ಸುದ್ದಿ ಸ್ಪರ್ಶ Suddi sparsha

ಸುದ್ದಿ ಸ್ಪರ್ಶ Suddi sparsha News & Entertainment

06/07/2025

ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿಯ ಐ.ಎಸ್‌.ಬಿ.ಆರ್ ಕಾಲೇಜಿನಲ್ಲಿ ಪಿಜಿಡಿಎಂ ತರಗತಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ಅತಿಥಿಗಳನ್ನು ಸೀರೆಯುಟ್ಟ ರೋಬೊಟ್‌ ಗುಲಾಬಿ ಹೂ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಪಿಜಿಡಿಎಂ ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಟಾಟಾ ಹಿಟಾಚಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ಕೃತಕ ಬುದ್ಧಿಮತ್ತೆ ಸೇರಿದಂತೆ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ ಜೀವನದಲ್ಲಿ ಉನ್ನತ ಸಾಧನೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚಿನ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಗ್ಲೋಬಲ್ ಇಂಕ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಹಾಸ್ ಗೋಪಿನಾಥ್ ಮಾತನಾಡಿ ಪಿಜಿ ಡಿ ಎಂ ಪದವಿ ಹಂತದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಕಿರು ಉದ್ಯಮಗಳನ್ನು ಸ್ಥಾಪಿಸುವತ್ತ ಗುರಿ ಹೊಂದಬೇಕು. ಇದರಿಂದಾಗಿ ಹಾರ್ದಿಕವಾಗಿ ಲಾಭವಾಗುವುದರ ಜೊತೆಗೆ ಉತ್ತಮ ಸಂಪರ್ಕ ಬೆಳೆಯುತ್ತದೆ ಎಂದರು.

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್‌ನ ನಿರ್ದೇಶಕ ಡಾ.ಸಂಜಯ್ ತ್ಯಾಗಿ, ಐ.ಎಸ್‌.ಬಿ.ಆರ್‌ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮನಿಷ್ ಕೊತಾರಿ, ನೀನ್‌ಲಿಪ್‌ ಕಂಪನಿಯ ನಿರ್ದೇಶಕಿ ವೃಷ ರಘು, ಕಾಲೇಜಿನ ಆಡಳಿತ ಮಂಡಳಿಯ ಆನಂದ್ ರಾಮ್, ಮನೋಹರ್, ಚಂದ್ರ ನಿರಂಜನ್, ನೀಲಾ, ಕವಿತಾ ಮಧುಸೂದನ್, ಲಕ್ಷ್ಮೀನಾರಾಯಣ್, ನರಸಯ್ಯ ಇದ್ದರು.

04/07/2025

ಕಾಡುಜಕ್ಕನಹಳ್ಳಿ ಗ್ರಾಮದಲ್ಲಿ ನೂತನ ಅಕ್ಕಿ ವಿತರಣಾ ಕೇಂದ್ರದ ಉದ್ಘಾಟನೆ ಮತ್ತು ಸರ್ಕಾರಿ ನ್ಯಾಯ ಬೆಲೆ ಅಂಗಡಿ ಕಾಮಗಾರಿಗೆ ಭೂಮಿ ಪೂಜೆ.

