Avinash B

Avinash B Tech Columnist | Yakshagana Artist | Kannada News | Technology for Common Man | ಕನ್ನಡಿ?
(1)

ಅವಿನಾಶ್ ಬೈಪಾಡಿತ್ತಾಯ (Avinash Baipadithaya), ಪತ್ರಕರ್ತ, ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ, ಬರಹಗಾರ, ಯಕ್ಷಗಾನವೆಂದರೆ ಪ್ರಾಣ. ಅಮ್ಮನ ಮಗ ಎಂಬ ಹೆಮ್ಮೆ.

21/05/2026

ಯಕ್ಷಗಾನ ಪ್ರೇಕ್ಷಕರು ಯಾವತ್ತೂ ಸಭ್ಯ ಸಭಾಸದರು. ಅವರನ್ನು ಯಕ್ಷಗಾನದ ಪೂರ್ವರಂಗದಲ್ಲಿ ವಂದಿಸಿಯೇ ಯಕ್ಷಗಾನ ಕಲೆಯು ತನ್ನ ಪ್ರದರ್ಶನವನ್ನು ಮುಂದುವರಿಸುವ ಕ್ರಮ (ವಂದೇ ಸಭಾ ಮಂಡಲಂ ಅಂತ ಹೇಳಿಯೇ ಪ್ರದರ್ಶನಕ್ಕೆ ತೊಡಗುವುದು). ಯಕ್ಷಗಾನವನ್ನು ಆಸ್ವಾದಿಸುವುದು ಹೇಗೆ, ಅದೊಂದು ಅನನ್ಯ ದೈವೀ ಕಲೆ ಎಂಬುದನ್ನೇ ತಿಳಿಯದ ಪ್ರೇಕ್ಷಕರು ಏನು ಮಾಡಿದರು ಅಂತ ಇಲ್ಲಿದೆ ವಿಡಿಯೊ. ಇದು ಮೊನ್ನೆ ಗುಜ್ಜಾಡಿಯಲ್ಲಿ ನಡೆದ ದೇವಿ ಮಹಾತ್ಮೆ ಪ್ರಸಂಗ ಸನ್ನಿವೇಶದಲ್ಲಿ, ದೇವಿ ಪ್ರತ್ಯಕ್ಷ ಆಗುವ ಹಂತದಲ್ಲಿ, ಈ ರೀತಿ ಶಿಳ್ಳೆ, ಪೀಪಿ, ಗಲಾಟೆ... ಇವರು ಮಾಡಿದ್ದು ಕಲಾವಿದನಿಗೆ ಅವಮಾನ ಅಲ್ಲ. ಯಕ್ಷಗಾನ ಕಲೆಗೇ ಬಗೆದ ದ್ರೋಹ. ಮನ ಅರಳಿಸುವ ಯಕ್ಷಗಾನವನ್ನೇ ತುಳಿದು, ಯಕ್ಷಗಾನಕ್ಕೆ ಅವಮಾನ ಮಾಡಿದ ಪರಿ ಇದು. ಸಭ್ಯ ಪ್ರೇಕ್ಷಕರಿಗೆ ಇದು ನಾಚಿಕೆ ತಂದಿರುವ ವಿಚಾರ.

#ಯಕ್ಷಗಾನ

ಪತ್ತೆ ಮಾಡಿ ನೋಡುವ? ಎಷ್ಟು ಕ್ಯಾಟುಗಳಿವೆ?
21/05/2026

ಪತ್ತೆ ಮಾಡಿ ನೋಡುವ? ಎಷ್ಟು ಕ್ಯಾಟುಗಳಿವೆ?

ಅಲರ್ಟ್!ಈಗಾಗಲೇ ದಾರಿ ತಪ್ಪಿರುವ Gen Z ಗಳನ್ನು ರಕ್ಷಿಸಬೇಕಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಂತೊಂದು ಸಾಟೈರಿಕಲ್ ಆಗಿ ಹುಟ್ಟಿಕೊಂಡಿದ್...
21/05/2026

ಅಲರ್ಟ್!

