ಸುದ್ದಿ ಸ್ಪರ್ಶ Suddi sparsha

ಸುದ್ದಿ ಸ್ಪರ್ಶ Suddi sparsha News & Entertainment

16/10/2025

ಹಾಡಹಗಲೇ ಗ್ರಾಮಕ್ಕೆ ನುಗ್ಗಿದ ಚಿರತೆ : ಚಿರತೆ ಸೆರೆ ಹಿಡಿಯಲು ಹರಸಾಹಸ

ದೊಡ್ಡಬಳ್ಳಾಪುರ ತಾಲೂಕಿನ ಹಳೇಕೋಟೆ ಹಾಗೂ ಬೂಚನಹಳ್ಳಿ ಗ್ರಾಮಗಳಿಗೆ ಚಿರತೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಚಿರತೆ ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಚಿರತೆ ಸೆರೆ ಹಿಡಿಯಲು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿ ಶಾಮಕದಳ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಇತ್ತೀಚೆಗೆ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿ ಚಿರತೆಯ ಚಲನವಲ ಕಂಡುಬಂದಿತ್ತು. ಜಾನುವಾರುಗಳ ಮೇಲೆಯೂ ಆಗಾಗ ದಾಳಿ ನಡೆಸಿ ಬಲಿಪಡೆಯುತ್ತಿತ್ತು. ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು.

ಸದ್ಯ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ‌ ಮುಂದುವರಿದಿದ್ದು, ಚಿರತೆಯನ್ನು ಕಣ್ತುಂಬಿಕೊಳ್ಳಲು ಬೂಚನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ಮೊಬೈಲ್ ನಲ್ಲಿ ದೃಶ್ಯ ಸೆರೆಹಿಡಿಯುತ್ತಿದ್ದಾರೆ..

ರಾಜ್ಯ ಸರ್ಕಾರಿ ನೌಕರರು 'RSS' ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು : `CM'ಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ ಖರ್ಗೆ.!ರಾಜ್ಯದಲ್ಲಿ ಆರ್ ಎಸ್ ಎಸ...
16/10/2025

ರಾಜ್ಯ ಸರ್ಕಾರಿ ನೌಕರರು 'RSS' ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು : `CM'ಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ ಖರ್ಗೆ.!

ರಾಜ್ಯದಲ್ಲಿ ಆರ್ ಎಸ್ ಎಸ್ ನಿಷೇಧ ಕುರಿತಂತೆ ಇತ್ತೀಚಿಗೆ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ಅವರಿಗೆ ನಿರಂತರವಾಗಿ ಬೆದರಿಕೆ ಸಂದೇಶ ಬಂದಿದ್ದವು. ಇದೀಗ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರುಗಳಿಗೆ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು, 2021 ಅಡಿ ನಿಯಮ 5(1) ಪ್ರಕಾರ ಈ ಕೆಳಕಂಡ ನಿಯಮವು ಈಗಾಗಲೇ ಜಾರಿಯಲ್ಲಿರುತ್ತದೆ.

"ಯಾರೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ." ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸುತ್ತಿರುವುದನ್ನು ಗಮನಿಸಲಾಗಿದೆ.

ಆದ್ದರಿಂದ ರಾಜ್ಯದ ಸರ್ಕಾರಿ ಅಧಿಕಾರಿ ಮತ್ತು ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ತಿಳಿಸುವ ಸುತ್ತೋಲೆಯನ್ನು ಹೊರಡಿಸಲು ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದೆ.