ಆನೇಕಲ್ ತಾಲ್ಲೂಕಿನ ಚಿಕ್ಕಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾರಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾಡುಜಕ್ಕನಹಳ್ಳಿ ಗ್ರಾಮದಲ್ಲಿ ನೂತನ ಅಕ್ಕಿ ವಿತರಣಾ ಕೇಂದ್ರದ ಉದ್ಘಾಟನೆ ಮತ್ತು ಸರ್ಕಾರಿ ನ್ಯಾಯ ಬೆಲೆ ಅಂಗಡಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಹಾರಗದ್ದೆ ವಿಎಸ್‌ಎಸ್‌ಎನ್‌ ಅಧ್ಯಕ್ಷ ಕೆ.ಎಸ್‌.ನಟರಾಜ್‌ ಮಾತನಾಡಿ ವಿಎಸ್‌ಎಸ್‌ಎನ್‌ ಸಂಘಗಳು ಗ್ರಾಮೀಣ ಬದುಕಿಗೆ ಉತ್ತಮ ಬ್ಯಾಂಕ್‌ಗಳಾಗಿವೆ. ಸಹಕಾರ ಕ್ಷೇತ್ರದಲ್ಲಿ ಹಲವಾರು ಸೌಲಭ್ಯಗಳಿವೆ. ಕಾಡುಜಕ್ಕನಹಳ್ಳಿ ಗ್ರಾಮದಲ್ಲಿ ಸುಸರ್ಜಿತ ನ್ಯಾಯ ಬೆಲೆ ಅಂಗಡಿಯನ್ನು ಕಲ್ಪಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ. ಇದರಿಂದಾಗಿ ಕಾಡುಜಕ್ಕನಹಳ್ಳಿ ಗ್ರಾಮಸ್ಥರು ಪಡಿತರಕ್ಕಾಗಿ ಬೇರೆ ಗ್ರಾಮಗಳಿಗೆ ತೆರಳುವ ಅವಶ್ಯಕತೆಯಿರುವುದಿಲ್ಲ. ಗ್ರಾಮಾಂತರ ಪ್ರದೇಶದ ಜನರು ಸಹಕಾರ ಬ್ಯಾಂಕ್‌ಗಳಲ್ಲಿ ಖಾತೆ ಮಾಡಿಸಿಕೊಂಡು ಸಹಕಾರ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಚಿಕ್ಕಹೊಸಹಳ್ಳಿ ವಿಎಸ್‌ಎಸ್‌ಎನ್‌ ಅಧ್ಯಕ್ಷ ಐ.ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ ಸಂಘದ ವತಿಯಿಂದ ಕಾಡಂಚಿನ ಗ್ರಾಮಗಳಲ್ಲಿ ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸಹಕಾರ ಕ್ಷೇತ್ರದ ಅನುದಾನದಡಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.

ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷ ಎನ್‌.ಎಸ್.ರವಿಚಂದ್ರ ನುಸೇನೂರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಶ್ವಥಪ್ಪ, ಉಪಾಧ್ಯಕ್ಷ ಆದೂರು ಪ್ರಕಾಶ್‌, ಮುಖಂಡರಾದ ಬಿ.ನಾಗರಾಜು, ಬೆಟ್ಟಪ್ಪ, ನೀಲ ವಾಸಣ್ಣ, ಮಹದೇವ್‌, ಸೋಮಣ್ಣ, ರವಿ ಕುಮಾರ್, ಆನಂದ್‌ ಕುಮಾರ್, ಸತೀಶ್‌, ಮುನಿರಾಜು, ವೆಂಕಟೇಶ್‌ ಇದ್ದರು.

04/07/2025

ಆನೇಕಲ್ ಚಂದನ ಸೇವಾ ಟ್ರಸ್ಟ್ ಹಾಗೂ ರೇಣುಕಾ ಆರಾಧ್ಯ ಕಲಾವಿದರ ಬಳಗ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ. ಆನೇಕಲ್ ಪಟ್ಟಣದ ಶ್ರೀ ರಾಮಕುಟೀರದಲ್ಲಿ 9ನೇ ತಾರೀಕು ಗುರುವಂದನ ಹಾಗೂ ರಂಗಗೀತೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಗುರು ಜಗತ್ತಿನಲ್ಲಿ ಶ್ರೇಷ್ಠ ಸ್ಥಾನಮಾನವನ್ನು ಹೊಂದಿದ್ದಾರೆ ಅವರಿಗೆ ಇಡೀ ಸಮಾಜ ಋಣಿ ಆಗಿರಬೇಕಾಗುತ್ತದೆ ಇವರ ಸ್ಮರಣಾರ್ಥವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರೈನ್ಬೋ ಶಾಲೆಯ ಸಂಸ್ಥಾಪಕರಾದ ವಿಜಯಕುಮಾರ್ ಗೌಡ, ಕಲಾವಿದರಾದ ಕುಪೇಂದ್ರ ಗೌಡ, ಆನೇಕಲ್ ಚಂದನ ಸೇವಾ ಟ್ರಸ್ಟ್ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಆರಾಧ್ಯ, ಸಂಸ್ಥೆಯ ಉಪಾಧ್ಯಕ್ಷರಾದ ಆದೂರು ಪ್ರಕಾಶ್ ಸಂಸ್ಥೆಯ ಪೋಷಕರಾದ ಮಹದೇಶ ಗೌಡ ನವೀನ್ ಶೆಟ್ಟಿ ಸಾಗರ್ ಹಾಜರಿದ್ದರು.

