The Newsnap

The Newsnap The world at your fingertip

'ಡೆವಿಲ್' ಚಿತ್ರೀಕರಣದಲ್ಲಿ ಬಾಗಿ ಮೈಸೂರು: ನಟ​ ದರ್ಶನ್ ಬುಧವಾರ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಅರ್ಧಕ್ಕೆ ನಿಂತಿದ...
12/03/2025

'ಡೆವಿಲ್' ಚಿತ್ರೀಕರಣದಲ್ಲಿ ಬಾಗಿ ಮೈಸೂರು: ನಟ​ ದರ್ಶನ್ ಬುಧವಾರ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಅರ್ಧಕ್ಕೆ ನಿಂತಿದ್ದ 'ಡೆವಿಲ್'​ ಸಿನಿಮಾದ ಚಿತ್ರೀಕರಣದಲ್ಲಿ ಮತ್ತೆ ಪಾಲ್ಗೊಂಡರು. ಹತ್ತು ತಿಂಗಳ ಹಿಂದೆ ಮೈಸೂರಿನಲ್ಲಿ ಡೆವಿಲ್​ ಶೂಟಿಂಗ್​ನಲ್ಲಿದ್ದ ಸಮಯದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಅವರು ಜೈಲು ಸೇರಿದ್ದರು. Join WhatsApp Group ಈ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಇದೀಗ ಮತ್ತೆ ಮೈಸೂರಿನಿಂದಲೇ ಚಿತ್ರೀಕರಣ ಆರಂಭವಾಗಿದೆ. ಚಾಮುಂಡೇಶ್ವರಿಯ ಭಕ್ತರಾಗಿರುವ ದರ್ಶನ್‌, ಶೂಟಿಂಗ್​ನಲ್ಲಿ ಪಾಲ್ಗೊಳ್ಳುವ ಮುನ್ನ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು....

Actor Darshan offers special prayers to Chamundeshwari ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

ಮೈಸೂರು:ಮುಡಾ ಹಗರಣದಲ್ಲಿ ಸಾಕಷ್ಟು ಸಾಕ್ಷಿ, ಆಧಾರಗಳು ಇದ್ದರೂ ಆರೋಪಿಗಳನ್ನು ರಕ್ಷಣೆ ಮಾಡಲು ಸುಳ್ಳು ವರದಿ ಸಲ್ಲಿಸಿದ ಲೋಕಾಯುಕ್ತದ ಮೂವರು ಹಿರಿ...
12/03/2025

ಮೈಸೂರು:ಮುಡಾ ಹಗರಣದಲ್ಲಿ ಸಾಕಷ್ಟು ಸಾಕ್ಷಿ, ಆಧಾರಗಳು ಇದ್ದರೂ ಆರೋಪಿಗಳನ್ನು ರಕ್ಷಣೆ ಮಾಡಲು ಸುಳ್ಳು ವರದಿ ಸಲ್ಲಿಸಿದ ಲೋಕಾಯುಕ್ತದ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತಿ ಆಯೋಗಕ್ಕೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, "ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿರುವ ಕುರಿತು ಸಾಕಷ್ಟು ಸಾಕ್ಷಿ, ಆಧಾರಗಳು ಇದ್ದರೂ, ಆರೋಪಿಗಳನ್ನು ರಕ್ಷಣೆ ಮಾಡಲು ಲೋಕಾಯುಕ್ತ ಪೊಲೀಸರು ಸುಳ್ಳು ವರದಿಗಳನ್ನು ಸಲ್ಲಿಸಿದ್ದರು. ಈ ಬಗ್ಗೆ ಈ ಮೂವರು ಲೋಕಾಯುಕ್ತ ಎಡಿಜಿಪಿ ಮನೀಷ್ ಖರ್ಬೀಕರ್‌, ಐಜಿಪಿ ಸುಬ್ರಮಣ್ಯೇಶ್ವರ್‌ ರಾವ್‌, ಹಾಗೂ ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದ್ದೇಶ್‌ ವಿರುದ್ಧ ಕೇಂದ್ರದ ಜಾಗೃತ ಆಯೋಗಕ್ಕೆ ಮೂರು ಪುಟದ ದೂರನ್ನು ಇಮೇಲ್‌ ಹಾಗೂ ರಿಜಿಸ್ಟರ್‌ ಅಂಚೆ ಮೂಲಕ ಕಳುಹಿಸಿದ್ದೇನೆ" ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು....

