Anekal Times

Anekal Times "ಬದಲಾವಣೆ ನಮ್ಮ ಗುರಿ" ಯಾರಿಗು ಹೆದರುವುದು ಇಲ್ಲ ಬೆದರುವುದು ಇಲ್ಲ.

03/11/2025

ತೆಲಂಗಾಣ

ತೆಲಂಗಾಣದಲ್ಲಿ ಭೀಕರ ಅಪಘಾತ
ಸರಕಾರಿ ಬಸ್ ಮೇಲೆ ಟಿಪ್ಪರ್ ಮಗುಚಿ ದುರಂತ
ತೆಲಂಗಾಣದ ಅಪಘಾತದಲ್ಲಿ 20 ಜನ ಸಾವು
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಅಪಘಾತ
ಬಸ್ ಗೆ ಟಿಪ್ಪರ್ ಗುದ್ದಿದ ಹೊಡೆತಕ್ಕೆ ನಜ್ಜು ಗುಜ್ಜು
ಸಂಪೂರ್ಣ ನಜ್ಜು ಗುಜ್ಜು ಆಗಿರೋ ಸರ್ಕಾರಿ ಬಸ್

03/11/2025

ರಾಜಸ್ಥಾನದ ಜೋಧಪುರದಲ್ಲಿ ಘನಘೋರ ದುರಂತ.
ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ
18 ಮಂದಿ ಸಾವು. ಭಕ್ತರನ್ನು ಕೊಂಡೊಯ್ಯು ತ್ತಿದ್ದ ಟೆಂಪೋ ಟ್ರಾವೆಲರ್ ವಾಹನ. ಜೋಧಪುರ ಜಿಲ್ಲೆ ಫಲೋದಿ ತಾಲೂಕಿನ ಮಾತೋಡಾ ಗ್ರಾಮದ ಬಳಿ ಘಟನೆ.

31/10/2025

ಬೆಂಗಳೂರಿನಲ್ಲಿ ಮಂಗಳ ಮುಖಿಯರ ಗ್ಯಾಂಗ್ ವಾರ್

ಸುಕನ್ಯಾ ಎಂಬ ಮಂಗಳಮುಖಿಯ ತಲೆಬೋಳಿಸಿ, ಮನಸೋ ಇಚ್ಚೆ ಹಲ್ಲೆ ಮಾಡಿ ಪುಂಡಾಟ..

ಬೊಮ್ಮನಹಳ್ಳಿ ವಿರಾಟ್ ನಗರದಲ್ಲಿ ನಿನ್ನೆ ನಡೆದಿರುವ ಘಟನೆ..

ನಮ್ ಟೀಂ ಬಿಟ್ಟು ಬೇರೊಂದು ಟೀಂ ಜೊತೆಗೆ ಹೋಗಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ..

ಬೊಮ್ಮನಹಳ್ಳಿಯ ಮಂಗಳ ಮುಖಿಯ ಗ್ಯಾಂಗ್ ಬಿಟ್ಟು ಕೆಆರ್ ಪುರ ಗ್ಯಾಂಗ್ ಗೆ ಹೋಗಿದ್ದ ಸುಕನ್ಯಾ..

ಇದರಿಂದ ಕೋಪಗೊಂಡ ಮಂಗಳಮುಖಿರಾದ ಪ್ರೀತಿ, ಚಿನ್ನಿ ಅಂಡ್ ಗ್ಯಾಂಗ್ ನಿಂದ ಸುಕನ್ಯಾ ಕಿಡ್ನ್ಯಾಪ್‌.

ನಿನ್ನೆ ಕೆಆರ್ ಪುರದಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಬೊಮ್ಮನಹಳ್ಳಿ ಗೆ ಕರೆದೊಯ್ದು ಹಲ್ಲೆ..

ಹಿಟ್ಟಿನ ದೊಣ್ಣೆ , ಸೌಟು, ಸೇರಿದಂತೆ ಕೈಗೆ ಸಿಕ್ಕ ವಸ್ತುಗಳು, ಕಾಲಿನಿಂದ ಒದ್ದು ಹಲ್ಲೆ..

