Basavaraj Itnal Infotainment

  • Home
  • Basavaraj Itnal Infotainment

Basavaraj Itnal Infotainment Basavaraj Itnal Infotainment is media production co in Bangalore. Film production, TV content creation and online publishing etc

ಭಾರತದ ಆತ್ಮವನ್ನೇ ಒಡೆಯಲು ಬ್ರಿಟಿಷರು ಬಳಸಿದ ವಕ್ಫ್, ಮುಸ್ಲಿಂ ಪರ್ಸನಲ್ ಲಾ ಎಂಬಿತ್ಯಾದಿ ಹತಾರಗಳನ್ನು ಬಳಸಿ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್...
30/10/2024

ಭಾರತದ ಆತ್ಮವನ್ನೇ ಒಡೆಯಲು ಬ್ರಿಟಿಷರು ಬಳಸಿದ ವಕ್ಫ್, ಮುಸ್ಲಿಂ ಪರ್ಸನಲ್ ಲಾ ಎಂಬಿತ್ಯಾದಿ ಹತಾರಗಳನ್ನು ಬಳಸಿ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳಬೇಕೆ ?

ಡಾ ಬಸವರಾಜ್ ಇಟ್ನಾಳ

ಹತ್ತನೇ ಶತಮಾನದಲ್ಲಿ ಪರ್ಸಿಯಾ ದೇಶದ ಘಜನಿಗಳು, ಹನ್ನೊಂದನೇ ಶತಮಾನದಲ್ಲಿ ಘೋರಿಗಳು ಇಂದಿನ ಉತ್ತರ ಭಾರತದ ಕೆಲ ಭಾಗ, ಪಾಕಿಸ್ತಾನ, ಅಫ್ಘಾನಿಸ್ತಾನ, ಇಂದಿನ ತಜಾಕಿಸ್ತಾನ, ತುರ್ಕ್ಮೇನಿಸ್ತಾನ, ಇತ್ಯಾದಿ ಪ್ರದೇಶಗಳನ್ನು ಆಕ್ರಮಿಸಿದ್ದ ಕಾಲದಲ್ಲಿ ಮುಸ್ಲಿಂ ಸಾಮ್ರಾಜ್ಯದ ಧಾರ್ಮಿಕ ದೊರೆ ಖಲೀಫರು ಅಂತ ನಂಬಿದ್ದ ಇವರೆಲ್ಲ ಷರಿಯಾ ಪ್ರಕಾರವೇ ನ್ಯಾಯಿಕ ವ್ಯವಸ್ಥೆಯನ್ನು ನಡೆಸುತ್ತಿದ್ದರು. ಮುಂದೆ ಹನ್ನೆರಡನೇ ಶತಮಾನದ ಆಸುಪಾಸಿನಲ್ಲಿ ಬಂದ ಮಾಮಲೂಕರು ಹಿಂದಿನ ಅರಸರ ದಾಸರ ವಂಶದವರಾಗಿದ್ದರು. ಇವರ ನಂತರ ಖಿಲ್ಜಿ ವಂಶ ನಂತರ ತುಘಲಕ್ ವಂಶ ನಂತರ ಲೋಧಿ ವಂಶಗಳೆಲ್ಲವೂ ದೆಹಲಿಯ ಸುಲ್ತಾನರೆಂದೇ ಇತಿಹಾಸದಲ್ಲಿ ದಾಖಲು. ಯಾವಾಗ ಇವರು ದೆಹಲಿಯತ್ತ ಮುಖ ಮಾಡಿದರೋ ಅಂದಿನಿಂದ ಖಿಲಾಫತ್ ಜೊತೆಗಿನ ಇವರ ಸಂಬಂಧ ಹಳಸತೊಡಗಿತು. ಯಾಕೆಂದರೆ ದೆಹಲಿ ಮತ್ತು ಅಂದಿನ ಭಾರತಕ್ಕೆ ಇಸ್ಲಾಮ್ ಹೊರತು.

ದೆಹಲಿ ಸಾಮ್ರಾಜ್ಯ ಷರಿಯಾ ಪ್ರಕಾರವೇ ನಡೆಯಬೇಕು. ಆದ್ದರಿಂದ ಇಲ್ಲಿನ ಹಿಂದುಗಳ ಮೇಲೆ ಮುಸಲ್ಮಾನರಾಗಲು ಒತ್ತಾಯ ಹೇರಬೇಕು, ಇಲ್ಲವಾದಲ್ಲಿ ಅವರನ್ನೆಲ್ಲ ಕೊಲ್ಲಬೇಕು ಅಂತ ಉಲೇಮಾಗಳ ನಿಯೋಗ ಮಾಮಲೂಕ ದೊರೆ ಇಲ್ತಮಿಷ್ ಗೆ ಹೇಳಿದಾಗ, ಇಲ್ತಮಿಷ್ ಹೇಳುವುದೇನು ಗೊತ್ತೇ "ಅನ್ನದಲ್ಲಿ ಉಪ್ಪು ಇರುವಷ್ಟು ಮುಸ್ಲಿಮರು ಇದ್ದೇವೆ. ನೀವು ಹೇಳಿದಂಗೆಲ್ಲ ಮಾಡುವುದು ಅವಾಸ್ತವಿಕ ಮತ್ತು ಅಸಾಧ್ಯ. " ಆದರೆ ಹಿಂದೂ ಧರ್ಮವನ್ನು ಹಿಮ್ಮೆಟ್ಟಿಸಲು ಜೆಜಿಯಾ ಅನ್ನುವ `ಧರ್ಮ ತೆರಿಗೆ' ಯನ್ನು ಹೇರಲಾಯಿತು. ಈ ಸದರಿ `ಹಿಂದೂ ಧರ್ಮ ತೆರಿಗೆ' ಯಿಂದ ಬ್ರಾಹ್ಮಣರಿಗೆ ವಿನಾಯಿತಿ ಕೂಡ ಇತ್ತು. ಹೇ ನಮಗೆ ಮಾತ್ರ ಏಕೆ? ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು. ನಮಗೆ ಮಾತ್ರ ಏಕೆ ಈ ವಿನಾಯಿತಿ ? ವಿನಾಯಿತಿ ಕೊಡುವುದಾದರೆ ನಮ್ಮ ಇಡೀ ಹಿಂದೂ ಸಮಾಜಕ್ಕೆ ಕೊಡಿ. ಇಲ್ಲವಾದಲ್ಲಿ ನಮಗೂ ಬೇಡ ಅಂತ ಈ ಬ್ರಾಹ್ಮಣೋತ್ತಮರು ಹೇಳಲೇ ಇಲ್ಲ !

ಹದಿನಾರನೇ ಶತಮಾನದಲ್ಲಿ ಬಾಬರ್ ಮೊದಲನೇ ಪಾಣಿಪತ್ ಕದನದ ಮೂಲಕ ಬಂದ ಮುಘಲ್ ಸಾಮ್ರಾಜ್ಯವಂತೂ ಖಲೀಫರೊಂದಿಗೆ ಹೆಚ್ಚೂ ಕಡಿಮೆ ಸಂಪರ್ಕವನ್ನೇ ಕಡಿದುಕೊಂಡಿತು. ಬಾಬರನ ಮಗ ಹುಮಾಯೂನ್ ಜೆಜಿಯಾ ತೆರಿಗೆಯನ್ನು ರದ್ದುಗೊಳಿಸಿದ. ಹುಮಾಯುನ್ ಮಗ ಅಕ್ಬರ್ ಹಿಂದೂ-ಮುಸ್ಲಿಂ ಏಕತೆಗೆ ದೀನ್ ಏ ಇಲಾಹಿ ಅನ್ನುವ ಹೊಸ ಧರ್ಮವನ್ನೇ ಶುರು ಮಾಡಿದ. ಹಿಂದೂ ರಾಜ ಹೇಮುವಿನೊಂದಿಗೆ ಎರಡನೇ ಪಾಣಿಪತ್ ಯುದ್ಧವನ್ನೂ ಮಾಡಿದ. ಅಕ್ಬರನ ಮಗ ಜಹಾಂಗೀರ್ ಈಸ್ಟ್ ಇಂಡಿಯಾ ಕಂಪನಿಗೆ ಇಲ್ಲಿ ವ್ಯಾಪಾರ ಮಾಡಲು ಅನುಮತಿ ಕೊಟ್ಟರೆ ಈತನ ಮಗ ಶಾ ಆಲಂ ಅಧಿಕಾರಕ್ಕೆ ಬರುವ ಹೊತ್ತಿಗೆ ಮೊಘಲ್ ಸಾಮ್ರಾಜ್ಯ ಅವನತಿಯತ್ತ ತಿರುಗಿ ಇಲ್ಲಿ ಮರಾಠರು ಆಫ್ಗನ್ ದೊರೆ ಅಹ್ಮದ್ ಷಾ ಅಬ್ದಾಲಿ ಜೊತೆ ಮೂರನೇ ಪಾಣಿಪತ್ ಯುದ್ಧ ಮಾಡಿ ಸೋತಿದ್ದರು. ಷಾ ಆಲಮನ ಸಾಮ್ರಾಜ್ಯ ನೋಡಿ ದೆಹಲಿಯಿಂದ ಪಾಲಂ ವರೆಗೆ ಅಂತ ತಮಾಷೆ ಮಾಡುವ ಸ್ಥಿತಿ ಹದಿನೆಂಟನೇ ಶತಮಾನದಲ್ಲಿತ್ತು. ಇದೇ ಷಾ ಆಲಂ ಎಂತ ಮೂರ್ಖ ಅಂದರೆ ತನ್ನ ಅಧಿಕಾರಿ ವರ್ಗಕ್ಕೆ ಸಂಬಳ ಕೊಟ್ಟು ತೆರಿಗೆ ಸಂಗ್ರಹಿಸುವುದು ದುಬಾರಿ ಅಂತನೋ ತನ್ನನ್ನು ಮೊಘಲ್ ದೊರೆ ಅಂತ ಗುರುತಿಸಿದ್ದಾಕೆ ಕ್ರತಜ್ಞತೆಗೋ 1765ರಲ್ಲಿ ಅಲಾಹಾಬಾದ್ ಒಪ್ಪಂದ ಮಾಡಿಕೊಳ್ಳುತ್ತಾನೆ. ಇದರ ಪ್ರಕಾರ ಮೊಘಲ್ ಸಾಮ್ರಾಜ್ಯದ ಎಲ್ಲಾ ತೆರಿಗೆಯನ್ನು ಈಸ್ಟ್ ಇಂಡಿಯಾ ಕಂಪನಿಯೇ ಸಂಗ್ರಹಿಸಿ ಸುಲ್ತಾನರಿಗೆ ಕೊಡುವುದು ಅಂತ. ಇಲ್ಲಿಂದಲೇ ಈಸ್ಟ್ ಇಂಡಿಯಾ ಕಂಪನಿಯ ಬೆಳವಣಿಗೆಯ ವೇಗ ಹೆಚ್ಚುವುದು. ಆಗಲೇ ಸೋತ ಮರಾಠಾ ಬ್ರಾಹ್ಮಣ ರಾಜರ ಒಳಜಗಳವನ್ನು ಉಪಯೋಗಿಸಿಕೊಂಡು ಈಸ್ಟ್ ಇಂಡಿಯಾ ಕಂಪನಿ ಅವರನ್ನು ತಮ್ಮ ಸಾಮಂತರನ್ನಾಗಿಸಿಕೊಂಡು ಅಗಾಧ ಪ್ರಮಾಣದಲ್ಲಿ ಬೆಳೆಯುತ್ತದೆ.

ಮೊಘಲ್ ದೊರೆ ಜಹಾಂಗೀರ್ ಮತ್ತವನ ಮಗ ಷಾ ಆಲಂ ಜೊತೆಗಿನ ಒಪ್ಪಂದಗಳೇ ಈಸ್ಟ್ ಇಂಡಿಯಾ ಕಂಪನಿಯ ತಳಹದಿ ಆದ್ದರಿಂದ ಭಾರತದ ಬಹುತೇಕ ಪ್ರದೇಶದಲ್ಲಿ ನೇರ ಅಥವಾ ಪರೋಕ್ಷ ಆಡಳಿತ ನಡೆಸಲು ಕಂಪನಿ ಮುಸ್ಲಿಂ ಪರ ಒಲವನ್ನು ಹೊಂದಿರುತ್ತದೆ - ಕಾನೂನು ವ್ಯವಸ್ಥೆಯ ವಿಚಾರದಲ್ಲಿ. ಹಾಗಂತ ಹಿಂದೂಗಳ ಮೇಲೆ ಹೆಚ್ಚುವರಿ ಒತ್ತಡ ಒತ್ತಾಯ ಏನೂ ಇರುವುದಿಲ್ಲ. ಹಿಂದುಗಳಿಗೆ ಹಿಂದೂ ಕಾನೂನು, ಮುಸ್ಲಿಮರಿಗೆ ಮುಸ್ಲಿಂ ಕಾನೂನು ಅನ್ವಯಿಸುತ್ತಾ ಆಡಳಿತ ಮಾಡುತ್ತದೆ. ಆದರೆ ಕ್ರಿಮಿನಲ್ ಲಾ ಮಾತ್ರ ಎಲ್ಲರಿಗೂ ಒಂದೇ, ಐಪಿಸಿ.