Complaint to Central Vigilance Commission against senior Lokayukta officials: Snehamayi

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ-ಮಗರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ...
11/03/2025

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ-ಮಗರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಜಯಂತಿ (60) ಮತ್ತು ಅವರ ಪುತ್ರ ಭರತ್ (35) ಎಂದು ಗುರುತಿಸಲಾಗಿದೆ. ಭರತ್ ಕಳೆದ ಎಂಟು ತಿಂಗಳ ಹಿಂದೆ ಅರಸೀಕೆರೆ ತಾಲ್ಲೂಕಿನ ಬಾಗೂರನಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದರು. ಆದರೆ, ಅತ್ತೆ-ಸೊಸೆ ನಡುವೆ ತೊಡಕಿನ ಸಂಬಂಧ ಇದ್ದು, ಪದೇಪದೇ ಜಗಳವಾಗುತ್ತಿತ್ತು. Join WhatsApp Group ಈ ಕಾರಣದಿಂದ ಭರತ್ ಪತ್ನಿ ಗಂಡನ ಜೊತೆ ಇರಲು ನಿರಾಕರಿಸಿ ತವರು ಮನೆಗೆ ಹೋಗಿದ್ದರು....

Mother-in-law-daughter-in-law fight: Mother-son commit su***de ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

ಬೆಂಗಳೂರು: ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶ...
11/03/2025

ಬೆಂಗಳೂರು: ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಈಗಾಗಲೇ ದಾವಣಗೆರೆ ಮತ್ತು ಚಿಂತಾಮಣಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಸಚಿವರು ಹೇಳಿದರು. ಈ ಅನುಭವದ ಆಧಾರದ ಮೇಲೆ, ಮುಂದಿನ ಹಂತದಲ್ಲಿ ರಾಜ್ಯದ ಇನ್ನೂ 11 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಕೋರ್ಸ್‌ಗಳನ್ನು ಅಳವಡಿಸಲಾಗುವುದು. ಪ್ರಾರಂಭಿಕವಾಗಿ 5 ಕಾಲೇಜುಗಳಲ್ಲಿ ಈ ಕಾರ್ಯಕ್ರಮ ಜಾರಿಗೆ ತರಲಾಗುವುದು....

Skill development courses begin in government engineering colleges ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

ರಾಜ್ಯದ ನಾಲ್ಕು ಆಸ್ಪತ್ರೆಗಳಲ್ಲಿ ಸೌಲಭ್ಯ ಬೆಂಗಳೂರು: ರಾಜ್ಯದ ಮೈಸೂರು, ಕಲಬುರಗಿ, ಹುಬ್ಬಳ್ಳಿ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಲ್ಲಿ ಅ...
11/03/2025

ರಾಜ್ಯದ ನಾಲ್ಕು ಆಸ್ಪತ್ರೆಗಳಲ್ಲಿ ಸೌಲಭ್ಯ ಬೆಂಗಳೂರು: ರಾಜ್ಯದ ಮೈಸೂರು, ಕಲಬುರಗಿ, ಹುಬ್ಬಳ್ಳಿ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಲ್ಲಿ ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೊ) ಚಿಕಿತ್ಸಾ ಸೌಲಭ್ಯ ಒದಗಿಸಲು ಸರ್ಕಾರ ತೀರ್ಮಾನಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಸಚಿವರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅಸ್ಥಿಮಜ್ಜೆ ಕಸಿಯನ್ನು ಸೇರಿಸಲಾಗಿದೆ ಎಂದು ವಿವರಿಸಿದರು. Join WhatsApp Group ಇದನ್ನು ಓದಿ -ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ ಈ ಯೋಜನೆಯಡಿ BPL ಕುಟುಂಬಗಳಿಗೆ ಉಚಿತವಾಗಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಲಭ್ಯವಾಗಲಿದೆ. ಈ ಸೇವೆಯನ್ನು ಮೈಸೂರು, ಕಲಬುರಗಿ, ಹುಬ್ಬಳ್ಳಿ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Free bone marrow transplant treatment for BPL families: Facility in four hospitals in the state

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ ಕೆಲವು ಕಾಂಗ್ರೆಸ್ ಸಚಿವರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸಲು ಯತ್ನಿ...
10/03/2025

