NKtvkannada

NKtvkannada ಉತ್ತಮ ಸಮಾಜ ನಮ್ಮ ಆಶಯ
(1)

03/06/2026

Live

Karnataka Weather Update: ಮುಂದಿನ 5 ದಿನಗಳಲ್ಲಿ ರಾಜ್ಯದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ...
29/05/2026

Karnataka Weather Update: ಮುಂದಿನ 5 ದಿನಗಳಲ್ಲಿ ರಾಜ್ಯದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 29ರಿಂದ ಜೂನ್ 2ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

ಬೆಂಗಳೂರು: ದೋಷಾರೋಪ ಪಟ್ಟಿಯನ್ನೇ "ದೋಷಪೂರಿತ"ವಾಗಿ ತಯಾರಿಸಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ ಬಾಣಸವಾಡಿ ಠಾಣೆಯ ಇನ್ ಸ್ಪೆಕ್ಟರ್ ವಿರುದ್ಧ ಇ...
29/05/2026

ಬೆಂಗಳೂರು: ದೋಷಾರೋಪ ಪಟ್ಟಿಯನ್ನೇ "ದೋಷಪೂರಿತ"ವಾಗಿ ತಯಾರಿಸಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ ಬಾಣಸವಾಡಿ ಠಾಣೆಯ ಇನ್ ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.

''ನನ್ನ ವಿರುದ್ದ ನಗರದ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿರುವ ಪ್ರಕರಣ ರದ್ದುಪಡಿಸಬೇಕು" ಎಂದು ಕೋರಿ ಆ‌ರ್.ಎಸ್. ಪಾಳ್ಯದ 29 ವರ್ಷದ ಯುವಕ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

''ಆತ್ಮಹತ್ಯೆಗೆ ಪ್ರಚೋದನೆ (abetment) ನೀಡಿದ ಎಂಬ ಕಾರಣವನ್ನು ನಮೂದು ಮಾಡುವಾಗ ಅಲ್ಲಿ ಸಂತ್ರಸ್ತೆ ಅಥವಾ ಸಂತ್ರಸ್ತ ಮೃತಪಟ್ಟಿರಬೇಕು. ಸಂತ್ರಸ್ತರು ಜೀವಂತ ಇದ್ದಾಗಾಲೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ, ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯವಿಲ್ಲ'' ಎಂದು ನ್ಯಾಯಪೀಠ ವಿಶದಪಡಿಸಿದೆ.

''ಈ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಅರ್ಜಿದಾರರ ಪತ್ನಿಯು ಬದುಕಿರುವಾಗ ತನಿಖಾಧಿಕಾರಿ ಮೂಲ ತತ್ವವನ್ನೇ ಮರೆತು ಕಲಂ 108ರ (ಪ್ರಚೋದನೆಯಿಂದ ಆತ್ಮಹತ್ಯೆ) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಮೂರ್ಖತನ" ಎಂದು ಕಿಡಿ ಕಾರಿದೆ.

''ಅಜಾಗರೂಕತೆ ಅಥವಾ ಕಾನೂನು ಕ್ರಮ ಕೈಗೊಳ್ಳುವ ಆತುರದಲ್ಲಿ, ಅರ್ಜಿದಾರರನ್ನು ಬಂಧಿಸಿ ಇಡಲಾಗಿದೆ. ಇದು ತನಿಖೆಯ ಅವಿವೇಕ ಮತ್ತು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಆಳವಾದ ಅಸಡ್ಡೆ ಹೊಂದಿರುವುದನ್ನು ಪ್ರತಿಬಿಂಬಿಸುತ್ತದೆ'' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

''ತನಿಖಾಧಿಕಾರಿಯ (ಇನ್ ಸ್ಪೆಕ್ಟರ್) ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರುವ ಈ ಪ್ರಕರಣ ನ್ಯಾಯಾಂಗದ ಮನಃಸ್ಸಾಕ್ಷಿಗೆ ಆಘಾತ ಉಂಟು ಮಾಡಿದೆ. ಪ್ರಾಸಿಕ್ಯೂಷನ್ ತುಳಿದಿರುವ ತಪ್ಪು ಹಾದಿಯಿಂದಾಗಿ ಅರ್ಜಿದಾರರು ಆರು ತಿಂಗಳಿಗೂ ಹೆಚ್ಚು ಕಾಲ ಜೈಲಿನ ಕಂಬಿಗಳ ಹಿಂದೆ ನರಳುವಂತಾಗಿದೆ. ಈ ಕೂಡಲೇ ಅರ್ಜಿದಾರರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು'' ಎಂದು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಿದೆ.