ಕೈಮುಗಿದು ಬೇಡಿಕೊಂಡ್ರು ಬಿಡದಂತೆ ಮಂಗಳಮುಖಿ ಸುಕನ್ಯಾ ಗೆ ಹಲ್ಲೆ ಮಾಡಿ ವಿಕೃತಿ..

ಹಲ್ಲೆ ಮಾಡೋದನ್ನು ವಿಡಿಯೋ ಕಾಲ್ ಮಾಡಿ ಮತ್ತೊಬ್ಬ ಮಂಗಳಮುಖಿಗೆ ತೋರಿಸಿ ಹಲ್ಲೆ..

ವಿಡಿಯೋ ವೈರಲ್ ಆಗುತ್ತಿದ್ದಂತೆ ಸೊಮೋಟೋ ಕೇಸ್ ದಾಖಲಿಸಿ ಏಳು ಜನ ಮಂಗಳಮುಖಿಯರ ಬಂಧನ..

31/10/2025

#ಬೆಂಗಳೂರಿನಲ್ಲೊಂದ ಅಮಾನವೀಯ ಘಟನೆ #

*ಸುರಕ್ಷತೆ ಇಲ್ಲದೇ ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕರು...!*
ಯಾವುದೇ ಸೇಫ್ಟಿ ಇಲ್ಲದೇ ಮ್ಯಾನ್ ಹೋಲ್ ಕ್ಲಿನಿಂಗ್ ಮುಂದು,
ಮ್ಯಾನ್ ಹೋಲ್ ಒಳಗೆ ಇಳಿದಿದ್ದ ಮೂರು ಜನ ಕಾರ್ಮಿಕರು,
ಈ ವೇಳೆ ಪ್ರಜ್ಞೆ ತಪ್ಪಿದ ಕಾರ್ಮಿಕರು
ಮ್ಯಾನ್ ಹೋಲ್ ನಲ್ಲಿದ್ದ ಅನಿಲದಿಂದಾಗಿ ಕಾರ್ಮಿಕರು ಅಸ್ವಸ್ಥ, ನೀಲಸಂಧ್ರದಲ್ಲಿ ನಡೆದಿರುವ ಘಟನೆ, ಮ್ಯಾನ್ ಹೋಲ್ ಒಳಗೆ ಅಸ್ವಸ್ಥಗೊಂಡು ಕಾರ್ಮಿಕರ ಒದ್ದಾಟ, ಒದ್ದಾಡುತಿದ್ದ ಕಾರ್ಮಿಕರನ್ನು ಹೊರತೆಗೆದ ಸ್ಥಳೀಯರು
ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಕಾರ್ಮಿಕರ ರಕ್ಷಣೆ, ಕಾರ್ಮಿಕರನ್ನು ಆಸ್ಪತ್ರೆಗೆ ರವಾನಿಸಿದ ಸ್ಥಳೀಯರು.

30/10/2025

ಅಮೇಝಾನ್ನಲ್ಲಿ ಬುಕ್ ಮಾಡಿದ್ದು 1 ಲಕ್ಷ 85 ಸಾವಿರ ಮೌಲ್ಯದ ಸ್ಯಾಮ್ ಸಂಗ್ ಝೆಡ್ ಫೋಲ್ಡ್ ಮೊಬೈಲ್. ಅದ್ರೆ ಬಂದಿದ್ದು ಮಾತ್ರ ಟೈಲ್ಸ್ .