ಆದರೆ ಈಸ್ಟ್ ಇಂಡಿಯಾ ಕಂಪನಿಯ ಹೆಚ್ಚು ಕಡಿಮೆ ಎರಡು ನೂರು ವರ್ಷಗಳ ಆಳ್ವಿಕೆಗೆ ದೊಡ್ಡ ಪೆಟ್ಟು ಕೊಟ್ಟಿದ್ದೇ 1857ರ ಸಿಪಾಯಿ ದಂಗೆ. ಇದು ಸಾಧ್ಯವಾಗಿದ್ದೇ ಹಿಂದೂ-ಮುಸ್ಲಿಂ ಒಟ್ಟಾಗಿ ಹೋರಾಡಿದ್ದರಿಂದ. ಹಿಂದೂಗಳ ಗೋ ಭಕ್ತಿ, ಮುಸ್ಲಿಮರ ಹಂದಿ ದ್ವೇಷ ಇಬ್ಬರನ್ನೂ ಒಗ್ಗೂಡಿಸಿತ್ತು. ಈಸ್ಟ್ ಇಂಡಿಯಾ ಕಂಪನಿ ಈ ದಂಗೆಯಿಂದ ಎಷ್ಟು ಗಾಭರಿ ಆಯಿತೆಂದರೆ, ಕಂಪನಿ ನೇರವಾಗಿ ಬ್ರಿಟಿಷ್ ಸರಕಾರಕ್ಕೆ ತನ್ನ ಆಡಳಿತ ಪ್ರದೇಶವೆನ್ನೆಲ್ಲ ಬಿಟ್ಟುಕೊಟ್ಟು, ಇನ್ನು ಸರಕಾರ ಉಂಟು, ಭಾರತ ಉಂಟು ಅಂತ ನುಣುಚಿಕೊಂಡಿತು. ಆಗ ಭಾರತ ಬ್ರಿಟಿಷ್ ಸರಕಾರ, ತನ್ನ ಸಂಸತ್ತಿನ ಕಾನೂನು ಪ್ರಕಾರವೇ ಆಡಳಿತ ನಡೆಸಬಹುದಾದ ವಸಾಹತು ಆಯಿತು. ಆಗ ಬ್ರಿಟಿಷ್ ಸರಕಾರಕ್ಕೆ ಕಂಡಿದ್ದೇ ಹಿಂದೂ ಮುಸ್ಲಿಂ ಏಕತೆ. ಮತ್ತು ಇವರ ಮಧ್ಯದ ಐತಿಹಾಸಿಕ ಜಗಳಗಳು. ಅವರು ಮೊಟ್ಟ ಮೊದಲು ಮಾಡಿದ್ದು ಬಂಗಾಳ ಪ್ರಾಂತ್ಯದ ವಿಭಜನೆ - ಹಿಂದೂ ಬಾಹುಳ್ಯದ ಪಶ್ಚಿಮ ಮತ್ತು ಮುಸ್ಲಿಂ ಬಾಹುಳ್ಯದ ಪೂರ್ವ ಬಂಗಾಳ ಅಂತ. ಇದನ್ನು ಎರಡೂ ಕೋಮುಗಳು ವಿರೋಧಿಸಿದ್ದಕ್ಕೆ ಕೆಲವೇ ವರ್ಷಗಳಲ್ಲಿ ಮರು ಏಕೀಕರಣವೂ ನಡೆಯುತ್ತದೆ. ಅಷ್ಟೊತ್ತಿಗೆ ಮುಂಬಯಿಯಲ್ಲಿ ಅಂದಿನ ಮೇಲ್ವರ್ಗದ ಶ್ರೀಮಂತರ ಪಕ್ಷ ಅಂತ ಟೀಕೆಗೆ ಒಳಗಾಗುತ್ತಲೇ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸು ಹುಟ್ಟುತ್ತದೆ.

ಕಾಂಗ್ರೆಸ್ಸು ಇಲ್ಲಿ ಸಂಸದೀಯ ವ್ಯವಸ್ಥೆ ಬೇಕು ಅಂತ ಒತ್ತಡ ಹೇರಲು ಬ್ರಿಟಿಷ್ ಸರಕಾರ ಮಾರ್ಲೆ ಮಿಂಟೋ ಸುಧಾರಣಾ ಕಾಯಿದೆ ತಂದು ಭಾರತದ ವೈಸ್ ರಾಯ್ ಕೆಳಗೆ ಕೇಂದ್ರ ಶಾಸನ ಸಭೆ, ಪ್ರಾಂತೀಯ ಶಾಶನ ಸಭೆಗೆ ಗವರ್ನರ್ ಇತ್ಯಾದಿ ವ್ಯವಸ್ಥೆ ತಂದು ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗೆ ಸದಸ್ಯರು ಚುನಾಯಿತರಾಗಿರಬೇಕು ಅಂತ ಕಾನೂನು ಬರುತ್ತದೆ. ಈ ಮಾರ್ಲೆ ಮಿಂಟೋ ಸುಧಾರಣೆ ಮುಂದೆ 1909ರ ಗವರ್ನಮೆಂಟ್ ಆ ಇಂಡಿಯಾ ಆಕ್ಟ್. ಈ ಕಾನೂನಿನ ಪ್ರಕಾರ ಮುಸ್ಲಿಮರಿಗೆ ಹೆಚ್ಚುವರಿ ಸದಸ್ಯತ್ವವನ್ನು ಎಲ್ಲಾ ಶಾಸನ ಸಭೆಗಳಲ್ಲಿ ಏರ್ಪಡಿಸಲಾಗುತ್ತದೆ -ಕಾರಣ ಆಗ ತಾನೇ ಹುಟ್ಟಿದ ಮುಸ್ಲಿಂ ಲೀಗ್ ಮತ್ತು ಲಾರ್ಡ್ ಮಿಂಟೋ ಜೊತೆಗಿನ ಒಪ್ಪಂದ. ಉದ್ದೇಶ ಬಹುಸಂಖ್ಯಾತ ಹಿಂದೂ ಪರ ಆಡಳಿತ ತಡೆಯುವುದು.

ಮುಂದೆ ಕೆಲ ವರ್ಷಗಳಲ್ಲಿ ಭಾರತಕ್ಕೆ ಮರಳಿದ ಬಾಪುವಿಗೆ ಇದೆಲ್ಲ ಕಂಡು ಇಲ್ಲಿ ಕೋಮು ಸೌಹಾರ್ದ ಇಲ್ಲದೇ ಬ್ರಿಟಿಷರನ್ನು ಎದುರಿಸಲು ಸಾಧ್ಯವೇ ಇಲ್ಲ ಅಂತ ಅನಿಸಿದ್ದು ಸಹಜ.

ತನ್ನ ಡಿವೈಡ್ ಆಂಡ್ ರೂಲ್ ಪಾಲಿಸಿಯಂತೆ ಬ್ರಿಟಿಷ್ ಸರಕಾರ 1923ರಲ್ಲಿ ಮುಸಲ್ಮಾನ್ ವಕ್ಫ್ ಆಕ್ಟ್ ಜಾರಿ ಮಾಡುತ್ತದೆ. ಷರಿಯಾ ಪ್ರಕಾರ ವಕ್ಫ್ ಅಂದರೆ ಮಾನಸಿಕ ಸ್ಥಿಮಿತ ಹೊಂದಿದ, ಹದಿನೆಂಟು ವರ್ಷ ಮೀರಿದ ಮುಸ್ಲಿಂ ಒಬ್ಬ ತಾನು ಪ್ರಶ್ನಾತೀತ ಮಾಲೀಕತ್ವ ಹೊಂದಿದ ಆಸ್ತಿಯನ್ನು ಸಮಾಜ ಸೇವೆಗಾಗಿ ಮುಡಿಪಾಗಿಡುವುದು. ಈ ಮುಡಿಪಿಗೆ ವಕ್ಫ್ ಅಂದರೆ, ಈ ದಾನಿಗೆ ವಾಕೀಫ್ ಅಂತಾರೆ ಮತ್ತು ಈ ದಾನ ಶಾಶ್ವತ. ಅಂದರೆ ದಾನಿಯ ವಾರಸುದಾರರೇ ಆಗಲಿ ಮತ್ಯಾರೇ ಆಗಿರಲಿ ಇದನ್ನು ರದ್ದುಗೊಳಿಸಲು ಆಗುವುದಿಲ್ಲ.

ಮುಂದೆ 1937ರಲ್ಲಿ ಮುಸ್ಲಿಂ ಪರ್ಸನಲ್ ಲಾ (ಷರಿಯತ್ ) ಅಪ್ಲಿಕೇಶನ್ ಆಕ್ಟ್ ಅನ್ನು ಬ್ರಿಟಿಷ್ ಸರಕಾರ ಜಾರಿಗೊಳಿಸುತ್ತದೆ. ಅಷ್ಟೊತ್ತಿಗೆ ಮುಸ್ಲಿಂ ಲೀಗ್ ಒಂದು ಕಡೆ, ಇನ್ನೊಂದು ಕಡೆಗೆ ಹಿಂದೂ ಮಹಾಸಭಾ ಮತ್ತು ಆರ್ ಎಸ್ ಎಸ್ ಕೋಮು ದ್ವೇಷ ಬೆಳೆಸುತ್ತಾ ಬ್ರಿಟಿಷರ ಡಿವೈಡ್ ಆಂಡ್ ರೂಲ್ ಪಾಲಿಸಿಗೆ ಪೂರಕವಾಗಿದ್ದರೆ, ಬ್ರಿಟಿಷರ ವಿರುದ್ಧ ನಿಲ್ಲಲು ಗಾಂಧೀಜಿಗೆ ಹಿಂದೂ ಮುಸ್ಲಿಂ ಏಕತೆ ಮಾತ್ರ ಒಳ್ಳೆಯ ಉಪಾಯವಾಗಿ ಕಂಡಿತ್ತು. ಇತ್ತ ಜಿನ್ನಾ ಅತ್ತ ಹೆಡಗೇವಾರ್ ಮತ್ತಿತರು. ಇದೆಲ್ಲ ಸೇರಿ ಭಾರತ ಪಾಕಿಸ್ತಾನ ವಿಭಜನೆ ಆದಾಗ ಅಲ್ಲಿ ಜಿನ್ನಾ ಇಲ್ಲಿ ನೆಹರು ಸರಕಾರದ ಸಂಭ್ರಮದಲ್ಲಿದ್ದರೆ ಬಾಪು ಮೌನಕ್ಕೆ ಜಾರಿದ್ದರು.

ವಿಭಜನೆಯ ನಂತರ ನಡೆದ ನರಮೇಧ ನೋಡಿಯೂ ಕೂಡ ಅನೇಕ ಮುಸ್ಲಿಮರು ಭಾರತದಲ್ಲೇ ಉಳಿದರು. ಪಾಕಿಸ್ತಾನಕ್ಕೆ ಹೋದವರಿಗಿಂತ ಭಾರತದಲ್ಲೇ ಉಳಿದವರು ಹೆಚ್ಚು. ಧಾರ್ಮಿಕ ಮತ್ತು ವಯಕ್ತಿಕ ಮಟ್ಟದಲ್ಲಿ ಇವರಲ್ಲಿ ಸುರಕ್ಷತಾ ಭಾವನೆ ಮೂಡಿಸಲು ಅಷ್ಟೇ ಅಲ್ಲ ಭಾರತದಲ್ಲಿ ಎಲ್ಲ ಧರ್ಮಗಳೂ ಸುರಕ್ಷಿತ ಪಾಕಿಸ್ತಾನದ ತರ ನಾವು ಅಲ್ಲ ಅಂತ ನಿರೂಪಿಸುವುದು ನೆಹರೂವಿಗೆ ಅನಿವಾರ್ಯವಾಗಿತ್ತೇನೋ .. ಆದ್ದರಿಂದಲೇ ಬ್ರಿಟಿಷರು ಮಾಡಿದ್ದ ಷರಿಯತ್ ಕಾನೂನನ್ನು ಉಳಿಸಿಕೊಂಡ ನೆಹರು ಹೊಸ ವಕ್ಫ್ ಆಕ್ಟ್ ಅನ್ನು 1954ರಲ್ಲಿ ತರುತ್ತಾರೆ. ಹೊಸ ವಕ್ಫ್ ಕಾಯಿದೆಯಲ್ಲಿ ಯಾವುದಾದರೂ ಆಸ್ತಿ ಹಿಂದೆ -ಅಂದರೆ ಶತಮಾನಗಳೇ ಕಳೆದಿರಲಿ -ಯಾರಾದರೂ ಮಾಡಿದ ವಕ್ಫ್ ಅಂತ ವಕ್ಫ್ ಮಂಡಳಿಗೆ ಅನಿಸಿದರೆ ಅದನ್ನು ತನ್ನ ಅಸ್ತಿ ಅಂತ ಘೋಷಿಸಿಕೊಳ್ಳುವ ಅಧಿಕಾರ ಇರುತ್ತದೆ.

2013ರ ಮನ್ ಮೋಹನ್ ಸಿಂಗ್ ಸರಕಾರ ಮುಸ್ಲಿಮರೇತರು ವಕ್ಫ್ ಮಂಡಳಿಯ ಸದಸ್ಯರಾಗಿರಕೂಡದು ಅಂತ ಇನ್ನೊಂದು ತಿದ್ದುಪಡಿ ತರುತ್ತಾರೆ.