ಈಗಾಗಲೇ ದಾರಿ ತಪ್ಪಿರುವ Gen Z ಗಳನ್ನು ರಕ್ಷಿಸಬೇಕಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಂತೊಂದು ಸಾಟೈರಿಕಲ್ ಆಗಿ ಹುಟ್ಟಿಕೊಂಡಿದ್ದ ಸಂಘಟನೆಯೊಂದು, ಗೊತ್ತು ಗುರಿಯಿಲ್ಲದೆ ಬೆಳೆಯುತ್ತಿರುವ ಹೊಸ ಪೀಳಿಗೆಯ ಯುವಕ-ಯುವತಿಯರನ್ನು ಒಳಗಿಂದೊಳಗೇ ಸೆಳೆದುಕೊಳ್ಳುತ್ತಿದೆ.

ಇದಕ್ಕೆ ಬೇಕಾದ ಅರ್ಹತೆಯನ್ನು ನೋಡಿದರೆ ತಿಳಿಯುತ್ತದೆ - ಸೋಮಾರಿಗಳು, ನಿರುದ್ಯೋಗಿಗಳು, ಸದಾ ಆನ್ಲೈನ್ ಇರುವವರು ಹಾಗೂ ಚೆನ್ನಾಗಿ ಉಗಿಯುವ ಸಾಮರ್ಥ್ಯ ಉಳ್ಳವರು (!). ಈಗಿನ ಮೊಬೈಲ್ ಯುಗದಲ್ಲಿ, ಇನ್ಸ್ಟಾಗ್ರಾಂ, ಫೇಸುಬುಕ್ಕು, ಸ್ನ್ಯಾಪುಚಾಟುಗಳೇ ಸರ್ವಸ್ವ, ಅದರಲ್ಲಿ ಬಂದಿದ್ದೇ ಸತ್ಯ ಎಂದೆಲ್ಲ ನಂಬುವ ಜನಾಂಗಕ್ಕಾಗಿಯೇ ಇಂಥದ್ದೊೆದು ಸಂಘಟನೆ ಹುಟ್ಟಿಕೊಂಡು, ಬೆಳೆಯತೊಡಗಿದೆ. ದಾರಿ ತಪ್ಪಿದವರಿಗೆ, ಮತ್ತಷ್ಟು ದಾರಿ ತಪ್ಪಿಸಲು, ಆಶ್ರಯತಾಣವಾಗಿ ಸಂಘಟನೆ ಆಗುತ್ತಿರುವುದರಿಂದ ಇದು ದೇಶದ ಹಿತಕ್ಕೆ ಪೂರಕವಲ್ಲ. ಸಾಟೈರ್ ಆದ್ರೂ, ಇದರ ಹಿಂದಿನ ಉದ್ದೇಶದ ಬಗ್ಗೆ ಒಂದು ಶಂಕೆ ಇದ್ದೇ ಇದೆ.

ನನಗೊಂದು ಸಂದೇಹ ಏನೆಂದರೆ, ಅದು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ತಲುಪುತ್ತಿರುವ ಪರಿ ನೋಡಿದರೆ, ನೇಪಾಳದಲ್ಲಿ ನಡೆದ ಜೆನ್ ಝೀ ದಂಗೆ ನೆನಪಾಗುತ್ತದೆ? ಸುಖಾ ಸುಮ್ಮನೇ ಸರಕಾರವೊಂದನ್ನು ಉರುಳಿಸಿ, ಹಿಂಸಾಚಾರ ಮೆರೆದು ಸುದ್ದಿ ಮಾಡಿದ ವಿಷಯ ನೆನಪಿದೆಯೇ?

ಭಾರತದಲ್ಲಿಯೂ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿರುವ ಸರಕಾರವನ್ನು, ವೋಟಿನ ಮೂಲಕ ಉರುಳಿಸಲಾಗುವುದಿಲ್ಲ, ಹೀಗಾಗಿ ದಂಗೆಯ ಮೂಲಕ ಉರುಳಿಸುವ ಹುನ್ನಾರ ಕೂಡ ಇರಬಹುದೇನೋ? ಯಾವುದಕ್ಕೂ ನಿಮ್ಮ ನಿಮ್ಮ ಮನೆಯ ಮಕ್ಕಳನ್ನು ಕಾಪಾಡಿಕೊಳ್ಳಿ, ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳುವುದು ಒಳಿತು.