ಆನೇಕಲ್ ನ ಚಂದಾಪುರ ರೈಲ್ವೆ ಸೇತುವೆ ಸಮೀಪ ಪೊಲೀಸರು ಗಸ್ತು ಹೆಚ್ಚಿಸಲು ಮನವಿಆನೇಕಲ್ ತಾಲ್ಲೂಕಿನ ಚಂದಾಪುರ ರೈಲ್ವೆ ಸೇತುವೆ ಸಮೀಪದ ಜಾಗ ಅನೈತಿಕ ...
16/10/2025

ಆನೇಕಲ್ ನ ಚಂದಾಪುರ ರೈಲ್ವೆ ಸೇತುವೆ ಸಮೀಪ ಪೊಲೀಸರು ಗಸ್ತು ಹೆಚ್ಚಿಸಲು ಮನವಿ

ಆನೇಕಲ್ ತಾಲ್ಲೂಕಿನ ಚಂದಾಪುರ ರೈಲ್ವೆ ಸೇತುವೆ ಸಮೀಪದ ಜಾಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಪೊಲೀಸರು ಸಂಜೆ ಸಮಯದಲ್ಲಿ ಗಸ್ತು ಹೆಚ್ಚಿಸಬೇಕೆಂದು ಪುರಸಭೆ ಅಧ್ಯಕ್ಷೆ ಶಾರದ ವರದರಾಜು ಒತ್ತಾಯಿಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚಂದಾಪುರ ತಾಲ್ಲೂಕಿನ ಹೃದಯಭಾಗದಲ್ಲಿದೆ.

ರೈಲ್ವೆ ಸೇತುವೆ ಸಮೀಪ ಕಳೆದ ಕೆಲವು ದಿನಗಳಿಂದ ಓಡಾಡುವುದೇ ಕಷ್ಟವಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ರೈಲ್ವೆ ಸೇತುವೆ ಬಳಿ ಸಿಸಿಟಿಟಿ ಕ್ಯಾಮೆರಾ ಅಳವಡಿಸಬೇಕಾಗಿದೆ. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂರ್ಯಸಿಟಿ ಪೊಲೀಸರು ಗಸ್ತು ಹೆಚ್ಚಿಸಬೇಕು. ಈ ಭಾಗದಲ್ಲಿ ಶಾಲಾ-ಕಾಲೇಜುಗಳಿವೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಪೊಲೀಸರು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಸರು ಗದ್ದೆಯಾದ ಆನೇಕಲ್ ನ ಚಂದಾಪುರ ಸಂತೆ.ದುರ್ನಾತ ಬೀರುವ ಸಂತೆ ಮಾಳಕೆಸರು ಗದ್ದೆಯ ನಡುವೆಯೇ ವರ್ತಕರ ವ್ಯಾಪಾರಚಂದಾಪುರ ಸಂತೆ ಮಾಳದ ರಸ್ತೆ ದು...
16/10/2025

ಕೆಸರು ಗದ್ದೆಯಾದ ಆನೇಕಲ್ ನ ಚಂದಾಪುರ ಸಂತೆ.

