ENews Udupi

ENews Udupi Contact information, map and directions, contact form, opening hours, services, ratings, photos, videos and announcements from ENews Udupi, Media/News Company, .

ನಿಂತಿದ್ದ ಲಾರಿಗೆ ಕಾರು ಢಿಕ್ಕಿ : ಕಾರು ಚಾಲಕ ಮೃತ್ಯುಕಾಪು : ಕಾಪುವಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿ ನಿಂತಿದ್ದ ಲಾರಿಗೆ ಕಾರೊಂ...
29/02/2024

ನಿಂತಿದ್ದ ಲಾರಿಗೆ ಕಾರು ಢಿಕ್ಕಿ : ಕಾರು ಚಾಲಕ ಮೃತ್ಯು

ಕಾಪು : ಕಾಪುವಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಕಾರು ಚಾಲಕ ನಾಗೇಶ್ (70) ಮೃತ ದುರ್ದೈವಿ.

ಕಾಪುವಿನ ಮೆಸ್ಕಾಂಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಇವರು, ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಾಪು ಎಸೈ ಅಬ್ದುಲ್ ಖಾದರ್, ಕ್ರೈಂ ಎಸೈ ಪುರುಷೋತ್ತಮ್ ಹಾಗೂ ಪೋಲಿಸರು, ಹೆದ್ದಾರಿ ಗಸ್ತು ಪಡೆ ಆಗಮಿಸಿದ್ದು, ಕಾರು ಹಾಗು ಲಾರಿಯನ್ನು ತೆರವುಗೊಳಿಸಿದ್ದಾರೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14/02/2024

ಅಶ್ವಥ ಎಲೆಯಲ್ಲಿ ಮೂಡಿ‌ ಬಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ

ಉಡುಪಿ : ಕರ್ನಾಟಕ ಸರಕಾರವು ಈಬಾರಿ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದೆ.ಈ ಹಿನ್ನೆಲೆಯಲ್ಲಿ ಅರಳಿ ಮರದಎಲೆ (ಅಶ್ವಥ ಎಲೆಯಲ್ಲಿ) ಕಾಯಕವೇ ಕೈಲಾಸ ಎಂದ ವಚನ ಗುರು ವಿಶ್ವಗುರು ಬಸವಣ್ಣನವರ ರೇಖಾಚಿತ್ರವನ್ನು ಗಣೇಶ ರಾಜ್ ಸರಳೇಬೆಟ್ಟು ತಮ್ಮ ಕೈಚಳಕದಲ್ಲಿ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಅಶ್ವಥ ಎಲೆಯು ಸುಮಾರು 11"ಇಂಚು ಎತ್ತರ 7"50ಇಂಚು ಅಗಲ ಹೊಂದಿದ್ದು ,ಬಾರ್ಕೂರಿನ ಬೆಣ್ಣೆ ಕುದುರು ಕುಲ ಮಾಸ್ತಿ ಅಮ್ಮನವರ ದೇವಾಲಯದ ಆವರಣದಲ್ಲಿ ಇರುವ ಅರಳಿ ಮರದ ದೊಡ್ಡಗಾತ್ರದ ಎಲೆಯನ್ನು ಆಯ್ಕೆ ಮಾಡಿಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

01/02/2024

ಕಿದಿಯೂ‌ರ್ ನಾಗಮಂಡಲದಲ್ಲಿ 108 ವೈಣಿಕರ ವೀಣಾವಾದನಕ್ಕೆ ಜನತೆ ಮಂತ್ರಮುಗ್ದ!

ಕಿದಿಯೂ‌ರ್ ಹೊಟೇಲ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ನಡೆದ ನಾಗಮಂಡಲೋತ್ಸವ ಸಂದರ್ಭದಲ್ಲಿ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ವಿಶೇಷವಾಗಿ ವಿ। ಪವನಾ ಬಿ. ಆಚಾರ್ ಮಣಿಪಾಲ ಅವರ ನಿರ್ದೇಶನದಲ್ಲಿ ಏಕಕಾಲದಲ್ಲಿ 108 ವೀಣೆಗಳ
ವಾದನ ಸಂಪನ್ನಗೊಂಡಿತು. ಹಳದಿ ಮತ್ತು ಕೆಂಪು ಬಣ್ಣದ ಸೀರೆಯ ಸಮವಸ್ತ್ರಧಾರಿ 108 ವೈಣಿಕರು ವೀಣಾ ವಾದನದಿಂದ ಸ್ತೋತ್ರಗಳನ್ನು ಮಂತ್ರಮುಗ್ಧಗೊಳಿಸಿದರು. ಕಛೇರಿಯಲ್ಲಿ ರಿದಂ ಪ್ಯಾಡ್, ತಾಳ, ತಂಬೂರಿ ವಾದಕರು ಸಾಥ್ ನೀಡಿದ್ದರು. ನಾಗದೇವರ 108 ಸ್ತೋತ್ರಗಳು, ನವನಾಗ ಸ್ತುತಿ ಸೇರಿದಂತೆ ನಾಗದೇವರ ವಿವಿಧ ನಾಮಾವಳಿಗಳನ್ನು ವಿಶೇಷವಾಗಿ ಪ್ರಸ್ತುತಪಡಿಸಿ ನೆರೆದವರನ್ನು ರಂಜಿಸಿದರು.