Cockroach Janta Party ಹುಟ್ಟಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ರಿಪೋರ್ಟ್ ಇಲ್ಲಿದೆ:

NEW DELHI: A satirical political group calling itself the Cockroach Janta Party has sprung up online after Chief Justice Surya Kant reportedly compared unemployed youth to "cockroaches"; the group says it drew more than 40,000 members within two days of launching.

The party, founded by former AAP social media worker Abhijeet Dipke, has already "admitted" Trinamool Congress MPs Mahua Moitra and Kirti Azad as members through social media exchanges.

"I would like to join the Cockroach Janta Party. What are the qualifications required?" Azad posted on X. The party responded: "Winning the 1983 World Cup is a good enough qualification." Moitra, reposting a CJP post, said she too would like to join "besides being a card-carrying member of the Anti-National Party." The party welcomed her as "the fighter democracy needs."

During a court hearing on May 15, the CJI had reportedly said that some unemployed youngsters become journalists, RTI activists or social media users and "start attacking everyone".

He later clarified that his remarks had been misquoted and were not meant as a criticism of unemployed youth in general. He said he was referring specifically to people entering professions with fake or bogus degrees, and added that reports suggesting he demeaned youth were "totally baseless".

The CJP's manifesto, which the party describes as "secular, socialist, democratic, lazy," includes demands such as a ban on post-retirement Rajya Sabha seats for chief justices, 50 per cent reservation for women in parliament without increasing the strength of the house, and a 20-year election ban for defecting MLAs and MPs.

The CJP's manifesto, which the party describes as "secular, socialist, democratic, lazy," includes demands such as a ban on post-retirement Rajya Sabha seats for chief justices, 50 per cent reservation for women in parliament without increasing the strength of the house, and a 20-year election ban for defecting MLAs and MPs.

ಆಗ ಆಗೊಮ್ಮೆ ಈಗೊಮ್ಮೆ ತಟಪಟ ಮಾಡುವುದಿತ್ತು...ಈಗ ದಿನಾಲೂ... ಒಂದು ತಿರುಗಾಟವೇ ಮುಕ್ತಾಯದ ಹಂತ ತಲುಪಿದೆ! Oh God, ನಂಬಲಾಗುತ್ತಿಲ್ಲ...(ಹಳೆಯದ...
21/05/2026

ಆಗ ಆಗೊಮ್ಮೆ ಈಗೊಮ್ಮೆ ತಟಪಟ ಮಾಡುವುದಿತ್ತು...
ಈಗ ದಿನಾಲೂ... ಒಂದು ತಿರುಗಾಟವೇ ಮುಕ್ತಾಯದ ಹಂತ ತಲುಪಿದೆ! Oh God, ನಂಬಲಾಗುತ್ತಿಲ್ಲ...
(ಹಳೆಯದು ಬೆಂಗಳೂರು‌ ಕಾರ್ಯಕ್ರಮದ ಫೊಟೊ, ಮತ್ತೊಂದು ಕಟೀಲು‌ ಮೇಳದ ಪಟ)
#ಯಕ್ಷಗಾನ

20/05/2026

ರಕ್ತದಲ್ಲೇ ಸಂಸ್ಕಾರ ಇರುವ ಕೊನೆಯ ಪೀಳಿಗೆ ನಾವು...

ಇದೊಂದು ಕಥೆ, ನೈಜ ಘಟನೆ ಆಧಾರಿತವೇ. ಆದರೆ, ಓದಿ ಸುಮ್ಮನಿರುವಂತಿಲ್ಲ. ಇದರಿಂದ ಸಿಗುವ ಪಾಠ ಏನು? ಇದಕ್ಕೆ ನಿಮ್ಮ ಅನಿಸಿಕೆ ತಿಳಿಸಿ. ಕೊನೆಯ ಸಾಲು ಈ ಕಾಲದ ಜೆನ್-ಝೀಗಳಿಗೆ, ಮಿಲೇನಿಯಲ್‌ಗಳಿಗೆ... ಅವರು ಈ ಕಥೆ ಓದುವಂತೆ ಬಲವಂತ ಮಾಡಿ, ಎರಡೇ ನಿಮಿಷ ಸಾಕಾಗುತ್ತದೆ...

