Shamsu yenmoor

  • Home
  • Shamsu yenmoor

Shamsu yenmoor news # articles # information

22/01/2025
07/07/2024
ದಾವಣಗೆರೆಯಲ್ಲಿ ನಡೆದ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಗ್ರಾಮೀಣ ವರದಿಗಾಗಿ ನೀಡುವ ನಾರಾಯಣ ಸ್ವಾಮಿ ಪ್ರಶಸ್ತಿ ...
09/02/2024

ದಾವಣಗೆರೆಯಲ್ಲಿ ನಡೆದ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಗ್ರಾಮೀಣ ವರದಿಗಾಗಿ ನೀಡುವ ನಾರಾಯಣ ಸ್ವಾಮಿ ಪ್ರಶಸ್ತಿ ಸ್ವೀಕರಿಸಿದ ಕ್ಷಣ.

ನಾನು ನಾಲ್ಕು‌ ವರ್ಷಗಳ‌ ಹಿಂದೆ ಎಲ್‌ಜಿ ಕಂಪೆನಿಯ ವಾಷಿಂಗ್ ಮೆಷಿನ್ ಟಿವಿಎಸ್ ಫೈನಾನ್ಸ್ ‌ಮೂಲಕ 8 ತಿಂಗಳ ಇಎಂಐನಲ್ಲಿ ಖರೀದಿ‌ ಮಾಡಿದ್ದೆ. ಎಲ್ಲ ...
22/08/2023

