NKtvkannada

NKtvkannada ಉತ್ತಮ ಸಮಾಜ ನಮ್ಮ ಆಶಯ
(1)

02/07/2025
30/06/2025

ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ವೀಣಾ ರವಿ ಅವರು ಚುನಾಯಿತರಾದರು.

ಕೊಡತಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಕೃಷ್ಣವೇಣಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸ್ವಾಭಿಮಾನ ಬಣ ಅಭ್ಯರ್ಥಿ ವೀಣಾ ರವಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧಾ ಕಾವೇರಪ್ಪ ಅವರು ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯಲ್ಲಿ 28 ಸದಸ್ಯರಲ್ಲಿ ವೀಣಾ ರವಿ ರವರು 15 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರು. ಇವರ ಪ್ರತಿ ಸ್ಪರ್ಧಿ ರಾಧಾ ಕಾವೇರಪ್ಪ ಅವರು 13 ಮತಗಳನ್ನು ಪಡೆದು ಪರಾಭವಗೊಂಡರು.

ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ವೀಣಾ ರವಿ ಮಾತನಾಡಿ ಕೊಡತಿ ಗ್ರಾಮ ಪಂಚಾಯತಿಯು ನಗರ ಪ್ರದೇಶಕ್ಕೆ ಹೊಂದಿಕೊಂಡಿದೆ. ಹಾಗಾಗಿ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲಾ ಸದಸ್ಯರನ್ನು ವಿಶ್ವಾಸ ಪಡೆದು ಕಾರ್ಯನಿರ್ವಹಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು ಹಾಗೂ ಕೆರೆಕುಂಟೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಬೀದಿ ದೀಪ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಅವಶ್ಯಕ ಸೌಲಭ್ಯಗಳನ್ನು ನೀಡಲಾಗುವುದು ಎಂದರು.

ನೂತನ ಗ್ರಾಮ ಪಂಚಾಯತಿ ಅಧ್ಯಕ್ಷೆ ವೀಣಾ ರವಿ ರವರನ್ನು ಚುನಾಯಿತ ಪ್ರತಿನಿಧಿಗಳು ಮುಖಂಡರು ಹಾಗೂ ಸ್ನೇಹಿತರು ಬೃಹತ್ ಹೂವಿನ ಹಾರ ಹಾಕುವ ಮುಖಾಂತರ ಅಭಿನಂದಿಸಿದರು.

ಕೊಡತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಮಂಜುನಾಥ್, ಮಾಜಿ ಅಧ್ಯಕ್ಷರು ಕೃಷ್ಣವೇಣಿ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ರಮೇಶ್ ರೆಡ್ಡಿ, ಆಶಾ ಚಿಟಿಬಾಬು, ನಾರಾಯಣಸ್ವಾಮಿ ಬಾಬು, ಮಮತಾ ಲಕ್ಷ್ಮಣ್, ನಲಿನಾಕ್ಷಿ, ನಂಜುಂಡ ರೆಡ್ಡಿ, ಶಿವಕುಮಾರ್, ಸತೀಶ್, ರಾಮಸ್ವಾಮಿ, ಮುನಿರಾಜು, ಅಂತೋನಿ ಮೇರಿ, ಯಲ್ಲಮ್ಮ ಶ್ರೀನಿವಾಸ್, ಸಮಾಜ ಸೇವಕರು ಸದಾಶಿವ ರೆಡ್ಡಿ, ಕಾಂಗ್ರೆಸ್ ಮುಖಂಡರು ವರ್ತೂರು ಸುನಿಲ್, ಕುಪ್ಪಿ ಮಂಜುನಾಥ್, ಹಾಗೂ ಸಾರ್ವಜನಿಕರು ಅಭಿಮಾನಿಗಳು.

