11/10/2024
#ನವರಾತ್ರಿ_ಒಂಬತ್ತನೆಯ_ದಿನ ಸಿದ್ಧಿದಾತ್ರಿ ಆರಾಧನೆ 🙏🚩
ಶಾರದೀಯ ನವರಾತ್ರಿಯನ್ನು 9 ದಿನಗಳವರೆಗೆ ಆಚರಿಸಲಾಗುತ್ತದೆ. ಈ 9 ದಿನಗಳಲ್ಲೂ ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ 9ನೆಯ ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಈ ಬಾರಿ ನವರಾತ್ರಿ ಹಬ್ಬವು ಅಕ್ಟೋಬರ್ 11 ರಂದು ಆರಂಭವಾಗಿದ್ದು, 2024 ರ ಅಕ್ಟೋಬರ್ 12 ರಂದು ಮುಕ್ತಾಯಗೊಳ್ಳುವುದು.
#ಸಿದ್ಧಿದಾತ್ರಿ_ದೇವಿ_ಸ್ವರೂಪ
ದೇವಿ ಸಿದ್ಧಿದಾತ್ರಿ ಆಧ್ಯಾತ್ಮಿಕ ಆನಂದವನ್ನು ಅರಸುವವರನ್ನು ಆಶೀರ್ವದಿಸುತ್ತಾಳೆ. ಮಾತೃದೇವತೆಯ ಈ ರೂಪವು ಬಲಗೈಯಲ್ಲಿ ಚಕ್ರವನ್ನು ಮತ್ತು ಗದೆಯನ್ನು ಹಾಗೂ ಎಡಗೈಯಲ್ಲಿ ಶಂಖವನ್ನು ಮತ್ತು ಕಮಲವನ್ನು ಹಿಡಿದುಕೊಂಡಿದ್ದಾಳೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ.
*ಸಿದ್ಧಿದಾತ್ರಿ ದೇವಿ ಪೂಜೆ ಮಹತ್ವ*
ಸಿದ್ಧಿದಾತ್ರಿ ದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ ಹಾಗೂ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಅವಳು ಕೆಂಪು ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ.
ಸಿದ್ಧಿದಾತ್ರಿಯ ಅರ್ಥ - "ಸಿದ್ಧಿ" ಎಂದರೆ ಪರಿಪೂರ್ಣತೆ ಆದರೆ "ದಾತ್ರಿ" ಎಂದರೆ "ಕೊಡುವವಳು" ಆದ್ದರಿಂದ ಅವಳನ್ನು ಮಾತಾ ಸಿದ್ಧಿದಾತ್ರಿ ಎಂದು ಕರೆಯಲಾಗುತ್ತದೆ.
ಅವಳು ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಿದ್ಧಿಗಳನ್ನು (ಪರಿಪೂರ್ಣತೆ) ನೀಡುತ್ತಾಳೆ. ಆದ್ದರಿಂದ ಅವಳನ್ನು ಸಿದ್ಧಿದಾತ್ರಿ ದೇವಿ ಎಂದು ಕರೆಯಲಾಗುತ್ತದೆ. ಸಿದ್ಧಿದಾತ್ರಿಯ ಇನ್ನೊಂದು ಹೆಸರು ಲಕ್ಷ್ಮಿ ದೇವಿ, ಅವಳು ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ಪ್ರತಿನಿಧಿಸುತ್ತಾಳೆ.
ಸಿದ್ಧಿದಾತ್ರಿ ದೇವಿ ಪೂಜೆ ಶುಭ ಮುಹೂರ್ತ
ಮಹಾನವಮಿ 2024 ನ್ನು ಅಕ್ಟೋಬರ್ 11 ರಂದು ಶುಕ್ರವಾರ ಆಚರಿಸಲಾಗುತ್ತದೆ.
ನವಮಿ ತಿಥಿ ಪ್ರಾರಂಭ: 2024 ರ ಅಕ್ಟೋಬರ್ 11 ರಂದು ಶುಕ್ರವಾರ ಹಗಲು 12:06 ರಿಂದ
ನವಮಿ ತಿಥಿ ಮುಕ್ತಾಯ: 2024 ರ ಅಕ್ಟೋಬರ್ 12 ರಂದು ಶನಿವಾರ ಬೆಳಗ್ಗೆ 10:57 ರವರೆಗೆ.
