಷಕ ವೃಂದವನ್ನ ಸದಾ ನೆನಪಿನಲ್ಲಿರುವಂತೆ, ಹಲಸಿನ ಹಣ್ಣನ್ನ ಸವಿಯುವಾಗ ಶಾಲೆಯ ಸವಿ ನೆನಪುಗಳನ್ನ ಸದಾ ಹಸಿರಾಗಿರುವಂತೆ ಮಾಡಿದ ಕಾರ್ಯಕ್ರಮವದು, ಅಷ್ಟೇ ಅಲ್ಲದೆ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಯಾಗಿ ಪರಿಸರ ಕಾಳಜಿ, ಸಹಜ ಕೃಷಿ, ಪ್ರಕೃತಿಯಲ್ಲಿ ನಮ್ಮ ಪಾತ್ರ, ಗಿಡ ನೆಡುವ ಕ್ರಮ ಇವುಗಳ ಬಗ್ಗೆ ಒಂದೆರಡು ಮಾತನಾಡಲು ಅವಕಾಶ ನೀಡಿದ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ನನ್ನ ಶರಣು. ವಿದ್ಯೆ ಒಂದಿದ್ದರೆ ಮನುಷ್ಯನ ಜೀವನ ಪರಿಪೂರ್ಣವಾಗಲ್ಲ, ನಮ್ಮ ನೆಲ- ಜಲದ ಸಂಸ್ಕೃತಿ, ಸಂಸ್ಕಾರ ಮಕ್ಕಳಲ್ಲಿ ವಿದ್ಯೆಯ ಜೊತೆ ಜೊತೆಗೆ ಕಲಿಸುವಂತಹ ಶಾಲೆಯದು. ಸಂಸ್ಕಾರವಿಲ್ಲದೆ ಕಲಿತ ವಿದ್ಯೆಗೆ ಬೆಲೆ ಇಲ್ಲ. ಸಂಸ್ಕೃತಿ, ಸಂಸ್ಕಾರ, ಪರಿಸರ ಕಾಳಜಿ ಇವುಗಳನ್ನ ವಿದ್ಯೆಯಷ್ಟೇ ಪ್ರಾಮುಖ್ಯತೆ ಕೊಟ್ಟು ಮಕ್ಕಳಿಗೆ ಜ್ಞಾನಾರ್ಜನೆ ಮಾಡುವಂತಹ ಇಂಥಹ ಶಾಲೆಗಳು ನೂರಾಗಲಿ, ಸಾವಿರವಾಗಲಿ, ನಾಡು ನಂದನವಾಗಲಿ.

ಅಪ್ಪ......ಎಲ್ಲರಂತಲ್ಲ ನಮ್ಮಪ್ಪ. ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಕೊನೆವರೆಗೂ ರೈತನಾಗೆ ಬಾಳಿ ಬದುಕಿದ್ರು. ಎಲ್ಲಾ ಮಕ್ಕಳಿಗೂ ಅವರವರ ಅಪ್ಪಂದ್ರ...
04/05/2024

