Shree Vykunta Vartaa

  • Home
  • Shree Vykunta Vartaa

Shree Vykunta Vartaa A monthly Spiritual and Educational magazine runs under Sri Venkateshwara Charitable Trust, located at Mandya.

12/04/2025

Where is God?

06/04/2025

ರಾಮನವಮಿಯ ಶುಭಾಶಯಗಳು.

ಸೂರ್ಯಾಸ್ತದ ನಂತರ ಯಾಕೆ ಉಪ್ಪು ಎರವಲು (ಸಾಲ) ಪಡೆಯುವುದಿಲ್ಲ?ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ...
25/12/2024

ಸೂರ್ಯಾಸ್ತದ ನಂತರ ಯಾಕೆ ಉಪ್ಪು ಎರವಲು (ಸಾಲ) ಪಡೆಯುವುದಿಲ್ಲ?

ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ್ನು ಲಕ್ಷ್ಮಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಉಪ್ಪು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದರಿಂದ ದುಷ್ಟ ಶಕ್ತಿಗಳು ದೂರ ಸರಿಯುತ್ತವೆ. ಹಿಂದೂ ಧರ್ಮ ಹಾಗೂ ಆಚರಣೆಯಲ್ಲಿ ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ್ನು ಲಕ್ಷ್ಮಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಲಕ್ಷ್ಮಿ ದೇವಿಯು ಸಾಮಾನ್ಯವಾಗಿ ಸಂಜೆಯ ವೇಳೆ ಮನೆಯನ್ನು ಪ್ರವೇಶ ಮಾಡುತ್ತಾಳೆ. ಅವಳು ಬರುವ ಹಾಗೂ ಇರುವ ಸಮಯವು ಅತ್ಯಂತ ಪವಿತ್ರವಾದದ್ದು. ಹಾಗಾಗಿ ಲಕ್ಷ್ಮಿ ಆಗಮಿಸುವ ಸಮಯದಲ್ಲಿ ಧನಾತ್ಮಕ ಹಾಗೂ ಸಕಾರಾತ್ಮಕ ವಾತಾವರಣವು ಮನೆಯಲ್ಲಿ ನೆಲೆಸಿರಬೇಕು ಎಂದು ಆಶಿಸುವರು. ಆದ್ದರಿಂದ ಸಂಜೆಯ ಸಮಯದಲ್ಲಿ ಹಣವನ್ನು ಮತ್ತು ಉಪ್ಪನ್ನು ಇತರರಿಗೆ ನೀಡಬಾರದು.

ಸಂಧ್ಯಾ ಸಮಯವು ಲಕ್ಷ್ಮಿಗೆ ಶ್ರೇಷ್ಠವಾದ ಸಮಯ. ಸಂಜೆಯ ವೇಳೆ ಸೂರ್ಯನ ಕಿರಣವು ಮಾಯವಾಗುವುದು. ಅಂತಹ ಸಮಯದಲ್ಲಿ ಸಾಕಷ್ಟು ಋಣಾತ್ಮಕ ಶಕ್ತಿ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಂಜೆಯ ವೇಳೆ ಆದಷ್ಟು ಧನಾತ್ಮಕ ಕೆಲಸಗಳನ್ನು ಮಾಡಬೇಕು ಎಂದು ಹೇಳಲಾಗುವುದು.

ಸಂಜೆಯ ಸಮಯದಲ್ಲಿ ಉಪ್ಪನ್ನು ಇತರರಿಗೆ ನೀಡಿದರೆ ಲಕ್ಷ್ಮಿಯನ್ನೇ ಮನೆಯಿಂದ ಆಚೆ ಕಳಿಸಿದ ಹಾಗೆ ಆಗುವುದು. ಇದು ಲಕ್ಷ್ಮಿಗೆ ಅವಮಾನ ಮಾಡಿದಂತಾಗುವುದು. ಜೀವನದಲ್ಲಿ ಧನ-ಧಾನ್ಯವನ್ನು ಹೊಂದಲು ಬಯಸುತ್ತೇವೆ ಎಂದಾದರೆ ಮೊದಲು ಲಕ್ಷ್ಮಿದೇವಿಯನ್ನು ಖುಷಿ ಪಡಿಸುವ ಮತ್ತು ಆರಾಧಿಸುವ ಕಾರ್ಯ ನೆರವೇರಬೇಕು,

ದೇವಿಗೆ ವಿಶೇಷ ಗೌರವ ಹಾಗೂ ಪೂಜೆಯನ್ನು ಸಲ್ಲಿಸುವುದರ ಮೂಲಕ ತಾಯಿಯ ಕೃಪೆಗೆ ಒಳಗಾಗಬಹುದು. ಜೊತೆಗೆ ಬಯಸಿದ ಸಿರಿ-ಸಂಪತ್ತು ಮನೆಯಲ್ಲಿ ತುಂಬಿರುತ್ತವೆ ಎಂಬ ನಂಬಿಕೆಯಿದೆ.

ಈ ಹಿನ್ನೆಲೆಯಲ್ಲಿಯೇ ಪುರಾತನ ಕಾಲದಿಂದಲೂ ಸಂಜೆ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವುದನ್ನು ನಿಷೇದಿಸಲಾಗಿದೆ. ಸೂರ್ಯಾಸ್ತದ ನಂತರ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವ ಪ್ರಕ್ರಿಯೆಯಿಂದಾಗಿ ಕೆಲವು ಸಮಸ್ಯೆಗಳು ಹಾಗೂ ಜೀವನದಲ್ಲಿ ಬದಲಾವಣೆಯು ಸಂಭವಿಸುವುದು.

ಅಲ್ಲದೆ ಉಪ್ಪಿನೊಂದಿಗೆ ಕೆಲವು ನಂಬಿಕೆಗಳು ಹಾಗೂ ಭವಿಷ್ಯಗಳು ಬೆಸೆದುಕೊಂಡಿವೆ ಎಂದು ಸಹ ಹೇಳಲಾಗುವುದು. ಹಾಗಾದರೆ ಉಪ್ಪಿನೊಂದಿಗೆ ಇರುವ ಧಾರ್ಮಿಕ ಹಾಗೂ ಮೂಢನಂಬಿಕೆಗಳು ಯಾವವು ಎನ್ನುವುದನ್ನು ಮುಂದಿನ ವಿವರಣೆಯೊಂದಿಗೆ ಪರಿಶೀಲಿಸಿ.

ಉಪ್ಪು ಚೆಲ್ಲುವುದು

ಉಪ್ಪು ಅತ್ಯಂತ ಸೂಕ್ಷ್ಮ ಕಣಗಳೊಂದಿಗೆ ಕೂಡಿದೆ. ಅದನ್ನು ಲಕ್ಷ್ಮಿ ಎಂದು ಪರಿಗಣಿಸಲಾಗುವುದು. ಹಾಗಾಗಿ ಉಪ್ಪನ್ನು ಬಹಳ ಕಾಳಜಿಯಿಂದ ನಿರ್ವಹಿಸಬೇಕಾಗುವುದು. ಉಪ್ಪು ನೆಲಕ್ಕೆ ಚೆಲ್ಲುವುದು ಅಥವಾ ಅನಿರೀಕ್ಷಿತವಾಗಿ ಚಲ್ಲಿದರೂ ಅದೊಂದು ದುರಾದೃಷ್ಟ ಎಂದು ಪರಿಗಣಿಸಲಾಗುವುದು. ಉಪ್ಪನ್ನು ಚಲ್ಲಿದರೆ ಅದರಲ್ಲಿ ಇರುವ ಕಣಗಳಷ್ಟೇ ಕಣ್ಣೀರನ್ನು ಚೆಲ್ಲಬೇಕಾಗುವುದು ಎಂದು ಹೇಳಲಾಗುವುದು. ಹಾಗಾಗಿ ಅನಿರೀಕ್ಷಿತವಾಗಿ ಅಥವಾ ಅಚಾನಕ್ಕಾಗಿ ಉಪ್ಪು ನಿಮ್ಮಿಂದ ನೆಲಕ್ಕೆ ಬಿದ್ದರೆ, ಅದನ್ನು ತಕ್ಷಣ ಎತ್ತಿ ನಿಮ್ಮ ಎಡ ಭುಜದ ಮೇಲೆ ಹಾಕಿಕೊಳ್ಳಿ. ಹಾಗೆ ಮಾಡುವುದರಿಂದ ದುರಾದೃಷ್ಟ ಹಾಗೂ ಕೆಟ್ಟ ಶಕ್ತಿಯ ಪ್ರಭಾವವು ನಿಮ್ಮ ಮೇಲೆ ಉಂಟಾಗದು ಎನ್ನುವ ನಂಬಿಕೆಯಿದೆ.

ಜೇಬಿನಲ್ಲಿ ಉಪ್ಪನ್ನು ಇಟ್ಟುಕೊಳ್ಳಿ

ಉಪ್ಪು ಕೆಡುವಂತಹ ವಸ್ತುಗಳನ್ನು ಹಾಗೂ ದುಷ್ಟ ಶಕ್ತಿ ವಿರುದ್ಧ ಹೋರಾಡುವಂತಹ ಶಕ್ತಿಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿಯೇ ದೆವ್ವ ಮತ್ತು ಭೂತಗಳು ಉಪ್ಪಿಗೆ ಹೆದರುತ್ತವೆ ಎಂದು ಹೇಳಲಾಗುವುದು. ಉಪ್ಪು ದೈವಿಕ ಶಕ್ತಿ ಹೊಂದಿರುವುದರಿಂದ ನಾಶವಾಗುವ ಪರಿಸ್ಥಿತಿ ಹಾಗೂ ವಸ್ತುಗಳನ್ನು ಕಾಪಾಡುವ ಶಕ್ತಿಯನ್ನು ಪಡೆದುಕೊಂಡಿದೆ.

