Kannada Today

Kannada Today A Fight against injustice and corruption in society, creating the social reform by energetic youth

13/02/2026

ಭೂ ಸುರಕ್ಷಾ ಯೋಜನೆ ಜಾರಿಗೆ - ಸಚಿವ ಕೃಷ್ಣ ಭೈರೇಗೌಡ |13-02-2026 | Kannada Today News

ಕರ್ನಾಟಕದ ಭೂ ದಾಖಲೆಗಳ ಅಕ್ರಮ ಕಡಿವಾಣಕ್ಕೆ ಹೊಸ ಯೋಜನೆ ಜಾರಿಗೆ

ಕಂದಾಯ ಸಚಿವರಿಂದ ದಾಖಲೆಗಳ ಪಾರದರ್ಶಕತೆಗೆ ಮಹತ್ವದ ನಿರ್ಧಾರ

100 ಕೋಟಿ ದಾಖಲೆಗಳು ಆನ್ಲೈನ್ ನಲ್ಲಿ ಲಭ್ಯ

ರಾಜ್ಯದ ರೈತರಿಗೆ ಭೂ ದಾಖಲೆಗಳ ಸುರಕ್ಷತೆಗೆ ಸಂಬಂಧಿಸಿದ ಮಹತ್ವದ ಯೋಜನೆಯನ್ನು ಕರ್ನಾಟಕ ಸರ್ಕಾರ ಘೋಷಿಸಿದೆ. ರಾಜ್ಯದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು, ರೈತರ ಭೂಸ್ವತ್ತಿನ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವ “ಭೂ ಸುರಕ್ಷಾ ಯೋಜನೆ” ಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯ ಮೂಲಕ ರೈತರು ತಮ್ಮ ಭೂಮಿಯ ಪಹಣಿ, ಹಕ್ಕುಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸುಲಭವಾಗಿ ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ. ಇದರಿಂದ ಕಚೇರಿಗಳಿಗೆ ಓಡಾಟ ಕಡಿಮೆಯಾಗುವುದರ ಜೊತೆಗೆ ಭೂ ದಾಖಲೆಗಳಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಭೂ ಸುರಕ್ಷಾ ಯೋಜನೆಯಿಂದ ಭೂ ದಾಖಲೆಗಳ ಸುರಕ್ಷತೆ ಹೆಚ್ಚುವದಷ್ಟೇ ಅಲ್ಲದೆ ಅಕ್ರಮ ಭೂ ವ್ಯವಹಾರಗಳಿಗೆ ಕಡಿವಾಣ ಹಾಕಲು ಸಹಾಯವಾಗಲಿದೆ. ಯೋಜನೆಯನ್ನು ರಾಜ್ಯದಾದ್ಯಂತ ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

27/01/2026

ಗಣರಾಜ್ಯೋತ್ಸವ ಆಚರಿಸದೇ ಅಗೌರವ ತೋರಿದ ಸರ್ಕಾರಿ ಅಧಿಕಾರಿಗಳು | 26-01-2026 | Kannada today News

ದೇವರಭೂಪೂರ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಧ್ವಜಾರೋಹಣಕ್ಕೆ ಕುಂಟು ನೆಪ..

ದೇವರಭೂಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬ್ಯಾಂಕ್ ಕಚೇರಿಯಲ್ಲಿ, ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಆಚರಿಸದೇ ಹಲವು ನೆಪಗಳನ್ನ ಹೇಳಿದ್ದು ವಿಷಾದನೀಯ

ರಾಷ್ಟ್ರೀಯ ಹಬ್ಬಗಳನ್ನ ಸರಕಾರಿ ಕಚೇರಿಗಳಲ್ಲಿ ಕಡ್ಡಾಯ ಇದ್ದರೂ ಸಹ ಸರ್ಕಾರಿ ಕಚೇರಿಯಲ್ಲಿ ಆಚರಿಸದೇ ರಾಷ್ಟ್ರೀಯ ಹಬ್ಬ ಹಾಗೂ ಧ್ವಜಾರೋಹಣಕ್ಕೆ ಅಗೌರವ ತೋರಿದ್ದು ಕಾರಣ ಕೇಳಿದರೆ ಸ್ಥಳಾವಕಾಶ ಇಲ್ಲ ಎಂಬ ಕುಂಟು ನೆಪ ಹೇಳಿ ಜಾರುವ ಪ್ರಯತ್ನ ಸರಕಾರಿ ಅಧಿಕಾರಿಗಳೇ ಮಾಡಿರುವಂತದ್ದು...