ಈಗ ನೋಡಿದರೆ ಭಾರತೀಯ ರೇಲ್ವೆ ಇಲಾಖೆ ನಂತರ ವಕ್ಫ್ ಇಡೀ ದೇಶದಲ್ಲಿ ಅತಿ ಹೆಚ್ಚು ಭೂ ಮಾಲೀಕತ್ವ ಹೊಂದಿದೆ. ವಕ್ಫ್ ಮಂಡಳಿ ಯಾವುದೋ ಓಬೀರಾಯನ ಕತೆ ಹೇಳಿ ಸರಕಾರೀ ಕಚೇರಿ, ವಿಧಾನ ಸೌಧ, ರೈತರ ಜಮೀನು ಕಂಡ ಕಂಡದ್ದೆಲ್ಲ ತನ್ನದೇ ಅಂತ ಕಬಳಿಸುತ್ತಾ ಹೊರಟಿದೆ.

ಜಮೀರನಂತ ಮೂರ್ಖನನ್ನು ವಕ್ಫ್ ಮಂತ್ರಿ ಮಾಡಿದ ಜಾಣ `ಸಮಾಜವಾದಿ'ಗೆ ಹಿಂದೂ ಮುಸ್ಲಿಂ ವಿಭಜನೆ, ಲಿಂಗಾಯತ ವಿಭಜನೆ ಎಲ್ಲಾ ಆಗಿ ಅಹಿಂದ ಮಾತ್ರ ಒಗ್ಗಟ್ಟಾಗಿದ್ದು ತಾನೇ ಕರ್ನಾಟಕದ ಅನಭಿಷಿಕ್ತ ದೊರೆ ಆಗಬೇಕು ಅನ್ನುವ ಹುಚ್ಚು ಕನಸು.

ಗಾಂಧೀಜಿ ಮತ್ತು ನೆಹರು ಮುಸ್ಲಿಂರ ವಿಶೇಷ ಸವಲತ್ತುಗಳನ್ನು ಸಹಿಸಿಕೊಳ್ಳಿ ಅಂತ ಆಗ ಹೇಳಿದ್ದಕ್ಕೆ ಒಂದು ಸಂದರ್ಭ ಇತ್ತು. ಈಗ ಆ ಸಂದರ್ಭ ಇಲ್ಲ. ಈಗ ಈ ವಕ್ಫ್ ಮತ್ತು ಶರಿಯಾಗಳನ್ನು ರದ್ದು ಗೊಳಿಸಿ ಎಲ್ಲರಿಗು ಸಮನಾದ ಕಾನೂನು ತರುವ ಸಂದರ್ಭ. ವಕ್ಫ್ ಮತ್ತು ಷರಿಯಾ ಬಗೆಗಿನ ಮೃದು ಧೋರಣೆ ಗಾಂಧೀಜಿ ಮತ್ತು ನೆಹರುಗಳು ಬ್ರಿಟಿಷ್ ಕಸವನ್ನು ಕತ್ತರಿಸಲು ಉಪಯೋಗಿಸಿದ ಹತಾರಗಳು. ಅವುಗಳನ್ನು ಉಪಯೋಗಿಸಿ ತನ್ನ ಕೈ ಕಾಲು ಕತ್ತರಿಸಿಕೊಳ್ಳುವ ಅಗತ್ಯ ಕಾಂಗ್ರೆಸ್ಸಿಗೆ 2024ರಲ್ಲಿ ಇದೆಯೇ ?

08/10/2024

ಲಿಂಗಾಯತ-ಒಕ್ಕಲಿಗ ಸಮುದಾಯಗಳ ಹಣಿದು ತನ್ನ ರಾಜಕೀಯ ದುರಾಸೆ ಈಡೇರಿಸಿಕೊಳ್ಳಲು ಮಾಡಿಸಿದ ಸಮೀಕ್ಷೆಯೇ ಜಾತಿ ಗಣತಿ ಎಂದು ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ.

05/10/2024

Looks like BJP is losing Haryana and J&K both.

ಇಸ್ರೇಲ್ - ಇರಾನ್ ಯುದ್ಧ ಛಾಯೆ ಬಾಪುವಿನ ನಾಡಿನಿಂದ ಕಂಡಂತೆ  ಡಾ ಬಸವರಾಜ್ ಇಟ್ನಾಳ  ಬಾಪು ಇಡೀ ಜಗತ್ತಿಗೆ ಮತ್ತೆ ಮತ್ತೆ ಪ್ರಸ್ತುತ ಆಗುವುದು ಹೀ...
02/10/2024

ಇಸ್ರೇಲ್ - ಇರಾನ್ ಯುದ್ಧ ಛಾಯೆ ಬಾಪುವಿನ ನಾಡಿನಿಂದ ಕಂಡಂತೆ

ಡಾ ಬಸವರಾಜ್ ಇಟ್ನಾಳ

ಬಾಪು ಇಡೀ ಜಗತ್ತಿಗೆ ಮತ್ತೆ ಮತ್ತೆ ಪ್ರಸ್ತುತ ಆಗುವುದು ಹೀಗೆಯೇ. ಬಾಪುವಿನ ಶಾಂತಿ ಸಂದೇಶವನ್ನು ಎಲ್ಲರೂ ಅಷ್ಟೇ ಏಕೆ ಗೋಡ್ಸೆ ಭಕ್ತರೂ ಅವಾಗಾವಾಗ ಕೊಂಡಾಡುವುದುಂಟು. ಆದರೆ ಬಾಪುವಿನ ಶಾಂತಿ ಸೂತ್ರ ಮತ್ತು ವಿಧಾನಗಳು ಅನೇಕರಿಗೆ ಅರ್ಥವೇ ಆಗಿಲ್ಲ. ಹೀಗಾಗಿ ವರ್ಷಕ್ಕೊಮ್ಮೆ ಗುಣಗಾನ ಮಾಡಿ ಮರುಕ್ಷಣ ಎಂದಿನಂತೆ ಯುದ್ಧದಾಹಿ ಹುಚ್ಚಾಟಕ್ಕೆ ಮರಳುವುದು ವಾಡಿಕೆ ಆಗಿಬಿಟ್ಟಿದೆ.

ಎರಡು ವರ್ಷಗಳಿಂದ ಉಕ್ರೇನ್ ಮತ್ತು ರಷಿಯಾ ನಡುವೆ ಯುದ್ಧ ನಡೆಯುತ್ತಿರುವಾಗಲೇ ಹಮಾಸ್- ಇಸ್ರೇಲ್ ಸಂಘರ್ಷ ಅಂತ ಶುರುವಾಗಿ ಒಂದು ವರ್ಷದ ನಂತರ ಇಂದು ಗಾಂಧೀ ಜಯಂತಿಯ ದಿನ ಇಸ್ರೇಲ್-ಇರಾನ್ ಯುದ್ಧವಾಗಿ ಪರಿಣಮಿಸಿದೆ. ಇಸ್ರೇಲ್ ತನ್ನ ದೇಶದ ಪ್ರಮುಖ ವ್ಯಕ್ತಿಗಳ ಹತ್ಯೆ ಮತ್ತು ವಿಶ್ವ ಸಂಸ್ಥೆ ಖಂಡಿಸಿದ ಪೇಜರ್ ಬಾಂಬ್ ದಾಳಿಗೆ ಪ್ರತೀಕಾರವಾಗಿ ಕಳೆದ ರಾತ್ರಿ ಸುಮಾರು ನಾಲಕ್ಕು ನೂರು ಕ್ಷಿಪಣಿ ದಾಳಿ ಮಾಡಿ ಇಸ್ರೇಲಿನ ಮೇಲೆ ಯುದ್ಧ ಸಾರಿದೆ. ಎಂದಿನಂತೆ ಅಮೇರಿಕ ಇಸ್ರೇಲಿಗಳ ಬೆನ್ನಿಗೆ ನಿಂತರೆ, ಇರಾಕ್ ಅಮೆರಿಕಕ್ಕೆ ಈ ಯುದ್ಧದಲ್ಲಿ ಭಾಗವಹಿಸಕೂಡದು ಅಂತ ಎಚ್ಚರಿಕೆ ನೀಡಿದೆ. ಅಷ್ಟರಲ್ಲಿಯೇ ಅಮೇರಿಕ ತನ್ನ ಸೈನ್ಯವನ್ನು ಮಧ್ಯ ಪ್ರಾಚ್ಯದಲ್ಲಿ ಹೆಚ್ಚುವರಿ ನಿಯೋಜನೆ ಮಾಡಲು ತೀರ್ಮಾನಿಸಿದೆ.

ಇಲ್ಲಿ ನೋಡಿದರೆ ಹಿಟ್ಲರನ ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮವನ್ನು ಸಮರ್ಥಿಸಿಕೊಂಡ ಜನ, ಬಾಪುವಿನ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಜನ ಇಂದು ಯಹೂದಿಗಳ ಅಗ್ರಹಾರವಾದ ಇಸ್ರೇಲಿನ ಮೇಲೆ ದಾಳಿ ಮಾಡುವವರು ಉಗ್ರರೂ ಇರಾನ್, ಲೆಬನಾನ್ ಮೇಲೆ ದಾಳಿ ಮಾಡುವ ಯಹೂದಿಗಳು ದೇಶ ಭಕ್ತರೂ ಅಂತ ಬಡಬಡಿಸಿಕೊಂಡು ಇಸ್ರೇಲ್ ಪರ ನಿಲ್ಲುವುದು ಹಿಂದುತ್ವವಾದ ಆದ್ದರಿಂದ ದೇಶಭಕ್ತಿ ಅಂತ ಸಮೀಕರಿಸಿಕೊಂಡು ಇಲ್ಲಿ ಬೇರೆಯೇ ತರದ `ಅವರು' ಮತ್ತು `ನಾವು' ಎಂಬ ಬೈನರಿ ಸೃಷ್ಟಿಸಿ ತಮ್ಮ ವಿಷ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಈ ಮೂರ್ಖ ಮತ್ತು ವಿಷಕಾರಿ ಯುಗಳ ಬೈಗುಳ ಸ್ಪರ್ಧೆಯಲ್ಲಿ ನಿಜಕ್ಕೂ ಆಗಿದ್ದು ಏನು ಆಗುತ್ತಿರುವುದು ಏನು ಮುಂದೇನು ಆಗಬಹುದು ಎಂಬ ಬಗ್ಗೆ ಯಾವನೂ ಚರ್ಚೆ ಮಾಡುತ್ತಿಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ದರ್ದೂ ಯಾರಿಗೂ ಇದ್ದಂಗಿಲ್ಲ. ಗಡ್ಡಕ್ಕೆ ಬೆಂಕಿ ಹತ್ತಲಿ ನೋಡೋಣ, ಆವಾಗಲೇ ಬಾವಿ ತೋಡಿದರಾಯಿತು ಅನ್ನುವ ಜನ ಅಲ್ಲವೇ ನಾವು ?

ಸಾಮ್ರಾಜ್ಯ ಶಾಹಿ ಮುಗಿದು nation state ಎಂಬ ಕಲ್ಪನೆ ಬಂದ ಮೇಲೆ ನಡೆದ ಯುದ್ಧಗಳೆಲ್ಲವನ್ನೂ ಗಮನಿಸಿದರೆ ಒಂದೇ ಒಂದು ಅಂಶ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಅದೇನೆಂದರೆ ಜಾಗತಿಕ, ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ, ಆಯಾ ಯುದ್ಧಗಳ ಮುನ್ನಾದಿನಗಳ ಆರ್ಥಿಕ ಕುಸಿತ. ಮೊದಲ ವಿಶ್ವಯುದ್ಧವಂತೂ ಯುದ್ಧಪೂರ್ವ ಆರ್ಥಿಕ ಸಂಕಷ್ಟಗಳನ್ನು ಇನ್ನೂ ಉಲ್ಬಣಗೊಳಿಸಿ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯೇ ನಷ್ಟವಾಗಿ ಹೋಗುವ ಅಪಾಯಕ್ಕೆ ತಂದಿಕ್ಕಿತು. ಆ ಎಲ್ಲ ನಷ್ಟಗಳನ್ನು ಜರ್ಮನಿಯ ಮೇಲೆ ಹೇರಿ, ಜರ್ಮನಿಯ ಸೈನಿಕ ಬಲ ಮತ್ತು ಪ್ರಾದೇಶಿಕ ಬಲವನ್ನು ಮಿತಿಗೊಳಿಸುವುದಲ್ಲದೇ ಆರ್ಥಿಕ ದಂಡವನ್ನು ವಾರ್ಸೆಲ್ಸ ಒಪ್ಪಂದ ಹೇರಿದ್ದಕ್ಕೇ ಹಿಟ್ಲರ್ ಅದನ್ನು ಹೇರಿದವರ ಮೇಲೆ, ಅದನ್ನು ಒಪ್ಪಿಕೊಂಡ ತನ್ನ ದೇಶದದ ನಾಯಕರ ಮತ್ತವರ ಚಿಂತನೆ ಎಲ್ಲರನ್ನೂ ಮುಗಿಸಲು ಹೊರಟ. ಈ ಅಧ್ವಾನಕ್ಕೆ ಯಹೂದಿಗಳ ಒಳಸಂಚು ಕಾರಣ ಎಂದು ನಂಬಿದ್ದ ಹಿಟ್ಲರ್ ಯಹೂದಿಗಳಿಗೆ ನರಕ ಏನು ಎಂಬುದನ್ನು ತೋರಿಸಿದ. ಇದೇ ಎರಡನೇ ವಿಶ್ವಯುದ್ಧ. ಮೊದಲನೇ ವಿಶ್ವ ಯುದ್ಧ ನಡೆದ ಕೇವಲ ಎರಡೇ ದಶಕಗಳಲ್ಲಿ ಶುರುವಾದ ಎರಡನೇ ವಿಶ್ವಯುದ್ಧಕ್ಕೆ ಖರ್ಚು ಮಾಡಲು ಯುರೋಪಿಯನ್ ದೇಶಗಳ ಬಳಿ ಹಣ ಇರಲಿಲ್ಲ. ಮೊದಲ ವಿಶ್ವ ಯುದ್ಧವೇ ಅವರನ್ನು ದಿವಾಳಿ ಸ್ಥಿತಿಗೆ ತಂದಿಟ್ಟಿತ್ತು. ಮೊದಲ ವಿಶ್ವ ಯುದ್ಧದ ನಂತರ ಯುದ್ಧೋಪಕರಣಗಳ ಉದ್ಯಮಕ್ಕೆ ಹೆಚ್ಚಿನ ಒತ್ತು ಕೊಟ್ಟು ಬೆಳೆಸುತ್ತಿದ್ದ ಅಮೇರಿಕ ತಾನು ಯುವುದೇ ಯುದ್ಧದಲ್ಲಿ ಪಾಲುಗೊಳ್ಳುವುದಿಲ್ಲ ಅಂತ ಸಂಸದೀಯ ತೀರ್ಮಾನ ಕೂಡ ಮಾಡಿತ್ತು.

