ನಮ್ಮೂರು ಘಟಪ್ರಭಾ

  • Home
  • ನಮ್ಮೂರು ಘಟಪ್ರಭಾ

ನಮ್ಮೂರು ಘಟಪ್ರಭಾ Our Native Our Heaven Ghataprabha

ಗೋಕಾಕ‌ ನಗರಕ್ಕೆ  ಇಂಜಿನಿಯರಿಂಗ್ ಕಾಲೇಜು ಶೀಘ್ರದಲ್ಲೇ ಆರಂಭ... ಇಲ್ಲಿನ ವಿದ್ಯಾರ್ಥಿಗಳ ಬಹುದಿನಗಳ ಕನಸು ನನಸು...
23/08/2025

ಗೋಕಾಕ‌ ನಗರಕ್ಕೆ ಇಂಜಿನಿಯರಿಂಗ್ ಕಾಲೇಜು ಶೀಘ್ರದಲ್ಲೇ ಆರಂಭ... ಇಲ್ಲಿನ ವಿದ್ಯಾರ್ಥಿಗಳ ಬಹುದಿನಗಳ ಕನಸು ನನಸು...

ಗೋಕಾಕ‌ ನಗರದಲ್ಲಿ ಆರ್ಮಿ ಕ್ಯಾಂಟೀನ್ ಸ್ಥಾಪನೆಗೆ ಅನುಮೋದನೆ...
23/08/2025

ಗೋಕಾಕ‌ ನಗರದಲ್ಲಿ ಆರ್ಮಿ ಕ್ಯಾಂಟೀನ್ ಸ್ಥಾಪನೆಗೆ ಅನುಮೋದನೆ...

ಶಾಸಕ ರಮೇಶ್ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ!ತರಕಾರಿ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ! ಬಡ ವಿದ್ಯ...
21/08/2025

ಶಾಸಕ ರಮೇಶ್ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ!

ತರಕಾರಿ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ!

ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ!
***********************************************
ಘಟಪ್ರಭಾ: ಪಕ್ಷ ವೇದ ಮರೆತು ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ಸ್ಥಳಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ಸಿ.ಸಿ, ಕ್ಯಾಮರಾ, ಇಂದಿರಾ ಕ್ಯಾಂಟಿನ್ ಉದ್ಘಾಟನೆ ಹಾಗೂ ಮೃತ್ಯುಂಜಯ ಸರ್ಕಲದಿಂದ ಮಲ್ಲಾಪೂರ ಪಿ.ಜಿ.ಯ ಕಾಳಿಕಾ ದೇವಿ ದೇವಸ್ಥಾನ ವರೆಗಿನ ಮುಖ್ಯ ರಸ್ತೆಯ ನವೀಕರಣ ಕಾರ್ಯಕ್ರಮದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿದ್ದು, ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯಗಳನ್ನು ಹೊಂದಿರುವ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಕಡಿಮೆ ದರದಲ್ಲಿ ಬೆಳಗಿನ ಉಪಹಾರ ಮತ್ತು ಮದ್ಯಾಹ್ನ ಭೋಜನವು ಇದರಲ್ಲಿ ಸಿಗುತ್ತದೆ. ಕಡು ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಇಂದಿರಾ ಕ್ಯಾಂಟಿನ್ ಪ್ರಯೋಜನ ಪಡೆದುಕೊಳ್ಳಬೇಕು. ಕೇವಲ ೫ ರೂ ನೀಡಿದರೆ ಉಪಹಾರ ಮತ್ತು ೧೦ ರೂ. ನೀಡಿದರೆ ಊಟವು ಕಡಿಮೆ ದರದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದು, ಗುಣಮಟ್ಟದ ಆಹಾರವು ದೊರೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಪುರಸಭೆಯಿಂದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ನಂತರ ಶಾಸಕರು ಇಂದಿರಾ ಕ್ಯಾಂಟಿನ್ ದಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಪರೀಕ್ಷಿಸಿದರು. ನಂತರ ಸನ್ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಫ್.ಸಿ ಮುಕ್ತನಿಧಿ ಅನುದಾನದ ಇತರೆ ಬಡ ಜನರ ಯೋಜನೆಯಡಿ ಬಿ.ಇ/ ಎಂ.ಬಿ.ಬಿ.ಎಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪಗಳನ್ನು ವಿತರಿಸಲಾಯಿತು. ಘಟಪ್ರಭಾ ಪುರಸಭೆ ವ್ಯಾಪ್ತಿಯ ವಾರ್ಡ ನಂ.೭ರಲ್ಲಿ ಸಯ್ಯದ ಜಿಂದನ್ನವರ ಮನೆಯಿಂದ ಗೌಸಖಾನ ಕಿತ್ತೂರಕರ ರವರ ಮನೆಯವರೆಗೆ ಸಿ.ಸಿ ರಸ್ತೆಗೆ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು.
ಬಹು ದಿನಗಳ ಬೇಡಿಕೆಯಾದ ಘಟಪ್ರಭಾ ಮುಖ್ಯ ರಸ್ಥೆಯು ೧೦-೧೫ ವರ್ಷಗಳ ಹಿಂದೆ ಮಾಡಲಾಗಿತ್ತು. ಇಲ್ಲಿಯ ವರೆಗೆ ರಿಪೇರಿ ಮಾಡುತ್ತ ಬಂದಿದ್ದು, ಈಗ ಈ ರಸ್ತೆಗೆ ನವೀಕರಣದ ಭಾಗ್ಯ ಲಬ್ಯವಾಗಲಿದೆ. ಪುರಸಭೆಯ ಕೇಲವೂಂದು ಸ್ಥಳದಲ್ಲಿ ಕಿಸೆಗಳ್ಳತನ ಹೆಚ್ಚಾಗುತ್ತಿದ್ದು ಅದನ್ನು ತಡೆಯಲು ಆರು ಕಡೆ ಅಳವಡಿಸಲಾದ ಸಿ.ಸಿ.ಕ್ಯಾಮರಾಗಳನ್ನು ಉದ್ಘಾಟಿಸಲಾಯಿತು.