ದೂರದ ಪ್ರಯಾಣ ಮಾಡುವಾಗ ಅಥವಾ ನಿಮ್ಮ ಇಷ್ಟದ ಸ್ಥಳಗಳಿಗೆ ಹೋಗುವಾಗ ಜೇಬಿನಲ್ಲಿ ಸ್ವಲ್ಪ ಸಮುದ್ರದ ಉಪ್ಪನ್ನು ಕೊಂಡೊಯ್ಯಬೇಕು ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ಪ್ರಯಾಣದಲ್ಲಿ ಉಂಟಾಗುವ ತೊಂದರೆ ಹಾಗೂ ಅಪಘಾತಗಳನ್ನು ತಡೆಯುವುದು ಎಂದು ಹೇಳಲಾಗುವುದು.

ಉಪ್ಪನ್ನು ಶುಕ್ರವಾರ ಖರೀದಿಸಬೇಕು

ಉಪ್ಪು ಲಕ್ಷ್ಮಿ ದೇವಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಹಾಗಾಗಿ ಮನೆಗೆ ಉಪ್ಪನ್ನು ತರಲು ಅಥವಾ ಖರೀದಿಸಲು ಶುಕ್ರವಾರ ಅತ್ಯಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗುವುದು. ಶುಕ್ರವಾರದಂದು ಉಪ್ಪನ್ನು ಖರೀದಿಸಿ ತಂದು, ಡಬ್ಬದಲ್ಲಿ ವರ್ಗಾಯಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಮನೆಗೆ ಆಗಮಿಸುವಳು. ಹಾಗೆಯೇ ಜೀವನದಲ್ಲಿ ಇರುವ ಆರ್ಥಿಕ ತೊಂದರೆಗಳು ಸುಧಾರಣೆ ಕಾಣುತ್ತವೆ. ಸಾಲ ಬಾಧೆ ಇದ್ದರೆ ನಿವಾರಣೆಯಾಗುವುದು ಎನ್ನುವ ನಂಬಿಕೆಯಿದೆ.

ನೀರು ಮತ್ತು ಉಪ್ಪು

ನಿತ್ಯವೂ ಮನೆಯನ್ನು ಸ್ವಚ್ಛಗೊಳಿಸುವ ಹಾಗೂ ಒರೆಸುವ ಪ್ರಕ್ರಿಯೆ ಇರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ನಿತ್ಯವೂ ನಾವು ನೆಲ ಒರೆಸುವಾಗ, ನೀರಿಗೆ ಒಂದು ಟೀ ಚಮಚ ಅಥವಾ ಚಿಟಕೆ ಉಪ್ಪನ್ನು ಬೆರೆಸಿ. ನಂತರ ಆ ನೀರಿನ ಸಹಾಯದಿಂದ ಮನೆಯನ್ನು ಒರೆಸಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಹಾಗೂ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎನ್ನುವ ನಂಬಿಕೆಯಿದೆ. ಅಲ್ಲದೆ ಸಾಕಷ್ಟು ರೋಗ ಪೀಡಿತ ಸೂಕ್ಷ್ಮಾಣುಗಳು ನಾಶವಾಗುತ್ತವೆ ಎಂದು ಹೇಳಲಾಗುವುದು.

ಗಾಜಿನ ಡಬ್ಬದಲ್ಲಿ ಉಪ್ಪು

ಸಾಮಾನ್ಯವಾಗಿ ಪ್ಲಾಸ್ಟಿಕ್ ಡಬ್ಬದಲ್ಲಿ ಉಪ್ಪನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಆದರೆ ಈ ಕ್ರಮವು ತಪ್ಪು. ಇದು ಋಣಾತ್ಮಕ ಶಕ್ತಿಯ ಆಗಮನಕ್ಕೆ ಆಹ್ವಾನ ನೀಡುವುದು. ಹಾಗಾಗಿ ಗಾಜಿನ ಡಬ್ಬದಲ್ಲಿ, ಮಣ್ಣಿನ ಪಾತ್ರೆಯಲ್ಲಿ ಅಥವಾ ಪಿಂಗಾಣಿ ಪಾತ್ರದಲ್ಲಿ ಉಪ್ಪನ್ನು ಸಂಗ್ರಹಿಸಿ ಇಡಬೇಕು. ಇದರಿಂದ ಉಪ್ಪು ಸಹ ಉತ್ತಮ ಗುಣಮಟ್ಟದೊಂದಿಗೆ ದೀರ್ಘ ಸಮಯ ಇರುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸುವುದು ಎನ್ನುವ ನಂಬಿಕೆಯಿದೆ.

ಮನೆಯಲ್ಲಿ ಶಾಂತಿ

ಕುಟುಂಬದಲ್ಲಿ ಗಂಡ ಹೆಂಡತಿಯ ನಡುವೆ, ಸಹೋದರ-ಸಹೋದರಿಯರ ನಡುವೆ, ಅಪ್ಪ-ಮಗನ ನಡುವೆ, ತಾಯಿ- ಮಗ ಹೀಗೆ ಕುಟುಂಬದಲ್ಲಿ ಇರುವ ಸದಸ್ಯರೇ ಪರಸ್ಪರ ಜಗಳವಾಡುತ್ತಾರೆ, ಮನಃಶಾಂತಿ ನಾಶವಾಗಿದೆ ಅಥವಾ ಮನೆಯಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯ ನಡೆಯುತ್ತಿಲ್ಲ ಎಂದಾದರೆ, ಒಂದು ಪುಟ್ಟ ಗಾಜಿನ ಡಬ್ಬಿಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ, ಮುಚ್ಚಳವನ್ನು ಮುಚ್ಚಿ. ಆ ಡಬ್ಬವನ್ನು ಮಲಗುವ ಕೋಣೆಯಲ್ಲಿ ಅಥವಾ ದೇವ ಮೂಲೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸುವುದು.

ಉಪ್ಪನ್ನು ವ್ಯರ್ಥ ಮಾಡಬಾರದು

ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಮನೆಗೆ ತರುವುದು ಅಥವಾ ತಂದು ಒಂದೆಡೆ ಸಂಗ್ರಹ ಇಡುವುದು ಮಾಡಬಾರದು. ಅಗತ್ಯಕ್ಕೆ ತಕ್ಕಷ್ಟು ಉಪ್ಪನ್ನು ಮನೆಗೆ ತಂದು ಅದನ್ನು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಆಗ ಲಕ್ಷ್ಮಿ ದೇವಿ ಮನೆಯಲ್ಲಿ ಅಗತ್ಯವಾದ ಸಮೃದ್ಧಿಯನ್ನು ಹೆಚ್ಚಿಸುವಳು ಹಾಗೂ ಮನಸ್ಸಿಗೆ ಸಂತೋಷ ನೀಡುವಳು.ಮನುಷ್ಯ ದಿನ ನಿತ್ಯ ಬಳಸುವ ಆಹಾರ ವಸ್ತುಗಳಲ್ಲಿ ಉಪ್ಪು ಸಹ ಒಂದು. ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಲವಣ ರೂಪಕ್ಕೆ ಉಪ್ಪು ಎಂದು ಕರೆಯುತ್ತೇವೆ. ಉಪ್ಪಿನ ಸಹಾಯದಿಂದ ಕೆಲವು ಆಹಾರ ಪದಾರ್ಥಗಳನ್ನು ವರ್ಷಗಳ ಕಾಲ ಸಂರಕ್ಷಿಸಿ ಇಡಬಹುದು. ಆರೋಗ್ಯಕರ ಗುಣವನ್ನು ಹೊಂದಿರುವ ಉಪ್ಪಿಗೆ ಧಾರ್ಮಿಕ ವಿಷಯಗಳೊಂದಿಗೂ ನಂಟಿದೆ.
"ಲವಣದ ಕಣಕಣವು ರುಚಿ ರುಚಿ🌺
Rasi SiddaRajuGowda Mandya

12/10/2024
11/10/2024

#ನವರಾತ್ರಿ_ಒಂಬತ್ತನೆಯ_ದಿನ ಸಿದ್ಧಿದಾತ್ರಿ ಆರಾಧನೆ 🙏🚩
ಶಾರದೀಯ ನವರಾತ್ರಿಯನ್ನು 9 ದಿನಗಳವರೆಗೆ ಆಚರಿಸಲಾಗುತ್ತದೆ. ಈ 9 ದಿನಗಳಲ್ಲೂ ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ 9ನೆಯ ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಈ ಬಾರಿ ನವರಾತ್ರಿ ಹಬ್ಬವು ಅಕ್ಟೋಬರ್ 11 ರಂದು ಆರಂಭವಾಗಿದ್ದು, 2024 ರ ಅಕ್ಟೋಬರ್‌ 12 ರಂದು ಮುಕ್ತಾಯಗೊಳ್ಳುವುದು.

