Kannada News Next

Kannada News Next ತಾಜಾ‌ ಸುದ್ದಿ, ನಿಖರ ಮಾಹಿತಿ, ಖಡಕ್ ವಿಶ್ಲೇಷಣೆ

09/01/2026

TOP NEWS | ಉಡುಪಿಯಲ್ಲಿ ಪರ್ಯಾಯ‌ಕ್ಕೆ ದಿನಗಣನೆ ಆರಂಭ|
ಮರುಜೀವ ಪಡೆಯುತ್ತಿದೆ ಚಿನ್ನಸ್ವಾಮಿ ಸ್ಟೇಡಿಯಂ

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

ಉಡುಪಿಯಲ್ಲಿ ನಾಡಹಬ್ಬ ಪರ್ಯಾಯಕ್ಕೆ ದಿನಗಣನೆ ಆರಂಭವಾಗಿದೆ. ಶಿರೂರು ಮಠದ ವೇದವರ್ಧನ ಶ್ರೀಗಳು ಉಡುಪಿಗೆ ಪುರ ಪ್ರವೇಶ ಮಾಡಿದ್ದು, ಅವರ ಮೊದಲ ಪರ್ಯಾಯಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಧಾರ್ಮಿಕ ವಿಧಿವಿಧಾನಗಳು, ಹೊರೆಕಾಣಿಕೆಗಳು ಹಾಗೂ ಭಕ್ತರ ಸಂಭ್ರಮಕ್ಕೆ ಉಡುಪಿ ಸಜ್ಜಾಗಿದೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

PROMO | ಮಾರಣಕಟ್ಟೆ ಮಕರ ಸಂಕ್ರಮಣ ಜಾತ್ರೋತ್ಸವ

ಬನ್ಮಿ ಪಾಲ್ಗೊಳ್ಳಿ

ಜನವರಿ 14, 15,16

ನೇರಪ್ರಸಾರ ವೀಕ್ಷಿಸಲು ಈ ಕೆಳಗಿ‌ನ ಲಿಂಕ್ ಕ್ಲಿಕ್ ಮಾಡಿ

https://www.youtube.com/live/E4lFb4vP0o4?si=O-IYYEoBv4G9rHbC

09/01/2026

RCB ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ನವೀಕರಣ ಕಾರ್ಯದಿಂದ ಚಿನ್ನಸ್ವಾಮಿ ಸ್ಟೇಡಿಯಂ ಮರುಜೀವ ಪಡೆಯುತ್ತಿದ್ದು, ಶೀಘ್ರದಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ. ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಜ್ಜಾಗುತ್ತಿದೆ ಕ್ರೀಡಾಂಗಣ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

ರಾಜ್ಯ ಸರ್ಕಾರ ಸಂಕ್ರಾಂತಿ ಉಡುಗೊರೆಯಾಗಿ ಬಿ ಖಾತಾಗಳಿಗೆ ಎ ಖಾತೆ ನೀಡಲು ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಆಸ್ತಿ ಮಾಲೀಕರಿಗೆ ದೊಡ್ಡ ರಿಲೀಫ್ ಸಿಗಲಿದೆ. ಆಸ್ತಿ ನೋಂದಣಿ ಹಾಗೂ ಕಾನೂನು ಸಮಸ್ಯೆಗಳಿಗೆ ಪರಿಹಾರ ನಿರೀಕ್ಷೆ ಮೂಡಿದೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಣಕಾಸು ಇಲಾಖೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

ಮನರೇಗಾ ಯೋಜನೆ ರದ್ದು ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಸಿದ್ದು ಸರ್ಕಾರ ತೀವ್ರವಾಗಿ ಸಿಡಿದೆದ್ದಿದೆ. ವಿಶೇಷ ಅಧಿವೇಶನ ಕರೆದಿದ್ದು, ವಿಬಿ ಜಿ ರಾಮ್ಜಿ ಕಾಯ್ದೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಕೇಂದ್ರ–ರಾಜ್ಯ ನಡುವಿನ ರಾಜಕೀಯ ಸಮರ ಮತ್ತಷ್ಟು ತೀವ್ರಗೊಂಡಿದೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