ಮೊಮ್ಮಗ ಒಮ್ಮೆ ತನ್ನ ತಾತನನ್ನು ಹೀಗೆ ಕೇಳಿದ;
"ತಾತ, ಈಗಿನಂತೆ ನೀವೆಲ್ಲಾ ನಿಮ್ಮ ಕಾಲದಲ್ಲಿ
ತಂತ್ರಜ್ಞಾನವಿಲ್ಲದೇ
ಕಂಪ್ಯೂಟರ್ ಇಲ್ಲದೇ
ಡ್ರೋಣ್ ಇಲ್ಲದೇ
ಬಿಟ್ ಕಾಯಿನ್ಸ್ ಇಲ್ಲದೇ
ಇಂಟರ್ನೆಟ್ ಇಲ್ಲದೇ
ಟಿವಿ ಇಲ್ಲದೇ
ಹವಾ ನಿಯಂತ್ರಣವಿಲ್ಲದೇ
ಕಾರಿಲ್ಲದೇ
ಮೊಬೈಲ್ ಇಲ್ಲದೇ
ಹೇಗೆ ಬದುಕಿದ್ರಿ?".

ಅದಕ್ಕೆ ತಾತ ಅಷ್ಟೇ ಸುಂದರವಾಗಿ ಉತ್ತರಿಸಿದ,
"ಇಂದು ನೀವು
ಪ್ರಾರ್ಥನೆ ಇಲ್ಲದೇ
ಸಹಾನುಭೂತಿ ಇಲ್ಲದೇ
ಪರಸ್ಪರ ಗೌರವವಿಲ್ಲದೇ
ನೈಜ ಶಿಕ್ಷಣವಿಲ್ಲದೇ
ನೈಜ ವ್ಯಕ್ತಿತ್ವವಿಲ್ಲದೇ
ಹೃದಯವಂತಿಕೆಯಿಲ್ಲದೇ
ನಾಚಿಕೆಯಿಲ್ಲದೇ
ನಮ್ರತೆಯಿಲ್ಲದೇ
ಪ್ರಾಮಾಣಿಕತೆ
ಇದ್ಯಾವುದೂ ಇಲ್ಲದೇ ಹೇಗೆ ಬದುಕುತ್ತಿದ್ದೀರೋ,
ಆ ಕಾಲದಲ್ಲಿ ನಾವೂ ಕೂಡ ನಿಮಗಿರುವ ಯಾವ ಆಧುನಿಕ ಸೌಕರ್ಯಗಳಿಲ್ಲದೆಯೂ ಬದುಕಿದ್ದೆವು".