ರಾಷ್ಟ್ರೀಯ ಹಬ್ಬವನ್ನ ಸರ್ಕಾರಿ ಅಧಿಕಾರಿಗಳೇ ಆಚರಿಸಿಲ್ಲ ಅಂದ್ರೆ ಸಾಮಾನ್ಯ ಜನರಿಗೆ ರಾಷ್ಟ್ರ ಪ್ರೇಮ ತಿಳಿಯೋದು ಹೇಗೆ

ಪೂರ್ವ ಸಿದ್ಧತೆ ಇಲ್ಲದೆ ರಾಷ್ಟ್ರೀಯ ಹಬ್ಬವನ್ನು ಕಡೆಗಣಿಸಿದ್ದು, ಅಲ್ಲದೆ ಧ್ವಜಾರೋಹಣ ವನ್ನು ಆಚರಿಸದೆ ಇರುವುದು - ರಾಷ್ಟ್ರ ಧ್ವಜ ಪ್ರದರ್ಶನವನ್ನು ಲಾಂಛನ ಮತ್ತು ಅಭಿ ದಾನ (ಅಸಮರ್ಪಕ ಬಳಕೆ ತಡೆ) ಕಾಯಿದೆ, 1950 ಮತ್ತು ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯಿದೆ, 1917 ಇವುಗಳ ಅನುಗುಣವಾಗಿ ಅಗೌರವಪೂರ್ವ ನಡತೆ ಎಂದು ಪರಿಗಣಿಸಲಾಗುತ್ತದೆ.

ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

26/01/2026

ವಿಧ್ಯಾರ್ಥಿಗಳಿಗೆ ಪ್ರಶಸ್ತಿಯೂ ಇಲ್ಲ ಪುಸ್ತಕವೂ ಇಲ್ಲದ ಗಣರಾಜ್ಯೋತ್ಸವ...

ಲಿಂಗಸುಗೂರು ತಾಲೂಕಿನ ದೇವರಭೂಪೂರ ಗ್ರಾಮ ಪಂಚಾಯತಿಯಲ್ಲಿ ನಿರ್ಲಕ್ಷ್ಯದ ಗಣರಾಜ್ಯೋತ್ಸವ ಆಚರಣೆ ಕಂಡುಬಂದಿದ್ದು ಸೂರ್ಯೋದಯದ ಸಮಯಕ್ಕೆ ನಡೆಯಬೇಕಿದ್ದ ಧ್ವಜಾರೋಹಣ ಅಧ್ಯಕ್ಷರು ಬಾರದ ಕಾರಣಕ್ಕೆ 9 ಘಂಟೆಯ ನಂತರ ಧ್ವಜಾರೋಹಣ ನೆರವೇರಿಸಲಾಯಿತು..

ಯಾವ ಒಬ್ಬ ವ್ಯಕ್ತಿಗಾಗಿ ಧ್ವಜಾರೋಹಣ ತಡಮಾಡುವುದು ಅಲ್ಲದೇ ವಿಧ್ಯಾರ್ಥಿಗಳಿಗೆ ಯಾವುದೇ ಸ್ಪರ್ಧೆಯನ್ನು ಏರ್ಪಡಿಸದೇ ಪ್ರಶಸ್ತಿಯನ್ನ ವಿತರಿಸದೇ ರಾಷ್ಟ್ರೀಯ ಹಬ್ಬದ ದಿನ ಮಕ್ಕಳ ಖುಷಿಯನ್ನ ಉತ್ಸಾಹವನ್ನ ಇಲ್ಲದಂತಾಗಿದೆ...

