
22/01/2025
ಸೋಷಿಯಲ್ ಮೀಡಿಯಾ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ.
ಫೇಮಸ್ ಆಗಿ ನೆಮ್ಮದಿ ಕಳೆದುಕೊಂಡ ಕಣ್ ಸುಂದರಿ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇತ್ತೀಚೆಗೆ ತನ್ನ ನೀಲಿ ಕಣ್ಣುಗಳಿಂದ ಎಲ್ಲರ ಗಮನ ಸೆಳೆದು ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗಿದ್ದ ರುದ್ರಾಕ್ಷಿ ಮಾಲೆಗಳ ಮಾರಾಟ ಮಾಡುವ ಮೊನಾಲಿಸಾಗೆ ಈಗ ನೆಮ್ಮದಿಯೇ ಇಲ್ಲದಂತಾಗಿದೆ.
ಮೊನಾಲಿಸಾಳ ಫೋಟೋಗಳು ವೈರಲ್ ಆಗುತ್ತಿದ್ದಂತೆ ಜನರು ಅವಳನ್ನು ಹುಡುಕಲು ಹಾಗೂ ಜನರು ಸೆಲ್ಫಿ ತೆಗೆದುಕೊಳ್ಳಲು ಮತ್ತು ವಿಡಿಯೋ ಮಾಡಲು ಪ್ರಾರಂಭಿಸಿದರು. ಹಾಗಾಗಿ ಯಾವಾಲೂ ಅವಳ ಸುತ್ತಲೂ ಜನ ಸಂದಣಿ ಇರುತ್ತಿತ್ತು. ಇದರ ಮಧ್ಯ ಅವಳ ಮಾಲೆ ಮಾರಾಟದ ವ್ಯಾಪಾರಕ್ಕೂ ತುಂಬಾ ಸಮಸ್ಯೆಯಾಯಿತು. ಇದೆಲ್ಲದರಿಂದ ಬೇಸತ್ತ ಮೊನಾಲಿಸಾ ಕುಟುಂಬದವರು ಅವಳನ್ನು ಸ್ವಗ್ರಾಮ ಮಧ್ಯಪ್ರದೇಶದ ಇಂದೋರ್ಗೆ ಕಳುಹಿಸಿದ್ದಾರೆ.
ಇವಳನ್ನು ಮಿನಿ ಸೆಲೆಬ್ರಿಟಿ ಮಾಡಿ ಕೊನೆಗೆ ಹಳ್ಳಕ್ಕೆ ತಳ್ಳಿಬಿಡ್ತಾರೆ' ನಮ್ ಜನ... ಮೊದಲೇ ನೋಡಿಲ್ವಾ ಅಲ್ಲೆಲ್ಲೋ ಹೊಟ್ಟೆ ಪಾಡಿಗೆ ರೈಲ್ವೆ ಸ್ಟೇಷನ್ನಲ್ಲಿ ಹಾಡುತ್ತಿದ್ದ ರಾಣು ಮಂಡಲ ಹಾಗೂ ಕಾಚಾ ಬಾದಾಮ್ ಹಾಡಿದ ಭುಬನ್ ಬಾದ್ಯಾಕರ್ನನ್ನು ಕರ್ಕೊಂಡು ಬಂದು ಹಾಡ್ಸಿ ಮೆರ್ಸಿ ಕೊನೆಗೆ ಅಡ್ರೆಸ್ ಇಲ್ಲಂಗೆ ಮಾಡಿದ್ರು .. ಪಾಪ ಈಕೆ ಹೊಟ್ಟೆ ಪಾಡಿಗೆ ರುದ್ರಾಕ್ಷಿ ಮಾರ್ತಾ ಇದ್ರೆ ಮಾಲೆ 'ತಗೊಳೋದು ಬಿಟ್ಟು, ನಿನ್ನ ಕಣ್ಣು ಹಾಗೇ ಹೀಗೆ ಅಂತೆಲ್ಲಾ ಹಾಡಿಹೊಗಳಿ, ಅಟ್ಟಕ್ಕೇರಿಸಿ ಕೊನೆಗೆ ಇವಳನ್ನು ಅಡ್ರೆಸ್ ಇಲ್ದಂಗೆ ಮಾಡೋ ಹುನ್ನಾರ ಸ್ಪಷ್ಟವಾಗಿ ಕಾಣ್ತಾ ಇದೆ.
Jawari News Asianet Suvarna News News Karnataka