ಅಷ್ಟೇ ಅಲ್ಲ, 1930-1990 ರವರೆಗೆ ಜನಿಸಿದ ನಾವೆಲ್ಲಾ ಏನಿದೇವೆ,
ಇಂದು ನಾವು ಬದುಕುತ್ತಿರುವ ರೀತಿಯೇ ಅಂದಿನ ನಮ್ಮ ಜೀವನ ಶೈಲಿಯನ್ನು ಹೇಳುತ್ತೆ.
ನಿಮಗೆ ಗೊತ್ತಿರಲಿ; ನಾವು ಆಟವಾಡುವಾಗ ಅಥವಾ ಬೈಕ್ ಓಡಿಸುವಾಗ ಎಂದೂ ಹೆಲ್ಮೆಟ್ ಹಾಕುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸ್ವ-ನಿಯಂತ್ರಣ ಇತ್ತು. ಶಾಲೆ ಮುಗಿದ ನಂತರ ನಮ್ಮಷ್ಟಕ್ಕೆ ನಾವೇ ಹೋಂವರ್ಕ್ ಮುಗಿಸಿ, ಹುಲ್ಲಿನ ಮೈದಾನದಲ್ಲಿ ಸೂರ್ಯ ಮುಳುಗುವವರೆಗೂ ಚಿ ಆಟವಾಡಿಕೊಳ್ತಾ ಇದ್ದೆವು. ನೆರೆಹೊರೆಯ ಸ್ನೇಹಿತರ ಜೊತೆಗೆ ಆಟವಾಡುತ್ತಿದ್ದೇವೆಯೇ ಹೊರತು, ನಿಮ್ಮ ಹಾಗೆ ವಿಡಿಯೋ ಕಾಲ್ ಮಾಡ್ಕೊಂಡ್ ವರ್ಚುವಲ್ ಫ್ರೆಂಡ್ ಜೊತೆ ಆಟವಾಡ್ತಾ ಇರಲಿಲ್ಲ. ಬಾಯಾರಿಕೆಯಾದರೆ ನಿಮ್ಮ ಹಾಗೆ ಮಿನರಲ್ ನೀರು ಕುಡಿತಾ ಇರಲಿಲ್ಲ. ಕೊಳ, ಕೆರೆ, ಬಾವಿ, ಚಿಲುಮೆಗಳಲ್ಲಿ ನೀರು ಕುಡಿತಾ ಇದ್ದೆವು. ಸ್ನೇಹಿತರೆಲ್ಲ ಒಂದೇ ತಟ್ಟೆಯಲ್ಲಿ ಊಟ ಹಾಗೂ ಒಂದೇ ಲೋಟದಲ್ಲಿ ಪಾನೀಯಗಳನ್ನು ಕುಡಿತಾ ಇದ್ದೆವು. ಯಾವುದೇ ರೋಗ-ರುಜಿನ, ಸೋಂಕಿನ ಭಯವಿರಲಿಲ್ಲ. ಪ್ರತಿನಿತ್ಯ ನಾವು ಸೇವಿಸುತ್ತಿದ್ದ ಆಹಾರಗಳು ನಮಗೆ ಬೊಜ್ಜು ಹೆಚ್ಚಿಸುವ ಭಯವಿರಲಿಲ್ಲ. ಪಾದರಕ್ಷೆಗಳಿಲ್ಲದೇ ನಡೆದಾಡಿದರೂ ನಮ್ಮ ಪಾದಗಳಲ್ಲಿ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆರೋಗ್ಯವಾಗಿರಬೇಕೆಂದು ದಿನನಿತ್ಯ ಬಳಸುವ ಆಹಾರದ ಜೊತೆ ವಿಶೇಷವಾಗಿ, ಪೂರಕವಾದ ಆಹಾರವನ್ನು ಬಳಸುತ್ತಿರಲಿಲ್ಲ. ನಮ್ಮನ್ನ ಹೆತ್ತವರು ಶ್ರೀಮಂತರಾಗಿರಲಿಲ್ಲ. ಆ ಕಾರಣಕ್ಕೆ ಅವರು ನಿರ್ಜೀವ ವಸ್ತುಗಳ ಗಿಫ್ಟ್ ಕೊಡದೇ ನೈಜ ಪ್ರೀತಿಯನ್ನು ನಮಗೆ ಧಾರೆ ಎರೆದಿದ್ದರು. ನಾವು ಮೊಬೈಲ್, ಡಿವಿಡಿ, ಪಿಎಸ್ಪಿ, ವಿಡಿಯೋ ಗೇಮ್, ಲ್ಯಾಪ್‌ಟಾಪ್, ಇಂಟರ್ನೆಟ್ ಚಾಟ್ ಚಿ ಹೊಂದಿರಲಿಲ್ಲ. ಆದರೆ ಉತ್ತಮ ಗೆಳೆಯರಿದ್ದರು. ಕರೆಯದೇ ಇದ್ದರೂ ನಾವು ನಮ್ಮ ಸ್ನೇಹಿತರ ಮನೆಗೆ ಹೋಗಿ ಅವರ ಮನೆಯಲ್ಲಿ ತಂಗಳಿರಲಿ, ಮೃಷ್ಟಾನ್ನವಿರಲಿ ಸವಿದು ಬರುತ್ತಿದ್ದೆವು.
ಮಕ್ಕಳಿಗೆ ಕೌಟುಂಬಿಕ ಸಮಯ ನೀಡಲು ನಮ್ಮ ಪೋಷಕರು ಮರೆಯುತ್ತಿರಲಿಲ್ಲ. ನಮ್ಮ ಕಾಲದಲ್ಲಿ ಇದ್ದಿದ್ದು ಕಪ್ಪು ಬಿಳುಪಿನ ಫೋಟೋಗಳೇ ಆದರೂ ಇಂದಿಗೂ ಕಲರ್ ಫುಲ್ ನೆನಪುಗಳು ಮಾಸದಂತಿವೆ.