ಇಲ್ಲಿ ನೋಡಿದರೆ ಭೂಮಿಯ ತೊಂಬತ್ತು ಪರ್ಸೆಂಟ್ ದೇಶಗಳನ್ನು ಆಳುವ ಬ್ರಿಟಿಷ್ ಸರಕಾರ ಹಿಟ್ಲರ್ ವಾರ್ ಮಷೀನಿನೊಂದಿಗೆ ಸೆಣಸಿ ಆರ್ಥಿಕವಾಗಿ ಕುಸಿದು ಹೋಗಿತ್ತು. ಆಗಲೇ ಅಮೇರಿಕ ತಾನು ನೇರವಾಗಿ ಯುದ್ಧಕ್ಕೆ ಬರಲಾರೆ ಬೇಕಾದರೆ ಶಸ್ತ್ರಾಸ್ತಗಳನ್ನು ಕಂತಿನ ಮೇಲೆ ದುಡ್ಡು ಕೊಡುವ ಕರಾರಿನ ಮೇಲೆ ನಿಮಗೆ ಕೊಡಬಲ್ಲೆ ಅಂತ ಬ್ರಿಟಿಷರೊಡನೆ lend lease ಒಪ್ಪಂದ ಮಾಡಿಕೊಳ್ಳುತ್ತದೆ. ಆ ಮೂಲಕ ತನ್ನ ವ್ಯಾಪಾರವನ್ನು ಅಗಾಧ ಪ್ರಮಾಣದಲ್ಲಿ ಬೆಳೆಸಿಕೊಂಡು ಸಧೃಡಗೊಳ್ಳುತ್ತದೆ.

ಎರಡನೇ ವಿಶ್ವ ಯುದ್ಧದ ನಂತರ ಬ್ರೆಟನ್ ವುಡ್ಸ್ ಎಂಬ ಹೋಟೆಲಿನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಇನ್ನು ಮೇಲೆ ಡಾಲರ್ ಕರೆನ್ಸಿಗೂ ಚಿನ್ನದ ರೀಸರ್ವಗೂ ಯಾವುದೇ ಸಂಬಂಧ ಇರುವುದಿಲ್ಲ ಆದರೆ ಜಗತ್ತಿನ ಬೇರೆ ಕರೆನ್ಸಿಗಳು gold reserve ಗೆ ಲಿಂಕ್ ಆಗಿರಬೇಕು ಅಂತ ಒಂದು ಠರಾವು ಪಾಸು ಮಾಡಿಸುತ್ತದೆ. ಹಾಗೆಯೇ ತೈಲ ಉತ್ಪಾದನಾ ದೇಶಗಳ ಮೇಲೆ ಇನ್ನೊಂದು ಕರಾರು ಹೇರುತ್ತದೆ. ಅದೇನೆಂದರೆ ಜಗತ್ತಿನ ಯಾವುದೇ ದೇಶ ನಿಮ್ಮ ತೈಲ ಖರೀದಿಗೆ ಬಂದರೆ ನೀವು ಅವರವರ ದೇಶದ ಕರೆನ್ಸಿಯನ್ನು ಸ್ವೀಕರಿಸಕೂಡದು. ನೀವು ಅವರಿಂದಲೂ ಕೂಡ ಡಾಲರ್ ಅನ್ನೇ ತಗೆದುಕೊಳ್ಳಬೇಕು ಅಂತ. ಅಲ್ಲಿಗೆ ಯಾವುದೇ ದೇಶಕ್ಕೆ ತೈಲ ಬೇಕಾದರೆ ಮೊದಲು ಅದು ಅಮೇರಿಕ ಮುಂದೆ ಡಾಲರ್ ಕೊಡಿ ಸ್ವಾಮೀ ಅಂತ ಬೇಡಬೇಕು. ಎಷ್ಟಾದರೂ ನನ್ನ gold reserve ಗೆ ಲಿಂಕ್ ಆದ ಕರೆನ್ಸಿ ತಗೊಳ್ಳಿ, ಬದಲಾಗಿ ನಿಮ್ಮ gold reserve ಗೆ ಲಿಂಕ್ ಆಗದ ಡಾಲರ್ ಕೊಡಿ ಸ್ವಾಮೀ ಅಂತ ಕೇಳಿಕೊಳ್ಳಬೇಕು.

ಹೀಗೆ ಇಡೀ ಜಗತ್ತನ್ನೇ ತನ್ನ ಆರ್ಥಿಕ ವಸಾಹತು ಮಾಡಿಕೊಂಡ ಅಮೇರಿಕ, ಐಎಂಎಫ್ ವಿಶ್ವಬ್ಯಾಂಕ್ ಅಷ್ಟೇ ಏಕೆ ಎಲ್ಲಾ ದೇಶಗಳ ರಿಸರ್ವ್ ಬ್ಯಾಂಕುಗಳ ತೀರ್ಮಾನಗಳನ್ನೂ ತನ್ನ ಪ್ರಭಾವದ ಅಡಿಯಲ್ಲಿ ತಂದು ಕೊಂಡಿತು. ಆದರೆ ಇದಕ್ಕೆ ಠಕ್ಕರ್ ಕೊಡುವ ಛಾತಿ ಇದ್ದಿದ್ದು ಸೋವಿಯತ್ ಸಂಘಕ್ಕೆ ಮಾತ್ರ. ಯಾಕೆಂದರೆ ಎಷ್ಟೇ ಖರ್ಚು ಮಾಡಿದರೂ ಎಷ್ಟೇ ಯುದ್ಧ ಮಾಡಿದರೂ ಗೆಲ್ಲಲಾಗದೆ ಪೆಕರುಗಳಾಗಿದ್ದ ಅಮೇರಿಕ ಮತ್ತವರ ಯುರೋಪಿಯನ್ ಸಂಗಡಿಗರಿಗೆ ಎರಡನೇ ವಿಶ್ವಯುದ್ಧವನ್ನು ಗೆದ್ದು ಕೊಟ್ಟಿದ್ದೇ ಸೋವಿಯೆತ್ ಸಂಘ. ಸೋವಿಯೆತ್ ಸಂಘದ ಈ ದೈತ್ಯ ಬಲವೇ ಪಾಶ್ಚಾತ್ಯರ ನಿದ್ದೆಗೆಡಿಸಿರಲು ಸಾಕು. ಇದರ ಫಲವಾಗಿಯೇ ಶೀತಲ ಸಮರ, arms race ಶುರುವಾಗಿ ಅಮೇರಿಕ ತಾನು ಇಡೀ ಜಗತ್ತಿನ ಶೋಷಣೆ ಮಾಡಿ ಗಳಿಸಿದ ಹಣವನ್ನೆಲ್ಲ ಈ ಹೊಸ ಸವಾಲನ್ನು ಎದುರಿಸಲು ಖರ್ಚು ಮಾಡಬೇಕಾಯಿತು. ಹೀಗಾಗಿ ವಿಯೆತ್ನಾಮ್ ವಾರ್ ನಡೆಯಿತು, ಆಫ್ಗಾನ್ ವಾರ್ ನಡೆಯಿತು. ಒಟ್ಟಾರೆಯಾಗಿ ಎಲ್ಲೆಲ್ಲಿ ಸೋವಿಯೆತ್ ಸಂಘ ಹೋಯಿತೋ ಅಲ್ಲಿಗೆ ತಾನೂ ಹೋಗಿ ಯುದ್ಧ ಮಾಡುವುದೇ ತನ್ನ ವ್ಯಕ್ತಿತ್ವ ಮತ್ತು ಅಸ್ತಿತ್ವದ ಸಬೂಬು ಅಂತ ತಿಳಿಯಿತು ಅಮೇರಿಕ.

ಸೋವಿಯೆತ್ ಸಂಘವನ್ನು ಹಣಿಯಲು ಸಮಾನ ಮನಸ್ಕ ದೇಶಗಳ ಮಿಲಿಟರಿ ಸಹಕಾರಕ್ಕೆ NATO ಒಪ್ಪಂದ ಮಾಡಿಕೊಂಡಿತು. ಪ್ರತಿಯಾಗಿ ಸೋವಿಯೆತ್ ಸಂಘ ತನ್ನ ಸಮಾನ ಮನಸ್ಕ ದೇಶಗಳ ಮಿಲಿಟರಿ ಏಕತೆಗಾಗಿ Warsaw Pact ಮಾಡಿಕೊಂಡಿತು. ಈ ಜಿದ್ದಾ ಜಿದ್ದು ಮೂರನೇ ವಿಶ್ವ ಯುದ್ಧದ ಅಂಚಿಗೆ ಅನೇಕ ಬಾರಿ ಕೊಂಡೊಯ್ದು ಜಗತ್ತು ಉಳಿದಿದ್ದೇ ಒಂದು ಪವಾಡ.

ಆವಾಗಲೇ ಬಾಪುವಿನ ಒಂದೆರಡು ಅಂಶ ಇದ್ದಿರಬಹುದಾದ ಮಿಖಾಯಿಲ್ ಗೋರ್ಬಶೇವ್ ಸೋವಿಯೆತ್ ಸಂಘದ ಅಧ್ಯಕ್ಷನಾಗಿ ಸೋವಿಯೆತ್ ಸಂಘವನ್ನು ಬರಖಾಸ್ತುಗೊಳಿಸಿ ಬರ್ಲಿನ್ ಗೋಡೆ ಕೆಡವಿ, Warsaw Pact ಅಂತ್ಯ ಗೊಳಿಸಿದಾಗ ತಾವೂ ಕೂಡ NATO ಒಪ್ಪಂದವನ್ನು ಅಂತ್ಯಗೊಳಿಸುವುದಾಗಿ ಪಾಶ್ಚಾತ್ಯ ದೇಶಗಳು ಭರವಸೆ ನೀಡುತ್ತವೆ. ಯಾಕೆಂದರೆ ತಮ್ಮ ಎದುರಾಳಿಯೇ ಶಾಂತಿ ಮಂತ್ರ ಹೇಳುವುದು ಮಾತ್ರವಲ್ಲ ಅದನ್ನು ಅನುಷ್ಠಾನ ಮಾಡಿದಾಗ NATO ದೇಶಗಳು ಕೂಡ ಸೂಕ್ತ ಶಾಂತಿ ಕ್ರಮಗಳನ್ನು ತಗೆದುಕೊಳ್ಳಬೇಕಾದ್ದು ಧರ್ಮ ಅಲ್ಲವೇ ?

ಆದರೆ ಹಾಗಾಗುವುದಿಲ್ಲ. ತನ್ನ ಸೋವಿಯೆತ್ ಸಂಘದ ಅನೇಕ ದೇಶಗಳಿಗೆ ಸ್ವಾತಂತ್ರ್ಯ ಕೊಟ್ಟು ಕೇವಲ ರಷಿಯಾ ಮಾತ್ರವಾಗಿ ಮುಂದುವರೆದ ದೇಶಕ್ಕೆ ಶಾಕ್ ಆಗುವುದು NATO ಒಪ್ಪಂದ ಬರಖಾಸ್ತು ಬಿಡಿ, ಅದನ್ನು ಮತ್ತಷ್ಟು ದೇಶಗಳನ್ನು ಸೇರಿಸಿಕೊಂಡು ಬೆಳೆಸುತ್ತಲೇ ಹೋಗುತ್ತದೆ ಅಮೇರಿಕ. ಹಿಂದಿನ ಸೋವಿಯೆತ್ ಸಂಘದ ದೇಶಗಳನ್ನೂ NATO ಒಪ್ಪಂದಕ್ಕೆ ಸೇರಿಸಿಕೊಳ್ಳುತ್ತದೆ. ಅಂದು ಬರ್ಲಿನ್ ಗೋಡೆ ಕುಸಿದಾಗ ಅಲ್ಲಿ ರಷಿಯಾದ ಕೆಜಿಬಿ ಗೂಢಚಾರಿ ಆಗಿದ್ದ ಪುಟಿನ್ ಈಗ ರಷಿಯಾದ ಅಧ್ಯಕ್ಷ. ಇದನ್ನು ನೋಡಿಕೊಂಡು ಸುಮ್ಮನಿರಲಾಗದೆ ಅನೇಕ ಸಲ NATO ಗೆ ವಾರ್ನ್ ಮಾಡಿದರೂ ಕೂಡ.. ತನ್ನ ದೇಶದ ಗಡಿಯಲ್ಲಿನ ಉಕ್ರೇನನ್ನು NATO ಒಪ್ಪಂದಕ್ಕೆ ತಗೆದುಕೊಳ್ಳಲು ಮುಂದಾದಾದಾಗ ಉಕ್ರೇನ್ ದೇಶದ ಮೇಲೆ ದಾಳಿ ಮಾಡಿ ಈಗ ನಾ ಬಿಡೆ ಅಂತ NATO ನಾ ಕೊಡೆ ಅಂತ ಪುಟಿನ್.