ಅಪ್ಪ......
ಎಲ್ಲರಂತಲ್ಲ ನಮ್ಮಪ್ಪ. ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಕೊನೆವರೆಗೂ ರೈತನಾಗೆ ಬಾಳಿ ಬದುಕಿದ್ರು. ಎಲ್ಲಾ ಮಕ್ಕಳಿಗೂ ಅವರವರ ಅಪ್ಪಂದ್ರು ಹೀರೋನೆ, ನನಗೂ ಹಾಗೆನೆ. ನನ್ನಪ್ಪ ಅವರಪ್ಪನ್ನ ದೇವ್ರು ಅಂತಿದ್ರು, ನನಗೂ ನನ್ನಪ್ಪ ದೇವ್ರೆ. ನನ್ನಪ್ಪ ಆಡಂಬರದ ಬದುಕನ್ನು ಯಾವತ್ತೂ ಬಯಸಲಿಲ್ಲ. ಅವರ ಜೀವನ ತುಂಬಾ ಸರಳವಾಗಿತ್ತು. ಆಹಾರ ಪದ್ಧತಿಯಿಂದ ಹಿಡಿದು ಬದುಕಿನ ಶೈಲಿಯವರೆಗೂ. ಏನೇ ಆದ್ರೂ ಆಸ್ಪತ್ರೆಗೆ ಹೋದವರಲ್ಲ. 25 ಅಡಿ ಎತ್ತರದಿಂದ ಕಂದಕಕ್ಕೆ ಬಿದ್ದಾಗಲೂ, ರಸ್ತೆ ದಾಟುವಾಗ ಬೈಕ್ ಗುದ್ದಿ ಪೆಟ್ಟಾದಾಗಲೂ, ಅದೆಷ್ಟೋ ಜ್ವರಗಳು ಬಂದಾಗಲೂ, ಪ್ರತಿ ವರ್ಷ ನೆಗಡಿ ಕೆಮ್ಮುಗಳಾದಾಗಲೂ, ಗ್ಯಾಸ್ಟಿಕ್ ನಿಂದ ಸೊಂಟ ಹಿಡಿದುಕೊಂಡಾಗಲೂ, ಕಣ್ಣಿನ ಪೊರೆಯಿಂದಾಗಿ ಕಣ್ಣು ಮಂಜಾದಾಗಲೂ, ಅತಿ ಉಷ್ಣದಿಂದ ಮೂಗಿನಿಂದ ರಕ್ತ ಸುರಿತಿದ್ರು ಯಾವುದಕ್ಕೂ ಆಸ್ಪತ್ರೆ ಮೆಟ್ಟಿಲು ಹತ್ತಲಿಲ್ಲ. ಮಾತ್ರೆ ನುಂಗಲಿಲ್ಲ. ಇಂಜೆಕ್ಷನ್ ಚುಚ್ಚಿಸಿಕೊಳ್ಳಲಿಲ್ಲ. ಅಪ್ಪ ಅದ್ಯಾವುದಕ್ಕೂ ಹೆದರಿದ್ದನ್ನು ನಾನು ನೋಡೇ ಇಲ್ಲ. ಅಪ್ಪನ ಧೈರ್ಯದ ಜೊತೆ ಹಠ ಸ್ವಾಭಿಮಾನದ ಬಗ್ಗೆ ಹೇಳಬೇಕು. ಸ್ವಾಭಿಮಾನ ಅಂದ್ರೇನೆ ಅಪ್ಪ ಅನ್ನೋ ಹಾಗಿದ್ರು. ರೈತನಾಗಿ ಸರಕಾರದ ಯಾವುದೇ ಯೋಜನೆಗಳಿಗೂ ಕೈ ಚಾಚಿಲ್ಲ ನನ್ನಪ್ಪ. ಬಡ್ಡಿ ಇಲ್ಲದೆ ಸಿಗುವ (ಕೆಲವೊಂದು ಸಲ ಮನ್ನಾ ಆಗುವಂತಹ) ಬೆಳೆ ಸಾಲಕ್ಕಾಗಿ ಯಾವತ್ತೂ ಅರ್ಜಿ ಹಾಕಿಲ್ಲ. ಕಿಸಾನ್ ಸಮ್ಮಾನ್ ಯೋಜನೆ ಆಗಲಿ, ಬೆಳೆ ಪರಿಹಾರ ಆಗಲಿ, ರೈತನಿಗೆ ಸಿಗುವ ಯಾವುದೇ ಸಬ್ಸಿಡಿ ಯೋಜನೆಯಾಗಲಿ, ಅಷ್ಟೇ ಯಾಕೆ ಬಿಪಿಎಲ್ ಕಾರ್ಡು ದಾರರಿಗೆ ಸಿಗುವ ವೃದ್ಧಾಪ್ಯ ವೇತನಕ್ಕೂ ಕೈ ಚಾಚಿಲ್ಲ ನನ್ನಪ್ಪ. ರೈತ ಇನ್ನೊಬ್ಬರ ಹಂಗಲ್ಲಿ ಬದುಕಬಾರದು ಅನ್ನೋ ಸ್ವಾಭಿಮಾನ ಎಷ್ಟಿತ್ತೆಂದರೆ ಬಿಪಿಎಲ್ ಕಾರ್ಡ್ ದಾರ ಆಧಾರ್ ಕಾರ್ಡ್ ನ ಲಿಂಕ್ ಮಾಡುವ ಕಾಯ್ದೆ ಬಂದಾಗ ಸರಕಾರದ ಆಧಾರ ನನಗೆ ಬೇಡ, ನನ್ನ ಜಮೀನೇ ನನಗೆ ಆಧಾರ ನನ್ನ ಮಕ್ಕಳೇ ನನಗೆ ಆಧಾರ ಬೇರೆ ಯಾರ ಆಧಾರವು ನನಗೆ ಬೇಡ ಎಂದು ಆಧಾರ್ ಕಾರ್ಡನ್ನೇ ಮಾಡಿಸಿಕೊಳ್ಳಲಿಲ್ಲ. ಸರ್ಕಾರದ ಯಾವುದೇ ಯೋಜನೆಗಳಿಗೋಸ್ಕರ ಅಲ್ಲದಿದ್ದರೂ ಸರಕಾರದ ಒಂದು ದಾಖಲೆಗೋಸ್ಕರನಾದ್ರು ಆಧಾರ್ ಕಾರ್ಡ್ ಮಾಡಿಸಲು ನಾವು ಮಾಡಿದ ಪ್ರಯತ್ನ ಅಪ್ಪನ ಹಠದ ಮುಂದೆ ವ್ಯರ್ಥವಾಯಿತು ನನ್ನಪ್ಪನಿಗೆ ಸರ್ಕಾರದಿಂದ ಅಥವಾ ಇನ್ನೊಬ್ಬರ ಹತ್ತಿರ ಕೈ ಚಾಚಿ ತೆಗೆದುಕೊಳ್ಳೋದು ಅಂದ್ರೆನೇ ಆಗ್ತಾ ಇರಲಿಲ್ಲ ಯಾಕೆಂದರೆ ಪ್ರತಿ ವರ್ಷ ಜನವರಿಯಿಂದ ಮೇ ವರೆಗೂ ಜಮೀನಿನಲ್ಲಿ ಬೆಳೆಯುವ ಗೇರುಬೀಜ ಮಾರೋದ್ರಿಂದ ಸಿಗೋ ಹತ್ತರಿಂದ ಹನ್ನೆರಡು ಸಾವಿರ ದುಡ್ಡಲ್ಲಿ 6000 ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿರೋ ಅಮ್ಮನ ಬಂಗಾರದ ಸರ ಬಿಡಿಸೋಕಾದರೆ ಇನ್ನುಳಿದ 6000 ಮಕ್ಕಳ ಬಟ್ಟೆ, ಸ್ಕೂಲು, ಮನೆ ಖರ್ಚಿಗೆ ಆಗುತ್ತಿತ್ತು. ಮಳೆಗಾಲದಲ್ಲಿ ಬೆಳೆಯೋ ಅಲ್ಪ ಸ್ವಲ್ಪ ತರಕಾರಿ ಮಾರಿ ಬಂದಿರೋ ದುಡ್ಡು ಸೆಪ್ಟೆಂಬರ್ ಅಕ್ಟೋಬರ್ ಗೆಲ್ಲಾ ಖಾಲಿ ಆಗುತ್ತಿತ್ತು. ಮೇ ನಲ್ಲಿ ಬ್ಯಾಂಕಿಂದ ಬಿಡಿಸಿದ ಬಂಗಾರದ ಸರ ಮತ್ತೆ ಬ್ಯಾಂಕಲ್ಲಿ ಅಡಮಾನ ಇಟ್ಟು 6,000 ತಂದು ನಂಬರ್ ಡಿಸೆಂಬರ್ ವರೆಗೂ ಮನೆ ಖರ್ಚಿಗೆ ಆಗುತ್ತಿತ್ತು. ಆಮೇಲೆ ಅಡಿಕೆ, ಗೇರುಬೀಜ, ಮೇನಲ್ಲಿ ಮತ್ತೆ ಸರ ಬಿಡಿಸುವುದು ಇದು ಪ್ರತಿ ವರ್ಷ ಕಂಟಿನ್ಯೂ ಆಗ್ತಿತ್ತು. ಹಾಗಾಗಿ ಅಪ್ಪನಿಗೆ ದುಡ್ಡಿಗೆ ಕೊರತೆ ಆಗದಿರೋವಷ್ಟು ಅಪ್ಪ ಶ್ರೀಮಂತರಾಗಿದ್ದರು. ಒಂದು ವೇಳೆ ಕೊರತೆ ಆದರೆ ತೆಂಗಿನಕಾಯಿ ಹಾಕ್ದೆ ಇರೋ ಸಾಂಬಾರು, ನಮ್ಮನೇಲೇ ಬೆಳೆಯೋ ಕಾಯಿ ಪಪ್ಪಾಯ ಸಾಂಬಾರು, ಕೆಸುವಿನ ದಂಟಿನ ಸಾಂಬಾರು ವಾರಾನುಗಟ್ಟಲೆ ಮಾಡುವ ಕಲೆ ನಮ್ಮ ಅಮ್ಮನಿಗೆ ಗೊತ್ತಿತ್ತು‌. ಹಲಸಿನ ಹಣ್ಣು, ಬಾಳೆಹಣ್ಣು ಕೆಲವು ಸಲ ಬೆಳಗಿನ ಉಪಹಾರಕ್ಕೆ ಆಗುತ್ತಿತ್ತು. ಹಾಗಾಗಿ ಯಾರತ್ರಾನೂ ಅಪ್ಪ ಕೈ ಚಾಚುತ್ತ ಇರಲಿಲ್ಲಾ. ರೈತನ ಮಗನಾಗಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಿ ಲಕ್ಷ ಸಂಬಳ ತಗೊಂಡ್ರೂ ಅದು ದುಡ್ಡಲ್ಲ ನಿನ್ನ ಜಮೀನಿನಲ್ಲಿ ನೀನು ಬೆಳೆದಿರೋ ಬೆಳೆ ಮಾರಿ ನೂರು ರೂಪಾಯಿ ತಂದ್ರು ಅದು ನಿನ್ನ ದುಡ್ಡು , ಸ್ವಂತದ್ದು. ಅದಕ್ಕೆ ಬೆಲೆ ಜಾಸ್ತಿ ಅನ್ನೋರು. ಎಷ್ಟು ಬರೆದ್ರೂ ಮುಗಿದಿರೋವಷ್ಟು ಅಪ್ಪನ ಆದರ್ಶ ಜೀವನ ಇದೆ. ಅಪ್ಪ ಭೂಮಿ ತಾಯಿಯ ಸೇವೆ ಮಾಡುವ ಆರಂಭದ ದಿನಗಳಲ್ಲಿ ಮಳೆಗಾಲದಲ್ಲಿ ಹರಿಯುವ ಕೆಂಪು ನೀರಿನಲ್ಲಿ ಕುಚಲಕ್ಕಿ ಬೇಯಿಸಿ ಗಂಜಿ ಮಾಡಿ ಊಟ ಮಾಡಿರೋ ಕಥೆಗಳಿವೆ. ರೈತನಾಗಿ ಜಮೀನಿಗೋಸ್ಕರ, ಅಪ್ಪನಾಗಿ ಮಕ್ಕಳಿಗೋಸ್ಕರ, ಗಂಡನಾಗಿ ಹೆಂಡತಿಗೋಸ್ಕರ ತನ್ನ ಜೀವನ ಸವೆಸಿ ಹಠ, ಧೈರ್ಯ, ಸ್ವಾಭಿಮಾನ ನನ್ನಲ್ಲಿ ಹಾಗೆ ಬಿಟ್ಟು ಇವತ್ತಿಗೆ ಸರಿಯಾಗಿ ಒಂದು ತಿಂಗಳು ಅಂದರೆ 04/04/2024 ರಂದು ನಮ್ಮನ್ನೆಲ್ಲ ಬಿಟ್ಟು ಹೋದ್ರು. ಮತ್ತೆ ನನ್ನ ಮಗನಾಗಿ ಹುಟ್ಟಿ ಬಾ ಅಪ್ಪ.......

