Avinash B

Avinash B Tech Columnist | Yakshagana Artist | Kannada News | Technology for Common Man | ಕನ್ನಡಿ?
(1)

ಅವಿನಾಶ್ ಬೈಪಾಡಿತ್ತಾಯ (Avinash Baipadithaya), ಪತ್ರಕರ್ತ, ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ, ಬರಹಗಾರ, ಯಕ್ಷಗಾನವೆಂದರೆ ಪ್ರಾಣ. ಅಮ್ಮನ ಮಗ ಎಂಬ ಹೆಮ್ಮೆ.

AI ಎಂದರೇನು? ಸರಳವಾಗಿ ವಿವರಿಸುವ ಪ್ರಯತ್ನ. ತಿಳಿಯದೆ ಇರುವ ಹಲವು ಗೆಳೆಯರಿಗಾಗಿ. ಇದನ್ನು ಅಗತ್ಯವಿದ್ದವರಿಗೆ ಶೇರ್ ಮಾಡಿಕೊಳ್ಳಿ.
23/08/2026

AI ಎಂದರೇನು? ಸರಳವಾಗಿ ವಿವರಿಸುವ ಪ್ರಯತ್ನ. ತಿಳಿಯದೆ ಇರುವ ಹಲವು ಗೆಳೆಯರಿಗಾಗಿ. ಇದನ್ನು ಅಗತ್ಯವಿದ್ದವರಿಗೆ ಶೇರ್ ಮಾಡಿಕೊಳ್ಳಿ.

ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಸಮಗ್ರ ಕನ್ನಡ ಪ್ರಶ್ನೋತ್ತರ ಲೇಖನದ ಮೂಲಕ ಎಲ್....

23/08/2026

ನಿಮ್ಮ ಅಂತ್ಯಕ್ರಿಯೆಯ ನಂತರ ಸಾಮಾನ್ಯವಾಗಿ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಕೆಲವು ಗಂಟೆಗಳಲ್ಲಿ ಅಳುವ ಶಬ್ದ ಸಂಪೂರ್ಣವಾಗಿ ನಿಲ್ಲುತ್ತದೆ.

ಸಂಬಂಧಿಕರಿಗಾಗಿ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡುವಲ್ಲಿ ಕುಟುಂಬವು ನಿರತವಾಗಿರುತ್ತದೆ..

ಮೊಮ್ಮಕ್ಕಳು ಓಡುತ್ತಾ ಆಟವಾಡುತ್ತಲೇ ಇರುತ್ತಾರೆ.

ಮಲಗುವ ಮೊದಲು ನಿಮ್ಮೊಂದಿಗೆ ಟೀ ಸ್ಟಾಲ್‌ಗೆ ನಡೆಯಲು ಹೋದ ಕೆಲವು ಪುರುಷರು ನಿಮ್ಮ ಬಗ್ಗೆ ಕೆಲವು ಭಾವನಾತ್ಮಕ ಕಾಮೆಂಟ್‌ಗಳನ್ನು ಮಾಡುತ್ತಾರೆ!

ತುರ್ತು ಪರಿಸ್ಥಿತಿಯಿಂದಾಗಿ ಅವರು ವೈಯಕ್ತಿಕವಾಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಂಬಂಧಿಯೊಬ್ಬರು ನಿಮ್ಮ ಮಗಳೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾರೆ.

ಸಂಬಂಧಿಯೊಬ್ಬರು ಅಂತ್ಯಕ್ರಿಯೆಯ ಬಗ್ಗೆ ದೂರು ನೀಡಬಹುದು, ಹಣ ಖರ್ಚು ಮಾಡಿದ್ರು ಅಂತ ಒಬ್ಬರು ದೂರಿದರೆ, ಹಣ ಉಳಿಸಿದ್ರು ಅಂತ ಮತ್ತೊಬ್ಬರು.

ಜನಸಂದಣಿ ನಿಧಾನವಾಗಿ ಕಡಿಮೆಯಾಗುತ್ತದೆ..

ಮುಂದಿನ ದಿನಗಳಲ್ಲಿ

ನೀವು ಸತ್ತಿದ್ದೀರಿ ಎಂದು ತಿಳಿಯದೆ ಕೆಲವು ಕರೆಗಳು ನಿಮ್ಮ ಫೋನ್‌ಗೆ ಬರಬಹುದು.