ನಾನು ನಾಲ್ಕು‌ ವರ್ಷಗಳ‌ ಹಿಂದೆ ಎಲ್‌ಜಿ ಕಂಪೆನಿಯ ವಾಷಿಂಗ್ ಮೆಷಿನ್ ಟಿವಿಎಸ್ ಫೈನಾನ್ಸ್ ‌ಮೂಲಕ 8 ತಿಂಗಳ ಇಎಂಐನಲ್ಲಿ ಖರೀದಿ‌ ಮಾಡಿದ್ದೆ. ಎಲ್ಲ ತಿಂಗಳ 2ನೇ ತಾರೀಕಿಗೆ ಇಎಂಐ ಹಣ ಪಾವತಿಯಾಗುತ್ತಿತ್ತು. ಎಂಟೂ ತಿಂಗಳು ಸರಿಯಾಗಿ ಕಂತುಗಳನ್ನು ಪಾವತಿ ಮಾಡಿದೆ ಕೂಡಾ. ಆದರೆ ಇದೀಗ ಸಮಪರ್ಕವಾಗಿ EMI ಪಾವತಿಸಿದ್ದೇ ನನಗೆ ಸಮಸ್ಯೆಯಾಗಿ ಪರಿಣಮಿಸಿದೆ!! ಅದು ಹೇಗೆ ಅಂತೀರಾ?.
ಟಿವಿಎಸ್ ಕಡೆಯಿಂದ personal ಲೋನ್ offer ಬಂದಿದೆ. ಕಳೆದ ಐದು ದಿನಗಳಿಂದ ಪದೇ ಪದೇ ಟಿವಿಎಸ್ ಕಡೆಯಿಂದ ಕಾಲ್ ಬರುತ್ತಿದೆ. ನನಗೆ ಲೋನ್ ಬೇಡ ಅಂದರೂ ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳಿ (ಫ್ರೀ ಕೊಡುವ ಹಾಗೆ) ಅನ್ನುತ್ತಿದ್ದಾರೆ.
"ಪದೇ ಪದೇ ಕಾಲ್ ಮಾಡಿ ಹಿಂಸೆ ಯಾಕೆ ಕೊಡುತ್ತೀರಿ. ನನಗೆ ನಿಮ್ಮ ಲೋನ್‌ನ ಅಗತ್ಯವಿಲ್ಲ. ಇನ್ನು ಮುಂದೆ ಕಾಲ್ ಮಾಡಿದರೆ ಸರಿಯಿರಲ್ಲ" ಎಂದು ಎಚ್ಚರಿಸಿ ಕೂಡಾ ನೋಡಿದೆ. ಆದರೆ ಅದನ್ನು ತಲೆಗೆ ಹಚ್ಚಿಕೊಳ್ಳದ ಕಾಲ್ ಮಾಡಿದಾತ ನಿಮಗೆ ಲೋನ್ ಬೇಡ ಅಂದರೆ ನಮ್ಮ ಕಸ್ಟಮರ್ ಕೇರ್‌ಗೆ ಕಾಲ್ ಮಾಡಿ ಹೇಳಿ ಅಂದ. ಅರೇ ಲೋನ್ ಬೇಕು ಅಂಥ ನಾನು ಅಪ್ಲಿಕೇಶನ್ನೂ ಹಾಕಿಲ್ಲ, ಕಾಲ್ ಮಾಡಿ request ಮಾಡಿಲ್ಲ. ಮತ್ತೇಕೆ ನಾನು ಕಸ್ಟಮರ್ ಕೇರ್‌ಗೆ ಕಾಲ್ ಮಾಡಲಿ ಅಂದೆ. ಅದೇನು ನಮಗೊತ್ತಿಲ್ಲ. ನಿಮಗೆ ನಾಳೆಯೂ "ಲೋನ್ ಬೇಕಾ ಅಂತ ಕೇಳಿ" ಕಾಲ್ ಬರುತ್ತೆ ಅಂದ. ಅಂದರೆ "ನೀವು ನನಗೆ ಲೋನ್ ಬೇಡ ಅಂದರೂ ಕಾಲ್ ಮಾಡುವುದು ನಿಲ್ಲಿಸುವುದಿಲ್ಲ" ಅಂದೆ. ಅದಕ್ಕೆ ಆತ ನಮ್ಮ ಕೆಲಸವೇ ಕಾಲ್ ಮಾಡುವುದು ಅಂದ.!
ಈಗ ಪ್ರಶ್ನೆ‌ ಏನೆಂದರೆ ಇವರು ದಿನನಿತ್ಯ ಕಾಲ್ ಮಾಡುವುದರಿಂದ ನಮಗೆ ಕಿರಿಕಿರಿ ಉಂಟಾಗುವುದು ಒಂದೆಡೆಯಾದರೆ ಮಾನಸಿಕ ನೆಮ್ಮದಿ ನಷ್ಟವಾಗಲಿದೆ. ಯಾವುದೋ ದುರ್ಬಲ ನಿಮಿಷದಲ್ಲಿ ಇವರ ಆಮಿಷಕ್ಕೆ ಬಲಿಯಾಗಿ‌ ಶೇ.15ರ interestನಲ್ಲಿ ಲೋನ್‌ ಪಡೆಯಲು ಮುಂದಾಗಬಹುದು. ಇದರಿಂದ ಲೋನ್ ಮರುಪಾವತಿ ಕಷ್ಟ‌ವಾಗಿ‌ ಜೀವನವೇ ಬೇಡ ಅನ್ನುವ‌ ಮಟ್ಟಕ್ಕೆ ತಲುಪಲೂಬಹುದು. ಇವರ ಆಮಿಷಕ್ಕೆ ಯುವಕರು, ಬಡವರು ಬಲಿಯಾಗುವ ಸಾಧ್ಯತೆ ಇದ್ದು, ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ‌ ಈ ಮೂಲಕ ವಿನಂತಿ.
ಇಂತಹ ಹಲವಾರು ಫೈನಾನ್ಸ್ ಕಂಪೆನಿಗಳು ರಾಜ್ಯಾದ್ಯಂತ ಇದ್ದು, ಅವರ ಆಮಿಷಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ.

