Hosa Navika - ಹೊಸ ನಾವಿಕ

  • Home
  • Hosa Navika - ಹೊಸ ನಾವಿಕ

Hosa Navika - ಹೊಸ ನಾವಿಕ ಸುದ್ದಿ ನಿಖರ : ನಿಲುವು ಜನಪರ

ಶಿವಮೊಗ್ಗ  ಡಿಸಿ ಕಚೇರಿ ಪುರುಷರ ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಅವಧಿ ಮುಗಿದ ಸ್ಯಾನಿಟೈಸರ್ - ೨೦೨೧ರ ಜನಗಣತಿ ಕೈಚೀಲಗಳ ರಾಶಿ...!(ವಿಶೇಷ ವರದಿ: ...
06/08/2025

ಶಿವಮೊಗ್ಗ ಡಿಸಿ ಕಚೇರಿ ಪುರುಷರ ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಅವಧಿ ಮುಗಿದ ಸ್ಯಾನಿಟೈಸರ್ - ೨೦೨೧ರ ಜನಗಣತಿ ಕೈಚೀಲಗಳ ರಾಶಿ...!
(ವಿಶೇಷ ವರದಿ: ರಾಕಶ್ ಡಿಸೋಜ, ಮೊ: 94483 43211)
ಶಿವಮೊಗ್ಗ : ಶೈಕ್ಷಣಿಕ ನಗರಿ ಎಂದು ಹೆಸರಾಗಿರುವ ಶಿವಮೊಗ್ಗ ನಗರದಲ್ಲಿ ಜಿಧಿಕಾರಿಗಳ ಕಚೇರಿ ಶಿಸ್ತು, ಶುದ್ಧತೆ, ಸ್ವಚ್ಚತೆ ಮತ್ತು ಸಕಾರಾತ್ಮಕ ಆಡಳಿತದ ಸಂಕೇತವಾಗಿರ ಬೇಕಾದ ಸ್ಥಳ. ಡಿಸಿ ಕಛೇರಿ ಎಂದರೆ ಇದು ಜಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿ ಕಚೇರಿಯಾಗಿ ರಾಜಕೀಯ, ಆಡಳಿತಾತ್ಮಕ ನಿರ್ಧಾರಗಳ ಕೇಂದ್ರ ವಾಗಿದೆ. ಇದು ಜಿಯ ಹೃದಯ ಭಾಗದಲ್ಲಿರುವ ಆಡಳಿತದ ಕೇಂದ್ರ ಬಿಂದು. ಪ್ರತಿ ದಿನ ನೂರಾರು ನಾಗರಿಕರು ತಮ್ಮ ದೈನಂದಿನ ಬೇಡಿಕೆ, ಅರ್ಜಿ ಹಾಗೂ ದಾಖಲೆಗಳೊಂದಿಗೆ ತಮ್ಮ ನಾನಾ ಸಮಸ್ಯೆಗಳ ಪರಿಹಾರಕ್ಕಾಗಿ ಈ ಕಛೇರಿಗೆ ಬರುತ್ತಾರೆ. ಆದರೆ ಈ ಕಛೇರಿ ಕಟ್ಟಡದ ಕೆಳ ಅಂತಸ್ತಿನಲ್ಲಿ ಪುರುಷರು ಬಳಸುವ ಶೌಚಾಲಯದ ಸ್ಥಿತಿ ಮಾತ್ರ ಆಘಾತಕಾರಿಯಾಗಿದ.
ಈ ಕಚೇರಿಯ ಶೌಚಾಲಯದ ಸ್ಥಿತಿಗತಿ ನೋಡಿದರೆ, ಆಡಳಿತದ ಮುಖವಾಣಿ ಹಿಂದೆ ಇರುವ ನಿರ್ಲ ಕ್ಷ್ಯದ ಕಹಿ ಯಥಾರ್ಥ ಸ್ಪಷ್ಟವಾಗುತ್ತದೆ.