ನಿಮ್ಮ ಕಚೇರಿ ನಿಮ್ಮ ಸ್ಥಾನವನ್ನು ತುಂಬಲು ಯಾರನ್ನಾದರೂ ಹುಡುಕಲು ಧಾವಿಸುತ್ತದೆ.

ಒಂದು ವಾರದ ನಂತರ ನಿಮ್ಮ ಸಾವಿನ ಸುದ್ದಿ ಕೇಳಿ,

ಕೆಲವು ಫೇಸ್‌ಬುಕ್ ಸ್ನೇಹಿತರು ನಿಮ್ಮ ಕೊನೆಯ ಪೋಸ್ಟ್ ಏನೆಂದು ತಿಳಿಯಲು ಕಾತುರದಿಂದ ಹುಡುಕಬಹುದು.

ಎರಡು ವಾರಗಳಲ್ಲಿ ನಿಮ್ಮ ಮಗ ಮತ್ತು ಮಗಳು ತಮ್ಮ ತುರ್ತು ರಜೆ ಮುಗಿದ ನಂತರ ಕೆಲಸಕ್ಕೆ ಮರಳುತ್ತಾರೆ.

ತಿಂಗಳ ಅಂತ್ಯದ ವೇಳೆಗೆ ನಿಮ್ಮ ಸಂಗಾತಿಯು ಹಾಸ್ಯ ಕಾರ್ಯಕ್ರಮವನ್ನು ನೋಡಿ ನಗಲು ಪ್ರಾರಂಭಿಸುತ್ತಾರೆ.

ನಿಮ್ಮ ನಿಕಟ ಸಂಬಂಧಿಗಳು ಸಿನಿಮಾ ಮತ್ತು ಬೀಚ್‌ಗೆ ಮರಳುತ್ತಾರೆ.

ಜೀವನವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ

ದೊಡ್ಡ ಮರದ ಒಣಗಿದ ಎಲೆ ಮತ್ತು ನೀವು ಯಾರಿಗಾಗಿ ವಾಸಿಸುತ್ತೀರಿ ಮತ್ತು ಸಾಯುತ್ತೀರಿ ಎಂಬುದರ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತೆಯೇ, ಎಲ್ಲವೂ ತುಂಬಾ ಸುಲಭವಾಗಿ, ವೇಗವಾಗಿ, ಯಾವುದೇ ಗಡಿಬಿಡಿಯಿಲ್ಲದೆ ನಡೆಯುತ್ತದೆ.

ಮಳೆ ಪ್ರಾರಂಭವಾಗಿದೆ, ಚುನಾವಣೆಗಳು ಬರುತ್ತಿವೆ, ಬಸ್‌ಗಳು ಎಂದಿನಂತೆ ಕಿಕ್ಕಿರಿದಿವೆ, ನಟಿಯೊಬ್ಬರು ಮದುವೆಯಾಗುತ್ತಿದ್ದಾರೆ, ಹಬ್ಬ ಬರುತ್ತಿದೆ, ವಿಶ್ವಕಪ್ ಕ್ರಿಕೆಟ್ ಯೋಜಿಸಿದಂತೆ ನಡೆಯುತ್ತಿದೆ, ಹೂವುಗಳು ಅರಳಿವೆ ಮತ್ತು ನಿಮ್ಮ ಸಾಕುಪ್ರಾಣಿ ಮುಂದಿನ ನಾಯಿಮರಿಗೆ ಜನ್ಮ ನೀಡಿತು.

ಈ ಜಗತ್ತಿನಲ್ಲಿ ನಿಮ್ಮನ್ನು ಅದ್ಭುತ ವೇಗದಲ್ಲಿ ಮರೆತುಬಿಡಲಾಗುತ್ತದೆ.

ಈ ಮಧ್ಯೆ ನಿಮ್ಮ ಮೊದಲ ವರ್ಷದ ಮರಣ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಕಣ್ಣು ಮಿಟುಕಿಸುವಷ್ಟರಲ್ಲಿ

ವರ್ಷಗಳು ಕಳೆದಿವೆ ಮತ್ತು ನಿಮ್ಮ ಬಗ್ಗೆ ಮಾತನಾಡಲು ಯಾರೂ ಇಲ್ಲ.

