Baraguru Tv

Baraguru Tv Contact information, map and directions, contact form, opening hours, services, ratings, photos, videos and announcements from Baraguru Tv, News & Media Website, Bangalore.
(1)

ಈ ನೆಲ ಜಲದ ಬಗ್ಗೆ ನಮ್ಮ ಹೋರಾಟ ನಿರಂತರವಾಗಿರುತ್ತೆ. ನಿಮ್ಮ ಊರಿನ ಯಾವುದೇ ಸಮಸ್ಯೆ ಇದ್ದರು. ನಮ್ಮ ಮಾದ್ಯಮ ಮುಂದೆ ಇರುತ್ತೆ . ಯಾವುದೇ ಸುದ್ದಿಯಾದರೂ ಬಿತ್ತರಿಸಲು ನಾವ್ ರೆಡಿ. ಸದಾ ನಿಮ್ಮೊಂದಿಗೆ ಬರಗೂರು Tv DIGITAL MEDIA NEWS CHANNEL

Yash Toxic Day 1 Box Collection: ಯಶ್ ‘ಟಾಕ್ಸಿಕ್’ ಮೊದಲ ದಿನದ ಕಲೆಕ್ಷನ್ ಎಷ್ಟು?Credit Asianet news kannada Web Published : Aug...
27/08/2026

Yash Toxic Day 1 Box Collection: ಯಶ್ ‘ಟಾಕ್ಸಿಕ್’ ಮೊದಲ ದಿನದ ಕಲೆಕ್ಷನ್ ಎಷ್ಟು?

Credit Asianet news kannada Web
Published : Aug 26, 2026,

Yash Toxic Day 1 Collection: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಸಿನಿಮಾ ವಿಶ್ವಾದ್ಯಂತ ಮೊದಲ ದಿನ ₹125 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ.

ಮೊದಲ ದಿನದ ಕಲೆಕ್ಷನ್‌
ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಹರಿದುಬಂದಿದೆ. ಆದರೆ ಇದು ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಮೇಲೆ ಅಷ್ಟೇನೂ ಪರಿಣಾಮ ಬೀರಿದಂತಿಲ್ಲ. ವಿಶ್ವಾದ್ಯಂತ ಚಿತ್ರದ ಮೊದಲ ದಿನದ ಕಲೆಕ್ಷನ್‌ ರೂ.125 ಕೋಟಿಗಿಂತ ಅಧಿಕ ಎಂದು ಅಂದಾಜಿಸಲಾಗಿದೆ.

ಫ್ಯಾನ್‌ ಶೋಗಳು ಹೌಸ್‌ಫುಲ್‌
ಭಾರತದಲ್ಲಿ ಸಿನಿಮಾ ರೂ.90ರಿಂದ 95 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ. ಯಾವುದೇ ಪ್ರೀಮಿಯರ್‌ ಶೋ, ಸೆಲೆಬ್ರಿಟಿ ಶೋಗಳಿಲ್ಲದೇ ಆರು ಭಾಷೆಗಳಲ್ಲಿ ರಿಲೀಸ್‌ ದಿನದಂದೇ ತೆರೆಗೆ ಬಂದ ಸಿನಿಮಾದ ಹೆಚ್ಚಿನೆಲ್ಲ ಫ್ಯಾನ್‌ ಶೋಗಳು ಹೌಸ್‌ಫುಲ್‌ ಆಗಿದ್ದವು.

ಹಿಂದಿ ಭಾಷೆಯಲ್ಲಿ ಹೆಚ್ಚು ಕಲೆಕ್ಷನ್‌
ಕನ್ನಡದಲ್ಲಿ ಚಿತ್ರ ಮೊದಲ ದಿನ 20 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದರೆ, ಹಿಂದಿ ಭಾಷೆಯಲ್ಲಿ 50 ಕೋಟಿ ರು.ಗಳಿಗೂ ಹೆಚ್ಚು ಕಲೆಕ್ಷನ್‌ ಆಗಿದೆ. ತೆಲುಗು ಭಾಷೆಯಲ್ಲಿ 11 ಕೋಟಿ ರು.ಗಳಷ್ಟು ಗಳಿಕೆ ದಾಖಲಾಗಿದೆ. ಕನ್ನಡದಲ್ಲಿ ಈ ಹಿಂದೆ ‘ಕೆಜಿಎಫ್‌ 2’ ಈ ರೀತಿಯ ತೀವ್ರ ಗಳಿಕೆಯ ಮೂಲಕ ಸುದ್ದಿಯಾಗಿತ್ತು.

ಅತ್ಯಧಿಕ ಗಳಿಕೆ
ಆ ಬಳಿಕ ಯಶ್‌ ಅವರದೇ ಎರಡನೇ ಸಿನಿಮಾ ಮತ್ತೆ ದಾಖಲೆ ಮಾಡುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಮಾರ್ಚ್‌ನಲ್ಲಿ ತೆರೆಕಂಡ ‘ಧುರಂಧರ್‌ 2’ ಸಿನಿಮಾ 146 ಕೋಟಿ ರು. ಮೂಲಕ ಮೊದಲ ದಿನವೇ ಅತ್ಯಧಿಕ ಗಳಿಕೆ ದಾಖಲಿಸಿತ್ತು.

ಟಾಕ್ಸಿಕ್‌ಗೆ ಮಿಶ್ರ ಪ್ರತಿಕ್ರಿಯೆ
ಎರಡನೇ ಸ್ಥಾನದಲ್ಲಿ ‘ಟಾಕ್ಸಿಕ್‌’ ಇದೆ. ಯಶ್‌ ಅಭಿಮಾನಿಗಳು 4 ವರ್ಷಗಳ ಬಳಿಕ ಬಂದ ಯಶ್‌ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಒಟ್ಟಾರೆಯಾಗಿ ಟಾಕ್ಸಿಕ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ.

ಎಮರ್ಜೆನ್ಸಿ ಸಮಯದಲ್ಲಿ ಕೆಲಸಕ್ಕೆ ಬಾರದ ತೋರಿಕೆಯ ಶ್ರೀಮಂತಿಕೆ; ಮಧ್ಯರಾತ್ರಿ ಬೆಂಗಳೂರು ಟೆಕ್ಕಿ ಅನುಭವಿಸಿದ ಯಾತನೆ! ಆರ್ಥಿಕ ಸ್ವಾತಂತ್ರ್ಯಕ್ಕಾ...
26/08/2026

ಎಮರ್ಜೆನ್ಸಿ ಸಮಯದಲ್ಲಿ ಕೆಲಸಕ್ಕೆ ಬಾರದ ತೋರಿಕೆಯ ಶ್ರೀಮಂತಿಕೆ; ಮಧ್ಯರಾತ್ರಿ ಬೆಂಗಳೂರು ಟೆಕ್ಕಿ ಅನುಭವಿಸಿದ ಯಾತನೆ! ಆರ್ಥಿಕ ಸ್ವಾತಂತ್ರ್ಯಕ್ಕಾಗಿ 3 ಬಕೆಟ್‌ ಸೂತ್ರ
ಮ್ಯೂಚ್ಯುವಲ್‌ ಫಂಡ್‌, ಎಸ್‌ಐಪಿ, ರಿಯಲ್‌ ಎಸ್ಟೇಟ್‌ ಮತ್ತಿತರ ಹೂಡಿಕೆಗಳು, ಆಧುನಿಕ ಭಾರತೀಯರ ಜನಪ್ರಿಯ ಅರ್ಥಶಾಸ್ತ್ರವಾಗಿ ಮಾರ್ಪಟ್ಟಿವೆ. ಆದರೆ ಕೈಯಲ್ಲಿರುವ ಎಲ್ಲಾ ಹಣವನ್ನು ಹೂಡಿಕೆಗೆ ಮೀಸಲಿಟ್ಟರೆ, ತುರ್ತು ಸಂದರ್ಭಗಳಲ್ಲಿ ಏನೆಲ್ಲಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಬೆಂಗಳೂರಿನ ಟೆಕ್ಕಿಯೋರ್ವರು, ಆಸ್ಪತ್ರೆಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುವ ಮೂಲಕ ವಿವರಿಸಿದ್ದಾರೆ. ಈ ಘಟನೆ ಕಾರ್ಪೋರೇಟ್‌ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಲಿಕ್ವಿಡ್‌ ಕ್ಯಾಶ್‌ನ ಮಹತ್ವವನ್ನು ತಿಳಿಸಿಕೊಟ್ಟಿದೆ. ಹಾಗಿದ್ದರೆ ನಿಮ್ಮ ಹೂಡಿಕೆ ಯೋಜನೆ ಹೇಗಿರಬೇಕು? ಇಲ್ಲಿದೆ ಮಾಹಿತಿ.