*ಸಿದ್ಧಿದಾತ್ರಿ ಪೂಜೆ ವಿಧಾನ*
- ಸಿದ್ಧಿದಾತ್ರಿ ದೇವಿಯ ವಿಗ್ರಹದ ಮುಂದೆ ಕಲಶ ಸ್ಥಾಪನೆ ಮಾಡಿ.
- ದೇವಿಯ ಮೂರ್ತಿಯ ಹಣೆಯ ಮೇಲೆ ತಿಲಕವಿಡಿ.
- ದೀಪಗಳನ್ನು ಬೆಳಗಿಸಿ ಮತ್ತು ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿ.
- ಸಿದ್ಧಿದಾತ್ರಿ ಮಂತ್ರಗಳನ್ನು ಪಠಿಸಿ ಮತ್ತು ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲು ದೇವಿಯನ್ನು ಆಹ್ವಾನಿಸಿ.
- ಷೋಡಶೋಪಚಾರ ಪೂಜೆಯ ನಂತರ ಆರತಿ ಮಾಡಿ.
- ಇತರ ಭಕ್ತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ನೀಡಿ.
- ಈ ದಿನ ಒಂಬತ್ತು ಹೂವುಗಳು, ಒಂಬತ್ತು ವಿವಿಧ ರೀತಿಯ ಹಣ್ಣುಗಳು, ಒಂಬತ್ತು ವಿವಿಧ ಒಣ ಹಣ್ಣುಗಳನ್ನು ಸಹ ಅರ್ಪಿಸಲಾಗುತದೆ
- ಸಾಮಾನ್ಯವಾಗಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂಬತ್ತು ಕನ್ಯಾ ಹುಡುಗಿಯರನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರಿಗೆ ಆಹಾರ ಮತ್ತು ಉಡುಗೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಇದು ಕನ್ಯಾ ರೂಪದಲ್ಲಿ ದೇವಿಯನ್ನು ಪೂಜಿಸುವ ಸಂಕೇತವಾಗಿದೆ.
*ನವಮಿ ಹೋಮ*
ನವಮಿ ತಿಥಿಯು ಸೂರ್ಯೋದಯದ ನಂತರ ಬಹಳ ಬೇಗ ಮುಗಿದರೆ ಅದು ಹಿಂದಿನ ದಿನ ಸಂಜೆಯ ಮೊದಲು ಪ್ರಾರಂಭವಾಗುತ್ತದೆ ಮತ್ತು ನವಮಿ ತಿಥಿಯ ಉತ್ತಮ ಭಾಗವು ಅಷ್ಟಮಿ ತಿಥಿಯಲ್ಲಿ ಮೇಲುಗೈ ಸಾಧಿಸುತ್ತದೆ. ಅದು ಸಂಭವಿಸಿದಲ್ಲಿ ನವಮಿ ಹೋಮವನ್ನು ಹಿಂದಿನ ದಿನದಂದು ಮಾಡಬಹುದು ಮತ್ತು ಅದನ್ನು ಧಾರ್ಮಿಕ ಗ್ರಂಥಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟಮಿ ತಿಥಿಯಂದು ಹೋಮವನ್ನು ಅಷ್ಟಮಿ ತಿಥಿ ಚಾಲ್ತಿಯಲ್ಲಿರುವಾಗ ಯಾವುದೇ ಸಮಯದಲ್ಲಿ ಪ್ರಾರಂಭಿಸಬಹುದು ಮತ್ತು ನವಮಿ ತಿಥಿಯು ಪ್ರಚಲಿತವಾಗಲು ಪ್ರಾರಂಭಿಸಿದಾಗ ಮಾಡಬಹುದು. ಆದರೆ ಸೂರ್ಯಾಸ್ತದ ಮೊದಲು ಮುಗಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ತಿಥಿಯು ಅಷ್ಟಮಿಯಿಂದ ನವಮಿಗೆ ದಾಟುವಾಗ ಹೋಮವನ್ನು ಮುಂದುವರೆಸಬೇಕು.
