NKtvkannada

NKtvkannada ಉತ್ತಮ ಸಮಾಜ ನಮ್ಮ ಆಶಯ
(1)

22/08/2026

ಚಂದಾಪುರದ ಶ್ರೀ ಶನಿ ಮಹಾತ್ಮ ದೇವಾಲಯದ ಆಡಳಿತ ಮಂಡಳಿಯವರಿಂದ ಮಹತ್ತರ ಸುದ್ದಿಗೋಷ್ಟಿ

ಬಂದ್.. ಬಂದ್.. ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್ ನಾಗರಾಜ್!ಆನೇಕಲ್ : ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆ ಆಗಸ್ಟ್ 13ರಂದ...
10/08/2026

ಬಂದ್.. ಬಂದ್.. ಬಂದ್ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್ ನಾಗರಾಜ್!

ಆನೇಕಲ್ : ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆ ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಆದರೆ ಕರ್ನಾಟಕ ಬಂದ್‌ ಇರುತ್ತಾ? ಇಲ್ವಾ? ಎನ್ನುವ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದ್ದು, ಈ ಕುರಿತಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆ ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹಲವು ಸಂಘಟನೆಗಳು ಬೆಂಬಲ ಹಿಂಪಡೆಯುತ್ತಿದ್ದು, ಬಂದ್‌ ಬಹುತೇಕ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು.

ಬೆಂಗಳೂರಿನ ಅತ್ತಿಬೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಇಡೀ ಕರ್ನಾಟಕದ ಉದ್ದಗಲಕ್ಕೂ ಬಂದ್ಗೆ ಬೆಂಬಲವಿದೆ. 2000ಕ್ಕೂ ಮೇಲ್ಪಟ್ಟು ಸಂಘಟನೆಗಳು ಬೆಂಬಲ ನೀಡಿವೆ. ವಿಧ್ಯಾರ್ಥಿಗಳು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ನಮ್ಮ ಬೇಡಿಕೆಗೆ ಬಂದ್ ಮಾಡಿದರೆ ಅದರ ಶಕ್ತಿಯೇ ಬೇರೆ ಎಂದರು.

ಬಂದ್ ಮಾಡೋದು ಬೇಡ ಅಂತ ನನ್ನ ಹತ್ತಿರ ಯಾರು ಹೇಳಿಲ್ಲ. ಬಂದ್ ಮಾಡಬೇಕು ಅಂತಾನೇ ಎಲ್ಲರೂ ಹೇಳಿರೋದು. ಕನ್ನಡ ಒಕ್ಕೂಟದಲ್ಲಿ ಯಾವುದೇ ರೀತಿಯ ಬಿರುಕು ಮೂಡಿಲ್ಲ. ಮಳೆ ಬಂದು ಯಾವ ಡ್ಯಾಂ ತುಂಬಿದೆ, ಕೆಆರ್ಎಸ್ ಡ್ಯಾಂ ಇನ್ನೂ ತುಂಬಿಲ್ಲ ಎಂದು ಹೇಳಿದರು.

ಆಗಸ್ಟ್ 13ರ ಇಡೀ ಕರ್ನಾಟಕ ಬಂದ್‌ಗೆ ಸರ್ವ ಭಾಷಿಕರು ಬೆಂಬಲ ನೀಡಬೇಕು ಹಾಗೂ ಪ್ರತಿಯೊಬ್ಬರೂ ಬೀದಿಗಿಳಿದು ಮನೆ-ಮನೆಯಿಂದ ಈಡುಗಾಯಿ ಹೊಡೆದು ಬಂದ್ ಯಶಸ್ವಿಗೊಳಿಸುವಂತೆ' ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

ಆಪರೇಷನ್‌ ಮುಕ್ತ | 50 ಸ್ಥಳಗಳಲ್ಲಿ ಶೋಧ: ಬಾಂಗ್ಲಾದ 53 ಅಕ್ರಮ ವಲಸಿಗರ ಸೆರೆಬೆಂಗಳೂರು: ಅಕ್ರಮ ವಲಸಿಗರ ಪತ್ತೆ ಹಾಗೂ ಗಡಿಪಾರಿಗೆ 'ಆಪರೇಷನ್‌ ಮ...
09/08/2026

ಆಪರೇಷನ್‌ ಮುಕ್ತ | 50 ಸ್ಥಳಗಳಲ್ಲಿ ಶೋಧ: ಬಾಂಗ್ಲಾದ 53 ಅಕ್ರಮ ವಲಸಿಗರ ಸೆರೆ

ಬೆಂಗಳೂರು: ಅಕ್ರಮ ವಲಸಿಗರ ಪತ್ತೆ ಹಾಗೂ ಗಡಿಪಾರಿಗೆ 'ಆಪರೇಷನ್‌ ಮುಕ್ತ' ಹೆಸರಿನಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ನಗರ ಪೊಲೀಸರು, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ವೈಟ್‌ಫೀಲ್ಡ್‌ ವಿಭಾಗದಲ್ಲಿ ಶನಿವಾರ ಒಂದೇ ದಿನ ಒಟ್ಟು 53 ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಬಂಧಿಸಿದ್ದಾರೆ.

ಎರಡೂ ವಿಭಾಗದಲ್ಲೂ ಅಂದಾಜು ಮೂರು ಸಾವಿರ ಮಂದಿ ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದರು.

ಕಾರ್ಯಾಚರಣೆ ವೇಳೆ ವೈಟ್‌ಫೀಲ್ಡ್‌ ವಿಭಾಗದಲ್ಲಿ 38 ಹಾಗೂ ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಬಾಂಗ್ಲಾದೇಶದ 15 ಅಕ್ರಮ ವಲಸಿಗರು ಪತ್ತೆ ಆಗಿದ್ದು, ಅವರನ್ನು ಬಂಧಿಸಿ ನೆಲಮಂಗಲದ ಸೊಂಡೆಕೊಪ್ಪ ಬಳಿಯ ವಲಸಿಗರ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

'ಸಾರ್ವಜನಿಕರ ಸುರಕ್ಷತೆ, ಶಾಂತಿ ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆ ಕಾಪಾಡುವ ಉದ್ದೇಶದಿಂದ ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಆರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ನೆಲಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ವಿಶೇಷ ತಪಾಸಣೆ ನಡೆಸಲಾಯಿತು' ಎಂದು ಡಿಸಿಪಿ ಎಂ.ನಾರಾಯಣ ತಿಳಿಸಿದರು.

ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೇಪಾಳ್ಯ, ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು. ಜತೆಗೆ, ವೈಟ್‌ಫೀಲ್ಡ್‌ ವಿಭಾಗದ ಡಿಸಿ‍‍ಪಿ ಸೈದುಲ್ಲಾ ಅಡಾವತ್‌ ನೇತೃತ್ವದಲ್ಲೂ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಿ, ತಪಾಸಣೆ ನಡೆಸಿದರು. ಅಕ್ರಮ ವಲಸಿಗರನ್ನು ಪತ್ತೆ ಮಾಡಿದರು.

#ಎಲೆಕ್ಟ್ರಾನಿಕ್_ಸಿಟಿ_ವಿಭಾಗದ_ಕಾರ್ಯಾಚರಣೆ_ವಿವರ

ಪೊಲೀಸ್ ಠಾಣೆ ವಶಕ್ಕೆ ಪಡೆದ ಸಂಶಯಾಸ್ಪದ ವ್ಯಕ್ತಿಗಳು

ಪರಪ್ಪನ ಅಗ್ರಹಾರ - 355

ಹುಳಿಮಾವು - 219

ಖಂಡೇಪಾಳ್ಯ- 244

ಬೇಗೂರು - 339

ಎಲೆಕ್ಟ್ರಾನಿಕ್ ಸಿಟಿ - 550

ಹೆಬ್ಬಗೋಡಿ - 202

ಕಾರ್ಯಾಚರಣೆಗೆ ಒಟ್ಟು 23 ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಕಟ್ಟಡ ನಿರ್ಮಾಣ ಪ್ರದೇಶಗಳು, ಶೆಡ್‌ ಹಾಗೂ ರಹಸ್ಯ ತಾಣಗಳೂ ಸೇರಿದಂತೆ ಒಟ್ಟು 50 ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು. ಕಾರ್ಯಾಚರಣೆ ವೇಳೆ ದಾಖಲೆಗಳು ಇಲ್ಲದೇ ಸಂಶಯಾಸ್ಪದವಾಗಿ ಕಂಡುಬಂದ ಒಟ್ಟು 3 ಸಾವಿರ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಸ್ಥಳದಲ್ಲೇ ಅವರ ಹಿನ್ನೆಲೆ, ಪೌರತ್ವ ಹಾಗೂ ಗುರುತಿನ ಚೀಟಿಗಳನ್ನು ಪರಿಶೀಲನೆ ನಡೆಸಲಾಗಿದೆ.