ತರಕಾರಿಗಳನ್ನು ಬೆಳೆಯುವುದು ನಮ್ಮ ಅಜ್ಜನ ಕಾಲದಿಂದಲೂ ನಡೆದುಕೊಂಡು ಬಂದ ಕಾಯಕ. ಆಗ ರಾಸಾಯನಿಕಗಳನ್ನ ಬಳಸುತ್ತಿರಲಿಲ್ಲ. ರೋಗ, ಕೀಟ ಬಾಧೆಗಳು ವಿರಳ...
04/10/2023

ತರಕಾರಿಗಳನ್ನು ಬೆಳೆಯುವುದು ನಮ್ಮ ಅಜ್ಜನ ಕಾಲದಿಂದಲೂ ನಡೆದುಕೊಂಡು ಬಂದ ಕಾಯಕ. ಆಗ ರಾಸಾಯನಿಕಗಳನ್ನ ಬಳಸುತ್ತಿರಲಿಲ್ಲ. ರೋಗ, ಕೀಟ ಬಾಧೆಗಳು ವಿರಳ. ಈಗ ಪರಿಸ್ಥಿತಿ ಹಾಗಿಲ್ಲ, ರಾಸಾಯನಿಕ ಇಲ್ಲದೆ ತರಕಾರಿಗಳನ್ನು ಬೆಳೆಯೋಕೆ ಆಗಲ್ಲ ಅನ್ನೋ ಸ್ಥಿತಿ ಇದೆ. ಇನ್ನೂ ಪ್ರಾಣಿ, ಪಕ್ಷಿ, ಕೀಟಗಳ ಪಟ್ಟಿ ಮಾಡ್ತಾ ಹೋದ್ರೆ ಮಳೆಗಾಲ ಮುಗಿದು ಬೇಸಿಗೆ ಕಾಲ ಶುರುವಾಗುತ್ತೆ. ಅಂತದ್ರಲ್ಲಿ ರಾಸಾಯನಿಕ ಬಳಸದೆ ಸಾವಯವದಲ್ಲಿ ನಮ್ಮ ಆಹಾರ ನಾವೇ ಬೆಳೆದು ತಿನ್ನುವುದರಲ್ಲಿ ಸಿಗೋ ಖುಷಿನೇ ಬೇರೆ. ಇದು ಈ ವರ್ಷದ ನನ್ನ ರಾಸಾಯನಿಕ ಮುಕ್ತ ಮಳೆಯಾಶ್ರಿತ ತರಕಾರಿ.