I have reached 300 followers! Thank you for your continued support. I could not have done it without each of you. 🙏🤗🎉
26/07/2023

I have reached 300 followers! Thank you for your continued support. I could not have done it without each of you. 🙏🤗🎉

ನೀವೂ ಗಮನಿಸಿರುತ್ತೀರಿ.ಗೆಲ್ತಾರೋ ಬಿಡ್ತಾರೋ ಕಾಂಗ್ರೆಸ್ ಪಕ್ಷ ಯಾವ ವಿಷಯದಲ್ಲೂ ಚುನಾವಣಾ ರಂಗದಲ್ಲಿ ಬಡಿದಾಡುವುದರಲ್ಲಿ ಬಿಜೆಪಿಗಿಂತ ಕಿಂಚಿತ್ತೂ...
07/05/2023

ನೀವೂ ಗಮನಿಸಿರುತ್ತೀರಿ.

ಗೆಲ್ತಾರೋ ಬಿಡ್ತಾರೋ ಕಾಂಗ್ರೆಸ್ ಪಕ್ಷ ಯಾವ ವಿಷಯದಲ್ಲೂ ಚುನಾವಣಾ ರಂಗದಲ್ಲಿ ಬಡಿದಾಡುವುದರಲ್ಲಿ ಬಿಜೆಪಿಗಿಂತ ಕಿಂಚಿತ್ತೂ ಹಿಂದೆಬಿದ್ದಿಲ್ಲ. ಇದು ಹೊಸ ಕಾಂಗ್ರೆಸ್. ಅದು ಆಡುತ್ತಿರುವುದು ಹೊಸ ಬಗೆಯ ಆಟ. ಅದರ ವಾರ್ ರೂಂನಲ್ಲಿ ರಣೋತ್ಸಾಹ. ಗ್ರೌಂಡ್ ಜೀರೋದಲ್ಲಾದರೂ ಸರಿ, ಆನ್ ಲೈನ್ ನಲ್ಲಾದರೂ ಸರಿ, ಅದು ಹಿಂದೆಂದಿಗಿಂತ ಆಕ್ರಮಣಕಾರಿಯಾಗಿ ಎದ್ದುನಿಂತಿದೆ.

ಸ್ಟ್ರಾಟೆರ್ಜಿಗಳನ್ನು ಹೆಣೆಯುವಾಗ, ಅವುಗಳನ್ನು ಕಾರ್ಯರೂಪಕ್ಕೆ ತರುವಾಗ ಪ್ರತಿಬಾರಿಯೂ ಕಾಂಗ್ರೆಸ್ ಸೋಲುತ್ತಿತ್ತು. ನಿರ್ಣಾಯಕ ಗಳಿಗೆಗಳಲ್ಲಿ ಹಿಂದೆ ಬೀಳುತ್ತಿತ್ತು. ಈ ಬಾರಿ ಹಾಗೆ ಆಗಿಲ್ಲ. ಬಿಜೆಪಿಯವರು ಪದೇಪದೇ ಮುಟ್ಟಿ ನೋಡಿಕೊಳ್ಳುವಂಥ ಹೊಡೆತಗಳನ್ನು ಅದು ಕೊಟ್ಟಿದೆ.

ಬಿಜೆಪಿಯ ಚುನಾವಣಾ ರಾಜಕಾರಣವೆಂದರೆ ಮುಖ್ಯವಾಗಿ ಕಾಣಿಸೋದು ಅಗ್ರೆಷನ್. ಅದಕ್ಕೆ ಸಂಘ ಪರಿವಾರದ ಬೆಂಬಲ ಇರುವುದರಿಂದ ಏನೇ ತಂತ್ರ ಹೂಡಿದರೂ ಅದನ್ನು ಎಕ್ಸಿಕ್ಯೂಟ್ ಮಾಡುವುದು ನೀರು ಕುಡಿದಷ್ಟು ಸಲೀಸು. ಭಜರಂಗದಳ ನಿಷೇಧಿಸುವ ಮಾತು ಬಂದ ತಕ್ಷಣ ಇಡೀ ರಾಜ್ಯದಲ್ಲಿ ಹನುಮಾನ ಚಾಲೀಸ ಪಠಣ ಶುರು ಮಾಡಿಸಿತು ಬಿಜೆಪಿ. ಇದು ಒಂದು ಉದಾಹರಣೆಯಷ್ಟೆ. ಕಾಂಗ್ರೆಸ್ ಗೆ ಇಂಥ ಪರಿವಾರದ ಬೆಂಬಲ ಇಲ್ಲ. ಹಾಗಿದ್ದರೂ ಈ ಬಾರಿ ಅದು ಹಿಂದೆ ಬಿದ್ದಿಲ್ಲ.