'ವಶಕ್ಕೆ ಪಡೆಯಲಾದ ಶಂಕಿತರ ವೀಸಾ, ಪಾಸ್‌‍ಪೋರ್ಟ್‌ ಮತ್ತು ರಾಷ್ಟ್ರೀಯತೆಯ ಅಧಿಕೃತ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ 53 ಮಂದಿ ಯಾವುದೇ ಕಾನೂನುಬದ್ಧ ವೀಸಾ ಅಥವಾ ಭಾರತೀಯ ನಾಗರಿಕತ್ವದ ಅಧಿಕೃತ ದಾಖಲೆಗಳನ್ನು ಹೊಂದಿಲ್ಲದೇ ಅಕ್ರಮವಾಗಿ ನೆಲಸಿರುವುದು ಕಂಡುಬಂದಿದೆ. ಬಂಧಿತರು, ಬಾಂಗ್ಲಾದೇಶದ ಬಾಗೇರಹತ್‌, ಖುಲ್ನಾ ಸೇರಿದಂತೆ ವಿವಿಧ ಜಿಲ್ಲೆಯವರು' ಎಂದು ಪೊಲೀಸರು ತಿಳಿಸಿದರು.

ವಿಶೇಷ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದ ಶಂಕಿತರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದರು - ಎಂ.ನಾರಾಯಣ ಡಿಸಿಪಿ ಎಲೆಕ್ಟ್ರಾನಿಕ್‌ ಸಿಟಿವಶಕ್ಕೆ ಪಡೆದವರನ್ನು ವಿಚಾರಣೆ ನಡೆಸಲಾಗುತ್ತಿದೆ. ಎಲ್ಲರ ಮೊಬೈಲ್‌ ವಶಕ್ಕೆ ಪಡೆದು ಸಂಖ್ಯೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಶಂಕಿತರ ಪೈಕಿ ಬಾಂಗ್ಲಾದ ಅಕ್ರಮ ವಲಸಿಗರು ಎಂಬುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ಕಟ್ಟಡದ ಮಾಲೀಕರಿಗೆ ಸೂಚನೆ

ಮಾಲೀಕರು ತಮ್ಮ ಮನೆಗಳನ್ನು ಬಾಡಿಗೆಗೆ ನೀಡುವ ಮುನ್ನ ಅಥವಾ ಯಾವುದೇ ಉದ್ಯೋಗಕ್ಕೆ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಪೂರ್ವಾಪರ ವಿಚಾರಣೆ ನಡೆಸಬೇಕು. ಗುರುತಿನ ಚೀಟಿ ಹಾಗೂ ಪೌರತ್ವ ದಾಖಲೆಗಳನ್ನು ಕಡ್ಡಾಯ ಹಾಗೂ ಕಟ್ಟುನಿಟ್ಟಿನಿಂದ ಪರಿಶೀಲಿಸಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.

ಅಕ್ರಮ ವಲಸಿಗರಿಗೆ ಶೆಡ್ ಬಾಡಿಗೆಗೆ

'ಹಲವು ಕಡೆ ಸ್ಥಳೀಯರು ಶೆಡ್‌ ನಿರ್ಮಿಸಿ ಬಾಡಿಗೆಗೆ ನೀಡುತ್ತಾರೆ. ಅಲ್ಲಿ ಹೊರ ರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದವರು ನೆಲಸುತ್ತಾರೆ. ಅಲ್ಲದೇ ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ಅಕ್ರಮ ವಲಸಿಗರಿಗೂ ಶೆಡ್‌ಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

ವರ್ಷದಲ್ಲಿ 64 ಮಂದಿ ಬಂಧನ

ಆನೇಕಲ್‌ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ 64 ಅಕ್ರಮ ವಲಸಿಗರನ್ನು ಬಂಧಿಸಿ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ) ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು. ಬಳಿಕ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆ ಹೊರಟಿದ್ದವರ ಕಾರು ಭೀಕರ ಅಪಘಾತ - ಆರು ಮಂದಿಗೆ ಗಾಯ! ಶಿವಮೊಗ್ಗ ಜಿಲ್ಲೆಯ ಚೋರಡಿ ಸೇತುವೆ ಸ...
09/08/2026

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆ ಹೊರಟಿದ್ದವರ ಕಾರು ಭೀಕರ ಅಪಘಾತ - ಆರು ಮಂದಿಗೆ ಗಾಯ!

