JBTV News24x7

JBTV News24x7 Contact information, map and directions, contact form, opening hours, services, ratings, photos, videos and announcements from JBTV News24x7, News & Media Website, Ward No. 5, Hanchinal, Mudhol.

ನಿಮ್ಮ ಮೆಚ್ಚಿನ ಚಾನಲ್ “JB TV NEWS24x7” ಗೆ ಹೃತ್ಪೂರ್ವಕ ಸ್ವಾಗತ. ಈ ಚಾನಲ್ ನಿಮ್ಮ ನಡುವೆ ಇರಲು ಇಷ್ಟಪಡುತ್ತದೆ. ರಾಜಕೀಯ ಸೇರಿದಂತೆ ದೇಶದ ದೊಡ್ಡ ಸಮಸ್ಯೆಗಳನ್ನು ಪ್ರಶ್ನಿಸುವುದೇ ನಮ್ಮ ಅಸ್ಮಿತೆ. ನಾವು ದೇಶದ ಮೂಲೆ ಮೂಲೆಗೆ ಜನರ ಧ್ವನಿಯನ್ನು ಕೊಂಡೊಯ್ದಿದ್ದೇವೆ, ಅದೇ ರೀತಿ ನೀವು “JB TV NEWS24x7” ಗೆ ಪ್ರೀತಿಯನ್ನು ನೀಡುತ್ತಿದ್ದೀರಿ. ನಾವೂ ನಿರ್ಭಯವಾಗಿ ಮಾತನಾಡುವುದನ್ನು ಮುಂದುವರಿಸುತ್ತೇವೆ.

• Email: [email protected]
• Phone: +91-9845753564

25/09/2025

ಬೆಂಗಳೂರಿನ ಅವಿನ್ಯೂ ರಸ್ತೆಯ ಮಾಯ ಸಿಲ್ಕ್ ಸ್ಯಾರೀಸ್ ಅಂಗಡಿಯ ಮಾಲಿಕ ಬಾಬುಲಾಲ್ ಎಂಬಾತ ಮಹಿಳೆ ಒಬ್ಬಳು ಸೀರೆ ಕದ್ದ ವಿಚಾರವಾಗಿ ಮಹಿಳೆಗೆ ಮನಬಂದಂತೆ ಹಲ್ಲೆ ಮಾಡುತ್ತಿರುವುದು ಈತನ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು # #ಮಹಿಳಾ_ಆಯೋಗ # ಮಹಿಳಾ ಪೊಲೀಸ್ ಠಾಣೆ ಗ

24/09/2025

ನಕಲಿ ವೈದ್ಯರ ಅಟ್ಟಹಾಸ ಕಡಿವಾಣ ಯಾವಾಗ? #ಬನಹಟ್ಟಿ.

24/09/2025

ವರದಿ :-ರಾಯಬಾಗ
ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸವಸುದ್ದಿ ಗ್ರಾಮದಲ್ಲಿ ಪ್ರತಿಭಟನೆಯನ್ನು ಮಾಡಿದ್ದರು ರಾಯಬಾಗ ದಿಂದ ಗೋಕಾಕ್ಕಕ್ಕೆ ಹೋಗುವ ಬಸುಗಳು ವ್ಹಾಯಾ ಸೋ ಸುದ್ದಿಯಿಂದ ಹೋಗುವ ಕುರಿತು ಪ್ರತಿಭಟನೆ ಮಾಡಿದ್ದರು

ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಬಸ್ಸಿನ ತೊಂದರೆ ಯಾಗುತ್ತಿದ್ದು ಪ್ರಸ್ತುತ ರಾಯಬಾಗ್ ದಿಂದ ಗೋಕಾಕಕ್ಕೆ ಹೋಗುವ ಬಸ್ಸುಗಳು ಕಟಕಬಾವಿ ಕ್ರಾಸ್ ಇಂದ ಹೋಗುತ್ತವೆ ಸವಸುದ್ದಿ ಗ್ರಾಮದಿಂದ ಸದರಿ ಕ್ರಾಸ್ ಕೇವಲ 3 ಕಿಲೋಮೀಟರ್ ಮಾತ್ರ ಇರುತ್ತದೆ ಸವಸುದ್ದಿ ಗ್ರಾಮದಿಂದ ಸುತ್ತಮುತ್ತಲಿನ ಗ್ರಾಮಗಳಾದ ಇಟ್ನಾಳ ಖಣದಾಳ ಗ್ರಾಮಸ್ಥರು ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಸೇವೆ ಪಡೆಯಲಿಚ್ಚಿಸುವ ರೋಗಿಗಳು ಗೋಕಾಕ್ ದಿನಾಲು ಹೋಗುತ್ತಾರೆ ಕಟಕಬಾವಿ ಕ್ರಾಸನಲ್ಲಿ ಕಯಬೇಕಾದ ಪರಿಸ್ಥಿತಿ ಇದೆ ಕಾರಣ ಇದರಿಂದಾಗಿ ತೀವ್ರ ತೊಂದರೆಯಾಗುತ್ತಿದ್ದು ಆದ್ದರಿಂದ ಗೋಕಾಕ್ ಹೋಗುವ ಬಸ್ಸುಗಳು ಸವಸುದ್ದಿಗೆ ಬಂದು ಹೋದರೆ ಇಟ್ನಾಳ ಖಣದಾಳ ಹಾಗೂ ಸವಸುದ್ದಿಯ ಎಲ್ಲಾ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ರಾಯಬಾಗ್ ದಿಂದ ಸವಸುದ್ದಿ ಇಟ್ನಾಳ್ ಖಣದಾಳ ಮಾರ್ಗವಾಗಿ ಹಾರೂಗೇರಿಗೆ ಹೋಗುವ ಬಸ್ಸಿನ ಸಮಯದ ಕೊರತೆ ಇದೆ ಅದನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮತ್ತು ಸವಸುದ್ದಿ ಯುವ ಸಮಾಜ ಸೇವಕರು ಮಾನ್ಯ ರಾಯಬಾಗ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಿದರು

ಈ ಸಮಯದಲ್ಲಿ ಸವಸುದ್ದಿ ಯುವ ಸಮಾಜ ಸೇವಕರು ಶಿವಾನಂದ್ ಹಾದಿಮನಿ ಸಂತೋಷ್ ಅಂಕಲಿ ಮಂಜು ಪೂಜಾರಿ ಕಿರಣ್ ಅಂಕಲಿ ಸದಾಶಿವ್ ದುಂಡಗಿ ದರಿಯಪ್ಪ ಮುತ್ನಳ ಹಾಗೂ ಹನುಮಂತ್ ಗೋಪಾಲ್ ಅಜಿತ್ ಕೊರಗಾವಿ ಸತೀಶ್ ಬೆಳಕೂಡ ಆನಂದ್ ಸಾಗರ್ ಬೀರಪ್ಪ ಹನುಮಂತ್ ಸುನಿಲ್ ಪ್ರದೀಪ್ ಹಾಗೂ ಕಾಳಿಕಾ ಗಾಯತ್ರಿ ಸುಪ್ರೀತಾ ಸಾಕ್ಷಿ ಹೇಮಾ ರಾಜೇಶ್ವರಿ ಜಯಶ್ರೀ ಹಾಗೂ ಇನ್ನೂ ಅನೇಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

ವರದಿಗಾರರು :-ಮಂಜುನಾಥ ಮಾಂಗ (ರಾಯಬಾಗ )

