Namma Gadag

Namma Gadag Contact information, map and directions, contact form, opening hours, services, ratings, photos, videos and announcements from Namma Gadag, News & Media Website, .

04/10/2025

ನಿನ್ನ ಕನಸನ್ನು ನೀನೇ ನಿರ್ಧರಿಸು, ತಡ ಮಾಡಬೇಡ

ಇತ್ತೀಚೆಗೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಅನುರಾಗ ಅನಿಲ ಬೊರಕರ ಎಂಬ ಯುವಕನೊಬ್ಬ, ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್ ಯುಜಿ-2025)ಯಲ್ಲಿ ಶೇ. 99.99 ಅಂಕ ಗಳಿಸುವ ಮೂಲಕ ದೇಶ ಮಟ್ಟದಲ್ಲಿ ಶ್ರೇಷ್ಠ ಅಂಕ ಗಳಿಸಿ, ಉತ್ತರಪ್ರದೇಶದ AIIMS ಕಾಲೇಜಿಗೆ ಸೇರ್ಪಡೆ ಆಗುವ ಅವಕಾಶ ಪಡೆದಿದ್ದರೂ, ವೈದ್ಯರಾಗಲು ಆಸಕ್ತಿ ಇಲ್ಲವೆಂದು ಡೆತ್‌ನೋಟ್ ಬರೆದು ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ. ಈ ಸುದ್ದಿ ದೇಶದಾದ್ಯಂತ ಅನೇಕರನ್ನು ಬೆಚ್ಚಿಬೀಳಿಸಿದೆ.
ಆ ಹುಡುಗ ಡಾಕ್ಟರ್ ಆಗುವ ಬದಲು ಉದ್ಯಮಿ ಆಗುವ ಕನಸು ಕಂಡಿದ್ದನಂತೆ. ಆದರೆ ಅದನ್ನು ಮನೆಯವರ ಮುಂದೆ ಹೇಳಲಾರದೇ, ಆ ಕಡೆ ಎಂಬಿಬಿಎಸ್ ಕಾಲೇಜಿಗೆ ಸೇರಲು ಮನಸ್ಸಿಲ್ಲದೇ ಕಾಲೇಜಿಗೆ ಹೋಗಬೇಕಾದ ದಿನವೇ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಒತ್ತಡಕ್ಕೆ ಸಾಕ್ಷಿಯಾಗಿದೆ. ಇದರಿಂದ ವಿದ್ಯಾರ್ಥಿಗಳು ಕಲಿಯಬೇಕಾದ ಪ್ರಮುಖ ಪಾಠ ಏನೆಂದರೆ ಶಾಲಾ ಅಂಕಗಳು, ಹುದ್ದೆಗಳು, ಪದವಿಗಳು ಮಾತ್ರ ಜೀವನವಲ್ಲ. ಅದು ನಿಮ್ಮ ಗುರಿ ತಲುಪಲು ಇರುವ ಒಂದು ಪ್ರಮುಖ ಹಂತ ಅಷ್ಟೇ. ನಿಮ್ಮ ಆಸಕ್ತಿ, ಮನಸ್ಸಿನ ಹಂಬಲ ಮತ್ತು ಜೀವನದ ಗುರಿ ಮುಖ್ಯ. ನಾವು ಯಾವ ದಾರಿಯಲ್ಲಿ ಸಂತೋಷದಿಂದ, ಉತ್ಸಾಹದಿಂದ ಬದುಕಬಹುದು ಎಂಬುದನ್ನು ಅರಿತುಕೊಳ್ಳುವುದು ಹೆಚ್ಚು ಮುಖ್ಯ.

1. ನಿಮಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ಗುರುತಿಸಿ
2. ಸೋಲು ಅಥವಾ ಒತ್ತಡಗಳಿಗೆ ತಲೆಕೆಡಿಸಿಕೊಳ್ಳಬೇಡಿ
3. ಯಶಸ್ಸು ಎಂದರೆ ಪಾಸಾಗುವುದು ಮಾತ್ರವಲ್ಲ, ಜೀವನದಲ್ಲಿ ಯಶಸ್ಸು ಸಾಧಿಸುವುದು ಮುಖ್ಯ
4. ಸಮಾಜಕ್ಕೆ ಬೇಕಿರುವುದು ನಿಮ್ಮ ನಗು, ನಿಮ್ಮ ಜೀವನ

ಆ ಯುವಕನ ಕಥೆ ನಮಗೆ ಒಂದು ದೊಡ್ಡ ಪಾಠ ಕಲಿಸುತ್ತದೆ: ಜೀವನವೇ ಮುಖ್ಯ, ಮಾರ್ಗ ಬದಲಿಸಬಹುದು ಆದರೆ ಜೀವ ಬದಲಿಸಲಾಗುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.
ವಿದ್ಯಾರ್ಥಿಗಳೇ, ಕನಸುಗಳನ್ನು ಬೆಳೆಸಿಕೊಳ್ಳಿ, ಆದರೆ ಅವು ನಿಮ್ಮ ಹೃದಯದಿಂದ ಬರಬೇಕು. ಇತರರ ಒತ್ತಡದಿಂದ ಅಲ್ಲ. ಜೀವನ ಅಮೂಲ್ಯ, ಅದನ್ನು ಪ್ರೀತಿ, ಕನಸು ಮತ್ತು ಧೈರ್ಯದಿಂದ ಬೆಳೆಸಿಕೊಳ್ಳಿ.

ಸೋಷಿಯಲ್ ಮೀಡಿಯಾ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ.
22/01/2025

ಸೋಷಿಯಲ್ ಮೀಡಿಯಾ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ.

