NKTV ಆನೇಕಲ್

NKTV ಆನೇಕಲ್ ಸಮಾಜದ ಒಳಿತಿಗಾಗಿ

05/08/2025

ನಾಲ್ಕು ವರ್ಷ ಆರು ತಿಂಗಳು ಕೋರ್ಟು ಮೆಟ್ಟಿಲು ಹತ್ತಿ ನ್ಯಾಯ ಗೆದ್ದು ಬಂದು ಗ್ರಾಮ ಪಂಚಾಯಿತಿ ಸದಸ್ಯರಾದ.

ನಾರಾಯಣಸ್ವಾಮಿ (ಮೊದಲಿಯಾರ್) ರವರು ದೊಮ್ಮಸಂದ್ರ ಗ್ರಾಮ ಪಂಚಾಯಿತಿ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ 12ನೇ ವಾರ್ಡಿನ ಸದಸ್ಯರಾದ ಕೃಷ್ಣಾರೆಡ್ಡಿ ರವರು 2020 ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ನಾಮ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ತಮ್ಮ ಮೇಲೆ ಇದ್ದ ಕೇಸುಗಳ ಬಗ್ಗೆ ದಾಖಲಿಸದೆ ಸುಳ್ಳು ದಾಖಲೆಗಳನ್ನು ಜೊತೆಗೆ ನಾಮ ಪತ್ರ ಸಲ್ಲಿಸಿ ಚುನಾವಣೆಯಲ್ಲಿ ಗೆದ್ದಿದ್ದು, ಕೃಷ್ಣಾರೆಡ್ಡಿ ರವರ ವಿರುದ್ದ ಪರಾಭವಗೊಂಡಿದ್ದ ನಾರಾಯಣಸ್ವಾಮಿ (ಮೊದಲಿಯಾರ್) ರವರು ಪಂಚಾಯಿತಿ ಸದಸ್ಯರಾದ ಕೃಷ್ಣಾರೆಡ್ಡಿ, ರವರ ವಿರುದ್ದ ಚುನಾವಣೆ ಅದಿಕಾರಿಗಳಿಗೆ ಮತ್ತು ನ್ಯಾಯಾಲಯದಲ್ಲಿ ಭೂ ಕಬಳಿಕೆ ವಿಚಾರಕ್ಕೆ ಸಂಬಂದಿಸಿದ ಬಗ್ಗೆ ಕೇಸು ಹಾಕಿದ್ದು ಕಳೆದ 4 ವರ್ಷ 6 ತಿಂಗಳು ಕಾಲ ನ್ಯಾಯಾದೀಶರು ಇಬ್ಬರು ವ್ಯಕ್ತಿಗಳ ವಿಚಾರಗಳನ್ನು ಮತ್ತು ದಾಖಲೆಗಳನ್ನು ವಿಮರ್ಶೆ ಮಾಡಿ ಕಳೆದ ವಾರ ದೊಮ್ಮಸಂದ್ರ ಗ್ರಾಮ ಪಂಚಾಯಿತಿಯ 12ನೇ ವಾರ್ಡಿನ ಸದಸ್ಯರಾದ ಕೃಷ್ಣಾರೆಡ್ಡಿ ರವರನ್ನು ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ರದ್ದು ಮಾಡಿ ವಜಗೊಳಿಸಿದ್ದಾರೆ,

ಇನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿ ನಾಮಪತ್ರ ಸಲ್ಲಿಸಿದ ದೊಮ್ಮಸಂದ್ರ ಗ್ರಾಮ ಪಂಚಾಯಿತಿ 12ನೇ ವಾರ್ಡಿನ ನಾರಾಯಣಸ್ವಾಮಿ (ಮೊದಲಿಯಾರ್) ರನ್ನು ಗ್ರಾಮ ಪಂಚಾಯಿತಿ ಸದಸ್ಯರೆಂದು ನ್ಯಾಯಾದೀಶರು ಆದೇಶ ನೀಡಿದ್ದು ಇಂದು ದೊಮ್ಮಸಂದ್ರ ಗ್ರಾಮ ಪಂಚಾಯಿತಿಗೆ ನ್ಯಾಯಾಲಯದ ಆದೇಶ ಪತ್ರವನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರನ್ನು ಜೊತೆಗೂಡಿಸಿಕೊಂಡು ಗ್ರಾಮದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನಾರಾಯಣಸ್ವಾಮಿ (ಮೊದಲಿಯಾರ್) ತಿಳಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಮುಖಂಡರಾದ ಸದಸ್ಯರು ಜಯದೇವ್, ಆರತಿಗೌಡ. ಪುನೀತಮ್ಮ.ಸುರೇಶ್ ರೆಡ್ಡಿ. ವಿಕಾಸ್ ರೆಡ್ಡಿ, ಧನಲಷ್ಮೀ. ಗೋವಿಂದರಾಜ್. ಅಜಯ್ ಕುಮಾರ್. ಶಿವಶಂಕರ್. ಸುಬ್ಬು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ರವೀಂದ್ರ, ಮುನಿರಾಜು. ಟಿಸಿ,ಹಳ್ಳಿ ಸುಶೀಲಮ್ಮ. ಬಾಸ್ಕರ್ ರೆಡ್ಡಿ, ಮತ್ತಿತರು ಹಾಜರಿದ್ದರು.

02/08/2025

ದಿನಾಂಕ : 02-08-2025, ಮಧ್ಯಾಹ್ನ 3.00 ಗಂಟೆಗೆ
ಫ್ರೀಡಮ್ ಪಾರ್ಕ್, ಬೆಂಗಳೂರು ನಲ್ಲಿ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಮೇರಿ ಇವರ ಬಂಧನವನ್ನು ಖಂಡಿಸಿ ಪ್ರತಿಭಟನೆ,

ಇನ್ನು ಛತ್ತೀಸ್‌ಗಢದಲ್ಲಿ ಬಲವಂತದ ಮತಾಂತರದ ಆಧಾರ ರಹಿತ ಆರೋಪಗಳ ಮೇಲೆ ಬಂಧಿಸಲಾಗಿರುವ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಮೇರಿ ಇವರ ಬಂಧನವನ್ನು ಖಂಡಿಸಿ, ಶೀಘ್ರವಾಗಿ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನೆ

ಇನ್ನು ಆನೇಕಲ್ ಧರ್ಮಕೇಂದ್ರ ವತಿಯಿಂದ
ಧರ್ಮಕೇಂದರ ಗುರುಗಳು, JMJ ಕುಮಾರ್, ಸಿಸ್ಟರ್ ಹಾಗೂ ಕ್ರೈಸ್ತ ಬಂದವರು ಸೇರಿ ಆನೇಕಲ್ ನಲ್ಲಿ ಪ್ರತಿಭಟಿಸಿದರು,

31/07/2025

ದರ್ಶನ್‌ ಫ್ಯಾನ್ಸ್‌ ಅಂತ 100% ಹೇಗೆ ಹೇಳೋಕಾಗುತ್ತೆ: ಲೂಸ್‌ ಮಾದ ಯೋಗಿ

30/07/2025

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ರೈತರು ಮತ್ತು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯೂ ತಾಲ್ಲೂಕಿನ ಮುತ್ತಾನಲ್ಲೂರಿನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾಧಿ ಧರಣಿ ಸೋಮವಾರ 20 ಪೂರೈಸಿದ್ದು, ಹೋರಾಟಕ್ಕೆ ಕನ್ನಡಪರ ಮತ್ತು ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿದವು.

29/07/2025

ದರ್ಶನ್‌ ಬರುವ ತನಕ ನಾನು ಇಲ್ಲಿಂದ ಹೋಗಲ್ಲ - ಫಿಲ್ಮಂ ಚೇಂಬರ್‌ ಬಳಿ ನಟ ಪ್ರಥಮ್‌ ಪಟ್ಟು

29/07/2025

ದರ್ಶನ್‌ ಫ್ಯಾನ್ಸ್‌ ವಿರುದ್ಧ SP ಕಚೇರಿ ಮುಂದೆ ಪ್ರಥಮ್‌ ಪ್ರೊಟೆಸ್ಟ್‌

08/07/2025

ಲಯನ್ಸ್ ಕ್ಲಬ್ ಚಂದಾಪುರ ನೋಬೆಲ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.

ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಳೆ ಚಂದಾಪುರದ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.