ಶಿವಮೊಗ್ಗ ಜಿಲ್ಲೆಯ ಚೋರಡಿ ಸೇತುವೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೇವಲ ಒಂದೆರಡು ನಿಮಿಷಗಳ ಅಂತರದಲ್ಲಿ ಬೃಹತ್ ದುರಂತವೊಂದು ತಪ್ಪಿದೆ.

ಘಟನೆಯ ವಿವರ:
ಸ್ನೇಹಿತರ ಪ್ರಯಾಣ: ಬೆಂಗಳೂರಿನಿಂದ ಒಂದೇ ಕಾರಿನಲ್ಲಿ ಆರು ಮಂದಿ ಸ್ನೇಹಿತರು ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕಾಗಿ ಹೊರಟಿದ್ದರು.

ನಿಯಂತ್ರಣ ತಪ್ಪಿದ ಕಾರು: ಚೋರಡಿ ಬ್ರಿಡ್ಜ್ ಸಮೀಪ ತಲುಪುತ್ತಿದ್ದಂತೆ ಕಾರು ರಸ್ತೆ ಬದಿಯ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಮೂರು ಬಾರಿ ಪಲ್ಟಿ: ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿ ಮೂರು ಬಾರಿ ಪಲ್ಟಿಯಾಗಿದೆ.

ಗಾಯಾಳುಗಳ ಸ್ಥಿತಿ:
ಕಾರಿನಲ್ಲಿದ್ದ ಆರೂ ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಪೊಲೀಸ್ ವಾಹನದ ಅಪಘಾತ:
ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸಾಗರ ಪೇಟೆ ಠಾಣೆಯ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದರು. ಕಾರು ಪಲ್ಟಿಯಾದ ಒಂದೆರಡು ನಿಮಿಷ ಮುಂಚಿತವಾಗಿ ಪೊಲೀಸ್ ವಾಹನ ಬಂದಿದ್ದರೆ, ಅಪಘಾತಕ್ಕೀಡಾದ ಕಾರು ಪೊಲೀಸ್ ವಾಹನಕ್ಕೂ ಡಿಕ್ಕಿಯಾಗುವ ಅಪಾಯವಿತ್ತು!

ಪ್ರಯಾಣಿಕರ ಗಮನಕ್ಕೆ: ಸುದೀರ್ಘ ಪ್ರಯಾಣದ ವೇಳೆ ಚಾಲನೆಯಲ್ಲಿ ಜಾಗರೂಕರಾಗಿರಿ, ವೇಗಕ್ಕಿಂತ ಜೀವ ಮುಖ್ಯ. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸೋಣ.

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ದಾಳಿ.ವೈಟ್ ಫೀಲ್ಡ್ ಪೊಲೀಸರಿಂದ ಮೆಗಾ ರೇಡ್.ವೈಟ್ ಫೀಲ್ಡ್ ಸುತ್ತಮುತ್ತ ಐದಾರು ಕಡೆ ದಾಳಿ ಶೋಧ.ಬ...
08/08/2026

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ದಾಳಿ.

ವೈಟ್ ಫೀಲ್ಡ್ ಪೊಲೀಸರಿಂದ ಮೆಗಾ ರೇಡ್.

ವೈಟ್ ಫೀಲ್ಡ್ ಸುತ್ತಮುತ್ತ ಐದಾರು ಕಡೆ ದಾಳಿ ಶೋಧ.

ಬಾಂಗ್ಲಾ ವಲಸಿಗರ ಶೆಡ್ ಗಳಲ್ಲಿ ಪರಿಶೀಲನೆ.

ಬೆಳಗ್ಗೆ ಐದು ಗಂಟೆಯಿಂದ ನಡೆಯುತ್ತಿರುವ ದಾಳಿ.

*ಆಪರೇಶನ್ ಮುಕ್ತ* ಹೆಸರಿನಲ್ಲಿ ಕಾರ್ಯಚರಣೆ.

ಬೆಂಗಳೂರಿನ ವೈಟ್ ಫೀಲ್ಡ್, ಕಾಡುಗೋಡಿ, ಮಾರತ್ತಹಳ್ಳಿ, ಬೆಳ್ಳಂದೂರು, ವರ್ತೂರು ಮಹದೇವಪುರ ಸೇರಿ ಹಲವೆಡೆ ದಾಳಿ.

ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಪತ್ತೆ ಕಾರ್ಯ.