ನಾವೆಲ್ಲಾ ಒಂದು ಅನನ್ಯ ಹಾಗೂ ಅರ್ಥಪೂರ್ಣವಾದ ಪೀಳಿಗೆ. ಯಾಕೆಂದರೆ ತಂದೆ ತಾಯಿ ಮಾತುಗಳನ್ನು ಪಾಲಿಸುತ್ತಾ ಬೆಳೆದು ಬಂದ ಕೊನೆಯ ಪೀಳಿಗೆ ನಮ್ಮದು!
ಹಾಗೆಯೇ 'ನಮ್ಮ‌ಮಾತು' ಕೇಳ್ರೋ ಎಂದು ಮಕ್ಕಳನ್ನು ಒತ್ತಾಯಿಸಿದ ಮೊದಲ ಪೀಳಿಗೆಯೂ ನಮ್ಮದೇ!!

ನಮ್ಮದೇನೋ ಮುಗಿಯಿತು; ಇನ್ನೇನಿದ್ದರೂ ನಿಮ್ಮದೇ. ನಾವು ಕಣ್ಮರೆಯಾಗುವ ಮುನ್ನ ನಮ್ಮಿಂದೇನಾದರೂ ಕಲಿಯುವ, ಪಡೆಯುವ ಉದ್ದೇಶವಿದ್ದರೆ ಅದನ್ನು ಈಡೇರಿಸಿಕೊಳ್ಳಿ.

ಮೂಲ: ಹಾರ್ಟ್ಸ್ ಆಫ್ ಪ್ರೊಡಕ್ಷನ್, Received through WhatsApp.

ಮೊದಲ ತಿರುಗಾಟದಲ್ಲೇ ದೇವಿಯ ಶತಕದ ಮಹಾತ್ಮೆ!ಶ್ರೀ ಕ್ಷೇತ್ರ ಕಟೀಲಿಗೆ ಸೇರ್ಪಡೆಯಾಗಿರುವ ಹೊಸ ಯಕ್ಷಗಾನ ಮೇಳ (7) ಈ ವರ್ಷದ 189 ದಿನಗಳ (15 ನವೆಂಬ...
17/05/2026

ಮೊದಲ ತಿರುಗಾಟದಲ್ಲೇ ದೇವಿಯ ಶತಕದ ಮಹಾತ್ಮೆ!

ಶ್ರೀ ಕ್ಷೇತ್ರ ಕಟೀಲಿಗೆ ಸೇರ್ಪಡೆಯಾಗಿರುವ ಹೊಸ ಯಕ್ಷಗಾನ ಮೇಳ (7) ಈ ವರ್ಷದ 189 ದಿನಗಳ (15 ನವೆಂಬರ್ 2025ರಿಂದ 26 ಮೇ 2026ವರೆಗೆ) ತಿರುಗಾಟದಲ್ಲಿ ಶತಕ ಬಾರಿಸುತ್ತಿದೆ. ದೇವೀ ಮಾಹಾತ್ಮ್ಯೆ ಪ್ರಸಂಗಕ್ಕೂ ಕಟೀಲು ಮೇಳಕ್ಕೂ ಅವಿನಾಭಾವ ಸಂಬಂಧ. ಹಿಂದೊಮ್ಮೆ ಒಂದು ಪೋಸ್ಟ್‌ನಲ್ಲಿ ಇದರ ಬಗ್ಗೆ ಬರೆದಿದ್ದೆ. ಈ ವರ್ಷದ ತಿರುಗಾಟದಲ್ಲಿ (ಮೇ 26ಕ್ಕೆ ಕೊನೆಯ ಸೇವೆಯಾಟ) ನಮ್ಮ ಏಳನೇ ತಂಡದ 100ನೇ ದೇವೀ ಮಾಹಾತ್ಮ್ಯೆ ಪ್ರಸಂಗವು ಈ ತಿಂಗಳ 23ರಂದು ಕಲ್ಲಮುಂಡ್ಕೂರು ಸಮೀಪದ ಬಾನಂಗಡಿ ಎಂಬಲ್ಲಿ ನಡೆಯಲಿದೆ.