ಡೆಲಿವರಿ ಸ್ಕ್ಯಾಂಗೆ ಬೆಸ್ತು ಬಿದ್ದ ಸಾಫ್ಟ್ವೇರ್ ಇಂಜೀನೀಯರ್, ಆಸೆಯಿಂದ ಖರೀದಿಸಿದ ವಸ್ತುವಿಗಾಗಿ ಕಾಯ್ತಿದ್ದ ವ್ಯಕ್ತಿ,
ಆದ್ರೆ ಬಾಕ್ಸ್ ನಲ್ಲಿದ್ದದನ್ನ ನೋಡಿ ಬೆಸ್ತು ಬಿದ್ದ ಇಂಜೀನೀಯರ್,
ಬಾಕ್ಸ್ ಓಪನಿಂಗ್ ಎಂದು ವಿಡೀಯೋ ಮಾಡಿಕೊಂಡಿದ್ದ ವ್ಯಕ್ತಿ, ಆದ್ರೆ ಬಾಕ್ಸ್ ಒಳಗಿರೋದನ್ನ ನೋಡಿ ಶಾಕ್ ಆಗಿ ನಿಂತು ಬಿಟ್ಟಿದ್ದ,
ಪ್ರೇಮಾನಂದ್ ಡೆಲಿವರಿ ಸ್ಕ್ಯಾಂಗೆ ಒಳಗಾದ ವ್ಯಕ್ತಿ,
ಅಮೇಝಾನ್ ಆ್ಯಪ್ ನಲ್ಲಿ ಪ್ರೇಮಾನಂದ್ ಆರ್ಡರ್ ಮಾಡಿದ್ರು, ಆ್ಯಪ್ ನಲ್ಲಿ ನಿಗದಿಯಾದ ದಿನಾಂಕದಂತೆ ಆರ್ಡರ್ ಡೆಲಿವರಿಯಾಗಿತ್ತು, ಡೆಲಿವರಿ ಐಟಂನ್ನು ಪಡೆದ ಪ್ರೇಮಾನಂದ್ ಬಾಕ್ಸ್ ಓಪನ್ ಮಾಡಿದ್ದರು,
ಒಂದು ಲಕ್ಷ ಎಂಬತ್ತು ಸಾವಿರದ ಮೊಬೈಲ್ ಬದಲು ಇದ್ದಿದ್ದು ಕಲ್ಲು, ಸ್ಯಾಮಸಂಗ್ ಝೆಡ್ ಫೋಲ್ಡ್ ಮೊಬೈಲ್ ಭಾರ ಇರುವಷ್ಟು ತೂಕದ ಕಲ್ಲು,
ಚೌಕಾಕಾರದ ಕಲ್ಲನ್ನು ಮೊಬೈಲ್ ಬಾಕ್ಸ್ ನಲ್ಲಿಟ್ಟು ವಂಚನೆ, ಅದಾಗಲೇ ಸಂಪೂರ್ಣ ಹಣ ಪಾವತಿ ಮಾಡಿದ್ದ ಪ್ರೇಮಾನಂದ್, ಡೆಲಿವರಿ ಬಾಯ್ ಗೆ ಕರೆ ಮಾಡಿದರೆ ಆತ ರೆಸ್ಪಾನ್ಸ್ ಮಾಡ್ತಿರ್ಲಿಲ್ಲ, ಕೊನೆಗೆ ಎನ್ ಸಿ ಆರ್ ಪಿ ಪೋರ್ಟಲ್ ನಲ್ಲಿ ದೂರು, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

