Kannada Today

Kannada Today A Fight against injustice and corruption in society, creating the social reform by energetic youth

20/05/2026

ಬೇಜವಾಬ್ದಾರಿ ಕಾಮಗಾರಿ: ಅಗ್ನಿಶಾಮಕ ದಳ ವಾಹನಕ್ಕೆ ಅಡ್ಡಿಯಾದ ರಸ್ತೆ ಕಾಮಗಾರಿ..!

ಲಿಂಗಸುಗೂರು ಪಟ್ಟಣದ ಗಡಿಯಾರ ಚೌಕದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾದ ಸೂಚನಾ ಫಲಕಗಳನ್ನು ಅಳವಡಿಸದೇ ನಿರ್ಲಕ್ಷ್ಯ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಅತಿ ಹೆಚ್ಚು ಜನದಟ್ಟಣೆ ಇರುವ ಗಡಿಯಾರ ಚೌಕದಲ್ಲಿ ಯಾವುದೇ ಮುನ್ನೆಚ್ಚರಿಕಾ ಸೂಚನೆ ಇಲ್ಲದೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸಾಮಾನ್ಯ ಜನರ ತೊಂದರೆ ಒಂದೆಡೆಯಾದರೆ, ತುರ್ತು ಪರಿಸ್ಥಿತಿಯಲ್ಲಿ ಕ್ಷಣ ಕ್ಷಣವೂ ಅಮೂಲ್ಯವಾಗಿರುವ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳ ಸಂಚಾರಕ್ಕೂ ಇದೇ ರಸ್ತೆ ಪ್ರಮುಖ ಮಾರ್ಗವಾಗಿದೆ. ಆದರೆ ಮುಂಚಿತವಾಗಿ ಯಾವುದೇ ಸೂಚನಾ ಫಲಕ ಅಳವಡಿಸದ ಪರಿಣಾಮ ಅಗ್ನಿಶಾಮಕ ದಳದ ವಾಹನ ಕಾಮಗಾರಿ ಸ್ಥಳದವರೆಗೆ ಬಂದು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವ ಸ್ಥಳದಲ್ಲಿ ಎಂತಹ ತುರ್ತು ಪರಿಸ್ಥಿತಿ ಎದುರಾಯಿತೋ ಗೊತ್ತಿಲ್ಲ, ಆದರೆ ಇಲ್ಲಿ ಅಮೂಲ್ಯ ಸಮಯ ವ್ಯರ್ಥವಾದುದು ಮಾತ್ರ ಸತ್ಯ. ಇಂತಹ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈ ಅವ್ಯವಸ್ಥೆಗೆ ನೇರ ಹೊಣೆ ಕಾಮಗಾರಿಯ ಗುತ್ತಿಗೆದಾರರದೋ ಅಥವಾ ಪುರಸಭೆ ಅಧಿಕಾರಿಗಳದೋ ಎಂಬುದನ್ನು ಸ್ಪಷ್ಟಪಡಿಸಿ, ತಪ್ಪನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ.

03/05/2026

ಜಬಲ್ಪುರ ಬರ್ಗಿ ಅಣೆಕಟ್ಟು ಬೋಟ್ ದುರಂತ: ತಾಯಿಯ ಮಮತೆಗೆ ಸಾಕ್ಷಿಯಾದ ಹೃದಯವಿದ್ರಾವಕ ಅಂತ್ಯ!
ಮಧ್ಯಪ್ರದೇಶದ ಜಬಲ್ಪುರದ ಬರ್ಗಿ ಅಣೆಕಟ್ಟಿನಲ್ಲಿ ನಡೆದ ಭೀಕರ ಬೋಟ್ ದುರಂತ ದೇಶದ ಮನಸ್ಸನ್ನು ಕಲುಕಿದೆ. ಸುಮಾರು 30 ಜನರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ ಬೋಟ್, ಹಠಾತ್ ಬಿರುಗಾಳಿ ಮತ್ತು ಬಲವಾದ ಗಾಳಿಗೆ ಸಿಲುಕಿ ನೀರಿನಲ್ಲಿ ಪಲ್ಟಿಯಾದ ಘಟನೆ ದುರ್ಘಟನೆಯಾಗಿ ಪರಿಣಮಿಸಿದೆ.
• ಬರ್ಗಿ ಅಣೆಕಟ್ಟಿನಲ್ಲಿ ನಡೆದ ದೋಣಿ ದುರಂತದ ಸಂಪೂರ್ಣ ವಿವರ
• ಅಪಘಾತಕ್ಕೂ ಮುನ್ನ ನಡೆದ ಘಟನೆಗಳು ಮತ್ತು ಪ್ರಯಾಣಿಕರ ಆತಂಕ
• ರಕ್ಷಣಾ ಕಾರ್ಯಾಚರಣೆ: 22 ಜನರ ರಕ್ಷಣೆ, 9 ಮಂದಿ ಸಾವಿನ ದುರಂತ
• ಹೃದಯ ಮುರಿಯುವ ಕ್ಷಣ: 4 ವರ್ಷದ ಮಗುವನ್ನು ಅಪ್ಪಿಕೊಂಡೇ ಪ್ರಾಣ ಬಿಟ್ಟ ತಾಯಿ
ಈ ಘಟನೆ ಪ್ರವಾಸೋದ್ಯಮದಲ್ಲಿ ಸುರಕ್ಷತಾ ನಿಯಮಗಳ ಅಗತ್ಯತೆಯನ್ನು ಮತ್ತೊಮ್ಮೆ ತೋರಿಸಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಅಗತ್ಯವಾಗಿದೆ.