ಇದುವರೆಗೆ (17 ಮೇ 2026) ಲಭ್ಯ ಮಾಹಿತಿ ಪ್ರಕಾರ, ಕಟೀಲಿನ ಏಳೂ ಮೇಳಗಳು ಇಂದಿನದೂ ಸೇರಿ ಈ ವರ್ಷವೊಂದರಲ್ಲಿ ಒಟ್ಟು ದೇವೀ ಮಾಹಾತ್ಮ್ಯೆ ಪ್ರಸಂಗ ಪ್ರದರ್ಶನ ಮಾಡುವುದು 698 ಬಾರಿ. ಮೇಳ ಒಳಗಾಗಲು (ಅಂದರೆ ಈ ವರ್ಷದ ತಿರುಗಾಟ ಕೊನೆಗೊಳ್ಳುವುದು) ಇನ್ನೂ ಒಂಬತ್ತು ದಿನಗಳಷ್ಟೇ ಇವೆ. ನಮ್ಮ ಏಳನೇ ತಂಡವೂ ಸೇರಿ ಕೆಲವು ಮೇಳಗಳು ಶತಕ ಗಡಿಯಲ್ಲಿವೆ (100 ದೇವೀ ಮಾಹಾತ್ಮ್ಯೆ), ಮತ್ತೆ ಕೆಲವು ಶತಕ ದಾಟಿವೆ. ವಿ ಲವ್ ಕಟೀಲು ಮೇಳಾಸ್ ಹೆಸರಿನ ಸಾಮಾಜಿಕ ಜಾಲತಾಣದಿಂದ ಲಭ್ಯವಾದ ಮಾಹಿತಿ ಪ್ರಕಾರ, ಇಂದಿನವರೆಗೆ ದೇವೀ ಮಾಹಾತ್ಮ್ಯೆ ಪ್ರದರ್ಶನದ ಸಂಖ್ಯೆ ಹೀಗೆ ಇದೆ.
ಕಟೀಲು 1ನೇ ಮೇಳ - 111
ಕಟೀಲು 2ನೇ ಮೇಳ - 102
ಕಟೀಲು 3ನೇ ಮೇಳ - 93
ಕಟೀಲು 4ನೇ ಮೇಳ - 88
ಕಟೀಲು 5ನೇ ಮೇಳ - 106
ಕಟೀಲು 6ನೇ ಮೇಳ - 102
ಕಟೀಲು 7ನೇ ಮೇಳ - 96