ಈ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿರುವ (ಕೊಠಡಿ ಸಂಖ್ಯೆ ಎ-೦೪) ಪುರುಷರ ಶೌಚಾಲಯದ ದುಸ್ಥಿತಿ ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ಅಕ್ಷರಷಃ ಅನಾವರಣ ಗೊಳಿಸುತ್ತಿದೆ. ಇಲ್ಲಿ ಅವಧಿ ಮುಗಿದ ಸ್ಯಾನಿಟೈಸರ್‌ಗಳ ರಾಶಿ, ೨೦೨೧ರ ಜನಗಣತಿ ಕಾರ್ಯಕ್ಕೆ ಬಳಸಬೇಕಿದ್ದ ಕೈಚೀಲಗಳು, ಗಬ್ಬುನಾತ, ಸ್ವಚ್ಛತೆಯ ಕೊರತೆ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅಪಮಾನದ ಅನುಭವ ನೀಡುತ್ತಿದ್ದು, ಆರೋಗ್ಯದ ಮೇಲೆ ನೇರವಾಗಿ ಕರೆ ನೆರಳು ಬೀರುತ್ತಿದೆ.
ಎಲ್ಲೆಂದರಲ್ಲಿ ಅವಧಿ ಮುಗಿದ ಸ್ಯಾನಿಟೈಸರ್ ಬಾಟಲ್‌ಗಳ ರಾಶಿ: ಈ ಶೌಚಾಲಯದ ಒಳಗೆ ಎಲ್ಲೆಂದ ರಲ್ಲಿ ಅವಧಿ ಮುಗಿದ, ಬಿಸಾಡಲಾಗದ ಹಳೆಯ ಸ್ಯಾನಿಟೈಸರ್ ಬಾಟಲ್‌ಗಳ ರಾಶಿ ಬಿದ್ದಿದೆ. ಇಲ್ಲಿಟ್ಟಿರುವ ಬಹುತೇ ಎಲ್ಲಾ ಬಾಟಲ್‌ಗಳು ಇನ್ನೂ ಬಳಕೆಯೇ ಮಾಡಿರುವುದಿಲ್ಲ. ಈ ಅವಧಿ ಮುಗಿದ ಬಾಟಲ್‌ಗಳ ರಾಶಿ ನೋಡಿದರೆ ಅವುಗಳ ಲೇಬಲ್ ತೆಗೆದು ಮರು ಬಳಕೆಗೆ ವಿತರಿಸುತ್ತಾರೆಯೇ ಎಂಬ ಬಲವಾದ ಅನುಮಾನಗಳು ಸಾರ್ವಜನಿಕರಲ್ಲಿ ಕಾಡತೊಡಗಿದೆ.
ಅಂತೆಯೇ ಇಲ್ಲಿ ಬಿದ್ದಿರುವ ೨೦೨೧ರ ಜನಗಣತಿಗೆ ಬಳಸಬೇಕಿದ್ದ ಕೈಚೀಲಗಳ ರಾಶಿಯೂ ಜಿಲ್ಲಾಡಳಿತದ ಆಡಳಿತ ವೈಖರಿಯ ನಿರ್ಲಕ್ಷ್ಯತೆ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ.
ಕಛೇರಿಯ ಗ್ರೌಂಡ್ ಫ್ಲೋರ್ ಒಳಗೆ ಕಾಲಿಟ್ಟ ತಕ್ಷಣವೇ ಮೂಗು ಮುಚ್ಚುವಂತಹ ದುರ್ವಾಸನೆ ಗ್ರಹಿಸುತ್ತಿದೆ. ಎಲ್ಲೆಂದರಲ್ಲಿ ಎಸೆದಿರುವ ಬಾಕ್ಸ್‌ಗಳು ಕಸದ ರಾಶಿ, ಫೈಲ್‌ಗಳು ಮತ್ತು ಸೆನ್ಸೆಕ್ಸ್‌ಗೆ ಬಳಸಲು ತಂದಿದ್ದ ಹೊಚ್ಚ ಹೊಸ ಚೀಲಗಳು ಇಲ್ಲಿ ಇದ್ದು, ಇಂತಹ ಟಾಯ್ಲೆಟ್‌ಗಳು 'ಪ್ರದರ್ಶನಕ್ಕೆ' ಇಟ್ಟಂತೆ ಇದೆ. ಕೋವಿಡ್ ಸಂದರ್ಭ ದಲ್ಲಿ ಖರೀದಿಸಿದ ಸ್ಯಾನಿಟೈಸರ್ ಬಾಟಲ್‌ಗಳು ಇನ್ನೂ ಬಳಕೆ ಆಗದೆ ಉಳಿದಿವೆ. ಅವುಗಳನ್ನು ಈಗಲೇ ವಿಲೆ ಮಾಡದಿದ್ದರೆ ಕೆಮಿಕಲ್ ದ್ರವ ಅಪಾಯಕಾರಿ ಯಾಗಿ ರೂಪಾಂತರ ಗೊಳ್ಳುವ ಸಾಧ್ಯತೆಯೂ ಇದೆ!.
ಕಛೇರಿಯಲ್ಲಿ ದಿನನಿತ್ಯದ ಕಸ ಮುಕ್ತ ಪರಿಸರ ನಿರ್ಮಿಸುವಲ್ಲಿ ಇಲ್ಲಿನ ಸಿಬ್ಬಂದಿಗಳ ಅಸಡ್ಡೆಯೇ ಪ್ರಮುಖ ಕಾರಣವಾಗಿದ್ದು, ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯವೂ ಅವರಿಗೆ ಸಪೋರ್ಟ್ ಮಾಡುತ್ತಿರುವಂತಿದೆ. ಈ ಕಚೇರಿಗೆ ಬರುವ ಸಾರ್ವಜನಿಕರು ಇಲ್ಲಿನ ಆಡಳಿತ ವ್ಯವಸ್ಥೆ ಕುರಿತು ತಮ್ಮ ಅಸಹನೆ ವ್ಯಕ್ತಪಡಿಸುತ್ತಿzರೆ.
ಈ ಸ್ಥಳವು ಶುದ್ಧತೆಯ ಕೊರತೆ ಯೊಂದಿಗೆ ಸೋಂಕಿನ ಮೂಲವಾಗಿ ಪರಿವರ್ತನೆ ಗೊಂಡಿದೆ. ಹಳೆಯ ಸ್ಯಾನಿಟೈಸರ್‌ಗಳು ಅವಧಿ ಮುಗಿದಿರು ವುದರಿಂದ ರಾಸಾಯನಿಕಗಳಾಗಿ ಪರಿವರ್ತನೆಯಾಗಬಹುದು. ಒಂದು ವೇಳೆ ಸ್ಪರ್ಶವಾದಲ್ಲಿ ಚರ್ಮದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಬಾಕ್ಟೀರಿಯಾ ಹಾಗೂ ಫಂಗಲ್ ಇನ್ಫೆಕ್ಷನ್ ಆಗುವ ಸಾಧ್ಯತೆಯೂ ಅಲ್ಲ ಗಳೆಯುವಂತಿಲ್ಲ. ಶೌಚಾಲಯ ವೆಂಬುದು ಸೋಂಕಿನ ಮೊದಲ ದಾರಿ. ಅವು ಶುದ್ಧವಿರದೇ ಇದ್ದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಇನ್ನಾದರೂ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಅವಧಿ ಮುಗಿದ ಸ್ಯಾನಿಟೈಸರ್ ಬಾಟಲ್‌ಗಳ ವಿಲೇವಾರಿ ಮಾಡುವ ಮೂಲಕ ಈ ಶೌಚಾಲಯವನ್ನು ಶುಚಿಗೊಳಿಸಬೇಕಿದೆ.
