Vikasa Prakashana

Vikasa Prakashana Vikasa Prakashana

'ವಿಕಾಸ ಪ್ರಕಾಶನ' ಕ್ಕೆ ಹೆಮ್ಮೆಯ ಗರಿ ❤️ಕನ್ನಡನಾಡಿನ ಸುಪ್ರಸಿದ್ಧ ಗಾಯಕಿ ಎಚ್.ಆರ್. ಲೀಲಾವತಿ ಅವರ ಆತ್ಮಕಥನ "ಹಾಡಾಗಿ ಹರಿದಾಳೆ" ಮೂಡುಬಿದಿರೆಯ...
23/05/2024

'ವಿಕಾಸ ಪ್ರಕಾಶನ' ಕ್ಕೆ ಹೆಮ್ಮೆಯ ಗರಿ ❤️

ಕನ್ನಡನಾಡಿನ ಸುಪ್ರಸಿದ್ಧ ಗಾಯಕಿ ಎಚ್.ಆರ್. ಲೀಲಾವತಿ ಅವರ ಆತ್ಮಕಥನ "ಹಾಡಾಗಿ ಹರಿದಾಳೆ" ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ 'ಶಿವರಾಮ ಕಾರಂತ ಪುರಸ್ಕಾರ' ಕ್ಕೆ ಪಾತ್ರವಾಗಿದೆ.

ಪುಸ್ತಕ ಪ್ರಕಟಿಸಿರುವ 'ವಿಕಾಸ ಪ್ರಕಾಶನ' ಈ ಹೆಮ್ಮೆಯ ಕ್ಷಣದಲ್ಲಿ
ಎಚ್.ಆರ್. ಲೀಲಾವತಿ ಅವರನ್ನು ಮನದುಂಬಿ ಅಭಿನಂದಿಸುತ್ತದೆ ❤️

ಪುರಸ್ಕಾರ ಪ್ರದಾನ ಸಮಾರಂಭವು ಮೂಡುಬಿದಿರೆಯಲ್ಲಿ
ಮೇ 29 ರಂದು ನಡೆಯಲಿದೆ.

ಕೆ.ರಾಜಕುಮಾರ್ ಬರೆಯುತ್ತಾರೆ :ಆತ್ಮಕಥನಗಳಿಗೊಂದು ನಿಖರ ತೋರುಗಂಬ: ಸಾಮಾನ್ಯವಾಗಿ ಆತ್ಮಕಥನವೆಂದರೆ ತನ್ನ ಬಣ್ಣಿಸಿ, ಇದಿರ ಹಳಿಯಲು ತೆರೆದಿಟ್ಟ ಕೃ...
15/05/2023

ಕೆ.ರಾಜಕುಮಾರ್
ಬರೆಯುತ್ತಾರೆ :

ಆತ್ಮಕಥನಗಳಿಗೊಂದು ನಿಖರ ತೋರುಗಂಬ:

ಸಾಮಾನ್ಯವಾಗಿ ಆತ್ಮಕಥನವೆಂದರೆ ತನ್ನ ಬಣ್ಣಿಸಿ, ಇದಿರ ಹಳಿಯಲು ತೆರೆದಿಟ್ಟ ಕೃತಿ. ಬಹುತೇಕ ಸಂದರ್ಭಗಳಲ್ಲಿ ತನ್ನ ಸಾಧನೆಗಳನ್ನು ಉತ್ಪ್ರೇಕ್ಷಿಸಿ ಸಾರುವ ಹೊತ್ತಗೆಯೂ ಹೌದು. ತನ್ನನ್ನು ತಾನು ಇರುವಂತೆ ತೆರೆದಿಟ್ಟುಕೊಳ್ಳುವ ಆತ್ಮಚರಿತ್ರೆಗಳು ಅಪರೂಪ. ಚರಿತ್ರಹೀನರೂ ಆತ್ಮಕಥನವೊಂದನ್ನು ರಚಿಸಿ ತಮ್ಮನ್ನು ತಾವು ಸ್ವಯಂ ವೈಭವೀಕರಿಸಿಕೊಂಡು ಪುನೀತರಾಗಲು ಯತ್ನಿಸಿರುವುದುಂಟು. ಇದಕ್ಕೆ ಅಪವಾದ ಎಂಬಂತೆ ಕನ್ನಡದಲ್ಲಿ ಇತ್ತೀಚೆಗೆ ಒಂದು ಅಪರೂಪದ ಬೃಹತ್ ಆತ್ಮಕಥನವೊಂದು ಪ್ರಕಟವಾಗಿದೆ. ಕನ್ನಡದ ಹಿರಿಯ ಗಾಯಕಿ, ಲೇಖಕಿ ಡಾ. ಎಚ್.ಆರ್. ಲೀಲಾವತಿ ಅವರ 'ಹಾಡಾಗಿ ಹರಿದಾಳೆ' ಬೃಹತ್ ಆತ್ಮಕಥನ ಈ ಆರೋಪಗಳಿಗೆ ಎಡೆಯೇ ಇಲ್ಲದಂತೆ ಹೊರಬಂದಿದೆ! ಇದರಲ್ಲಿನ ಪುಟಪುಟವೂ, ಪದಪದವೂ ನೇರ, ನಿರ್ಭಿಡ, ಪಾರದರ್ಶಕ.