ಒಂದು ದಿನ ನಿಮ್ಮ ಹತ್ತಿರವಿರುವ ಯಾರಾದರೂ ಹಳೆಯ ಛಾಯಾಚಿತ್ರಗಳನ್ನು ನೋಡುವ ಮೂಲಕ ನಿಮ್ಮನ್ನು ನೆನಪಿಸಿಕೊಳ್ಳಬಹುದು,

ನಿಮ್ಮ ಊರಿನಲ್ಲಿ, ನೀವು ಭೇಟಿಯಾದ ಸಾವಿರಾರು ಜನರಲ್ಲಿ, ಒಬ್ಬ ವ್ಯಕ್ತಿ ಮಾತ್ರ ಕೆಲವೊಮ್ಮೆ ನಿಮ್ಮನ್ನು ನೆನಪಿಸಿಕೊಳ್ಳಬಹುದು ಮತ್ತು ಮಾತನಾಡಬಹುದು.

ಪುನರ್ಜನ್ಮ ನಿಜವಾಗಿದ್ದರೆ, ನೀವು ಬಹುಶಃ ಬೇರೆಯವರಂತೆ ಬೇರೆಡೆ ವಾಸಿಸುತ್ತಿದ್ದೀರಿ.

ಇಲ್ಲದಿದ್ದರೆ, ನೀವು ಏನೂ ಅಲ್ಲ ಮತ್ತು ದಶಕಗಳ ಕಾಲ ಕತ್ತಲೆಯಲ್ಲಿ ಮುಳುಗುತ್ತೀರಿ.

ಈಗ ಹೇಳಿ...

ಜನರು ನಿಮ್ಮನ್ನು ಸುಲಭವಾಗಿ ಮರೆಯಲು ಕಾಯುತ್ತಿದ್ದಾರೆ

ಹಾಗಾದರೆ ನೀವು ಯಾವುದಕ್ಕಾಗಿ ಓಡುತ್ತಿದ್ದೀರಿ?

ಮತ್ತು ನೀವು ಯಾವುದರ ಬಗ್ಗೆ ಚಿಂತಿಸುತ್ತಿದ್ದೀರಿ?

ನಿಮ್ಮ ಜೀವನದ ಬಹುಪಾಲು, 80% ಎಂದು ಹೇಳಿ, ನಿಮ್ಮ ಸಂಬಂಧಿಕರು ಮತ್ತು ನೆರೆಹೊರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನೀವು ಯೋಚಿಸುತ್ತೀರಿ.. ನೀವು ಅವರನ್ನು ತೃಪ್ತಿಪಡಿಸಲು ಜೀವನವನ್ನು ನಡೆಸುತ್ತಿದ್ದೀರಾ?

ಯಾವುದೇ ಪ್ರಯೋಜನವಿಲ್ಲ!

ಜೀವನವು ಒಮ್ಮೆ ಮಾತ್ರ ಬರುತ್ತದೆ, ಅದನ್ನು ಪೂರ್ಣವಾಗಿ ಜೀವಿಸಿ.... ಹೌದು, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರೀತಿಯಿಂದ ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಿ, ಅವನು ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತಾನೆ...

ಐಫೋನ್ ಬೇಕೂಂತ ತಾನೂ ಸತ್ತು ತಂದೆ-ತಾಯಿಯನ್ನೂ ಕೊಲ್ಲುವ ಮನಃಸ್ಥಿತಿಯವರೇ ಹುಟ್ಟುತ್ತಿದ್ದಾರೆ, ಬೆಳೆಯುತ್ತಿದ್ದಾರೆ...ಇದು ಈಗಿನ ಪೀಳಿಗೆಯವರ ಮತ್...
22/08/2026

ಐಫೋನ್ ಬೇಕೂಂತ ತಾನೂ ಸತ್ತು ತಂದೆ-ತಾಯಿಯನ್ನೂ ಕೊಲ್ಲುವ ಮನಃಸ್ಥಿತಿಯವರೇ ಹುಟ್ಟುತ್ತಿದ್ದಾರೆ, ಬೆಳೆಯುತ್ತಿದ್ದಾರೆ...