ಪ್ರತಿ ರಾಷ್ಟ್ರೀಯ ಹಬ್ಬದ ಸಂಭ್ರಮ ಮಕ್ಕಳ ಸ್ಪರ್ಧೆ, ಪ್ರಶಸ್ತಿ ಪುಸ್ತಕ ಹಾಗೂ ಸಿಹಿ ಹಂಚಿ ಮಕ್ಕಳ ಸ್ಪರ್ಧಾತ್ಮಕ ಗುಣ ಹೆಚ್ಚಿಸಬೇಕಾದ ಅಧಿಕಾರಿಗಳು ಕಾಟಾಚಾರಕ್ಕೆ ರಾಷ್ಟ್ರೀಯ ಹಬ್ಬ ಆಚರಿಸಿದ್ದು

ಗ್ರಾಮಸ್ಥರು ವಿಚಾರಿಸಿದ್ರೆ ಪ್ರಶಸ್ತಿ, ಪುಸ್ತಕ ವಿತರಣೆಗೆ ಪಂಚಾಯತಿಯಲ್ಲಿ ಹಣದ ಕೊರತೆ ಇದೆ ಅಂತ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷದ ಹೇಳಿಕೆ ನೀಡಿದ್ದಾರೆ

21/01/2026

ಶ್ರೀ ಅಮರೇಶ್ವರ ಕ್ಷೇತ್ರಕ್ಕೆ ನೇರ ಬಸ್ ಸಂಚಾರಕ್ಕೆ ಆಗ್ರಹ |18-01-2026 | Kannada today News

ಭಕ್ತರ ಅನುಕೂಲಕ್ಕಾಗಿ ಶ್ರೀ ಅಮರೇಶ್ವರ ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಎಲ್ಲಾ ವಿಭಾಗದ ಬಸ್‌ಗಳು ಆಗಮಿಸಬೇಕು ಹಾಗೂ ಅಮರೇಶ್ವರ ದೇವಸ್ಥಾನವರೆಗೆ ನೇರ ಬಸ್ ಸೇವೆ ಒದಗಿಸಬೇಕು ಎಂದು ಶ್ರೀ ಅಭಿನವ ಗಜದಂಡ ಮಹಾಶಿವಾಚಾರ್ಯರು ಆಗ್ರಹಿಸಿದರು.

ಅವರು ಮಾತನಾಡುತ್ತಾ, ಶ್ರೀ ಅಮರೇಶ್ವರ ಕ್ಷೇತ್ರವು ಅಪಾರ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿದ್ದು, ಪ್ರತಿದಿನವೂ ನೂರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಾರೆ. ಆದರೆ ಸಮರ್ಪಕ ಬಸ್ ಸಂಪರ್ಕದ ಕೊರತೆಯಿಂದ ಭಕ್ತರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ದೂರದ ಊರುಗಳಿಂದ ಬರುವ ಭಕ್ತರಿಗೆ ಹೆಚ್ಚಿನ ಅಸೌಕರ್ಯ ಉಂಟಾಗುತ್ತಿದೆ ಎಂದರು.

ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ವಿಭಾಗಗಳಿಂದ ನೇರ ಬಸ್ ಸೇವೆ ಆರಂಭಿಸಿ, ಅಮರೇಶ್ವರ ದೇವಸ್ಥಾನವರೆಗೆ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಭಕ್ತರ ಸಂಖ್ಯೆಯೂ ಹೆಚ್ಚಾಗಲಿದ್ದು, ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

18/01/2026

ಸುರಪುರ ಮಾರ್ಗದ ಬೆಟ್ಟದ ಏರಿನಲ್ಲಿ ಕೆಕೆಆರ್‌ಟಿಸಿ ಬಸ್ ಸ್ಥಗಿತ — ಪ್ರಯಾಣಿಕರಿಗೆ ಸಂಕಷ್ಟ

ಲಿಂಗಸುಗೂರು ವಿಭಾಗದ ಕೆಕೆಆರ್‌ಟಿಸಿ ಬಸ್ ಸಂಖ್ಯೆ KA 36 F1475 ಈ ಬಸ್ಸು ಸುರಪುರ ಮಾರ್ಗದ ಬೆಟ್ಟದ ಏರಿನಲ್ಲಿ ಏರಲಾಗದೆ ಮಧ್ಯದಲ್ಲೇ ನಿಂತ ಪರಿಣಾಮ, ಪ್ರಯಾಣಿಕರು ಬಸ್‌ನಿಂದ ಇಳಿದು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಹೋಗಿ ನಂತರ ಮತ್ತೆ ಬಸ್ ಹತ್ತಿ ಪ್ರಯಾಣ ಮುಂದುವರೆಸಬೇಕಾಯಿತು. ಬಸ್ ಇಂಜಿನ್ ಸಮಸ್ಯೆಯಿಂದ ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇಂತಹ ದುಸ್ಥಿತಿಯ ಬಸ್‌ಗಳನ್ನು ದೂರದ ಪ್ರಯಾಣಕ್ಕೆ ಬಿಡುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