07/08/2026
ಮುದರಂಗಡಿ ಮಾಜಿ ಗ್ರಾ.ಪಂ. ಅಧ್ಯಕ್ಷ ಡೇವಿಡ್ ಡಿಸೋಜ ಹ*ತ್ಯೆ - ಗುಂಡು ಹಾರಿಸಿ ಕೊ*ಲೆಉಡುಪಿ : ಜಿಲ್ಲೆಯ ಮುದರಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್...
07/08/2026

ಮುದರಂಗಡಿ ಮಾಜಿ ಗ್ರಾ.ಪಂ. ಅಧ್ಯಕ್ಷ ಡೇವಿಡ್ ಡಿಸೋಜ ಹ*ತ್ಯೆ - ಗುಂಡು ಹಾರಿಸಿ ಕೊ*ಲೆ

ಉಡುಪಿ : ಜಿಲ್ಲೆಯ ಮುದರಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರರಾಗಿದ್ದ ಡೇವಿಡ್ ಡಿಸೋಜ ಅವರನ್ನು ಅಪರಿಚಿತರು ಗುಂಡಿಕ್ಕಿ ಹ*ತ್ಯೆಗೈದ ಘಟನೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಇಂದು ಮಧ್ಯಾಹ್ನದ ವೇಳೆಯಲ್ಲಿ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಡೇವಿಡ್ ಡಿಸೋಜ ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಮಾರ್ಗಮಧ್ಯೆಯೇ ಅವರು ಮೃ*ತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕೃತ್ಯದ ಹಿಂದಿನ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕ ವೈಷಮ್ಯ, ವ್ಯವಹಾರಿಕ ಭಿನ್ನಾಭಿಪ್ರಾಯ ಅಥವಾ ಇತರೆ ಯಾವುದೇ ಕಾರಣಗಳಿಂದ ಈ ಹ*ತ್ಯೆ ನಡೆದಿದೆಯೇ ಎಂಬ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಘಟನೆಯ ಕುರಿತು ಇನ್ನಷ್ಟು ಮಾಹಿತಿ ತನಿಖೆಯ ಬಳಿಕವೇ ಬಹಿರಂಗವಾಗುವ ಸಾಧ್ಯತೆ ಇದೆ.

ಹಾಡಹಗಲೇ ದರೋಡೆ ಯತ್ನ: ಚಿನ್ನದ ಅಂಗಡಿ ಮಾಲೀಕನ ಕಾಲಿಗೆ ಗುಂಡೇಟು!ನೆಲಮಂಗಲ : ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ ತಾ...
07/08/2026

ಹಾಡಹಗಲೇ ದರೋಡೆ ಯತ್ನ: ಚಿನ್ನದ ಅಂಗಡಿ ಮಾಲೀಕನ ಕಾಲಿಗೆ ಗುಂಡೇಟು!

ನೆಲಮಂಗಲ : ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ (Crime) ಹಾಡಹಗಲೇ ಭೀಕರ ದರೋಡೆ (Robbery) ಯತ್ನ ನಡೆದಿದ್ದು, ಚಿನ್ನದ ಅಂಗಡಿ ಮಾಲೀಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಡಾಬಸ್ ಪೇಟೆಯ ಪ್ರಸಿದ್ಧ ಪ್ರೇಮ್‌ ಶಿವ ಜೂವೆಲರ್ಸ್ ಬಳಿ ಈ ಘಟನೆ ನಡೆದಿದ್ದು, ಅಂಗಡಿ ಮಾಲೀಕರಾದ ಕುನ್ನಾರಾಮ್ ಅವರ ಬಲಗಾಲಿಗೆ ಗುಂಡೇಟು ಬಿದ್ದಿದೆ.

ಚಿನ್ನಾಭರಣ ದೋಚಲು ಯತ್ನಿಸಿದ ಗುಂಪು

ಕಾರಿನಲ್ಲಿ ಬಂದಿದ್ದ ಸಶಸ್ತ್ರ ದುಷ್ಕರ್ಮಿಗಳ ಗುಂಪು ಏಕಾಏಕಿ ಪ್ರೇಮ್‌ ಶಿವ ಜೂವೆಲರ್ಸ್ ಅಂಗಡಿಗೆ ನುಗ್ಗಿ ಚಿನ್ನಾಭರಣ ದೋಚಲು ಯತ್ನಿಸಿದೆ. ಈ ವೇಳೆ ಜಾಗರೂಕರಾದ ಅಂಗಡಿ ಮಾಲೀಕ ಕುನ್ನಾರಾಮ್ ಅವರು ಧೈರ್ಯದಿಂದ ದರೋಡೆಕೋರರನ್ನು ತಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಳ್ಳರು ತಕ್ಷಣ ತಮ್ಮಲ್ಲಿದ್ದ ಬಂದೂಕಿನಿಂದ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಕಳ್ಳರ ಕೃತ್ಯದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಕುನ್ನಾರಾಮ್ ಅವರಿಗೆ ಗುಂಡೇಟು ಬಿದ್ದರೂ, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎರಡು ಜೀವಂತ ಗುಂಡುಗಳು ಪತ್ತೆ