ಲೇಖಕಿ ಹಾಡಾಗಿ ಅಷ್ಟೇ ಹರಿದಿಲ್ಲ; ಅಕ್ಷರವಾಗಿಯೂ ಹರಿದಿದ್ದಾರೆ. ಸರಳ ಪ್ರಸ್ತುತಿ. ನಿರಾಡಂಬರ ಶೈಲಿ. ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಗುಣ ಇದರ ಧನಾತ್ಮಕ ಅಂಶಗಳು. ಆತ್ಮಚರಿತ್ರೆಯಂತಹ ಬರೆಹದಲ್ಲಿ ಪ್ರಾಮಾಣಿಕತೆ ಇರಬೇಕು ಎಂಬ ನಿರೀಕ್ಷೆ ಸಹಜ. ಅಂತಹ ಅಪೇಕ್ಷೆ ಇಲ್ಲಿ "ಹಸಿಗೋಡೆಯ ಹರಳಿನಂತೆ ಹುಸಿಹೋಗದೆ", ಕಚ್ಚಿಕೊಂಡಿದೆ. ಇಡೀ ಕೃತಿಯ ತುಂಬಾ ಒಂದು ಸ್ವಸ್ಥ ಮನಸ್ಸು ತನ್ನನ್ನು ತಾನು ವಾಸ್ತವ ಆಕಾರ ಮತ್ತು ಗಾತ್ರದಲ್ಲಿ ತೆರೆದುಕೊಂಡಿದೆ. ತನ್ನ ಸಾಧನೆ, ಗೆಲುವುಗಳನ್ನಷ್ಟೇ ಬಿಂಬಿಸಿಕೊಂಡಿಲ್ಲ. ಸೋಲು, ಕೊರತೆ, ಮಿತಿಗಳಿಗೂ ಕನ್ನಡಿ ಹಿಡಿದಿದೆ. ಓದತೊಡಗಿದರೆ ಚಕಚಕನೆ ಸಾಗುವ ಶತಾಬ್ದಿ ರೈಲಿನಂತೆ ಓಡತೊಡಗುತ್ತದೆ. ಇದರ ರಚನೆಯನ್ನು "ಹಿಂದಕೆ ನೋಡುತ ಮುಂದಕೆ ಸಾಗುವ ನದಿಯಂತಿದರ ವಿಹಾರ" ಎನ್ನಬಹುದು. ತನ್ನ ಹರಿವಿನಲ್ಲಿ ಈ ಕೃತಿ ನಮ್ಮ ನಡುವಿನ ಒಂಬತ್ತು ದಶಕಗಳ ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳನ್ನು ಅನಾವರಣಗೊಳಿಸಿದೆ. ಹಾಗಾಗಿ ಇದೊಂದು ಆತ್ಮಚರಿತ್ರೆಯಷ್ಟೇ ಅಲ್ಲ; ಚರಿತ್ರೆಯೂ ಹೌದು.