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ ಕೆಲವು ಕಾಂಗ್ರೆಸ್ ಸಚಿವರಿಗೆ ಕರೆ ಮಾಡಿ ತಮ್ಮನ್ನು ರಕ್ಷಿಸಲು ಯತ್ನಿಸಿದ್ದಾಳೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ. ಭರತ್ ಶೆಟ್ಟಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ, "ಸಚಿವರು ಕೂಡ ರನ್ಯಾ ರಾವ್‌ಗೆ ಬೆಂಬಲ ನೀಡಲು ಕರೆ ಮಾಡುತ್ತಿದ್ದಾರೆ. ಸದ್ಯ ಈ ಪ್ರಕರಣವನ್ನು ಸಿಬಿಐ ಹಸ್ತಗತ ಮಾಡಿಕೊಂಡಿದೆ, ಇದರ ಹಿಂದೆ ಯಾರೆಲ್ಲಾ ಇದ್ದಾರೆ ಮತ್ತು ಯಾರು ಕೈವಾಡ ಮಾಡಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ. ಸಿಬಿಐ ತನಿಖಾ ವರದಿಗಾಗಿ ನಾವು ಕಾಯುತ್ತಿದ್ದೇವೆ," ಎಂದರು. Join WhatsApp Group…...

Ranya Rao contacts Congress minister: Serious allegations from MLA Bharat Shetty

ಹಾವೇರಿ: ಕೇವಲ 33 ಸೆಕೆಂಡುಗಳಲ್ಲಿ ಕಾರಿನ ಗಾಜು ಒಡೆದು 33 ಲಕ್ಷ ರೂಪಾಯಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು ಓರ್ವ ಆ...
10/03/2025

ಹಾವೇರಿ: ಕೇವಲ 33 ಸೆಕೆಂಡುಗಳಲ್ಲಿ ಕಾರಿನ ಗಾಜು ಒಡೆದು 33 ಲಕ್ಷ ರೂಪಾಯಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶ ಮೂಲದ ಎ. ಜಗದೀಶ್ (28) ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಈತ ಮತ್ತು ಸಹಚರರು ಕಾರಿನ ಗಾಜು ಒಡೆದು 33 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದರು. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಇದನ್ನಾಧರಿಸಿ ಪೊಲೀಸರು ತನಿಖೆ ಕೈಗೊಂಡು ಜಗದೀಶ್ ಅನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯಿಂದ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ....

33 lakhs stolen in a flash: One accused arrested ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ

ಚಾಮರಾಜನಗರ: ಚಾಮರಾಜನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದ...
10/03/2025

ಚಾಮರಾಜನಗರ: ಚಾಮರಾಜನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಬಂಡಳ್ಳಿ ಹೊರವಲಯದ ತೆಳ್ಳನೂರು ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಖಾಸಗಿ ಬಸ್‌ನಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಯೊಂದಕ್ಕೆ ಜನರು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಶಾಗ್ಯ ಗ್ರಾಮಕ್ಕೆ ಹಿಂತಿರುಗುವ ವೇಳೆ, ಬಂಡಳ್ಳಿ-ತೆಳ್ಳನೂರು ಮಾರ್ಗದ ಕಾಯಿ ಒಡೆಯುವ ಕಲ್ಲಿನ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿದೆ. Join WhatsApp Group…...

Private bus accident Chamarajanagar: One dead, over 30 injured ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವೆಡೆ ತಾಪಮಾನದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈ ನಡುವೆ, ಹವಾಮಾನ ಇಲಾಖೆ ರ...
08/03/2025

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವೆಡೆ ತಾಪಮಾನದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈ ನಡುವೆ, ಹವಾಮಾನ ಇಲಾಖೆ ರಾಜ್ಯದ ಜನತೆಗೆ ಉತ್ತಮ ಸುದ್ದಿಯೊಂದನ್ನು ನೀಡಿದ್ದು, ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ನಿರೀಕ್ಷೆಯಿದೆ. Join WhatsApp Group ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಮಾರ್ಚ್ 12 ರಿಂದ 14ರವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಮತ್ತು ಹಗಲು ವೇಳೆಯಲ್ಲೂ ಮಳೆಯಾಗುವ ಸಾಧ್ಯತೆ ಇದೆ....

Heavy rains forecast in the state for the next three days! ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯ ಮುನ್ಸೂಚನೆ!