*ಸಿದ್ಧಿದಾತ್ರಿ ಪೂಜೆ ಪ್ರಯೋಜನ*
ಸಿದ್ಧಿದಾತ್ರಿ ದೇವಿಯನ್ನು ಕೇತು ಗ್ರಹವನ್ನು ಆಳುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿಯ ಪೂಜೆಯನ್ನು ಮಾಡುವುದರಿಂದ ಜಾತಕದಲ್ಲಿ ಕೇತುವಿನ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಿಸುವ ಶಕ್ತಿಯು ಆಕೆಗಿದೆ ಎನ್ನುವ ನಂಬಿಕೆಯಿದೆ. ಸಿದ್ಧಿದಾತ್ರಿಯ ಭಕ್ತರಾಗಿರುವುದರಿಂದ, ಒಬ್ಬರು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಸಂತೋಷವನ್ನು ಪಡೆಯಬಹುದು. ಸಿದ್ಧಿದಾತ್ರಿಯ ಅನುಗ್ರಹದಿಂದ, ಒಬ್ಬರು ಚಿಂತೆ, ಆತಂಕ ಮತ್ತು ಭಯದಂತಹ ಜೀವನದ ಅಡೆತಡೆಗಳನ್ನು ಸಹ ತೊಡೆದುಹಾಕಬಹುದು. ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಜೀವನದಲ್ಲಿ ಯಶಸ್ಸು, ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಆಶೀರ್ವದಿಸಲ್ಪಡುತ್ತಾರೆ.
*ನವರಾತ್ರಿ ಒಂಭತ್ತನೇ ದಿನದ ಮಂತ್ರ (ಸಿದ್ಧಿದಾತ್ರಿ ಪೂಜಾ ಮಂತ್ರ)*
*ಓಂ ದೇವಿ ಸಿದ್ಧಿಧಾತ್ರ್ಯೈ ನಮಃ*
*ಓಂ ದೇವಿ ಸಿದ್ಧಿಧಾತ್ರಿಯೈ ನಮಃ*
*• ಯಾ ದೇವಿ ಸರ್ವಭೂತೇಷು ಸಿದ್ಧಿಧಾತ್ರಿ ರೂಪೇಣ ಸಂಸ್ಥಿತಾ |*
*ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||*
*ಸಿದ್ಧಿದಾತ್ರಿ ಕಥೆ*
ಹಿಂದೂ ಪುರಾಣಗಳ ಪ್ರಕಾರ, ಸಿದ್ಧಿದಾತ್ರಿಯು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುವ ದೇವತೆ ಎಂದು ಕರೆಯಲಾಗುತ್ತದೆ. ಸಿದ್ಧಿಯು 'ಬಯಕೆ'ಯನ್ನು ಸೂಚಿಸುತ್ತದೆ ಮತ್ತು ದಾತ್ರಿಯು 'ಒದಗಿಸುವವಳು' ಎಂಬುದನ್ನು ಸೂಚಿಸುತ್ತದೆ. ಈ ಎರಡು ಶಬ್ಧವನ್ನು ಸಂಯೋಜಿಸಿ ಸಿದ್ಧಿದಾತ್ರಿ ಎಂಬ ಪದವನ್ನು ರೂಪುಗೊಂಡಿದೆ. ಮಾತೆ ಸಿದ್ಧಿದಾತ್ರಿಯು ತನ್ನ ಆಶೀರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ಧಿಗಳನ್ನು ನೀಡಿದಳು ಎಂದು ಪುರಾಣವು ತಿಳಿಸುತ್ತದೆ. ಭಗವಾನ್ ಶಿವನು ದೇವಿಯನ್ನು ಸಮರ್ಪಣೆಯೊಂದಿಗೆ ಪೂಜಿಸಿದನು, ಅವನ ದೇಹದ ಅರ್ಧಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಯಿತು. ಹೀಗಾಗಿ, ಶಿವನನ್ನು ಅರ್ಧನಾರೀಶ್ವರ ಎಂದೂ ಕರೆಯುತ್ತಾರೆ.
ನಾಲ್ಕು ಕೈಗಳನ್ನು ಹೊಂದಿರುವ ಕೆಂಪು ಸೀರೆಯನ್ನು ಧರಿಸಿರುವ ದೇವಿಯ ವಿಗ್ರಹವು ಕಮಲದ ಹೂವಿನ ಮೇಲೆ ಆರೋಹಿಸಲ್ಪಟ್ಟಿದೆ. ಅವಳು ಬಲಗೈಯಲ್ಲಿ ಗದಾ ಮತ್ತು ಚಕ್ರವನ್ನು ಹಿಡಿದಿದ್ದಾಳೆ, ಎಡಗೈಯು ಹೂವು ಮತ್ತು ಶಂಖವನ್ನು ಹಿಡಿದಿರುವುದು ಕಾಣುತ್ತದೆ. ಮಾತೆ ಸಿದ್ಧಿದಾತ್ರಿಯನ್ನು ಅಷ್ಟ ಮಹಾ ಸಿದ್ಧಿಗಳ ಸೃಷ್ಟಿಕರ್ತೆ ಎಂದೂ ಕರೆಯಲಾಗುತ್ತದೆ. ಭಕ್ತರು ದುರ್ಗಾ ದೇವಿಯನ್ನು ಪರಿಪೂರ್ಣತೆ, ಶಕ್ತಿ ಮತ್ತು ವೈಭವವನ್ನು ಸಂಕೇತಿಸುತ್ತದೆ.