Updated: 25 Aug 2026,
Credit Vijaya Karnataka Web

ಹೈಲೈಟ್ಸ್‌:
ಕೈಯಲ್ಲಿರುವ ಹಣವನ್ನೆಲ್ಲಾ ಹೂಡಿಕೆ ಮಾಡಿ ಜೇಬು ಖಾಲಿ ಮಾಡಿಕೊಂಡಿದ್ದೀರಾ?
ಬೆಂಗಳೂರು ಟೆಕ್ಕಿ ಹೇಳುವ ಮಹತ್ವದ ಆರ್ಥಿಕ ಸಲಹೆಯನ್ನು ಗಮನವಿಟ್ಟು ಕೇಳಿಸಿಕೊಳ್ಳಿ.
ಕೌಟುಂಬಿಕ ತುರ್ತು ಸಂದರ್ಭದಲ್ಲೇ ಗೊತ್ತಾಗುತ್ತ ಲಿಕ್ವಿಡ್‌ ಕ್ಯಾಶ್‌ ಮಹತ್ವ.

ಬೆಂಗಳೂರು: ಐಷಾರಾಮಿ ಅಪಾರ್ಟ್‌ಮೆಂಟ್‌, ತಿಂಗಳಿಗೆ ಬರೋಬ್ಬರಿ 1.8 ಲಕ್ಷ ರೂ. ಸಂಬಳ, ಭವಿಷ್ಯದ ಕನಸುಗಳೊಂದಿಗೆ ಪ್ರತಿ ತಿಂಗಳು ತಪ್ಪದೇ ಹೂಡಿಕೆಯಾಗುವ 80,000 ಮ್ಯೂಚುವಲ್ ಫಂಡ್ ಎಸ್‌ಐಪಿ. ಮೇಲ್ನೋಟಕ್ಕೆ ಇಂತಹ ಜೀವನವನ್ನು ನೋಡುವ ಯಾರಿಗಾದರೂ, ಈ ವ್ಯಕ್ತಿ ಆರ್ಥಿಕವಾಗಿ ಭದ್ರವಾಗಿದ್ದಾನೆ ಎಂದೆನಿಸದೇ ಇರದು. ಆದರೆ ಕಾಗದದ ಮೇಲಿನ ಆಸ್ತಿ ಮತ್ತು ಕೈಗೆಟುಕುವ ನಗದು ಹಣದ ನಡುವಿನ ಅಜಗಜಾಂತರ ವ್ಯತ್ಯಾಸ ಎಂತಹ ಬಿಕ್ಕಟ್ಟನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ, ಬೆಂಗಳೂರಿನ ಯುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಎದುರಿಸಿದ ಅಗ್ನಿಪರೀಕ್ಷೆಯೇ ಜ್ವಲಂತ ಸಾಕ್ಷಿ.

ಹೌದು, ಬೆಂಗಳೂರಿನ ಟೆಕ್ಕಿಯೋರ್ವರು ಲಿಕ್ವಿಡ್‌ ಕ್ಯಾಶ್‌ನ ಮಹತ್ವವನ್ನು ವಿವರಿಸುತ್ತಾ, ಖಾಸಗಿ ಆಸ್ಪತ್ರೆಯಲ್ಲಿ ತಮಗಾದ ಕಹಿ ಅನುಭವವನ್ನುರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಕೈಯಲ್ಲಿ ಹಣ ಇಟ್ಟುಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