ಆನೇಕಲ್ ತಾಲ್ಲೂಕಿನ ಲಯನ್ಸ್ ಕ್ಲಬ್ ಚಂದಾಪುರ ನೋಬಲ್, ಸಂಸ್ಥೆಯು ನಿಸ್ವಾರ್ಥವಾಗಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಚಂದಾಪುರದಲ್ಲಿ ಮಾದರಿ ಕ್ಲಬ್ ಆಗಿದೆ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಡಾ.ಪಿ‌ಆರ್‌ಎಸ್.ಚೇತನ್ ತಿಳಿಸಿದರು.

ತಾಲ್ಲೂಕಿನ ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ಏರ್ಪಡಿಸಿದ್ದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಲಯನ್ಸ್‌ ಕ್ಲಬ್‌ ವೇದಿಕೆಯಾಗಿದೆ. ಉಚಿತ
ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ತಪಾಸಣಾ ಶಿಬಿರ, ನೇತ್ರ ಉಚಿತ ಶಸ್ತ್ರ ಚಿಕಿತ್ಸೆ, ಶಾಲಾ-ಕಾಲೇಜುಗಳಿಗೆ ಅಗತ್ಯ ಪರಿಕರಗಳನ್ನು ನೀಡುವುದು, ಅಂಗವಿಕಲರ ಶಾಲೆಗಳ ಅಭಿವೃದ್ಧಿಗೆ ಸಹಾಯ, ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಸಂಸ್ಥೆಯು ಬೆಳಕಾಗುತ್ತಿದೆ ಎಂದರು.

ಸೇವಾ ಮನೋಭಾವ ಎಂಬ ಕಾರ್ಯಕ್ರಮದ ಅಡಿಯಲ್ಲಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗೆ ಲ್ಯಾಪ್‌ಟಾಪ್, ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಉತ್ಸಾಹ ಧನ ಹಾಗು ಸಿಪಾನಿ ಡಯಾಲಿಸಿಸ್ ಗೆ ಸಹಾಯಧನ ವಿತರಿಸಲಾಯಿತು.

ಲಯನ್ಸ್ ಕ್ಲಬ್ ಚಂದಾಪುರ ನೋಬಲ್ ನ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಅವರೊಂದಿಗೆ ಕಾರ್ಯದರ್ಶಿ ದಿನೇಶ್ ΗК, ಖಜಾಂಚಿ ಗೋಪಾಲ್ ರೆಡ್ಡಿ ಪದಗ್ರಹಣ ಸ್ವೀಕರಿಸಿದರು.

ಪದಗ್ರಹಣ ಸ್ವೀಕರಿಸಿದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಚಂದಾಪುರದ 28 ಸರ್ಕಾರಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಹಾಗೆಯೆ ಈ ಹಿಂದೆ ನಡೆಸಿಕೊಂಡು ಬಂದಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಜೊತೆಗೆ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಮಾಜ ಸೇವೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗುವುದು ಎಂದರು.

ಒಟ್ಟಾರೆ ಕಾರ್ಯಕ್ರಮದ ನಿರೂಪಣೆಯನ್ನು ದೇವರಾಜ್ ನಾಯಕ್ (ನಿಸರ್ಗ) ನಡೆಸಿಕೊಟ್ಟರು.

ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್‌ ಜಿಲ್ಲಾ 2ನೇ ಉಪರಾಜ್ಯಪಾಲ ಡಾ.ಏಂತಿ ರಂಗಾ ರೆಡ್ಡಿ, ಸಿ.ವಿ.ಭಾನುಮೂರ್ತಿ ರೆಡ್ಡಿ, ರೇಣುಕಾ ಪ್ರಕಾಶ್, ಮಂಜುನಾಥ್.ಕೆ.ಎನ್, ನಿಕಟಪೂರ್ವ ಅಧ್ಯಕ್ಷರಾದ ಮಧು ಎನ್ ರಡ್ಡಿ ಸೇರಿ ಇತರರು ಉಪಸ್ಥಿತರಿದ್ದರು.