#ಸಿದ್ಧಿದಾತ್ರಿ_ದೇವಿ_ಸ್ವರೂಪ

ದೇವಿ ಸಿದ್ಧಿದಾತ್ರಿ ಆಧ್ಯಾತ್ಮಿಕ ಆನಂದವನ್ನು ಅರಸುವವರನ್ನು ಆಶೀರ್ವದಿಸುತ್ತಾಳೆ. ಮಾತೃದೇವತೆಯ ಈ ರೂಪವು ಬಲಗೈಯಲ್ಲಿ ಚಕ್ರವನ್ನು ಮತ್ತು ಗದೆಯನ್ನು ಹಾಗೂ ಎಡಗೈಯಲ್ಲಿ ಶಂಖವನ್ನು ಮತ್ತು ಕಮಲವನ್ನು ಹಿಡಿದುಕೊಂಡಿದ್ದಾಳೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ.

*​ಸಿದ್ಧಿದಾತ್ರಿ ದೇವಿ ಪೂಜೆ ಮಹತ್ವ*

ಸಿದ್ಧಿದಾತ್ರಿ ದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ ಹಾಗೂ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಅವಳು ಕೆಂಪು ಬಟ್ಟೆಗಳನ್ನು ಧರಿಸುತ್ತಾಳೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ.

ಸಿದ್ಧಿದಾತ್ರಿಯ ಅರ್ಥ - "ಸಿದ್ಧಿ" ಎಂದರೆ ಪರಿಪೂರ್ಣತೆ ಆದರೆ "ದಾತ್ರಿ" ಎಂದರೆ "ಕೊಡುವವಳು" ಆದ್ದರಿಂದ ಅವಳನ್ನು ಮಾತಾ ಸಿದ್ಧಿದಾತ್ರಿ ಎಂದು ಕರೆಯಲಾಗುತ್ತದೆ.

ಅವಳು ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಿದ್ಧಿಗಳನ್ನು (ಪರಿಪೂರ್ಣತೆ) ನೀಡುತ್ತಾಳೆ. ಆದ್ದರಿಂದ ಅವಳನ್ನು ಸಿದ್ಧಿದಾತ್ರಿ ದೇವಿ ಎಂದು ಕರೆಯಲಾಗುತ್ತದೆ. ಸಿದ್ಧಿದಾತ್ರಿಯ ಇನ್ನೊಂದು ಹೆಸರು ಲಕ್ಷ್ಮಿ ದೇವಿ, ಅವಳು ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ಪ್ರತಿನಿಧಿಸುತ್ತಾಳೆ.

ಸಿದ್ಧಿದಾತ್ರಿ ದೇವಿ ಪೂಜೆ ಶುಭ ಮುಹೂರ್ತ

ಮಹಾನವಮಿ 2024 ನ್ನು ಅಕ್ಟೋಬರ್‌ 11 ರಂದು ಶುಕ್ರವಾರ ಆಚರಿಸಲಾಗುತ್ತದೆ.

ನವಮಿ ತಿಥಿ ಪ್ರಾರಂಭ: 2024 ರ ಅಕ್ಟೋಬರ್ 11 ರಂದು ಶುಕ್ರವಾರ ಹಗಲು 12:06 ರಿಂದ

ನವಮಿ ತಿಥಿ ಮುಕ್ತಾಯ: 2024 ರ ಅಕ್ಟೋಬರ್‌ 12 ರಂದು ಶನಿವಾರ ಬೆಳಗ್ಗೆ 10:57 ರವರೆಗೆ.

*​ಸಿದ್ಧಿದಾತ್ರಿ ಪೂಜೆ ವಿಧಾನ*

- ಸಿದ್ಧಿದಾತ್ರಿ ದೇವಿಯ ವಿಗ್ರಹದ ಮುಂದೆ ಕಲಶ ಸ್ಥಾಪನೆ ಮಾಡಿ.
- ದೇವಿಯ ಮೂರ್ತಿಯ ಹಣೆಯ ಮೇಲೆ ತಿಲಕವಿಡಿ.
- ದೀಪಗಳನ್ನು ಬೆಳಗಿಸಿ ಮತ್ತು ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿ.
- ಸಿದ್ಧಿದಾತ್ರಿ ಮಂತ್ರಗಳನ್ನು ಪಠಿಸಿ ಮತ್ತು ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲು ದೇವಿಯನ್ನು ಆಹ್ವಾನಿಸಿ.
- ಷೋಡಶೋಪಚಾರ ಪೂಜೆಯ ನಂತರ ಆರತಿ ಮಾಡಿ.
- ಇತರ ಭಕ್ತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ನೀಡಿ.
- ಈ ದಿನ ಒಂಬತ್ತು ಹೂವುಗಳು, ಒಂಬತ್ತು ವಿವಿಧ ರೀತಿಯ ಹಣ್ಣುಗಳು, ಒಂಬತ್ತು ವಿವಿಧ ಒಣ ಹಣ್ಣುಗಳನ್ನು ಸಹ ಅರ್ಪಿಸಲಾಗುತದೆ
- ಸಾಮಾನ್ಯವಾಗಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂಬತ್ತು ಕನ್ಯಾ ಹುಡುಗಿಯರನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರಿಗೆ ಆಹಾರ ಮತ್ತು ಉಡುಗೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಇದು ಕನ್ಯಾ ರೂಪದಲ್ಲಿ ದೇವಿಯನ್ನು ಪೂಜಿಸುವ ಸಂಕೇತವಾಗಿದೆ.

*​ನವಮಿ ಹೋಮ*
ನವಮಿ ತಿಥಿಯು ಸೂರ್ಯೋದಯದ ನಂತರ ಬಹಳ ಬೇಗ ಮುಗಿದರೆ ಅದು ಹಿಂದಿನ ದಿನ ಸಂಜೆಯ ಮೊದಲು ಪ್ರಾರಂಭವಾಗುತ್ತದೆ ಮತ್ತು ನವಮಿ ತಿಥಿಯ ಉತ್ತಮ ಭಾಗವು ಅಷ್ಟಮಿ ತಿಥಿಯಲ್ಲಿ ಮೇಲುಗೈ ಸಾಧಿಸುತ್ತದೆ. ಅದು ಸಂಭವಿಸಿದಲ್ಲಿ ನವಮಿ ಹೋಮವನ್ನು ಹಿಂದಿನ ದಿನದಂದು ಮಾಡಬಹುದು ಮತ್ತು ಅದನ್ನು ಧಾರ್ಮಿಕ ಗ್ರಂಥಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟಮಿ ತಿಥಿಯಂದು ಹೋಮವನ್ನು ಅಷ್ಟಮಿ ತಿಥಿ ಚಾಲ್ತಿಯಲ್ಲಿರುವಾಗ ಯಾವುದೇ ಸಮಯದಲ್ಲಿ ಪ್ರಾರಂಭಿಸಬಹುದು ಮತ್ತು ನವಮಿ ತಿಥಿಯು ಪ್ರಚಲಿತವಾಗಲು ಪ್ರಾರಂಭಿಸಿದಾಗ ಮಾಡಬಹುದು. ಆದರೆ ಸೂರ್ಯಾಸ್ತದ ಮೊದಲು ಮುಗಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ತಿಥಿಯು ಅಷ್ಟಮಿಯಿಂದ ನವಮಿಗೆ ದಾಟುವಾಗ ಹೋಮವನ್ನು ಮುಂದುವರೆಸಬೇಕು.

*​ಸಿದ್ಧಿದಾತ್ರಿ ಪೂಜೆ ಪ್ರಯೋಜನ*

ಸಿದ್ಧಿದಾತ್ರಿ ದೇವಿಯನ್ನು ಕೇತು ಗ್ರಹವನ್ನು ಆಳುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಿದ್ಧಿದಾತ್ರಿ ದೇವಿಯ ಪೂಜೆಯನ್ನು ಮಾಡುವುದರಿಂದ ಜಾತಕದಲ್ಲಿ ಕೇತುವಿನ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಿಸುವ ಶಕ್ತಿಯು ಆಕೆಗಿದೆ ಎನ್ನುವ ನಂಬಿಕೆಯಿದೆ. ಸಿದ್ಧಿದಾತ್ರಿಯ ಭಕ್ತರಾಗಿರುವುದರಿಂದ, ಒಬ್ಬರು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಸಂತೋಷವನ್ನು ಪಡೆಯಬಹುದು. ಸಿದ್ಧಿದಾತ್ರಿಯ ಅನುಗ್ರಹದಿಂದ, ಒಬ್ಬರು ಚಿಂತೆ, ಆತಂಕ ಮತ್ತು ಭಯದಂತಹ ಜೀವನದ ಅಡೆತಡೆಗಳನ್ನು ಸಹ ತೊಡೆದುಹಾಕಬಹುದು. ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಜೀವನದಲ್ಲಿ ಯಶಸ್ಸು, ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಆಶೀರ್ವದಿಸಲ್ಪಡುತ್ತಾರೆ.