30/10/2025

*ಜಾತಿಗಣತಿಗೆ ಬಂದಿದ್ದ ಟೀಚರಮ್ಮನ ಚೈನ್ ಎಗರಿಸಿದ ಸರಗಳ್ಳರು*

ಮನೆ ಗೇಟಿನ ಮುಂದೆ ನಿಂತು ವಿಚಾರಿಸ್ತಿದ್ದ ಟೀಚರಮ್ಮ, ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು,
ಸರಗಳ್ಳರಿಬ್ಬರೂ ಹೆಲ್ಮೆಟ್ ಧರಿಸಿ ಅದೇ ದಾರಿಯಲ್ಲಿ ಬಂದಿದ್ದರು, ಟೀಚರಮ್ಮ ಬೇರೆಡೆ ಮಾತಾಡ್ತಿರೋದನ್ನ ಗಮನಿಸಿದ್ದ ಸರಗಳ್ಳರು, ಹಿಂಬದಿ‌ ಕೂತಿದ್ದ ಸರಗಳ್ಳ ಮೆಲ್ಲಗೆ ಇಳಿದು ಟೀಚರಮ್ಮನ ಬಳಿ ಬಂದಿದ್ದ,
ಕಾಣಕಾಣುತ್ತಿದ್ದಂತೆ ಟೀಚರಮ್ಮನ ಸರ ಕಿತ್ತು ಎಸ್ಕೇಪ್,
ಈ ಘಟನೆ ನಡೆದಿದ್ದ ಜಸ್ಟ್ ಎರಡು ಗಂಟೆಯ ಹಿಂದೆ,
ಬ್ಯಾಡರಹಳ್ಳಿಯ ಭರತ್ ನಗರದಲ್ಲಿ ನಡೆದ ಘಟನೆ,
ಘಟನೆ ಸಂಬಂಧ ಇದೀಗ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ, ಸರಗಳ್ಳರು ಈ ಕೃತ್ಯಕ್ಕೂ ಮುನ್ನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ಸರ ಎಗರಿಸಿದ್ದರು.

30/10/2025

ವೋಲ್ಸ್ ವ್ಯಾಗನ್ ಪೊಲೊ ಕಾರಿನಲ್ಲಿ ತಾಂತ್ರಿಕ ದೋಷ ನಡು ರಸ್ತೆಯಲ್ಲಿ ಸುಟ್ಟುಕರಕಲಾದ ಕಾರು.

ಬೆಂಗಳೂರಿನ ರೂಪೇನ ಅಗ್ರಹಾರ ಬಳಿ ಘಟನೆ,
ಸಂಜೆ 7: 30 ರ ಸುಮಾರಿನಲ್ಲಿ ಕಾರಿನಲ್ಲಿ ಬೆಂಕಿ,
ಬೆಂಕಿ ಕಾಣಿಸಿಕೊಳ್ತಿದ್ದಂತೆ ಕಾರಿನ ಚಾಲಕ ಹೊರಗಿಳಿದಿದ್ದಾನೆ, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮನ, ಅಗ್ನಿಯ ಕೆನ್ನಾಲಿಗೆಯನ್ನ ಆರಿಸಲು ಹರಸಾಹಸ.

30/10/2025

ಬೆಂಗಳೂರು ಗ್ರಾಮಾಂತರ ಜಿಲ್ಲೆ DDLR ಕಚೇರಿಯಲ್ಲಿ ಭ್ರಷ್ಟಚಾರ.

ಹಂತ ಹಂತವಾಗಿ ಹಣ ಪೀಕಿ ಸಿಕ್ಕಿಬಿದ್ದ ಕಚೇರಿಯ ಸಿಬ್ಬಂದಿ. ಪ್ರಕರಣವೊಂದರ ಅಂತಿಮ ಆದೇಶ ಪಡೆಯಲು 50 ಸಾವಿರ ಲಂಚಕ್ಕೆ ಬೇಡಿಕೆ.
ಡೆಪ್ಯೂಟಿ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ಸ್ ಅಧಿಕಾರಿ ಕುಸುಮಲತಾ ಪಾತ್ರ ಇದೆ ಎಂದು ಆರೋಪ.
ರೈತನಿಂದ ಹಣವನ್ನ ಪೋನ್ ಪೇ ಮೂಲಕ ಹಣ ಪಡೆದಿರುವ ಆರೋಪ. ವಕೀಲ ನಿಖೀಲ್ ಎಂ. ಕಚೇರಿಗೆ ಭೇಟಿ ನೀಡಿ ಡಿಡಿಎಲ್ಆರ್ ಅವರಿಗೆ ಪ್ರಶ್ನೆ.
ವಕೀಲನ ಪ್ರಶ್ನೆಗೆ ತಬ್ಬೀಬಾದ ಹಣ ಪಡೆದ ಕಚೇರಿ ಸಿಬ್ಬಂದಿ.ನೇರವಾಗಿ ಪಡೆದ ಹಣವನ್ನ ರೈತನಿಗೆ ವಾಪಸ್ ಹಿಂದುರಿಗಿಸಿದ ಕಚೇರಿ ಸಿಬ್ಬಂದಿ. ಕೂಡಲೇ ಕಚೇರಿ ಸಿಬ್ಬಂದಿಯನ್ನ ಅಮಾನತು ಮಾಡಲು ಆಗ್ರಹ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಡಿಡಿಎಲ್ಆರ್ ಕಚೇರಿಯಲ್ಲಿ ಘಟನೆ.