ನಾನಿರುವ 7ನೇ ಮೇಳಕ್ಕೆ ಇನ್ನುಳಿದ 9 ದಿನಗಳಲ್ಲಿ 4 ಕಡೆ ದೇವೀ ಮಾಹಾತ್ಮ್ಯೆ ಪ್ರಸಂಗ ನಿಗದಿಯಾಗಿದೆ. ಉಳಿದ ಮೇಳಗಳ ಮಾಹಿತಿ ಸದ್ಯ ಲಭ್ಯ ಇಲ್ಲ. ಆದರೂ, ಈ ಬಾರಿ ಏಳು ಮೇಳಗಳ ದೇವೀ ಮಾಹಾತ್ಮ್ಯೆ ಪ್ರದರ್ಶನ 700 ದಾಟುವುದಂತೂ ಖಚಿತವೇ. (ನೆನಪಿಡಿ, ಇದು ಕೇವಲ ಕಟೀಲಿನ 7 ಮೇಳಗಳ ಮಾಹಿತಿ ಮಾತ್ರ. ಇನ್ನು ಮಂದಾರ್ತಿಯ ಐದು ಮೇಳಗಳು, ಧರ್ಮಸ್ಥಳ, ಹನುಮಗಿರಿ, ಪಾವಂಜೆ, ಸೌಕೂರು ಮುಂತಾಗಿ ತೆಂಕು-ಬಡಗಿನ ಸುಮಾರು 40ರಷ್ಟು ಮೇಳಗಳೂ ಆಟ ಆಡಿಸುವವರ ಕೋರಿಕೆ ಮೇರೆಗೆ ಇದೇ ಪ್ರಸಂಗವನ್ನು ಪ್ರದರ್ಶಿಸಿದ್ದಾರೆ. ಅವುಗಳನ್ನೂ ಲೆಕ್ಕ ಹಾಕಿದರೆ, 1200 ದಾಟುವುದು ಖಚಿತ.

ನನ್ನ ಮೊದಲ ತಿರುಗಾಟದಲ್ಲೇ ನಾನಿರುವ ಕಟೀಲು ಏಳನೇ ಮೇಳಕ್ಕೆ ಶತಕದ ಸಂಭ್ರಮ! ಕಟೀಲಮ್ಮನ ಆಶೀರ್ವಾದ!

ಮಾಹಿತಿ: ಏನಿದು ತಿರುಗಾಟ?
ಕರಾವಳಿಗೆ ಹೊರತಾದ ನನ್ನ ಮಿತ್ರರಿಗಾಗಿ: ತಿರುಗಾಟ ಎಂದರೆ, ಹಣಕಾಸು ವರ್ಷ ಇದ್ದ ಹಾಗೆ. ನವೆಂಬರ್‌ನಿಂದ ಆರಂಭವಾಗಿ ಮೇ ತಿಂಗಳವರೆಗೆ ಸುಮಾರು 6 ತಿಂಗಳು ಮಾತ್ರ ಯಕ್ಷಗಾನ ಮೇಳಗಳು ಊರೂರು ತಿರುಗುವುದು. ನಂತರ ಪತ್ತನಾಜೆ ದಿನ (ಈ ವರ್ಷ ಮೇ 26) ಮಳೆಗಾಲದಲ್ಲಿ ಮೇಳ ಒಳಗೆ ಆಗುವುದು (ಅಥವಾ ಗೆಜ್ಜೆ ಬಿಚ್ಚುವುದು) ಅಥವಾ ಮೇಳದ ತಿರುಗಾಟಕ್ಕೆ ಮಂಗಳ ಹಾಡುವುದು. ಮತ್ತೆ ಮುಂದಿನ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಪುನಃ ಊರೂರಲ್ಲಿ ಯಕ್ಷಗಾನ ಪ್ರದರ್ಶಿಸಲು ತಿರುಗಾಟಕ್ಕೆ ಹೊರಡುವುದು. ಹೀಗಾಗಿ, ತಿರುಗಾಟ ಎಂದರೆ ಒಂದರ್ಥದಲ್ಲಿ ಒಂದು ವರ್ಷ ಅಂತ. ಹತ್ತು ತಿರುಗಾಟ ಆಗಿದೆ ಎಂದರೆ ಆ ಕಲಾವಿದ 10 ವರ್ಷ ಮೇಳಗಳಲ್ಲಿ ಕೆಲಸ (ತಿರುಗಾಟ) ಮಾಡಿದ್ದಾನೆ ಎಂದರ್ಥ.

#ಯಕ್ಷಗಾನ #ಯಕ್ಷತಿರುಗಾಟದದಿನಗಳು #ತಿರುಗಾಟದದಿನಗಳು

Address

Bangalore
574150

Alerts

Be the first to know and let us send you an email when Avinash B posts news and promotions. Your email address will not be used for any other purpose, and you can unsubscribe at any time.

Share