22/04/2025
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಳಕೋಡ್ - ಹೊನ್ನಾವರ. ಇತ್ತೀಚೆಗೆ ನಡೆದ ವಿನೂತನ ಕಾರ್ಯಕ್ರಮದ ಬಗ್ಗೆ ಹೇಳಲೇಬೇಕು. ಏಳನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವೇ ವಿಭಿನ್ನ ,ವಿಶಿಷ್ಟ ,ವಿನೂತನ. ಮಕ್ಕಳಿಗೆ ನೆನಪಿನ ಕಾಣಿಕೆಯಾಗಿ ನಾನು ಕಸಿ ಮಾಡಿದ ವಿಶಿಷ್ಟ ತಳಿಯ ಹಲಸಿನ ಗಿಡಗಳನ್ನು ಖರೀದಿಸಿ ಮಕ್ಕಳಿಗೆ ಉಡುಗೊರೆಯಾಗಿ ನೀಡಿ ಪರಿಸರ ಕಾಳಜಿ, ತಾನು ಕಲಿತಂತಹ ಶಾಲೆ, ಶಿಕ್ಷಕ ವೃಂದವನ್ನ ಸದಾ ನೆನಪಿನಲ್ಲಿರುವಂತೆ, ಹಲಸಿನ ಹಣ್ಣನ್ನ ಸವಿಯುವಾಗ ಶಾಲೆಯ ಸವಿ ನೆನಪುಗಳನ್ನ ಸದಾ ಹಸಿರಾಗಿರುವಂತೆ ಮಾಡಿದ ಕಾರ್ಯಕ್ರಮವದು, ಅಷ್ಟೇ ಅಲ್ಲದೆ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಯಾಗಿ ಪರಿಸರ ಕಾಳಜಿ, ಸಹಜ ಕೃಷಿ, ಪ್ರಕೃತಿಯಲ್ಲಿ ನಮ್ಮ ಪಾತ್ರ, ಗಿಡ ನೆಡುವ ಕ್ರಮ ಇವುಗಳ ಬಗ್ಗೆ ಒಂದೆರಡು ಮಾತನಾಡಲು ಅವಕಾಶ ನೀಡಿದ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ನನ್ನ ಶರಣು. ವಿದ್ಯೆ ಒಂದಿದ್ದರೆ ಮನುಷ್ಯನ ಜೀವನ ಪರಿಪೂರ್ಣವಾಗಲ್ಲ, ನಮ್ಮ ನೆಲ- ಜಲದ ಸಂಸ್ಕೃತಿ, ಸಂಸ್ಕಾರ ಮಕ್ಕಳಲ್ಲಿ ವಿದ್ಯೆಯ ಜೊತೆ ಜೊತೆಗೆ ಕಲಿಸುವಂತಹ ಶಾಲೆಯದು. ಸಂಸ್ಕಾರವಿಲ್ಲದೆ ಕಲಿತ ವಿದ್ಯೆಗೆ ಬೆಲೆ ಇಲ್ಲ. ಸಂಸ್ಕೃತಿ, ಸಂಸ್ಕಾರ, ಪರಿಸರ ಕಾಳಜಿ ಇವುಗಳನ್ನ ವಿದ್ಯೆಯಷ್ಟೇ ಪ್ರಾಮುಖ್ಯತೆ ಕೊಟ್ಟು ಮಕ್ಕಳಿಗೆ ಜ್ಞಾನಾರ್ಜನೆ ಮಾಡುವಂತಹ ಇಂಥಹ ಶಾಲೆಗಳು ನೂರಾಗಲಿ, ಸಾವಿರವಾಗಲಿ, ನಾಡು ನಂದನವಾಗಲಿ.