Samagra Suddi

  • Home
  • Samagra Suddi

Samagra Suddi ಸುದ್ದಿ ಜಗತ್ತಿನ ಹೊಸ ಭರವಸೆ ಸಮಗ್ರಸುದ್ದಿ

06/03/2026

ಓವರ್ ಟೇಕ್ ಮಾಡೋ ಭರದಲ್ಲಿ ನಡೆಯೋ ಅವಾಂತರಗಳು ಒಂದೆರಡಲ್ಲ....! ಹೈವೈಯಲ್ಲಿ ಬೃಹತ್ ಕಂಟೆನರ್ ವೊಂದು ಅತಿವೇಗವಾಗಿ ಸಂಚರಿಸಿ ಉರುಳಿಬಿದ್ದು ನೋಡುಗರ ಎದೆ ಝಲ್ಲೆನಿಸುವಂತೆ ಮಾಡಿದೆ. ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಮುದುಗೆರೆ ಸಮೀಪದ ಈ ಅಪಘಾತ ದೃಶ್ಯ ಸಿನಿಮಾದ ದೃಶ್ಯಗಳನ್ನು ನೆನಪಿಸಿದ್ದು ಸುಳ್ಳಲ್ಲ....!!

02/03/2026

ಬಿಜೆಪಿಯ ಫೈರ್ ಬ್ರ್ಯಾಂಡ್ ಹಾಗೂ ಹಿಂದುತ್ವದ ಹುಲಿ ಅನಂತ ಕುಮಾರ್ ಹೆಗಡೆ ರಾಜ್ಯ ರಾಜ ಕಾರಣಕ್ಕೆ ಮರಳುವ ಚರ್ಚೆ ಜೋರಾಗಿದೆ. ಈ ಮಧ್ಯೆಯೇ ಮಾಜಿಸಂಸದ ಅನಂತಕುಮಾರ್ ಜಾತ್ರಾ ಗದ್ದುಗೆಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.

ಕ್ರಿಕೆಟಿಗ್ ಕೆ.ಎಲ್.ರಾಹುಲ್ ಆಂಜನೇಯನ ದರ್ಶನ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರಸೊಪ್ಪ ಬಂಗಾರಮಕ್ಕಿ ಆಂಜನೇಯ ಸ್ವಾ...
02/03/2026

ಕ್ರಿಕೆಟಿಗ್ ಕೆ.ಎಲ್.ರಾಹುಲ್ ಆಂಜನೇಯನ ದರ್ಶನ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರಸೊಪ್ಪ ಬಂಗಾರಮಕ್ಕಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ದೇವಾಲಯದ ಧರ್ಮದರ್ಶಿ ಶ್ರೀಮಾರುತಿ ಗುರೂಜಿ ಕೆ.ಎಲ್.ರಾಹುಲ್ ಅವರನ್ನು ಸನ್ಮಾನಿಸಿದರು.

22/02/2026

ಆತ ತನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ಅರವತ್ತು ಸಾವಿರ ರೂಪಾಯಿ ಬೆಲೆಬಾಳುವ ಕ್ಯಾಮರಾ ಆರ್ಡರ್ ಮಾಡಿದ್ದ. ಆದರೆ ಆನ್ ಲೈನ್ ಡೆಲಿವರಿ ಯಲ್ಲಿ ಬಂದಿದ್ದು ಸೋಪಿನ್ ಪೌಡರ್‌ . ಶಾರ್ಜಾದಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಲ್ಪ್ರೈಡ್ ಝೇವಿಯರ್ ಮಿರಾಂಡ್ ವಂಚನೆಗೊಳಗಾದವರು.

ಕಾರವಾರ: ತಾವು ಅನೈತಿಕ ಸಂಬಂಧ ಹೊಂದಿದ್ದ ಸುಚಿತ್ರಾಗಾಗಿ ಆಕೆಯ ಪತಿ ಮಹೇಶ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷ್ಯಿ ಕಮಲಾಕರ್ ಭಟ್ ಜೈಲು ಸೇರಿದ್...
22/02/2026

ಕಾರವಾರ: ತಾವು ಅನೈತಿಕ ಸಂಬಂಧ ಹೊಂದಿದ್ದ ಸುಚಿತ್ರಾಗಾಗಿ ಆಕೆಯ ಪತಿ ಮಹೇಶ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷ್ಯಿ ಕಮಲಾಕರ್ ಭಟ್ ಜೈಲು ಸೇರಿದ್ದಾರೆ. ಈ ಮಧ್ಯೆ ಜ್ಯೋತಿಷ್ಯಿ ಕಮಲಾಕರ್ ಭಟ್ ಮೇಲೆ ಬಾಲಕಿಯೊಬ್ಬಳ ಮೇಲೂ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಸಿದ್ಧಾಪುರದಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಶಿವಮೊಗ್ಗದವಳಾಗಿರೋದರಿಂದ ಸಧ್ಯದಲ್ಲೇ ಪ್ರಕರಣ ಶಿವಮೊಗ್ಗಕ್ಕೆ ವರ್ಗಾವಣೆಯಾಗಲಿದೆ.