16/01/2026

ಪೌರಾಯುಕ್ತ ಅಮೃತಾಗೌಡಗೆ ಬೆದರಿಕೆ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ FIR, ಕೈ ನಾಯಕ ನಾಪತ್ತೆ

ಶಿಡ್ಲಘಟ್ಟ: ನಗರಸಭೆ ಪೌರಾಯುಕ್ತ ಅಮೃತಾಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಎದುರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣಗಳು ದಾಖಲಾಗಿವೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ರಾಜೀವ್ ಗೌಡ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

ನಗರದಲ್ಲಿ ಬ್ಯಾನ‌ರ್ ಅಳವಡಿಸುವ ವಿಚಾರವಾಗಿ ರಾಜೀವ್ ಗೌಡ ಮತ್ತು ಪೌರಾಯುಕ್ತ ಅಮೃತಾಗೌಡ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವೇಳೆ ರಾಜೀವ್ ಗೌಡ ಪೌರಾಯುಕ್ತರಿಗೆ ಬೆದರಿಕೆ ಹಾಕಿದ್ದಾರೆನ್ನಲಾದ ವೀಡಿಯೊ ವೈರಲ್ ಆಗಿತ್ತು. ಈ ಕುರಿತು ಸ್ವತಃ ಪೌರಾಯುಕ್ತ ಅಮೃತಾಗೌಡ ಮತ್ತು ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸಗೌಡ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.

ಪೌರಾಯುಕ್ತರು ನೀಡಿದ ದೂರಿನನ್ವಯ ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಈ ಕೆಳಗಿನ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ: ಸೆಕ್ಷನ್ 132: ಆಳಿಕೆ ಕೆಲಸಕ್ಕೆ ಅಡ್ಡಿ ಹಾಗೂ ಬೆದರಿಕೆ. ಸೆಕ್ಷನ್ 351(3): ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಗೂ ಮಹಿಳೆಯ ಚಾರಿತ್ರ್ಯವಧೆ. ಸೆಕ್ಷನ್ 56: ಅಪರಾಧಕ್ಕೆ ಪ್ರಚೋದನೆ. ಸೆಕ್ಷನ್ 224: ಸರ್ಕಾರಿ ನೌಕರನಿಗೆ ದೈಹಿಕ ಹಾಗೂ ಮಾನಸಿಕ ಬೆದರಿಕೆ. ಸೆಕ್ಷನ್ 352: ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನ. ಇದಲ್ಲದೆ, ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ನೀಡಿದ ದೂರಿನ ಮೇರೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಹರಡಿದ ಆರೋಪದಡಿ (ಸೆಕ್ಷನ್ 353(2)) ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ತಮ್ಮ ಎರಡು ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಆರೋಪಿಯ ಬಂಧನಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಷೆ ಅವರು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಸದ್ಯ ಸೆನ್ (CEN) ಪೊಲೀಸರು ಮತ್ತು ನಗರ ಠಾಣೆಯ ಪೊಲೀಸರು ತಲೆಮರೆಸಿಕೊಂಡಿರುವ ಕೈ ನಾಯಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಈ ಬೆಳವಣಿಗೆಗಳ ನಡುವೆ, ರಾಜೀವ್ ಗೌಡ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, "ಯಾವುದೇ ಕೆಟ್ಟ ಉದ್ದೇಶದಿಂದ ನಾನು ಮಾತನಾಡಿಲ್ಲ. ಬ್ಯಾನ‌ರ್ ತೆರವುಗೊಳಿಸಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ. ಪೌರಾಯುಕ್ತರು ನನಗೆ ಸಹೋದರಿ ಸಮಾನ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ,'' ಎಂದು ಹೇಳಿದ್ದಾರೆ.