ದುರ್ನಾತ ಬೀರುವ ಸಂತೆ ಮಾಳ

ಕೆಸರು ಗದ್ದೆಯ ನಡುವೆಯೇ ವರ್ತಕರ ವ್ಯಾಪಾರ

ಚಂದಾಪುರ ಸಂತೆ ಮಾಳದ ರಸ್ತೆ ದುಸ್ಥಿತಿ

ಆನೇಕಲ್ ತಾಲ್ಲೂಕಿನ ಹೃದಯಭಾಗದಲ್ಲಿರುವ ಚಂದಾಪುರ ಸಂತೆ ಮಾಳವು ಕೆಸರು ಗದ್ದೆಯಾಗಿದ್ದು, ಇಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ಪ್ರತಿನಿತ್ಯ ಹಣ್ಣು ತರಕಾರಿ ಕೊಳ್ಳಲು ಬರುವವ ಗ್ರಾಹಕರು ಕೆಸರಿನಲ್ಲಿ ಜಾರಿ ಬೀಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಂದಾಪುರ ಪುರಸಭೆಯ ಮುಂಭಾಗದಲ್ಲಿಯೇ ಸಂತೆ ಮಾಳವಿದ್ದರೂ ಪುರಸಭೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವರ್ತಕರು ಹಾಗೂ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದಾಪುರ ಪುರಸಭೆಯ ಮುಂಭಾಗದಲ್ಲಿರುವ ಸಂತೆ ಮಾಳದಲ್ಲಿ ಪ್ರತಿನಿತ್ಯ ಸಂತೆಯೇ ಯಾವ ಸಮಯದಲ್ಲಿ ಹೋದರೂ ಜನರ ದಂಡೇ ಖರೀದಿಯಲ್ಲಿ ತೊಡಗಿರುತ್ತದೆ. ಆದರೆ ಸೌಲಭ್ಯಗಳ ಕೊರತೆಯಿಂದ ಸಂತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಂತೆಗೆ ಬರುವ ಗ್ರಾಹಕರು, ವರ್ತಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಸಂತೆಯಲ್ಲಿ ಗಬ್ಬು ನಾರುವ ಕಸದ ರಾಶಿ ಒಂದೆಡೆಯಾದರೆ ಕೆಸರುಮಯವಾದ ರಸ್ತೆಯಲ್ಲಿ ಸಂಚರಿಸುವುದು ಮತ್ತೊಂದು ಸಂಕಟ. ಚಂದಾಪುರ ಸಂತೆಯು ಅವ್ಯವಸ್ಥೆಯ ತಾಣವಾಗಿದ್ದು, ಪುರಸಭೆಯು ಸಂತೆಯ ಅಂಗಡಿಗಳಿಂದ ಸುಂಕ ವಸೂಲಿ ಮಾಡಿದರೂ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಚಂದಾಪುರದಲ್ಲಿ ಹೆಚ್ಚಿನ ಜನಸಂಖ್ಯೆಯಿದೆ. ಸುತ್ತಲೂ ಕೈಗಾರಿಕ ಪ್ರದೇಶ ಇರುವುದರಿಂದ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಚಂದಾಪುರದಲ್ಲಿ ಶನಿವಾರ ಸಂತೆಯ ದಿನವಾಗಿದ್ದರೂ ಪ್ರತಿನಿತ್ಯ ಸಂತೆಯಲ್ಲಿ ಜನರಿಂದ ತುಂಬಿರುತ್ತದೆ. ಆದರೆ ಸೌಲಭ್ಯಗಳು ಮಾತ್ರ ಮರಿಚೀಕೆಯಾಗಿದೆ.

ಸಂತೆಯಲ್ಲಿ ಶೆಡ್‌ ವ್ಯವಸ್ಥೆ ಇಲ್ಲದೇ ಪ್ಲಾಸ್ಟಿಕ್‌ ಟಾರ್ಪಲ್‌ ಕಟ್ಟಿಕೊಂಡು ಹಣ್ಣು, ಹೂವು, ತರಕಾರಿ ಮಾರಾಟ ಮಾಡಲಾಗುತ್ತಿದೆ. ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಮಳೆ ಬಂತೆಂದರೆ ಸಂತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ವರ್ತಕರ ವ್ಯಾಪಾರಕ್ಕೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕೆಂಬುಂದು ಸ್ಥಳೀಯರ ಒತ್ತಾಯ.

#ಮಳೆ_ಬಂದರೆ_ದುರ್ನಾತ

ಚಂದಾಪುರ ಪುರಸಭೆಯ ಅಧಿಕಾರಿಗಳು ಸಂತೆಯ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಮಳೆ ಬಂದಾಗ ಸಂತೆ ದುರ್ನಾತ ಬೀರುತ್ತದೆ. ಹಾಗಾಗಿ ಚಂದಾಪುರ ಸಂತೆ ಮಾಳವನ್ನು ಅಭಿವೃದ್ಧಿ ಪಡಿಸಬೇಕು. ವರ್ತಕರಿಗೆ ಅನುಕೂಲವಾಗುವಂತೆ ಶೆಡ್‌ ನಿರ್ಮಿಸಬೇಕು ಎಂದು ಹೂವು ಮಾರುವ ಶಕುಂತಲಮ್ಮ ತಿಳಿಸಿದರು.

