ಹೊಸಕಿರಣ_Hosakiran

  • Home
  • ಹೊಸಕಿರಣ_Hosakiran

ಹೊಸಕಿರಣ_Hosakiran ನೈಜ ಸುದ್ದಿಗಳ ಹೂರಣ

*ಕರ್ನಾಟಕ ಪತ್ರಕರ್ತಕರ ಸಂಘದಿಂದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಾಗೂ ಮಾಧ್ಯಮ ಸಂವಾದ  ಮತ್ತು ೧ ದಿನದ ರಾಷ್ಟ್ರೀಯ ಮಾಧ್ಯಮ ಅಧ್ಯಯನ ಶಿಬಿರ ಕಾರ್ಯ...
03/01/2025

*ಕರ್ನಾಟಕ ಪತ್ರಕರ್ತಕರ ಸಂಘದಿಂದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಾಗೂ ಮಾಧ್ಯಮ ಸಂವಾದ ಮತ್ತು ೧ ದಿನದ ರಾಷ್ಟ್ರೀಯ ಮಾಧ್ಯಮ ಅಧ್ಯಯನ ಶಿಬಿರ ಕಾರ್ಯಕ್ರಮ*

https://hosakirana.com/2025/01/03/2025-10/

*ಭ್ರಷ್ಟರ ಬೇಟೆ ಪತ್ರಿಕೆಯ ಹೊಸ ವರ್ಷದ ಸಂಚಿಕೆ ಸ್ವೀಕರಿಸಿ ಶುಭ ಹಾರೈಸಿದ ರಾಜ್ಯ ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ*

https://hosakirana.com/2025/01/03/2025-11/

*ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ*

https://hosakirana.com/2025/01/03/2025-12/

*ಮಣೂರು ಪಡುಕರೆ ಪ್ರೌಢಶಾಲೆ - ಹಾವು-ನಾವು ಕಾರ್ಯಕ್ರಮ*
ಹಾವುಗಳು ಪ್ರಕೃತಿಯ ಒಡಲಿನ ಒಡನಾಡಿ : ಗುರುರಾಜ್ ಸನಿಲ್*

https://hosakirana.com/2025/01/03/2025-13/

*ಉಡುಪ-ಹಂದೆ ಪ್ರಶಸ್ತಿಗೆ ಆಯ್ಕೆ*
https://hosakirana.com/2025/01/03/2025-14/

*ತೆಕ್ಕಟ್ಟೆ- ಸೇವಾಸಂಗಮದ ವಿದ್ಯಾರ್ಥಿ ಚಿನ್ಮಯಿ ರಾಜ್ಯಮಟ್ಟಕ್ಕೆ ಆಯ್ಕೆ*

https://hosakirana.com/2025/01/03/2024-1114/

06/11/2023

ಸಿದ್ದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ  ಸಿದ್ದಾಪುರ  ಗ್ರಾಮದ ಹಿಂದಿನ ಗ್ರಾಮ ಲೆಕ್ಕಿಗ (V. A) ಸ್ಥಳೀಯ  ಪ್ರಭಾವಿ ವ್ಯಕ್ತಿಗ.....

*ದಲಿತ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ವತಿಯಿಂದ ಸಂವಿಧಾನ ಶಿಲ್ಪಿ, ವಿಶ್ವನಾಯಕ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ*
14/04/2023

*ದಲಿತ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ವತಿಯಿಂದ ಸಂವಿಧಾನ ಶಿಲ್ಪಿ, ವಿಶ್ವನಾಯಕ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ*

ತೆಕಟ್ಟೆ : ದಲಿತ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ವತಿಯಿಂದ ಸಂವಿಧಾನ ಶಿಲ್ಪಿ, ವಿಶ್ವನಾಯಕ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರ...

*ಕೋಟ ಪಂಚವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಆಸಾಡಿ ವಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಗ್ರಾಮ್ಯ ಭಾಷೆಯ ಬಗ್ಗೆ ಕೀಳರಿಮೆ ಸಲ್ಲ – ಜಯರಾಮ ಶೆಟ್ಟಿ*...
31/07/2022

*ಕೋಟ ಪಂಚವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಆಸಾಡಿ ವಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಗ್ರಾಮ್ಯ ಭಾಷೆಯ ಬಗ್ಗೆ ಕೀಳರಿಮೆ ಸಲ್ಲ – ಜಯರಾಮ ಶೆಟ್ಟಿ*

https://hosakirana.com/2022/07/31/2022-1003/

ಕೋಟ:ಗ್ರಾಮೀಣ ಭಾಷೆಗಳ ಬಗ್ಗೆ ಯಾರಿಗೂ ಕೀಳರಿಮೆ ಇರಬಾರದು ಅದರ ಶ್ರೇಷ್ಠತೆ ಅಳಯಲು ಸಾಧ್ಯವಿಲ್ಲ ಎಂದು ಗ್ರಾಮ್ಯ ಭಾಷೆಯ ಸೋಗಡುಗಾರ ಎಂ......