ಆದರೆ, ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತನ್ನ ಮುಖಂಡನ ಈ ವರ್ತನೆಯ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

10/01/2026

ಬನ್ನಿಗೋಳ ಗ್ರಾಮ ಪಂಚಾಯತ್ ಖಾಲಿ ಖಾಲಿ...! | 10 01 2026 | Kannada today News

ಅಧಿಕಾರಿಗಳೂ ಇಲ್ಲಾ... ಸಿಬ್ಬಂದಿಗಳೂ ಇಲ್ಲ...

ಕನ್ನಡ ಟುಡೇ ನ್ಯೂಸ್ ಗೆ ಸ್ವಾಗತ.....

ದಿನದಿಂದ ದಿನಕ್ಕೆ ಲಿಂಗಸುಗೂರು ತಾಲೂಕಿನ ಗ್ರಾಮ ಪಂಚಾಯತಿ ಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಅಭಿವೃದ್ಧಿ ಅಧಿಕಾರಿಗಳ ಬೇಜವಾಬ್ದಾರಿ ಅತಿಯಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

ಬನ್ನಿಗೋಳ ಗ್ರಾಮ ಪಂಚಾಯತಿ ಯ ಅಭಿವೃದ್ಧಿ ಅಧಿಕಾರಿಗಳು ಜನರಿಗೆ ಸರಿಯಾದ ಮಾಹಿತಿ ನೀಡದೇ ಸತಾಯಿಸುತ್ತಿದ್ದು ಭೇಟಿ ನೀಡಲು ಕಚೇರಿಗೆ ಬಂದರೆ ಪಂಚಾಯತಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು ಒಬ್ಬ ಸಿಬ್ಬಂದಿಯು ಸಹ ಇಲ್ಲದ್ದನ್ನು ಕಂಡು ಗ್ರಾಮದ ಯುವಕರು ಈ ಬಗ್ಗೆ ಧ್ವನಿ ಎತ್ತಿದ್ದಾರೆ

08/01/2026

ಆರ್ ಮಾನಸಯ್ಯ ವಿರುದ್ಧ ಹರಿಹಾಯ್ದ ರಘುಗೌಡ ನಾಯಕ್...! | 07 01 2026 | Kannada today

ಆರ್ ಮನಸಯ್ಯ ವಿರುದ್ಧ ಹರಿಹಾಯ್ದ ಹಿಂದೂ ಸಂಘಟನೆ ಕಾರ್ಯಕರ್ತ ರಘುಗೌಡ ನಾಯಕ್...!

ಭೀಮಾ ಗೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಲಿಂಗಸುಗೂರು ತಾಲೂಕಿನಲ್ಲಿ ಮಾತನಾಡಿದ ಆರ್ ಮನಸಯ್ಯ ನವರು ಹಿಂದೂ ಕಾರ್ಯಕರ್ತರ, ಸಂಘ ಪರಿವಾರದ ಹಾಗೂ ಗೋ ರಕ್ಷಕರ ಕುರಿತು ನೀಡಿದ ಹೇಳಿಕೆ ವಿರೋಧಿಸಿ ರಾಯಚೂರು ಜಿಲ್ಲೆಯ ಶ್ರೀ ರಾಮ ಸೇನಾ ಜಿಲ್ಲಾಧ್ಯಕ್ಷರಾದ ರಘುಗೌಡ ನಾಯಕ್ ಕಿಡಿ ಕಾರಿದರು

07/01/2026

ದುಷ್ಟರ ದುಷ್ಟದ ಬೀಡಾದ ಸುಕ್ಷೇತ್ರದ ಉದ್ಯಾನವನ | 07-01-2026 | Kannada today News

ಭಯಾನಕವಾದ ಅಮರೇಶ್ವರ ದೈವಿವನ..!