ಮುಂಬೈ: ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಸಮಸ್ಯೆಯಿಂದಾಗಿ IPL 2025ರ ಮೊ...
08/03/2025

ಮುಂಬೈ: ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಸಮಸ್ಯೆಯಿಂದಾಗಿ IPL 2025ರ ಮೊದಲ ಎರಡು ವಾರಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಬುಮ್ರಾ ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಕೆಲವು ಸಮಯ ಬೇಕಾಗಿದೆ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಮಾತ್ರ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರುವ ನಿರೀಕ್ಷೆಯಿದೆ. ಮುಂಬೈ ಇಂಡಿಯನ್ಸ್ ಮಾರ್ಚ್ 23ರಂದು ತಮ್ಮ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ 2025ರ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ, ಆರಂಭಿಕ ಪಂದ್ಯಗಳಲ್ಲಿ ಬುಮ್ರಾ ಲಭ್ಯರಾಗುವ ಸಾಧ್ಯತೆ ಕಡಿಮೆ....

Injured Jasprit Bumrah likely to miss IPL! ಗಾಯಗೊಂಡ ಜಸ್ಪ್ರೀತ್ ಬುಮ್ರಾ IPL ನಿಂದ ಹೊರಗುಳಿಯುವ ಸಾಧ್ಯತೆ!

ಬೆಂಗಳೂರು: ಈ ಬಾರಿಯ ಕರ್ನಾಟಕ ಬಜೆಟ್ ದೇಶಕ್ಕೆ ಮಾದರಿಯಾಗಿದೆ. ನಮ್ಮ ಬಜೆಟ್ ಅನ್ನು ಬೇರೆ ರಾಜ್ಯಗಳು ಗಮನಿಸುತ್ತಿವೆ. ಇದು ಜನಪರ ಬಜೆಟ್ ಆಗಿದ್ದು...
08/03/2025

ಬೆಂಗಳೂರು: ಈ ಬಾರಿಯ ಕರ್ನಾಟಕ ಬಜೆಟ್ ದೇಶಕ್ಕೆ ಮಾದರಿಯಾಗಿದೆ. ನಮ್ಮ ಬಜೆಟ್ ಅನ್ನು ಬೇರೆ ರಾಜ್ಯಗಳು ಗಮನಿಸುತ್ತಿವೆ. ಇದು ಜನಪರ ಬಜೆಟ್ ಆಗಿದ್ದು, ಕರ್ನಾಟಕದ ಜನತೆಗೆ ಅನೇಕ ಅನುಕೂಲಗಳನ್ನು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಗರದ ಸಂಚಾರ ಸಮಸ್ಯೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಟನಲ್ ನಿರ್ಮಾಣ ಮಾಡಲಾಗುವುದು. ಹೊಸ ಮೆಟ್ರೋ ಯೋಜನೆಯ ಜೊತೆಗೆ ಎಲಿವೇಟೆಡ್ ಕಾರಿಡಾರ್ ಕೂಡಾ ನಿರ್ಮಾಣ ಮಾಡಲಾಗುವುದು. ಈ ಯೋಜನೆಗೆ 50% ನಗದು ಸಹಾಯವನ್ನು ಕಾರ್ಪೊರೇಷನ್ ನೀಡಲಿದೆ ಹಾಗೂ ಉಳಿದ 50% ಮೊತ್ತವನ್ನು ಬಿಎಂಆರ್‌ಸಿಎಲ್ ವಹಿಸಿಕೊಳ್ಳಲಿದೆ” ಎಂದು ವಿವರಿಸಿದರು....

Karnataka's budget model for the country: D.K. Shivakumar ಕರ್ನಾಟಕದ ಬಜೆಟ್ ದೇಶಕ್ಕೆ ಮಾದರಿ: ಡಿ.ಕೆ. ಶಿವಕುಮಾರ್

ದೆಹಲಿ: ಭಾರತ ಸರ್ಕಾರವು ಸಾರ್ವಜನಿಕರಿಗೆ ಅನೇಕ ಉಪಯುಕ್ತ ಯೋಜನೆಗಳ ಪ್ರಯೋಜನವನ್ನು ನೀಡಲು ವಿವಿಧ ಕಾರ್ಡ್‌ಗಳನ್ನು ಪರಿಚಯಿಸಿದೆ. ಈ ಕಾರ್ಡ್‌ಗಳ ಸ...
08/03/2025