ಇದು ಈಗಿನ ಪೀಳಿಗೆಯವರ ಮತ್ತೊಂದು ತಲೆನೋವು. ತಲೆ ಇರುವುದು ಉಪಯೋಗಿಸುವುದಕ್ಕೆ ಅಂತ ಒಂಚೂರಾದ್ರೂ ಗೊತ್ತಿದೆಯಾ ಇವುಗಳಿಗೆ?
ಇದನ್ನು ಓದಿದಾಗಿನಿಂದ ಮನಸ್ಸು ಸ್ಥಿಮಿತದಲ್ಲಿಲ್ಲ.

ಇಷ್ಟು ವರ್ಷ ಬದುಕಿದ್ದು ಕೇವಲ ಒಂದು ಹೊಸ ಐಫೋನ್‌ಗಾಗಿಯಾ?

84 ಲಕ್ಷ ಜೀವರಾಶಿಗಳಲ್ಲಿ, ಮನುಷ್ಯನೂ ಒಂದು. ಈ ಮಾನವ ಜನ್ಮ ಪಡೆಯಲು ಅದೆಂತಹಾ ಪುಣ್ಯ ಮಾಡಿರಬೇಕು! ಕೇವಲ ಐಫೋನ್‌ಗಾಗಿ ಅಮೂಲ್ಯ ಬದುಕನ್ನೇ ಕಳೆದುಕೊಂಡುಬಿಟ್ಟನಲ್ಲ ಈವಯ್ಯ! ಛೇ! ಹೇಗಾದರೂ ಬದುಕಿಸೋಣ ಎಂದು ಹೋದ ಅಪ್ಪನನ್ನೂ ಸೆಳೆದುಕೊಂಡುಬಿಟ್ಟ, ಇದನ್ನು ಕಣ್ಣಾರೆ ನೋಡಿದ ಅಮ್ಮನೂ ಬದುಕು ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಇದು.

ಕನಸಲ್ಲ, ನಿಜ ಘಟನೆ...

ಇದು ನವಪೀಳಿಗೆಯವರ ಮನಃಸ್ಥಿತಿ!

ಈಗಿನ ಮಕ್ಕಳು ಹೀಗೆಯೇ ಬೆಳೆಯುತ್ತಿರುವುದು ತೀರಾ ತೀರಾ ಅಪಾಯಕಾರಿ!

22/08/2026

Gen Z ಯಾನೆ ನವಪೀಳಿಗೆ: ವಿದ್ಯೆ ಕಲಿತರಷ್ಟೇ ಸಾಲದು!

ಈ "ಕೆಲವು" ಜೆನ್ Z ಗಳಿಗೆ, ಕೇಳಿದ್ದು ತಕ್ಷಣ ಸಿಗಬೇಕು, ತಕ್ಷಣ ಆಗಬೇಕು; ಇಲ್ಲಾಂದ್ರೆ, ಸಕಾಲಕ್ಕೆ ಗಾಂಜಾ, ಅಫೀಮು ಸಿಗದೇ ಇರೋರ ಥರಾ, ಏನೇನೋ ಆಡಿಬುಡ್ತಾವೆ... ಕೊನೆಗೆ ಯಾರೋ ಹೇಳಿದರೂಂತ ಕ್ಷಮೆ ಕೇಳ್ತಾವೆ, ಮತ್ತದೇ ಚಾಳಿ ಮುಂದುವರಿಸ್ತಾವೆ.

ನಾನು Gen Z ಗೊತ್ತಾ, ನಾವು ಕಟ್ಟಿದ ತೆರಿಗೆಯಲ್ಲಿ ನಿಮ್ಗೆ ಸಂಬಳ ಸಿಗೋದು!