ಉಸ್ತುವಾರಿ ಸಚಿವರ ತವರು ಜಿಲ್ಲೆಯಲ್ಲೇ ಜಿಧಿಕಾರಿಗಳ ಕಚೇರಿಯ ಶೌಚಾಲಯದಲ್ಲಿ ಸ್ಯಾನಿಟೈಸರ್‌ಗಳ ರಾಶಿ, ಗಬ್ಬು, ದುರ್ವಾಸನೆ ಮತ್ತು ಶುದ್ಧತಾ ಸಮಸ್ಯೆ ಅದೆಷ್ಟೋ ಪಾರದರ್ಶಕ ಆಡಳಿತದ ಮಾತುಗಳಿಗೆ ಪೈಪೋಟಿ ನೀಡುವಂತೆ ತೋರಿಸುತ್ತದೆ. ಇದು ಸಣ್ಣ ವಿಷಯ ಎಂದು ತಿರಸ್ಕರಿಸಬೇಕಾದುದು ಅಲ್ಲ. ಇಷ್ಟು ದೊಡ್ಡ ಜಿಧಿಕಾರಿಗಳ ಕಚೇರಿಯಲ್ಲಿ ಈ ಮಟ್ಟದ ಅಜಾಗೃತಿ ಅಕ್ಷಮ್ಯ. ನಾಗರಿಕರಿಗೆ ಸೂಕ್ತ ಸೌಲಭ್ಯ ಕೊಡಲಾಗದಿದ್ದರೆ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆ ಕುಂದುವುದು ಖಚಿತ.
ಶಿವಮೊಗ್ಗ ಜಿಧಿಕಾರಿಗಳ ಕಚೇರಿ ನಗರದ ಆಡಳಿತದ ನಡಿಗೆ ತೋರಿಸುವ ಬೃಹತ್ ದರ್ಪಣ. ಆ ಕಚೇರಿಯ ಒಳಗಿರುವ ಶೌಚಾಲಯದ ದುಸ್ಥಿತಿ ಈ ದರ್ಪಣದಲ್ಲಿ ಕಾಣುತ್ತಿರುವ ಮಸುಕಾದ ಚಿತ್ರವಾಗಿದೆ. ಜಿಲ್ಲಾಧಿಕಾರಿಗಳೇ ಜಿಲ್ಲೆಯ ಪ್ರದಕ್ಷಿಣೆ ಮಾಡುವ ಮುನ್ನ ಒಮ್ಮೆ ತಮ್ಮದೇ ಆದ ಕಛೇರಿ ಕಟ್ಟಡದ ಪ್ರದಕ್ಷಿಣೆ ಹಾಕಿ, ಮೊದಲು ಅಲ್ಲಿನ ಅವ್ಯವಸ್ಥೆ ಸರಿಪಡಿಸಿ. ಈ ದುಸ್ಥಿತಿಯನ್ನು ಬದಲಾಯಿಸದಿದ್ದರೆ, ಇದು ಕೇವಲ ದೈಹಿಕ ಸಮಸ್ಯೆಗಳಷ್ಟೇ ಅಲ್ಲ, ಆಡಳಿತ ವ್ಯವಸ್ಥೆಯ ನೈತಿಕ ಕುಸಿತಕ್ಕೂ ಸೂಚನೆಯಾಗುತ್ತದೆ.
ನಮ್ಮ ನಿತ್ಯ ಸೇವೆಯ ಸ್ಥಳವೇ ಅಸಹ್ಯತೆಯ ಸಂಕೇತವಾದರೆ, ನಾವು ಸರ್ಕಾರದ ಭದ್ರತೆ ಯಲ್ಲಿ ಯಾವ ನಂಬಿಕೆಯಿಂದ ಬದುಕಬೇಕು? ಸಮಾಧಾನ ಕೇವಲ ಶಬ್ದಗಳಲ್ಲಿ ಅಲ್ಲ , ಜಿಲ್ಲಾಧಿಕಾರಿಗಳೇ ನಿಮ್ಮ ದಕ್ಷತೆ ಕೇವಲ ಕಡತಗಳಿಗೆ ಸೀಮಿತವಾಗದೇ ಮೊದಲು ನಿಮ್ಮದೇ ಕಛೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಡೆಗೂ ಒಮ್ಮೆ ನೋಡಿ ಅಲ್ಲಿದ ಭ್ರಷ್ಟತೆ ಮತ್ತು ಕಟ್ಟಡದೊಳಗಿನ ಕೊಳಕನ್ನು ಶುದ್ಧಗೊಳಿಸಿ ಎಂಬುದು ಹೊಸನಾವಿಕ ಪತ್ರಿಕೆಯ ಕಳಕಳಿಯಾಗಿದೆ.