ಶಿರಿಯಾರ ಕುಂದಾಪ್ರ ಕಂಬಳೋತ್ಸವ ಕುಂದಾಪುರ ಕನ್ನಡ ದಿನಾಚರಣೆ ಪ್ರಯುಕ್ತ *ಟೀಮ್ ಕುಂದಪ್ರಿಯನ್ಸ್ ಆಶ್ರಯದಲ್ಲಿ ಶಿರಿಯಾರದಲ್ಲಿ ಕುಂದಾಪುರ ಕಂಬಳೋತ್...
31/07/2022

ಶಿರಿಯಾರ ಕುಂದಾಪ್ರ ಕಂಬಳೋತ್ಸವ ಕುಂದಾಪುರ ಕನ್ನಡ ದಿನಾಚರಣೆ ಪ್ರಯುಕ್ತ *ಟೀಮ್ ಕುಂದಪ್ರಿಯನ್ಸ್ ಆಶ್ರಯದಲ್ಲಿ ಶಿರಿಯಾರದಲ್ಲಿ ಕುಂದಾಪುರ ಕಂಬಳೋತ್ಸವ ಕಾರ್ಯಕ್ರಮ ಜರುಗಿತು.

ಬಸ್ರೂರು ಮಹಾಲಿಂಗೇಶ್ವರ ದೇಗುಲದ ಸ್ಥಾಪನಾ ಸಮಿತಿ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಚಾಲನೆ ನೀಡಿ ,ನಮ್ಮ ಭಾಷೆ -ಆಚರಣೆ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದರು. ಪತ್ರಕರ್ತೆ ರಾಧಾ ಹಿರೇಗೌಡರ್, ಬಿಜೆಪಿ ಯುವ ನಾಯಕ ಪೃಥ್ವಿರಾಜ್ ಶೆಟ್ಟಿ ಬಿರ್ಲಾಡಿ, ಮಾತನಾಡಿದರು. ಟೀಮ್ ಕುಂದಾಪ್ರಿಯನ್
ತಂಡದ ಮುಖ್ಯಸ್ಥ ರಂಜಿತ್ ಶಿರಿಯಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರದ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು ಗೌರವಿಸಲಾಯಿತು.

ಶಿರಿಯಾರದ ರಾಮ ಮಂದಿರದಿಂದ ಕಂಬಳ ಗದ್ದೆಯ ತನಕ ಅದ್ದೂರಿ ಮೆರವಣಿಗೆ ನಡೆಯಿತು. ಅನಂತರ ಕುಂದಾಪ್ರ ಕಂಬಳೋತ್ಸವ ಗದ್ದೆ ಪೂಜೆಗೆ ಚಾಲನೆ ನೀಡಲಾಯಿತು.

ಚೇತನ್ ನೆಲ್ಯಾಡಿ ಮತ್ತು ತಂಡದವರಿಂದ ಹೆಂಗ್ಸರ್ ಪಂಚೇತಿ ಎನ್ನುವ ಕುಂದಕನ್ನಡ ಪ್ರಹಸನ ಗಮನ ಸೆಳೆಯಿತು. ಸುಮಾರು 8 ಜೊತೆ ಕೋಣಗಳ ಉಪಸ್ಥಿತಿಯಲ್ಲಿ ಕೋಣಗಳ ಕಂಬಳದ ಓಟ ನೋಡುಗರ ಗಮನ ಸೆಳೆಯಿತು. ಕೆಸರು ಗದ್ದೆ ಓಟ,ಮೂರು ಕಾಲು ಓಟ, ಹಿಮ್ಮುಖ ಓಟ ಹಗ್ಗಜಗ್ಗಾಟ ಮುಂತಾದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ನೆಡೆದವು.