*​ನವರಾತ್ರಿ ಒಂಭತ್ತನೇ ದಿನದ ಮಂತ್ರ (ಸಿದ್ಧಿದಾತ್ರಿ ಪೂಜಾ ಮಂತ್ರ)*

*ಓಂ ದೇವಿ ಸಿದ್ಧಿಧಾತ್ರ್ಯೈ ನಮಃ*

*ಓಂ ದೇವಿ ಸಿದ್ಧಿಧಾತ್ರಿಯೈ ನಮಃ*

*• ಯಾ ದೇವಿ ಸರ್ವಭೂತೇಷು ಸಿದ್ಧಿಧಾತ್ರಿ ರೂಪೇಣ ಸಂಸ್ಥಿತಾ |*

*ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||*

*ಸಿದ್ಧಿದಾತ್ರಿ ಕಥೆ*
‌ ‌ ಹಿಂದೂ ಪುರಾಣಗಳ ಪ್ರಕಾರ, ಸಿದ್ಧಿದಾತ್ರಿಯು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುವ ದೇವತೆ ಎಂದು ಕರೆಯಲಾಗುತ್ತದೆ. ಸಿದ್ಧಿಯು 'ಬಯಕೆ'ಯನ್ನು ಸೂಚಿಸುತ್ತದೆ ಮತ್ತು ದಾತ್ರಿಯು 'ಒದಗಿಸುವವಳು' ಎಂಬುದನ್ನು ಸೂಚಿಸುತ್ತದೆ. ಈ ಎರಡು ಶಬ್ಧವನ್ನು ಸಂಯೋಜಿಸಿ ಸಿದ್ಧಿದಾತ್ರಿ ಎಂಬ ಪದವನ್ನು ರೂಪುಗೊಂಡಿದೆ. ಮಾತೆ ಸಿದ್ಧಿದಾತ್ರಿಯು ತನ್ನ ಆಶೀರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ಧಿಗಳನ್ನು ನೀಡಿದಳು ಎಂದು ಪುರಾಣವು ತಿಳಿಸುತ್ತದೆ. ಭಗವಾನ್ ಶಿವನು ದೇವಿಯನ್ನು ಸಮರ್ಪಣೆಯೊಂದಿಗೆ ಪೂಜಿಸಿದನು, ಅವನ ದೇಹದ ಅರ್ಧಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಯಿತು. ಹೀಗಾಗಿ, ಶಿವನನ್ನು ಅರ್ಧನಾರೀಶ್ವರ ಎಂದೂ ಕರೆಯುತ್ತಾರೆ.

ನಾಲ್ಕು ಕೈಗಳನ್ನು ಹೊಂದಿರುವ ಕೆಂಪು ಸೀರೆಯನ್ನು ಧರಿಸಿರುವ ದೇವಿಯ ವಿಗ್ರಹವು ಕಮಲದ ಹೂವಿನ ಮೇಲೆ ಆರೋಹಿಸಲ್ಪಟ್ಟಿದೆ. ಅವಳು ಬಲಗೈಯಲ್ಲಿ ಗದಾ ಮತ್ತು ಚಕ್ರವನ್ನು ಹಿಡಿದಿದ್ದಾಳೆ, ಎಡಗೈಯು ಹೂವು ಮತ್ತು ಶಂಖವನ್ನು ಹಿಡಿದಿರುವುದು ಕಾಣುತ್ತದೆ. ಮಾತೆ ಸಿದ್ಧಿದಾತ್ರಿಯನ್ನು ಅಷ್ಟ ಮಹಾ ಸಿದ್ಧಿಗಳ ಸೃಷ್ಟಿಕರ್ತೆ ಎಂದೂ ಕರೆಯಲಾಗುತ್ತದೆ. ಭಕ್ತರು ದುರ್ಗಾ ದೇವಿಯನ್ನು ಪರಿಪೂರ್ಣತೆ, ಶಕ್ತಿ ಮತ್ತು ವೈಭವವನ್ನು ಸಂಕೇತಿಸುತ್ತದೆ.

*ಸಿದ್ಧಿದಾತ್ರೀ*
ನವರಾತ್ರಿಯ 9ನೇ ದಿನ ಪೂಜಿಸುವ ಸಿದ್ಧಿದಾತ್ರಿಯನ್ನು ಪರಶಿವನೂ ಪೂಜಿಸಿದ್ದ. ಆಕೆ ಶಿವನಿಗೆ ಒಲಿದು ಎಡಕ್ಕೆ ಬಂದು ನಿಂತ ಕಾರಣ ಇಬ್ಬರ ಶಕ್ತಿಯೂ ಸೇರಿ ಜಗತ್ತಿಗೊಂದು ಸಂದೇಶ ರವಾನೆಯಾಯಿತು.
*ಏನದು- ಇಲ್ಲಿದೆ ಆ ವಿವರ*

ನವರಾತ್ರಿಯ ಸಮಯದಲ್ಲಿ, ಜಗದಂಬೆಯನ್ನು ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ಮಹಾ ಅಷ್ಟಮಿ ಮತ್ತು ಮಹಾನವಮಿ ವಿಶೇಷ ಮಹತ್ವ. ಹಿಂದೂ ಆಚರಣೆಗಳ ಪ್ರಕಾರ, ಮಹಾನವಮಿಯೊಂದಿಗೆ ಕೊನೆಗೊಳ್ಳುವ ನವರಾತ್ರಿಯ ಒಂಬತ್ತನೇ ದಿನದಂದು ಮಾತೆ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ನವಮಿ ತಿಥಿಯಂದು ಕನ್ಯಾ ಪೂಜೆ ಮಾಡುವುದು ಕೂಡ ವಾಡಿಕೆ.

ಪುರಾಣ ಗ್ರಂಥಗಳ ಪ್ರಕಾರ, ತಾಯಿ *ಸಿದ್ಧಿದಾತ್ರಿಯನ್ನು* ಸಾಧನೆ ಮತ್ತು ಮೋಕ್ಷದ ದೇವತೆ ಎಂದು ವಿವರಿಸಲಾಗಿದೆ. ತನ್ನ ನಾಲ್ಕು ಕೈಗಳಲ್ಲಿ, ಅವಳು ಶಂಖ, ಚಕ್ರ, ಗದಾ ಮತ್ತು ಪದ್ಮ ಹಿಡಿದಿದ್ದಾಳೆ. ಆಕೆ ಸರಸ್ವತಿ ದೇವಿಯ ರೂಪ. ಸಿದ್ಧಿದಾತ್ರಿ ಸಿಂಹದ ಮೇಲೆ ಕುಳಿತು ಕಮಲದ ಮೇಲೆ ಕಾಲಿರಿಸಿದ್ದಾಳೆ.

ಸಿದ್ಧಿಧಾತ್ರಿಯು ಪಾರ್ವತಿ ದೇವಿಯ ಮೂಲ ರೂಪ ಎಂದು ಬಣ್ಣಿಸಲಾಗಿದ್ದು, ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯಾ, ಈಷಿತ್ವ ಮತ್ತು ವಶಿತ್ವ ಎಂಬ ಎಂಟು ಅಲೌಕಿಕ ಶಕ್ತಿಗಳನ್ನು ಅಥವಾ ಸಿದ್ಧಿಗಳನ್ನು ಹೊಂದಿದ್ದಾಳೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಹಿಷಾಸುರನು ಮಾಡಿದ ದುಷ್ಕೃತ್ಯಗಳಿಂದಾಗಿ ಎಲ್ಲಾ ದೇವತೆಗಳು ತುಂಬಾ ತೊಂದರೆಗೀಡಾದರು. ಆತನಿಂದ ರಕ್ಷಣೆ ಪಡೆಯಲು ದೇವತೆಗಳು, ಭಗವಾನ್ ಶಿವ ಮತ್ತು ವಿಷ್ಣುವಿನ ಬಳಿಗೆ ಹೋದರು. ಅವರ ಸಲಹೆ ಪ್ರಕಾರ ಅಲ್ಲಿ ಎಲ್ಲಾ ದೇವತೆಗಳಿಂದ ಒಂದು ಅಲೌಕಿಕ ಕಾಂತಿ ಹೊರಹೊಮ್ಮಿತು. ಆ ಕಾಂತಿಯಿಂದ ದೈವಿಕ ಶಕ್ತಿ ಸೃಷ್ಟಿಯಾಯಿತು.

ಆ ದೈವಿಕ ಶಕ್ತಿಯು ತಾಯಿ ದುರ್ಗೆಯ ಅತ್ಯಂತ ಶಕ್ತಿಶಾಲಿ ರೂಪವೆಂದು ಪರಿಗಣಿಸಲಾಗಿದೆ. ಎಲ್ಲಾ ದೇವತೆಗಳ ಶಕ್ತಿಯೂ ಈಕೆಯಲ್ಲಿ ಅಡಕವಾಗಿರುವ ಕಾರಣ ಈ ದೇವಿಯೇ ಸಿದ್ಧಿದಾತ್ರಿ.

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವನು ಸಿದ್ಧಿದಾತ್ರಿಗಾಗಿ ಕಠಿಣ ತಪಸ್ಸು ಮಾಡುವ ಮೂಲಕ ಎಲ್ಲಾ ಎಂಟು ಸಿದ್ಧಿಗಳನ್ನು ಸಾಧಿಸಿದನು.

‌ಬ್ರಹ್ಮಾಂಡದ ಸೃಷ್ಟಿಯ ಸಮಯದಲ್ಲಿ, ಮಹಾ ಶಿವನು ಯಾವುದೇ ರೂಪವಿಲ್ಲದ ಆದಿಪರಾಶಕ್ತಿಯನ್ನು ಪೂಜಿಸಿದನು.

