NKTV ಆನೇಕಲ್

NKTV ಆನೇಕಲ್ ಸಮಾಜದ ಒಳಿತಿಗಾಗಿ

27/10/2025

ಸಾರ್ವಜನಿಕ ಸುರಕ್ಷತಾ ಕ್ರಮಗಳ ಕುರಿತು ಮಾಧ್ಯಮವನ್ನು ಉದ್ದೇಶಿಸಿ ಬೆಂಗಳೂರಿನ ಪೊಲೀಸ್ ಆಯುಕ್ತರ ಸುದ್ದಿಗೋಷ್ಠಿ

26/10/2025

ಆನೇಕಲ್ ತಾಲೂಕಿನ ಸರ್ಜಾಪುರ ಮುಖ್ಯ ರಸ್ತೆಯ ದೊಮ್ಮಸಂದ್ರ ಗ್ರಾಮದ ಟಿಸಿ ಹಳ್ಳಿ ಗೇಟ್ ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಕೇಕ್ ಪಾಯಿಂಟ್ 24 ಎಂಬ ಬೇಕರಿಯಲ್ಲಿ ವಿಶೇಷವಾಗಿ ಬಗೆ ಬಗೆಯ ಕೇಕ್, ಬೇಕ್ರಿ ತಿಂಡಿಗಳು, ಬಿಸ್ಕೆಟ್ ಗಳು ರುಚಿಯ ಜೊತೆಗೆ ಸ್ವಚ್ಛತೆ ಯನ್ನು ಸಹಾ ಪಾಲಿಸುತ್ತಿದ್ದಾರೆ.

26/10/2025

ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜಾಪುರ ಗ್ರಾಮದ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಉಚಿತ ಆರೋಗ್ಯ ಸೇವಾ ಚಟುವಟಿಕೆ ಶಿಬಿರದಲ್ಲಿ ಶ್ರೀಮದ್ ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠ, ನಿಸರ್ಗ ಸೇವಾ ಸಂಸ್ಥೆ, ಲಯನ್ಸ್ ಕ್ಲಬ್ ರಾಗಿನಾಡು ಆನೇಕಲ್, ಚಂದಾಪುರ ನೊಬೆಲ್, ಬಿಟಿಎಂ ನೈಟಿಂಗೇಲ್, ಹೆನ್ನಾಗರ ಗ್ರಾಮ ಪಂಚಾಯಿತಿ, ನಿಸರ್ಗ ದೃಷ್ಟಿಧಾಮ ವತಿಯಿಂದ ಉಚಿತ ನೇತ್ರ, ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ 200 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ಮಾಡಿ ಸುಮಾರು 80 ಜನರಿಗೆ ಸ್ಥಳದಲ್ಲಿ ಉಚಿತ ಔಷಧಿ, 10 ಜನ ವೃದ್ಧರಿಗೆ ಉಚಿತ ನೇತ್ರ ಪೊರೆ ಶಸ್ತ್ರಚಿಕಿತ್ಸೆ ದಾಖಲು, 15 ಜನ ಲಯನ್ ಸದಸ್ಯರಿಂದ ರಕ್ತದಾನ, ಸುಮಾರು 50 ಜನರಿಗೆ ರಿಯಾಯಿತಿ ದರದಲ್ಲಿ ಕನ್ನಡಕ, ಕೀಲು, ಮೂಳೆ, ಸ್ತ್ರೀ ರೋಗ, ಕಿವಿ, ಮೂಗು, ಗಂಟಲು, ಬಿಪಿ & ಮಧುಮೇಹ ಪರೀಕ್ಷೆಗಳನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಿಸರ್ಗ ಸೇವಾ ಸಂಸ್ಥೆಯ ಅಧ್ಯಕ್ಷರಾದ ನಿಸರ್ಗ ದೇವರಾಜ್ ನಾಯಕ್, ಗುರುಕುಲ ಶಾಲೆಯ ಮುಖ್ಯಸ್ಥರಾದ ನಟರಾಜ್, ಕೋಮಲ, ಲಯನ್ಸ್ ಕ್ಲಬ್ ರಾಗಿನಾಡು ಅಧ್ಯಕ್ಷರಾದ ಲಯನ್ ಶ್ಯಾಮ್ ರಾಜ್, ಮಹದೇಶ, ರಂಜಿತ್, ಪ್ರಭಾಕರ್ ರೆಡ್ಡಿ, ದಿನೇಶ್, ಗೋಪಾಲ್ ರೆಡ್ಡಿ, ಲಯನ್ ಹೇಮಾ, ಶರಾವತಿ, ಡಾ.ಗುಣಸಿಂಗ್ ಗೌಡ, ದೃಷ್ಟಿಧಾಮದ ಕಿಶೋರ್ ಹಾಗೂ ಬೆಂಗಳೂರು ರಕ್ತನಿಧಿ ಕೇಂದ್ರ, ಆಕ್ಸ್ ಫರ್ಡ್ ಹಾಸ್ಪಿಟಲ್ ಮತ್ತು ಸಿಪಾನಿ ಹೆಲ್ತ್ ಕೇರ್ ನ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.