ಬಹಳ ಮುಖ್ಯವಾಗಿ ಕಾಂಗ್ರೆಸ್ ಮುಖಂಡರ ಆತ್ಮವಿಶ್ವಾಸದ ಮಾತುಗಳು, ಅವರ ಬಾಡಿ ಲಾಂಗ್ವೇಜ್ ಗಮನಿಸಿ. ಚುನಾವಣೆ ಘೋಷಣೆಗೆ ಮುನ್ನಾ ದಿನಗಳಿಂದ ಹಿಡಿದು ಇಂದಿನವರೆಗೆ ಅವರ ವಿಶ್ವಾಸ ಅಡಗಿಲ್ಲ. ಎದುರಾಳಿಗಳನ್ನು ನಡುಗಿಸೋದು ಇಂಥ ಆತ್ಮವಿಶ್ವಾಸವೇ ಅಲ್ಲವೇ? ನೀವು ಯಡಿಯೂರಪ್ಪ, ಬೊಮ್ಮಾಯಿ ಥರದ ಲೀಡರುಗಳ ಇತ್ತೀಚಿನ ದಿನಗಳ ಮುಖಭಾವ ಗಮನಿಸಿ, ಸಿದ್ಧರಾಮಯ್ಯ-ಡಿ.ಕೆ.ಶಿವಕುಮಾರ್ ಅವರ ವಿಶ್ವಾಸ ಬಿಜೆಪಿ ನಾಯಕರಲ್ಲಿ ಕಾಣುತ್ತಲೇ ಇಲ್ಲ.

ಬಹಳ ಮುಖ್ಯ ಅಂಶವೆಂದರೆ ಕಾಂಗ್ರೆಸ್ ಈ‌ ಬಾರಿ ತನ್ನ ಮಡಿವಂತಿಕೆಯಿಂದ ಹೊರಬಂದು ಏಟಿಗೆ ಎದುರೇಟು ಕೊಡುತ್ತ ಬಂದಿದ್ದು. ಧರ್ಮ, ಜಾತಿಯಂಥ ವಿಷಯ ಬಂದಾಗ ಕಾಂಗ್ರೆಸ್ ಹಿಂದೆಲ್ಲ ಡಿಫೆನ್ಸ್ ಮೋಡ್ ಗೆ ಹೋಗಿಬಿಡುತ್ತಿತ್ತು. ಈ ಬಾರಿ ಹಾಗೆ ಆಗಿಲ್ಲ. ಕಾಂಗ್ರೆಸ್ ನ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳ ಭಾಷೆ ಗಮನಿಸಿ, ಅಷ್ಟು ಹರಿತವಾದ ಭಾಷೆ ಹಿಂದೆಂದೂ ಕಂಡಿರಲಿಲ್ಲ. ಸಿದ್ಧು-ಡೀಕೆ ಟೀಂ ಚುನಾವಣಾ ಕಣದಲ್ಲಿ ತೋರುತ್ತಿರುವ ಆಕ್ರಮಣಕಾರಿ ಭಾಷೆ ಕಾಂಗ್ರೆಸ್ ನ ಆನ್ ಲೈನ್ ಮಾಧ್ಯಮಗಳಲ್ಲೂ ಕಾಣಿಸುತ್ತಿದೆ.