ಕಹಿ ವಾಸ್ತವ:
ಒಂದು ಸಾಮಾನ್ಯ ದಿನದಂದು ಇದ್ದಕ್ಕಿದ್ದಂತೆ ತಂದೆಯವರ ಆರೋಗ್ಯ ಹದಗೆಟ್ಟು ಕುಸಿದುಬಿದ್ದಾಗ, ಅವರನ್ನು ತುರ್ತಾಗಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಬೇಕಾಗಿ ಬಂದಿತು. ಆಸ್ಪತ್ರೆಯ ಆಡಳಿತ ಮಂಡಳಿ ಚಿಕಿತ್ಸೆ ಮುಂದುವರಿಸಲು ತಕ್ಷಣವೇ 2.5 ಲಕ್ಷ ರೂಪಾಯಿ ಠೇವಣಿ ಕಟ್ಟುವಂತೆ ಸೂಚಿಸಿತು. ಆದರೆ ಆ ಕ್ಷಣದಲ್ಲಿ ಈ ಟೆಕ್ಕಿ ಖಾತೆಯಲ್ಲಿ ಕೇವಲ 32,000 ರೂಪಾಯಿ ಮಾತ್ರ ಇತ್ತು. ಇತ್ತೀಚೆಗಷ್ಟೇ ಲ್ಯಾಪ್‌ಟಾಪ್ ಖರೀದಿಸಿದ್ದರಿಂದ ಅವರ ಪ್ರಾಥಮಿಕ ಕ್ರೆಡಿಟ್ ಕಾರ್ಡ್‌ನ ಲಿಮಿಟ್ ಸಂಪೂರ್ಣ ಖಾಲಿಯಾಗಿತ್ತು. ಮ್ಯೂಚುವಲ್ ಫಂಡ್‌ನಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆಯಿದ್ದರೂ, ಅದನ್ನು ನಗದೀಕರಿಸಲು ಕನಿಷ್ಠ 2 ರಿಂದ 3 ಕೆಲಸದ ದಿನಗಳು ಬೇಕಾಗಿದ್ದವು.

ವಿಮಾ ಕಂಪನಿಯ ಅನುಮೋದನೆಯೂ ತಕ್ಷಣವೇ ಸಿಗದ ಕಾರಣಕ್ಕೆ, ಅಂತಿಮವಾಗಿ ಮಧ್ಯರಾತ್ರಿ 1:30ಕ್ಕೆ ದೂರದ ಸಂಬಂಧಿಕರಿಗೆ ಯುಪಿಐ ಮೂಲಕ ಹಣ ಕಳುಹಿಸುವಂತೆ, ಬೆಂಗಳೂರಿನ ಈ ಟೆಕ್ಕಿ ಮನವಿ ಮಾಡಿಕೊಂಡಿದ್ದಾರೆ. "ನಾನು ತಿಂಗಳಿಗೆ ₹1.8 ಲಕ್ಷ ಗಳಿಸುತ್ತಿದ್ದ ನಕಲಿ ಶ್ರೀಮಂತನಾಗಿದ್ದೆ, ತುರ್ತು ನಗದು ಇಲ್ಲದಿದ್ದರೆ ಬೃಹತ್ ಸಂಬಳವೂ ಶೂನ್ಯ ಎಂಬುದು ಅಂದು ಅರ್ಥವಾಯಿತು" ಎಂದು ಆ ಟೆಕ್ಕಿ ಹೇಳಿರುವುದು ಭಾರತೀಯ ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.

ಮ್ಯೂಚುವಲ್ ಫಂಡ್‌ನಲ್ಲಿ ನೀವು ಮಾಡುತ್ತಿರುವ ಅತೀ ದೊಡ್ಡ ತಪ್ಪುಗಳು ಏನು? ಹಣಕಾಸು ತಜ್ಞ ವಿನೋದ್ ತಂತ್ರಿ ಹೇಳಿದ್ದೇನು?
ವೃತ್ತಿಪರರ 3 ಪ್ರಮುಖ ಆರ್ಥಿಕ ಪ್ರಮಾದಗಳು:
ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ವೈಯಕ್ತಿಕ ಅನುಭವವಲ್ಲ. ಬದಲಿಗೆ ಇಂದಿನ ಲಕ್ಷಾಂತರ ಯುವ ಉದ್ಯೋಗಿಗಳು ಮತ್ತು Gen-Z ವರ್ಗದ ಹೂಡಿಕೆದಾರರು ಎಸಗುತ್ತಿರುವ ಸಾಮಾನ್ಯ ತಪ್ಪುಗಳನ್ನು ಅನಾವರಣಗೊಳಿಸಿದೆ. ಯುವಜನತೆಯಲ್ಲಿ ಆರ್ಥಿಕ ಶಿಸ್ತು ಅಗತ್ಯ ಎಂಬುದನ್ನು ಇದು ಒತ್ತಿ ಹೇಳಿದೆ. ಪ್ರಮುಖವಾಗಿ ಯುವ ವೃತ್ತಿಪರರು ಮೂರು ವಿಧದ ಆರ್ಥಿಕ ಪ್ರಮಾದಗಳನ್ನು ಮಾಡುತ್ತಾರೆ.

