UK Express News

  • Home
  • UK Express News

UK Express News uttarakannada news

15/07/2025

ಮಹಾಮಂಡಲೇಶ್ವರ 1008, ಸದ್ಗುರು, ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ "ಕೋನಳ್ಳಿ ಚಾತುರ್ಮಾಸ್ಯ ವ್ರತಾಚರಣೆ" ಯ 6ನೇ ದಿನವಾದ ಇಂದು, ಮಂಗಳವಾರ ಶ್ರೀಗಳ ಭಕ್ತಾಧಿಗಳು ಹೊರೆಕಾಣಿಕೆ ಸಹಿತ ಚಾತುರ್ಮಾಸ್ಯ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಬಂದರು.

ಅಧಿಕಾರಿ ಸಮರ್ಥನಿದ್ದರೆ ಇಲಾಖೆಯೇ  ಜನಪರವಾಗುತ್ತದೆ ಎನ್ನುವುದಕ್ಕೆ  ಸಾಕ್ಷಿಯಾದ "ಸೀಸೈ ಕಾಲುಸಂಕ''ಜೋಯಿಡಾ : ಇಲ್ಲಿನ ಜನರ ಸ್ವಕ್ಷೇತ್ರ ಕರ್ನಾಟ...
22/06/2025

ಅಧಿಕಾರಿ ಸಮರ್ಥನಿದ್ದರೆ ಇಲಾಖೆಯೇ ಜನಪರವಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾದ "ಸೀಸೈ ಕಾಲುಸಂಕ''

ಜೋಯಿಡಾ : ಇಲ್ಲಿನ ಜನರ ಸ್ವಕ್ಷೇತ್ರ ಕರ್ನಾಟಕವಾದರೂ ಇವರು ಗೋವಾವನ್ನೇ ಕಾರ್ಯ ಕ್ಷೇತ್ರವನ್ನಾಗಿ ನೆಚ್ಚಿಕೊಂಡಿದ್ದಾರೆ. ಇಲ್ಲಿಗೆ ಬರುವ ಎಲ್ಲಾ ಯೋಜನೆಗಳು ವಿಳಂಬವಾಗೇ ತಲುಪುತ್ತದೆ ಮತ್ತು ಬಹುತೇಕ ಯೋಜನೆ ಕಳಪೆಯಾಗಿರುತ್ತದೆ ಎನ್ನುವುದಕ್ಕೆ ಮಳೆ ನೀರಿಗೆ ಕೊಚ್ಚಿಹೋದ ಸೀಸೈ ಗ್ರಾಮದ ಸೇತುವೆಯೇ ಸಾಕ್ಷಿ.

ಆದರೆ ಅಧಿಕಾರಿ ಸಮರ್ಥನಾಗಿದ್ದರೆ, ಜನಪರ ಚಿಂತಕನಾಗಿದ್ದರೆ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಾಧಿಸುವುದರ ಜೊತೆಗೆ ಜನರ ಸಮಸ್ಯೆಗೆ ಪರಿಹಾರವನ್ನೂ ಹುಡುಕುತ್ತಾನೆ ಎನ್ನುವುದಕ್ಕೂ ಇದೇ ಸೀಸೈ ಗ್ರಾಮದ ಕಾಲುಸಂಕ ಸಾಕ್ಷಿಯಾಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಜೋಯಿಡಾ ಹಿಂದುಳಿದ ತಾಲೂಕು. ಇಲ್ಲಿನ ಜನರು ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಈ ಡಿಜಿಟಲ್ ಯುಗದಲ್ಲೂ ಮಾನವ ಸಂಚಾರಕ್ಕೆ ರಸ್ತೆಗಳೇ ಇಲ್ಲ ಎನ್ನುವಂತಹ ಜನವಸತಿ ಪ್ರದೇಶವೂ ಇಲ್ಲಿದೆ ಎಂದರೆ ನಾವೆಲ್ಲ ಆಶ್ಚರ್ಯ ಪಡಲೇಬೇಕು.