08/07/2025

#ಲಿಂಗಾಪುರ #ಆನೇಕಲ್ #ಬೆಂಗಳೂರು
ಲಿಂಗಾಪುರ ಗ್ರಾಮದ ಮುತ್ತುರಾಯ ಸ್ವಾಮಿ ಮತ್ತು ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದಲ್ಲಿ ಮುತ್ತುರಾಯ ಸ್ವಾಮಿ ಮತ್ತು ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ 5ಕ್ಕೂ ಹೆಚ್ಚು ಗ್ರಾಮದೇವತೆಗಳ ಉತ್ಸವ ಮೂರ್ತಿಗಳನ್ನು ಗ್ರಾಮಸ್ಥರು ಪೂಜೆ ಸಲ್ಲಿಸಿ ದೇವರುಗಳನ್ನು ಹೊಳೆ ಮೆಟ್ಟಿಸಲು ಗ್ರಾಮದಿಂದ ಒಂದು ಕಿ.ಮೀ.ದೂರದಲ್ಲಿರುವ ಕೆರೆಯ ಬಳಿಗೆ ವಾಧ್ಯದೊಂದಿಗೆ ಮೆರವಣಿಗೆಯ ಮೂಲಕ ತೆರಳಲಾಯಿತು. ಸಂಜೆ 3.40ರ ಸುಮಾರಿಗೆ ಮುತ್ತುರಾಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡವನ್ನು ದೇವರ ಉತ್ಸವ ಮೂರ್ತಿಯನ್ನು ಹೊತ್ತು ಅರ್ಚಕರು ಹಾಯ್ದರು. ಭಕ್ತರು ದಬ್ಬಲ ಚುಚ್ಚಿದ ಶೂಲಗಳನ್ನು ಚುಚ್ಚಿಕೊಂಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಖತ್ತಿಯಿಂದ ತಮ್ಮ ದೇಹಕ್ಕೆ ಹೊಡೆದುಕೊಂಡು ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದ ಹತ್ತಕ್ಕೂ ಹೆಚ್ಚು ಗ್ರಾಮದೇವತೆಗಳ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಗ್ನಿಕೊಂಡವನ್ನು ಹಾಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. 2 ಕಿ.ಮೀ.ಗೂ ಹೆಚ್ಚು ದೂರ ಮೆರವಣಿಗೆ ಸಾಗಿತು. ತಮಟೆಯ ಸದ್ದಿಗೆ ಭಕ್ತರು ಕತ್ತಿ ಹಿಡಿದು ಭಾವೋದ್ಘೋಷಕ್ಕೆ ಒಳಗಾಗಿದ್ದ ದೃಶ್ಯ ಕಂಡು ಬಂದಿತು. ಆಂಜನೇಯ ವೇಷಧಾರಿಯು ಮೆರವಣಿಗೆಗೆ ಮೆರುಗು ನೀಡಿದರು.

ಸ್ವಾಮಿಯ ದರ್ಶನಕ್ಕೆ ಬಂದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಆಯೋಜಿಸಲಾಗಿತ್ತು.

08/07/2025

ಯಶಸ್ವಿಯಾಗಿ ನಡೆದ ಕೊಡತಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆ ವೀಣಾ ರವಿ ರವರ ಪದಗ್ರಹಣ ಕಾರ್ಯಕ್ರಮ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೊಡತಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸ್ವಾಭಿಮಾನ ಬಣದ ಅಭ್ಯರ್ಥಿ ವೀಣಾ ರವಿ ರವರು ಗೆಲುವು ಸಾದಿಸಿದ್ದು ಇಂದು ಕೊಡತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷರು ವಿಶೇಷ ಲಕ್ಷ್ಮಿ ಪೂಜೆ ನಂತರ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದರು.

ಇನ್ನು ವಿಶೇಷ ಲಕ್ಷ್ಮಿ ಪೂಜೆಯಲ್ಲಿ ಅಧ್ಯಕ್ಷೆ ವೀಣಾ ರವಿ ರವರ ಜೊತೆಗೆ ಉಪಾಧ್ಯಕ್ಷ ಮಂಜುನಾಥ್ ಭಾಗವಹಿಸಿದ್ದರು. ಹಾಗೇಯೇ ಅಧಿಕಾರ ಸ್ವೀಕರಿಸುವ ಸಮಯದಲ್ಲಿ ಮಾಜಿ ಸಚಿವ ಎಚ್.ನಾಗೇಶ್ ಭಾಗವಹಿಸಿ ಹೂಗುಚ್ಚ ನೀಡುವ ಮೂಲಕ ಶುಭಾ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಸನ್ಮಾನಿಸಿ ಬಾಗಿನ ನೀಡಿದರು ಮತ್ತು ಪಂಚಾಯಿತಿ ಸಿಬ್ಬಂದಿ ಹಾಗೂ ವಾಟರ್ ಮ್ಯಾನ್ ಗಳಿಗೆ ಸಮವಸ್ತ್ರ ನೀಡಲಾಯಿತು.