ಬೆಂಗಳೂರು ನಗರ ವಿವಿಗೆ ಡಾ.ಮನಮೋಹನ್ ಸಿಂಗ್ ಹೆಸರು; ಸಂಪುಟ ಅಸ್ತುರಾಜ್ಯ ಸರ್ಕಾರ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ...
03/07/2025

ಬೆಂಗಳೂರು ನಗರ ವಿವಿಗೆ ಡಾ.ಮನಮೋಹನ್ ಸಿಂಗ್ ಹೆಸರು; ಸಂಪುಟ ಅಸ್ತು

ರಾಜ್ಯ ಸರ್ಕಾರ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಭಾರೀ ವಿರೋಧದ ನಡುವೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಹೆಸರು ಬದಲಾವಣೆ ಮಾಡಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಭಾರತದ ಆಧುನಿಕ ಆರ್ಥಿಕತೆಯ ರೂವಾರಿ ಎಂದೇ ಹೆಸರಾದವರು ಮನಮೋಹನ್ ಸಿಂಗ್. ಇವರ ಗೌರವಾರ್ಥವಾಗಿ ಬೆಂಗಳೂರು ವಿವಿಗೆ ಇವರ ಹೆಸರನ್ನು ಇಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಾಲ್ಮೀಕಿ ನಿಗಮದ ಬೆನ್ನಲ್ಲೇ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಕ್ರಮ ಬಯಲಿಗೆ
03/07/2025

ವಾಲ್ಮೀಕಿ ನಿಗಮದ ಬೆನ್ನಲ್ಲೇ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಕ್ರಮ ಬಯಲಿಗೆ

03/07/2025

ಸಿಎಟಿ ಆದೇಶ ಪ್ರತಿ ಇನ್ನೂ ನೋಡಿಲ್ಲವೆಂದ ಜಿ ಪರಮೇಶ್ವರ್

ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ಸಂಬಂಧ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಘಟನೆ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಅವರು, ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಆದೇಶ ಏನಾಗಿದೆ ನೋಡಬೇಕಿದೆ. ಮುಂದೆ ಕಾನೂನು ಪ್ರಕಾರ ಏನು ಕ್ರಮ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಆಫೀಸ್‌ನಲ್ಲಿ ಮಹಿಳಾ ಉದ್ಯೋಗಿಗಳ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಆರೋಪಿ ಅರೆಸ್ಟ್ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠ...
03/07/2025

ಆಫೀಸ್‌ನಲ್ಲಿ ಮಹಿಳಾ ಉದ್ಯೋಗಿಗಳ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಯಾದ ಇನ್ಫೋಸಿಸ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಂಪನಿಯ ಶೌಚಾಲಯದಲ್ಲಿ ರಹಸ್ಯವಾಗಿ ಮಹಿಳಾ ಉದ್ಯೋಗಿಗಳ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಒಬ್ಬ ಉದ್ಯೋಗಿಯನ್ನು ಬಂಧಿಸಲಾಗಿದೆ.