*ಸಿದ್ಧಿದಾತ್ರೀ*
ನವರಾತ್ರಿಯ 9ನೇ ದಿನ ಪೂಜಿಸುವ ಸಿದ್ಧಿದಾತ್ರಿಯನ್ನು ಪರಶಿವನೂ ಪೂಜಿಸಿದ್ದ. ಆಕೆ ಶಿವನಿಗೆ ಒಲಿದು ಎಡಕ್ಕೆ ಬಂದು ನಿಂತ ಕಾರಣ ಇಬ್ಬರ ಶಕ್ತಿಯೂ ಸೇರಿ ಜಗತ್ತಿಗೊಂದು ಸಂದೇಶ ರವಾನೆಯಾಯಿತು.
*ಏನದು- ಇಲ್ಲಿದೆ ಆ ವಿವರ*
ನವರಾತ್ರಿಯ ಸಮಯದಲ್ಲಿ, ಜಗದಂಬೆಯನ್ನು ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ಮಹಾ ಅಷ್ಟಮಿ ಮತ್ತು ಮಹಾನವಮಿ ವಿಶೇಷ ಮಹತ್ವ. ಹಿಂದೂ ಆಚರಣೆಗಳ ಪ್ರಕಾರ, ಮಹಾನವಮಿಯೊಂದಿಗೆ ಕೊನೆಗೊಳ್ಳುವ ನವರಾತ್ರಿಯ ಒಂಬತ್ತನೇ ದಿನದಂದು ಮಾತೆ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ನವಮಿ ತಿಥಿಯಂದು ಕನ್ಯಾ ಪೂಜೆ ಮಾಡುವುದು ಕೂಡ ವಾಡಿಕೆ.
ಪುರಾಣ ಗ್ರಂಥಗಳ ಪ್ರಕಾರ, ತಾಯಿ *ಸಿದ್ಧಿದಾತ್ರಿಯನ್ನು* ಸಾಧನೆ ಮತ್ತು ಮೋಕ್ಷದ ದೇವತೆ ಎಂದು ವಿವರಿಸಲಾಗಿದೆ. ತನ್ನ ನಾಲ್ಕು ಕೈಗಳಲ್ಲಿ, ಅವಳು ಶಂಖ, ಚಕ್ರ, ಗದಾ ಮತ್ತು ಪದ್ಮ ಹಿಡಿದಿದ್ದಾಳೆ. ಆಕೆ ಸರಸ್ವತಿ ದೇವಿಯ ರೂಪ. ಸಿದ್ಧಿದಾತ್ರಿ ಸಿಂಹದ ಮೇಲೆ ಕುಳಿತು ಕಮಲದ ಮೇಲೆ ಕಾಲಿರಿಸಿದ್ದಾಳೆ.
ಸಿದ್ಧಿಧಾತ್ರಿಯು ಪಾರ್ವತಿ ದೇವಿಯ ಮೂಲ ರೂಪ ಎಂದು ಬಣ್ಣಿಸಲಾಗಿದ್ದು, ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯಾ, ಈಷಿತ್ವ ಮತ್ತು ವಶಿತ್ವ ಎಂಬ ಎಂಟು ಅಲೌಕಿಕ ಶಕ್ತಿಗಳನ್ನು ಅಥವಾ ಸಿದ್ಧಿಗಳನ್ನು ಹೊಂದಿದ್ದಾಳೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಹಿಷಾಸುರನು ಮಾಡಿದ ದುಷ್ಕೃತ್ಯಗಳಿಂದಾಗಿ ಎಲ್ಲಾ ದೇವತೆಗಳು ತುಂಬಾ ತೊಂದರೆಗೀಡಾದರು. ಆತನಿಂದ ರಕ್ಷಣೆ ಪಡೆಯಲು ದೇವತೆಗಳು, ಭಗವಾನ್ ಶಿವ ಮತ್ತು ವಿಷ್ಣುವಿನ ಬಳಿಗೆ ಹೋದರು. ಅವರ ಸಲಹೆ ಪ್ರಕಾರ ಅಲ್ಲಿ ಎಲ್ಲಾ ದೇವತೆಗಳಿಂದ ಒಂದು ಅಲೌಕಿಕ ಕಾಂತಿ ಹೊರಹೊಮ್ಮಿತು. ಆ ಕಾಂತಿಯಿಂದ ದೈವಿಕ ಶಕ್ತಿ ಸೃಷ್ಟಿಯಾಯಿತು.