ಅದರಂತೆ, ಆದಿಪರಾಶಕ್ತಿಯು ಶಿವನ ಎಡಭಾಗದಲ್ಲಿ ಸಿದ್ಧಿದಾತ್ರಿಯಾಗಿ ಕಾಣಿಸಿಕೊಂಡರು. ತಾಯಿ ಸಿದ್ಧಿದಾತ್ರಿಯ ಕೃಪೆಯ ಪರಿಣಾಮ, ಶಿವನ ಅರ್ಧ ದೇಹವು ದೇವತೆಯಾಯಿತು. ಅರ್ಧನಾರೀಶ್ವರ ಎಂದು ಕರೆಯಲಾಯಿತು.
ಒಂಬತ್ತು ದಿನಗಳ ಘೋರ ಹೋರಾಟದ ನಂತರ, ಹತ್ತನೇ ದಿನ ದುರ್ಗಾ ದೇವಿಯು ಮಹಿಷಾಸುರನ ಸಂಹಾರ ಮಾಡಿದ್ದು ಆ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ ಮಹಿಷನನ್ನು ಕೊಂದ ಕಾರಣ ಮಹಿಷ ಮರ್ದಿನಿ ಎಂದು ಆಕೆ ಕರೆಯಿಸಿಕೊಂಡಳು.

ಕೇತು ಗ್ರಹವನ್ನು ಸಿದ್ಧಿದಾತ್ರಿ ದೇವಿ ಆಳುವ ಕಾರಣ ಈ ಗ್ರಹಕ್ಕೆ ಶಕ್ತಿ ಮತ್ತು ನಿರ್ದೇಶನವನ್ನು ಒದಗಿಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ, ಸಿದ್ಧಿದಾತ್ರಿಯ ಆರಾಧಕರು ಕೇತು ಗ್ರಹದ ದುಷ್ಪರಿಣಾಮಗಳಿಂದ ರಕ್ಷಿಸಲ್ಪಡುತ್ತಾರೆ ಎಂಬುದು ನಂಬಿಕೆ.

*ಸಿದ್ಧಿಧಾತ್ರಿಯನ್ನು ಆರಾಧಿಸುವುದಕ್ಕೆ ಪ್ರಾರ್ಥನಾ ಮಂತ್ರ*

ಸಿದ್ಧಗಂಧರ್ವ ಯಕ್ಷಾದ್ಯೈರ ಸುರೈರಮರೈರಪಿ । ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ॥
*ನವರಾತ್ರಿ ಶುಭಾಶಯಗಳು 🙏*
SiddaRajuGowda Bjp Mandya

05/10/2024

#ಮೂರನೇ_ದಿನ ಚಂದ್ರ ಘಂಟಾ ದೇವಿ
ಹಿಂದೂ ಧರ್ಮದ ಪ್ರಕಾರ ದುರ್ಗಾದೇವಿಯ ಮೂರನೇ ಅವತಾರವೇ ಚಂದ್ರಘಂಟಾ.
#ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆ ಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ.

ಚಂದ್ರ ಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

!
ಚಂದ್ರಘಂಟೆಯ ಮಹತ್ವ:
ಚಂದ್ರಘಂಟೆಯು ಶುಕ್ರ ಗ್ರಹದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿ ನೆಲೆಸುತ್ತದೆ.

ಚಂದ್ರಘಂಟೆಯ ಪುರಾಣ ಕಥೆ

ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಇದರಂತೆ ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತದೆ.

ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ, ತನ್ನ ಗಣಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ತೋಳುಗಳನ್ನು ಹೊಂದಿದ್ದಳು. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಭಿನ್ನವಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳಿ, ಆಭರಣಗಳಿಂದ ಅಲಂಕೃತನಾಗಿ ಕಾಣಿಸಿಕೊಳ್ಳುತ್ತಾನೆ. ಶಿವ ಹಾಗೂ ಪಾರ್ವತಿಯ ವಿವಾಹವು ಸಾಂಗವಾಗಿ ನೆರವೇರುತ್ತದೆ. ಹೀಗೆ ಶಿವ ಹಾಗೂ ಪಾರ್ವತಿಯು ವಿವಾಹವಾದ ದಿನವನ್ನು ಪ್ರತಿವರ್ಷ ಮಹಾಶಿವರಾತ್ರಿಯೆಂದು ಆಚರಿಸಲಾಗುತ್ತದೆ.

ವಿವಾಹ ಸಂದರ್ಭದಲ್ಲಿ

ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ರಾಕ್ಷಸರಾದ ಶುಂಭ ಹಾಗೂ ನಿಶುಂಭನನ್ನು ಸೋಲಿಸುವ ಸಲುವಾಗಿ, ಪಾರ್ವತಿ ದೇವಿಯು ಕೌಶಿಕಿಯಾಗಿ ಅವತಾರವೆತ್ತುತ್ತಾಳೆ. ಕೌಶಿಕಿಯ ರೂಪವೇ ರಕ್ಕಸರ ವಿನಾಶವನ್ನು ಸೂಚಿಸುವಂತಿತ್ತು. ಶುಂಭನು ತನ್ನ ಸಹೋದರನಾದ ನಿಶುಂಭನಿಗೆ ಮದುವೆ ಮಾಡಲು ಯೋಜನೆ ಹಾಕಿದ ಶುಂಭ ಅವಳನ್ನು ಕರೆತರಲು ಧೂಮ್ರಲೋಚನನೆಂಬ ರಾಕ್ಷಸನನ್ನು ಕಳುಹಿಸುತ್ತಾನೆ. ಕೌಶಿಕಿಯು ಒಪ್ಪದಿದ್ದಾಗ ಧೂಮ್ರಲೋಚನನು ಹಲ್ಲೆಯನ್ನು ಮುಂದಾದಾಗ ಕೋಪಗೊಂಡ ಕೌಶಿಕಿ ಮಾತೆಯು ಕೇವಲ 'ಹೂಂಕಾರ'ದಿಂದಲೇ ಧೂಮ್ರಲೋಚನನ್ನು ನಿರ್ಣಾಮ ಮಾಡುತ್ತಾಳೆ.

ದುಷ್ಟರನ್ನು ಸಂಹಾರ ಮಾಡಲು ಸದಾ ಸಿದ್ಧವಾಗಿರುವ ಭಂಗಿಯಲ್ಲಿರುವ ಚಂದ್ರಘಂಟೆಯ ಘಂಟಾನಾದದಿಂದಲೇ ಸಾವಿರಾರು ಅಸುರರು ನಿರ್ನಾಮವಾದರು. ಈಕೆಯ ಕೃಪೆಯಿಂದ ಭಕ್ತರ ಎಲ್ಲಾ ಪಾಪಗಳು, ಕಷ್ಟಗಳು, ದೈಹಿಕ ನೋವು, ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ. ಸಿಂಹವಾಹಿನಿಯಾದ ಈಕೆಯು ಭಕ್ತರಲ್ಲಿ ನಿರ್ಭಯತೆಯನ್ನು ಮೂಡಿಸುತ್ತಾಳೆ

ಬೂದು ಬಣ್ಣ:
ತಾಯಿ ಚಂದ್ರಘಂಟೆಗೆ ನವರಾತ್ರಿಯ ಮೂರನೇ ದಿನ ಮೀಸಲು. ಈ ತಾಯಿಯು ಬೂದು ಬಣ್ಣವಿರುವ ಅರ್ಧ ಚಂದ್ರನ ತಿಲಕವನ್ನು ಹಣೆಯಲ್ಲಿ ಧರಿಸುತ್ತಾಳೆ. ಬೂದು ಬಣ್ಣವು ನಮ್ಮ ಮನಸ್ಸಿನ ಭಾವನೆಗಳ ಸಂಕೇತವೂ ಹೌದು. ಭಕ್ತರ ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ತಾಯಿ ಚಂದ್ರಘಂಟೆಯು ತೊಡೆದುಹಾಕುತ್ತಾಳೆ

ನವರಾತ್ರಿಯ ಮೂರನೇ ದಿನ ತಾಯಿ ಚಂದ್ರಕಾಂತಾ ದೇವಿಗೆ ಅರ್ಪಣೆ. ತಾಯಿಯು ಹಣೆಯ ಮೇಲೆ ಅರ್ಧಚಂದ್ರನ ತಿಲಕವನ್ನು ಹೊಂದಿದ್ದು ಶಸ್ತ್ರಸಜ್ಜಿಯ 10 ಕೈಗಳನ್ನು ಹೊಂದಿದ್ದಾಳೆ. ಹುಲಿಯ ಮೇಲೆ ಕುಳಿತಿರುವ ದೇವಿಯು ಎಲ್ಲ ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾಳೆ ಎನ್ನುವ ನಂಬಿಕೆ ಇದೆ.

ಏನು ನೀಡಬೇಕು: ತಾಯಿ ಚಂದ್ರಕಾಂತಾ ದೇವಿಯನ್ನು ಒಲಿಸಿಕೊಳ್ಳಲು ಹಾಗೂ ಆಕೆಯನ್ನು ಖುಷಿಯಾಗಿಡಲು ಪಾಯಸವನ್ನು ಅರ್ಪಿಸಬೇಕು.