ಗಬ್ಬುನಾರುವ ಕೆಸರುಗದ್ದೆಯಾಗಿರುವ ಚಂದಾಪುರ ಸಂತೆಗೆ ಕಾಯಕಲ್ಪ ನೀಡಬೇಕು. ಸುಸಜ್ಜಿತ ವಾಹನ ನಿಲ್ದಾಣ ವ್ಯವಸ್ಥೆ ಮಾಡಬೇಕು. ಇದರಿಂದಾಗಿ ಸಂತೆಗೆ ಬರುವ ಜನರ ವ್ಯಾಪಾರ ವಹಿವಾಟಿಗೆ ಉತ್ತಮವಾಗುತ್ತದೆ. ಎಲ್ಲಂದರಲ್ಲಿ ವಾಹನ ನಿಲ್ಲಿಸುವವರ ವಿರುದ್ದ ಕ್ರಮ ವಹಿಸಬೇಕು ಎಂದು ಚಂದಾಪುರದ ಮಹದೇಶ್‌ ತಿಳಿಸಿದರು.

15/10/2025

ನಾನು ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದೇನೆ : ಸಚಿವ ಸತೀಶ್ ಜಾರಕಿಹೋಳಿ.

ನಾನು ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದೇನೆ ಎಂದು
ಮೈಸೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ
ನೀವು ರೈಟ್ ಪರ್ಸನ್ ಗೆ ಈ ಪ್ರಶ್ನೆ ಕೇಳಿ ರೈಟ್ ಉತ್ತರ ಸಿಗತ್ತೆ.
ನಾನು ಬಹಳ ಹಿಂದೆಯೇ ರೇಸ್ ನಿಂದ ಹಿಂದೆ ಸರಿದ್ದಿದ್ದೇನೆ ಎಂದು ಉತ್ತರ ನೀಡಿದರು.
ದಲಿತ ಸಿಎಂ ಕೂಗು ಕೇಳುತ್ತೆ
ನಾವು ಡಿನ್ನರ್ ಸಭೆಯಲ್ಲಿ ಏನು ಚರ್ಚೆ ನಡೆಸಿಲ್ಲ.ಸಿಎಂ ಡಿನ್ನರ್ ಗೆ ಕರೆದ್ರು ನಾವು ಹೋಗಿದ್ವಿ ಅಷ್ಟೇ
ಡಿನ್ನರ್ ಸಭೆ ಗುಟ್ಟು ಬಿಟ್ಟು ಕೊಡದ ಸಚಿವ ಸತೀಶ್ ಜಾರಕೋಳಿ...

ಹಿರಿಯ ರಂಗಕರ್ಮಿ, ಚಿತ್ರನಟ, ಡ್ರಾಮಾ ಜೂನಿಯರ್ಸ್ ಸೀಸನ್-5ರ ಭಾಗವಾಗಿದ್ದ ರಾಜು ತಾಳಿಕೋಟೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
13/10/2025

ಹಿರಿಯ ರಂಗಕರ್ಮಿ, ಚಿತ್ರನಟ, ಡ್ರಾಮಾ ಜೂನಿಯರ್ಸ್ ಸೀಸನ್-5ರ ಭಾಗವಾಗಿದ್ದ ರಾಜು ತಾಳಿಕೋಟೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

13/10/2025

ಆನೇಕಲ್ ಪಟ್ಟಣದ ಹೊಸೂರು ಮುಖ್ಯ ರಸ್ತೆಯ ಬಹದ್ದೂರ್ ಪುರ ಬಸ್ ನಿಲ್ದಾಣದ ಮುಂಭಾಗ ಮಹೇಶ್ ರವರ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡ ರಾಯಲ್ ಜೆಂಟ್ಸ್ ಪಾರ್ಲರ್.