ಆ ದೈವಿಕ ಶಕ್ತಿಯು ತಾಯಿ ದುರ್ಗೆಯ ಅತ್ಯಂತ ಶಕ್ತಿಶಾಲಿ ರೂಪವೆಂದು ಪರಿಗಣಿಸಲಾಗಿದೆ. ಎಲ್ಲಾ ದೇವತೆಗಳ ಶಕ್ತಿಯೂ ಈಕೆಯಲ್ಲಿ ಅಡಕವಾಗಿರುವ ಕಾರಣ ಈ ದೇವಿಯೇ ಸಿದ್ಧಿದಾತ್ರಿ.
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವನು ಸಿದ್ಧಿದಾತ್ರಿಗಾಗಿ ಕಠಿಣ ತಪಸ್ಸು ಮಾಡುವ ಮೂಲಕ ಎಲ್ಲಾ ಎಂಟು ಸಿದ್ಧಿಗಳನ್ನು ಸಾಧಿಸಿದನು.
ಬ್ರಹ್ಮಾಂಡದ ಸೃಷ್ಟಿಯ ಸಮಯದಲ್ಲಿ, ಮಹಾ ಶಿವನು ಯಾವುದೇ ರೂಪವಿಲ್ಲದ ಆದಿಪರಾಶಕ್ತಿಯನ್ನು ಪೂಜಿಸಿದನು.
ಅದರಂತೆ, ಆದಿಪರಾಶಕ್ತಿಯು ಶಿವನ ಎಡಭಾಗದಲ್ಲಿ ಸಿದ್ಧಿದಾತ್ರಿಯಾಗಿ ಕಾಣಿಸಿಕೊಂಡರು. ತಾಯಿ ಸಿದ್ಧಿದಾತ್ರಿಯ ಕೃಪೆಯ ಪರಿಣಾಮ, ಶಿವನ ಅರ್ಧ ದೇಹವು ದೇವತೆಯಾಯಿತು. ಅರ್ಧನಾರೀಶ್ವರ ಎಂದು ಕರೆಯಲಾಯಿತು.
ಒಂಬತ್ತು ದಿನಗಳ ಘೋರ ಹೋರಾಟದ ನಂತರ, ಹತ್ತನೇ ದಿನ ದುರ್ಗಾ ದೇವಿಯು ಮಹಿಷಾಸುರನ ಸಂಹಾರ ಮಾಡಿದ್ದು ಆ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ ಮಹಿಷನನ್ನು ಕೊಂದ ಕಾರಣ ಮಹಿಷ ಮರ್ದಿನಿ ಎಂದು ಆಕೆ ಕರೆಯಿಸಿಕೊಂಡಳು.
ಕೇತು ಗ್ರಹವನ್ನು ಸಿದ್ಧಿದಾತ್ರಿ ದೇವಿ ಆಳುವ ಕಾರಣ ಈ ಗ್ರಹಕ್ಕೆ ಶಕ್ತಿ ಮತ್ತು ನಿರ್ದೇಶನವನ್ನು ಒದಗಿಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ, ಸಿದ್ಧಿದಾತ್ರಿಯ ಆರಾಧಕರು ಕೇತು ಗ್ರಹದ ದುಷ್ಪರಿಣಾಮಗಳಿಂದ ರಕ್ಷಿಸಲ್ಪಡುತ್ತಾರೆ ಎಂಬುದು ನಂಬಿಕೆ.
*ಸಿದ್ಧಿಧಾತ್ರಿಯನ್ನು ಆರಾಧಿಸುವುದಕ್ಕೆ ಪ್ರಾರ್ಥನಾ ಮಂತ್ರ*
ಸಿದ್ಧಗಂಧರ್ವ ಯಕ್ಷಾದ್ಯೈರ ಸುರೈರಮರೈರಪಿ । ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ॥
*ನವರಾತ್ರಿ ಶುಭಾಶಯಗಳು 🙏*
SiddaRajuGowda Bjp Mandya