22/02/2026

ಅಂಜನಾದ್ರಿಯಲ್ಲಿ ಜೈಹನುಮಾನ್ ಅವತಾರ ತಾಳಲಿದ್ದಾರೆ ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ. ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ರಿಶಬ್ ಶೆಟ್ಟಿಯ ಹೊಸ ಚಿತ್ರ ಜೈ ಹನುಮಾನ್ ಚಿತ್ರಕ್ಕೆ ಅದ್ದೂರಿ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಸಮೇತ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ರಿಶಬ್ ಶೆಟ್ಟಿ ಆಂಜನೇಯನಿಗೆ ಪೂಜೆ ಸಲ್ಲಿಸಿ ಆರ್ಶಿವಾದ ಪಡೆದರು.

17/02/2026

ಶರವೇಗದಲ್ಲಿದ್ದ ಬೈಕ್ ಸವಾರರು ನೇರವಾಗಿ ಗುದ್ದಿದ್ದು ಕರೆಂಟ್ ಕಂಬಕ್ಕೆ. ಮುಂದೇ ನಡೆದಿದ್ದು ಮಾತ್ರ ಪವಾಡ. ಮಂಗಳೂರಿನ ಉಳ್ಳಾಲದ ಕಿನ್ಯಾ ಸಂಕೇಶದಲ್ಲಿ ಸೋಮವಾರ ಈ ಅಪಘಾತ ನಡೆದಿದೆ. ವಿಜಯಪುರದ ಮೂಲದ ಇಬ್ಬರು ವಿದ್ಯಾರ್ಥಿಗಳು ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ. ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದು ಹೋದ ಚಿನ್ನವಿದ್ದ ಬ್ಯಾಗ್ ಮತ್ತೆ ಸಿಗೋಕೆ ಸಾಧ್ಯವೇ?! ಅದೃಷ್ಟ ಚೆನ್ನಾಗಿದ್ದರೇ ಅದು ಆಗುತ್ತೆ. ಯಲಹಂಕದ ರೈಲ್ವೆ ನಿಲ್ದಾಣದಲ್ಲಿ ಪೆಬ್ರವರಿ...
10/02/2026

ಕಳೆದು ಹೋದ ಚಿನ್ನವಿದ್ದ ಬ್ಯಾಗ್ ಮತ್ತೆ ಸಿಗೋಕೆ ಸಾಧ್ಯವೇ?! ಅದೃಷ್ಟ ಚೆನ್ನಾಗಿದ್ದರೇ ಅದು ಆಗುತ್ತೆ. ಯಲಹಂಕದ ರೈಲ್ವೆ ನಿಲ್ದಾಣದಲ್ಲಿ ಪೆಬ್ರವರಿ 8 ರಂದು ವ್ಯಕ್ತಿಯೊಬ್ಬ 19 ಲಕ್ಷ ಬೆಲೆಬಾಳುವ ಚಿನ್ನಾಭರಣವಿದ್ದ ಬ್ಯಾಗ್ ಕಳೆದುಕೊಂಡಿದ್ದರು. ತಕ್ಷಣ ಅವರು ಈ ವಿಚಾರವನ್ನು ಆತ ಅಲ್ಲಿದ್ದ RPF ಸಿಬ್ಬಂದಿ ಗಮನಕ್ಕೆ ತಂದರು. ಶೋಧ ನಡೆಸಿದ ಆರ್ ಪಿಎಫ್ ಸಿಬ್ಬಂದಿ ಬ್ಯಾಗ್ ಹುಡುಕಿ ಮಾಲೀಕರಿಗೆ ಒಪ್ಪಿಸಿದ್ದಾರೆ.