ಘೋಷಣೆ, ಬರೆಹವಷ್ಟೇ ಸ್ತ್ರೀವಾದವಲ್ಲ; ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸವಾಲುಗಳನ್ನು ಎದುರಿಸಿ ಈಸಿ ಜಯಿಸುವುದೂ ಸ್ತ್ರೀವಾದವೇ ಎಂಬುದನ್ನು ಈ ಹೊತ್ತಗೆ ಮನಗಾಣಿಸುತ್ತದೆ. ಇಂತಹ ಮಹತ್ತ್ವದ ಕೃತಿ ರಚಿಸಿದ ಲೇಖಕಿ ಎಲ್ಲರ ಅಭಿನಂದನೆಗೆ ಪಾತ್ರರು ಎಂಬ ಮಾತು ಇಲ್ಲಿ ಸವಕಲು ಮಾತಾಗದೆ, ಕ್ಲೀಷೆಯಾಗದೆ, ಚರ್ವಿತ ಚರ್ವಣವಾಗದೆ ಅಕ್ಷರಶಃ ನಿಜ ಎಂದಾಗುತ್ತದೆ. ಕನ್ನಡದಲ್ಲಿ ಹಾದಿತಪ್ಪಿದ ಆತ್ಮಕಥನಗಳಿಗೆ ಇದೊಂದು ನಿಖರ ತೋರುಗಂಬ. - ಕೆ. ರಾಜಕುಮಾರ್

ಹಾಡಾಗಿ ಹರಿದಾಳೆಸುಗಮ ಸಂಗೀತದ ಪ್ರಸಿದ್ಧ ಗಾಯಕಿ ಎಚ್. ಆರ್. ಲೀಲಾವತಿ ಆತ್ಮಕಥನಪ್ರಕಟಣೆ : ವಿಕಾಸ ಪ್ರಕಾಶನ99000 95204ಪುಟಗಳು : 354ಬೆಲೆ : ರ...
15/05/2023

ಹಾಡಾಗಿ ಹರಿದಾಳೆ
ಸುಗಮ ಸಂಗೀತದ ಪ್ರಸಿದ್ಧ ಗಾಯಕಿ ಎಚ್. ಆರ್. ಲೀಲಾವತಿ ಆತ್ಮಕಥನ

ಪ್ರಕಟಣೆ :
ವಿಕಾಸ ಪ್ರಕಾಶನ
99000 95204

ಪುಟಗಳು : 354
ಬೆಲೆ : ರೂ. 400

'ಬಿದಿರು ನೀನ್ಯಾರಿಗಲ್ಲದವಳು' - ಕರ್ನಾಟಕದ ಪ್ರಸಿದ್ಧ ರಾಜಕಾರಣಿ ಶ್ರೀಮತಿ ಮೋಟಮ್ಮ ಅವರ ವಿಶಿಷ್ಟ ರಾಜಕೀಯ ಪಯಣದ ಆತ್ಮಕಥನ ಬಿಡುಗಡೆ ಕಾರ್ಯಕ್ರಮ....
05/06/2022

'ಬಿದಿರು ನೀನ್ಯಾರಿಗಲ್ಲದವಳು' -
ಕರ್ನಾಟಕದ ಪ್ರಸಿದ್ಧ ರಾಜಕಾರಣಿ ಶ್ರೀಮತಿ ಮೋಟಮ್ಮ ಅವರ ವಿಶಿಷ್ಟ ರಾಜಕೀಯ ಪಯಣದ
ಆತ್ಮಕಥನ ಬಿಡುಗಡೆ ಕಾರ್ಯಕ್ರಮ.

ಲೋಕಾರ್ಪಣೆ: ಶ್ರೀ ಎಸ್.ಎಂ. ಕೃಷ್ಣ
ಅಧ್ಯಕ್ಷತೆ:
ಡಾ. ಜಿ. ಪರಮೇಶ್ವರ
ಪ್ರಾಸ್ತಾವಿಕ ನುಡಿ:
ಪ್ರೊ. ಹಿ.ಶಿ. ರಾಮಚಂದ್ರೇ ಗೌಡ
ಕೃತಿ ಪರಿಚಯ:
ದಿನೇಶ್ ಅಮಿನ್ ಮಟ್ಟು
ಮುಖ್ಯ ಅತಿಥಿ:
ಪ್ರೊ. ಕಮಲಾ ಹಂಪನಾ

