Super Times News

Super Times News Super Times Kannada daily newspaper was launched in Bagalkote Ilkal in August 2004

24/04/2026

🚨 ನವನಗರದಲ್ಲಿ ಆತಂಕಕಾರಿ ಘಟನೆ!
Bagalkot ನ ನವನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳದಿಂದ ಒಂದೇ ದಿನ 3 ಮಕ್ಕಳ ಮೇಲೆ ದಾಳಿ ನಡೆದಿದೆ
ಮಕ್ಕಳಿಗೆ ಗಾಯವಾಗಿರುವ ಘಟನೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
👉 ಪೋಷಕರು ಎಚ್ಚರಿಕೆಯಿಂದಿರಿ
👉 ಮಕ್ಕಳನ್ನು ಒಬ್ಬರೇ ಹೊರಗೆ ಬಿಡಬೇಡಿ
👉 ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು
🙏 ಈ ಪೋಸ್ಟ್ ಅನ್ನು ಶೇರ್ ಮಾಡಿ – ಜಾಗೃತಿ ಮೂಡಿಸೋಣ

22/04/2026

ಬಾಗಲಕೋಟೆ: ಲಂಚ ಪ್ರಕರಣ – ಲೋಕಾಯುಕ್ತ ಎಸ್.ಪಿ ಎಂ.ಬಿ. ನಂದಗಾಂವಿ ಹೇಳಿಕೆ
ಬಾಗಲಕೋಟೆ, ಏಪ್ರಿಲ್ 22: ಕೆರೂರು ಪೊಲೀಸ್ ಠಾಣೆಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಪಿ.ಎಸ್.ಐ ಹಾಗೂ ಪೊಲೀಸ್ ಪೇದೆ ಬಂಧನವಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್.ಪಿ ಎಂ.ಬಿ. ನಂದಗಾಂವಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಮಾಹಿತಿ ಪ್ರಕಾರ, ಗ್ಯಾಂಬ್ಲಿಂಗ್ (ಇಸ್ಪೀಟ್) ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸುವುದು ಹಾಗೂ ವಶಪಡಿಸಿಕೊಂಡ ವಾಹನ ಬಿಡುಗಡೆ ಮಾಡುವುದಕ್ಕಾಗಿ ಲಂಚ ಬೇಡಿಕೆ ಇಟ್ಟಿರುವುದು ದೃಢಪಟ್ಟಿದೆ. ಈ ಸಂಬಂಧ ₹1.70 ಲಕ್ಷ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳನ್ನು ರೆಡ್ಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.
ಹಿಂದಿನಿಂದಲೂ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಸಂಬಂಧಿತ ಆರೋಪಗಳು ಕೇಳಿಬರುತ್ತಿದ್ದರೂ, ಇತ್ತೀಚೆಗೆ ಲಭಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಾರ್ವಜನಿಕರಿಗೆ ಮನವಿ ಮಾಡಿದ ಅವರು, ಪೊಲೀಸ್ ಠಾಣೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೆ ನೇರವಾಗಿ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ಕಚೇರಿಯ ದೂರವಾಣಿ ಸಂಖ್ಯೆಗಳು ಸಾರ್ವಜನಿಕವಾಗಿ ಪ್ರದರ್ಶಿಸಲ್ಪಟ್ಟಿದ್ದು, ಡಿವೈಎಸ್‌ಪಿ ಹಾಗೂ ಇನ್ಸ್‌ಪೆಕ್ಟರ್‌ಗಳ ಸಂಪರ್ಕ ಸಂಖ್ಯೆಗಳೂ ಲಭ್ಯವಿವೆ. ಸಾರ್ವಜನಿಕರು ಯಾವಾಗ ಬೇಕಾದರೂ ಸಂಪರ್ಕಿಸಬಹುದಾಗಿದೆ. ಪ್ರತಿ ತಿಂಗಳು ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ಸಭೆಗಳು ನಡೆಯುತ್ತಿದ್ದು, ಅಲ್ಲಿ ಕೂಡ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಕಚೇರಿ ಸಮಯದಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಅಧಿಕಾರಿಗಳು ಲಭ್ಯವಿದ್ದು, ದೂರುದಾರರು ನೇರವಾಗಿ ಭೇಟಿ ನೀಡಿ ಮಾಹಿತಿ ನೀಡಬಹುದು ಎಂದು ಎಸ್.ಪಿ ಎಂ.ಬಿ. ನಂದಗಾಂವಿ ಸ್ಪಷ್ಟಪಡಿಸಿದ್ದಾರೆ.