ಕುಣಬಿ ಜನರೇ ಹೆಚ್ಚಿರುವ ಜೋಯಿಡಾದ ಗುಡ್ಡಗಾಡು ಪ್ರದೇಶ ಬಜಾರಕುಣಂಗ ಗ್ರಾಮ ಪಂಚಾಯತದ ಸೀಸೈ ಗ್ರಾಮಕ್ಕೆ ಸುಮಾರು 10 ವರ್ಷಗಳ ಹಿಂದೆ ಜನರ ಅನುಕೂಲಕ್ಕೆ ಒಂದು ಸೇತುವೆ ನಿರ್ಮಿಸಲಾಗಿತ್ತು. ಆದರೆ ಆ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ತದನಂತರ ಗ್ರಾಮಸ್ಥರೇ ಸೇರಿ ಒಂದು ಕಾಲುಸಂಕ ಮಾಡಿಕೊಂಡಿದ್ದರು. ಮಳೆಯ ಆರ್ಭಟಕ್ಕೆ ಅದೂ ಕೂಡ ನೀರುಪಾಲಾಗಿದೆ. ಇಷ್ಟೆಲ್ಲ ಆದರೂ ಇಲ್ಲಿನ ಜನಕ್ಕೆ ತಾವೇನೂ ಮಾಡಬೇಕು ಎಂಬುದು ತೋಚಿಲ್ಲ. ಯಾಕೆಂದರೆ ಇಲ್ಲಿನ ಜನ ಡಿಜಿಟಲ್ ಯುಗದ ಮುಗ್ದರು, ಮೂಲಭೂತ ಸೌಕರ್ಯಗಳ ಬಗ್ಗೆ ಅರಿಯದ ಅಮಾಯಕರು.

ಇದಕ್ಕೆ ಹೇಳೋದು ಅಧಿಕಾರಿ ಜನಪರನಾಗಿದ್ದರೆ ಆತ ಜನರ ಸಮಸ್ಯೆಗೆ ಮರುಗುತ್ತಾನೆ. ಜನರ ಸಮಸ್ಯೆ ಪರಿಹರಿಸಲು ಹಾತೊರೆಯುತ್ತಾನೆ. ಅದೃಷ್ಟವಶಾತ್ ರಾಮನಗರ ಠಾಣೆಗೆ ಸಹೃದಯಿ ಮಹಾಂತೇಶ ಉದಯ ನಾಯಕ ಎನ್ನುವ ಪಿ.ಎಸ್.ಐ. ಸಿಕ್ಕ ಕಾರಣ ಇವರು ತನ್ನ ಠಾಣಾ ವ್ಯಾಪ್ತಿಯಲ್ಲಿ ಬರುವ ಸೀಸೈ ಗ್ರಾಮದ ಸೇತುವೆ ಮತ್ತು ನಂತರದ ಕಾಲುಸಂಕದ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗಳ ಗಮನ ಸೆಳೆದಿದ್ದಾರೆ.

ಸದಾ ಜನಪರವೇ ಯೋಚಿಸುವ ಪೊಲೀಸ್ ವರಿಷ್ಟಾಧಿಕಾರಿಗಳ ಕಿವಿಗೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರೆ ಕೇಳಬೇಕೇ? ಅವರು ಸಂಬಂಧಪಟ್ಟ ಇಲಾಖೆ, ಇತರೇ ಆಡಳಿತದ ಜೊತೆ ಸಮನ್ವಯ ಸಾಧಿಸಿ ಸೀಸೈ ಗ್ರಾಮದ ಜನತೆಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಈಗೊಂದು ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ್ದಾರೆ. ಇವರ ಕಾರ್ಯ ಹೀಗೆಯೇ ಮುಂದುವರಿಯಲಿ, ಮುಂದೆ ನಮಗೊಂದು ಶಾಶ್ವತ ಪರಿಹಾರ ಕಲ್ಪಿಸಿಕೊಡುವಲ್ಲಿ ಇದೇ ಅಧಿಕಾರಿಗಳು ನೆರವಾಗಲಿ ಎಂದು ಊರ ನಾಗರಿಕರು ಬಯಸುವುದರ ಜೊತೆಗೆ ಜನಪರ ಅಧಿಕಾರಿಗಳ ಜೊತೆ ಸಮರ್ಥ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ ಅವರ ಕಾರ್ಯವನ್ನು ಸೀಸೈ ಗ್ರಾಮದ ಜನ ಶ್ಲಾಘಿಸಿದ್ದಾರೆ.

14/02/2025
10/09/2024

I am Rachna Ravikiran, raising funds for my friend's father, Narayan Janna Naik, who is 72 and battling liver cancer. He is receiving ICU care in Mangaluru, but his family urgently needs ₹35,00,000 for further treatment. Any contribution will make a significant difference.

Address


Website

Alerts

Be the first to know and let us send you an email when UK Express News posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share