Festival Performance B. Achar Music Chants Event Traditions Ceremony

31/01/2024

ಅಷ್ಟಪವಿತ್ರ ನಾಗಮಂಡಲೋತ್ಸವ : ಕ್ಷೀರ, ನಾರಿಕೇಳ ಅಭಿಷೇಕ

ಉಡುಪಿಯ ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ಶ್ರೀ ನಾಗಸನ್ನಿಧಿಯಲ್ಲಿ ಸರ್ಪ ಸೂಕ್ತ ಹವನ, ತತ್ವ ಕಲಶಾರಾಧನೆ, ತತ್ವ ಹೋಮ, ಶ್ರೀ ನಾಗದೇವರಿಗೆ ಹಾಲು ಹಾಗೂ ಸೀಯಾಳಗಳಿಂದ ವಿಶೇಷ ಕ್ಷೀರ, ನಾರಿಕೇಳ ಅಭಿಷೇಕ, ತತ್ವ ಕಲಶಾಭಿಷೇಕ, ಮಹಾಪೂಜೆ ನಡೆಯಿತು.

ಬಳಿಕ ಬ್ರಹ್ಮ‌ಕಲಶ ಮಂಡಲ ಲೇಖನ, ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕುಂಭ ಸ್ಥಾಪನೆ, ವಾಸ್ತುಹೋಮ, ರಾಕ್ಷೋಘ್ನ ಹವನ, ದಿಕ್ಫಾಲಕ ಬಲಿ ನಡೆಯಿತು.ಈ ಸಂದರ್ಭ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ತುಲಾಭಾರ ಸೇವೆ ಜರಗಿತು.

Nagamandala Utsava Narikela Abhisheka Hotels Jayaram Achar Ritual Sookta Havan Kalasha Aradhane Homa Ksheera Narikela Abhisheka Kalasha Mandalalekhana Shataka Kalasha Kumbha Sthapana Homa Havan Balinadana Matha Vidyadheesha Teertha Swamiji Seva

30/01/2024

ಕಿದಿಯೂರು ನಾಗಮಂಡಲ ಪ್ರಯುಕ್ತ ಉತ್ತರ ಭಾರತ ಮಾದರಿಯ ಗಂಗಾರತಿ

ಉಡುಪಿಯ ಕಿದಿಯೂರು ನಾಗಮಂಡಲ ಉತ್ಸವ ಹಿನ್ನೆಲೆಯಲ್ಲಿ ಪವಿತ್ರ ಗಂಗಾರತಿ ನೆರವೇರಿತು. ಕಿದಿಯೂರು ನಾಗನ ಗುಡಿ ಸಮ್ಮುಖದಲ್ಲಿ ವಾರಣಾಸಿಯಿಂದ ಬಂದ ಅರ್ಚಕರು ಶಾಸ್ತ್ರೋತ್ರವಾಗಿ ಆರತಿಯನ್ನು ಬೆಳಗಿದರು. ಆರಂಭದಲ್ಲಿ ನಾಗದೇವರಿಗೆ ವಿಶೇಷ ಧೂಪಸೇವೆ ನಡೆಸಿ, ಆನಂತರ ಗಂಗೆಯ ತಟದಲ್ಲಿ ನಡೆಯುವ ಮಾದರಿಯ ಆರತಿಯನ್ನು ನಾಗದೇವರ ಸನ್ನಿಧಾನದ ಮುಂಭಾಗದಲ್ಲಿ ಬೆಳಗಲಾಯ್ತು.