ಹೀಗಂತ ಆಕೆ ಹೇಳಿದ್ದಾಳೆಂದಾದ್ರೆ, (Context ಏನು? ಈ ಸುದ್ದಿಯ ಲಿಂಕ್ ಕಾಮೆಂಟ್ ಸೆಕ್ಷನ್‌ನಲ್ಲಿ ಹಾಕಿದ್ದೇನೆ.) ಎಷ್ಟು ದಾರ್ಷ್ಟ್ಯ ಇರ್ಬೇಕು ಅವಳಿಗೆ! ದುಡ್ಡಿನ ಮದ - ತೆರಿಗೆ ಕಟ್ಟೋವಷ್ಟು ಇವ್ಳು ಇವತ್ತು ಸಂಪಾದನೆ ಮಾಡ್ತಿದ್ದಾಳೆ, ಬೇಕಾಬಿಟ್ಟಿ ದುಡ್ಡು ಖರ್ಚು ಮಾಡ್ತಾಳೆ, ಎಂಜಾಯ್ ಮಾಡ್ತಿದ್ದಾಳೆ, ಕಾರು ತಗೊಂಡು ನೆಮ್ಮದಿಯಿಂದ ಊರು ಸುತ್ತುತ್ತಾಳೆ ಎಂದಾದ್ರೆ, ಇದಕ್ಕೆ ಕಾರಣ ಇದೇ ದೇಶ ಕಾಯುವ ಸೈನಿಕರು. ಇವಕ್ಕೆ ಕಾರಿನ ಗಾಜು ಸರಿಸಿದಾಗ ಅಲ್ಲಿನ ಶೈತ್ಯಗಾಳಿಯ ಅನುಭವ ಆಗಿರ್ತದೆ, ಆದ್ರೆ ಇದೇ ಸೈನಿಕ, ಆ ಕೊರೆಯುವ ಚಳಿಯಲ್ಲಿ (ಮೈನಸ್ 13 ಡಿಗ್ರಿ) ಪ್ರತಿದಿನವೂ ನಿಂತು ದೇಶ ಕಾಯುತ್ತಿದ್ದಾನೆ. ಮಜಾ ಉಡಾಯ್ಸೋಕೆ ಬಂದು ಏನೇನೋ ಕೂಗಾಡ್ತಾವೆ, ಥುಪಕ್...

ಬಚ್ಚಾ ಬಚ್ಚಾಗಳಿಗಾದ್ರೂ ಒಂದಿಷ್ಟು ಬುದ್ಧಿ ಇರ್ತದೆ. ಸೈನಿಕರಿಗೆ ರೆಸ್ಪೆಕ್ಟ್ ಕೊಡ್ತಿರೋ ಪುಟಾಣಿಗಳನ್ನು ಕೂಡ ನೋಡಿದ್ದೇನೆ ನಾನು. ಆದ್ರೆ, ಇದು ನೋಡಿ... ನಮ್ಮ ಟ್ಯಾಕ್ಸ್‌ನಿಂದ ನಿಮ್ಮ ತೆರಿಗೆ ಅಂತ ಸೈನಿಕರಿಗೇ ಹೇಳ್ತಿದ್ದಾಳೆ... ಈ ಸೈನಿಕರೂ ತೆರಿಗೆ ಕಟ್ತಾರೆ ಅನ್ನೋ ಸಣ್ಣ ಕಾಮನ್ ಸೆನ್ಸ್ ಕೂಡ ಇವುಗಳಿಗೆ ಇಲ್ಲದಾಗಿ ಹೋಯಿತೇ?

ಸೈನಿಕರೂ ಪ್ರತಿ ವರ್ಷ, ಪ್ರತಿ ತಿಂಗಳು ತೆರಿಗೆ ಕಟ್ಟುತ್ತಾರೆ. ಸಂಬಳ ಬರುವುದೇ ತೆರಿಗೆ ಕಟ್ ಆಗಿಯೇ, ನಮ್ಮ-ನಿಮ್ಮಂತೆಯೇ. ಆದಾಯ ತೆರಿಗೆ, ಜಿಎಸ್ಟಿ, ಪರೋಕ್ಷ ತೆರಿಗೆ, ಆಸ್ತಿ ತೆರಿಗೆ, ಸ್ಥಳೀಯ ತೆರಿಗೆ - ಎಲ್ಲವನ್ನೂ ಸೈನಿಕರು ಕೂಡ ಪಾವತಿಸ್ತಾರೆ. ನಿಮ್ ತೆರಿಗೆಯಿಂದ ಅವರಿಗೆ ಸಂಬಳ ಬರ್ತಿದೆ ಅಂತ ನೀನು ಹೇಳ್ತಿರ್ಬೇಕಾದ್ರೆ, ಅವ್ರು ತೆರಿಗೆ ಮಾತ್ರವೇ ಅಲ್ಲ, ತಮ್ಮ ಜೀವವನ್ನೇ ದೇಶಕ್ಕೆ ಕೊಟ್ಟು ನಿನ್ನ ಬದುಕು ಸುಗಮವಾಗುವಂತೆ ನೋಡಿಕೊಳ್ತಿದ್ದಾರೆ ಅನ್ನೋ ಕಾಮನ್ ಸೆನ್ಸ್ ಕೂಡ ಇಲ್ಲದಾಯಿತೇ?