ಕೇರಳದಲ್ಲಿ ಕನ್ನಡ ಶಾಲೆಗಳ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕಾಸರಗೋಡು ಪ್ರದೇಶದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಿದ್ದು, ಕನ್ನಡದ ಸ್ಥಾನಮಾನ ಉಳಿಸಬೇಕು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ಕೇರಳ ಸರ್ಕಾರದ ದ್ವಂದ್ವ ನೀತಿಯನ್ನು ಟೀಕಿಸಿದ ಅವರು, ಕನ್ನಡವನ್ನು ಕೊನೆಗಾಣಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರ ಜಾಹೀರಾತು ನೀಡಿರುವುದು ತಪ್ಪು ಹಾಗೂ ಅಕ್ಷೇಪಾರ್ಹ ಎಂದು ಅವರು ಹೇಳಿದ್ದಾರೆ. ಸರ್ಕಾರದ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ ಕಟೀಲ್, ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಮೇಲೂ ಟೀಕೆ ನಡೆಸಿದ್ದಾರೆ.

ಕೇರಳ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸ್ಪಷ್ಟ ಎಚ್ಚರಿಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಕುಸಿತಗೊಂಡಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ 15 ವರ್ಷಗಳಲ್ಲಿ ಕಾಣದಷ್ಟು ಚಳಿ ಅನುಭವಿಸುತ್ತಿರುವ ನಗರದಲ್ಲಿ ಜನಜೀವನದ ಮೇಲೆ ಪರಿಣಾಮ ಕಂಡುಬಂದಿದೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

09/01/2026

ಮಾರಣಕಟ್ಟೆ ಜಾತ್ರೆ ಯಾವಾಗ ?

ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರ ಮಾರಣಕಟ್ಟೆಯಲ್ಲಿ ಮಕರ ಸಂಕ್ರಮಣ ಜಾತ್ರೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಜನವರಿ 14ರಿಂದ ಮೂರು ದಿನಗಳ ಕಾಲ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಕ್ರಮಣ ಜಾತ್ರೆಗೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

08/01/2026

ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಶಾಲೆಯಲ್ಲಿ ಬಿದ್ದು ಗಾಯಗೊಂಡ ಬಾಲಕನು ಮನೆಯಲ್ಲಿ ಬೈಯುತ್ತಾರೆ ಎಂಬ ಹೆದರಿಕೆಯಿಂದ ಮನೆಗೆ ತೆರಳದೆ ಕಾಣೆಯಾಗಿದ್ದು, ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಹಾಗೂ ಊರವರು ರಾತ್ರಿ ಕತ್ತಲೆಯಲ್ಲಿ ಹುಡುಕಾಟ ನಡೆಸಿ ಮನೆ ಪಕ್ಕದ ಬೆಣ್ಣೆಗಿರಿ ಎಂಬ ನಿರ್ಜನ ಗುಡ್ಡೆ ಪ್ರದೇಶದಲ್ಲಿ ಅವಿತುಕೊಂಡಿದ್ದ ಬಾಲಕನನ್ನು ಕೆಲವೇ ಕ್ಷಣಗಳಲ್ಲಿ ಸುರಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ; ಪೊಲೀಸರ ವಿಶೇಷ ಮುತುವರ್ಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

08/01/2026

ಬ್ರಹ್ಮಾವರದ ನೀಲಾವರದಲ್ಲಿ ನೀಲಾವರ–ಮಟಪಾಡಿ ಮಾರ್ಗದ ಬಳಿ ಬೆಂಕಿ ಅವಘಡ ಸಂಭವಿಸಿ, ಫಲವತ್ತಾದ ಕೃಷಿ ಜಮೀನು ಸುಟ್ಟು ಕರಕಲಾಗಿದ್ದು ಅಡಿಕೆ, ಹಲಸು ಹಾಗೂ ತೆಂಗಿನ ಮರಗಳು ಸಂಪೂರ್ಣ ನಾಶವಾಗಿವೆ; ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸುವಂತೆ ಸ್ಥಳೀಯರಿಂದ ಒತ್ತಡ ಹೆಚ್ಚಾಗಿದೆ.

NewsNextExclusive
Next Kannada YouTube Channel

if You Like our Video Please Subscribe our You tube Channel News Next Kannada
https://www.youtube.com/

Address

Udupi

Alerts

Be the first to know and let us send you an email when Kannada News Next posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada News Next:

Share