29/10/2025

ಬೆಂಗಳೂರು ನಗರ ಪೊಲೀಸರ ಭರ್ಜರಿ ಕಾರ್ಯಚರಣೆ ನೂರಾರು ಮೊಬೈಲ್ ಚಿನ್ನ ಬೆಳ್ಳಿ ಕಳ್ಳರಿಂದ ವಶ. 20 ಕ್ಕು ಹೆಚ್ಚು ನಟೊರಿಯಸ್ ಕಳ್ಳರ ಬಂಧನ.

29/10/2025

"ಬರ್ತ್ ಡೆ ಪಾರ್ಟಿ ಬಿಲ್‌ ವಿಚಾರ ಸ್ನೇಹಿತರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ"

ಬರ್ತ್ ಡೇ ಬಾಯ್ ಗೆ ಸ್ನೇಹಿತರಿಂದಲೇ ಹಲ್ಲೆ
ಜಿಗಣಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಇದೇ ತಿಂಗಳ ೧೬ ನೇ ತಾರೀಕಿನಂದು ನಡೆದಿರುವ ಗಲಾಟೆ, ಹಾರಗದ್ದೆ ಸಮೀಪದ ವಡ್ಡರ ಪಾಳ್ಯ ಗ್ರಾಮದ ವಾಸಿ ಸಂದೀಪ್ (23) ಮೃತ ದುರ್ದೈವಿ,
16 ನೇ ತಾರೀಕಿನಂದು ಮೃತ ಸಂದೀಪ್ ಬರ್ತ್ ಡೇ ಇತ್ತು , ಪಾರ್ಟಿಗೆಂದು ಸ್ನೇಹಿತರನ್ನು ಬಾರ್ ಗೆ ಕರೆದುಕೊಂಡು ಹೋಗಿದ್ದ ಸಂದೀಪ್
ಪಾರ್ಟಿ ಮುಗಿಸಿ ಮೊದಲು ಬಿಲ್ ಕಟ್ಟಿದ್ದ ಸಂದೀಪ್
ಎರಡನೇ ಸಲ‌ ಮತ್ತೆ ಬಿಲ್‌ ಕಟ್ಟುವಂತೆ ಒತ್ತಾಯಿಸಿದ್ದ ಸ್ನೇಹಿತರು
ಹಣ ಇಲ್ಲದಿದ್ದ ಕಾರಣ ಗಲಾಟೆ ನಡೆದು ವಾಪಸ್ ಊರಿಗೆ ಬಂದಿದ್ದ ಸಂದೀಪ್
ಅನಂತರ ಊರಿನ ವಾಲಿಬಾಲ್ ಕೋಟ್ ಬಳಿ ಹೋಗಿದ್ದ ಅಲ್ಲಿಗೆ ಬಂದ ಸಂದೀಪ್ ಸ್ನೇಹಿತರಿಂದ ಗಲಾಟೆ
ಸಂದೀಪ್ ನನ್ನು ಕೆಳಗೆ ದಬ್ಬಿ ಹಲ್ಲೆ ಮಾಡಿರುವ ಸಂತೋಷ್ ಹಾಗು ಸಾಗರ್ ಎಂಬ ಯುವಕರು