ನವರಾತ್ರಿ ಹಬ್ಬದ ಮೂರನೇ ದಿನದಂದು ತಾಯಿ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಚಂದ್ರಘಂಟಾ ದೇವಿಯನ್ನು ಪೂಜಿಸುವಾಗ ಆಕೆಗೆ ಹಾಲು ಅಥವಾ ಹಾಲಿನಿಂದ ತಯಾರಿಸಿದ ಸಿಹಿ ಭಕ್ಷ್ಯಗಳನ್ನು ಅಥವಾ ಪಾಯಸವನ್ನು ನೈವೇದ್ಯವಾಗಿ ನೀಡುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳನ್ನು ದೂರಾಗಿಸುವಳು.

ಕಮಲದ ಹೂವುಗಳನ್ನು ತಾಯಿ ಚಂದ್ರಘಂಟಾಳಿಗೆ ಅರ್ಪಿಸಲಾಗುತ್ತದೆ. ಇದನ್ನು ಮಾಡುವುದರಿಂದ, ನಿಮ್ಮೊಳಗಿನ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಮತ್ತು ನೀವು ಹೊಸ ಶಕ್ತಿಯನ್ನು ಅನುಭವಿಸುತ್ತೀರಿ.
ಚಂದ್ರಘಂಟೆಯ ಪೂಜಾ ವಿಧಿ:

ಚಂದ್ರಘಂಟೆಯ ಪೂಜಾ ವಿಧಿ:

1)ಆತ್ಮಪೂಜೆ: ಸ್ವಯಂ ಶುದ್ಧೀಕರಣಕ್ಕಾಗಿ ಆತ್ಮ ಪೂಜೆ ಮಾಡಿ.

2) ತಿಲಕ ಮತ್ತು ಆಚಮನ: ಹಣೆಯ ಮೇಲೆ ತಿಲಕ ಹಾಕಿ, ಅಂಗೈಯಿಂದ ಪವಿತ್ರ ಜಲವನ್ನು ಕುಡಿಯಿರಿ.

3) ಸಂಕಲ್ಪ: ಕೈಯಲ್ಲಿ ನೀರನ್ನು ತೆಗೆದುಕೊಂಡು ದೇವಿಯ ಮುಂದೆ ಸಂಕಲ್ಪ ಮಾಡಿಕೊಳ್ಳಿ.

4) ಆವಾಹನ ಮತ್ತು ಆಸನ: ದೇವಿಗೆ ಹೂವುಗಳನ್ನು ಅರ್ಪಿಸಿ.

5) ಪಾಧ್ಯ: ದೇವಿಯ ಚರಣಕ್ಕೆ ಜಲವನ್ನು ಪ್ರೋಕ್ಷಣೆ ಮಾಡಿ.

6) ಆಚಮನ: ಕರ್ಪೂರ ಮಿಶ್ರಿತ ನೀರನ್ನು ದೇವಿಗೆ ಪ್ರೋಕ್ಷಣೆ ಮಾಡಿ.

7) ದುಗ್ದಾಸ್ನಾನ: ಹಸುವಿನ ಶುದ್ಧ ಹಾಲಿನಿಂದ ಅಭಿಷೇಕ.

8) ಘೃತ ಮತ್ತು ಮಧುಸ್ನಾನ: ತುಪ್ಪ ಮತ್ತು ಜೇನುತುಪ್ಪವನ್ನು ಅರ್ಪಿಸಿ.

9) ಶಾರ್ಕರ ಮತ್ತು ಪಂಚಾಮೃತ ಸ್ನಾನ: ಸಕ್ಕರೆ ಮತ್ತು ಪಂಚಾಮೃತ ಸ್ನಾನವನ್ನು ಅರ್ಪಿಸಿ.

10) ವಸ್ತ್ರ: ಧರಿಸಲು ಸೀರೆ ಅಥವಾ ಬಟ್ಟೆಯನ್ನು ದೇವಿಗೆ ಅರ್ಪಣೆ ಮಾಡಿ.

11) ಚಂದನ: ದೇವಿಗೆ ಶ್ರೀಗಂಧದ ತಿಲಕವನ್ನು ಹಚ್ಚಿ. ಕುಂಕುಮ, ಕಾಡಿಗೆ, ದೂರ್ವಪತ್ರೆ ಹಾಗೂ ಬಿಲ್ವಪತ್ರೆಯನ್ನು ಅರ್ಪಿಸಿ. ಧೂಪ, ದೀಪ, ಪ್ರಸಾದಗಳಿಂದ ಅರ್ಚಿಸಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ.

ಚಂದ್ರಘಂಟೆಯ ಮಂತ್ರ:

ಓಂ ದೇವಿ ಚಂದ್ರಘಂಟಾಯೈ ನಮಃ
ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಪ್ರಾರ್ಥನೆ:
ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
:

ಚಂದ್ರಘಂಟೆಯ ಧ್ಯಾನ:

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ
ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ

ಚಂದ್ರಘಂಟಾಗೆ ಕಮಲ ಅರ್ಪಿಸಿದರೆ ನಕಾರಾತ್ಮಕ ಶಕ್ತಿಗಳು ನಾಶ..!

ಚಂದ್ರಘಂಟಾ ದೇವಿಯ ಸ್ತೋತ್ರ
ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭಪರಂ 🥰
ನವರಾತ್ರಿ ಶುಭಾಶಯಗಳು 🙏
SiddaRajuGowda Bjp Mandya

04/10/2024

#ಮೊದಲನೇ_ದಿನ ದೇವಿ ಶೈಲಪುತ್ರಿ ದೇವಿ🙏 ಶುಭೋದಯ🙏

SiddaRajuGowda Bjp Mandya

 #ಬೆಳಿಗ್ಗೆ_ಗಂಜಿ_ಊಟ_ಮಾಡಿದರೆ ಏನಾಗುತ್ತೆ ಗೊತ್ತೇ? #ಬೆಳಗ್ಗಿನ_ಉಪಹಾರಕ್ಕೆ ದೋಸೆ ,ಇಡ್ಲಿ ಮುಂತಾದ ಬಗೆಬಗೆಯ ತಿಂಡಿಗಳನ್ನು ಮಾಡುವುದು ಹೆಚ್ಚಿನ...
26/09/2024

#ಬೆಳಿಗ್ಗೆ_ಗಂಜಿ_ಊಟ_ಮಾಡಿದರೆ ಏನಾಗುತ್ತೆ ಗೊತ್ತೇ? #ಬೆಳಗ್ಗಿನ_ಉಪಹಾರಕ್ಕೆ ದೋಸೆ ,ಇಡ್ಲಿ ಮುಂತಾದ ಬಗೆಬಗೆಯ ತಿಂಡಿಗಳನ್ನು ಮಾಡುವುದು ಹೆಚ್ಚಿನವರ ಅಭ್ಯಾಸ . ಆದರೆ ಹೆಚ್ಚಿನ ಹಳ್ಳಿಗಳಲ್ಲಿ ಇರುವ ಶ್ರಮಿಕ ವರ್ಗ ರಾತ್ರಿ ಉಳಿದ ಅನ್ನವನ್ನು ಗಂಜಿಯಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಗಂಜಿ ಉಣ್ಣುವವರನ್ನು ತೀರಾ ಬಡವರು ಎಂದು ಹೆಸರಿಸುವ ಜನ ,ನಿಜವಾಗಲೂ ತಿಳಿಯಬೇಕಾದ ವಿಚಾರವೇನೆಂದರೆ ಅವರು ಆರೋಗ್ಯದ ದೃಷ್ಟಿಯಲ್ಲಿ ನಿಜವಾಗಲೂ ಶ್ರೀಮಂತರು ಎಂದು. ಈ ಬಗ್ಗೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಗಂಜಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದೆ

ರಾತ್ರಿ ಉಳಿದ ಅನ್ನವನ್ನು (ಅಂದಾಜು ೧೦೦g ಅಕ್ಕಿ) ಮಣ್ಣಿನ ಮಡಿಕೆಯಲ್ಲಿ ಹನ್ನೆರಡು ಗಂಟೆಗಳ ಕಾಲ ನೀರಿನಲ್ಲಿ ಹಾಕಿಟ್ಟು ಮರುದಿನ ಊಟ ಮಾಡುವುದರಿಂದ ಕಬ್ಬಿಣಾಂಶದ ಪ್ರಮಾಣ 3.4mg ನಿಂದ 73.91mg ವರೆಗೆ ಏರಿಕೆಯಾಗುತ್ತದೆ. ಅದೇ ರೀತಿ ಕ್ಯಾಲ್ಸಿಯಂ ಪ್ರಮಾಣವೂ ಹೆಚ್ಚುತ್ತದೆ . ಇದರಿಂದಾಗಿ ದೇಹಕ್ಕೆ ಶಕ್ತಿ ಹಾಗೂ ದೇಹವನ್ನು ತಂಪಾಗಿರಿಸಲು ಕೂಡಾ ಸಹಾಯಕಾರಿ ಎಂದು ವಿವಿಧ ಭಾಗಗಳ ಆಹಾರ ಅಭ್ಯಾಸದ ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳು ತಿಳಿಸಿದ್ದಾರೆ. ಗಂಜಿ ಊಟವನ್ನು ಮಾಡುವುದರಿಂದ b6 b12 ವಿಟಮಿನ್'ಗಳು, ಸುಲಭವಾಗಿ ದೊರಕಲು ಸಹಾಯವಾಗುತ್ತದೆ ಹಾಗೂ ಇದನ್ನು ಬೇರೆ ಮೂಲಗಳಿಂದ ಪಡೆಯಲು ತುಂಬಾ ಕಷ್ಟ ಪಡ ಬೇಕಾಗುತ್ತದೆ ಎಂಬ ಅಂಶವನ್ನೂ ತಿಳಿಸಿದ್ದಾರೆ .