ಗುಂಡು ಹಾರುತ್ತಿದ್ದಂತೆ ಗಾಬರಿಗೊಂಡ ದರೋಡೆಕೋರರು ಕಳ್ಳತನ ಯತ್ನ ಕೈಬಿಟ್ಟು ಬಂದಿದ್ದ ಕಾರಿನಲ್ಲೇ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳ ಪರಿಶೀಲನೆ ನಡೆಸಿದ ವೇಳೆ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ. ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಖಾಕಿ ಉಡುಪಿನಲ್ಲಿ ಬೆಳಗಿದ ಮಾನವೀಯತೆ! ವಯಸ್ಸಾದ ತಂದೆಯನ್ನು ಕಣ್ಣಿಟ್ಟು ಕಾಯಬೇಕಾದ ಮಗನೇ ಆನೇಕಲ್ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದ ಘಟನೆ ಪ...
07/08/2026

ಖಾಕಿ ಉಡುಪಿನಲ್ಲಿ ಬೆಳಗಿದ ಮಾನವೀಯತೆ!

ವಯಸ್ಸಾದ ತಂದೆಯನ್ನು ಕಣ್ಣಿಟ್ಟು ಕಾಯಬೇಕಾದ ಮಗನೇ ಆನೇಕಲ್ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದ ಘಟನೆ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತರಿಸುವಂತಿತ್ತು. ಸುಮಾರು 70 ವರ್ಷದ ನಂಜುಂಡಪ್ಪ (ಕಾಮಾಕ್ಷಿಪಾಳ್ಯ) ಎಂಬ ವೃದ್ಧರು ಅಸ್ವಸ್ಥರಾಗಿ ಬಿದ್ದಿದ್ದನ್ನು ಕಂಡು, ಸ್ಥಳೀಯ ಸಾರ್ವಜನಿಕರು ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿದ್ದರು.
ಆದರೆ ಆಸ್ಪತ್ರೆಯಿಂದ ಚೇತರಿಸಿಕೊಂಡ ಮೇಲೆಯೂ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಅನಾಥರಾಗಿದ್ದರು.
ಈ ವಿಷಯ ತಿಳಿದ ಆನೇಕಲ್ ಪೊಲೀಸ್ ಠಾಣೆಯ ಎಎಸ್ಐ ಶ್ರೀ ಮಾದಪ್ಪನವರು ತಕ್ಷಣವೇ ಸ್ಪಂದಿಸಿ, ಆ ವೃದ್ಧ ತಂದೆಗೆ ಆಸರೆಯಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಬನ್ನೇರುಘಟ್ಟದಲ್ಲಿರುವ ಪೊಸೊ ಸಾಂತ್ವನ ಕೇಂದ್ರಕ್ಕೆ ತಲುಪಿಸಿ, ಸೂಕ್ತ ಆಶ್ರಯ ದೊರೆಯುವಂತೆ ಮಾಡುವ ಮೂಲಕ ನೈಜ ಖಾಕಿ ಮಾನವೀಯತೆ ಮೆರೆದಿದ್ದಾರೆ!
"ಆಪತ್ತಿನಲ್ಲಿದ್ದ ವೃದ್ಧ ತಂದೆಗೆ ಆಸರೆಯಾದ ಆನೇಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ASI ಮಾದಪ್ಪ ಮತ್ತು ಅವರ ತಂಡ ಕ್ಕೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆಗಳು."
ಖಾಕಿ ಎಂದರೆ ಬರಿ ಕಟ್ಟುನಿಟ್ಟಿನ ಕಾನೂನು ಅಷ್ಟೇ ಅಲ್ಲ, ಅದರ ಹಿಂದೆ ಮಿಡಿಯುವ ಕರುಣೆಯ ಹೃದಯವೂ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Address

TILAK Circle ANEKAL TOWN
Anekal
562106

Alerts

Be the first to know and let us send you an email when NKtvkannada posts news and promotions. Your email address will not be used for any other purpose, and you can unsubscribe at any time.

Contact The Business

Send a message to NKtvkannada:

Shortcuts

Share