ಗಲಾಟೆಯಲ್ಲಿ ಸಂದೀಪ್ ತಲೆಗೆ ಗಂಭೀರ ಗಾಯ

ಘಟನೆ ಆಗಿ ಮೂರು ದಿದ ನಂತರ ಯುವಕನಿಗೆ ಬ್ರೈನ್ ನಲ್ಲಿ ಬ್ಲಡ್ ಕ್ಲಾಟ್

ಅನಂತರ ಆಸ್ಪತ್ರೆ ಗೆ ದಾಖಲು ಮಾಡಿಸಿದ್ದ ಪೋಷಕರು

ಆಸ್ಪತ್ರೆ ಯಲ್ಲಿ ಕಳೆದ ಕೆಲ ದಿನಗಳಿಂದ ಕೋಮಾದಲ್ಲಿ ಇದ್ದ ಸಂದೀಪ್

ನೆನ್ನೆ ರಾತ್ರಿ ಕಾವೇರಿ ಆಸ್ಪತ್ರೆ ಯಲ್ಲಿ ಸಾವು

29/10/2025

"ಬಾಂಗ್ಲಾದೇಶ ವಲಸೆ ಪ್ರಜೆ ಇಂದ ಚಪ್ಪಲಿ ಹಾಕಿಕೊಂಡು ದೇವಾಲಯ ಪ್ರವೇಶ. ದೇವರ ಮೂರ್ತಿ ಭಗ್ನ ಮಾಡಲು ಯತ್ನ"

ದೇವಸ್ಥಾನದ ಒಳಗೆ ಚಪ್ಪಲಿ ಕಾಲಲ್ಲಿ ನುಗ್ಗಿ ಯುವಕ ಪೊಲೀಸರು., ಗರ್ಭಗುಡಿಗೆ ನುಗ್ಗಿ ದೇವರ ವಿಗ್ರ ಎಳೆದಾಡಿ ವಿಕೃತಿ, ಚಪ್ಪಲಿ ಕಾಲಲ್ಲಿ ದೇವ ಮೂರ್ತಿ ಒದ್ದು ರಾದ್ಧಾಂತ ಆರೋಪ, ಹಿಂದೂ ದೇವಾಲಯಕ್ಕೆ ನುಗ್ಗಿ ಅನ್ಯ ಕೋಮಿನ ಯುವಕ ವಿಕೃತಿ, ಅಕ್ಟೋಬರ್ 28 ರಂದು ಬೆಳಗ್ಗೆ 8.30 ಸುಮಾರಿಗೆ ಘಟನೆ, ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕೃತ್ಯ, ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು, ಆರೋಪಿಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿತ, ದೇವರ ಬೀಸನಹಳ್ಳಿಯಲ್ಲಿಯೇ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ಕ್ರಿಮಿ, 8.30 ಸುಮಾರಿಗೆ ತಮ್ಮ ಧರ್ಮದ ಪರ ಘೋಷಣೆ ಕೂಗುತ್ತಾ ಬಂದಿದ್ದ, ಮೆಡಿಕಲ್ ಅಂಗಡಿ ಮುಂದೆ ಹಾಕಿದ್ದ ಗಣಪತಿ ದೇವರ ಫೋಟೊಗೆ ಹೊಡೆದಿದ್ದ, ವಿಶೇಷ ಚೇತನ ಆಗಿದ್ದ ಆಸಾಮಿ ಕಬೀರ್ ಸ್ಟಿಕ್ ನಿಂದ ಹೊಡೆದಿದ್ದ, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು, ಅಲ್ಲಿಂದ ಸೀದಾ ಹತ್ತಿರದಲ್ಲೇ ಇದ್ದ ದೇವಸ್ಥಾನದತ್ತ ಓಡಿ ಬಂದಿದ್ದ
ದೇವಸ್ಥಾನ ಬಳಿ ಕೂಗಾಡಿ ಕಲ್ಲಿನಿಂದ ಗರಡುಗಂಬಕ್ಕೆ ಹೊಡೆದಿದ್ದ, ಕೈನಲ್ಲಿ ಆಯಿಲ್ ಮಾದರಿ ವಸ್ತುವನ್ನು ಹಿಡಿದು ಬಂದಿದ್ದ ಆರೋಪಿ, ಚಪ್ಪಲಿ ಕಾಲಲ್ಲಿ ಗರ್ಭಗುಡಿಗೆ ನುಗ್ಗಿದ್ದ ಕಬೀರ್ , ದೇವರ ಮೂರ್ತಿ ಎಳೆದಾಡಿ ಚಪ್ಪಲಿ ಕಾಲಲ್ಲಿ ಒದ್ದಿರೊ ಆರೋಪ, ಈತನ ವಿಕೃತಿಯನ್ನು ಕಂಡು ಬೆಚ್ಚಿ ಬಿದ್ದ ದೇವಸ್ಥಾನ ಸಿಬ್ಬಂದಿ, ಆತನನ್ನ ಎಳೆದು ತಂದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಜನರು, ಸದ್ಯ ಆರೋಪಿಯನ್ನ ಖಾಸಗಿ ಆಸ್ಪತ್ರೆ ಸೇರಿಸಿ ಚಿಕಿತ್ಸೆ, ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ,ಪರಿಶೀಲನೆ, ಆರೋಪಿ ತಂದಿದ್ದ ಆಯಿಲ್ ಬಾಟಲಿ,ಚಪ್ಪಲಿ,ಕಲ್ಲು ವಶಕ್ಕೆ, ಡಿಸ್ಚಾರ್ಜ್ ಆದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲಿರುವ ಪೊಲೀಸರು