ನೂತನ ರಾಯಲ್ ಜೆಂಟ್ಸ್ ಪಾರ್ಲರ್ ನಲ್ಲಿ ವಿಶೇಷ ಲಕ್ಷ್ಮಿ ಪೂಜೆ ನೆರವೇರಿಸಿ ನೂತನ ಪಾರ್ಲರ್‌ ಗೆ ಚಾಲನೆ ನೀಡಲಾಯಿತು.

ಇನ್ನು ನೂತನ ಪಾರ್ಲರ್ ಪೂಜ ಕಾರ್ಯಕ್ರಮದಲ್ಲಿ ಗಣ್ಯರು, ಮುಖಂಡರು, ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗವಹಿಸಿ ಶುಭ ಕೋರಿದರು.

ನುರಿತ ಮೇಕಪ್ ಆರ್ಟಿಸ್ಟ್ ಗಳನ್ನು ಒಳಗೊಂಡಿರುವ ಪಾರ್ಲರ್‌ ನಲ್ಲಿ ಕಟಿಂಗ್, ಶೇವಿಂಗ್, ಸ್ಟೆಪ್ ಕಟಿಂಗ್, ಹೆಡ್ ಮಸಾಜ್, ಫೇಸ್ ವಾಶ್, ಫೇಸ್ ಬ್ಲೀಚ್, ಆಯಿಲ್ ಹೆಡ್ ಮಸಾಜ್, ಹೇರ್ ಕಲರಿಂಗ್, ಹೇರ್ ಸ್ಟ್ರೈಟ್ನಿಂಗ್, ಮದುವೆ ಮತ್ತು ಶುಭ ಸಮಾರಂಭಗಳಿಗೆ ಮೇಕಪ್ ಮಾಡಲಾಗುವುದು ಹಾಗೇಯೇ ಎಲ್ಲಾ ಶುಭ ಸಮಾರಂಭಗಳಲ್ಲಿ ಮಂಗಳವಾದ್ಯ ಹಾಗೂ ನಾದಸ್ವರ ಕಚೇರಿ ಮಾಡಿಕೊಡಲಾಗುವುದು ಎಂದು ಪಾರ್ಲರ್‌ ಮಾಲೀಕ ಮಹೇಶ್ ರವರು ತಿಳಿಸಿದರು.

13/10/2025

ರೈತರ ಕೆಲಸಗಳನ್ನು ಸರಿಯಾಗಿ ಮಾಡದಿದ್ದರೆ ಮುಖಕ್ಕೆ ಹೊಡಿತಿನಿ: ಅಧಿಕಾರಿಗಳಿಗೆ ಮಾಗಡಿ ಶಾಸಕ ಬಾಲಕೃಷ್ಣ ತರಾಟೆಗೆ

12/10/2025

ಎಲೆಕ್ಟ್ರಾನಿಕ್ ಸಿಟಿ ಹೆಬ್ಗೋಡಿ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ ಅಮಾಯಕರ ಮೇಲೆ ಕೈಯಿಂದ ಕಾಲಿಂದ ಒದ್ದು ಹಲ್ಲೆ ಮಾಡಿರುವ ಆರೋಪಿಯ ಬಂಧನ....!
ಎಲೆಕ್ಟ್ರಾನಿಕ್ ಸಿಟಿ DCP ನಾರಾಯಣ್ ನೇತೃತ್ವದಲ್ಲಿ ಕಾರ್ಯಾಚರಣೆ.



12/10/2025

ಸಿಜಿಐ ಗವಾಯಿಯವರತ್ತ ಶೂ ಎಸೆದ ವಕೀಲರನ್ನ ಶ್ಲಾಘಿಸಿದ ಭಾಸ್ಕರ್ ರಾವ್ ಮತ್ತು ವಕೀಲ ಅನಿಲ್ ಮಿಶ್ರಾ ವಿರುದ್ಧ ಎಫ್ಐಆರ್ ಮಾಡುವಂತೆ ಪ್ರತಿಭಟನೆ.