ರ‌್ಯಾಪ್ ಸಿಂಗರ್ ಚಂದನ್ ಶೆಟ್ಟಿ ಕಡೆಯಿಂದ ಬಿಜೆಪಿ ಒಂದು ಹಾಡು ಮಾಡಿಸಿದ ತಕ್ಷಣ ಅದೇ ಧಾಟಿಯ ಬಿಜೆಪಿಯನ್ನು ಜರಿಯುವ ಹಾಡು ರೆಡಿ ಮಾಡಿಬಿಟ್ಟಿತು ಕಾಂಗ್ರೆಸ್ ಪ್ರಚಾರ ತಂಡ. ಒರಿಜಿನಲ್ ಹಾಡಿಗಿಂದ ಅದು ಜನಪ್ರಿಯವಾಗಿಬಿಟ್ಟಿತು. ಬಳ್ಳಾರಿಯಲ್ಲಿ ಬಿಜೆಪಿ ಪ್ರಚಾರಕರು ಬಿಜೆಪಿಯನ್ನು ಬೈಯುವ ಹಾಡನ್ನೇ ಪ್ರಚಾರ ಮಾಡಿ ನಗೆಪಾಟಿಲಿಗೆ ಈಡಾದರು.

ಜಾಹೀರಾತುಗಳು, ಪ್ರಚಾರದ ಹಾಡುಗಳು, ಪೋಸ್ಟರ್ ಗಳು, ಮೀಮ್ ಗಳು ಎಲ್ಲದರಲ್ಲೂ ಕಾಂಗ್ರೆಸ್ ತಂಡ ಸಖತ್ ಕ್ರಿಯೇಟಿವಿಟಿಯನ್ನು ತಂದಿತು. ಪೇಸಿಎಂ ಪೋಸ್ಟರ್ ಇಡೀ ದೇಶದ ಗಮನ ಸೆಳೆಯಿತು. ಇಂಥ ಧೈರ್ಯ ಹಿಂದೆ ಪ್ರದರ್ಶಿಸಿದ ಉದಾಹರಣೆ ಇಲ್ಲ. 40% ಸರ್ಕಾರ ಎಂಬುದು ಈ ಕಾಲದ ಜನಪ್ರಿಯ ನುಡಿಗಟ್ಟೇ ಆಗಿಹೋಯಿತು. ಅದು ಜನಗಳ ಮನಸಿನಲ್ಲಿ ಆಳವಾಗಿ ಕೂರಿಸಲು ಕಾಂಗ್ರೆಸ್ ಸಫಲವಾಯಿತು. ಹಳ್ಳಿಹಳ್ಳಿಯ ಜನರೂ 40% ಬಗ್ಗೆ ಮಾತಾಡುವಂತೆ ಆಯಿತು.

ಸೋನಿಯಾ, ರಾಹುಲ್, ಪ್ರಿಯಾಂಕ ಎಲ್ಲರೂ ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಬಂದರೂ ಅವರೆಲ್ಲ ಹೆಚ್ಚು ಮಾತಾಡಿದ್ದು ಸ್ಥಳೀಯ ವಿಷಯಗಳ ಕುರಿತೇ. ರಾಷ್ಟ್ರೀಯ ಮಹತ್ವದ ವಿಷಯಗಳು ಇದ್ದರೂ ಅವರುಗಳು ಆ ಕುರಿತು ಹೆಚ್ಚು ಮಾತನಾಡಲಿಲ್ಲ. ರಾಹುಲ್ ಗಾಂಧಿ ನಂದಿನಿ ಅಂಗಡಿಗೆ ಹೋಗಿದ್ದು ಸ್ಮಾರ್ಟ್ ತಂತ್ರ.