ಘಟನೆಯ ವಿವರ

ಆರೋಪಿಯನ್ನು ಆಂಧ್ರಪ್ರದೇಶದ ಮೂಲದ 28 ವರ್ಷದ ಸ್ವಪ್ನಿಲ್ ನಾಗೇಶ್ ಎಂದು ಗುರುತಿಸಲಾಗಿದೆ. ಈತ ಕೂಡ ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದ. ಈತ ಶೌಚಾಲಯದಲ್ಲಿ ಮೊಬೈಲ್ ಫೋನ್ ಬಳಸಿ, ಪಕ್ಕದ ಕೊಠಡಿಯಿಂದ ಮಹಿಳೆಯರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿದ್ದ. ಆರೋಪಿಯು ಕಮೊಡ್ ಮೇಲೆ ನಿಂತು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಈ ಕೃತ್ಯವು ಒಬ್ಬ ಮಹಿಳಾ ಉದ್ಯೋಗಿಗೆ ಅನುಮಾನ ಬಂದಾಗ ಬಯಲಿಗೆ ಬಂದಿದೆ. ಶೌಚಾಲಯದ ಬಾಗಿಲಿನಲ್ಲಿ ಪ್ರತಿಫಲನದಿಂದ ರೆಕಾರ್ಡಿಂಗ್ ಕಂಡು, ಆಕೆ ಕೂಗಿಕೊಂಡು ಹೊರಬಂದಾಗ ಆರೋಪಿಯು ಕ್ಷಮೆಯಾಚಿಸಿದ್ದಾನೆ.

ಕಂಪನಿಯ ಎಚ್‌ಆರ್ ತಂಡವು ಶೌಚಾಲಯದಲ್ಲಿ ತಪಾಸಣೆ ನಡೆಸಿದಾಗ, ಆರೋಪಿಯ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಆದರೆ ಕಂಪನಿಯ ಆಡಳಿತ ಮಂಡಳಿಯು ಆರೋಪಿಯಿಂದ ಕ್ಷಮೆ ಕೇಳಿಸಿ ಈ ವಿಷಯವನ್ನು ಮುಚ್ಚಿಹಾಕಲು ಯತ್ನಿಸಿತು ಎಂದು ಆರೋಪಿಸಲಾಗಿದೆ.

ಘಟನೆ ಬಯಲಿಗೆ

ಈ ಘಟನೆಯ ಬಗ್ಗೆ ಒಬ್ಬ ಮಹಿಳಾ ಉದ್ಯೋಗಿಯ ಪತಿಗೆ ತಿಳಿದಾಗ, ಅವರು ಕಂಪನಿಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಒತ್ತಡಕ್ಕೊಳಗಾದ ಕಂಪನಿಯು ತನಿಖೆಯನ್ನು ತೀವ್ರಗೊಳಿಸಿತ್ತು. ಒಬ್ಬ ನೊಂದ ಉದ್ಯೋಗಿಯ ದೂರಿನ ಆಧಾರದ ಮೇಲೆ, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯ ಮೊಬೈಲ್‌ನಲ್ಲಿ ಇನ್ನಷ್ಟು ಸಾಕ್ಷ್ಯಗಳನ್ನು ಕಂಡುಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

ಡ್ಯಾಂ ಕೆಳಭಾಗದ ನಿವಾಸಿಗಳಿಗೆ ಎಚ್ಚರಿಕೆ.
02/07/2025

ಡ್ಯಾಂ ಕೆಳಭಾಗದ ನಿವಾಸಿಗಳಿಗೆ ಎಚ್ಚರಿಕೆ.

ಸಿದ್ದರಾಮಯ್ಯ ಸಿಟ್ಟಿಗೆ ಗುರಿಯಾಗಿದ್ದ ಹಿರಿಯ ಪೊಲೀಸ್‌ ನಾರಾಯಣ ಭರಮನಿ ಸ್ವಯಂ ನಿವೃತ್ತಿ ಘೋಷಣೆಗೆ ಮುಂದು!
02/07/2025

ಸಿದ್ದರಾಮಯ್ಯ ಸಿಟ್ಟಿಗೆ ಗುರಿಯಾಗಿದ್ದ ಹಿರಿಯ ಪೊಲೀಸ್‌ ನಾರಾಯಣ ಭರಮನಿ ಸ್ವಯಂ ನಿವೃತ್ತಿ ಘೋಷಣೆಗೆ ಮುಂದು!