24/10/2025

#ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿ ದೊಮ್ಮಸಂದ್ರ ಗ್ರಾಮದ ಅಧ್ಯಕ್ಷರು ನರೇಶ್, ಇಂದು ಪತ್ರಿಕಾಗೋಷ್ಠಿ.

ಪಂಚಾಯಿತಿ ಸದಸ್ಯರು ನಾರಾಯಣಪ್ಪ (ಮೊದಲಿಯಾರ್) ಮತ್ತೊಬ್ಬ ಸದಸ್ಯ ಆರತಿಗೌಡ, ಒಂದು ವಾರದ ಹಿಂದೆ ಪತ್ರಿಕೆಗೋಷ್ಠಿ ನಡೆಸಿದ ಹಿನ್ನೆಲೆಯಲ್ಲಿ ಇಂದು ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಮಾಜಿ ಅಧ್ಯಕ್ಷರು ಗ್ರಾಮಸ್ಥರು ಎಲ್ಲಾರು ಸೇರಿ ಇಂದು ಆರೋಪಕ್ಕೆ ಪತ್ಯಾರೋಪ ಪತ್ರಿಕಾಗೋಷ್ಠಿ ನಡೆಸಿದರು.

ಅಧ್ಯಕ್ಷ ನರೇಶ್, ಅಕ್ರಮವಾಗಿ ಸರ್ಕಾರಿ ಜಮೀನುಗಳಲ್ಲಿ ಸಿಕ್ಕ ಸಿಕ್ಕ ಗ್ರಾಮಸ್ಥರಿಗೆ ಫಾರಂ ನಂಬರ್ ಮತ್ತು ನಮೂನೆ 9,10,11,12 ಹಾಕಿಕೊಟ್ಟಿದ್ದು ಎಂಬ ಆರೋಪ ಮಾಡಿದ್ದ ನಾರಾಯಣಪ್ಪ (ಮೊದಲಿಯಾರ್) ಇಂದು ಎಲ್ಲಾ ಆರೋಪಗಳಿಗೆ ಪತ್ರಿಕೆ ಗೋಷ್ಠಿಯಲ್ಲಿ ನಾವು ಯಾರಿಗೂ ಯಾವ ಆದಾರ ಯಾರಿಗೂ ಮಾಡಿಕೊಡಲಿಲ್ಲ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಯಲ್ಲಿ 32 ಸದಸ್ಯರು ಇದ್ದು ಎಲ್ಲರಿಗೂ ಭೇದಭಾವ ಇಲ್ಲದೆ ಎಲ್ಲರಿಗೂ ಸಮವಾಗಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

ಸರ್ಕಾರಿ ಜಾಗದಲ್ಲಿ ಸರ್ಕಾರಿ ಶಾಲೆಗೆ ಕಟ್ಟುವುದಕ್ಕೆ ಪಂಚಾಯಿತಿ ಅಧ್ಯಕ್ಷರು ನಿರಾಕಾರಣೆ ಮಾಡಿದಾರೆ ಎಂದು ಆರೋಪಕ್ಕೆ ಅಧ್ಯಕ್ಷ ನರೇಶ್, 180 ಸರ್ವೆ ನಂಬರ್ ನಲ್ಲಿ 16 ಗುಂಟೆ ಜಮೀನು ಬೆಸ್ಕಾಂ ಕಟ್ಟಬೇಕೆಂದು ಪಂಚಾಯಿತಿ ಅಧ್ಯಕ್ಷರು ಸದಸ್ಯರು ಒತ್ತಾಯ ನಾರಾಯಣಪ್ಪ ಸರ್ಕಾರಿ ಶಾಲೆ ಕಟ್ಟಬೇಕೆಂದು ಒತ್ತಾಯ ಈ ಒತ್ತಾಯಕ್ಕೆ ಮಾಜಿ ಅಧ್ಯಕ್ಷರು ಉಮೇಶ್ ಬಾಬು, ರವರು ಬೆಸ್ಕಾಂ ಕಟ್ಟಡ ಕಟ್ಟಿದರೆ ಮುಂದಿನ ದಿನಗಳಲ್ಲಿ ದೊಮ್ಮಸಂದ್ರ ನಿವಾಸಿಗಳುಗೆ ಪ್ರತಿಯೊಂದು ವಿದ್ಯುತ್ ಸಂಬಂಧಪಟ್ಟ ದೊಮ್ಮಸಂದ್ರ ಗ್ರಾಮದಲ್ಲಿ ಇರುತ್ತದೆ ಇಲ್ಲ ಎಂದರೆ ಪಕ್ಕದ ಗ್ರಾಮಗಳಿಗೆ ಹಳಿದಾಡಬೇಕಾಗುತ್ತದೆ ಎಂದು ತಿಳಿಸಿದರು.