28/07/2023
ರಾತ್ರಿ 8:00 ಗಂಟೆ ಸುಮಾರಿಗೆ ಮನೆಯ ಜಗಲಿಯ ಮೇಲೆ ಕೂತಿದ್ದೆ. ಬಣ್ಣದ ಚಂಡೊಂದು ಮೈಯಿಗೆ ತಾಗಿ ಮೂಲೆಯಲ್ಲಿ ಬಿದ್ದಿತ್ತು. ಜೊತೆ ಜೊತೆಗೆ ಹೊರಗೆ ಶಬ...
30/01/2023

ರಾತ್ರಿ 8:00 ಗಂಟೆ ಸುಮಾರಿಗೆ ಮನೆಯ ಜಗಲಿಯ ಮೇಲೆ ಕೂತಿದ್ದೆ. ಬಣ್ಣದ ಚಂಡೊಂದು ಮೈಯಿಗೆ ತಾಗಿ ಮೂಲೆಯಲ್ಲಿ ಬಿದ್ದಿತ್ತು. ಜೊತೆ ಜೊತೆಗೆ ಹೊರಗೆ ಶಬ್ದನೂ ಆಯ್ತು. ಭಯದಿಂದ ಚಂಡನ್ನು ನೋಡಿದ್ರೆ, ನನಗಿಂತ ಭಯದಿಂದ ಕೂತಿತ್ತು ಬಣ್ಣದ ಹಕ್ಕಿ. ಅನಾಯಾಸವಾಗಿ ಕೈಗೆ ಸಿಕ್ತು. ಆಗ ಅರ್ಥ ಆಯ್ತು ಬೇರೆ ಯಾವುದೋ ದೊಡ್ಡ ಪಕ್ಷಿಯ ಬೇಟೆಯಾಗಿತ್ತು ಈ ಹಕ್ಕಿ. ಹೊರಗೆ ಬಿಟ್ಟರೆ ಆಹಾರ ಆಗಿಬಿಡುತ್ತೆ ಅಂತ ಕೋಳಿಗೂಡಿಗೆ ಅಂತ ತಂದಿರೋ ಜಾಲರಿ ಕಟ್ ಮಾಡಿ ಚಿಕ್ಕ ಮನೆ ಮಾಡಿ, ಅಂಗಳದಲ್ಲಿರೋ ಡೇರೆ ಗಿಡದ ಮೇಲೆ ಕೂತಿರೋ ಮಿಡತೆ ತಂದು ನಾನ್ ವೆಜ್ ಊಟ ಹಾಕ್ಸಿ ಒಂದು ರಾತ್ರಿ ಆಶ್ರಯ ಕೊಟ್ಟೆ. ಬೆಳಿಗ್ಗೆ ಒಂದಷ್ಟು ಫೋಟೋಶೂಟ್ ಮಾಡಿ ಪ್ರಕೃತಿ ಮಡಿಲಿಗೆ ಬಿಟ್ಟೆ.ಇಂಥ ಘಟನೆಗಳು ಒಂಥರ ಖುಷಿ ಕೊಡುತ್ತೆ.

18/01/2023

ಹಲಸಿನ ಮರದಡಿಯಲ್ಲಿ ಅನಾನಸ್ ಸಿಪ್ಪೆ ಎಸೆದಿದ್ದೆ. ಒಣಗಿರೋ ಎಲೆ ಅನಾನಸ್ ತಿಂತಾ ಇದ್ಯಾ ಅಂತ ನೋಡಿದ್ರೆ, ಎಲೆ ರೆಕ್ಕೆ ಬಡಿದು ಹಾರೋಗೋದಾ...... ಅರೆ! ಇದೇನಾಶ್ಚರ್ಯ ಅಂತ ಯೋಚಿಸುವಷ್ಟರಲ್ಲಿ ಮತ್ತೆ ಬಂತು ಎಲೆ ಹಾಗಿರೋ ಪಾತರಗಿತ್ತಿ.

ಇದೊಂದು ವಿಶೇಷ ಹಲಸಿನ ಹಣ್ಣು. ಇವತ್ತು 19 ಡಿಸೆಂಬರ್, ಹಲಸಿನ ಸೀಜನ್ ಶುರುವಾಗುವ ನಾಲ್ಕು ತಿಂಗಳ ಮೊದಲೇ ಹಣ್ಣು ತಿಂದಾಯ್ತು. ಮೊನ್ನೆ ಮರದಲ್ಲೇ ಹ...
19/12/2022