22/06/2025
22/06/2025

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕು ಸರ್ಕಾರಿ ನೌಕರರ ಸಂಘ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ,ರಮಣ ಮಹರ್ಷಿ ಆಶ್ರಮ, ಜ್ಯೋತಿ ಗಾಯನ ಸಭಾ, ಮಾತೃ ವಾತ್ಸಲ್ಯ ಫೌಂಡೇಷನ್ ವತಿಯಿಂದ ಮರೆಯಾಲಾಗದ ಮಹಾನುಭಾವರು ಕಾರ್ಯಕ್ರಮವನ್ನು ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಆಶ್ರಮದಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಮರೆಯಾಲಾಗದ ಮಹಾನುಭಾವರು ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಮತ್ತು ಸಾಹಿತಿ ಡಾ.ಜಿ.ಎಸ್.ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಶಿಕ್ಷಕರು ಮತ್ತು ಗಾಯಕರು ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತೆಗಳ ಗಾಯನ ನಡೆಸಿಕೊಟ್ಟರು.

ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ ಎಚ್ಎಸ್ವಿ ಅವರು ಆನೇಕಲ್ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆನೇಕಲ್ ಅವರಿಗೆ ಎರಡನೇ ತವರುಮನೆಯಾಗಿತ್ತು. ಎಚ್ಎಸ್ವಿ ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಎಚ್ಎಸ್ವಿ ಅವರು ಕುಟುಂಬವನ್ನು ಪ್ರೀತಿಸುವುದರ ಜೊತೆಗೆ ವಿಶ್ವ ಕುಟುಂಬಕ್ಕೆ ಬೆಲೆ ನೀಡುತ್ತಿದ್ದರು ಎಂದರು.

ಲೇಖಕ ಡಾ.ಎಚ್.ಎಸ್.ಸತ್ಯನಾರಾಯಣ್ ಮಾತನಾಡಿ ಮರಣವನ್ನು ಸ್ಮರಣೆಯಿಂದ ಗೆಲ್ಲಬೇಕು ಎಂಬ ಮಾತಿದೆ. ಅದರಂತೆ ಎಚ್ಎಸ್ವಿ ಅವರಂತಹ ಕವಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಹಿತ್ಯ, ಕವಿತೆ, ಕವನಗಳು ನಮ್ಮೊಂದಿಗಿದೆ. ಎಚ್ಎಸ್ವಿ ಅವರು ಸಾಹಿತ್ಯ ಕೃಷಿಯಲ್ಲಿ 124 ಪುಸ್ತಕಗಳನ್ನು ಬರೆದಿದ್ದಾರೆ. ನಾಟಕ, ಕಥಾಸಂಕಲನ, ಶಿಶು ಸಾಹಿತ್ಯ ಸೇರಿದಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ಕೊಡುಗೆ ನೀಡಿದ್ದಾರೆ ಎಂದರು.

ಸಾಹಿತ್ಯ ಶೂದ್ರ ಶ್ರೀನಿವಾಸ್, ಎಚ್ಎಸ್ವಿ ಅವರ ಕುಟುಂಬಸ್ಥರಾದ ಸುಧೀರ್, ಶಾಲಿನಿ, ಶ್ರೀರಮಣ ಮಹರ್ಷಿ ಆಶ್ರಮದ ಮುಖ್ಯಸ್ಥ ಬಿ.ಶ್ರೀನಿವಾಸರೆಡ್ಡಿ, ಕೆಎಸ್ನ ಟ್ರಸ್ಟ್ನ ಅಧ್ಯಕ್ಷ ಕಿಕ್ಕೀರಿ ಕೃಷ್ಣಮೂರ್ತಿ, ತಿಲಕ್ ನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್, ಭುದಾಖಲೆ ಇಲಾಖೆಯ ಎಡಿಎಲ್ಆರ್ ಮದನ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ, ಅನುದಾನ ರಹಿತ ಶಾಲೆಗಳ ಒಕ್ಕೂಟದ ರವಿಕುಮಾರ್, ಡಿ.ಮುನಿರಾಜು, ಚಿನ್ಮಯ ಸೇವಾ ಸಂಸ್ಥೆಯ ಚಿನ್ನಪ್ಪ.ವೈ.ಚಿಕ್ಕಹಾಗಡೆ, ನಾಗವೇಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್, ಗೌರವ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಸರ್ವೆ ಚಂದ್ರಶೇಖರ್, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಮಹೇಶ್ ಊಗಿನಹಳ್ಳಿ, ಮಾತೃ ವಾತ್ಸಲ್ಯ ಸಂಸ್ಥೆಯ ಅನ್ನಪೂರ್ಣ, ಕಂಠೀರವ ನೃತ್ಯ ಸಂಗೀತ ಸಭಾದ ಅಧ್ಯಕ್ಷ ಪಿ.ಧನಂಜಯ, ಜ್ಯೋತಿ ಗಾಯನ ಸಭಾದ ಭಾಗಪ್ಪ ಗೊರನಾಳ, ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸರೋಜಮ್ಮ ಇದ್ದರು.