ಈ ಸಂದರ್ಭದಲ್ಲಿದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೋವಿಂದ ಬಾಬು ಪೂಜಾರಿ ನಿವ್ರತ್ತ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಸಿರಿಯಾರ ಉದ್ಯಮಿ ಗಣೇಶ್ ಪ್ರಸಾದ್ ಗ್ರಾಮ್ ಪಂಚಾಯತ್ ಅಧ್ಯಕ್ಷರು, ಟೀಮ್ ಕುಂದಾಪುರದ ಸರ್ವಸದಸ್ಯರ ಗಣ್ಯಾತಿಗಣ್ಯರು ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು..

*ರೋಟರಿ ಉಡುಪಿ ರೋಯಲ್ & ಲಯನ್ಸ್ ಮಣಿಪಾಲ ಯುಕ್ತಿ ಕ್ಲಬ್*  *ಅವರ ಜಂಟಿ ಆಶ್ರಯದಲ್ಲಿ ಉಡುಪಿ ಪಂದುಬೆಟ್ಟು ನಿವಾಸಿ ತೇಜಾವತಿ ಪೂಜಾರಿ ಅವರಿಗೆ ವೀಲ...
29/07/2022

*ರೋಟರಿ ಉಡುಪಿ ರೋಯಲ್ & ಲಯನ್ಸ್ ಮಣಿಪಾಲ ಯುಕ್ತಿ ಕ್ಲಬ್* *ಅವರ ಜಂಟಿ ಆಶ್ರಯದಲ್ಲಿ ಉಡುಪಿ ಪಂದುಬೆಟ್ಟು ನಿವಾಸಿ ತೇಜಾವತಿ ಪೂಜಾರಿ ಅವರಿಗೆ ವೀಲ್ ಚೇರ್ ಹಾಗೂ ದಿನದ ನಿತ್ಯದ ಅಗತ್ಯ ಸಾಮಗ್ರಿಗಳನ್ನು ನೀಡಲಾಯಿತು...*
*ಈ ಸಂಧರ್ಭದಲ್ಲಿ ಬಾಲಕೃಷ್ಣ ಮದ್ದೋಡಿ, ರತ್ನಾಕರ್ ಇಂದ್ರಾಳಿ, ತೇಜೇಶ್ವರ್ ರಾವ್, ಪೂರ್ಣಿಮಾ ಶೆಟ್ಟಿ, ಗಾಯತ್ರಿ ನಾಯಕ್, ದಯಾಶಿನಿ ಪಂದುಬೆಟ್ಟು ,ಲತಾ ಭಟ್ ಉಪಸ್ಥಿತರಿದ್ದರು.*
*ತೇಜಾವತಿ ಪೂಜಾರಿ ಯವರು ಸುಮಾರು ವರ್ಷಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದು ವಿಧವೆಯಾಗಿದ್ದಾರೆ. ಅವರ ಸಮಸ್ಯೆಯನ್ನು ನೋಡಿ ಸ್ಥಳೀಯ ಸಮಾಜ ಸೇವಕರು ಮಾಜಿ‌ ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ದಯಾಶಿನಿ ಪಂದುಬೆಟ್ಟು ಅವರ ಮುತುವರ್ಜಿಯಿಂದ ಲಯನ್ಸ್ ಮಣಿಪಾಲ ಯುಕ್ತಿ ಕ್ಲಬ್ ಮತ್ತು ರೋಟರಿ ಉಡುಪಿ ರೋಯಲ್ ಯವರ ಸಹಕಾರದಿಂದ ಸಹಾಯ ಹಸ್ತ ನೀಡಲಾಯಿತು. ಈ ಕುಟುಂಬಕ್ಕೆ ಮನೆಯೂ ಕ್ಷಿತಿಲ ಅವಸ್ಥೆಯಲ್ಲಿ ಇದ್ದು ದಾನಿಗಳಿಂದ ಇನ್ನಷ್ಟು ಸಹಾಯ ಹಸ್ತ ನಿರೀಕ್ಷೆ ಮಾಡಲಾಗಿದೆ.*
*ದಾನಿಗಳಿಗೆ ಅವರ ವಿಳಾಸ & ಬ್ಯಾಂಕ್ ಖಾತೆ ವಿವರ:*
*ತೇಜಾವತಿ*
W/o ದಿ! ಸುದರ್ಶನ್ ಪೂಜಾರಿ
ಮನೆ ನಂಬ್ರ 1-51ಡಿ
ಪಂದುಬೆಟ್ಟು
ಅಂಬಲಪಾಡಿ ಪೋಸ್ಟ್
ಮೂಡನಿಡಂಬೂರು
ಉಡುಪಿ- 576103
*ಮೊಬೈಲ್;9731497047*
*CANARA BANK*
*Branch NEW MARKET* *YARD Udupi*
*Account Number:*
*02072210033290*
*IFSC CODE:*
*CNRB0010207*