ಆನೇಕಲ್ ಪಟ್ಟಣದಲ್ಲಿ ದಲಿತ ಮತ್ತು ಪ್ರಗತಿಪರರು ಇಂದು ಪೋಲಿಸ್ ಠಾಣೆಯಲ್ಲಿ ಸಿಜಿಐ ಗವಾಯಿಯವರತ್ತ ಶೂ ಎಸೆದ ವಕೀಲರನ್ನ ಶ್ಲಾಘಿಸಿದ ಬಿಜೆಪಿ ಮುಖಂಡ ಭಾಸ್ಕರ್ ರಾವ್, ಅಂಬೇಡ್ಕರ್ ಬಬ್ಬ ಕೊಳಕು ಮನುಷ್ಯ ಎಂದು ನಾಲಗೆ ಹರಿಬಿಟ್ಟ ಮತ್ತೊಬ್ಬ ವಕೀಲ ಅನಿಲ್ ಮಿಶ್ರಾ, ಸಿಜೆಐ ಗವಾಯಿ ಅವರ ಮುಖದ ಮೇಲೆ ಉಗುಳಿ, ಕಾರನ್ನು ತಡೆಯಿರಿ ಖಜುರಾಹೊ ತೀರ್ಪಿನ ನಂತರ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರ್.ಎಸ್.ಎಸ್ ನ ಟಿ.ಜಿ.ಮೋಹನದಾಸ್ ರವರ ವಿರುದ್ಧದ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಆನೇಕಲ್ ಠಾಣೆಯ ಇನ್ಸ್ಪೆಕ್ಟರ್ ರವರಿಗೆ ದೂರು ಸಲ್ಲಿಸಿ ಠಾಣೆಯ ಮುಂಭಾಗ ದಲಿತರು ಮತ್ತು ಪ್ರಗತಿಪರರು, ಭಾಸ್ಕರ್ ರಾವ್ ಮತ್ತು ವಕೀಲ ಅನಿಲ್ ಮಿಶ್ರಾ ಇಬ್ಬರ ವಿರುದ್ಧ ಎಫ್ಐಆರ್ ಮಾಡುವಂತೆ ಪ್ರತಿಪಟಿಸಿದರು.

ಇನ್ನು ಪ್ರತಿಭಟನೆಯಲ್ಲಿ ಬಿ.ಎಸ್.ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಪ್ರೋ. ಡಾ.ಮಿನಾಕ್ಷಿ .ಎನ್.ಪಿ.ನಾಗಚಕ್ರ, ಗೌತಮ್ ವೆಂಕಿ, ಸ್ವಾಭಿಮಾನಿ ಸತೀಶ್, ವಕೀಲ ಪುರುಷೋತ್ತಮ, ಚಿಕ್ಕಹಾಗಡೆ ಯಲ್ಲಪ್ಪ, ಕಾಮಾಕ್ಷಿ , ಪದ್ಮ , ದೇವರಾಜ್, ಅಶೋಕ್, ಬಾಬು, ದ್ಯಾವಸಂದ್ರ ನಾಗರಾಜ್, ಶಶಿ ಜನಧನಿ, ಪ್ರಸನ್ನ, ಮಂಜಮ್ಮ, ಮುರುಳಿ ಭಾಗವಹಿಸಿದ್ದರು.