ಈಗ ಇಸ್ರೇಲಿಗೆ ಬರೋಣ. ಹಿಟ್ಲರ್ ವರ್ಷಗಳ ಕಾಲ ಯಹೂದಿಗಳನ್ನು ಕೊಂದರೂ ಕೂಡ, ಅವರ ಆಸ್ತಿ ಪಾಸ್ತಿ ಕಸಿದು ಅತ್ಯಾಚಾರ ಮಾಡಿದರು ಕೂಡ, ಅವರನ್ನು ಸಾಮೂಹಿಕ ಸಮಾಧಿ ಮಾಡಿದರೂ ಕೂಡ, ಸಾಮೂಹಿಕ ದಹನ ಮಾಡಿದರೂ ಕೂಡ ಕ್ಯಾರೇ ಅಂದಿರಲಿಲ್ಲ ಅಮೇರಿಕ ಮತ್ತು ಪಾಶ್ಚಾತ್ಯ ಯುರೋಪಿಯನ್ ದೇಶಗಳು. ಹಿಟ್ಲರ್ ಅಂದಿನ ಆಸ್ಟ್ರಿಯಾ ಜೆಕೋಸ್ಲಾವಾಕಿಯಾ ಇತ್ಯಾದಿ ಪೂರ್ವ ದೇಶಗಳನ್ನು ಆಕ್ರಮಿಸಿದರೂ ಕೂಡ ಸುಮ್ಮನಿದ್ದ ಪಾಶ್ಚಾತ್ಯ ಯುರೋಪಿಯನ್ ದೇಶಗಳು ಎಚ್ಚತ್ತಿದ್ದು ಹಿಟ್ಲರ್ ಪೋಲೆಂಡ್ ದೇಶದ ಮೇಲೆ ದಂಡೆತ್ತಿ ಹೋಗಲು ಹವಣಿಸುತ್ತಿದ್ದಾಗ. ಎಲ್ಲಿ ಮತ್ತೆ ಜರ್ಮನಿ ಬಲಿಷ್ಠವಾಗಿ ತಮ್ಮನ್ನು ಮತ್ತೆ ಹೈರಾಣಾಗಿಸುತ್ತದೆಯೋ ಎಂಬ ಭಯದಿಂದ. ಆದ್ದರಿಂದ ಬ್ರಿಟನ್ ಪ್ರಧಾನಿ ನೆವಿಲ್ ಚೇಂಬರ್ ಲೇನ್ ಹಿಟ್ಲರ್ ಬಳಿ ಹೋಗಿ, ಆಯ್ತಪ್ಪಾ ಇಲ್ಲೀವರೆಗೆ ನೀನು ಆಕ್ರಮಿಸಿಕೊಂಡ ಪ್ರದೇಶ ನೀನೆ ಇಟ್ಟುಕೋ.. ಇನ್ನು ಮೇಲೆ ನೀನು ವಾರ್ಸೆಲ್ಸ ಒಪ್ಪಂದದ ಪ್ರಕಾರ ಕೊಡಬೇಕಾದ ಯಾವ ದಂಡವನ್ನೂ ಕೊಡಬೇಡ, ಒಪ್ಪಂದವನ್ನೇ ರದ್ದು ಮಾಡೋಣ. ಆದರೆ ಇನ್ನು ಮುಂದೆ ಯಾವ ದೇಶದ ಮೇಲೂ ಆಕ್ರಮಣ ಮಾಡಬೇಡ ನಾವೆಲ್ಲ ಬ್ರದರ್ಸ್ ಆಗಿ ಇರೋಣ ಅಂತ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಲಂಡನ್ನಿಗೆ ಬಂದು ತಾನು ಯುರೋಪಿನಲ್ಲಿ ಶಾಂತಿ ಸ್ಥಾಪನೆ ಮಾಡಿಬಿಟ್ಟೆ ಎಂಬ ಖುಷಿಯಲ್ಲಿ ಒಪ್ಪಂದ ಪಾತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡುತ್ತಿದ್ದ ಕ್ಷಣದಲ್ಲಿಯೇ ಹಿಟ್ಲರ್ ಪೋಲೆಂಡಿನ ಮೇಲೆ ದಂಡೆತ್ತಿ ಹೋಗಿ, ಇತ್ತ ಪಶ್ಚಿಮದ ಯೂರೋಪಿನ ಮೇಲೂ ಕೂಡ ದಾಳಿ ಶುರು ಮಾಡುತ್ತಾನೆ. ಮುಂದೆ ಪ್ಯಾರಿಸ್ ಮತ್ತು ಲಂಡನ್ ಕೂಡ ಹಿಟ್ಲರ್ ನ ದಾಳಿಗೆ ಬಲಿಯಾಗುತ್ತವೆ. ತಮ್ಮ ಬುಡಕ್ಕೇ ಬೆಂಕಿ ಹತ್ತಿದಾಗ ಮಾತ್ರ ಹಿಟ್ಲರ್ ನ ಮೇಲೆ ಇವರು ಯುದ್ಧ ಮಾಡಲು ಶುರು ಮಾಡಿದ್ದು. ಯಹೂದಿಗಳ ಮೇಲಿನ ಪ್ರೇಮದಿಂದ ಅಲ್ಲ.

ಆದರೆ ಎರಡನೇ ವಿಶ್ವಯುದ್ಧದ ನಂತರ ಯಹೂದಿಗಳು ಸಾವಿರಾರು ವರ್ಷ ನಾವು ಅಲೆದಾಡಿದ್ದೇವೆ ನಮಗೆ ಎಲ್ಲಿಯೂ ಶಾಂತಿಯಿಲ್ಲ. ನಮಗೊಂದು ಹೋಮ್ ಲ್ಯಾಂಡ್ -ಮಾತೃ ಭೂಮಿ - ಅನ್ನುವುದು ಇಲ್ಲ. ಅದು ನಮ್ಮ ಧರ್ಮ ಗ್ರಂಥಗಳ ಪ್ರಕಾರ ಐತಿಹಾಸಿಕವಾಗಿ ನಾವು ನೆಲೆಸಿದ್ದ ಇಸ್ರೇಲ್ ಮಾತ್ರ ಅಂತ ಅಂದಾಗ ಆ ಪ್ರದೇಶ ಇಂದು ಪ್ಯಾಲೆಸ್ತೀನ್ ಆಗಿದ್ದು ಬ್ರಿಟಿಷ್ ವಸಾಹತು ಆಗಿರುತ್ತದೆ. ಈ ಯಹೂದಿಗಳು ನಮ್ಮ ದೇಶಕ್ಕೆ ಬಂದು ನೆಲಸಲಿ ಅಂತ ಅಮೇರಿಕ ಹೇಳುವುದಿಲ್ಲ. ಇಂಗ್ಲೆಂಡು ಹೇಳುವುದಿಲ್ಲ. ಅಂದು ಬ್ರಿಟಿಷ್ ವಸಾಹತು ಆಗಿದ್ದ ಪ್ಯಾಲೆಸ್ತೀನ್ ದೇಶದ ದಕ್ಷಿಣ ಭಾಗದಲ್ಲಿ ಹೋಗಿ ಇರಿ ಅಂತ ಬ್ರಿಟಿಷ್ ಸರಕಾರ ಹೇಳಿ ಅದೇ ಇಸ್ರೇಲ್ ಅಂತ ವಿಶ್ವ ಸಂಸ್ಥೆಯ ಮುಂದೆ ಒಪ್ಪಂದ ಆಗುತ್ತದೆ. ಇಲ್ಲಿ ನೋಡಿದರೆ ಯಾವ ನಾಜಿಗಳು ಯಹೂದಿಗಳನ್ನು ಮಾರಣ ಹೋಮ ಮಾಡಿದ್ದರೋ ಅದೇ ನಾಜಿ ವಿಜ್ಞಾನಿಗಳು ಮತ್ತು ಇಂಜಿನೀಯರುಗಳನ್ನು ಅಮೇರಿಕ ಕರೆದುಕೊಳ್ಳುತ್ತದೆ -ತನ್ನ ಆರ್ಥಿಕತೆಯನ್ನು ಬೆಳೆಸಿಕೊಳ್ಳಲು.

ಆಯಿತು ಇಸ್ರೇಲ್ ಕೊಟ್ಟಿರಿ. ತಮ್ಮ ದೇಶ ಬಿಟ್ಟು ಹೋದ ಬ್ರಿಟಿಷರು ತಮ್ಮ ದೇಶ ಯಾವುದು ಎಷ್ಟು ಅಂತ ಹೇಳಲಿಲ್ಲವಲ್ಲ ಅಂತ ಪ್ಯಾಲೆಸ್ಟೀಯನ್ನರಿಗೆ ಸಿಟ್ಟು. ಇದನ್ನು ಎಲ್ಲರನ್ನೂ ಕೂರುಸಿಕೊಂಡು ಬಗೆ ಹರಿಸಲಾಗದೆ ಅವಾಗವಾಗ ಇಸ್ರೇಲ್ ಅವಾಗವಾಗ ಪ್ಯಾಲೆಸ್ತೀನ್ ಪರ ನಿಲ್ಲುತ್ತಾ ಈ ಜಗಳ ಜೀವಂತ ಆಗಿರುವಂತೆ ನೋಡಿಕೊಂಡಿದ್ದೇ ಅಮೇರಿಕ. ಯಾಕೆಂದರೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ಅರಾಜಕತೆ ನಡೆಯುತ್ತಾ ಇದ್ದರೆ ತಮ್ಮ ಶಸ್ತ್ರಾಸ್ತ್ರ ಸಂತೆಗೂ ಲಾಭ. ಹಾಗೆಯೇ ತೈಲ ಬೆಲೆ ಹೆಚ್ಚುತ್ತಾ ಹೋಗಿ ತನ್ನ ಡಾಲರ್ ಕೂಡ ರಾರಾಜಿಸುತ್ತದೆ.

ಈಗ ನೋಡಿ. ತನ್ನದೇ ಬಂಡವಾಳಶಾಹಿ ಸ್ವಾರ್ಥದಿಂದಾಗಿ ಉಂಟಾದ 2008 ರ ಆರ್ಥಿಕ ಕುಸಿತ ಅಮೇರಿಕಾದ ಸೊಂಟ ಮುರಿದಿದೆ. ನಂತರ ಬಂದ ಕೋವಿಡ್ ಅವರನ್ನು ಮಕಾಡೆ ಮಲಗಿಸಿದೆ. ಈಗ ಅವರ ಆರ್ಥಿಕ ಚೇತರಿಕೆ ಆಗಬೇಕೆಂದರೆ ದೊಡ್ಡ ಪ್ರಮಾಣದ ಯುದ್ಧ ಆಗಬೇಕು. ಆ ಮೂಲಕ ತನ್ನೆಲ್ಲ ಆಯುಧ ಸ್ಟಾಕ್ ಡಬಲ್ ಬೆಲೆಗೆ ಮಾರಾಟ ಆಗಬೇಕು. ಹಾಗೆಯೇ ಒಂದರ್ಧದಷ್ಟು ತೈಲ ಭಾವಿಗಳು ನಷ್ಟವಾಗಿ ತೈಲ ಅಭಾವ ಉಂಟಾಗಿ ತೈಲ ಬೇಡಿಕೆ ಹೆಚ್ಚಾಗಿ ಡಾಲರ್ ಬೆಲೆ ಮುಗಿಲು ಮುಟ್ಟಬೇಕು. ಯಾವನು ಸತ್ತರೆ ಏನು, ಯಾವನು ಬದುಕಿದರೇನು ! ತಾನು ಮಾತ್ರ ಮೇರಿಬೇಕು ಅಷ್ಟೇ .

ನಮಗೇನು ತೊಂದರೆ ಇಲ್ಲ ಬಿಡಿ. ಹಿಂದೂ ಮುಸ್ಲಿಂ ಜಗಳ ಮಾಡಿಕೊಂಡು ಆರಾಮ ಇರೋಣ. ಡಾಲರ್ ಬೆಲೆ ಸಾವಿರ ಆದರೇನು ? ಪೆಟ್ರೋಲು ಬೆಲೆ ಐನೂರು ಆದರೇನು ? ಹುಲಿ ಸಾಕಿದ್ದೇವೆ. ನಾವು ಉಪವಾಸ ಇದ್ದು ಹುಲಿ ಸಾಕೋಣ. ಅದಕ್ಕೇನಂತೆ ?

ಬಾಪುವಿನ ಜನ್ಮದಿನ ಇಂದು. ಇಂದೇ ನಡೆದ ಇರಾನ್ ದಾಳಿ ಸುದ್ದಿ ಕೇಳಿ ಇದೆಲ್ಲ ನೆನಪಾಯಿತು. ಹ್ಯಾಪಿ ಗಾಂಧೀ ಜಯಂತಿ ಎಲ್ಲರಿಗೂ .