ಇನ್ನು ಇದೇ ಸಂಧರ್ಭದಲ್ಲಿ ಕೊಡತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವೀಣಾ ರವಿ ರವರಿಗೆ ಗಣ್ಯರು, ಚುನಾಯಿತ ಪ್ರತಿನಿಧಿಗಳು ಮುಖಂಡರು ಹಾಗೂ ಸ್ನೇಹಿತರು ಬೃಹತ್ ಹೂವಿನ ಹಾರ ಹಾಕಿ, ಹೂಗುಚ್ಚ ನೀಡುವ ಮೂಲಕ ಶುಭಾಶಯ ಕೋರಿದರು.

ಕೊಡತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೃಷ್ಣವೇಣಿ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ರಮೇಶ್ ರೆಡ್ಡಿ, ಆಶಾ ಚಿಟಿಬಾಬು, ನಾರಾಯಣ ಸ್ವಾಮಿ ಬಾಬು, ಮಮತಾ ಲಕ್ಷ್ಮಣ್, ನಲಿನಾಕ್ಷಿ, ನಂಜುಂಡ ರೆಡ್ಡಿ, ಶಿವಕುಮಾರ್, ಸತೀಶ್, ರಾಮಸ್ವಾಮಿ, ಮುನಿರಾಜು, ಅಂತೋನಿ ಮೇರಿ, ಯಲ್ಲಮ್ಮ ಶ್ರೀನಿವಾಸ್, ಸಮಾಜ ಸೇವಕರು ಸದಾಶಿವ ರೆಡ್ಡಿ, ಕಾಂಗ್ರೆಸ್ ಮುಖಂಡರು ವರ್ತೂರು ಸುನಿಲ್, ಕುಪ್ಪಿ ಮಂಜುನಾಥ್, ಹಾಗೂ ಸಾರ್ವಜನಿಕರು ಅಭಿಮಾನಿಗಳು ಸೇರಿ ಇತರರು ಉಪಸ್ಥಿತರಿದ್ದರು.

06/07/2025

ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿಯ ಐ.ಎಸ್‌.ಬಿ.ಆರ್ ಕಾಲೇಜಿನಲ್ಲಿ ಪಿಜಿಡಿಎಂ ತರಗತಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ಅತಿಥಿಗಳನ್ನು ಸೀರೆಯುಟ್ಟ ರೋಬೊಟ್‌ ಗುಲಾಬಿ ಹೂ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಪಿಜಿಡಿಎಂ ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಟಾಟಾ ಹಿಟಾಚಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ಕೃತಕ ಬುದ್ಧಿಮತ್ತೆ ಸೇರಿದಂತೆ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ ಜೀವನದಲ್ಲಿ ಉನ್ನತ ಸಾಧನೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚಿನ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಗ್ಲೋಬಲ್ ಇಂಕ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಹಾಸ್ ಗೋಪಿನಾಥ್ ಮಾತನಾಡಿ ಪಿಜಿ ಡಿ ಎಂ ಪದವಿ ಹಂತದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಕಿರು ಉದ್ಯಮಗಳನ್ನು ಸ್ಥಾಪಿಸುವತ್ತ ಗುರಿ ಹೊಂದಬೇಕು. ಇದರಿಂದಾಗಿ ಹಾರ್ದಿಕವಾಗಿ ಲಾಭವಾಗುವುದರ ಜೊತೆಗೆ ಉತ್ತಮ ಸಂಪರ್ಕ ಬೆಳೆಯುತ್ತದೆ ಎಂದರು.