ದೆಹಲಿ: ಭಾರತ ಸರ್ಕಾರವು ಸಾರ್ವಜನಿಕರಿಗೆ ಅನೇಕ ಉಪಯುಕ್ತ ಯೋಜನೆಗಳ ಪ್ರಯೋಜನವನ್ನು ನೀಡಲು ವಿವಿಧ ಕಾರ್ಡ್‌ಗಳನ್ನು ಪರಿಚಯಿಸಿದೆ. ಈ ಕಾರ್ಡ್‌ಗಳ ಸಹಾಯದಿಂದ ನೀವು ಹಲವು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಬಹುದು. ಈ 8 ಪ್ರಮುಖ ಕಾರ್ಡ್‌ಗಳೆಂದರೆ – ಆಧಾರ್, ಕಿಸಾನ್, ಎಬಿಸಿ, ಶ್ರಮಿಕ್, ಸಂಜೀವನಿ, ಆಭಾ, ಗೋಲ್ಡನ್ ಮತ್ತು ಇ-ಶ್ರಮ್. ಈ ಕಾರ್ಡ್‌ಗಳನ್ನು ಹೊಂದಿದ್ದರೆ, ನೀವು ಆರೋಗ್ಯ, ಶಿಕ್ಷಣ, ಕೃಷಿ, ಕಾರ್ಮಿಕ ಕಲ್ಯಾಣ ಮತ್ತು ಆರ್ಥಿಕ ಸಹಾಯ ಸೇರಿದಂತೆ ಹಲವಾರು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇಲ್ಲಿವೆ ಈ ಪ್ರಮುಖ 8 ಕಾರ್ಡ್‌ಗಳ ಬಗ್ಗೆ ವಿವರಗಳು:...

benefits with these 8 Govt cards! ಸಾರ್ವಜನಿಕರ ಗಮನಕ್ಕೆ: ಈ 8 ಸರ್ಕಾರದ ಕಾರ್ಡ್‌ಗಳೊಂದಿಗೆ ನೀವು ಮಹತ್ವದ ಸೌಲಭ್ಯಗಳನ್ನು ಪಡೆಯಬಹುದು!

ಬೆಳಗಾವಿ: ಕೆಲಸದ ಒತ್ತಡ ಹಾಗೂ ಡ್ಯೂಟಿ ಬದಲಾವಣೆ ಸಂಬಂಧ ದೂರುಗಳ ನಡುವೆ, KSRTC ಮೆಕ್ಯಾನಿಕ್‌ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ...
08/03/2025

ಬೆಳಗಾವಿ: ಕೆಲಸದ ಒತ್ತಡ ಹಾಗೂ ಡ್ಯೂಟಿ ಬದಲಾವಣೆ ಸಂಬಂಧ ದೂರುಗಳ ನಡುವೆ, KSRTC ಮೆಕ್ಯಾನಿಕ್‌ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಡಿಪೋ-1ರ ಅಳ್ನಾವರ್-ಬೆಳಗಾವಿ ಬಸ್‌ನಲ್ಲಿ ಮೆಕ್ಯಾನಿಕ್ ಕೇಶವ ಕಮಡೊಳಿ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬೆಳಗಾವಿಯ ಹಳೆ ಗಾಂಧಿ ನಗರದಲ್ಲಿ ವಾಸವಾಗಿದ್ದರು ಮತ್ತು ಬಸ್‌ಗಳ ವಾಶಿಂಗ್ ಹಾಗೂ ಪಂಚರ್ ತೆಗೆಯುವ ಕೆಲಸ ಮಾಡುತ್ತಿದ್ದರು. Join WhatsApp Group ಮೃತ ಕೇಶವ್‌ಗೆ ಬೆನ್ನು ನೋವಿದ್ದರೂ ಸಹ, ಅಧಿಕಾರಿಗಳು ಅವರನ್ನು ಪಂಚರ್ ತೆಗೆಯುವ ಕೆಲಸಕ್ಕೆ ಒತ್ತಾಯಿಸುತ್ತಿದ್ದರು ಎನ್ನಲಾಗುತ್ತಿದೆ. ಈ ಕುರಿತು ಅವರ ಕುಟುಂಬಸ್ಥರು ಡಿಪೋ ಮ್ಯಾನೇಜರ್ ಲಿಂಗರಾಜ್ ಲಾಠಿ ಹಾಗೂ ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್‌ಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಕೆಲಸದ ಒತ್ತಡವನ್ನು ಸಹಿಸಲಾಗದೆ ಕೇಶವ್ ಆತ್ಮಹತ್ಯೆ ಮಾಡಿಕೊಂಡಿರುವುದು ಶಂಕೆಗೆ ಕಾರಣವಾಗಿದ್ದು, ಅವರ ಕುಟುಂಬಸ್ಥರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Man commits su***de in KSRTC bus: Was it due to work stress? KSRTC ಬಸ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ: ಕೆಲಸದ ಒತ್ತಡ ಕಾರಣ?