ಗಂಜಿಯಲ್ಲಿ ನಡೆಯುವ ಬ್ಯಾಕ್ಟೀರಿಯಾ ಪ್ರಕ್ರಿಯೆಗಳಿಂದ, ಇದು ಜೀರ್ಣಾಂಗ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತದೆ ಮತ್ತು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಅದೇ ರೀತಿ ವಿವಿಧ ರೀತಿಯ ಗಂಟುನೋವು, ಚರ್ಮ ಸುಕ್ಕು ಕಟ್ಟುವಿಕೆಗಳಿಂದ ಇದು ತಡೆಯುತ್ತೆ, ಚರ್ಮದ ಕಾಂತಿಗಾಗಿ ಹೆಣ್ಣುಮಕ್ಕಳು ಶೃಂಗಾರ ಸಾಧನಗಳಿಗೆ ಜೋತುಬೀಳಬೇಕಾದ ಅವಶ್ಯಕತೆಯನ್ನು ದೂರಮಾಡುತ್ತದೆ .

ಅಮೇರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್, ಅನ್ನವನ್ನು ಗಂಜಿಯಾಗಿಸಿ ಉಣ್ಣುವದರಿಂದ ಆಗುವ ಲಾಭಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ .

★ಗಂಜಿ ಊಟ ಮಾಡುವುದರಿಂದ ದೇಹವು ಸುಧೃಡ ಹಾಗೂ ಶಕ್ತಿಯುತವಾಗಿರುತ್ತದೆ .

★ಇದು ಜೀರ್ಣಾಂಗ ವ್ಯವಸ್ಥೆಗೆ ಅನುಕೂಲವಾಗಿರುವ ಬ್ಯಾಕ್ಟೀರಿಯಾಗಳನ್ನು, ದೇಹಕ್ಕೆ ಹೇರಳವಾಗಿ ಒದಗಿಸುತ್ತವೆ.

★ದೇಹವನ್ನು ತಂಪಾಗಿರಿಸುತ್ತೆ .

★ದೇಹದಲ್ಲಿರುವ ಜಡತ್ವ ದೂರವಾಗಿಸಿ ಮಲಬದ್ದತೆಯನ್ನು ತಡೆಗಟ್ಟಲು ಸಹಾಯಕಾರಿ .

★ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು ಸಹಾಯಕಾರಿ

★ವಿವಿಧ ರೀತಿಯ ಅಲರ್ಜಿ ಹಾಗೂ ಅಲ್ಸರ್ಗಳನ್ನು ತಡೆಗಟ್ಟುತ್ತದೆ .

★ತಾರುಣ್ಯವನ್ನು ಧೀರ್ಘಾವಾಗಿರಿಸುತ್ತದೆ .

ಮತ್ತೇಕೆ ತಡ ,ಬೆಳಗ್ಗಿನ ತಿಂಡಿಯ ಬದಲಿಗೆ ಗಂಜಿ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ ಹಾಗೂ ಆರೋಗ್ಯವಂತರಾಗಿ ಆರೋಗ್ಯವೇ ಭಾಗ್ಯ ❤️🙏
ಸಿದ್ದರಾಜುಗೌಡ Rasi ಮಂಡ್ಯ

ಆಷಾಢ ಗುಪ್ತ ನವರಾತ್ರಿ ಅಥವಾ ವರಾಹಿ ನವರಾತ್ರಿಯ ಮೊದಲನೇ ದಿನ 🙏🏻 ಉನ್ಮತ್ತ ವರಾಹಿ ದೇವಿ 🙏🏻ಅಷ್ಟೋತ್ತರಶತನಾಮಾವಳಿ :-ll ಶ್ರೀ ಉನ್ಮತ್ತವಾರಾಹಿ ದ...
07/07/2024

ಆಷಾಢ ಗುಪ್ತ ನವರಾತ್ರಿ ಅಥವಾ ವರಾಹಿ ನವರಾತ್ರಿಯ ಮೊದಲನೇ ದಿನ 🙏🏻 ಉನ್ಮತ್ತ ವರಾಹಿ ದೇವಿ 🙏🏻

ಅಷ್ಟೋತ್ತರಶತನಾಮಾವಳಿ :-

ll ಶ್ರೀ ಉನ್ಮತ್ತವಾರಾಹಿ ದೇವಿ ಅಷ್ಟೋತ್ತರ ಶತನಾಮಾವಳಿ ll

ಓಂ ಉತ್ಸಾಹಾಯೈ ನಮಃ
ಓಂ ಉತ್ಕೃಷ್ಟಾಯೈ ನಮಃ
ಓಂ ಉದಾರಧಿಯೈ ನಮಃ
ಓಂ ಉಟಜಸ್ಥಾಯೈ ನಮಃ
ಓಂ ಉದಾರಜ್ಞಾಯೈ ನಮಃ
ಓಂ ಉನ್ಮತ್ತವಾರಾಹ್ಯೈ ನಮಃ
ಓಂ ಉದ್ಯಮಪ್ರಿಯಾಯೈ ನಮಃ
ಓಂ ಉಪಮಾರಹಿತಾಯೈ ನಮಃ
ಓಂ ಉತ್ತಮಾಲಂಕೃತಾಯೈ ನಮಃ
ಓಂ ಉದ್ದಂಡತಾಂಡವಾಯೈ ನಮಃ 10

ಓಂ ಉಮಾಯೈ ನಮಃ
ಓಂ ಉಕಾರಾಯೈ ನಮಃ
ಓಂ ಉತ್ತರಜ್ಞಾಯೈ ನಮಃ
ಓಂ ಊಷ್ಮಮಣ್ಯೈ ನಮಃ
ಓಂ ಉಕ್ಥಶೀಲವತ್ಯೈ ನಮಃ
ಓಂ ಉತ್ತರಾಖ್ಯಾಯೈ ನಮಃ
ಓಂ ಉತ್ಕೃಷ್ಟಶಕ್ತಿಯೈ ನಮಃ
ಓಂ ಉತ್ತರಾತ್ಮಿಕಾಯೈ ನಮಃ
ಓಂ ಉದನ್ವತ್ಪೂರ್ತಿಹೇತವೇ ನಮಃ
ಓಂ ಉಮಾಪತೇಃ ಪ್ರಾಣಾಯೈ ನಮಃ 20

ಓಂ ಉರ್ಜಾವತ್ಯೈ ನಮಃ
ಓಂ ಉದಾರಾಯೈ ನಮಃ
ಓಂ ಉದ್ವೇಗಘ್ನ್ಯೈ ನಮಃ
ಓಂ ಉಷ್ಣಶಮನ್ಯೈ ನಮಃ
ಓಂ ಉಪರಿಚಾರಿಣ್ಯೈ ನಮಃ
ಓಂ ಊರ್ಜಂವಹನ್ತ್ಯಿ ನಮಃ
ಓಂ ಊರ್ಜಧರಾಯೈ ನಮಃ
ಓಂ ಉಷ್ಣರಶ್ಮಿಸುತಾಪ್ರಿಯಾಯೈ ನಮಃ
ಓಂ ಉತ್ಸಾಹಿಜನಸಂಸೇವ್ಯಾಯೈ ನಮಃ
ಓಂ ಉತ್ಪತ್ತಿಸ್ಥಿತಿಸಂಹಾರಕಾರಿಣ್ಯೈ ನಮಃ 30

ಓಂ ಉಕ್ಷಯ್ಯೈ ನಮಃ
ಓಂ ಉಚ್ಚಾಯೈ ನಮಃ
ಓಂ ಊಹ್ಯಾಯೈ ನಮಃ
ಓಂ ಊರ್ಧ್ವಾಯೈ ನಮಃ
ಓಂ ಉತ್ತಮಾಯೈ ನಮಃ
ಓಂ ಊಕಾರಾಯೈ ನಮಃ
ಓಂ ಉದಾಸೀನಾಯೈ ನಮಃ
ಓಂ ಊಕಾರಗರ್ಭಾಯೈ ನಮಃ
ಓಂ ಉಗ್ರಕೃತ್ಯವಿದುಷಿಣ್ಯೈ ನಮಃ
ಓಂ ಊರ್ಧ್ವಮುಖಾವಲ್ಯೈ ನಮಃ 40

ಓಂ ಉಕ್ಷಾಯೈ ನಮಃ
ಓಂ ಉಸ್ರಾಯೈ ನಮಃ
ಓಂ ಉತ್ಪಲಾಯೈ ನಮಃ
ಓಂ ಉರ್ವರಾಯೈ ನಮಃ
ಓಂ ಉತ್ಕುಮ್ಭಾಯೈ ನಮಃ
ಓಂ ಉರ್ಮಿಮಾಲಿನ್ಯೈ ನಮಃ
ಓಂ ಉರಗಲೋಕವಿಹಾರಿಣ್ಯೈ ನಮಃ
ಓಂ ಉಪೇನ್ದ್ರಚರಣದ್ರವಾಯೈ ನಮಃ
ಓಂ ಉದಿತಾಮ್ಬರಮಾರ್ಗಾಯೈ ನಮಃ
ಓಂ ಉಡುಪಮಂಡಲಚಾರಿಣ್ಯೈ ನಮಃ 50

