25/05/2026
ಸಿಗರೇಟ್ ಹೊಗೆ ಬಿಟ್ಟ ವಿಷ್ಯಕ್ಕೆ ಕೊ**
ರಸ್ತೆಗೆ ಇಳಿದ್ರಿ ಅಂದ್ರೆ ತುಂಬಾನೇ ಹುಷಾರ್ ಆಗಿರ್ಬೇಕು. ಗೊತ್ತು ಪರಿಚಯ ಇಲ್ಲದವ್ರ ಜೊತೆ ಮಾತಾಡೋದಕ್ಕೂ ಯೋಚನೆ ಮಾಡ್ಬೇಕು. ಯಾಕಂದ್ರೆ, ಎಂತೆಂಥಾ ವಿಷ್ಯಕ್ಕೆಲ್ಲಾ ಕೊ** ಮಾಡ್ತಿದ್ದಾರೆ ನೋಡಿ. ಬಾಗಲೂರಿನ ಮಹಮದ್ ಶಫಿ ಅನ್ನೋ ವ್ಯಕ್ತಿ ಅಬ್ಬಿಗೆರೆ ಮುಖ್ಯರಸ್ತೆಯಲ್ಲಿರೋ ಬಾ**ರ್ ಮುಂದೆ ಆಟೋ ನಿಲ್ಲಿಸ್ಕೊಂಡು ಪೆಗ್ ಹಾಕ್ತಿದ್ದ. ಇದೇ ವೇಳೆ ಮೂವರು ಯುವಕರು ಎ**ಣ್ಣೆ ಹೊಡೆಯೋದಕ್ಕೆ ಬಂದಿದ್ರು. ಆದ್ರೆ, ರಾತ್ರಿ 11.30 ಆಗಿದ್ರಿಂದ ಎಲ್ಲರನ್ನ ಹೊರಗೆ ಕಳಿಸಿ ಬಾರ್ ಕ್ಲೋಸ್ ಮಾಡಿದ್ರು. ಈ ವೇಳೆ ಹೊರಬಂದ ದರ್ಶನ್, ಶಫಿಯ ಆಟೋ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಸಿಗರೇಟ್ ಹೊಗೆ ಬಿಟ್ಟಿದ್ದಾನೆ. ಅದು ಶಫಿ ಕಡೆ ಹೋಗಿತ್ತಂತೆ. ಇದೇ ವಿಷ್ಯಕ್ಕೆ ಜ**ಗಳ ಶುರುವಾಗಿದೆ. ಮಾತಿಗೆ ಮಾತು ಜೋರಾಗ್ತಿದ್ದಂತೆ ರೊಚ್ಚಿಗೆದ್ದ ದರ್ಶನ್, ಡ್ರ್ಯಾ**ಗರ್ ಇರಿ**ದು ಕೊಂ** ಹಾಕಿದ್ದಾನೆ.