ಮಹಿಳಾ ದಿನಾಚರಣೆ ಬಂತೆಂದರೆ ಸಾಕು ಮಹಿಳೆಗೆ ಶುಭಾಶಯಗಳ ಸುರಿಮಳೆ,ಕಾರ್ಯಕ್ರಮಗಳ ಮೂಲಕ ಸನ್ಮಾನ ಮಾಡುವುದರ ಮೂಲಕ ಅಭಿನಂದಿಸುವುದು.ಭಾಷಣಗಳ ಮೂಲಕ ಹೆ...
07/03/2025

ಮಹಿಳಾ ದಿನಾಚರಣೆ ಬಂತೆಂದರೆ ಸಾಕು ಮಹಿಳೆಗೆ ಶುಭಾಶಯಗಳ ಸುರಿಮಳೆ,ಕಾರ್ಯಕ್ರಮಗಳ ಮೂಲಕ ಸನ್ಮಾನ ಮಾಡುವುದರ ಮೂಲಕ ಅಭಿನಂದಿಸುವುದು.ಭಾಷಣಗಳ ಮೂಲಕ ಹೆಣ್ಣನ್ನು ಬಣ್ಣಿಸುವುದು ಜೋರಾಗಿರುತ್ತದೆ.ಆದರೆ ಮರುದಿನ ಮತ್ತೆ ಪತ್ರಿಕೆಯಲ್ಲಿ ಅತ್ಯಾಚಾರ,ವಿಕೃತಭಾವದಂತ ಘೋರ ಕೃತ್ಯಗಳನ್ನು ನೋಡಿ ನಿಜಕ್ಕೂ ಬೇಸರವಾಗುತ್ತದೆ. ಮಹಿಳಾ ದಿನಾಚರಣೆ ಆಡಂಬರಕ್ಕೆ ಸೀಮಿತವಾಗಬಾರದು ಪ್ರತಿ ವ್ಯಕ್ತಿ ಹೆಣ್ಣೆಂದರೇನು ಅಂತ ಅರಿತು ಪ್ರತಿ ಮನೆಯ ಹೆಣ್ಣನ್ನು ಸಮಾನದಿ ಕಂಡಾಗಲೇ ಮಹಿಳಾ ದಿನಾಚರಣೆಕ್ಕೆ ಅರ್ಥ ಬರುವುದು.ಮಾರ್ಚ್ 8 ಮಾತ್ರಕ್ಕೆ ಮಹಿಳೆಯನ್ನು ಹೊಗಳಿ ಅಟ್ಟಕ್ಕೇರಿಸಿ ಗೌರವಿಸುವುದಲ್ಲ .ಪ್ರತಿದಿನ ಕಾರ್ಯ ಶ್ಲಾಘಿಸುತ ಕೃತಜ್ಞತೆ ಸಲ್ಲಿಸಿದಾಗಲೇ ಮಹಿಳೆಗೆ ಸಂತಸ ಹುಟ್ಟಿದ್ದಕ್ಕೂ ಸಾರ್ಥಕತೆ ಎಂದು ಸಂಭ್ರಮಿಸುವಳು.....

The life of the family is the god of mankind. ಮನೆತನದ ಜೀವ ಮನುಜಕುಲದ ದೈವ - Newsnap Kannada

ಹೇಗಿದ್ದೀರಾ ಸರ್, ಇವತ್ತು ನೀವು ಮನೆಗೆ ಹೋಗಬಹುದು ಎಂದು ಹೇಳಿ ಡಾಕ್ಟರ್ ಪಕ್ಕದ‌ ಬೆಡ್ ಗೆ ಹೋದರು.  ಡಾಕ್ಟರನ್ನು ನೋಡುತ್ತಾ ಹಳೆಯ ನೆನಪು ಮೂಡಿತ...
07/03/2025