22/09/2025

ಯಾರ್ ನೋಡ್ರಿ ಮೂಡಲಗಿಯವರು ಸಂಗನಕೇರಿ ಹತ್ತಿರ ಆಗಿದಿಯಂತೆ

20/09/2025

*ವರದಿ:- ರಾಯಬಾಗ

ಶ್ರೀ ಮಹಾಲಕ್ಷ್ಮಿ ಹಾಗೂ ಕೊರವಂಜಿ ದೇವಿ ದೇವಸ್ಥಾನ ಖಣದಾಳ* ಆವರಣದಲ್ಲಿ *ಕರ್ನಾಟಕ ಆರೋಗ್ಯ ಧಾಮ ಘಟಪ್ರಭಾ* ಹಾಗೂ ಗೋಕಾಕ್ ರಕ್ತ ನಿಧಿ ಗೋಕಾಕ್. ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸನೆ ಹಾಗೂ ಸ್ವಯಂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಹಾಗೂ ಕೊರವಂಜಿ ದೇವಸ್ಥಾನದ ಧರ್ಮಾಧಿಕಾರಿಗಳಾದ *ರಾಮಣ್ಣ ಮಹಾರಾಜರ* ಅಮೃತ ಹಸ್ತದಿಂದ ಜ್ಯೋತಿ ಬೆಳಗಿಸುವುದರ ಮೂಲಕ ಶಿಬಿರವನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಆರೋಗ್ಯಧಾಮ ಘಟಪ್ರಭಾ ವೈದ್ಯಕೀಯ ತಂಡವು ಭಾಗವಹಿಸಿತ್ತು *ವೈದ್ಯರಾದ ಡಾ// ಮನೋಜ್ ಕೆ ವೈದ್ಯ, ಮತ್ತು ಡಾಕ್ಟರ್ ಪ್ರೀತಿ ಕೆ ಮೋಹನ್, ಹಾಗೂ ಡಾ//ರೋಹಿತ್ ಜಿ ವೈದ್ಯ,* ಹಾಗೂ ಗೋಕಾಕ್ ರಕ್ತ ನಿಧಿ ತಂಡ ಆಗಮಿಸಿ ಗ್ರಾಮದ ಗ್ರಾಮಸ್ಥರ ಹಾಗೂ ಭಕ್ತರ ಆರೋಗ್ಯ ತಪಾಸನೆ ಮಾಡಿದರು ಹಲವಾರು ಯುವಕರು ರಕ್ತದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ರಾಮನ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು ಮುಖ್ಯ ಅತಿಥಿಗಳಾದ ಸುರೇಶ್ ಐಹೊಳೆ, ಅಶೋಕ್ ಬಾಗಿ, ಅತುಲ್ ಶಿಂದೆ,ಲಕ್ಷ್ಮಣ್ ಹುಂಚಾಳ.ರಮೇಶ್ ಸಣ್ಣಕಿ.ಮಹೇಶ ಪತಾರ್.ರವಿ ಚಿಂಚಲಿ ಶ್ರೀಶೈಲ್ ಮಾಂಗ್, ಅಮರ್ ಹೊಸಟ್ಟಿ, ಇನ್ನಿತರರು ಹಾಜರಾಗಿ
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿಗಾರರು :-ಮಂಜುನಾಥ ಮಾಂಗ(ರಾಯಬಾಗ)

20/09/2025

ಹೊಸ ಹೆಲಿಕಾಪ್ಟರ್‌ 30 ಕೋಟಿ ಮೌಲ್ಯದ ಹೆಲಿಕಾಪ್ಟರ್‌ ಖರೀದಿಸಿದ ಮಾನ್ಯ ಲೋಕೋಪಯೋಗಿ ಇಲಾಖೆಯ ಜನಪ್ರಿಯ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿಯವರು.

20/09/2025

ವರದಿ :- ರಾಯಬಾಗ
ಫೈಲ್ ನೇಮ್ :-
ನ್ಯಾಯಮೂರ್ತಿ
ನಾಗಮೋಹನದಾಸ ರವರ ವರದಿ ಆಧಾರದ ಮೇಲೆ 63 ಜಾತಿಗಾಗಿ 5% ಒಳಮಿಸಲಾತಿ ನೀಡಿದ್ದು. ಇದರಿಂದ ಭೋವಿ (ವಡ್ಡರ) ಬಂಜಾರ, ಕೋರಮ, ಕೊರಚ ಒಟ್ಟು 63 ಜಾತಿಗಳನ್ನು ಸ್ಪರ್ಶ ಜಾತಿಯಿಂದ ಗುರುತಿಸಿದ್ದು ಅದನ್ನು ಅಸ್ಪರ್ಶ ಜಾತಿಗೆ ಸೇರಿಸಿ ಪ್ರತೇಕ ಮೀಸಲಾತಿ ನೀಡಬೇಕೆದು ಅಖಿಲ ಕರ್ನಾಟಕ ಬೋವಿ ವಡ್ಡರ ಯುವ ವೇದಿಕೆ (ಕ್ರಾಂತಿ).ರಿ. ಹಾಗೂ ರಾಯಬಾಗ್ ತಾಲೂಕ ಬೋವಿ ವಡ್ಡರ್ ಸಮಾಜದಿಂದ ಒತ್ತಾಯಿಸುತ್ತಿದ್ದೇವೆ