ಇಂದಿನಿಂದ ಜೋರು ಮಳೆ: 6 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್
02/07/2025

ಇಂದಿನಿಂದ ಜೋರು ಮಳೆ: 6 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

02/07/2025

ಆನೇಕಲ್ ಪಟ್ಟಣದಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಗೃತಿ ಜಾಥಾ

ಆನೇಕಲ್ ಪಟ್ಟಣದಲ್ಲಿ ಜುಲೈ 02ರಂದು ಬೆಸ್ಕಾಂ ವತಿಯಿಂದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಜಾಗೃತಿ ಜಾಥಾ ಆಯೋಜನೆಯಾಯಿತು. ಜಾಥಾವಿಗೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಟಾನ್ಲಿ ಜೋಸೆಫ್ ಚಾಲನೆ ನೀಡಿದರು.

ವಿದ್ಯುತ್ ಅಪಘಾತದಿಂದ ಜೀವಹಾನಿ ತಡೆಯಲು, ಪ್ರಮಾಣಿತ ಉಪಕರಣಗಳು, ಭೂಸಂಪರ್ಕ ವ್ಯವಸ್ಥೆ (ಅರ್ಥಿಂಗ್), ಆರ್‌ಸಿಡಿ, ಹೆಲ್ಮೆಟ್, ಸುರಕ್ಷತಾ ಕನ್ನಡಕ, ಪಿಪಿಇ ಮುಂತಾದ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕೆಂದು ಅವರು ಎಚ್ಚರಿಸಿದರು.

ವಿದ್ಯುತ್ ಉಪಕರಣಗಳ ಬಳಕೆಯಲ್ಲಿಯೂ ಸೂಕ್ತ ಜಾಗ್ರತೆ ಅಗತ್ಯವಿದೆ ಎಂದರು.

ಹಳ್ಳಿಗಳು ಪಟ್ಟಣ ಗಳಲ್ಲಿ ವಿದ್ಯುತ್ ಕಂಬಕ್ಕೆ ಬಟ್ಟೆಗಳನ್ನು ಒಣ ಹಾಕುವುದು ಹಾಗೂ ಜಾನುವಾರುಗಳನ್ನು ಕಟ್ಟಿ ಹಾಕದಂತೆ ತಿಳಿಸಲಾಯಿತು. ಯಾವುದೇ ಅನಾಹುತಗಳು ಕಂಡು ಬಂದಲ್ಲಿ ಗ್ರಾಹಕರ ಸೇವಾ ಸಹಾಯವಾಣಿ 1912 ಗೆ ಹಾಗು ಸ್ಥಳೀಯ ಲೈನ್ ಮ್ಯಾನ್ ಗೆ ತಿಳಿಸುವುದಾಗಿ ಅರಿವು ಮೂಡಿಸಲಾಯಿತು.

ಜಾಥಾ ಪಟ್ಟಣದ ಕೆಇಬಿ ಕಚೇರಿಯಿಂದ ಆರಂಭವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ತಿಲಕ್ ಸರ್ಕಲ್, ರಾಘವೇಂದ್ರ ಭವನ ವೃತ್ತ, ನ್ಯಾಯಾಲಯದ ಮುಂಭಾಗ ಮೂಲಕ ಸಾಗಿತು.

ಜಾಥಾದಲ್ಲಿ ಸಹಾಯಕ ಇಂಜಿನಿಯರ್ ಸತೀಶ್, ಸುರೇಶ್ ಜೂನಿಯರ್ ಇಂಜಿನಿಯರ್, ಪ್ರಭು, ಚಂದ್ರಶೇಖರ್, ಮುತ್ತುರಾಜು, ವೀರೇಶ್, ಪ್ರಸನ್ನ ಕುಮಾರ್, ಗಜೇಂದ್ರ ಮತ್ತು ಲೈನ್ ಮ್ಯಾನ್‌ಗಳು ಹಾಗು ಆನೇಕಲ್ ಉಪವಿಭಾಗ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಸ್ಪರ್ಧೆ ಸಾಧ್ಯತೆಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕ...
02/07/2025

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಸ್ಪರ್ಧೆ ಸಾಧ್ಯತೆ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿದೆ.