ಹೇಗಿದ್ದೀರಾ ಸರ್, ಇವತ್ತು ನೀವು ಮನೆಗೆ ಹೋಗಬಹುದು ಎಂದು ಹೇಳಿ ಡಾಕ್ಟರ್ ಪಕ್ಕದ‌ ಬೆಡ್ ಗೆ ಹೋದರು. ಡಾಕ್ಟರನ್ನು ನೋಡುತ್ತಾ ಹಳೆಯ ನೆನಪು ಮೂಡಿತು. ಅಂದು ತನ್ನ ಹನ್ನೆರಡು ವರ್ಷದ ಮಗ ಹುಡುಗಿಯಂತೆ ಬಳೆ ಸರ ಹಾಕಿಕೊಂಡು ಖುಷಿ ಪಡುವುದು ಕಂಡು ಭಯವಾಯಿತು. ಮನೆ ಮರ್ಯಾದೆ ಹೋಗುತ್ತದೆ ಎಂದು ಅವನನ್ನು ಮನೆ ಬಿಟ್ಟು ಹೋಗಲು ಹೇಳಿದೆ. ಅಲ್ಲೇ ಅಳುತ್ತಿದ್ದ ಹೆಂಡತಿ, ಮಗನನ್ನು ಮನೆ ಬಿಟ್ಟು ಕಳುಹಿಸಿದರೆ ನಾನು ಅವನ ಜೊತೆ ಹೋಗುತ್ತೇನೆ ಎಂದಾಗ ತಾನು ಕಲ್ಲಾಗಿದ್ದ. Join WhatsApp Group ಹೆಣ್ಣು ಹೆಂಗಸು ನಿನ್ನ ಹತ್ತಿರ ಏನೂ ಮಾಡಲು ಸಾಧ್ಯ ಅವನ ಜೊತೆ ನೀನು ಭಿಕ್ಷೆ ಎತ್ತಿ ಬದುಕಬೇಕು ಎಂದಿದ್ದ. ಇಂದು ಅದೇ ಸ್ತ್ರೀ ಶಕ್ತಿ ತಾನು ಹೆತ್ತ ಜೀವವನ್ನು ನೂರಾರು ಜನರ ಜೀವ ಉಳಿಸುವಂತಹವಳನ್ನಾಗಿ ಬೆಳೆಸಿದ್ದಾಳೆ…ತನ್ನಿಂದ ಆದ ತಪ್ಪಿಗಾಗಿ ಕಣ್ಣಲ್ಲಿ ನೀರು ತುಂಬಿ ಕೊಂಡ. ಸವಿತಾ ರಮೇಶ

Power of a women “ಸ್ತ್ರೀ ಶಕ್ತಿ” - Newsnap Kannada

"ಹೆಣ್ಣಾಗಿ ಹುಟ್ಟುವುದಕ್ಕಿಂತಹುಟ್ಟಿದರೇ ಮಣ್ಣಿನ ಮೇಲೊಂದುಮರವಾಗಿ ಹುಟ್ಟಿದರೆಪುಣ್ಯವಂತರಿಗೆ ನೆರಳಾದೆ" ಎನ್ನುವ ಈ ಜನಪದ ಹಾಡು ಅಂದಿನಿಂದ ಇಂದಿನ...
07/03/2025

"ಹೆಣ್ಣಾಗಿ ಹುಟ್ಟುವುದಕ್ಕಿಂತಹುಟ್ಟಿದರೇ ಮಣ್ಣಿನ ಮೇಲೊಂದುಮರವಾಗಿ ಹುಟ್ಟಿದರೆಪುಣ್ಯವಂತರಿಗೆ ನೆರಳಾದೆ" ಎನ್ನುವ ಈ ಜನಪದ ಹಾಡು ಅಂದಿನಿಂದ ಇಂದಿನವರೆಗೂ ಎಲ್ಲಾ ಕಾಲಘಟ್ಟದಲ್ಲೂ ಹೆಣ್ಣು ಸವೆಸಿದ ಸಂಕಷ್ಟದ ಹಾದಿಯಲ್ಲಿದ್ದ ಕಷ್ಟಗಳ ಸರಮಾಲೆಯನ್ನು ಬಿಂಬಿಸುತ್ತದೆ. "ಹೆಣ್ಣು" ಅನ್ನುವ ಹೆಸರಿನಲ್ಲಿ ಎಲ್ಲಾ ಭಾವಗಳು ತುಂಬಿವೆ. ಪ್ರೀತಿ , ಮಾರ್ದವತೆ, ಮಮತೆ, ತ್ಯಾಗ, ಸಹನೆ,ಕರುಣೆ, ಕಷ್ಟ ಸಹಿಷ್ಣುತೆ,ಕೋಪ, ಮತ್ಸರ ,ಸೇಡು ಎಲ್ಲವೂ ಇದೆ, ನಮಗೆ ರಾಮಾಯಣವನ್ನಾಗಲಿ, ಮಹಾಭಾರತವನ್ನಾಗಲಿ, ತೆಗೆದುಕೊಂಡಾಗ ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ರಾಮಾಯಣದಲ್ಲಿ ಬರುವ ಸೀತೆ, ಊರ್ಮಿಳೆ, ಕೈಕೇಯಿ,ಮಂಥರೆ, ಶೂರ್ಪನಖಿ, ಮಂಡೋದರಿ, ಎಲ್ಲರೂ ಒಂದೊಂದು ರೀತಿಯ ಶೋಷಣೆಗೆ ಉದಾಹರಣೆಗಳಾಗಿ ನಿಲ್ಲುತ್ತಾರೆ....