ಜಾತಿ ಸಮೀಕ್ಷೆ ವೇಳೆಯಲ್ಲೇ ಶಿಕ್ಷಕಿಗೆ ಹೃದಯಾಘಾತಆನೇಕಲ್ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿಯೊಬ್ಬರು ಹೃದಯಾ...
12/10/2025

ಜಾತಿ ಸಮೀಕ್ಷೆ ವೇಳೆಯಲ್ಲೇ ಶಿಕ್ಷಕಿಗೆ ಹೃದಯಾಘಾತ

ಆನೇಕಲ್ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿಯೊಬ್ಬರು ಹೃದಯಾಘಾತಕ್ಕೆ ಒಳಗಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ನಡೆದಿದೆ.

ಯಶೋಧಾ ಹೃದಯಾಘಾತಕ್ಕೆ ಒಳಗಾದ ಶಿಕ್ಷಕಿ. ಬೊಮ್ಮಸಂದ್ರ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೊಮ್ಮಸಂದ್ರದಲ್ಲಿ ಸಮೀಕ್ಷೆ ಜವಾಬ್ದಾರಿ ಹೊತ್ತಿದ್ದ ಅವರು ಸಮೀಕ್ಷೆ ಕಾರ್ಯದಲ್ಲಿದ್ದಾಗಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ವೈದ್ಯರು ಆಪರೇಷನ್ ಮಾಡಿ ಸ್ಟೆಂಟ್ ಅಳವಡಿಸಿದ್ದಾರೆ. ಸಮೀಕ್ಷಾ ಕಾರ್ಯದ ತೀವ್ರ ಒತ್ತಡದಿಂದಾಗಿ ಶಿಕ್ಷಕಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಪ್ರಿಯತಮೆಗಾಗಿ ಸಂಬಂಧಿಕರ ಮಳೆಯಲ್ಲೇ ಕಳ್ಳತನ ಮಾಡಿ ಕಥೆ ಕಟ್ಟಿದ್ದ ಪ್ರೇಮಿ ಅಂದರ್‌ಪ್ರಿಯತಮೆಗೆ ಹಣ, ಆಭರಣ ಕೊಡಲು ತಮ್ಮ ಸಂಬಂಧಿಕರ ಮನೆಯಲ್ಲಿಯೇ ...
12/10/2025

ಪ್ರಿಯತಮೆಗಾಗಿ ಸಂಬಂಧಿಕರ ಮಳೆಯಲ್ಲೇ ಕಳ್ಳತನ ಮಾಡಿ ಕಥೆ ಕಟ್ಟಿದ್ದ ಪ್ರೇಮಿ ಅಂದರ್‌

ಪ್ರಿಯತಮೆಗೆ ಹಣ, ಆಭರಣ ಕೊಡಲು ತಮ್ಮ ಸಂಬಂಧಿಕರ ಮನೆಯಲ್ಲಿಯೇ ನಗದು ಸೇರಿದಂತೆ 52.71 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳ್ಳತನ ಮಾಡಿ ನಾಟಕವಾಡಿದ್ದ ಯುವಕನೊಬ್ಬನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಟ್ಟಿಹಳ್ಳಿಯ ನಿವಾಸಿ ಶ್ರೇಯಸ್‌‍(22) ಬಂಧಿತ ಆರೋಪಿ. ಈತ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತಮದೇ ಊರಿನ ಸಂಬಂಧಿಕರಾದ ಹರೀಶ್‌ ಎಂಬುವವರ ಮನೆಗೆ ಈ ಶ್ರೇಯಸ್‌‍ ಆಗಾಗ್ಗೆ ಹೋಗುತ್ತಿದ್ದ. ಕಳೆದ ತಿಂಗಳ 14ರಂದು ಹರೀಶ್‌ ಅವರ ತಾಯಿ ಮನೆಗೆ ಬೀಗಹಾಕಿ ಪಕ್ಕದ ಬೀದಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು.