ಫೇಮಸ್ ಆಗಿ ನೆಮ್ಮದಿ ಕಳೆದುಕೊಂಡ ಕಣ್ ಸುಂದರಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇತ್ತೀಚೆಗೆ ತನ್ನ ನೀಲಿ ಕಣ್ಣುಗಳಿಂದ ಎಲ್ಲರ ಗಮನ ಸೆಳೆದು ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗಿದ್ದ ರುದ್ರಾಕ್ಷಿ ಮಾಲೆಗಳ ಮಾರಾಟ ಮಾಡುವ ಮೊನಾಲಿಸಾಗೆ ಈಗ ನೆಮ್ಮದಿಯೇ ಇಲ್ಲದಂತಾಗಿದೆ.
ಮೊನಾಲಿಸಾಳ ಫೋಟೋಗಳು ವೈರಲ್ ಆಗುತ್ತಿದ್ದಂತೆ ಜನರು ಅವಳನ್ನು ಹುಡುಕಲು ಹಾಗೂ ಜನರು ಸೆಲ್ಫಿ ತೆಗೆದುಕೊಳ್ಳಲು ಮತ್ತು ವಿಡಿಯೋ ಮಾಡಲು ಪ್ರಾರಂಭಿಸಿದರು. ಹಾಗಾಗಿ ಯಾವಾಲೂ ಅವಳ ಸುತ್ತಲೂ ಜನ ಸಂದಣಿ ಇರುತ್ತಿತ್ತು. ಇದರ ಮಧ್ಯ ಅವಳ ಮಾಲೆ ಮಾರಾಟದ ವ್ಯಾಪಾರಕ್ಕೂ ತುಂಬಾ ಸಮಸ್ಯೆಯಾಯಿತು. ಇದೆಲ್ಲದರಿಂದ ಬೇಸತ್ತ ಮೊನಾಲಿಸಾ ಕುಟುಂಬದವರು ಅವಳನ್ನು ಸ್ವಗ್ರಾಮ ಮಧ್ಯಪ್ರದೇಶದ ಇಂದೋರ್‌ಗೆ ಕಳುಹಿಸಿದ್ದಾರೆ.
ಇವಳನ್ನು ಮಿನಿ ಸೆಲೆಬ್ರಿಟಿ ಮಾಡಿ ಕೊನೆಗೆ ಹಳ್ಳಕ್ಕೆ ತಳ್ಳಿಬಿಡ್ತಾರೆ' ನಮ್ ಜನ... ಮೊದಲೇ ನೋಡಿಲ್ವಾ ಅಲ್ಲೆಲ್ಲೋ ಹೊಟ್ಟೆ ಪಾಡಿಗೆ ರೈಲ್ವೆ ಸ್ಟೇಷನ್‌ನಲ್ಲಿ ಹಾಡುತ್ತಿದ್ದ ರಾಣು ಮಂಡಲ ಹಾಗೂ ಕಾಚಾ ಬಾದಾಮ್ ಹಾಡಿದ ಭುಬನ್ ಬಾದ್ಯಾಕರ್‌ನನ್ನು ಕರ್ಕೊಂಡು ಬಂದು ಹಾಡ್ಸಿ ಮೆರ್ಸಿ ಕೊನೆಗೆ ಅಡ್ರೆಸ್ ಇಲ್ಲಂಗೆ ಮಾಡಿದ್ರು .. ಪಾಪ ಈಕೆ ಹೊಟ್ಟೆ ಪಾಡಿಗೆ ರುದ್ರಾಕ್ಷಿ ಮಾರ್ತಾ ಇದ್ರೆ ಮಾಲೆ 'ತಗೊಳೋದು ಬಿಟ್ಟು, ನಿನ್ನ ಕಣ್ಣು ಹಾಗೇ ಹೀಗೆ ಅಂತೆಲ್ಲಾ ಹಾಡಿಹೊಗಳಿ, ಅಟ್ಟಕ್ಕೇರಿಸಿ ಕೊನೆಗೆ ಇವಳನ್ನು ಅಡ್ರೆಸ್ ಇಲ್ದಂಗೆ ಮಾಡೋ ಹುನ್ನಾರ ಸ್ಪಷ್ಟವಾಗಿ ಕಾಣ್ತಾ ಇದೆ.
Jawari News Asianet Suvarna News News Karnataka

*" ಡಿಜಿಟಲ್ ಉಪವಾಸ "* ಒಂದು ವಿಭಿನ್ನ ಶೈಲಿಯ ಲೇಖನ. ಈ ಗ್ರೂಪ್ ಕೇವಲ ಬರಹ ಪ್ರೀಯರಿಗಾಗಿ ಮಾತ್ರ. ನಿಮ್ಮಲ್ಲಿ ಖಂಡಿತ ಬದಲಾವಣೆ ತರಬಲ್ಲ ವಿಚಾರ. ...
22/01/2024

*" ಡಿಜಿಟಲ್ ಉಪವಾಸ "*
ಒಂದು ವಿಭಿನ್ನ ಶೈಲಿಯ ಲೇಖನ. ಈ ಗ್ರೂಪ್ ಕೇವಲ ಬರಹ ಪ್ರೀಯರಿಗಾಗಿ ಮಾತ್ರ. ನಿಮ್ಮಲ್ಲಿ ಖಂಡಿತ ಬದಲಾವಣೆ ತರಬಲ್ಲ ವಿಚಾರ. ಓದಿ 👇
https://ayra.social/kn-IN/core/article/digital-fasting-66bcb857-b098-4f46-9eab-af104528a6c1-kn-in

*ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ...*
https://chat.whatsapp.com/CRA0bgGI0HUAxjauizSZ2u

ಆಸ್ತಿಕ-ನಾಸ್ತಿಕ, ಕಿರಿಯ-ಹಿರಿಯರು ಎಲ್ಲರಿಗೂ ಅನ್ವಯ

Address


Website

Alerts

Be the first to know and let us send you an email when Namma Gadag posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share