21/06/2025
21/06/2025
11/06/2025

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ಆನೇಕಲ್ ತಾಲೂಕು ಸಮಿತಿ ವತಿಯಿಂದ ಪ್ರೊ. ಬಿ.ಕೃಷ್ಣಪ್ಪರವರ 87ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಾಭಿಮಾನ ಸಂಘರ್ಷದ ದಿನವನ್ನಾಗಿ ತಾಲೂಕಿನ ಕಾವಲಹೊಸಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರೊ. ಬಿ.ಕೃಷ್ಣಪ್ಪರವರ ಹೋರಾಟದ ದಿನಗಳನ್ನು ಮೆಲುಕು ಹಾಕುವ ಮೂಲಕ ಯುವಜನಕ್ಕೆ ಅವರ ಆದರ್ಶಗಳನ್ನು ತಿಳಿಸಿದರು. ಪ್ರೊ. ಬಿ.ಕೃಷ್ಣಪ್ಪರವರ ಡಾ.ಬಿ.ಆರ್. ಅಂಬೇಡ್ಕರ್ ರವರ ಅನುಯಾಯಿಗಳಾಗಿದ್ದು ಅಂಬೇಡ್ಕರ್ ರವರಂತೆ ಇವರು ಸಹ ಹೋರಾಟಗಳ ಮೂಲಕ ನೊಂದವರು ಶೋಷಿತರ ಪರವಾಗಿ ನಿಲ್ಲುತ್ತಿದ್ದರು ಅವರಂತೆಯೇ ನಾವು ಸಹ ಎಲ್ಲಾ ದಲಿತ ಪರ ಸಂಘಟನೆಗಳು ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಹಾ ಸಂಘಟಿತರಾಗಿ ಹೋರಾಟಗಳ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಕಾರ್ಯಕ್ರಮದಲ್ಲಿ ಕರೆಕೊಟ್ಟರು.

ಹಾಗೆಯೇ ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ಸಂಘಟನೆಯ ಮಹಿಳಾ ಘಟಕ ಮತ್ತು ವಿದ್ಯಾರ್ಥಿ ಘಟಕವನ್ನ ಇಂದು ಪುನರ್ ರಚನೆ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಗೋವಿಂದರಾಜು, ಚಿಕ್ಕಹಾಗಡೆ ಶ್ರೀನಿವಾಸ್, ಕೃಷ್ಣಪ್ಪ, ಸಿ.ಎಂ.ಮುನಿರಾಜು, ಮಹೇಂದ್ರ, ಬನ್ನಹಳ್ಳಿ ಮುನಿಯಪ್ಪ, ದೊಮ್ಮಸಂದ್ರ ಮುನಿರಾಜು, ಆನಂದ್ ಕುಮಾರ್, ಬನ್ನಹಳ್ಳಿ ಮುರುಳಿ, ಗೋಪಸಂದ್ರ ರಮೇಶ್, ಬನ್ನೇರುಘಟ್ಟ ಮುನಿರಾಜು ಹಾಗು ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.

09/06/2025

ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರನ್ನು ಬುದ್ಧ, ಬಸವ, ಅಂಬೇಡ್ಕರ್ ಆಶೀರ್ವದಿಸಲಿ. ಅವರು ಮತ್ತಷ್ಟು ಕನ್ನಡ ಸೇವೆ ಮಾಡುವಂತಹ ಆರೋಗ್ಯ, ಸಂಪತ್ತು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಕನ್ನಡ ಜಾಗೃತಿ ವೇದಿಕೆ ಯುವ ಘಟಕದ ರಾಜ್ಯಾಧ್ಯಕ್ಷ ಎಸ್ ಕೆ ಗೌರೀಶ್....