ಕಾರ್ಗಿಲ್ ಹೀರೋಸ್ ಗಳಿಗೆ ನನ್ನದೊಂದು ಸೆಲ್ಯೂಟ್....ಜುಲೈ 26, ಭಾರತಕ್ಕೆ ಅತ್ಯಂತ ಮಹತ್ವದ ದಿನ. ಇದು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನಮ...
25/07/2025

ಕಾರ್ಗಿಲ್ ಹೀರೋಸ್ ಗಳಿಗೆ ನನ್ನದೊಂದು ಸೆಲ್ಯೂಟ್....

ಜುಲೈ 26, ಭಾರತಕ್ಕೆ ಅತ್ಯಂತ ಮಹತ್ವದ ದಿನ. ಇದು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನಮ್ಮ ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ದಿನ. ಅಂತೆಯೇ ಭಾರತೀಯರಾದ ನಮ್ಮೆಲ್ಲರಿಗೂ ಸಂತಸ- ಸಂಭ್ರಮದ ದಿನ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ಸೇನೆ ಪಾಕಿಸ್ತಾನದ ಆಕ್ರಮಣವನ್ನು ತಡೆದು, ಶತ್ರುಗಳನ್ನು ಹಿಮಾಲಯದ ಎತ್ತರಗಳಿಂದ ಹಿಂದೆ ತಳ್ಳುವಲ್ಲಿ ಯಶಸ್ವಿಯಾದ ದಿನ. ಈ ಐತಿಹಾಸಿಕ ಕ್ಷಣವನ್ನು 'ಕಾರ್ಗಿಲ್ ವಿಜಯ ದಿವಸ' ಎಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.
ಜುಲೈ 26, 1999. ತೀವ್ರ ಹಿಮಪಾತ, ತಂಗಾಳಿಯ ನಡುವೆ, ಉಕ್ಕಿನ ನಿರ್ಧಾರದಿಂದ ಭಾರತಮಾತೆಯ ಮುದ್ದಾದ ಪುತ್ರರು ಶತ್ರುಬಲವನ್ನು ಹೊಡೆದುರುಳಿಸಿ ಕಾರ್ಗಿಲ್ ಪರ್ವತ ಶ್ರೇಣಿಗಳ ಮೇಲೆ ಭಾರತ ವಿಜಯ ಧ್ವಜ ಹಾರಿಸಿದ ಕ್ಷಣ. ಇದು ನಮ್ಮ ಇತಿಹಾಸದ ಒಂದು ಅಳಿಸಲಾಗದ ಅಧ್ಯಾಯವಾಗಿದೆ.
ಈ ದಿನದ ನೆನಪಿನೆಡೆಗೆ ಹೆಜ್ಜೆ ಇಡುವಾಗ ಭಾರತೀಯರಾದ ನಾವು ಸುಮ್ಮನಿರುವುದು ಸಾಧ್ಯವಿಲ್ಲ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರ ಹೆಸರುಗಳು ಈ ಮಣ್ಣಿನಲ್ಲೂ, ಭಾರತೀಯರ ನೆನಪಲ್ಲೂ ಶಾಶ್ವತವಾಗಿ ಬರೆಯಲ್ಪಟ್ಟಿವೆ. ಅವರ ತ್ಯಾಗವೇ ಇಂದಿನ ಶಾಂತಿಯ ಶ್ವಾಸವಾಗಿದೆ.
ಪಾಕಿಸ್ತಾನದ ಸೇನೆ ಮತ್ತು ಪಾಪಿ ಪಾಕ್ ಬೆಂಬಲಿತ ಉಗ್ರರು ಜಮ್ಮು-ಕಾಶ್ಮೀರದ ಕಾರ್ಗಿಲ್ ಪ್ರದೇಶದ ತೀವ್ರ ಹಿಮಪಾತವಿರುವ ಎತ್ತರದ ಮೇಲೆ ಚದರುವ ಮೋಡಗಳ ಮೂಲಕ ಭಾರತದ ಭೂಭಾಗವನ್ನು ಆಕ್ರಮಣ ಮಾಡಲು ಯತ್ನಿಸಿದ್ದರು. ಇದನ್ನು ಭೇದಿಸಿದ ಭಾರತೀಯ ಸೇನೆ 'ಆಪರೇಷನ್ ವಿಜಯ' ಆರಂಭಿಸಿ ಕೇವಲ ಮೂರೇ ತಿಂಗಳಲ್ಲಿ ಶತ್ರುಗಳ ಹುಟ್ಟಡಗಿಸುವ ಮೂಲಕ ಶ್ರೇಯಸ್ಕಾರ ಯಶಸ್ಸು ಸಾಧಿಸಿತು.