ಸೈನಿಕರಿಗೆ ಸಿಗುವ ರೇಶನ್ ಅಥವಾ ಸೇನಾ ಕ್ಯಾಂಟೀನ್‌ಗಳಲ್ಲಿ ಸಿಗುವ ರಿಯಾಯಿತಿಯೇ ನಿಮಗೆ ದೊಡ್ಡ ಸಮಸ್ಯೆಯೆಂದಾದರೆ, ತೆರಿಗೆ ರಿಟರ್ನ್ಸ್ ವೇಳೆ ಮೆನ್ಷನ್ ಮಾಡದೇ ಅವರು ತಮ್ಮ ಬದುಕಿನ ತೆರಿಗೆಯನ್ನು ಅಲ್ಲಿ ಕಟ್ಟಿಡುತ್ತಾರೆ ಅನ್ನುವ ಸತ್ಯ ಕೂಡ ಜೆನ್ ಝೀಗಳು ತಿಳಿದುಕೊಳ್ಳಬೇಕಾಗಿದೆ. ಹೋಗ್ಲಿ, ಮಕ್ಕಳು ಅಂತ ಬಿಡೋಣವೇ? ಉಫ್, 25 ವರ್ಷ ಅಂದ್ರೆ ಬದುಕಿನ ಮೂರನೇ ಒಂದು ಭಾಗ ದಾಟಿದೆ! ಇಷ್ಟಾದ್ರೂ ಬುದ್ಧಿ ಮಾತ್ರ, ಮಕ್ಕಳಿಗಿಂತ ಕಡೆ.

ಇದೇ ಸೈನಿಕರು ಗಡಿಯಲ್ಲಿ ನಮ್ಮ ರಕ್ಷಣೆಗಾಗಿ ನಿಂತುಕೊಂಡೇ ಕೆಲಸ ಮಾಡುತ್ತಿರುವ ವೇಳೆ, ತನ್ನ ಕುಟುಂಬದಿಂದ ದೂರವಿದ್ದುಕೊಂಡು ತನ್ನ ಯೌವನವನ್ನು, ಹಬ್ಬ ಹರಿದಿನಗಳ ಆಚರಣೆಯ ಸಂಭ್ರಮವನ್ನು, ತನ್ನ ಮಕ್ಕಳ ಬಾಲ್ಯವನ್ನು ನೋಡುವ ಆನಂದವನ್ನು, ಫೋನ್‌ನಲ್ಲಷ್ಟೇ ತನ್ನ ಮಕ್ಕಳು ಹೇಗೆ ಬೆಳೆಯುತ್ತಿದ್ದಾರೆಂಬುದನ್ನು ನೋಡುತ್ತಾ, ನೇರವಾಗಿ ನೋಡುವ ಖುಷಿಯನ್ನು, ತನ್ನ ಬದುಕನ್ನೇ ತೆರಿಗೆ ರೂಪದಲ್ಲಿ ನಿಮಗಾಗಿ, ನಮಗಾಗಿ ಕಟ್ಟುತ್ತಿದ್ದಾನೆ! ಧರಿಸಿರುವ ದಪ್ಪನೆಯ ಚಳಿಯುಡುಪು, ದೇಹದ ಹೊದಿಕೆ ಚರ್ಮವನ್ನು ದಾಟಿ ನೇರವಾಗಿ ಎಲುಬೇ ಕೊರೆಯುವಷ್ಟು ಚಳಿಯಲ್ಲಿಯೂ ತನ್ನ ಜೀವವೆಂಬ ತೆರಿಗೆಯನ್ನು ಕಟ್ಟುತ್ತಾ, ನಮ್ಮ-ನಿಮ್ಮೆಲ್ಲರನ್ನು ಶತ್ರುಗಳ ಕೈಯಿಂದ ರಕ್ಷಿಸುತ್ತಿದ್ದಾನೆ!