ಅಂತೆಯೇ, ''ಅರ್ಜಿದಾರ ಪತಿ ಮತ್ತು ದೂರುದಾರ ಪತ್ನಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವ ನಿರ್ಧಾರವನ್ನು ಮನ್ನಿಸಲಾಗಿದೆ'' ಎಂದು ನ್ಯಾಯಪೀಠ ಹೇಳಿದೆ.

ವರದಿ ಸಲ್ಲಿಸಿ: ''ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧದ ಇಲಾಖಾ ವಿಚಾರಣೆಯ ವರದಿಯನ್ನು ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂದು ಪ್ರಾಸಿಕ್ಯೂಷನ್ ಗೆ ನಿರ್ದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಆ‌ರ್.ರಂಗನಾಥ ರಡ್ಡಿ ವಾದ ಮಂಡಿಸಿದ್ದರು.

ಪ್ರಕರಣ: ಅರ್ಜಿದಾರ ಯುವಕ ಮತ್ತು ಪ್ರಕರಣದ ದೂರುದಾರ ಯುವತಿ ಪರಸ್ಪರ ಪ್ರೀತಿಸಿ 2018ರ ಅಕ್ಟೋಬರ್ ನಲ್ಲಿ ಮದುವೆಯಾಗಿದ್ದು ಒಂದು ವರ್ಷದ ಹೆಣ್ಣು ಮಗುವಿದೆ.

ಕಳೆದ ವರ್ಷ ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಕೌಟುಂಬಿಕ ಜಗಳ ನಡೆದಿತ್ತು. ಮಾತಿನ ಭರದಲ್ಲಿ ಪತ್ನಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮನೆಯ ಎರಡನೆಯ ಮಹಡಿಯಿಂದ ಕೆಳಗೆ ಜಿಗಿದಿದ್ದರು. ಪರಿಣಾಮ ಬೆನ್ನುಮೂಳೆ ಮತ್ತು ಕೈ ಮುರಿದಿತ್ತು. ನಂತರ ಸಂಪೂರ್ಣ ಚೇತರಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಪತ್ನಿಯು ಪತಿಯ ವಿರುದ್ದ ದೂರು ನೀಡಿದ್ದರು. ಪೊಲೀಸರು, ಭಾರತೀಯ ನ್ಯಾಯ ಸಂಹಿತೆ-2023ರ (ಬಿಎನ್‌ಎಸ್) ಕಲಂ 108, 62, 85 ಮತ್ತು 352ರ ಅಡಿಯಲ್ಲಿ ಎಫ್‌ಐಆ‌ರ್ ದಾಖಲಿಸಿ ನಂತರ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

29/05/2026
CRIME NEWS : ನಿಮ್ಮಪ್ಪನಿಗೆ ಹುಟ್ಟಿದ್ರೆ ಖಾಕಿ ಬಿಚ್ಚಿ ಬಾ - ಪೊಲೀಸರಿಗೇ ರೌಡಿ ಸ್ಟಾನ್ಲಿ ಅವಾಜ್‌ ಹಾಕಿದ್ದ ವಿಡಿಯೋ ವೈರಲ್‌! VIDEOಕೆಜಿಎಫ್...
26/05/2026

CRIME NEWS : ನಿಮ್ಮಪ್ಪನಿಗೆ ಹುಟ್ಟಿದ್ರೆ ಖಾಕಿ ಬಿಚ್ಚಿ ಬಾ - ಪೊಲೀಸರಿಗೇ ರೌಡಿ ಸ್ಟಾನ್ಲಿ ಅವಾಜ್‌ ಹಾಕಿದ್ದ ವಿಡಿಯೋ ವೈರಲ್‌! VIDEO