ತ್ಯಾಗದ ದೀಪಗಳು : ಈ ಯುದ್ಧದಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ, ಮೇಜರ್ ಅಜಯ್ ಜಸ್ರೋಟ್, ಲ್ಯಾನ್ಸ್ ನಾಯಕ ಕಶ ಕುಮಾರ್ ಹಾಗೂ ಅನೇಕ ಶೂರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ರಾಷ್ಟ್ರಕ್ಕೆ ವಿಜಯವನ್ನು ತಂದುಕೊಟ್ಟು ಹೆಮ್ಮೆಗೂ ಕಾರಣರಾದರು. ಇವರ ತ್ಯಾಗವಿಲ್ಲದೆ ಕಾರ್ಗಿಲ್ ವಿಜಯ ಅಸಾಧ್ಯವಾಗಿತ್ತೆಂಬುದು ನಿಸ್ಸಂದೇಹ.
ಕೈಯಲ್ಲಿ ಶಸ್ತ್ರಧಾರಿ ಧ್ವಜವಿತ್ತು, ಹೃದಯದಲ್ಲಿ ರಾಷ್ಟ್ರಪ್ರೀತಿ. ತಾಯಿ ಹತ್ತಿರ ಬರೆದ ಕೊನೆಯ ಪತ್ರ ಇಂದಿಗೂ ಕವಿತೆಯಂತೆ ಉಳಿದಿದೆ. ಕೆಲವು ಮನೆಗಳಲ್ಲಿ ಓದುಗರ ಕಣ್ಣು ಹನಿಯಾಗುತ್ತದೆ, ಇನ್ನು ಕೆಲವರ ಮನಸ್ಸು ಧೈರ್ಯದಿಂದ ಮಡಿದ ಯೋಧರ ಹೆಮ್ಮೆಗೆ ಮಡಿಲು ನೀಡುತ್ತದೆ.
ಕಾರ್ಗಿಲ್ ಯುದ್ಧ ಏಕಕಾಲದಲ್ಲಿ ದುಃಖ ಮತ್ತು ಹೆಮ್ಮೆ ನೀಡಿದ ಸಂದೇಶ. ತಾತ್ಕಾಲಿಕವಾದ ಯುದ್ಧವಲ್ಲ ಅದು, ದೇಶಪ್ರೇಮದ ಶಾಶ್ವತ ಹೋರಾಟ. ಪ್ರತಿಯೊಬ್ಬ ಹುತಾತ್ಮ ಯೋಧನ ಸಾವಿನಲ್ಲಿ ಕೂಡ ಜೀವನದ ಮೌಲ್ಯವಿದೆ. ಅವರು ತಮ್ಮ ಜೀವವನ್ನೇ ಕೊಟ್ಟು ಸಾವಿರಾರು ಜೀವಗಳಿಗೆ ಭದ್ರತೆಯ ಬಂಗಾರವಾಗಿದ್ದಾರೆ.
ಹೃದಯ ಸ್ಪರ್ಶಿಸುವ ಕಹಿ ಸತ್ಯ: ಕಾರ್ಗಿಲ್ ಯುದ್ಧ ಒಂದು ಕಠಿಣ ಪರಿಸ್ಥಿತಿಯಲ್ಲಿ ನಡೆದಿದ್ದು, ಅದು -10 ರಿಂದ -40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನಡೆದ ಅಸಮಾನ-ಪರ್ವತದ ಯುದ್ಧವಾಗಿತ್ತು. ಈ ಸಂದರ್ಭ ನಮ್ಮ ಯೋಧರು ಆಹಾರ, ರಕ್ತ ಸಂಚಾರ, ಬಾಂಬ್ ದಾಳಿಗಳ ನಡುವೆ ತಮ್ಮ ಧೈರ್ಯವನ್ನು ಕಿಂಚಿತ್ತೂ ಕಳೆದುಕೊಳ್ಳದೇ ದೇಶಭಕ್ತಿಯಿಂದ ತಮ್ಮ ಪ್ರಾಣ ತ್ಯಾಗಕ್ಕೂ ಹಿಂಜರಿಯದೆ ಯುದ್ಧವನ್ನು ನಡೆಸಿದರು.
ಕಾರ್ಗಿಲ್ ವಿಜಯೋತ್ಸವ ಆಚರಣೆ ಕೇವಲ ಪೂಜೆಯ ಉತ್ಸವವಲ್ಲ. ಇದು ಪ್ರತಿ ಭಾರತೀಯ ಯೇಧನಿಗೆ ನಮನ ಸಲ್ಲಿಸಲು, ಯೋಧರ ಬಲಿದಾನವನ್ನು ಸ್ಮರಿಸಲು, ನಮ್ಮ ಸೇನೆಗೆ ಅಭಿಮಾನದಿಂದ ನಮಸ್ಕರಿಸುವ ದಿನವಾಗಿದೆ.
ಈ ದಿನದಿಂದ ಪ್ರತಿಯೊಬ್ಬ ಭಾರತೀಯನು ಕಲಿಯಬೇಕಾದದ್ದು ಬಹಳಷ್ಟಿದೆ. ಅವುಗಳೆಂದರೆ ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಕರ್ತವ್ಯಪಾಲನೆ ಮಾಡಬೇಕು. ಸೈನಿಕರ ತ್ಯಾಗವನ್ನು ಎಂದಿಗೂ ಮರೆತುಬಿಡಬಾರದು. ಭದ್ರತಾ ಪಡೆಗಳ ಕಡೆಗೆ ಸದಾ ಗೌರವ ಇರಬೇಕು. ದೇಶಭಕ್ತಿಯ ಗಾಢ ಪ್ರೇರಣೆಯೊಂದಿಗೆ ಜೀವನ ನಡೆಸಬೇಕು. ಇನ್ನೂರು ಶತಮಾನಗಳಿಗೂ ಸ್ಮರಣೀಯವಾಗಿರಲಿರುವ ಈ ವಿಜಯೋತ್ಸವ ನಮಗೆ ಕೇವಲ ಇತಿಹಾಸವಲ್ಲ; ಅದು ಪ್ರೇರಣೆಯೂ ಹೌದು.