ಕನ್ನಡಿಗರಿಗೆ ಕರ್ನಾಟಕದಲ್ಲಿ ಅಲ್ಲದೇ ಲಂಡನ್ನಿನಲ್ಲಿ ಮೀಸಲಾತಿ ಕೊಡಕ್ಕಾಗುತ್ತದೆಯೇ ? ಡಾ ಬಸವರಾಜ್ ಇಟ್ನಾಳ ಬೆಂಗಳೂರು ಜಾಗತಿಕ ನಗರ, ಇಂದಿನ ಗ್ಲ...
17/07/2024

ಕನ್ನಡಿಗರಿಗೆ ಕರ್ನಾಟಕದಲ್ಲಿ ಅಲ್ಲದೇ ಲಂಡನ್ನಿನಲ್ಲಿ ಮೀಸಲಾತಿ ಕೊಡಕ್ಕಾಗುತ್ತದೆಯೇ ?

ಡಾ ಬಸವರಾಜ್ ಇಟ್ನಾಳ

ಬೆಂಗಳೂರು ಜಾಗತಿಕ ನಗರ, ಇಂದಿನ ಗ್ಲೋಬಲ್ ಯುಗದಲ್ಲಿ ಈ ತರ ಪ್ರಾದೇಶಿಕತೆಗೆ ಆದ್ಯತೆ ಕೊಟ್ಟರೆ ವಿದೇಶಿ ಬಂಡವಾಳ ಬರೋದಾದರೂ ಹೇಗೆ ? ಇದು ಹಿಮ್ಮುಖ ನಿಲುವು. ಹಾಗೆ ಹೀಗೆ ಅಂತ ಬೆಂಗಳೂರಿನ ಅನ್ನ ನೀರು ಸೇವಿಸಿ ಅನ್ಯರ ಪಾದಸೇವೆ ಮಾಡುವ ಅವಿವೇಕಿ ಪರದೇಸಿ ಉದ್ಯಮಿಗಳು ಸಿದ್ದರಾಮಯ್ಯ ಸರಕಾರದ ಸಂಪುಟ ನಿರ್ಧಾರದ ಬಗ್ಗೆ ಮಾತಾಡುತ್ತಿದ್ದಾರೆ. ಮೋಹನ್ ದಾಸ್ ಪೈ ಎಂಬ ಮೂರ್ಖನಂತೂ ಇದು ಕಾಂಗ್ರೆಸ್ ಸರಕಾರದ ಫ್ಯಾಸಿಸ್ಟ್ ನಿಲುವು ಅಂತ ಕೂಡ ವಿಷ ಕಾರಿದ್ದಾನೆ. ಇನ್ನು ನಮ್ಮ ಬಯೋಕಾನ್ ಬಾಯಿ ಕಿರಣ್ ಮಝುಮ್ದಾರ್ ಷಾ ಅಂತೂ ಇದು ಪ್ರತಿಭೆಗಳಿಗೆ ಮಾಡುವ ಅವಮಾನ ಅಂತ ಹೇಳಿ ತಮ್ಮ ಅರೆಬರೆ ಪಾಂಡಿತ್ಯವನ್ನು ಮೆರೆದಿದ್ದಾರೆ.

ಕನ್ನಡದ, ಅದರಲ್ಲೂ ಬೆಂಗಳೂರಿನ ಪರಿಸರವನ್ನು, ಮಣ್ಣು, ನೀರನ್ನು ಹೀರಿ ಹಿಂಡಿ ಹಿಪ್ಪೆ ಮಾಡಿದ ಈ ಕುಳಗಳ ಖಾಸಗಿ ಆಸ್ತಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಎಷ್ಟು ಬೆಳೆದಿದೆ. ಇವರು ಬಳಸಿದ ಕರ್ನಾಟಕದ ಸಂಪನ್ಮೂಲಗಳ ಒಟ್ಟು ಆರ್ಥಿಕ ಮೌಲ್ಯ ಎಷ್ಟು, ಇವರಿಗೆ ನೀಡಿದ ತೆರಿಗೆ ವಿನಾಯಿತಿಯ ಮೌಲ್ಯ ಎಷ್ಟು, ಇವರಿಂದ ಬೆಂಗಳೂರಿಗೆ ಆದ ಪರಿಸರ ಹಾನಿಯ ಆರ್ಥಿಕ ಮೌಲ್ಯ ಎಷ್ಟು ಹಾಗು ಇವರಿಂದ ಈ ನಾಡಿನ ಜನರಿಗೆ ಆದ ಲಾಭದ ಆರ್ಥಿಕ ಮೌಲ್ಯ ಎಷ್ಟು ಅಂತ ಲೆಕ್ಕ ಹಾಕಿದರೆ ಇವರನ್ನು ಇಲ್ಲಿ ಒಂದು ಕ್ಷಣ ಕೂಡ ಇರಲು ಬಿಡಬಾರದು. ಅಷ್ಟು ಹಾನಿ ಮಾಡಿದ್ದಾರೆ ಕರ್ನಾಟಕದ ಪರಿಸರ, ಸಂಪನ್ಮೂಲ ಮತ್ತು ಬೆಂಗಳೂರಿನ ಮೂಲಸೌಕರ್ಯಗಳಿಗೆ.

ಸರಿ. ಅದನ್ನು ಸ್ವಲ್ಪ ಬದಿಗೆ ಇಟ್ಟು ಇವರ ವಾದಗಳನ್ನು ಗಮನಿಸಿ.

ಜಾಗತಿಕ ನಗರ ಬೆಂಗಳೂರು ಇರುವುದು ಕರ್ನಾಟಕದಲ್ಲಿ. ಅಮೇರಿಕಾದಲ್ಲಿ ಅಲ್ಲ. ಭಾರತದ ಸಂವಿಧಾನ ಬದ್ದವಾಗಿ ರಚನೆಗೊಂಡ ಭಾಷಾವಾರು ರಾಜ್ಯ ಕರ್ನಾಟಕ. ಸುಮ್ಮನೆ ಅಲ್ಲೊಂದು ಇಲ್ಲೊಂದು ಅಡ್ಡಾ ದಿಡ್ಡಿ ಗೆರೆ ಎಳೆದು ಮಾಡಿದ ಅಮೇರಿಕಾದ ರಾಜ್ಯಗಳ ತರ ಅಲ್ಲ. ಆಯಾ ಭಾಷೆಗಳ ಅಸ್ಮಿತೆ ಮತ್ತು ಆಯಾ ಭಾಷಿಕರ ಹಿತ ಕಾಯಲೆಂದೇ ಇಲ್ಲಿ ಭಾಷಾವಾರು ರಾಜ್ಯ ಮಾಡಿರೋದು. ಅಮೇರಿಕ, ಇಂಗ್ಲೆಂಡಿಗೆ ಚಮಚಾಗಿರಿ ಮಾಡಿಕೊಂಡು ಅವರ ತೆವಲಿಗೆ ನಮ್ಮ ಹಿತ ಮತ್ತು ಅಸ್ಮಿತೆಯನ್ನು ಬಲಿ ಕೊಡಲು ಅಲ್ಲ. ಬೆಂಗಳೂರು ಜಾಗತಿಕ ಆಗಿರುವುದಕ್ಕೆ ಕಾರಣ ಇಲ್ಲಿನ ಸಂಪನ್ಮೂಲ ಮತ್ತು ಸಂಸ್ಕೃತಿ.

ಹಾಗೆಯೇ ಪ್ರತಿಭೆ ವರ್ಸಸ್ ಭಾಷಾ ಮೀಸಲಾತಿ ವಾದ. ಇದು ಎಷ್ಟು ಕೆಟ್ಟ ವಾದ ಅಂದರೆ ಕೇವಲ ಒಂದು ಇಡೀ ಭಾಷಾ ಸಮುದಾಯದಲ್ಲಿ ಪ್ರತಿಭೆಗಳೇ ಇಲ್ಲ ಎಂಬ ಮೂರ್ಖ ಮಾತು ಇದು. ಬೆಂಗಳೂರಿನಲ್ಲಿ ಇರುವಷ್ಟು ಗುಣಮಟ್ಟದ ಉಚ್ಚ ಶಿಕ್ಷಣ ಸಂಸ್ಥೆಗಳು ಬಹುಷಃ ಇಡೀ ಭಾರತದಲ್ಲೇ ಇಲ್ಲ. ಅಂತಹುದರಲ್ಲಿ ಇದು ಪ್ರತಿಭೆಗಳಿಗೆ ಮಾರಕ ಅನ್ನುವುದು ತಪ್ಪು. ಅಷ್ಟಕ್ಕೂ ಇಲ್ಲಿನ ನೆಲ ಜಲ ಮತ್ತು ಒಟ್ಟಾರೆ ಪರಿಸರದಲ್ಲಿನ ಯಾವುದೇ ಉದ್ಯಮ ಇಲ್ಲಿನ ಜನರಿಗೇ ಆದ್ಯತೆ ಕೊಡದಲ್ಲಿ ಅದನ್ನು ತಗೊಂಡು ಏನು ಮಾಡುವದು. ಅಂತಹ ಉದ್ಯಮ ಕರ್ನಾಟಕದಲ್ಲಿ ಇದ್ದರೆಷ್ಟು ಹೋದರೆಷ್ಟು ? ನಮ್ಮ ಸಂಪನ್ಮೂಲಗಳ ಖರ್ಚು ಮಾಡಿ ನಾವು ಅವಾಕಾಶ ವಂಚಿತರಾಗಿ ಪಕ್ಕದ ಮನೆಗೆ ಐಶ್ವರ್ಯ ತರೋದು ಒಂದು ಸಾಧನೆಯೇ ?

ಅಷ್ಟಕ್ಕೂ ನೂರಕ್ಕೆ ನೂರೂ ಉದ್ಯೋಗ ಬೇಕು ಅಂತ ಇಲ್ಲಿ ಯಾರೂ ಕೇಳಿಯೂ ಇಲ್ಲ, ಸರಕಾರ ಹೇಳಿಯೂ ಇಲ್ಲ. ಶೇಕಡಾ ಐವತ್ತು ಮ್ಯಾನೆಜ್ಮೆಂಟ್ ಹುದ್ದೆಗಳು ಮತ್ತು ಶೇಕಡಾ ಎಪ್ಪತ್ತೈದು ಹುದ್ದೆಗಳು ನಾನ್ ಮ್ಯಾನೇಜ್ಮೆಂಟ್ ಹುದ್ದೆಗಳು ಮಾತ್ರ ಕರ್ನಾಟಕದ ಜನರಿಗೆ ಕಡ್ಡಾಯ ಅಂತ ಹೇಳಿದ್ದೇವೆ ಅಷ್ಟೇ ! ಅಮೇರಿಕಾದ ಗುಲಾಮಗಿರಿಯನ್ನು ತಮ್ಮ ನರ ನಾಡಿಗಳಲ್ಲೂ ಬಿಟ್ಟುಕೊಂಡ ಇಲ್ಲಿನ ಐಟಿ ಬಿಟಿ ಕುಲಗಳ ಮುಖ್ಯ ಸಮಸ್ಯೆ ಏನೆಂದರೆ ಇವರು ಹೊರಗಿನಿಂದ ಹಿಂದಿವಾಲಗಳನ್ನು ತಂದರೆ ಅವರು ಇವರು ಹೇಳಿದಂತೆ ವಿಧೇಯರಾಗಿ ಬಗ್ಗು ಎಂದರೆ ತೆವಳಿಕೊಂಡು ಕೆಲಸ ಮಾಡುತ್ತಾ ಹೊರಗೆ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಾ ಇರಬಲ್ಲರು. ಆದರೆ ಕನ್ನಡದ ಜನ ಪ್ರಶ್ನೆ ಕೇಳುತ್ತಾರೆ. ತನ್ನ ಮಣ್ಣಿನಲ್ಲಿ ಬೇರೂರಿದ ಮನುಷ್ಯ ವಿನಾಕಾರಣ ಇವರ ಚಮಚಾಗಿರಿ ಮಾಡುವುದಿಲ್ಲ. ಆದ್ದರಿಂದ ಇವರಿಗೆ ಕನ್ನಡದ ಜನ ಬೇಡ. ಅದರಲ್ಲೂ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ಅರ್ಧ ಬಿಟ್ಟು ಕೊಟ್ಟು ಬಿಟ್ಟರೆ ಇವರ ಮೂಗುದಾರ ಕನ್ನಡಿಗರ ಕೈಯಲ್ಲೇ ! ಇದು ಇವರ ಭಯ.