#

ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಪ್ರೀತಿಸಿ ,ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ ಯುವತಿ ಕೈಕೊಟ್ಟಿದ್ದಕ್ಕೆ ಬಾಡಿ ಬಿಲ್...
08/02/2026

ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಪ್ರೀತಿಸಿ ,ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ ಯುವತಿ ಕೈಕೊಟ್ಟಿದ್ದಕ್ಕೆ ಬಾಡಿ ಬಿಲ್ಡರ್ ಯುವಕ ಆತ್ಮಹ*** ತ್ಯೆಗೆ ಶರಣಾಗಿದ್ದಾನೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗೆಳೆಯರಬಳಗದಲ್ಲಿ ಘಟನೆ ನಡೆದಿದೆ. ಬಾಡಿ ಬಿಲ್ಡರ್ ಕಿರಣ್ (26 ) ಸಾವನ್ನಪ್ಪಿದ ದುರ್ದೈವಿ. ತನಗಿಂತ ದೊಡ್ಡ ವಯಸ್ಸಿನ ಯುವತಿಯನ್ನು ಕಿರಣ ಪ್ರೀತಿಸಿದ್ದ. ಹುಡುಗಿ ಮನೆಯವರಿಗಿದ್ದ 50 ಲಕ್ಷ ಸಾಲವನ್ನು ತೀರಿಸಿ ಮದುವೆಯಾಗಲು ಒಪ್ಪಿಕೊಂಡಿದ್ದ. ಈ ಮಧ್ಯೆ ಯುವತಿ ಬೇರೆಯವನೊಂದಿಗೆ ಮದುವೆಗೆ ಒಪ್ಪಿಕೊಂಡಿದ್ದಾಳೆ. ಇದನ್ನು ತಿಳಿದು ಮನನೊಂದ‌ಕಿರಣ ಆತ್ಮಹ*ತ್ಯೆಗೆ ಶರಣಾಗಿದ್ದಾರೆ.

07/02/2026

ಚನ್ನರಾಯಪಟ್ಟಣದಲ್ಲಿ ರಾಮೋತ್ಸವದಲ್ಲಿ ಬಿಗ್ ಬಾಸ್ ವಿಜೇತ ನಟಗಿಲ್ಲಿ ಪಾಲ್ಗೊಂಡರು. ರಾಮೋತ್ಸವದಲ್ಲಿ ಪಾಲ್ಗೊಂಡ ನಟ ಗಿಲ್ಲಿಯನ್ನು ಜನರು ಮೆರವಣಿಗೆಯಲ್ಲಿ ಕರೆದೊಯ್ದರು. ಇನ್ನು‌ ಗಿಲ್ಲಿಯನ್ನು ನೋಡಲು ಜನಸಾಗರವೇ ನೆರೆದಿತ್ತು. ಮೆರವಣಿಗೆಯಲ್ಲಿ ಕಲಾತಂಡಗಳು ಭಾಗಿಯಾಗಿದ್ದವು.

07/02/2026

ಬೆಂಗಳೂರು: ನಮ್ಮ ಮೆಟ್ರೋ ನಮ್ಮ ಬೆಂಗಳೂರಿನ ಹೆಮ್ಮೆಯಾಗಿದೆ. ಬೆಂಗಳೂರಿನ ತಲೆನೋವಾದ ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಉತ್ತರವಾಗಿದೆ. ಇಂಥ ಮೆಟ್ರೋದಲ್ಲಿ ನಮ್ಮ ಹೆಮ್ಮೆಯ ಮೈಸೂರಿನ‌ ಮಹಾರಾಜರ ಯುದುವೀರ್ ಒಡೆಯರ್ ಪ್ರಯಾಣಿಸಿದರು. ಮೈಸೂರು ರಸ್ತೆಯ ನಮ್ಮ ಮೆಟ್ರೋದಲ್ಲಿ ಜನಸಾಮಾನ್ಯರಂತೆ ಬಂದು ಹಣ ಪಾವತಿಸಿ ಟಿಕೇಟ್ ಪಡೆದ ಯುದವೀರ್ ಒಡೆಯರ್ ಎಂಜಿರಸ್ತೆಯವರೆಗೆ ಪ್ರಯಾಣಿಸಿದರು.

07/02/2026

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿರೋ ಮಾರಿಕಾಂಬಾ ಜಾತ್ರೆಯಲ್ಲಿ ನಟ ಧ್ರುವ್ ಸರ್ಜಾ ಹಾಗೂ ನಟಿ ರಚಿತಾರಾಮ್ ಪಾಲ್ಗೊಂಡು ದೇವಿ ದರ್ಶನ ಪಡೆದರು. ಇದಕ್ಕೂ ಮುನ್ನ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಜೊತೆ ದೇವರ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Address


Alerts

Be the first to know and let us send you an email when Samagra Suddi posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share