03/05/2026
29/04/2026

ಗೋವಂಶದ ಸಂರಕ್ಷಣೆ ಹಾಗೂ ಗೋಹತ್ಯೆ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲಿಂಗಸುಗೂರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಕರ್ನಾಟಕದ ಗ್ರಾಮೀಣ ಆರ್ಥಿಕತೆಯ ಆಧಾರವಾದ ಗೋವಂಶ ಇಂದು ಕಳ್ಳಸಾಗಣೆ ಮತ್ತು ಹತ್ಯೆಯಿಂದ ಅಳಿವಿನ ಅಂಚಿನಲ್ಲಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಲು ಸಂವಿಧಾನ ತಿದ್ದುಪಡಿ ಶಿಫಾರಸ್ಸು ಮಾಡುವಂತೆ ಆಗ್ರಹಿಸಲಾಗಿದೆ. ಜೊತೆಗೆ, ಗೋವಂಶವನ್ನು “ರಾಷ್ಟ್ರ ಮಾತೆ” ಹಾಗೂ ರಾಜ್ಯ ಮಟ್ಟದಲ್ಲಿ “ರಾಜ್ಯ ಮಾತೆ” ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ.
ಗೋ ಕಳ್ಳಸಾಗಣೆಯನ್ನು ಜಾಮೀನು ರಹಿತ ಅಪರಾಧವಾಗಿ ಪರಿಗಣಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಲಾಗಿದೆ.
ಇದೇ ವೇಳೆ, ಗೋ ಸಂರಕ್ಷಣೆಗಾಗಿ ನಂದಿಶಾಲೆ ಸ್ಥಾಪನೆ, ಗೋ ಅಭಯಾರಣ್ಯ ನಿರ್ಮಾಣ, ಪಂಚಗವ್ಯ ಸಂಶೋಧನೆಗೆ ಉತ್ತೇಜನ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.

23/04/2026

ತುಂಗಳ ಗ್ರಾಮದಲ್ಲಿ ಭೀಕರ ಕೊಲೆ – ಒಬ್ಬ ಮೃತ, ಮತ್ತೊಬ್ಬ ಗಂಭೀರ ಗಾಯ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಭೀಕರ ಕೊಲೆ ಘಟನೆ ನಡೆದಿದೆ. ಗ್ರಾಮದಲ್ಲಿನ ಜನತಾ ಪ್ಲಾಟ್ ಪ್ರದೇಶದ ಮನೆಯ ಅಂಗಳದಲ್ಲೇ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ಮೃತ ವ್ಯಕ್ತಿಯನ್ನು ತುಂಗಳ ಗ್ರಾಮದ ಅಶೋಕ ಕೋಳಿ (35) ಎಂದು ಗುರುತಿಸಲಾಗಿದೆ. ಮೃತದೇಹದ ಮುಖಭಾಗ ಸಂಪೂರ್ಣ ನುಜ್ಜಾಗಿರುವುದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಉತ್ತಮ ಶಿಂದೆ (40) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

📍 ಸ್ಥಳ: ತುಂಗಳ ಗ್ರಾಮ, ಜಮಖಂಡಿ ತಾಲೂಕು, ಬಾಗಲಕೋಟೆ ಜಿಲ್ಲೆ

23/04/2026

ನೀರು ಕೊಡದಿದ್ದರೆ ಕ್ರಮ ಖಚಿತ – ಪುರಸಭೆ ಅಧಿಕಾರಿಗಳಿಗೆ ಶಾಸಕರ ಎಚ್ಚರಿಕೆ

ದಿನಾಂಕ ಏಪ್ರಿಲ್ 17ರಂದು ಸಹಾಯಕ ಆಯುಕ್ತರ ಸಮ್ಮುಖದಲ್ಲಿ ನಡೆದ ಲಿಂಗಸುಗೂರು ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತು ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಸುತ್ತಮುತ್ತ ಕೆರೆಗಳು ಹಾಗೂ ಬೋರ್ವೆಲ್‌ಗಳಂತಹ ಹಲವು ನೀರಿನ ಮೂಲಗಳು ಇರುವುದರಿಂದ ಜನರಿಗೆ ಪ್ರತಿದಿನ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು. ಕುಂಟು ನೆಪಗಳನ್ನು ಹೇಳಿ ಜನರನ್ನು ಸಮಸ್ಯೆಗೆ ಒಳಪಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಸಿದರು.