ಸಚಿವ ಸಂಪುಟದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕರ್ನಾಟಕ ರಾಜ್ಯ ಸರ್ಕಾರದಿಂದ ದಿನಾಂಕ 19 8 2025ರಂದು ಸಚಿವ ಸಂಪುಟದಲ್ಲಿ ಒಳ್ಳೆ ಮೀಸಲಾತಿಯನ್ನು ಜಾರಿ ಮಾಡಲಾಯಿತು . ಜಾರಿ ಮಾಡಿ ಎಡಗೈ 6% ಬಲಗೈ 6% ಸ್ಪರ್ಶ ಸಮುದಾಯಕ್ಕೆ 5% ಮೀಸಲಾತಿಯನ್ನು ನೀಡಿದ್ದು ಇದರಲ್ಲಿ ನಾಗಮೋಹನದಾಸ ವರದಿಯನ್ನು ಪರಿಶೀಲಿಸಿದಾಗ ಅದರಲ್ಲಿ ಭೋವಿ ವಡ್ಡರ ಸಮಾಜ ತೀರಾ ಹಿಂದುಳಿದಿದೆ ಬೇರೆ ಸಮುದಾಯದೊಂದಿಗೆ ಶೈಕ್ಷಣಿಕ ಆರ್ಥಿಕ ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದ್ದು ಇನ್ನಿತರ ಜಾತಿಗಳೊಂದಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗುವುದಿಲ್ಲ ಆದಕಾರಣ ಮೀಸಲಾತಿಯನ್ನು ಶೇಕಡಾ 5% ರಲಿ ಬರುವ ಸ್ಪರ್ಶ ಸಮುದಾಯಗಳಲ್ಲಿ ಬೋವಿ ವಡ್ಡರ್ ಜಾತಿಯನ್ನು ಬೇರ್ಪಡಿಸಿ ಪ್ರತ್ಯೇಕ 2% ಮೀಸಲಾತಿಯನ್ನು ಜಾರಿ ಮಾಡಬೇಕೆಂದುತಾಲೂಕು ದಂಡಾಧಿಕಾರಿಗಳಿಗೆ ಆಗ್ರಹಿಸಿದ್ದರು ಮತ್ತು ಭೋವಿ ವಡ್ಡರ ಯುವ ವೇದಿಕೆ ರಾಜು ವಡ್ಡರ ಹಾಗೂ ಕುಮಾರ ವಡ್ಡರ ಷಡಶರಿ ವಡ್ಡರ ರಾಮು ವಡ್ಡರ ಆನಂದ ವಡ್ಡರ ಲಕ್ಷ್ಮಮನ ವಡ್ಡರ ವೇಕಪ್ಪ ನಂದಗಾವ ಮಾದೇವ ರಡರಟ್ಟಿ ಹಾಗೂ ಇನಿತರರು ಉಪಸ್ಥಿತರಿದ್ದರು

ಬೈಟ:- ರಾಜು ವಡ್ಡರ
ವರದಿಗಾರರು:- ಮಂಜುನಾಥ ಮಾಂಗ
ಚಾನಲ :-JB TV news 24×7

19/09/2025

ಮಾಲಿಂಗೇಶ್ವರ ಜಾತ್ರಾ

19/09/2025

*_ಮುದೋಳ ಕ್ಷೇತ್ರದ ಜನಪ್ರಿಯ ಶಾಸಕರು ಅಬಕಾರಿ ಸಚಿವರು ಕರ್ನಾಟಕ ಸರ್ಕಾರ ಬಾಗಲಕೋಟೆ ಜಿಲ್ಲೆ ಉಸ್ತುವಾರಿ ಸಚಿವರಾದ ನನ್ನ ಪ್ರೀತಿಯ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪೂರ್ ಹುಟ್ಟುಹಬ್ಬದ ಶುಭಾಶಯಗಳು ಸರ್

17/09/2025

*“ ಬೀದರ ಜಿಲ್ಲಾ ಪೊಲೀಸ್, ಚಿಂತಾಕಿ ಪೊಲೀಸರಿಂದ ಹೊಲದಲ್ಲಿ ಬೆಳೆದ 8 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಗಿಡ ವಶ ಆರೋಪಿತನ ಬಂಧನ”*

ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನಂದತೆ, ಜಿಲ್ಲೆಯ ಚಿಂತಾಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕರಂಜಿ (ಬಿ) ಗ್ರಾಮದ ಹೊಲದಲ್ಲಿ ಸರಕಾರದಿಂದ ಯಾವುದೇ ಅನುಮತಿ ಇಲ್ಲದೇ ಗಾಂಜಾ ಬೆಳೆಸುತ್ತಿರುವ ಮಾಹಿತಿಯಂತೆ, ಮಾನ್ಯ ಶ್ರೀ ಪ್ರದೀಪ ಗುಂಟಿ ಐಪಿಎಸ್, ಪೊಲೀಸ್ ಅಧೀಕ್ಷಕರು ಬೀದರ ಜಿಲ್ಲೆ ಬೀದರ ರವರು ತಮ್ಮೊಂದಿಗೆ ಶ್ರೀ ಅಂಬೀಶ ವಾಗಮೋರೆ, ಪಿಎಸ್‌ಐ ಡಿಸಿಆರ್‌ಬಿ ಘಟಕ ಬೀದರ, ಡಿ.ಎಸ್‌.ಬಿ ಘಟಕ ಶ್ರೀ ಗುಂಡಪ್ಪಾ ರೆಡ್ಡಿ, ಎ.ಎಸ್‌.ಐ, ಸಿ.ಹೆಚ್.ಸಿ ಶ್ರೀ ಸಂತೋಷ, ಸಿ.ಪಿ.ಸಿ ಶ್ರೀ ಸಂತೋಷ ಮತ್ತು ದ್ರೋಣ ಕ್ಯಾಮರಾದ ಆಪರೇಟರ್ ಸಿ.ಹೆಚ್‌.ಸಿ ಶ್ರೀ ರಾಜಕುಮಾರ ಜೊತೆಗೆ ಚಿಂತಾಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಚಂದ್ರಶೇಖರ ನಿರ್ಣೆ ಅವರ ಸಿಬ್ಬಂದಿ ರವರಾದ ಶ್ರೀ ಸಿದ್ದೇಶ್ವರ, ಶ್ರೀ ಶ್ರೀಪತಿ, ಶ್ರೀ ಗೋರಖ, ಶ್ರೀ ಸದೋಜಾತ, ಶ್ರೀ ಸಂತೋಷ, ಶ್ರೀ ಮಾಣಿಕ ರವರೊಂದಿಗೆ ಹೊಲಕ್ಕೆ ಹೋಗಿ ದ್ರೋಣ ಕ್ಯಾಮರಾ ಮುಖಾಂತರ ಹೊಲದಲ್ಲಿ ಬೆಳೆದ 46 ಗಾಂಜಾ ಗಿಡಗಳನ್ನು ಪತ್ತೆ ಮಾಡಿ ಅದರ ತೂಕ 8 ಕೆ.ಜಿ 120 ಗ್ರಾಂ ನಷ್ಟಿದ್ದು, ಅದರ ಅ:ಕಿ: 8,12,000=00 ರೂಪಾಯಿ ಮೌಲ್ಯ ಬೆಲೆ ಬಾಳುವುಗಳನ್ನು ವಶಕ್ಕೆ ಪಡೆದು ಆರೋಪಿತನನ್ನು ವಶಕ್ಕೆ ಪಡೆದು ಕಾನೂನಿನ ರಿತ್ಯ ಕ್ರಮ ಕೈಕೊಳ್ಳಲಾಗಿದೆ.

ಎಟ್ಟು ಲಕ್ಷಕ್ಕೂ ಅಧಿಕ ಮೌಲ್ಯದ ಹೊಲದಲ್ಲಿ ಬೆಳೆದಿರುವ ಗಾಂಜಾವನ್ನು ಪತ್ತೆ ಮಾಡಿ ದಾಳಿಯಲ್ಲಿ ನನ್ನೊಂದಿಗೆ ಪಾಲ್ಗೊಂಡ ವಿಶೇಷ ಘಟಕದ ಪೊಲೀಸ್ ಅಧಿಕಾರಿ, ಸಿಬ್ಬಂದಿ, ದ್ರೋಣ ಸಿಬ್ಬಂದಿ ಮತ್ತು ಚಿಂತಾಕಿ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ರವರ ಅತ್ಯುತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಶ್ಲಾಘಿಸಿಸಲಾಗಿದೆ.

ಬೀದರ ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ.....

ಪ್ರದೀಪ್ ಗುಂಟಿ, ಐ.ಪಿ.ಎಸ್
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ ಜಿಲ್ಲೆ ಬೀದರ.

16/09/2025

ಜೆ ಟಿ ಪಾಟೀಲ ಮಸಾಜ್ ನಲ್ಲಿಯೇ ಕಾಲ ಕಳೆದರೂ # ಮುರಗೇಶ ನಿರಾಣಿ 18 ತಾಸು ಕೆ*ಮಾ*

16/09/2025

2028ರ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಿದಲ್ಲಿ ನಿರಾಣಿ ಅವರ ವಿರುದ್ಧ ನಾನೇ ಅಭ್ಯರ್ಥಿ ಆಗುವೆ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳುವ ಮೂಲಕ ತಿರುಗೇಟು ನೀಡಿದರು.

Address

Ward No. 5, Hanchinal
Mudhol
587313

Telephone

+919845753564

Website

Alerts

Be the first to know and let us send you an email when JBTV News24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to JBTV News24x7:

Share