11 ಜೂನ್ 2022
ಶನಿವಾರ
ಬೆಳಿಗ್ಗೆ 10 ಗಂಟೆ
ರವೀಂದ್ರ ಕಲಾಕ್ಷೇತ್ರ

ಕೃತಿ ನಿರೂಪಣೆ :
ವೀರಣ್ಣ ಕಮ್ಮಾರ
ಕೃತಿ ಪ್ರಕಟಣೆ :
ವಿಕಾಸ ಪ್ರಕಾಶನ
ಬೆಲೆ : ರೂ. 400

ಎಲ್ಲರಿಗೂ ಆದರದ ಸ್ವಾಗತ

ಕವಯತ್ರಿ ಪೂರ್ಣಿಮಾ ಸುರೇಶ್ ಅವರ ಮಧ್ಯಮಾವತಿ ಕವನ ಸಂಕಲನದ ಕುರಿತು ವಿಮರ್ಶೆ ಕೆಂಡಸಂಪಿಗೆಯಲ್ಲಿ.https://bit.ly/36YkEwJ
04/03/2022

ಕವಯತ್ರಿ ಪೂರ್ಣಿಮಾ ಸುರೇಶ್ ಅವರ ಮಧ್ಯಮಾವತಿ ಕವನ ಸಂಕಲನದ ಕುರಿತು ವಿಮರ್ಶೆ ಕೆಂಡಸಂಪಿಗೆಯಲ್ಲಿ.
https://bit.ly/36YkEwJ

ಈ ಕವನಸಂಕಲನದಲ್ಲಿ , ಪೂರ್ಣಿಮಾ ಸುರೇಶ್ ಕಟ್ಟಿಕೊಡುವ ಅಂತರಂಗದ ಈ ಅವನು ಅನ್ನುವ ಪಾತ್ರ ಬಹಳ ಕಾಡುತ್ತದೆ. ಅದು 'ಅವಳು' ಎಂಬುದಾಗಿ ಬದಲಾಗ....

ಯಾಮಿನಿಯ ಯಾತ್ರಿಕರು- ಡಾ. ಪಾಲಹಳ್ಳಿ ವಿಶ್ವನಾಥ್ವಿಜ್ಞಾನ ಲೋಕದ ಸಾಧಕರು ಮತ್ತು ಕೌತುಕಗಳನ್ನು ಕುರಿತ ಲೇಖನಗಳ ಸಂಗ್ರಹ.ಪುಟ- 200ಬೆಲೆ- ರೂ. 180
16/02/2022

ಯಾಮಿನಿಯ ಯಾತ್ರಿಕರು

- ಡಾ. ಪಾಲಹಳ್ಳಿ ವಿಶ್ವನಾಥ್

ವಿಜ್ಞಾನ ಲೋಕದ ಸಾಧಕರು ಮತ್ತು ಕೌತುಕಗಳನ್ನು ಕುರಿತ ಲೇಖನಗಳ ಸಂಗ್ರಹ.

ಪುಟ- 200
ಬೆಲೆ- ರೂ. 180

ಹಲವು ನಾಡುಹೆಜ್ಜೆ ಹಾಡು- ಜಯಶ್ರೀ ದೇಶಪಾಂಡೆಯೂರೋಪ್ , ಅಮೆರಿಕ ಮತ್ತು ಏಷ್ಯಾ ಪ್ರವಾಸ ಕಥನ.ಪುಟ - 264ಬೆಲೆ- ರೂ. 260
16/02/2022

ಹಲವು ನಾಡು
ಹೆಜ್ಜೆ ಹಾಡು

- ಜಯಶ್ರೀ ದೇಶಪಾಂಡೆ

ಯೂರೋಪ್ , ಅಮೆರಿಕ ಮತ್ತು ಏಷ್ಯಾ ಪ್ರವಾಸ ಕಥನ.