ಕಾಂಗ್ರೆಸ್ ಈ ಬಾರಿ ನೀಡಿದ ಐದು ಗ್ಯಾರೆಂಟಿಗಳು ನಿಸ್ಸಂಶಯವಾಗಿ ಮಾಸ್ಟರ್ ಸ್ಟ್ರೋಕ್. ಈ ಕ್ಷಣದವರೆಗೆ ಬಿಜೆಪಿಯಲ್ಲಿ ಇದಕ್ಕೆ ಸರಿಯಾದ ಕೌಂಟರ್ ಇಲ್ಲವೇ ಇಲ್ಲ. ಬಿಜೆಪಿಯ ಪ್ರಣಾಳಿಕೆ ಈ ಐದು ಗ್ಯಾರೆಂಟಿಗಳ ಎದುರು ಸಪ್ಪೆಯಾಗಿಹೋಯಿತು. ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಕಾಂಗ್ರೆಸ್ ಒಂದೊಂದೇ ಗ್ಯಾರೆಂಟಿಗಳನ್ನು ಘೋಷಿಸಿ, ಅಚ್ಚುಕಟ್ಟಾಗಿ ಪ್ರಚಾರ ಮಾಡಿತು.

ಟಿಕೆಟ್ ಹಂಚಿಕೆ ವಿಷಯದಲ್ಲೂ ಕಾಂಗ್ರೆಸ್ ಎಷ್ಟೇ ಒಳಗುದಿ ಇದ್ದರೂ ಅದು ಹೆಚ್ಚು ಕಾಣದಂತೆ ನೋಡಿಕೊಂಡಿತು. ಟಿಕೆಟ್ ಹಂಚಿಕೆಯಲ್ಲಿ ಸಿದ್ಧು-ಡಿಕೆ ಬಣಗಳ ಮೇಲಾಟ ನಡೆದೇ ಇಲ್ಲವೆಂಬಂತೆ ತೋರಿಸಿಕೊಂಡಿತು. ಸಿದ್ಧಾಂತ, ಇತ್ಯಾದಿ ನೋಡದೇ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಕರೆತಂದು ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಮರ್ಮಾಘಾತ ಮಾಡಿತು. ಸಿಟಿ ರವಿಯನ್ನು ಸೋಲಿಸುವ ಶಕ್ತಿಯಿರುವ ಅವನ ಶಿಷ್ಯನನ್ನೇ ತಂದು ಕಣಕ್ಕೆ ಇಳಿಸಿದ್ದು ಕಾಂಗ್ರೆಸ್ ಮಡಿವಂತಿಕೆ ಬಿಟ್ಟಿರುವುದಕ್ಕೆ ಸ್ಪಷ್ಟ ಉದಾಹರಣೆ. ಕೆಲವೊಂದು ಬಾರಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಾಗುತ್ತದೆ.

ಕಾಂಗ್ರೆಸ್ ಈ ಬಾರಿ ಜೆಡಿಎಸ್ ಮೇಲೆ ದಾಳಿ ಮಾಡುವುದನ್ನು ಕಡಿಮೆ ಮಾಡಿದೆ. ಇದೂ ಕೂಡ ಜಾಣತನದ ನೀತಿ. ಹಿಂದೆಲ್ಲ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವಿನ ಜಟಾಪಟಿಯೇ ಹೆಚ್ಚು ಸುದ್ದಿಯಾಗುತ್ತಿತ್ತು. ಈ ಬಾರಿ ಹಾಗೆ ಆಗುತ್ತಿಲ್ಲ. ಬೇರೆಯವರ ವಿಷಯ ಹಾಗಿರಲಿ, ಜೆಡಿಎಸ್ ಅನ್ನು ನಖಶಿಖಾಂತ ದ್ವೇಷಿಸುವ ಸಿದ್ಧರಾಮಯ್ಯ ಅವರೇ ಜೆಡಿಎಸ್ ಬಗ್ಗೆ, ನಾಯಕರ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.