The voice of the mind ಮಾನಿನಿಯ ಮನದ ಧ್ವನಿ - Newsnap Kannada

ಮಹಿಳಾ ದಿನಾಚಾರಣೆಯನ್ನು ಮಹಿಳೆಯರ ತ್ಯಾಗ ಅವರ ಕಷ್ಟಗಳನ್ನು ನೆನೆದು ಆ ಸಮಸ್ಯೆ ಕಷ್ಟಗಳಲ್ಲೂ ಅವರು ದಿಟ್ಟವಾಗಿ ಎದುರಿಸಿ ಜೀವನವನ್ನು ನಡೆಸುವುದನ್...
07/03/2025

ಮಹಿಳಾ ದಿನಾಚಾರಣೆಯನ್ನು ಮಹಿಳೆಯರ ತ್ಯಾಗ ಅವರ ಕಷ್ಟಗಳನ್ನು ನೆನೆದು ಆ ಸಮಸ್ಯೆ ಕಷ್ಟಗಳಲ್ಲೂ ಅವರು ದಿಟ್ಟವಾಗಿ ಎದುರಿಸಿ ಜೀವನವನ್ನು ನಡೆಸುವುದನ್ನು ಗೌರವಿಸಲು ಆಚರಿಸಲಾಗುತ್ತದೆ. ಆದರೆ ಇಂದಿಗೂ ಸಮಾಜದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ, ದೈಹಿಕ ಅಸಮಾನತೆಯನ್ನು ಮುಂದಿರಿಸಿಕೊಂಡು ಶೋಷಣೆ ನಡೆಯುತ್ತಲೇ ಬಂದಿದೆ. ಅದರಲ್ಲೂ ಶೋಷಣೆ ಮಾಡುವವರು ಮನೆಯವರು, ಪರಿಚಿತರು, ನೆರೆಹೊರೆಯವರು, ಸ್ನೇಹಿತರು ಯಾರೋ ಆಗಿರಬಹುದು ಶೋಷಣೆಗೆ ಒಳಗಾಗುತ್ತಿರುವ ಹೆಣ್ಣು 6-7 ವರ್ಷದ ಮಗುವಿನಿಂದ ಹಿಡಿದು 80-85 ವಯಸ್ಸಿನ ಹಿರಿಯ ಮಹಿಳೆಯೂ ಆಗಿರಬಹುದು. ಸಮಾಜದ ಕಟ್ಟುಪಾಡುಗಳು ಸಂಪ್ರದಾಯಗಳು ಈ ರೀತಿಯ ಶೋಷಣೆ ಕಾರಣ ಎಂದು ಆಧುನಿಕ ಜನರ ಅಭಿಪ್ರಾಯವಾಗಿದೆ....

A strong woman ಸಶಕ್ತ ಮಹಿಳೆ - Newsnap Kannada

ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 200 ರೂ ಫಿಕ್ಸ್ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಬೆಂಗಳೂರು : ಸಿಎಂ ಸಿದ್ದರಾಮಯ್ಯ ದಾಖಲೆಯ...
07/03/2025

ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 200 ರೂ ಫಿಕ್ಸ್ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಬೆಂಗಳೂರು : ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಭಾಷಣ ಓದಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಉದ್ಯಮ ಸ್ಥಾನಮಾನ ನೀಡಿ, ಕೈಗಾರಿಕಾ ನೀತಿಯಡಿ ನೀಡುವ ಸೌಲಭ್ಯಗಳನ್ನು ಚಿತ್ರರಂಗಕ್ಕೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸುವ ಮೂಲಕ ಕನ್ನಡ ಚಿತ್ರರಂಗದ ಬಹುಕಾಲದ ಬೇಡಿಕೆ ಈಡೇರಿಕೆಗೆ ‘ಉದ್ಯಮ’ ಸ್ಥಾನಮಾನ ಕಲ್ಪಿಸಲಾಗಿದೆ....

Priority for Kannada cinema sector ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ - Newsnap Kannada

Address


Alerts

Be the first to know and let us send you an email when The Newsnap posts news and promotions. Your email address will not be used for any other purpose, and you can unsubscribe at any time.

Contact The Business

Send a message to The Newsnap:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share