ಪಸಂದರ್ಭದಲ್ಲಿ ಟಿ.ಆರ್. ಕಾಗಲ, ಮುಖ್ಯಾಧಿಕಾರಿ ಶ್ರೀಮತಿ ಎಂ.ಎಸ್ ಪಾಟೀಲ, ಹಿರಿಯರಾದ ಡಿ. ಎಂ. ದಳವಾಯಿ, ರಾಮಣ್ಣ ಹುಕ್ಕೇರಿ, ಈಶ್ವರ ಮಟಗಾರ, ಅರವಿಂದ ಬಡಕುಂದ್ರಿ, ಜಿ.ಎಸ್. ರಜಪೂತ, ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಬುಧವಾರ(ಆ.20) ...
19/08/2025

ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಬುಧವಾರ(ಆ.20) ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.

ಗೋಕಾಕ ಶೈಕ್ಷಣಿಕ ವಲಯ ವ್ಯಾಪ್ತಿಯ ಅಂಗನವಾಡಿ'ಯಿಂದ ಪಿಯು ಕಾಲೇಜುಗಳಿಗೆ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ದಿ. 19ರಂದು ಒಂದು ದಿನದ ರಜೆಯನ್ನು...
19/08/2025

ಗೋಕಾಕ ಶೈಕ್ಷಣಿಕ ವಲಯ ವ್ಯಾಪ್ತಿಯ ಅಂಗನವಾಡಿ'ಯಿಂದ ಪಿಯು ಕಾಲೇಜುಗಳಿಗೆ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ದಿ. 19ರಂದು ಒಂದು ದಿನದ ರಜೆಯನ್ನು ಘೋಷಣೆ ಮಾಡಲಾಗಿದೆ ಎಂದು ತಾಲ್ಲೂಕು ಡಂಡಾಧಿಕಾರಗಳೂ ಆಗಿರುವ ತಹಶೀಲ್ದಾರ ಡಾ. ಮೋಹನ ಭಸ್ಮೆ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

07/08/2025
ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ 41 ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.ಭಕ್ತರಲ್ಲಿ ವಿಶೇಷ ಮನವಿ...
04/08/2025

ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ 41 ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಭಕ್ತರಲ್ಲಿ ವಿಶೇಷ ಮನವಿ:
ಶ್ರೀಗಳ‌ ಜನ್ಮದಿನದ ಪ್ರಯುಕ್ತ ಮಹಾ ರಕ್ತದಾನ ಶಿಬಿರ ನಡೆಯುತ್ತಿದ್ದು, ಎಲ್ಲರೂ ದಾನಮ್ಮ ಗುಡಿಗೆ ಬಂದು ರಕ್ತದಾನ ಮಾಡಿ, ಜೀವದಾನ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ.

01/02/2025

ಘಟಪ್ರಭಾ ಇತಿಹಾಸ
#ನಮ್ಮೂರುಘಟಪ್ರಭಾ

Address


591306

Website

Alerts

Be the first to know and let us send you an email when ನಮ್ಮೂರು ಘಟಪ್ರಭಾ posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share