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್‌ನ ನಿರ್ದೇಶಕ ಡಾ.ಸಂಜಯ್ ತ್ಯಾಗಿ, ಐ.ಎಸ್‌.ಬಿ.ಆರ್‌ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮನಿಷ್ ಕೊತಾರಿ, ನೀನ್‌ಲಿಪ್‌ ಕಂಪನಿಯ ನಿರ್ದೇಶಕಿ ವೃಷ ರಘು, ಕಾಲೇಜಿನ ಆಡಳಿತ ಮಂಡಳಿಯ ಆನಂದ್ ರಾಮ್, ಮನೋಹರ್, ಚಂದ್ರ ನಿರಂಜನ್, ನೀಲಾ, ಕವಿತಾ ಮಧುಸೂದನ್, ಲಕ್ಷ್ಮೀನಾರಾಯಣ್, ನರಸಯ್ಯ ಇದ್ದರು.

05/07/2025

ಎಸ್‌.ಎಸ್‌‌.ವಿ ಶಾಲೆಯಲ್ಲಿ ಪೋಷಕರ ಪಾದಪೂಜೆ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ,

ಆನೇಕಲ್ ತಾಲೂಕಿನ ಕರ್ಪೂರ ಗ್ರಾಮ ಪಂಚಾಯಿತಿಯ ಬೀದರಗೆರೆ ಗ್ರಾಮದ ಸಮೀಪದಲ್ಲಿರುವ ಎಸ್.ಎಸ್.ವಿ ಶಾಲೆಯಲ್ಲಿ ಪೋಷಕರ ಪಾದ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇನ್ನು ಮುಖ್ಯ ಅತಿಥಿಯಾಗಿ ಅವಧೂತ ಶ್ರೀ ವಿನಯ್ ಗುರೂಜಿ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯ ಮತ್ತು ಸಂಸ್ಕಾರವನ್ನು ಶಾಲೆಯ ದಿನಗಳಿಂದಲೇ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿಕೊಡಬೇಕು, ಈ ಶಾಲೆ ವತಿಯಿಂದ ಪೋಷಕರ ಪಾದ ಪೂಜೆಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಇದನ್ನು ನಿರಂತರವಾಗಿ ಮಕ್ಕಳು ಮನೆಯಲ್ಲಿ ತಂದೆ ತಾಯಿಯ ಪಾದಕ್ಕೆ ನಮಸ್ಕರಿಸಿ ಶಾಲೆಗೆ ಬರಬೇಕು ಆಗ ಮಾತ್ರ ತಂದೆ ತಾಯಿ, ಗುರುಗಳಿಗೆ ಮತ್ತು ಸಮಾಜಕ್ಕೆ ಗೌರವ ತರುವಂತ ಪ್ರಜೆಯಾಗುತ್ತಾರೆ ಎಂದು ಅವಧೂತ ಶ್ರೀ ವಿನಯ್ ಗುರೂಜಿ ರವರು ಆಶೀರ್ವಚನ ನೀಡಿ ಹಾರೈಸಿದರು

ಕಾರ್ಯಕ್ರಮದಲ್ಲಿ ಅವಧೂತರು ಹಿರಿಯರಿಗೆ ಪಾದ ಪೂಜೆ ಮಾಡಿ ನಮಸ್ಕರಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಕರ್ಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯ ಹಾಲ್ದೇನಳ್ಳಿ ಹೆಚ್.ಎಂ ತಿಮ್ಮರಾಜು, ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಮಕ್ಕಳು ಪೋಷಕರು ಭಾಗವಹಿಸಿದ್ದರು.

04/07/2025

ಕಾಡುಜಕ್ಕನಹಳ್ಳಿ ಗ್ರಾಮದಲ್ಲಿ ನೂತನ ಅಕ್ಕಿ ವಿತರಣಾ ಕೇಂದ್ರದ ಉದ್ಘಾಟನೆ ಮತ್ತು ಸರ್ಕಾರಿ ನ್ಯಾಯ ಬೆಲೆ ಅಂಗಡಿ ಕಾಮಗಾರಿಗೆ ಭೂಮಿ ಪೂಜೆ.

Address

Tilak Circle, Anekal Town
Anekal
562106

Alerts

Be the first to know and let us send you an email when NKTV ಆನೇಕಲ್ posts news and promotions. Your email address will not be used for any other purpose, and you can unsubscribe at any time.

Share