ಇದರ ಈ ಕಾಲದ ದೊಡ್ಡ ಚಿತ್ರಣ ಅಂದರೆ ರಾಷ್ಟ್ರೀಯ ಎಕಾನಮಿ ವಿಚಾರದ ಆಯಾಮದಲ್ಲಿ ನೋಡೋಣ. ಈ ಜಿ ಎಸ್ ಟಿ ನಂತರದ ಎಕಾನಾಮಿಯಲ್ಲಿ ಈ ಐ ಟಿ ಬಿಟಿ ಗಳು ನೇರವಾಗಿ ಕೇಂದ್ರಕ್ಕೆ ತೆರಿಗೆ ಕೊಟ್ಟು ಆ ತೆರಿಗೆಯ ಪಾಲಿಗೆ ರಾಜ್ಯಗಳು ಕೇಂದ್ರದ ದುಂಬಾಲು ಬೀಳುತ್ತಿರಲು, ಇತ್ತ ಹೊಸ ತೆರಿಗೆಯನ್ನೂ ಹೇರಲಾಗದೆ ಅತ್ತ ವಿದೇಶಿ ಸಾಲವನ್ನೂ ಎತ್ತಲಾಗದೇ ಇರುವ ಈಗಿನ ಸಂಧರ್ಭದಲ್ಲಿ ಭಾಷಾವಾರು ರಾಜ್ಯಗಳು ತನ್ನ ಹಿತಾಸಕ್ತಿ ಮತ್ತು ತನ್ನ ಜನರ ಕಲ್ಯಾಣಕ್ಕೋಸ್ಕರ ಏನು ಮಾಡಲು ಸಾಧ್ಯ ? ಕೇಂದ್ರದ ಭಿಕ್ಷೆಗೆ ಕಾಯ್ದು ಕೂರುವುದೇ ? ಅಥವಾ ಗ್ಯಾರಂಟಿ ಭಾಗ್ಯಗಳನ್ನು ಘೋಷಿಸಿ ಮತ್ತೆ ಅದರ ಆರ್ಥಿಕ ಹೊರೆ ತೂಗಿಸಲಾಗದೆ ಪರದಾಡುವುದೇ ? ಅಥವಾ ತನ್ನ ನೆಲದ ಮೇಲೆ ನಿಂತು ಉದ್ಯಮ ಹೂಡಿ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡು ಸಾವಿರಾರು ಕೋತಿ ತೆರಿಗೆ ವಿನಾಯಿತಿ ಪಡೆಯುವ ಖಾಸಗಿ ಉದ್ಯಮಗಳಲ್ಲಿ ತನ್ನ ಜನರಿಗೇನೇ ಮೊಟ್ಟ ಆದ್ಯತೆಯ ಮೇಲೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುವುದೋ ? ಈ ಕೊನೆಯ ಆಯ್ಕೆಯೇ ಈ ಸಂಧರ್ಭದಲ್ಲಿ ಸೂಕ್ತ ಮತ್ತು ನ್ಯಾಯಸಮ್ಮತ.

ಬೆಂಗಳೂರು ಜಾಗತಿಕ ನಗರ ವಾಗಿದ್ದು ಯಾವನೇ ಮೋಹನ ದಾಸ, ಮೂರ್ತಿ, ಮುಜುಮದಾರ್ ಷಾ ಗಳಿಂದ ಅಲ್ಲ. ಬೆಂಗಳೂರು ಬೆಂಗಳೂರು ಆಗಿದ್ದರಿಂದಲೇ, ಕರ್ನಾಟಕದ ಮಣ್ಣಿನ ಕಸುವನ್ನು ನಂಬಿಯೇ ಈ ಬಂಡವಾಳ ಶಾಹಿಗಳು ಬಂದಿದ್ದು. ಕರ್ನಾಟದಿಂದ ನೀವೆಲ್ಲ. ನಿಮ್ಮಿಂದ ಕರ್ನಾಟಕ ಅಲ್ಲ. ಕರ್ನಾಟಕ ಬಿಟ್ಟರೆ ನಿಮಗೆ ಗತಿಯಿಲ್ಲ. ಸುಮ್ಮನೆ ಕರ್ನಾಟಕದಲ್ಲಿ ಕರ್ನಾಟಕದ ಹುಡುಗರಿಗೆ ಉದ್ಯೋಗಗಳನ್ನು ಕೊಟ್ಟು ಋಣ ಮುಕ್ತರಾಗಿ.

26/04/2024

Will be on TimesNOW at 8 pm

ಧ್ಯಾನ ನಾಟಕವಾಗಬಲ್ಲುದು. ಅರಿವು ಅದನ್ನು ಬಯಲು ಮಾಡಬಲ್ಲುದು. ಡಾ ಬಸವರಾಜ್ ಇಟ್ನಾಳ ಚಿತ್ತವನ್ನು ಕೇಂದ್ರೀಕೃತ ಗೊಳಿಸಿ ಮಾಡುವ ಧ್ಯಾನ ಅರಿವನ್ನು ...
26/02/2024

ಧ್ಯಾನ ನಾಟಕವಾಗಬಲ್ಲುದು. ಅರಿವು ಅದನ್ನು ಬಯಲು ಮಾಡಬಲ್ಲುದು.

ಡಾ ಬಸವರಾಜ್ ಇಟ್ನಾಳ

ಚಿತ್ತವನ್ನು ಕೇಂದ್ರೀಕೃತ ಗೊಳಿಸಿ ಮಾಡುವ ಧ್ಯಾನ ಅರಿವನ್ನು ನಾಶಗೊಳಿಸುವ ಸರಳ ಹಾದಿ. ಒಂದು ಶಬ್ದ ಅಥವಾ ಒಂದು ನಾದ ಅಥವಾ ಉಸಿರಾಟದ ಕ್ರಿಯೆ ಇತ್ಯಾದಿಗಳ ಮೇಲೆ ಚಿತ್ತವನ್ನು ಕೇಂದ್ರೀಕರಿಸಿ ಉಳಿದೆಲ್ಲವನ್ನೂ ಆಚೆ ಸರಿಸುವ ಆ ಮೂಲಕ ಚಿತ್ತ ಶುದ್ಧಿ ಸಾಧಿಸುವ ಪ್ರಯತ್ನ ಧ್ಯಾನ. ಇಷ್ಟೆಲ್ಲಾ ಸರ್ಕಸ್ ಮಾಡುವುದು ಮತ್ತು ತನ್ಮೂಲಕ ಚಿತ್ತ ಶುದ್ಧಿ ಸಾಧಿಸುವ ಸೂತ್ರಗಳನ್ನು ಅನೇಕ ಧರ್ಮಗಳು ಹೇಳುತ್ತವೆ. ಈ ಧ್ಯಾನ ಮಾರ್ಗ ಎಷ್ಟು ದುರ್ಬಲ ಎಂದರೆ ಇದನ್ನು ಬೇರೆ ಯಾರು ಬೇಕಾದರೂ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಭಂಗ ಗೊಳಿಸಬಹುದು. ರಂಭೆ ಮೇನಕೆ ಊರ್ವಶಿಯರೇ ಬೇಕಿಲ್ಲ.. ಒಂದು ಸೈಕಲ್ ಬೆಲ್, ಮಗುವಿನ ಅಳು, ಗೆಜ್ಜೆ ಬಳೆಗಳ ಸದ್ದು , ತಣ್ಣನೆಯ ಗಾಳಿ, ಗಮ್ಮೆನ್ನುವ ಹೂವಾಸನೆ.. .. ಯಾವುದು ಬೇಕಾದರೂ ಈ ಧ್ಯಾನವನ್ನು ಭಂಗಗೊಳಿಸಬಲ್ಲುದು.

ಆದ್ದರಿಂದಲೇ ಈ ಧ್ಯಾನದ ಹಾದಿಯಲ್ಲಿರುವ ಜನ ಯಾವಾಗಲೂ ಘನ ಗಾಂಭೀರ್ಯದಿಂದ ಇದ್ದು, ಧ್ಯಾನವನ್ನು ಭಂಗಗೊಳಿಸಬಲ್ಲ ಎಲ್ಲಾ ವ್ಯಕ್ತಿ, ವಸ್ತು ಸಮುದಾಯಗಳ ಬಗ್ಗೆ ಅಪಾರ ಸಿಟ್ಟು ಅಸಹನೆ ಹೊಂದಿರುತ್ತಾರೆ. ಈ ತರದ ಧ್ಯಾನ ಅನಂತ ಬಹಿರಂಗಕ್ಕೆ ಒಂದು ದೊಡ್ಡ ಗೋಡೆ ಕಟ್ಟಿಕೊಂಡು ಅಲ್ಲ ಅಲ್ಲ.. ನಾಲಕ್ಕೂ ದಿಕ್ಕಿಗೆ ಒಂದೊಂದು ಗೋಡೆ ಕಟ್ಟಿಕೊಂಡು ತಾವೇ ವಿಶ್ವಗುರು, ತಮಗೆ ತಿಳಿದಿದ್ದೇ ಕೈವಲ್ಯ ಜ್ಞಾನ, ತಮಗೊಲಿದಿದ್ದೇ ಹಾಡು ಅನ್ನುವ ಭ್ರಮೆಯಲ್ಲಿ , ಅಹಂಕಾರದ ನಶೆಯಲ್ಲಿ ಬದುಕಿನ ಪರ್ಯಾಯ ಮಾರ್ಗಗಳ ಬಗ್ಗೆ ದಿವ್ಯ ದ್ವೇಷವನ್ನು ಹೊಂದಿರುತ್ತಾರೆ. ಪ್ರೀತಿ ಮತ್ತು ಸಹನೆಯ ಮಾತುಗಳನ್ನು ಹೇಳುತ್ತಲೇ ಅನ್ಯ ಧರ್ಮವನ್ನು ಪಾಲಿಸುವ ಸಮುದಾಯಗಳನ್ನು ಸಂಹಾರ ಮಾಡುವಷ್ಟು ಅಮಾನವೀಯತೆ ತೋರಿಸಬಲ್ಲರಾಗಿರುತ್ತಾರೆ. ತಮ್ಮನ್ನು ಪ್ರಶ್ನೆ ಮಾಡುವವರನ್ನು ಮುಗಿಸುವ ತಂತ್ರವನ್ನೂ ಮಾಡುತ್ತಾರೆ. ಮತ್ತೆ ಅದೇ ಧ್ಯಾನ ! ಚಿತ್ತವನ್ನು ಕೇಂದ್ರೀಕೃತಗೊಳಿಸಿ ಬಹಿರಂಗವೆನ್ನೆಲ್ಲ ಬಹಿಷ್ಕಾರ ಮಾಡುವ ಬೂಟಾಟಿಕೆ.

ಧ್ಯಾನ ಅರಿವಿನ ವೈರಿ ಯಾಕೆ ಆಗುತ್ತದೆ ಅಂದರೆ, ಅರಿವು ಎಲ್ಲವನ್ನು ಒಳಗೊಳ್ಳುವ ಹಾದಿ. ಅರಿವನ್ನು ಭಂಗಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅರಿವು ಬಹಿರಂಗವನ್ನು ಬಹಿಷ್ಕಾರ ಮಾಡುವುದಿಲ್ಲ. ಅರಿವು ಬಹಿರಂಗವನ್ನು ಜಾಗೃತೆಯಿಂದ ವೀಕ್ಷಿಸುತ್ತದೆ. ಯಾವುದೇ ಪೂರ್ವಗ್ರಹ ಇಲ್ಲದೇ, ಯಾವುದೇ ಮಡಿವಂತಿಕೆ ಇಲ್ಲದೆ, ಯಾವುದೇ ನೀರೀಕ್ಷೆ ಮತ್ತು ಅಪೇಕ್ಷೆ ಇಲ್ಲದೆ ಅರಿವು ಬಹಿರಂಗವನ್ನು ವೀಕ್ಷಿಸುತ್ತದೆ. ಬಹಿರಂಗವನ್ನು ಒಳಗೊಳ್ಳುತ್ತದೆ. ಅನ್ಯ ಮಾರ್ಗ, ಅನ್ಯ ಧರ್ಮ, ವಿನಾಶ, ವೈಭವ, ಸುಖ ದುಃಖ, ಎಲ್ಲವನ್ನೂ ಒಳಗೊಳ್ಳುವ, ಒಳಗೊಂಡು ತನ್ನ ಅಂತರಂಗದ ಶಾಂತ ಮಹಾಸಾಗರದಲ್ಲಿ ಸಮ್ಮಿಳಿತ ಗೊಳಿಸುತ್ತದೆ ಅರಿವು. ಅರಿವಿಗೆ ರೂಪವೇ ಬಯಲು, ಬಯಲೇ ರೂಪ. ಇದು ಅತ್ಯಂತ ಹಗುರವಾದ ಅಷ್ಟೇ ವಿಶಾಲವಾದ ಶೂನ್ಯ. ಏನೂ ಇಲ್ಲದಿರುವುದು ಶೂನ್ಯವಲ್ಲ, ಎಲ್ಲವನ್ನೂ ಒಳಗೊಂಡು ಎಲ್ಲವನ್ನೂ ಮೀರಿದ ಶೂನ್ಯ.

ಒಂದು ನಮ್ಮ ಧರ್ಮ ಅವರ ಧರ್ಮ ಎಂಬ ಭೇದ ಮಾಡಿ, ಧರ್ಮೋರಕ್ಷತಿ ರಕ್ಷಿತಃ ಅನ್ನುವ ಯುದ್ಧದ ಧ್ಯಾನ. ಇನ್ನೊಂದು ಎಲ್ಲವನ್ನೂ ಒಳಗೊಳ್ಳುವ ಎಲ್ಲರನ್ನೂ ಪ್ರೀತಿಸುವ ಪ್ರೇಮದ ಗಾನ.

Discrimination is division; How BJP Alienates South India.Dr Basavaraj Itnal1. Shifting population weightage bench mark ...
06/02/2024

Discrimination is division; How BJP Alienates South India.

Dr Basavaraj Itnal

1. Shifting population weightage bench mark from 1971 to 2011. This has rewarded BIMARU states for failing to control population while punishing the southern states for succeeding in population control.

2. Changing formula of financial devolution in such a way as to benefit BIMARU states at the expense of South India.

3. Cultural homogenizing by propagating Hindi and Hindutva while not even allowing tableau of Narayana Guru or Basavanna who opposed the Hindu practice of casteism and temple worship in republic day celebration.