ಆ ಸಂದರ್ಭದಲ್ಲಿ ಮನೆಯ ಬಳಿ ಬಂದ ಶ್ರೇಯಸ್‌‍ ಬೀಗ ಮುರಿದು 3.46 ಲಕ್ಷ ರೂ. ನಗದು, 416 ಗ್ರಾಂ ಚಿನ್ನವನ್ನು ದೋಚಿ ಹೋಗಿದ್ದನು.ಕಳ್ಳತನ ಮಾಡಿದ್ದ ಕೆಲವು ಆಭರಣಗಳನ್ನು ಬನ್ನೇರುಘಟ್ಟದಲ್ಲಿ ವಾಸವಿರುವ ತನ್ನ ಪ್ರಿಯತಮೆಗೆ ಕೊಟ್ಟಿದ್ದು, ಉಳಿದ ಆಭರಣಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಮುತ್ತೂಟ್‌ ಫೈನಾನ್‌್ಸನಲ್ಲಿ ಅಡವಿಟ್ಟಿದ್ದ. ನಗದನ್ನು ಸೂರ್ಯಸಿಟಿಯಲ್ಲಿರುವ ಬ್ಯಾಂಕ್‌ನ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದ.
ನಂತರ ಹರೀಶ್‌ ಅವರ ಮನೆ ಬಳಿ ಬಂದ ಶ್ರೇಯಸ್‌‍ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ನೀವು ಬೇಗ ಪೊಲೀಸರಿಗೆ ದೂರು ಕೊಡಿ ಎಂದು ಅವನೇ ಪೊಲೀಸರಿಗೆ ದೂರು ಕೊಡಿಸಿದ್ದ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ತಾಂತ್ರಿಕ ಸಾಕ್ಷ್ಯಾಧಾರದ ಮೇಲೆ ಶ್ರೇಯಸ್‌‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ನಂತರ ಪೊಲೀಸರು ಆತನನ್ನು ಬಂಧಿಸಿ ಸಂಬಂಧಿಕರ ಮನೆಯಲ್ಲಿ ಕದ್ದಿದ್ದ ಹಣ, ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಬಂಧನ: 86 ಗ್ರಾಂ ಮಾಂಗಲ್ಯ ಸರ ವಶ
ಕೆರೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಮೌಲ್ಯದ 86 ಗ್ರಾಂ ತೂಕದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಗೊಲ್ಲಹಳ್ಳಿಯ ನಿವಾಸಿ ನಿತಿನ್‌ ಬಂಧಿತ ಆರೋಪಿ. ಈತ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಸೆ.12ರಂದು ಮಾರುಗೊಂಡನಹಳ್ಳಿಯ ಕೆರೆ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದ.

ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಬಾತಿದಾರನಿಂದ ಬಂದ ಖಚಿತ ಮಾಹಿತಿಯನ್ನು ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸರ ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಚಿನ್ನದ ಸರವನ್ನು ಹಾಸನದ ಆಭರಣ ಅಂಗಡಿಯೊಂದರಲ್ಲಿ ಅಡಮಾನ ಇಟ್ಟಿದ್ದ ಸುಮಾರು 9,03,000 ರೂ. ಮೌಲ್ಯದ 86 ಗ್ರಾಂ ತೂಕದ ಮಾಂಗ್ಯಲ ಸರವನ್ನು ವಶಪಡಿಸಿಕೊಂಡಿದ್ದಾರೆ.ಎಲೆಕ್ಟ್ರಾನಿಕ್‌ಸಿಟಿ ಉಪವಿಭಾಗದ ಉಪ ಪೊಲೀಸ್‌‍ ಆಯುಕ್ತ ನಾರಾಯಣ್‌ ಅವರ ಮಾರ್ಗದರ್ಶನದಲ್ಲಿ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರಾದ ಕೆ.ಎಂ.ಸತೀಶ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.


Address

Anekal

Telephone

+919060606034

Website

Alerts

Be the first to know and let us send you an email when ಸುದ್ದಿ ಸ್ಪರ್ಶ Suddi sparsha posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ ಸ್ಪರ್ಶ Suddi sparsha:

Share