17/09/2025
*“ ಬೀದರ ಜಿಲ್ಲಾ ಪೊಲೀಸ್, ಚಿಂತಾಕಿ ಪೊಲೀಸರಿಂದ ಹೊಲದಲ್ಲಿ ಬೆಳೆದ 8 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಗಿಡ ವಶ ಆರೋಪಿತನ ಬಂಧನ”*
ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನಂದತೆ, ಜಿಲ್ಲೆಯ ಚಿಂತಾಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕರಂಜಿ (ಬಿ) ಗ್ರಾಮದ ಹೊಲದಲ್ಲಿ ಸರಕಾರದಿಂದ ಯಾವುದೇ ಅನುಮತಿ ಇಲ್ಲದೇ ಗಾಂಜಾ ಬೆಳೆಸುತ್ತಿರುವ ಮಾಹಿತಿಯಂತೆ, ಮಾನ್ಯ ಶ್ರೀ ಪ್ರದೀಪ ಗುಂಟಿ ಐಪಿಎಸ್, ಪೊಲೀಸ್ ಅಧೀಕ್ಷಕರು ಬೀದರ ಜಿಲ್ಲೆ ಬೀದರ ರವರು ತಮ್ಮೊಂದಿಗೆ ಶ್ರೀ ಅಂಬೀಶ ವಾಗಮೋರೆ, ಪಿಎಸ್ಐ ಡಿಸಿಆರ್ಬಿ ಘಟಕ ಬೀದರ, ಡಿ.ಎಸ್.ಬಿ ಘಟಕ ಶ್ರೀ ಗುಂಡಪ್ಪಾ ರೆಡ್ಡಿ, ಎ.ಎಸ್.ಐ, ಸಿ.ಹೆಚ್.ಸಿ ಶ್ರೀ ಸಂತೋಷ, ಸಿ.ಪಿ.ಸಿ ಶ್ರೀ ಸಂತೋಷ ಮತ್ತು ದ್ರೋಣ ಕ್ಯಾಮರಾದ ಆಪರೇಟರ್ ಸಿ.ಹೆಚ್.ಸಿ ಶ್ರೀ ರಾಜಕುಮಾರ ಜೊತೆಗೆ ಚಿಂತಾಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಚಂದ್ರಶೇಖರ ನಿರ್ಣೆ ಅವರ ಸಿಬ್ಬಂದಿ ರವರಾದ ಶ್ರೀ ಸಿದ್ದೇಶ್ವರ, ಶ್ರೀ ಶ್ರೀಪತಿ, ಶ್ರೀ ಗೋರಖ, ಶ್ರೀ ಸದೋಜಾತ, ಶ್ರೀ ಸಂತೋಷ, ಶ್ರೀ ಮಾಣಿಕ ರವರೊಂದಿಗೆ ಹೊಲಕ್ಕೆ ಹೋಗಿ ದ್ರೋಣ ಕ್ಯಾಮರಾ ಮುಖಾಂತರ ಹೊಲದಲ್ಲಿ ಬೆಳೆದ 46 ಗಾಂಜಾ ಗಿಡಗಳನ್ನು ಪತ್ತೆ ಮಾಡಿ ಅದರ ತೂಕ 8 ಕೆ.ಜಿ 120 ಗ್ರಾಂ ನಷ್ಟಿದ್ದು, ಅದರ ಅ:ಕಿ: 8,12,000=00 ರೂಪಾಯಿ ಮೌಲ್ಯ ಬೆಲೆ ಬಾಳುವುಗಳನ್ನು ವಶಕ್ಕೆ ಪಡೆದು ಆರೋಪಿತನನ್ನು ವಶಕ್ಕೆ ಪಡೆದು ಕಾನೂನಿನ ರಿತ್ಯ ಕ್ರಮ ಕೈಕೊಳ್ಳಲಾಗಿದೆ.
ಎಟ್ಟು ಲಕ್ಷಕ್ಕೂ ಅಧಿಕ ಮೌಲ್ಯದ ಹೊಲದಲ್ಲಿ ಬೆಳೆದಿರುವ ಗಾಂಜಾವನ್ನು ಪತ್ತೆ ಮಾಡಿ ದಾಳಿಯಲ್ಲಿ ನನ್ನೊಂದಿಗೆ ಪಾಲ್ಗೊಂಡ ವಿಶೇಷ ಘಟಕದ ಪೊಲೀಸ್ ಅಧಿಕಾರಿ, ಸಿಬ್ಬಂದಿ, ದ್ರೋಣ ಸಿಬ್ಬಂದಿ ಮತ್ತು ಚಿಂತಾಕಿ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ರವರ ಅತ್ಯುತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಶ್ಲಾಘಿಸಿಸಲಾಗಿದೆ.
ಬೀದರ ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ.....
ಪ್ರದೀಪ್ ಗುಂಟಿ, ಐ.ಪಿ.ಎಸ್
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ ಜಿಲ್ಲೆ ಬೀದರ.