28/10/2025

ಗಂಡನನ್ನು ಬಿಟ್ಟು ಕಳ್ಳನ ಜೊತೆಗೆ ಲಿವಿಂಗ್ ಇನ್ ರಿಲೇಷನ್ ಷಿಪ್‌.

ಗಂಡನನ್ನು ಬಿಟ್ಟು ಬಂದಿದ್ದ ಪ್ರೇಯಸಿಗಾಗಿ ದುಬಾರಿ ಮೊಬೈಲ್ ಗಳನ್ನ ಕದ್ದ ಪ್ರಿಯಕರ..
Iphone 17 series ಸೇರಿದಂತೆ ದುಬಾರಿ ಮೊಬೈಲ್ ಗಳ ಕಳ್ಳತನ..
ರಾತ್ರೋ ರಾತ್ರಿ ಕ್ರೋಮಾ ಶೋ ರೂಂ ಶೆಟರ್ ಮುರಿದು ಕಳ್ಳತನ.
ಒಂದೇ ರಾತ್ರಿ ಎರಡು ಕ್ರೋಮಾ ಶೋ‌ ರೂಂ ಟಾರ್ಗೆಟ್ ಮಾಡಿ ಕಳ್ಳತನ..
ಪ್ರಕರಣ ಸಂಬಂಧ ವರ್ತೂರು ಪೊಲೀಸರಿಂದ ಮೂವರು ಆರೋಪಿಗಳ ಬಂಧನ..
ದಿವಾಸ್ ಕಮಿ,,ಆರೋಹನ್ ತಾಪಾ ಮತ್ತು ಅಸ್ಮಿತಾ ಎಂಬಾಕೆಯ ಬಂಧನ.. ದಿವಾಸ್ ಕಮಿ ಮತ್ತು ಆರೋಹನ್ ತಾಪಾ ಇಬ್ಬರಿಂದ ಕಳ್ಳತನ..
ಕದ್ದು ತಂದ ಮೊಬೈಲ್ ಗಳನ್ನ ಮಾರಾಟ ಮಾಡ್ತಿದ್ದ ಆರೋಪಿ ಅಸ್ಮಿತಾ..ಡೋರ್ ಒಡೆದು ಒಳಗೆ ಹೋಗಿ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಎಸ್ಕೇಪ್..
ಮೂವತ್ತಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಗಳು..ಕಳೆದ ವಾರ ಒಂದೇ ರಾತ್ರಿ ಎರಡು ಕಡೆ ಕಳ್ಳತನ ಮಾಡಿದ್ದ ಚೋರರು.ಬಂಧಿತರಿಂದ 30 ಲಕ್ಷ ಮೌಲ್ಯದ 28 ಮೊಬೈಲ್ ಹಾಗೂ ಒಂದು ವಾಚ್ ವಶಕ್ಕೆ.

Address

Anekal

Telephone

+919036777559

Website

Alerts

Be the first to know and let us send you an email when Anekal Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Anekal Times:

Share