ನಾಗನ ಗುಡಿ ಸಮೀಪದಲ್ಲಿ ವಿಶೇಷವಾಗಿ ರಚಿಸಲಾದ ವಿವಿಧ ವೇದಿಕೆಗಳಲ್ಲಿ ವಾರಾಣಾಸಿಯಿಂದ ಆಗಮಿಸಿರುವ ಅರ್ಚಕ ವೃಂದದವರು ಆರತಿ ಬೆಳಗಲು ವ್ಯವಸ್ಥೆ ಮಾಡಲಾಗಿತ್ತು. ಆಕರ್ಷಕ. ಸಾಮೂಹಿಕ ಗಂಗಾರತಿಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು. ಜನವರಿ 26 ಕ್ಕೆ ವಿದ್ವಾಂಸ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಭುವನೇಂದ್ರ ಕಿದಿಯೂರು ಕುಟುಂಬ ಸಂಪೂರ್ಣ ಸೇವೆ ಮಾಡಿಸುತ್ತಿದೆ. ಸ್ವಾಗತ ಸಮಿತಿ, ಸಾರ್ವಜನಿಕರ ಸಹಕಾರದಿಂದ ಜನವರಿ 31 ರಂದು ಅಷ್ಟಪವಿತ್ರ ನಾಗಮಂಡಲ ನೆರವೇರಲಿದೆ. ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ.


Arathi Festival Rituals Kidiyooru Celebration

30/01/2024

ನೀರಿನ ಟ್ಯಾಂಕ್‌ಗೆ ಬಿದ್ದ ಚಿರತೆ ರಕ್ಷಣೆ ಮಾಡಿದ ಅರಣ್ಯ ಇಲಾಖೆ

ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನೀರಿನ ಟ್ಯಾಂಕ್‌ಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಚಂದಣದಲ್ಲಿ ಸಂಭವಿಸಿದೆ.
ರಾತ್ರಿ ಹೊತ್ತು ಈ ಚಿರತೆ ಆಹಾರ ಹುಡುಕುತ್ತಾ ಬಂದು, ನೀರಿನ ಟ್ಯಾಂಕ್‌ಗೆ ಬಿದ್ದಿದೆ. ಚಿರತೆ ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಊರವರು ಚಿರತೆ ನೋಡಲು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.
ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದಾರೆ. ಸೆರೆಹಿಡಿದ ಚಿರತೆಯನ್ನು ಸ್ಥಳೀಯ ಅರಣ್ಯಕ್ಕೆ ರವಾನೆ ಮಾಡಲಾಯಿತು. ಬೈಂದೂರು ಅರಣ್ಯ ಇಲಾಖೆ ಉಪ ವಲಯ ಅಣ್ಯಾಧಿಕಾರಿ ಸಿದ್ದೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಚಿರತೆ‌ಯನ್ನು ಹಿಡಿದು ಕಾಡಿಗೆ ಬಿಟ್ಟ ಬಳಿಕ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.

Rescue Tank Incident Department District

30/01/2024

ಗ್ಯಾಸ್ ಟ್ಯಾಂಕರ್ ಅಪಘಾತ - ತಪ್ಪಿದ ಭಾರೀ ಅನಾಹುತ

ಗ್ಯಾಸ್ ತುಂಬಿದ್ದ ಟ್ಯಾಂಕರೊಂದು ಅಪಘಾತಕ್ಕೀಡಾಗಿರುವ ಘಟನೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಭವಿಸಿದೆ.

ಮಂಗಳೂರಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ರಾ.ಹೆ. ಸ್ವಚ್ಛಗೊಳಿಸುವ ವಾಹನಕ್ಕೆ ಡಿಕ್ಕಿ ಹೊಡೆಯಿತು. ಬಳಿಕ ಡಿವೈಡರ್ ದಾಟಿ ಚರಂಡಿ ಏರಿ ನಿಂತಿದೆ. ಪಕ್ಕದ ಹೊಂಡಕ್ಕೆ ಉರುಳಿದರೆ ಭಾರೀ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಕೂದಲೆಳೆಯಲ್ಲಿ ಅನಾಹುತ ತಪ್ಪಿದೆ.

ಇದರಿಂದ ಟ್ಯಾಂಕರ್ ಚಾಲಕನ ಎರಡೂ ಕಾಲುಗಳು ತುಂಡಾಗಿವೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

's Error Investigation to Kundapura Highway 66

23/01/2024

ಅಯೋಧ್ಯೆಯ ಬಾಲರಾಮನ ಸುಪ್ರಭಾತ ದರ್ಶನ

Darshan Mandir Rama Customs Place ENewsUdupi

20/01/2024

ಪುತ್ತಿಗೆ ಶ್ರೀಗಳ ಕುರಿತ 'ಸಪ್ತಸಾಗರದಾಚೆ' ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