ಓಂ ಉತ್ಕಟಾಯೈ ನಮಃ
ಓಂ ಉಪಶಾನ್ತಾಯೈ ನಮಃ
ಓಂ ಉಡುರಾಡ್ವಕ್ತ್ರಾಯೈ ನಮಃ
ಓಂ ಉಮಾಸಹಾಯಾಯೈ ನಮಃ
ಓಂ ಉಚ್ಚೈರ್ಘೋಷಾಯೈ ನಮಃ
ಓಂ ಉಪಸ್ಥೇನ್ದ್ರಿಯಸಾಕ್ಷಿಣ್ಯೈ ನಮಃ
ಓಂ ಉಚ್ಚನೀಚಾದಿರಹಿತಾಯೈ ನಮಃ
ಓಂ ಉಚ್ಚಾವಚಪದಾಪಗಾಯೈ ನಮಃ
ಓಂ ಉಚ್ಚನೀಚವಿವರ್ಜಿತಾಯೈ ನಮಃ
ಓಂ ಉಪಸ್ಥೇನ್ದ್ರಿಯಹೀನಾಯೈ ನಮಃ 60

ಓಂ ಉಮಾದೇವ್ಯೈ ನಮಃ
ಓಂ ಉಲ್ಕಾಮುಖ್ಯೈ ನಮಃ
ಓಂ ಊರ್ಜಿತಾಜ್ಞಾಯೈ ನಮಃ
ಓಂ ಊರ್ಧ್ವದ್ವಾರಾಯೈ ನಮಃ
ಓಂ ಉನ್ಮತ್ತಕ್ರೋಧಭೈರವ್ಯೈ ನಮಃ
ಓಂ ಉದಾನವಾಯುಸಾಕ್ಷಿಣ್ಯೈ ನಮಃ
ಓಂ ಊಢಭುವನಕದಮ್ಬಾಯೈ ನಮಃ
ಓಂ ಉದ್ಯೋಗಾನನ್ದರಹಿತಾಯೈ ನಮಃ
ಓಂ ಉಷ್ಣಾನುಷ್ಣವಿವರ್ಜಿತಾಯೈ ನಮಃ
ಓಂ ಊಹಾಪೋಹವಿಲಕ್ಷಣಾಯೈ ನಮಃ 70

ಓಂ ಊರ್ಜಸ್ವಿನ್ಯೈ ನಮಃ
ಓಂ ಊರ್ಜಿತಾಯೈ ನಮಃ
ಓಂ ಉನ್ಮತ್ತನೃರ್ತಕ್ಯೈ ನಮಃ
ಓಂ ಉಮಾಸ್ನುಷಾಯೈ ನಮಃ
ಓಂ ಉಪಾಧಿರಹಿತಾಯೈ ನಮಃ
ಓಂ ಉರುಪರಾಕ್ರಮಾಯೈ ನಮಃ
ಓಂ ಉತ್ಫುಲ್ಲತರುಕೂಲಿನ್ಯೈ ನಮಃ
ಓಂ ಉಪಾದಾನಕಾರಣಾಯೈ ನಮಃ
ಓಂ ಊರ್ಧ್ವಲೋಕಪ್ರದಾಯಿನ್ಯೈ ನಮಃ
ಓಂ ಉರುಸ್ಯನ್ದನಸಮ್ಬದ್ಧಕೋಟ್ಯಶ್ವಾಯೈ ನಮಃ 80

ಓಂ ಊರ್ಧ್ವಗಾಯೈ ನಮಃ
ಓಂ ಉರ್ಧ್ವಾಧ್ವಾಯೈ ನಮಃ
ಓಂ ಊರ್ಮಿಲಾಯೈ ನಮಃ
ಓಂ ಉದಾರಕೀರ್ತಯೇ ನಮಃ
ಓಂ ಉರ್ಧ್ವಗತಿಪ್ರದಾಯೈ ನಮಃ
ಓಂ ಉತ್ತಾನಗತಿವಹಾಯೈ ನಮಃ
ಓಂ ಉತ್ಸವಮೋದಿತಾಯೈ ನಮಃ
ಓಂ ಉರುಕಾನ್ತಾರವಾಸಿನ್ಯೈ ನಮಃ
ಓಂ ಊರ್ಧ್ವರೇತಃಪ್ರಿಯಾಯೈ ನಮಃ
ಓಂ ಉಮಾಸೂನುಪ್ರಿಯಾಯೈ ನಮಃ 90

ಓಂ ಊಷ್ಮಣ್ಯೈ ನಮಃ
ಓಂ ಊರ್ಧ್ವರೇತಸ್ಯೈ ನಮಃ
ಓಂ ಉರುವಿಕ್ರಮಾಯೈ ನಮಃ
ಓಂ ಉಪಾಸ್ಯಮೂರ್ತ್ಯೈ ನಮಃ
ಓಂ ಊರ್ಧ್ವಗತಯಾಯೈ ನಮಃ
ಓಂ ಉತ್ಸಾಹಸಮ್ಪನ್ನಾಯೈ ನಮಃ
ಓಂ ಉತ್ತಮಜ್ಞಾನದೇಶಿಕಾಯೈ ನಮಃ
ಓಂ ಉದಾಸೀನವದಾಸೀನಾಯೈ ನಮಃ
ಓಂ ಊರ್ಧ್ವತಾಂಡವಪಂಡಿತಾಯೈ ನಮಃ
ಓಂ ಊರ್ಧ್ವಾಧೋವಿಭಾಗರಹಿತಾಯೈ ನಮಃ 100

ಓಂ ಊಹವಿನಿರ್ಮುಕ್ತಾಯೈ ನಮಃ
ಓಂ ಉತ್ಸಾಹರಹಿತೇನ್ದ್ರಾರಯೇ ನಮಃ
ಓಂ ಊಹಾಪೋಹವಿಹೀನಾಯೈ ನಮಃ
ಓಂ ಊರ್ಧ್ವಸಾಮ್ಯಜಗತ್ಸಾಕ್ಷಿಣ್ಯೈ ನಮಃ
ಓಂ ಉರುಸನ್ತೋಷಿತಾಮರಾಯೈ ನಮಃ
ಓಂ ಊರುಜಿತರಮ್ಭಾಮನೋಹರಾಯೈ ನಮಃ
ಓಂ ಉದುಮ್ಬರಫಲಪ್ರಖ್ಯಭೌಮಲೋಕೈಕಸಾಕ್ಷಿಣ್ಯೈ ನಮಃ
ಓಂ ಊರ್ಧ್ವಪ್ರಸಾರಿತಾಂಘ್ರೀಶದರ್ಶನೋದ್ವಿಗ್ರಮಾನಸಾಯೈ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಉನ್ಮತ್ತವಾರಾಹಿ ದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ 🙏🏻 şįddāŗājųgowdā ŗāşį māŋdyā

600 ವರ್ಷಗಳ ಹಿಂದೆ ಅಗೆಯುವ ಯಂತ್ರಗಳು, ಜೆಸಿಬಿಗಳು ಮುಂತಾದ ಯಾವುದೇ ಯಂತ್ರಗಳು ಇರಲಿಲ್ಲ, ಆದರೆ  9 ಅಂತಸ್ತಿನ ಈ ಮೇರುಕೃತಿ ವಿಶ್ವದ ಅದ್ಭುತವಾಗ...
18/06/2024

600 ವರ್ಷಗಳ ಹಿಂದೆ ಅಗೆಯುವ ಯಂತ್ರಗಳು, ಜೆಸಿಬಿಗಳು ಮುಂತಾದ ಯಾವುದೇ ಯಂತ್ರಗಳು ಇರಲಿಲ್ಲ, ಆದರೆ 9 ಅಂತಸ್ತಿನ ಈ ಮೇರುಕೃತಿ ವಿಶ್ವದ ಅದ್ಭುತವಾಗಿದೆ, ಭಾರತೀಯ ಇತಿಹಾಸದ ಶೌರ್ಯ, ಹಿಂದಿನ ಕಾಲದ ಭಾರತೀಯರ ಕಲಾತ್ಮಕತೆ ಮತ್ತು ವೈಭವಕ್ಕೆ ಜೀವಂತ ಸಾಕ್ಷಿ..👍

ವಿಜಯ ಸ್ಥಂಭ ಎಂದೂ ಕರೆಯಲ್ಪಡುವ ವಿಜಯ ಗೋಪುರವು ರಾಜಸ್ಥಾನದ ಚಿತ್ತೋರ್‌ಗಢದಲ್ಲಿದೆ ❤️

ನಮ್ಮ ಸಂಸ್ಕೃತಿ, ನಮ್ಮ ಭಾರತ, ನಮ್ಮ ವಾಸ್ತು ಶಿಲ್ಪ - ನಮ್ಮ ಹೆಮ್ಮೆ.🙏🏻
SiddaRajuGowda Rasi Mandya

Address


Alerts

Be the first to know and let us send you an email when Shree Vykunta Vartaa posts news and promotions. Your email address will not be used for any other purpose, and you can unsubscribe at any time.

Contact The Business

Send a message to Shree Vykunta Vartaa:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share