ಲಿಂಗಸುಗೂರು ತಾಲೂಕಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ಶತಮಾನಗಳಿಂದಲೂ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಭಕ್ತರ ಆರಾಧ್ಯ ದೈವವಾದ ಶ್ರೀ ಅಮರೇಶ್ವರ ದೇವಸ್ಥಾನವು ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಅಭಿವೃದ್ಧಿಯಲ್ಲಿ ಹಿನ್ನಡೆಯಲ್ಲಿ ಸಾಗುತ್ತಿರುವುದು ಅತಿ ವಿಷಾದನೀಯ

ದೇವಸ್ಥಾನದ ಹಿಂಬಾಗಕ್ಕೆ ಹೊಂದಿಕೊಂಡಿರುವ ಉದ್ಯಾನವನ ಶಿವನ ವಿಗ್ರಹ , ವಾಲ್ಮೀಕಿ ಆಶ್ರಮದ ಮುಂದೆ ಸೀತಾ ಮಾತಾ , ಲವ - ಕುಶ ರ ವಿಗ್ರಹ ವಿಧ್ಯಾಭಾಸದ ಸ್ಥಿತಿಯಲ್ಲಿ ವಿಗ್ರಹಗಳಿಂದ ಸುಂದರ ಅಲಂಕೃತವಾಗಿದ್ದ ಉದ್ಯಾನವನ ಇಂದು ಬಿಕೋ ಎನ್ನುತ್ತಿದೆ. ಒಣಗಿದ ಬಳ್ಳಿಗಳು, ಬತ್ತಿದ ಮರಗಳು, ಉದ್ಯಾನವನ ಸಂಪೂರ್ಣ ಹದಗೆಟ್ಟಿದ್ದು ದುಷ್ಟರ ದುಶ್ಚಟದ ಬೀಡಾಗಿ ಮಾರ್ಪಟ್ಟಿದ್ದು ದುಃಖದ ಸಂಗತಿ.

ಅರಣ್ಯ ಇಲಾಖೆ ಅಧಿಕಾರಿಗಳು ದೇವಸ್ಥಾನದ ಮಂಡಳಿ ಜಾಗೃತಿಯಿಂದ ಉದ್ಯಾನವನ ಮರು ನಿರ್ಮಾಣಕ್ಕೆ ಮುಂದಾಗಿ ಸುಂದರ ತಾಣವನ್ನು ಪುನಶ್ಚೇತನಗೊಳಿಸಿ ತಾಲೂಕಿನ ಐತಿಹಾಸಿಕ ದೇವಸ್ಥಾನದ ಘನತೆ ಗೌರವ ಕಾಪಾಡುವುದು ಅತ್ಯಗತ್ಯ

05/01/2026

ಬೀದರ್: ಬಿಜೆಪಿ MLA ಸಿದ್ದು ಪಾಟೀಲ್....ಕಾಂಗ್ರೆಸ್ MLC ಭೀಮರಾವ್ ಪಾಟೀಲ್ ಕೆಡಿಪಿ ಸಭೆಯಲ್ಲಿ ಕಿತ್ತಾಟ

#ಕೆಡಿಪಿ

05/01/2026

01/01/2026

ಭೀಮಾ ಕೊರೆಗಾಂವ್ ವಿಜಯೋತ್ಸವ ಪ್ರಯುಕ್ತ ಪಥ ಸಂಚಲನ | 01-01-2026 | Kannada today

ಲಿಂಗಸುಗೂರು ತಾಲೂಕಿನಲ್ಲಿ ಇಂದು ಆರ್ ಮನಸಯ್ಯ ನೇತೃತ್ವದಲ್ಲಿ ಪಥ ಸಂಚಲನ

208 ನೇ ಭೀಮಾ ಕೊರೆಗಾಂವ್ ವಿಜಯೋತ್ಸವದ ಪ್ರಯುಕ್ತ ಲಿಂಗಸುಗ್ರಿನಲ್ಲಿ ಪಥ ಸಂಚಲನದ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಯೊಂದಿಗೆ ಹಾಗೂ ಜಯಘೋಷದೊಂದಿಗೆ ಜರುಗಿತು

ಪಥಸಂಚಲನವು ಪ್ರವಾಸಿ ಮಂದಿರದಿಂದ ಆರಂಭಗೊಂಡು ಗಡಿಯಾರ್ ಚೌಕ್ ಮುಖಾಂತರ ಬಸವ ಸಾಗರ ಕ್ರಾಸ್ ಮೂಲಕ ಅಂಬೇಡ್ಕರ್ ಸರ್ಕಲ್ ವರೆಗೂ ಜರುಗಿತು

Address

Mysore

Alerts

Be the first to know and let us send you an email when Kannada Today posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Today:

Share