ಕೆಜಿಎಫ್ ನಲ್ಲಿ ಮದುವೆ ಮನೆಯಿಂದಲೇ ರೌಡಿಶೀಟರ್ ಬಂಧನ ಪ್ರಕರಣದಲ್ಲಿ ರೌಡಿ ಸ್ಟಾನ್ಲಿಯ (Rowdy Stanly ಮತ್ತೊಂದು ಕುಖ್ಯಾತ ವಿಡಿಯೋ ಹೊರಬಿದ್ದಿದೆ. ಆರೋಪಿಯಯನ್ನು ಬಂಧಿಸಲು ಆಗಮಿಸಿದ್ದ ಸಬ್ ಇನ್ಸ್ಪೆಕ್ಟರ್ ಗೆ ಆವಾಜ್ ಹಾಕಿದ್ದ ರೌಡಿಶೀಟರ್ ಸ್ಟ್ಯಾನ್ಲಿ, ನಿಮ್ಮಪ್ಪನಿಗೆ ಹುಟ್ಟಿದ್ದರೆ ಖಾಕಿ ಬಿಚ್ಚಿ ಬಾ ಎಂದು ತನ್ನ ಸಂಬಂಧಿಕರ ಎದುರು ಪ್ರತಾಪ ಮೆರೆದಿದ್ದಾನೆ.
ಪೊಲೀಸ್ ಯೂನಿಪಾರ್ಮ್ ಕಳಚಿ ಬರ್ತೀಯಾ ನನ್ನ ಹತ್ರ ಎಂದು ಸಬ್ ಇನ್ಸ್ಪೆಕ್ಟರ್ ಗೆ ಪಂಥಾಹ್ವಾನ ನೀಡಿದ್ದ ವೀಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಪ್ರಾಯಶ್ಚಿತ್ತ: ದೇವಿಯ ದರ್ಶನ..!!'ಕಾಂತಾರ' ದೈವದ ಅಣಕ ಪ್ರಕರಣದಲ್ಲಿ ಹೈಕೋರ್ಟ್ ಆದೇಶದಂತೆ...
26/05/2026

ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಪ್ರಾಯಶ್ಚಿತ್ತ: ದೇವಿಯ ದರ್ಶನ..!!

'ಕಾಂತಾರ' ದೈವದ ಅಣಕ ಪ್ರಕರಣದಲ್ಲಿ ಹೈಕೋರ್ಟ್ ಆದೇಶದಂತೆ, ನಟ ರಣವೀರ್ ಸಿಂಗ್ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದ ಅವರು, ಗರ್ಭಗುಡಿ ಮುಂದೆ ಮಂಡಿಯೂರಿ ಸುಮಾರು 10 ನಿಮಿಷ ಪ್ರಾರ್ಥನೆ ಸಲ್ಲಿಸಿ ಕ್ಷಮೆ ಯಾಚಿಸಿದ್ದಾರೆ. ನ್ಯಾಯಾಲಯದ ಷರತ್ತು ಪೂರೈಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ನಟ ಯತ್ನಿಸಿದ್ದಾರೆ.

ಕನ್ನಡಿಗರ ವಿರುದ್ಧ ತೊಡೆ ತಟ್ಟಿದ ತಮಿಳುನಾಡು ಸಿಎಂ ವಿಜಯ್‌; ಮೇಕೆದಾಟು ಯೋಜನೆ ನಿಲ್ಲಿಸುವಂತೆ ಪ್ರಧಾನಿ ಮೋದಿಗೆ ಪತ್ರ
26/05/2026

ಕನ್ನಡಿಗರ ವಿರುದ್ಧ ತೊಡೆ ತಟ್ಟಿದ ತಮಿಳುನಾಡು ಸಿಎಂ ವಿಜಯ್‌; ಮೇಕೆದಾಟು ಯೋಜನೆ ನಿಲ್ಲಿಸುವಂತೆ ಪ್ರಧಾನಿ ಮೋದಿಗೆ ಪತ್ರ

25/05/2026

ಆನೇಕಲ್ : ಹಚ್ಚ ಹಸುರಿನ ಗಿಡ ಮರಗಳ ನಡುವೆ ಧುಮ್ಮಿಕ್ಕುತ್ತಿರುವ ಬೆಂಗಳೂರು ಹೊರವಲಯದಲ್ಲಿರುವ ಆನೇಕಲ್ ತಾಲೂಕಿನ ಮುತ್ಯಾಲಮಡುವು ಜಲಪಾತ, ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ನಿರಂತರ ಮಳೆಯಾಗುತ್ತಿರುವ ಜಲರಾಶಿಯಿಂದ ಮೈತುಂಬಿಕೊಂಡಿರುವ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಆನೇಕಲ್ ನಲ್ಲಿ ಗುಡುಗು ಸಹಿತ ಮಳೆ.....ಕಾಮೆಂಟ್ box On.....
25/05/2026

ಆನೇಕಲ್ ನಲ್ಲಿ ಗುಡುಗು ಸಹಿತ ಮಳೆ.....

ಕಾಮೆಂಟ್ box On.....

Nice pillow...
25/05/2026

Nice pillow...

Buy SEJ By Nisha Gupta Yellow Floral Polyester Washable Square Cushion Covers 16 X 16 In - - Home for Unisex from SEJ By Nisha Gupta at Rs. 306

Address

TILAK Circle ANEKAL TOWN
Anekal
562106

Alerts

Be the first to know and let us send you an email when NKtvkannada posts news and promotions. Your email address will not be used for any other purpose, and you can unsubscribe at any time.

Contact The Business

Send a message to NKtvkannada:

Share