ಈ ದಿನದ ನಿಜವಾದ ಆಚರಣೆ, ನಮ್ಮೊಳಗಿನ 'ಭಾರತೀಯ'ನನ್ನು ಜಗೃತಗೊಳಿಸುವ ದಿನ.
ರಾಜಕೀಯಕ್ಕೆ ಬಳಕೆಯಾಗುತ್ತಿರುವ
ಕಾರ್ಗಿಲ್ ಯುದ್ಧ - ಹುತಾತ್ಮರ ರಕ್ತ!:
1999ರ ಕಾರ್ಗಿಲ್ ಯುದ್ಧವು ಭಾರತದ ಸೈನಿಕ ಸಾಂತ್ವನ ಮತ್ತು ರಾಷ್ಟ್ರಭಕ್ತಿಯ ಅತ್ಯುತ್ತಮ ಸಾಕ್ಷ್ಯವಾಗಿದೆ. ಹಿಮಾಲಯದ ಹಿಮಪಾತ ಪ್ರದೇಶಗಳಲ್ಲಿ ಪಾಕಿಸ್ತಾನದ ಒಳಚರಂಡಿ ಚಟುವಟಿಕೆಗೆ ಎದುರಾಗಿ ಭಾರತೀಯ ಸೇನೆ ತೋರಿಸಿದ ಶೌರ್ಯ, ತ್ಯಾಗ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರುವದ್ದು ನಿಸ್ಸಂದೇಹ. ಆದರೆ ಇತ್ತೀಚಿನ ದಿನಗಳಲ್ಲಿ ಈ ತ್ಯಾಗದ ಸ್ಮರಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಪ್ರಯತ್ನಗಳು ಜೋರಾಗುತ್ತಿರುವುದು ವಿಷಾದನೀಯವಾಗಿದೆ.
ಯುದ್ಧದ ತ್ಯಾಗ, ಚುನಾವಣಾ ಪ್ರಚಾರದ ವಸ್ತುವೇ?
ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತದೆ. ಹುತಾತ್ಮ ಯೋಧರ ಸ್ಮರಣೆಯಲ್ಲಿ ದೇಶವ್ಯಾಪಿ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಕೆಲ ರಾಜಕೀಯ ನಾಯಕರಿಗೆ ಇದು ತಾವು ರಾಷ್ಟ್ರಭಕ್ತ ಎಂದು ಸಾಬೀತುಪಡಿಸಲು ವೇದಿಕೆಯಾಗುತ್ತಿದೆ. ಕಾರ್ಗಿಲ್ ಯೋಧರ ಕುರಿತ ಪ್ರಚೋದನಾತ್ಮಕ ಭಾಷಣಗಳು, ವಿಜಯೋತ್ಸವದ ಹೆಸರಿನಲ್ಲಿ ಭಾವನಾತ್ಮಕ ರಾಜಕೀಯ ಮತ್ತು ಸೇನೆಯ ಹುತಾತ್ಮರನ್ನು ಪ್ರಚಾರದ ಅಸ್ತ್ರವನ್ನಾಗಿ ಮಾಡುವುದು ಜನತೆಯ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಭಾರತೀಯ ಸೇನೆ ಯಾವತ್ತೂ ರಾಜಕೀಯದ ಮೇಲ್ಮಟ್ಟದಿಂದ ಹೊರಗಿರಬೇಕು ಎಂಬುದು ನಮ್ಮ ಸಂವಿಧಾನಿಕ ಆಶಯವೂ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾರ್ಗಿಲ್ ಯುದ್ಧದ ನೆನಪನ್ನು ಉಪಯೋಗಿಸಿ ಮತಗಳ ಧ್ರುವೀಕರಣ ಮಾಡಲು ನಡೆಯುತ್ತಿರುವ ಪ್ರಯತ್ನಗಳು ಸೈನಿಕರ ತ್ಯಾಗದ ಅವಮಾನವಾಗಿದೆ. ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರು ದೇಶಕ್ಕಾಗಿ ಹೋರಾಡಿದರು, ಯಾವುದೇ ಪಕ್ಷ ಅಥವಾ ನಾಯಕನಿಗಾಗಿ ಅಲ್ಲ ಎಂಬುದನ್ನು ಮನಗಾಣಬೇಕಿದೆ.
ರಾಜಕೀಯಕ್ಕೂ ಮೀರಿದ ಯುದ್ಧ ಸ್ಮರಣೆ :