19/04/2026

ಶ್ರೀದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವ
ಬಾಗಲಕೋಟೆ: ನಗರದ ನವನಗರ ರಸ್ತೆಯಲ್ಲಿರುವ ಶ್ರೀದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವವು ಏ.೨೦ ರಿಂದ ಏ.೨೨ ರವರೆಗೆ ಅದ್ಧೂರಿಯಾಗಿ ಜರುಗಲಿದೆ. ಏ.೨೦ರ ಸೋಮವಾರ ಬೆಳಗ್ಗೆ ೫ಕ್ಕೆ ಕರ್ತು ಗದ್ದುಗೆ, ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಗಣಾರಾಧನೆ. ಮಧ್ಯಾಹ್ನ ೧೨.೩೫ಕ್ಕೆ ಮಹಾಪ್ರಸಾದ. ಏ.೨೧ರ ಮಂಗಳವಾರ ಬೆಳಗ್ಗೆ ೬ಕ್ಕೆ ಕರ್ತು ಗದ್ದುಗೆ, ಉತ್ಸವ ಮೂರ್ತಿ, ಪಲ್ಲಕ್ಕಿ , ತೇರು ಹಾಗೂ ನೂತನ ಅಶ್ವಕ್ಕೆ ಮಹಾಪೂಜೆ. ಮಧ್ಯಾಹ್ನ ಮಹಾಪ್ರಸಾದವಿರಲಿದೆ. ಸಂಜೆ ಟಗರಿನ ಕಾಳಗ ಜರುಗಲಿದೆ.
ಏ.೨೨ರ ಬುಧವಾರ ಬೆಳಗ್ಗೆ ೬ಕ್ಕೆ ಮಹಾಪೂಜೆ, ಮಧ್ಯಾಹ್ನ ಪ್ರಸಾದ, ನಂತರ ಸಂಜೆ ೫.೪೫ಕ್ಕೆ ಶ್ರೀದಿಗಂಬರೇಶ್ವರ, ಶ್ರೀಮಾತಾ ಕಪ್ಪರ ಪಡಿಯಮ್ಮನವರ ಉತ್ಸವ ಮೂರ್ತಿಗಳಿಗೆ, ತೇರಿನ ಕಳಸಕ್ಕೆ ಪೂಜೆ ಸಲ್ಲಿಸಿ, ತೇರಿನ ಕಳಸದ ಪ್ರತಿಷ್ಠಾಪನೆಯೊಂದಿಗೆ ೧೧ನೇ ವರ್ಷದ ಮಹಾರಥೋತ್ಸವ ಜರುಗಲಿದೆ. ಶ್ರೀಬಸವರಾಜಪ್ಪನವರ ಸಾನಿಧ್ಯದಲ್ಲಿ ನಡೆಯುವ ಜಾತ್ರಾಮಹೋತ್ಸವದಲ್ಲಿ ಮಠಾಧೀಶರು, ಗಣ್ಯರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಬಸವರಾಜಪ್ಪನವರ ಕುರಿತಾದ ಗ್ರಂಥಲೋಕಾರ್ಪಣೆ ಆಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

07/04/2026

ಬಾಗಲಕೋಟೆ ಉಪಚುನಾವಣೆ | Bagalkot Election News | Super Times News

06/04/2026

ಅಝಾನ್‌ಗೆ ಗೌರವ | ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಭಾಷಣ ನಿಲ್ಲಿಸಿದರು | Election News

ಬಾಗಲಕೋಟೆ ಉಪಚುನಾವಣೆ | Bagalkot Election News | Super Times News

Address

Sector No 34 Near Ambedkar Bhavan Navanagar Bagalkot
Bagalkot
587103

Alerts

Be the first to know and let us send you an email when Super Times News posts news and promotions. Your email address will not be used for any other purpose, and you can unsubscribe at any time.

Contact The Business

Send a message to Super Times News:

Shortcuts

Share