ಪುಟ - 264
ಬೆಲೆ- ರೂ. 260

ಬಾಲ್ಯಕಾಲ ಮಾಯಾಜಾಲಇಂಗ್ಲಿಷ್ ಮೂಲ:ಸಾವಿತ್ರಿ ಬಾಬುಲ್ಕರ್ಕನ್ನಡಕ್ಕೆ:ಶ್ಯಾಮಲಾ ಮಾಧವಮಂಜೇಶ್ವರದಲ್ಲಿ ಕಳೆದ ಬಾಲ್ಯದ ಮಧುರ ಅನುಭವಗಳ ಮೆಲುಕು.ಪುಟ -...
16/02/2022

ಬಾಲ್ಯಕಾಲ ಮಾಯಾಜಾಲ

ಇಂಗ್ಲಿಷ್ ಮೂಲ:
ಸಾವಿತ್ರಿ ಬಾಬುಲ್ಕರ್

ಕನ್ನಡಕ್ಕೆ:
ಶ್ಯಾಮಲಾ ಮಾಧವ

ಮಂಜೇಶ್ವರದಲ್ಲಿ ಕಳೆದ ಬಾಲ್ಯದ ಮಧುರ ಅನುಭವಗಳ ಮೆಲುಕು.

ಪುಟ - 212
ಬೆಲೆ - ರೂ. 200

https://www.kendasampige.com/%E0%B2%A6%E0%B2%BF%E0%B2%9F%E0%B3%8D%E0%B2%9F-%E0%B2%AE%E0%B2%B9%E0%B2%BF%E0%B2%B3%E0%B3%86...
02/02/2022

https://www.kendasampige.com/%E0%B2%A6%E0%B2%BF%E0%B2%9F%E0%B3%8D%E0%B2%9F-%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0-%E0%B2%B9%E0%B3%8B%E0%B2%B0%E0%B2%BE%E0%B2%9F%E0%B2%A6-%E0%B2%AA%E0%B3%8D%E0%B2%B0/

ಮಹಿಳೆಯರ ಜೀವನದಲ್ಲಿ ಎರಡು ವಿಷಯಗಳು ಸತ್ಯ. ಅದೆಂದರೆ, ಹರಿವ ನದಿಯಂತೆ ಬದುಕುವುದು ಹಾಗೂ ಪುರುಷನಿಗಿಂತ ಹೆಚ್ಚು ಧೈರ್ಯವಾಗಿ ಬದುಕನ್ನ...

ಮೀನಾಕ್ಷೀ ಭಟ್ಟ ಅವರ ಆತ್ಮ ಕಥನ ಹರಿವ ನದಿಯ ಕುರಿತು ಇಂದಿನ ವಿಜಯಕರ್ನಾಟಕದಲ್ಲಿ ಬಂದ ವಿಮರ್ಶೆ. ಧನ್ಯವಾದಗಳು ಪತ್ರಿಕಾ ಬಳಗಕ್ಕೆ...
30/01/2022

ಮೀನಾಕ್ಷೀ ಭಟ್ಟ ಅವರ ಆತ್ಮ ಕಥನ ಹರಿವ ನದಿಯ ಕುರಿತು ಇಂದಿನ ವಿಜಯಕರ್ನಾಟಕದಲ್ಲಿ ಬಂದ ವಿಮರ್ಶೆ. ಧನ್ಯವಾದಗಳು ಪತ್ರಿಕಾ ಬಳಗಕ್ಕೆ...

ಪೂರ್ಣಿಮಾರ ಕವಿತೆಗಳಲ್ಲಿ ದೇವರಿದ್ದಾನೆ, ಪ್ರೇಮವಿದೆ, ಅವನಿದ್ದಾನೆ, ಅವಳಿದ್ದಾಳೆ, ಆದರೂ ಎಲ್ಲವೂ ವಿಶಿಷ್ಟವಾಗಿ ಕಾಣಿಸುತ್ತಾರೆ. ಕವಿ ರೂಪಕಪ್ರಿ...
19/01/2022

ಪೂರ್ಣಿಮಾರ ಕವಿತೆಗಳಲ್ಲಿ ದೇವರಿದ್ದಾನೆ, ಪ್ರೇಮವಿದೆ, ಅವನಿದ್ದಾನೆ, ಅವಳಿದ್ದಾಳೆ, ಆದರೂ ಎಲ್ಲವೂ ವಿಶಿಷ್ಟವಾಗಿ ಕಾಣಿಸುತ್ತಾರೆ. ಕವಿ ರೂಪಕಪ್ರಿಯರೂ ಹೌದು. ಅವು ಕೂಡ ಅನನ್ಯ ರೀತಿಯಲ್ಲಿ ಬರುತ್ತವೆ. ‘ಪಾತ್ರ ಪರಿಚಯ’ ಇಡಿಯಾಗಿ ಕೋಟೆ ಕೊತ್ತಲ, ಯುದ್ಧ, ಆಯುಧಗಳೂ ಇತ್ಯಾದಿ ರೂಪಕಗಳಿಂದ ತುಂಬಿದೆ. ಇದರ ಆರಂಭದ ಸಾಲುಗಳೇ ಆಕರ್ಷಕವಾಗಿವೆ.
- ಕೆ.ವಿ.ತಿರುಮಲೇಶ್