*ಈ ದಿನ ಹುಬ್ಬಳ್ಳಿಯಲ್ಲಿ ನಡೆದ ಈಡಿಗ ಬಿಲ್ಲವ ನಾಮಧಾರಿ ಸಮುದಾಯಗಳ ಪೂಜ್ಯ ಸ್ವಾಮೀಜಿಗಳು ಹಾಗೂ ಸಮುದಾಯದ ಪ್ರಮುಖ ಸಭೆಯಲ್ಲಿ ಸಮಾಜದ ಶ್ರೇಯಾಭಿವೃದ...
25/07/2022

*ಈ ದಿನ ಹುಬ್ಬಳ್ಳಿಯಲ್ಲಿ ನಡೆದ ಈಡಿಗ ಬಿಲ್ಲವ ನಾಮಧಾರಿ ಸಮುದಾಯಗಳ ಪೂಜ್ಯ ಸ್ವಾಮೀಜಿಗಳು ಹಾಗೂ ಸಮುದಾಯದ ಪ್ರಮುಖ ಸಭೆಯಲ್ಲಿ ಸಮಾಜದ ಶ್ರೇಯಾಭಿವೃದ್ಧಿಗಾಗಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು*

ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳು
1. ಕುಲಕಸುಬು ಸೆಂದಿ ಬಗ್ಗೆ ಚರ್ಚಿಸಿ ರಾಜ್ಯದಲ್ಲಿ ಎಲ್ಲಿ ಎಲ್ಲಿ ಈಚಲು ಮರ ತೆಂಗಿನ ಮರ ತಾಳೆಮರ ಇದೆಯೊ ಅಲ್ಲಿ ಸೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ ರಾಜ್ಯ ಸರ್ಕಾರ ಮಂಗಳೂರು ಉಡುಪಿಯ ಮಾದರಿಯಲ್ಲಿ ಅನುಮತಿ ನೀಡಬೇಕೆಂದು ಸರಕಾರಕ್ಕೆ ಒತ್ತಡ ತಂದು ಅನುಮತಿ ಪಡೆಯಲು ಒಮ್ಮತದಿಂದ ಸಭೆಯಲ್ಲಿ ನಿರ್ಧರಿಸಲಾಯಿತು.

2. ಈಗ ಬಿಲ್ಲವ ನಾಮಧಾರಿ ಸಮಾಜ ಕೆಟಗರಿ 2Aಯಲ್ಲಿದೆ. ಸದರಿ ಕೆಟಗರಿಯಿಂದ ಹೆಚ್ಚಿನ ಮೀಸಲಾತಿ ಪಡೆಯುವ ದೃಷ್ಟಿಯಲ್ಲಿ ಪ್ರವರ್ಗ I ಅಥವಾ ಎಸ್ ಟಿ ಹೋಗುವುದಕ್ಕೆ ಕಾನೂನು ತೊಡಕುಗಳನ್ನು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆದು ಎರಡು ತಿಂಗಳ ಒಳಗಡೆ ವರದಿಯನ್ನು ನೀಡುವುದಕ್ಕೆ ಆರು ಜನ ಹಿರಿಯ ಪ್ರಮುಖರಿಗೆ ಜವಾಬ್ದಾರಿ ನೀಡಲಾಯಿತು.

3. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮವನ್ನು ಘೋಷಿಸುವುದಕ್ಕೆ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ತೆಗೆದುಕೊಳ್ಳಲಾಯಿತು.

4. ಕುಲ ಬಾಂಧವರನ್ನು ರಾಜಕೀಯವಾಗಿ ಅರಿವು ಮೂಡಿಸುವುದು ನಮ್ಮ ಸಮುದಾಯದ ಕುಲಬಾಂಧವರ ಪ್ರತಿಯೊಂದು ಮತವು ಕೂಡ ಮುಂದಿನ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮುದಾಯ ನಿರ್ಣಾಯಕವಾಗಿರುವ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವುದು ನಿರಂತರವಾಗಿ ನಡೆಸುವುದಕ್ಕೆ ಸಭೆಯಲ್ಲಿ ನಿರ್ಣಯಿಸಲಾಯಿತು.