4. The delimitation of parliament seats expected to begin in 2026 would increase the lok sabha seats to 848 more than half of which would be in BIMARU states where gau mutra politics and hindutva frenzie is the order of the day in which BJP revels. UP and Bihar alone would account for 222 seats ! If we account for uttarakand and jarkhand the number would go to 253 !

All the five high income high GDP states of South India put together would have 164 seats. Thus facilitating poor and uneducated BIMARU states' political strangle hold on the prosperous and educated (more importantly non-BJP) South Indian states.

Hence the South Indian States must rise and teach BJP a lesson or two in fair play so that both economic and political control is placed in South India that is responsible for more than half of India's GDP.

03/01/2024

Which god resides in a temple built on the graves of his children murdered by his devotees ?

03/01/2024

ರಕ್ತಮಂದಿರದಲ್ಲಿ ರಾಮನ ಮೂರ್ತಿ ಮಾತ್ರ ಇದೆ. ರಾಮನಿಲ್ಲ.

03/01/2024

ಸಾವಿರ ಕೊಲೆ ಮಾಡಿ ಕಟ್ಟಿದ ಮಂದಿರದಲ್ಲಿ ದೇವರು ಇರಬಲ್ಲನೇ ?

05/09/2023

ಕಂಡೆಯಾ ಇದು ಇಂಡಿಯಾ ಅಲ್ಲ, ಭಾರತ ಅಲ್ಲ, ಸನಾತನ ಅಲ್ಲ, ಹಿಂದೂ ಅಲ್ಲ. ಹಾಗಾದರೆ ?

Basavaraj Itnal

ಯಯಾತಿಯ ಮಗನಾದ ಪುರುವಿನ ಮೊಮ್ಮಗ ದುಷ್ಯಂತ ಮಹಾರಾಜ. ದುಷ್ಯಂತನ ಮಗ ಭರತ. ಭರತನ ನಂತರದ ಹನ್ನೆರಡನೇ ತಲೆಮಾರು ಪಾಂಡು ಮತ್ತು ಧೃತರಾಷ್ಟ್ರನ ತಾತ ಶಂತನುವಿನದು. ಚಂದ್ರವಂಶದ ಈ ಭರತ ಮಹಾರಾಜನ ನೆನಪಿಗಾಗಿ ಭರತ ಖಂಡ, ಭರತ ವರ್ಷ ಇತ್ಯಾದಿ ಕರೆದುಕೊಂಡು ನಂತರ ಭಾರತ ಎಂದು ಕರೆದರು. ಮಹಾಭಾರತ ಕಾಲದ ಕುರು ಸಾಮ್ರಾಜ್ಯ ಇಂದಿನ ದೆಹಲಿ ಹರಿಯಾಣ ಮತ್ತು ಉತ್ತರ ಪ್ರದೇಶ ಮಾತ್ರವಾಗಿತ್ತು. ಅಕ್ಕ ಪಕ್ಕ ಅನೇಕ ಜನಪದಗಳೂ ಸಾಮ್ರಾಜ್ಯಗಳೂ ಇದ್ದವು.

ಹಾಗೆ ನೋಡಿದರೆ ಭರತ ಖಂಡ ಭರತ ವರ್ಷ ಇತ್ಯಾದಿ ವಿಂದ್ಯ ಪರ್ವತ ಶ್ರೇಣಿಯ ದಕ್ಷಿಣ ಭಾಗದ ಪ್ರದೇಶಕ್ಕೆ ಯಾವುದೇ ಐತಿಹಾಸಿಕ ಪೌರಾಣಿಕ ಸಂಬಂಧವೇ ಇಲ್ಲ. ವಿಂದ್ಯ ಶ್ರೇಣಿಯ ದಕ್ಷಿಣದ ವಿಶಾಲ ಭೂ ಭಾಗ ಇಂದಿನ ಗುಜರಾತ್, ಭಾಗಶಃ ಮಧ್ಯ ಪ್ರದೇಶ, ಒಡಿಶಾ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು ಇತ್ಯಾದಿ.

ಅಂದರೆ ದಕ್ಷಿಣದ ಭೂ ಖಂಡವನ್ನು ಭಾರತ ಅನ್ನಲಾಗದು. ಯಾಕೆಂದರೆ ಭರತನಿಗೂ ಇದಕ್ಕೂ ಸಂಬಂಧ ಇಲ್ಲ.

ಕಬ್ಬಿಣ ಯುಗದ ಮಹಾಭಾರತ ಕಾಲದ ಸಾವಿರಾರು ವರ್ಷಗಳ ಹಿಂದೆ ಇದ್ದ ಕಂಚಿನ ಯುಗದ ಸಿಂಧೂ ನಾಗರಿಕತೆಯನ್ನು ಪರ್ಷಿಯನ್ ಇತಿಹಾಸಕಾರರು ಹಿಂದೂ ನಾಗರಿಕತೆ ಅಂದರು. ಇಂದಿನ ಇರಾನ್ ಕಡೆಯಿಂದ ಬಂದ ಪರ್ಷಿಯನ್ನರು ಇಂದಿನ ಪಾಕಿಸ್ತಾನದಲ್ಲಿರುವ ಸಿಂಧು ನದಿಯ ಪಶ್ಚಿಮ ತಟ ಪ್ರದೇಶವನ್ನು ಕುರಿತು ಬರೆಯುತ್ತಿದ್ದರು. ಅದನ್ನೇ ಪಾಶ್ಚಿಮಾತ್ಯ ಇತಿಹಾಸಕಾರರು ಇಂಡಸ್ ನದಿ ಮತ್ತು ಅದರ ತಟವರ್ತಿ ಪ್ರದೇಶವನ್ನು ಇಂಡಿಯಾ ಅಂದರು. ಹೀಗೆ ನೋಡಿದರೆ ಇಂಡಿಯಾ ಅಂದರೆ ಇಂದಿನ ಹರಿಯಾಣ ಪಂಜಾಬ್ ಮತ್ತು ಇಡೀ ಪಾಕಿಸ್ತಾನ ಪ್ರದೇಶವನ್ನು ಸೂಚಿಸುತ್ತದೆ.

ಅಲ್ಲಿಗೆ ಇಂದಿನ ನಮ್ಮ ದೇಶಕ್ಕೆ ಇಂಡಿಯಾ ಅನ್ನುವುದೂ ಕೂಡ ಆಭಾಸವೇ !

ಹಿಂದೂ ಒಂದು ಧರ್ಮ ಅಲ್ಲ ಅದೊಂದು ಪ್ರದೇಶದ ನಾಗರಿಕತೆ -ಸರಿಯಾಗಿ ಹೇಳಬೇಕೆಂದರೆ ಇಂದಿನ ಪಾಕಿಸ್ತಾನ ಪ್ರದೇಶದಲ್ಲಿ ಅಂದು ಇತ್ತು ಎನ್ನಲಾದ ನಾಗರೀಕತೆ. ಇನ್ನು ಸನಾತನ ಧರ್ಮ. ಸಿಂಧೂ ನಾಗರಿಕತೆ ಕುಸಿದಂತೆ ಪರ್ಷಿಯಾ ಪ್ರದೇಶದಿಂದ ಬಂದು ಸೆಟಲ್ ಆದ ಜನ ಬದುಕಿನ ಸಂಹಿತೆಯಾಗಿ ವೇದಗಳನ್ನು ಬರೆದುಕೊಂಡು ಅವುಗಳನ್ನು ಬರೆದವರು ಆರ್ಯರೂ ಇಲ್ಲಿನ ಸಿಂಧೂ ನಾಗರಿಕತೆಯ ಉಳಿಕೆ ಜನ ದಸ್ಯುಗಳೂ ಅಂತ ವಿಂಗಡಿಸಿ ಮುಂದೆ ಮತ್ತೇನೇನೋ ಸ್ಮೃತಿಗಳನ್ನು ಬರೆದುಕೊಂಡು ಇಷ್ಟೇ ಲೈಫು ಇದರ ಮೇಲೆ ಇನ್ನೇನೂ ಬದಲಾಗಲು ಸಾಧ್ಯವಿಲ್ಲ ಇದೇ ಅನವರತ ಅಂದುಕೊಂಡು ಅದಕ್ಕೆ ಸನಾತನ ಧರ್ಮ ಎಂದರು. ಆಗ ಜಗತ್ತಿನಲ್ಲಿ ಇನ್ನೊಂದು ಧರ್ಮ ಅಂತ ಇದ್ದಿದ್ದು ಯಹೂದಿಗಳ ಧರ್ಮ. ಅದೂ ದೂರದ ಇಂದಿನ ಸಿರಿಯಾ ಸುತ್ತ ಮುತ್ತ. ಹೀಗಾಗಿ ಧರ್ಮ ಧರ್ಮಗಳ ಮಧ್ಯೆ ಯುದ್ಧ ಸಂಘರ್ಷ ಸಾಧ್ಯವೇ ಇರಲಿಲ್ಲ. ಹೀಗಾಗಿ ಇವರಿಗೆ ಇದೇ ಶಾಶ್ವತ ಅನಿಸಿ ಅದಕ್ಕೆ ಸನಾತನ ಅಂದರು. ಮುಂದೆ ಬುದ್ಧ ಜೈನ ಇತ್ಯಾದಿ ಮಹನೀಯರುಗಳು ಸನಾತನದ ಅನೇಕ ವಿಷಯಗಳನ್ನು ಅಲ್ಲ ಗಳೆದರು. ಅದು ಬೇರೆ ಮಾತು.

ಸೋ ಮಜಾ ಏನಪ್ಪಾ ಅಂದರೆ ಈ ಹಿಂದೂ, ಹಿಂದುಸ್ತಾನ, ಸನಾತನ, ಇಂಡಿಯಾ, ಭಾರತ ಇತ್ಯಾದಿ ನಮ್ಮ ಇಂದಿನ ಇಡೀ ದೇಶ ಮತ್ತು ಸಮಗ್ರ ನಾಗರೀಕತೆಗೆ ಐತಿಹಾಸಿಕವಾಗಿ ತಾಳೆ ಹೊಂದುವುದಿಲ್ಲ. ಇದನ್ನು ಬಿಡಿ.

ನಮ್ಮ ದೇಶಕ್ಕೆ ಪ್ರಸ್ತುತ ಮತ್ತು ಒರಿಜಿನಲ್ ಮತ್ತು ಯಾವ ಕಲಬೆರಕೆ ಇಲ್ಲದೆಯೇ ಐತಿಹಾಸಿಕ ನಿರಂತರತೆಯನ್ನು ಉಳಿಸಿಕೊಂಡ ಸಂಸ್ಕೃತಿ ಕನ್ನಡದ ಚಾಲುಕ್ಯ ಪರಂಪರೆ. ದಕ್ಷಿಣದ ಕಾವೇರಿಯಿಂದ ಉತ್ತರದ ನರ್ಮದೆಯ ವರೆಗೆ ಹಬ್ಬಿದ್ದ ಚಾಲುಕ್ಯ ಸಾಮ್ರಾಜ್ಯದ ಪ್ರದೇಶ ಇಂದಿನ ಸ್ವಲ್ಪ ಭಾಗ ತಮಿಳುನಾಡು, ಇಡೀ ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಗುಜರಾತ್ ಇತ್ಯಾದಿಗಳನ್ನು ಒಳಗೊಳ್ಳುತ್ತದೆ. ಇದೇ ಚಾಲುಕ್ಯ ವಂಶಸ್ಥರ ಆಳ್ವಿಕೆಯಲ್ಲಿ ಸಾಮಾಜಿಕ ನ್ಯಾಯ, ಕಾಯಕ ಆಧಾರಿತ ಅರ್ಥ ವ್ಯವಸ್ಥೆ ಜೊತೆಗೆ ಆದ್ಯಾತ್ಮ ಸಾಧನೆ ಎಲ್ಲವನ್ನು ಒಗ್ಗೂಡಿಸಿದ್ದು ಬಸವಣ್ಣ. ಜಗತ್ತಿನ ಯಾವ ಮೂಲೆಯಲ್ಲಿಯೂ ಇಂದಿಗೂ ಸಮಾಜ ಮತ್ತು ವ್ಯಕ್ತಿಯ ಸಮಗ್ರ ಕಲ್ಯಾಣದ ಇಂತಹ ಪ್ರಯೋಗ ಆಗಿಲ್ಲ.

ಆದ್ದರಿಂದ ಈ ದೇಶಕ್ಕೆ ಬಸವ ನಾಡು ಅಂತ ಹೆಸಿರಿಟ್ಟು. ಬಸವಣ್ಣ ಈ ಇಡೀ ದೇಶದ ಸಾಂಸ್ಕೃತಿಕ ಮೂಲ ಎಂದು ಘೋಷಣೆ ಮಾಡಿ ಎಂದು ಮೋದಿ ಸರಕಾರಕ್ಕೆ ಆಗ್ರಹಿಸುತ್ತೇನೆ. ಯಾವುದು ಡೆಂಘಿ ಯಾವುದು ಕೊರೋನಾ ಅದೆಲ್ಲ ವಿವಾದ ಪಕ್ಕಕ್ಕೆ ಇಡಿ. ಸಕಲ ರೋಗಗಳಿಗೂ ಬಸವನೇ ಮದ್ದು.

ಇಂತಿ ಶರಣು ಶರಾರ್ಥಿ,
ಡಾ ಬಸವರಾಜ್ ಇಟ್ನಾಳ

Address


Website

Alerts

Be the first to know and let us send you an email when Basavaraj Itnal Infotainment posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share