ಸಂವೇದನೆಯಲ್ಲಿ ಹಳತು ಹೊಸತು ಅಂತ ಇದೆಯೇ? ಹಳತು ಹೊಸತುಗಳೆಲ್ಲ ಇರುವುದು ಅವನ್ನು ವ್ಯಕ್ತಪಡಿಸುವ ಶಬ್ದ ಸಮುಚ್ಚಯದ ಗಂಧಾಂತರಗಳಲ್ಲಷ್ಟೇ? ಅಕ್ಷರಗಳ ಹೊಸ ಜೋಡಣೆಯಲ್ಲಿ ಇಲ್ಲಿನ ಕೆಲ ಕವನಗಳು ಈಗಷ್ಟೇ ತೇದಿದ ಗಂಧ ಘಮವನ್ನು ಹೊಂದಿರುವುದು ಈ ಕವಿ ಇನ್ನಷ್ಟು ಬೆಳೆಯುವವಳು ಎಂಬುದರ ಗಾಳಿಯೊಸಗೆಯಾಗಿದೆ.
- ವೈದೇಹಿ

'ಹರಿವ ನದಿ'ಉತ್ತರ ಕನ್ನಡ ಜಿಲ್ಲೆಯ ಗೃಹಿಣಿ ಮೀನಾಕ್ಷಿ ಭಟ್ಟ ಅವರ ದಿಟ್ಟ ಆತ್ಮಕಥನ.ಜೀವನಪರ ನಿಲುವು ಎಂಬ ಮೀಟುಗೋಲು ಹಿಡಿದರೆಬದುಕಿನಲ್ಲಿ ಎದುರಾಗ...
13/01/2022

'ಹರಿವ ನದಿ'
ಉತ್ತರ ಕನ್ನಡ ಜಿಲ್ಲೆಯ ಗೃಹಿಣಿ ಮೀನಾಕ್ಷಿ ಭಟ್ಟ ಅವರ ದಿಟ್ಟ ಆತ್ಮಕಥನ.
ಜೀವನಪರ
ನಿಲುವು ಎಂಬ ಮೀಟುಗೋಲು ಹಿಡಿದರೆ
ಬದುಕಿನಲ್ಲಿ ಎದುರಾಗುವ
ಎಂಥ ಪ್ರಚಂಡ ಪ್ರವಾಹವನ್ನೂ ದಾಟಬಹುದು ಎಂದು ಸಾರುವ ಮನೋಜ್ಞ ಕಥನ.

ನಿರೂಪಣೆ :
ಭಾರತಿ ಹೆಗಡೆ
ಪ್ರಕಟಣೆ:
ವಿಕಾಸ ಪ್ರಕಾಶನ
ಪುಟ : 236
ಬೆಲೆ : ರೂ. 200

ಪ್ರತಿಗಳಿಗೆ ಸಂಪರ್ಕಿಸಿ :
ನವಕರ್ನಾಟಕ, ಸಪ್ನ, ಅಂಕಿತ, ಬಹುರೂಪಿ ಮತ್ತಿತರ ಪುಸ್ತಕ ಮಾರಾಟ ಮಳಿಗೆಗಳು ಮತ್ತು ಅವುಗಳ Online ಸೇವೆ.

booksloka.com
bookmaadi.com
ಅಂತರಜಾಲ ಮಳಿಗೆಗಳು.

Address

# 1541, 16th Main Road M. C. Layout, Vijayanagar
Bangalore
560040

Website

Alerts

Be the first to know and let us send you an email when Vikasa Prakashana posts news and promotions. Your email address will not be used for any other purpose, and you can unsubscribe at any time.

Share

Category