ಈ ವೇಳೆ ಪುರಸಭೆ ಅಧಿಕಾರಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಸಹಾಯಕ ಆಯುಕ್ತರು ಸ್ಪಷ್ಟನೆ ನೀಡಿದರು. ಜೊತೆಗೆ ನಗರದ ಸಾರ್ವಜನಿಕ ಶೌಚಾಲಯಗಳು ಮತ್ತು ಉದ್ಯಾನವನಗಳ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

23/04/2026

ತಾಲೂಕು ಆಡಳಿತ ವತಿಯಿಂದ ವಿಶ್ವಗುರು ಶ್ರೀ ಬಸವಣ್ಣ ಅವರ ಜಯಂತಿಯನ್ನು ಬಸವ ಸಾಗರ ಕ್ರಾಸ್‌ನಲ್ಲಿರುವ ನಾಮಫಲಕಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವದಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು, ತಹಶೀಲ್ದಾರರು, ಶರಣಪ್ಪ ಮೇಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಸುಭಾಸ್ ಪಲ್ಲೇದ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರು ಮಾತನಾಡಿ, ಬಸವಣ್ಣನವರ ಸಮಾನತೆ, ಶ್ರಮದ ಗೌರವ ಮತ್ತು ಸಮಾಜ ಸುಧಾರಣೆಯ ಸಂದೇಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಯುವ ಪೀಳಿಗೆ ಬಸವಣ್ಣನವರ ಆದರ್ಶಗಳನ್ನು ಅನುಸರಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.

15/04/2026

ಲಿಂಗಸುಗೂರು ತಾಲೂಕು ಆಡಳಿತ ವತಿಯಿಂದ B. R. Ambedkar ಅವರ ಜಯಂತಿಯನ್ನು ಭಾವಚಿತ್ರ ಮೆರವಣಿಗೆ ಹಾಗೂ ಬಸ್ ನಿಲ್ದಾಣ ವೃತ್ತದಲ್ಲಿ ಹೊಸ ನಾಮಫಲಕ ಅನಾವರಣಗೊಳಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ Manappa D Vajjal ಅವರು ಲಿಂಗಸುಗೂರು ನಗರದ ಹಲವು ವೃತ್ತಗಳಲ್ಲಿ ಏಕಾಏಕಿ ಘೋಷಣೆಗೊಂಡ ನಾಮಫಲಕಗಳ ಬಗ್ಗೆ ಮಾತನಾಡಿದರು.
ಅವರು ನಾಮಫಲಕಗಳ ಸ್ಥಾಪನೆ ಕುರಿತು ಸ್ಪಷ್ಟತೆ ಮತ್ತು ಕ್ರಮಬದ್ಧತೆ ಅಗತ್ಯವಿದೆ ಎಂದು ತಿಳಿಸಿದರು.

13/04/2026

ಹಟ್ಟಿ ಪಟ್ಟಣದಲ್ಲಿ ನಡೆಯಲಿರುವ ರಾಮನವಮಿ ಉತ್ಸವದ ಸಿದ್ಧತೆಗಳು ಜೋರಾಗಿ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರಘುಗೌಡ ನಾಯಕ ಅವರನ್ನು ಸಂಗೊಳ್ಳಿ ರಾಯಣ್ಣ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಸುರೇಶ್ ಕೃಷ್ಣ ಗೋಕಾಕ್ ಭೇಟಿ ಮಾಡಿ ಕಾರ್ಯಕ್ರಮದ ಕುರಿತು ಮಾಹಿತಿ ಪಡೆದರು.
ಉತ್ಸವಕ್ಕೆ ತಾವು ಭಾಗವಹಿಸುವುದಾಗಿ ತಿಳಿಸಿದ ಸುರೇಶ್ ಕೃಷ್ಣ ಗೋಕಾಕ್, ಬಳಿಕ ಲಿಂಗಸುಗೂರು ನಗರಕ್ಕೂ ಭೇಟಿ ನೀಡಿ ರಾಮನವಮಿ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದರು.

ವರದಿಗಾರರು ಬೇಕಾಗಿದ್ದಾರೆ ಆಸಕ್ತರು ಸಂಪರ್ಕಿಸಿ..
13/04/2026

ವರದಿಗಾರರು ಬೇಕಾಗಿದ್ದಾರೆ ಆಸಕ್ತರು ಸಂಪರ್ಕಿಸಿ..

Address

Mysore

Alerts

Be the first to know and let us send you an email when Kannada Today posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Today:

Shortcuts

Share