ಇದೊಂದು ವಿಶೇಷ ಹಲಸಿನ ಹಣ್ಣು. ಇವತ್ತು 19 ಡಿಸೆಂಬರ್, ಹಲಸಿನ ಸೀಜನ್ ಶುರುವಾಗುವ ನಾಲ್ಕು ತಿಂಗಳ ಮೊದಲೇ ಹಣ್ಣು ತಿಂದಾಯ್ತು. ಮೊನ್ನೆ ಮರದಲ್ಲೇ ಹಣ್ಣಾಯಿತು. ತೆಗೆದಾಗ ತೊಟ್ಟಿಂದ ಸ್ವಲ್ಪನೂ ಗಮ್(ಮೇಣ) ಬರಲಿಲ್ಲ. ತಂದು ರೂಮ್ನಲ್ಲಿ ಇಟ್ಟಾಗ ರೂಮ್ ತುಂಬಾ ಪರಿಮಳ. ಇವತ್ತು ಕಟ್ ಮಾಡಿದ್ವಿ. ಮೇಣ ಒಂಚೂರು ಇಲ್ಲ. ತಿಳಿ ಕಿತ್ತಳೆ ಬಣ್ಣದ ಆಕರ್ಷಕ ದಪ್ಪ ತೊಳೆಗಳು ರುಚಿಯ ಜೊತೆ ಮಧುರ ಪರಿಮಳ. ಹಣ್ಣು ತಿಂತಾ ಇದ್ದೆ ಮನೆಯವರಿಗೆಲ್ಲ ಬೇಕು ಅಂತ ನೆನಪಾದಾಗಲೇ ತಿನ್ನೋದನ್ನ ನಿಲ್ಸಿದ್ದು. ಅಗಸ್ಟ್ ಎಂಡ್ ಗೆಲ್ಲ ಮಿಡಿಯಾಗಿ ಡಿಸೆಂಬರ್ ನಿಂದ ಜೂನ್ ವರೆಗೂ ಹಣ್ಣು ಕೊಡ್ತಾ ಇರುತ್ತೆ ನಮ್ಮ ಹಲಸಿನ ಮರ.

23/03/2022

ಇದು ಸಮಗ್ರ ನೈಸರ್ಗಿಕ ಕೃಷಿ

21/01/2022

ನೀವೂ ಸುಲಭವಾಗಿ ಕಸಿ ಕಟ್ಟಬಹುದು. You can also grafting easily.

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು
01/11/2021

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು

ಇದೊಂದು ಸುದ್ದಿ ಸುಳ್ಳಾಗಲಿ ಅಂತ ಸಾವಿರ ಸಲ ಅದ್ಕೊಂಡೆ......ಇಷ್ಟು ಅವಸರ ಏನಿತ್ತು ಅಪ್ಪು ಸರ್. ಕನ್ನಡ, ಕನ್ನಡ ನಾಡು, ಕನ್ನಡ ಚಿತ್ರರಂಗವನ್ನು ...
29/10/2021

ಇದೊಂದು ಸುದ್ದಿ ಸುಳ್ಳಾಗಲಿ ಅಂತ ಸಾವಿರ ಸಲ ಅದ್ಕೊಂಡೆ......ಇಷ್ಟು ಅವಸರ ಏನಿತ್ತು ಅಪ್ಪು ಸರ್. ಕನ್ನಡ, ಕನ್ನಡ ನಾಡು, ಕನ್ನಡ ಚಿತ್ರರಂಗವನ್ನು ಬಡವಾಗಿಸಿ , ದುಃಖದಲ್ಲಿ ಮುಳುಗಿಸಿ ಹೋಗ್ಬಿಟ್ರಲ್ಲ ಅಪ್ಪು ಸರ್.

26/08/2021

ಇದು ಈ ರೀತಿ ತೆಗೆದ ಬಾವಿ ಮತ್ತು ಬಾವಿಯ ಮಹತ್ವ.

Address


Alerts

Be the first to know and let us send you an email when Supreeth gunavante. posts news and promotions. Your email address will not be used for any other purpose, and you can unsubscribe at any time.

Contact The Business

Send a message to Supreeth gunavante.:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share