ಕಾರ್ಗಿಲ್ ಯುದ್ಧವು ಪಕ್ಷೀಯ ರಾಜಕೀಯಕ್ಕಿಂತಲೂ ಹೆಚ್ಚಿನದ್ದು. ಇದು ದೇಶದ ಭದ್ರತೆಗಾಗಿ ನಿಷ್ಠೆಯಿಂದ ಹೋರಾಡಿದ ಸೈನಿಕರ ಸಂಭ್ರಮ. ಇದು ಎಲ್ಲ ಭಾರತೀಯರ ಹೃದಯದ ತಳಮಳ. ಹಾಗಾಗಿ, ಯಾವುದೇ ರಾಜಕೀಯ ಪ್ರಯೋಜನಕ್ಕಾಗಿ ಈ ಘಟನೆಯನ್ನು ಬಳಸುವುದು ಅಶಿಷ್ಟವೂ, ಅಶಿಷ್ಟಾಚಾರವೂ ಹೌದು.
ಇಂದು ಸಮಾಜ, ರಾಜಕಾರಣ ಮತ್ತು ಮಾಧ್ಯಮಗಳು ಯುದ್ಧ ಸ್ಮರಣೆಗೆ ಗೌರವ ನೀಡಬೇಕಾದರೆ, ಅದು ಹೃದಯದಿಂದ ಹೊರಬರುವ ನಿಷ್ಠೆಯಾಗಿ ಇರಬೇಕು. ಕಾರ್ಯಕ್ರಮಗಳು ಭಾವನಾತ್ಮಕವಾಗಿರಬಹುದು, ಆದರೆ ಅದನ್ನು ರಾಜಕೀಯ ಸನ್ನಿವೇಶಕ್ಕೆ ಬಳಸುವುದು ಅಕ್ಷಮ್ಯ. ಕಾರ್ಗಿಲ್ ಯುದ್ಧದಿಂದ ನಾವು ಕಲಿಯಬೇಕಾದ ಪಾಠ ಎಂದರೆ ದೇಶಕ್ಕೂ ಮೀರಿದ ಯಾವ ಅಹಂಕಾರಕ್ಕೂ ಯೋಧನ ತ್ಯಾಗವನ್ನು ಉಪಯೋಗಿಸುವ ಹಕ್ಕಿಲ್ಲ. ಕಾರ್ಗಿಲ್ ಯೋಧರ ತ್ಯಾಗವನ್ನು, ಮತಗಳ ಲೆಕ್ಕಕ್ಕೆ ತರುವುದು ನಮ್ಮ ರಾಷ್ಟ್ರಘಾತವಾಗಿದೆ ಎಂದು ಹೇಳಬಹುದು.
ಈದಿನ ನಾವೆಲ್ಲ ಒಂದು ಪ್ರತಿಜ್ಞೆ ಮಾಡೋಣವೇ:
ಕಾರ್ಗಿಲ್ ವಿಜಯೋತ್ಸವ ಕೇವಲ ಪರೇಡ್ ಅಥವಾ ಗೌರವವಂದನೆಗಳಿಗೆ ಸೀಮಿತವಾಗಬಾರದು. ಅದು ಒಂದು ಪ್ರತಿಜ್ಙೆಯ ದಿನವಾಗಲಿ.
ದೇಶಕ್ಕಾಗಿ ದುಡಿಯುವ, ಯೋಧರ ತ್ಯಾಗವನ್ನು ಮರೆಯದ ಬದುಕು ಕಟ್ಟೋಣ. ಅವರ ಹೆಸರಿನಲ್ಲಿ ನಾವು ಶಾಂತಿಯ ಬೀಜ ಬಿತ್ತೋಣ, ಅವರ ಕನಸುಗಳಲ್ಲಿ ನಾವು ಭಾರತವನ್ನು ಬೆಳೆಸೋಣ.
ಜೈ ಹಿಂದ್!
ಹುತಾತ್ಮ ಯೋಧರಿಗೆ ಶತ ಶತ ನಮನಗಳು.
ಲೇಖನ: ರಾಕೇಶ್ ಡಿಸೋಜ, ಮೊ: 9448343211

17/07/2025

Share Below Link(ವಿಶೇಷ ವರದಿ: ರಾಕೇಶ್ ಡಿಸೋಜ – ಮೊ:9448343211)ಶಿವಮೊಗ್ಗ (ಹೊಸನಾವಿಕ): ನಗರದ ಹೃದಯಭಾಗದಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲ....

Address


Alerts

Be the first to know and let us send you an email when Hosa Navika - ಹೊಸ ನಾವಿಕ posts news and promotions. Your email address will not be used for any other purpose, and you can unsubscribe at any time.

Contact The Business

Send a message to Hosa Navika - ಹೊಸ ನಾವಿಕ:

  • Want your business to be the top-listed Media Company?

Share