ಕೆಎಂಎಫ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಹೆಸರು ಕೇಳಿಬಂದಿತ್ತು.

'ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟೇ ಸುರೇಶ್ ಅವರು ಬಮೂಲ್ ಅಧ್ಯಕ್ಷರಾಗಿದ್ದಾರೆ' ಎಂದು ಹೇಳಲಾಗಿತ್ತು.

ಇದರ ಬೆನ್ನಲ್ಲೇ ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾನಾಯ್ಕ ಅವರು 'ನಾನು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ' ಎಂದು ಸಭೆಯೊಂದರಲ್ಲಿ ಹೇಳಿಕೊಂಡಿದ್ದರು.

ಮಾಲೂರು ಶಾಸಕ ಕೆ.ವೈ.ನಂಜೇಗೌಡ, 'ಕೆಎಂಎಫ್ ಅಧ್ಯಕ್ಷ ಸ್ಥಾನ ನನಗೇ ಸಿಗುವ ವಿಶ್ವಾಸವಿದೆ. ಭೀಮಾನಾಯ್ಕ ನಂತರ ಅಧ್ಯಕ್ಷ ಸ್ಥಾನವನ್ನು ನನಗೆ ಕೊಡಬೇಕೆಂದು ಮಾತುಕತೆ ಆಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನನ್ನ ಪರವಾಗಿ ಮುಖ್ಯಮಂತ್ರಿ ಬಳಿ ಮಾತಾಡಿದ್ದರು. ಮಾಜಿ ಶಾಸಕರ ಬದಲಿಗೆ ಹಾಲಿ ಶಾಸಕ ನಂಜೇಗೌಡರಿಗೆ ಅಧ್ಯಕ್ಷ ಸ್ಥಾನ ಕೊಡಿ ಎಂದೂ ಹೇಳಿದ್ದರು' ಎಂಬುದಾಗಿ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ.

'ಈಗ ಡಿ.ಕೆ ಸುರೇಶ್ ಬಮೂಲ್ ಅಧ್ಯಕ್ಷರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ರಾಜ್ಯಸಭಾ ಸದಸ್ಯರಾಗಬಹುದು. ಅವರು ಕೆಎಂಎಫ್ ಅಧ್ಯಕ್ಷ ಸ್ಥಾನ ಬಯಸುವುದಿಲ್ಲ. ಒಂದೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟರೆ ನಾನೇ ಸುರೇಶ್ ಅವರೊಂದಿಗೆ ಮಾತನಾಡುತ್ತೇನೆ' ಎಂದೂ ಹೇಳಿದರು.

ಸುರೇಶ್ ಅವರಿಗೆ ಸಹೋದರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಗುಂಪು ಬೆಂಬಲಕ್ಕೆ ನಿಂತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಕೆ.ವೈ. ನಂಜೇಗೌಡರ ಬೆನ್ನಿಗೆ ನಿಂತಿದೆ.

ಈ ನಡುವೆ 'ಮಾಲೂರು ಶಾಸಕ ನಂಜೇಗೌಡರಿಗೆ ನೀವು ಕೆಎಂಎಫ್ ಸ್ಥಾನ ಕೊಡಿಸುವುದಾಗಿ ಹೇಳಿದ್ದೀರಿ ಎಂದು ಸ್ವತಃ ಶಾಸಕರೇ ಹೇಳಿದ್ದಾರೆ' ಎಂದು ಸುದ್ದಿಗಾರರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿದಾಗ, 'ರಾಜಕೀಯ ಬೆಳವಣಿಗೆಗಳೇ ಬೇರೆ, ಸಹಕಾರ ಕ್ಷೇತ್ರವೇ ಬೇರೆ. ಅದರ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

Address

Anekal

Telephone

+919060606034

Website

Alerts

Be the first to know and let us send you an email when ಸುದ್ದಿ ಸ್ಪರ್ಶ Suddi sparsha posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ ಸ್ಪರ್ಶ Suddi sparsha:

Share