ನರೇಂದ್ರ ಮೋದಿ ಯಾವ ರಾಜ್ಯದಲ್ಲೂ ಮಾಡದಷ್ಟು ಪ್ರಚಾರ ಕರ್ನಾಟಕದಲ್ಲಿ ಮಾಡಿದರು. ಬೆಂಗಳೂರಿನ ಬೀದಿಬೀದಿ ಸುತ್ತಿದ್ದರು. ಅಮಿತ್ ಶಾ ಕರ್ನಾಟಕ ಬಿಟ್ಟು ಹೋಗಲೇ ಇಲ್ಲ. ಕನ್ನಡ ನ್ಯೂಸ್ ಚಾನಲ್ ಗಳಿಗೆ ಅಮಿತ್ ಶಾ ಹಿಂದಿಯಲ್ಲಿ ಸಂದರ್ಶನ ನೀಡುವಷ್ಟರ ಮಟ್ಟಿಗೆ ಬಿಜೆಪಿ ಹೈಕಮಾಂಡ್ ತಲುಪಿನಿಂತಿತು. ಇದಕ್ಕೆ ಕಾರಣ ಕಾಂಗ್ರೆಸ್ ಆಕ್ರಮಣಕಾರಿ ಹೋರಾಟ.

ಹಾಗಂತ ಕಾಂಗ್ರೆಸ್ ಈ ಚುನಾವಣೆ ಪ್ರಚಾರದಲ್ಲಿ ತಪ್ಪು ಮಾಡಲಿಲ್ಲವೆಂದೇನಲ್ಲ. ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ವಿಷಸರ್ಪದ ಹೇಳಿಕೆ ಬೇಕಾಗಿರಲಿಲ್ಲ. ಪ್ರಣಾಳಿಕೆಯಲ್ಲಿ ಭಜರಂಗದಳದ ಹೆಸರು ತರಬೇಕಾಗಿರಲಿಲ್ಲ. ಇಂಥವು ಬಿಜೆಪಿಗೆ ಕೊಂಚ ಉಸಿರಾಡಲು ಅವಕಾಶ ನೀಡಿದ್ದು ಸುಳ್ಳಲ್ಲ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೂ ಅದು ತನ್ನನ್ನು ತಾನು ಹಳಿದುಕೊಳ್ಳಬೇಕಾಗಿಲ್ಲ. ಯಾಕೆಂದರೆ ಅದು ಒಂದು ತಂಡವಾಗಿ ಏನೇನು ಮಾಡಬೇಕಿತ್ತೋ ಎಲ್ಲವನ್ನೂ ಮಾಡಿದೆ. ಚುನಾವಣಾ ಪಂದ್ಯವನ್ನು ಕೊನೆಯ ಓವರ್ ವರೆಗೆ ತಂದು ನಿಲ್ಲಿಸಿದೆ. ಇನ್ನೂ ಮೂರು ದಿನಗಳ ಹೋರಾಟ ಬಾಕಿ ಇದೆ. ಏನೇನಾಗುತ್ತೋ ಕಾದುನೋಡೋಣ.

ಕೊನೆಯದಾಗಿ ಕಾಂಗ್ರೆಸ್ ಇಂದು ಬಿಡುಗಡೆ ಮಾಡುತ್ತಿರುವ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವಿನ ಸಂವಾದದ ವಿಡಿಯೋ ಬಗ್ಗೆ ಏನು ಹೇಳೋದು? ಇಂಥ ಅದ್ಭುತ ಐಡಿಯಾ ಅವರಿಗೆ ಹೇಗೆ ಹೊಳೆಯಿತು? ಹೇಳಿದೆನಲ್ಲ, ಇದು ಹೊಸ ಕಾಂಗ್ರೆಸ್!

ನಿಮಗೇನನ್ನಿಸುತ್ತಿದೆ, ಕಮೆಂಟ್ ಮಾಡಿ ತಿಳಿಸಿ.

-ದಿನೇಶ್ ಕುಮಾರ್ ಎಸ್.ಸಿ.

Address


Telephone

9008927712

Website

Alerts

Be the first to know and let us send you an email when Shamsu yenmoor posts news and promotions. Your email address will not be used for any other purpose, and you can unsubscribe at any time.

Contact The Business

Send a message to Shamsu yenmoor:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share