09/06/2025

ಆನೇಕಲ್ ಪಟ್ಟಣದ ತಿಲಕ್ ಸರ್ಕಲ್ ಗೆಳೆಯರ ಬಳಗದ ವತಿಯಿಂದ ಮನು (ಅವರೆಕಾಯಿ ಮನು) ರವರ ಹುಟ್ಟುಹಬ್ಬ ಸಂಭ್ರಮ

09/06/2025

ಆನೇಕಲ್: ತಾಲ್ಲೂಕಿನ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಶಿಷ್ಟಾಚಾರ ಪಾಲನೆ ಸಂಬಂಧ ಶಾಸಕ ಬಿ.ಶಿವಣ್ಣ ಅವರು ತಿಳಿಹೇಳಲಿ ಎಂದು ಮರಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ರೆಡ್ಡಿ ತಿಳಿಸಿದ್ದಾರೆ.

ತಾಲ್ಲೂಕಿನ ಆಡಿಸೊಣ್ಣಹಟ್ಟಿಯಲ್ಲಿ ನಡೆದ ಕಾಂಕ್ರೀಟ್ ರಸ್ತೆ ಕಾಮಗಾರಿ ಚಾಲನೆ ಸಂಬಂಧ ನಿಲ್ಲಿಸಲಾಗಿದ್ದ ಪ್ಲೆಕ್ಸ್ ಗಳಲ್ಲಿ ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಹಾಕಿರುವ ಕುರಿತು ಮಾತನಾಡಿದ ಅವರು, ಸರಕಾರಿ ಕಾಮಗಾರಿಗಳಲ್ಲಿ ಸಂಸದರ ಭಾವಚಿತ್ರವನ್ನು ಬೇಕಂತಲೇ‌ ಕೈ ಬಿಟ್ಟಿರುವ ಕುರಿತು ಸ್ಥಳದಲ್ಲಿಯೇ ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡು ಕಾಮಗಾರಿ ಚಾಲನೆ ವೇಳೆಯೇ ಹೊರ ನಡೆದರು.

09/06/2025

ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದ ಅಮಾನಿಕೆರೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಿ.ಶಿವಣ್ಣ.

ತಾಲೂಕಿನ ಮುತ್ತಾನಲ್ಲೂರು ಗ್ರಾಮದ ಅಮಾನಿಕೆರೆ ಕೋಡಿಯಲ್ಲಿ ಮಳೆ ಬಂದು ನೀರು ಹರಿಯುವಾಗ ವಾಹನಸವರು ಪರದಾಡುತ್ತಿದ್ದರು ಅದನ್ನು ಮನಗೊಂಡು ಶಾಸಕ ಬಿ.ಶಿವಣ್ಣ ರವರ ಅನುದಾನದಲ್ಲಿ ವಾಹನಗಳು ಸರಾಗವಾಗಿ ಓಡಾಡುವಂತೆ ಸೇತುವೆ ನಿರ್ಮಿಸಲು ಹಾಗು ಕೆರೆ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಜಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಬಾಬು, ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ ಕಾಂತರಾಜ್, ಉಪಾಧ್ಯಕ್ಷರಾದ ಮಂಜುಳಾ, ಪಂಚಾಯಿತಿ ಸದಸ್ಯರಾದ ತೇಜಸ್ವಿನಿ ಶ್ರೀನಿವಾಸ್ ರೆಡ್ಡಿ, ಎಸ್.ಕೆ.ಗೌರೀಶ್, ಜಯರಾಮ್ ಸರ್ಜಾ, ಮುಖಂಡರಾದ ಸುರೇಶ್ ರೆಡ್ಡಿ, ನವೀನ್, ಮೋಹನ್. ರಾಜಾರೆಡ್ಡಿ, ಶ್ರೀನಿವಾಸ್ ರೆಡ್ಡಿ, ಮುರುಗೇಶ್, ನಾಗರಾಜಪ್ಪ, ಮತ್ತು ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.

Address

Anekal

Alerts

Be the first to know and let us send you an email when NKtvkannada posts news and promotions. Your email address will not be used for any other purpose, and you can unsubscribe at any time.

Contact The Business

Send a message to NKtvkannada:

Share