ಪರ್ಯಾಯ ಪುತ್ತಿಗೆ ಮಠ ಮತ್ತು ಕೊಡವೂರಿನ ಉಡುಪ ರತ್ನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ ಛಾಯಾಚಿತ್ರ ಪ್ರದರ್ಶನ 'ಸಪ್ತ ಸಾಗರದಾಚೆ' ಪ್ರದರ್ಶನವನ್ನು ಜಪಾನಿನ ರಿಸ್ಸೋ ಕೊಸೈ ಕೋಯ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ರೆ.ಕೋಶೋ ನಿವಾನೋ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಉದ್ಘಾಟಿಸಿದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ತಮ್ಮ ಅಮೆರಿಕ ಪ್ರವಾಸದಲ್ಲಿ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಕುರಿತು ನಿರ್ಮಿಸಿದ ಛಾಯಾ ಚಿತ್ರಗಳನ್ನು ಇಲ್ಲಿ ಪ್ರಸ್ತುತಪಡಸಲಾಗಿದೆ. ಫಿನಿಕ್ಸ್ ವೆಂಕಟ ಕೃಷ್ಣ ದೇವಸ್ಥಾನದಲ್ಲಿ ಯತಿಗಳ ನಿತ್ಯ ಪೂಜೆಯನ್ನು ಇಲ್ಲಿ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿಯಲಾಗಿದ್ದು ಒಟ್ಟು 36 ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.

Exhibition Matha Event Kosei Koyu Institute Venkat Krishna Devasthan 's Daily Worship 's Photographs Viewing

17/01/2024

ಜ 23 ರಿಂದ ರಾಮದೇವರ ಮಂಡಲೋತ್ಸವ : ಉಡುಪಿಯಿಂದ ಅಯೋಧ್ಯೆಯತ್ತ ರಜತ ಕಲಶಗಳು

Jubilee Abhisheka
Swamiji Tirtha Swamiji Rama Temple

15/01/2024

ಮಕರ ಸಂಕ್ರಾಂತಿ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಮೂರು ರಥಗಳ ಉತ್ಸವ

ಮಕರ ಸಂಕ್ರಾಂತಿ ಸಂಭ್ರಮ. ಈ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಮೂರು ತೇರುಗಳ ಉತ್ಸವ ನಡೆಯಿತು.ಮೊದಲು ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ಮೂರ್ತಿಗಳನ್ನಿಟ್ಟು ಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆದರು. ರಥೋತ್ಸವದ ವಿಶೇಷ ಆಕರ್ಷಣೆಯಾಗಿ ಸುಡುಮದ್ದು ಪ್ರದರ್ಶನ ನಡೆದಿದ್ದು ಭಕ್ತರು ರೋಮಾಂಚನಗೊಂಡರು.

Sankranti Krishna Matha Utsava Bheedi

12/01/2024

ಕುತ್ಪಾಡಿ ಕಾನಂಗಿ ಶ್ರೀಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ರಾಮ ಮಂತ್ರ ಜಪ ಹಾಗೂ ಶ್ರೀ ರಾಮ ತಾರಕ ಹೋಮ

ಮರ್ಯಾದಾ ಪುರುಷೋತ್ತಮ ಅಯೋಧ್ಯಾ ಶ್ರೀ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇಡೀ ದೇಶದಲ್ಲಿ ಉತ್ಸವ ನಡೆಯುತ್ತಿದೆ. ಗ್ರಾಮ ಗ್ರಾಮದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಶುರುವಾಗಿವೆ.
ಕುತ್ಪಾಡಿ ಕಾನಂಗಿ ಶ್ರೀಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ಮಂತ್ರ ಜಪ ಹಾಗೂ ಶ್ರೀ ರಾಮ ತಾರಕ ಹೋಮ ಶುರುವಾಗಿದೆ.
ಪ್ರತಿದಿನ ಶ್ರೀ ರಾಮ ನಾಮ ಸಂಕೀರ್ತನೆಯ ಭಜನಾ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಕುಣಿತ ಭಜನೆ ಹಾಗೂ ದೀಪೋತ್ಸವ ಜರಗಲಿದೆ. ಕಾನಂಗಿ ದೇವಸ್ಥಾನ ಕುತ್ಪಾಡಿ 11 ದಿನಗಳ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು, ಕುತ್ಪಾಡಿ ವಿದ್ವಾನ್ ಬಾಲಕೃಷ್ಣ ಭಟ್ ಹೋಮದ ನೇತೃತ್ವ ವಹಿಸಿದ್ದಾರೆ.

Sri Brahma Vishnu Maheshwara Devalaya Mantra Japa Rama Taraka Homa Sri Rama Mandir Inauguration. Process Kund Ceremony

Address


Website

Alerts

Be the first to know and let us send you an email when ENews Udupi posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share