5. ಮೂರು ತಿಂಗಳಿಗೊಮ್ಮೆ ಈಡಿಗ ಬಿಲ್ಲವ ನಾಮಧಾರಿ ಸಮುದಾಯಗಳ ಸ್ವಾಮೀಜಿಗಳು ಹಾಗೂ ಸಮುದಾಯದ ಪ್ರಮುಖರು ಸಮುದಾಯದ ಶ್ರೇಯಾ ಅಭಿವೃದ್ಧಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸೇರಿ ಸಭೆ ನಡೆಸಿ ಸರ್ಕಾರದ ಗಮನವನ್ನು ಸೆಳೆಯುವುದಕ್ಕೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ದಿನದ ಸಭೆಯಲ್ಲಿ ಸಮಾಜದ ಗುರುಗಳಾದ ಶ್ರೀಶ್ರೀಶ್ರೀ ಪ್ರಣವಾನಂದ ಸ್ವಾಮೀಜಿಗಳು ಅಧ್ಯಕ್ಷತೆಯನ್ನು ವಹಿಸಿ ರಾಷ್ಟ್ರೀಯ ಬಿಲ್ಲವ ಮಹಾಮಂಡಳಿಯ ಉಪಾಧ್ಯಕ್ಷರಾಗಿರುವ ಶ್ರೀ ಪ್ರೀತಾಂಬರ ಹೆರಾಜೆ, ಆರ್ಯ ಈಡಿಗ ಕೇಂದ್ರ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಗುತ್ತೇದಾರ್, SNGV ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸತ್ಯಜಿತ್ ಸುರತ್ಕಲ್, ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ವೆಂಕಟೇಶ ಗುಂಡನೂರ್, ಪ್ರದೇಶ್ ಈಡಿಗ ಸಂಘದ ಸದಸ್ಯರುಗಳಾದ ಶ್ರೀ ಮಂಜುನಾಥ ಇಳಿಗೆರ್, ಶ್ರೀ ರವಿ ಇಳಿಗೆರ್, ಶಿವಪ್ಪ ಇಳಿಗೆರ್, ನಾಮಧಾರಿ ಸಮಾಜದ ಅಧ್ಯಕ್ಷರಾದ ಶ್ರೀ ಟಿ ಡಿ ನಾಯ್ಕ್, ಶ್ರೀ ಸಚಿನ್ ನಾಯ್ಕ್, ಕುದ್ರೋಳಿ ದೇವಸ್ಥಾನದ ಕೋಶಾಧ್ಯಕ್ಷರು ಹಾಗೂ ಹಿರಿಯ ವಕೀಲರಾಗಿರುವ ಶ್ರೀ ಪದ್ಮರಾಜ್, ಹಿರಿಯ ಬಿಲ್ಲವ ನಾಯಕರಾದ ಶ್ರೀ ಶಂಕರ್ ಪೂಜಾರಿ, ಶ್ರೀ ಬಿಹೆಚ್ ಮಂಚೇಗೌಡರು, ಶ್ರೀ ವೆಂಕಟೇಶ್ ಕಡೆಚೂರು, ಶ್ರೀ ಮಹದೇವಪ್ಪ ಗುತ್ತೇದಾರ್ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದ ಈಡಿಗ ಬಿಲ್ಲವ ನಾಮಧಾರಿ ಸಮಾಜದ ಅನೇಕ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಜುಲೈ 30ನೇ ತಾರೀಕಿನೊಳಗಡೆ ಹಿರಿಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಸಚಿವರಾದ ಶ್ರೀ ಸುನಿಲ್ ಕುಮಾರ್ ಮತ್ತು ಸಮಾಜದ ಶಾಸಕರುಗಳ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ ಸಮುದಾಯದ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಕ್ಕೆ ನಿರ್ಣಯ ತೆಗೆದುಕೊಳ್ಳಲಾಯಿತು.

Address


Opening Hours

Monday 09:00 - 17:00
Tuesday 09:00 - 17:00
Wednesday 09:00 - 17:00
Thursday 09:00 - 17:00
Friday 09:00 - 17:00
Saturday 09:00 - 17:00

Telephone

9738894499

Alerts

Be the first to know and let us send you an email when ಹೊಸಕಿರಣ_Hosakiran posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹೊಸಕಿರಣ_Hosakiran:

Shortcuts

  • Address
  • Telephone
  • Opening Hours
  • Alerts
  • Contact The Business
  • Claim ownership or report listing
  • Want your business to be the top-listed Media Company?

Share