24/10/2025

ಹಾಸನಾಂಬಾ ದೇವಿಗೆ ಭಕ್ತರು ನೀಡಿದ ಕಾಣಿಕೆಗಳನ್ನು ಎಣಿಸುವ ಕಾರ್ಯ

ಒಟ್ಟು ಕಾಣಿಕೆ ಮೊತ್ತ ₹3.69 ಕೋಟಿ ಎಂದು ಲೆಕ್ಕಿಸಲಾಯಿತು.
ಈ ವರ್ಷದ ಟಿಕೆಟ್ ಆದಾಯ ₹21.92 ಕೋಟಿ ಆಗಿದೆ.

ಅಕ್ಟೋಬರ್ 10 ರಿಂದ 22 ರವರೆಗೆ ಒಟ್ಟಾರೆ ಕಾಣಿಕೆ ಮತ್ತು ಟಿಕೆಟ್ ಆದಾಯ ಸೇರಿ ₹25.59 ಕೋಟಿ ಆಗಿದೆ.
ಇದರಲ್ಲಿ ಸುಮಾರು ₹8 ರಿಂದ ₹10 ಕೋಟಿ ರೂಪಾಯಿಗಳನ್ನು ಸಾರ್ವಜನಿಕ ವ್ಯವಸ್ಥೆ, ಪ್ರಸಾದ ವಿತರಣೆ, ಲಡ್ಡು ತಯಾರಿ, ವಿದ್ಯುತ್ ಅಲಂಕಾರ, ಹೂ ಅಲಂಕಾರ ಹಾಗೂ ಇತರೆ ಹಬ್ಬದ ಖರ್ಚುಗಳಿಗೆ ಬಳಸಲಾಗುತ್ತದೆ.
ಉಳಿದ ಮೊತ್ತವನ್ನು ದೇವಸ್ಥಾನದ ಖಾತೆಯಲ್ಲಿ ಠೇವಣಿಯಾಗಿಡಲಾಗುತ್ತದೆ.

ಆನೇಕಲ್ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು
24/10/2025

ಆನೇಕಲ್ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು

ಈ ಚಿತ್ರದಲ್ಲಿ ಇರುವ ಹೂವು "ಮೋಸ್ ರೋಸ್" (Moss Rose) ಅಥವಾ  (Portulaca grandiflora) ಎಂದು ಕರೆಯಲಾಗುತ್ತದೆ. ಇದು ಒಂದು ಚೆನ್ನಾಗಿ ಹೊಳಸ...
23/10/2025

ಈ ಚಿತ್ರದಲ್ಲಿ ಇರುವ ಹೂವು "ಮೋಸ್ ರೋಸ್" (Moss Rose) ಅಥವಾ (Portulaca grandiflora) ಎಂದು ಕರೆಯಲಾಗುತ್ತದೆ. ಇದು ಒಂದು ಚೆನ್ನಾಗಿ ಹೊಳಸುಳ್ಳಿದ ಹ್ಯಾನಗೊಟ್ಟು ಹಾಗೂ ಸೂಜಿಯಂತಿರುವ ಎಲೆಯನ್ನು ಹೊಂದಿದ್ದೆ.

ಈ ಗಿಡ ದ ಹೆಸರು ಹೇಳಿ.....
23/10/2025

ಈ ಗಿಡ ದ ಹೆಸರು ಹೇಳಿ.....

23/10/2025

ಬೆಂಗಳೂರು ನಗರ ಪೋಲಿಸ್ ಆಯುಕ್ತರಿಂದ ಸುದ್ದಿಗೋಷ್ಠಿ

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರವನಿತೆ ಕಿತ್ತೂರಿನ ರಾಣಿ ಚನ್ನಮ್ಮ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ನಾಡಿಗಾಗಿ ...
23/10/2025

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರವನಿತೆ ಕಿತ್ತೂರಿನ ರಾಣಿ ಚನ್ನಮ್ಮ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ನಾಡಿಗಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಕಿತ್ತೂರು ರಾಣಿ ಚನ್ನಮ್ಮ ಅವರ ಧೈರ್ಯ, ಸ್ವಾಭಿಮಾನ ನಮಗೆ ಸದಾ ಪ್ರೇರಣೆ.

ಕಾಣದ ಕಡಲಿಗೆ ಹಂಬಲಿಸಿದೆ ಮನ......
23/10/2025

ಕಾಣದ ಕಡಲಿಗೆ ಹಂಬಲಿಸಿದೆ ಮನ......

22/10/2025

2028 ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ....

ಕಾಮೆಂಟ್ box On..........

Address

Tilak Circle, Anekal Town
Anekal
562106

Alerts

Be the first to know and let us send you an email when NKTV ಆನೇಕಲ್ posts news and promotions. Your email address will not be used for any other purpose, and you can unsubscribe at any time.

Share