ವಿದ್ಯೆ ಕಲಿತರೆ ಸಾಲದು, ಬುದ್ಧಿಯೂ ಬಲಿಯಬೇಕು. ಪದವಿ ಪೂರ್ಣಗೊಳಿಸಿದ್ದೇನೆ, ಉದ್ಯೋಗಕ್ಕೆ ಸೆಲೆಕ್ಟ್ ಆಯ್ಕೆ ಆಗಿದ್ದೇನೆ ಎಂದಾದರೆ, ಬುದ್ಧಿ ಇರಲೇಬೇಕೆಂದಿಲ್ಲ. ಅದು ಆರ್ಜಿಸಿಕೊಳ್ಳಬೇಕು. ಸ್ಮಾರ್ಟ್ ಫೋನ್ ಇದೆ ಎಂದಾಕ್ಷಣ, ಯೋಚಿಸುವುದನ್ನೇ ನಿಲ್ಲಿಸಿಬಿಡಬಾರದು. ಹಾಗೆ ಮಾಡಿದರೆ ಡಾರ್ವಿನ್ನನ ವಿಕಾಸ ಸಿದ್ಧಾಂತದಂತೆ, ಮೆದುಳೇ ನಶಿಸುತ್ತದೆ! ಇಷ್ಟು ಹೇಳಬೇಕಾಗಿತ್ತು, ಹೇಳಿಬಿಟ್ಟೆ!

ಜೈ ಜವಾನ್!

Send a message to learn more

22/08/2026

ತಿರುಪತಿ ಬೆಟ್ಟಕ್ಕೆ ವಾಹನದಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಏರುವ ಭಕ್ತರ ರಕ್ಷಣೆಗೆ ರೋಬೋಟ್ ನಾಯಿ ಸಜ್ಜಾಗಿದೆ.

ಇಂಥವರಿಗೆ ಮರಣ ದಂಡನೆಯನ್ನೇ ವಿಧಿಸಬೇಕು...‌ ಏನಂತೀರಿ? Ministry of Food Processing Industries, Government of India Ministry of F...
21/08/2026

ಇಂಥವರಿಗೆ ಮರಣ ದಂಡನೆಯನ್ನೇ ವಿಧಿಸಬೇಕು...‌ ಏನಂತೀರಿ? Ministry of Food Processing Industries, Government of India Ministry of Food PMFME - Ministry of Food Processing Industries

ನಾವು ತಿನ್ನುವ ಎಲ್ಲ ಆಹಾರಕ್ಕೆ ವಿಷ ಸೇರಿಸ್ತಾ ಇದ್ದಾರೆ, ಹಣ್ಣು, ತರಕಾರಿ, ಅಕ್ಕಿ, ಬೆಲ್ಲ, ಬೆಣ್ಣೆ, ಹೋಟೆಲ್ ತಿನಿಸುಗಳು, ರೈಲ್ವೇಯಲ್ಲಿ ಕೊಡುವ ಆಹಾರ, ಪೊಟ್ಟಣದ ಜಂಕ್ ಆಹಾರವಂತೂ ವಿಷವೇ ವಿಷ. ಅದಕ್ಕೆ‌ ಪ್ರೋಟೀನ್, ಕ್ಯಾಲೊರಿ, ಆರ್ಗ್ಯಾನಿಕ್, ಮಣ್ಣು ಮಸಿ ಅಂತೆಲ್ಲ ಫೇಕ್ ಲೇಬಲ್‌ಗಳು... What to eat? Take strictest action for the sake of the healthy life of Indians.

ಹಣ್ಣು ತರಕಾರಿ ತಿನ್ನಿ ಅಂತ ವೈದ್ಯರು ಹೇಳ್ತಾರೆ... ತಿಂದ್ರೆ ಪುನಃ ವೈದ್ಯರ ಬಳಿಗೇ ಹೋಗ್ಬೇಕು... ಒಟ್ರಾಶಿ ನಮ್ ತಲೆ ಮೇಲೆ ನಮ್ಮದೇ ಕೈ...‌ನಾವು ಬೆಳೆದದ್ದನ್ನಷ್ಟೇ ತಿನ್ಬೇಕು... 😡😡

Address

Bangalore
574150

Alerts

Be the first to know and let us send you an email when Avinash B posts news and promotions. Your email address will not be used for any other purpose, and you can unsubscribe at any time.

Shortcuts

Share