1. ಕ್ರೆಡಿಟ್ ಕಾರ್ಡ್ ತುರ್ತು ನಿಧಿಯಲ್ಲ: ಹಲವರು ತಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್‌ನ್ನೇ ಬ್ಯಾಕಪ್ ಎಂದು ಭಾವಿಸುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ಸಾಲದ ಸಾಧನವೇ ಹೊರತು ತುರ್ತು ನಿಧಿಯಲ್ಲ. ಇಎಂಐ ಅಥವಾ ದೊಡ್ಡ ಮಟ್ಟದ ಖರೀದಿಯಿಂದ ಈ ಲಿಮಿಟ್ ಮುಗಿದರೆ, ತುರ್ತು ಸಮಯದಲ್ಲಿ ಅದು ನಿರುಪಯುಕ್ತವಾಗುತ್ತದೆ.

2. ಅತಿಯಾದ ಎಸ್‌ಐಪಿ ಮತ್ತು ನಗದು ಕೊರತೆ: ಸಂಪತ್ತು ಸೃಷ್ಟಿಗೆ ದೀರ್ಘಾವಧಿ ಹೂಡಿಕೆ ಅಗತ್ಯ ನಿಜ. ಆದರೆ ಅಗತ್ಯಕ್ಕೆ ತಕ್ಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಅಥವಾ ಲಿಕ್ವಿಡ್ ಫಂಡ್ ಇಟ್ಟುಕೊಳ್ಳದೆ, ಆದಾಯದ ಅರ್ಧಕ್ಕಿಂತ ಹೆಚ್ಚು ಪಾಲನ್ನು ಮ್ಯೂಚುವಲ್ ಫಂಡ್‌ಗಳಿಗೆ ಹಾಕುವುದು 'ಲಿಕ್ವಿಡಿಟಿ ಟ್ರ್ಯಾಪ್'ಗೆ ದಾರಿ ಮಾಡಿಕೊಡುತ್ತದೆ. ಷೇರು ಮಾರುಕಟ್ಟೆ ಆಧಾರಿತ ಫಂಡ್‌ಗಳು ತಕ್ಷಣವೇ ಆಪತ್ಬಾಂಧವನಾಗಲು ಸಾಧ್ಯವಿಲ್ಲ ಎಂಬುದನ್ನು ಅರಿಯುವುದು ಮುಖ್ಯ.

3. ಸಮರ್ಪಕ ಆರೋಗ್ಯ ವಿಮೆಯ ನಿರ್ಲಕ್ಷ್ಯ: ಕಂಪನಿ ನೀಡುವ ಉದ್ಯೋಗಿ ಆರೋಗ್ಯ ವಿಮೆಯ ಮೇಲೆ ಅತಿಯಾಗಿ ಅವಲಂಬಿತರಾಗುವುದು ಅಥವಾ ಪೋಷಕರಿಗೆ ಪ್ರತ್ಯೇಕ, ಸಮಗ್ರ ಆರೋಗ್ಯ ವಿಮೆ ಮಾಡಿಸದಿರುವುದು, ವೈದ್ಯಕೀಯ ಬಿಕ್ಕಟ್ಟಿನ ವೇಳೆ ಕುಟುಂಬವನ್ನು ಸಾಲದ ಸುಳಿಗೆ ತಳ್ಳುತ್ತದೆ. ಹೀಗಾಗಿ ಸಕಾಲಕ್ಕೆ ಸೂಕ್ತ ಆರೋಗ್ಯ ವಿಮೆ ಮಾಡಿಸುವುದು ಉತ್ತಮ ನಡೆ.

ಆರ್ಥಿಕ ಸ್ವಾತಂತ್ರ್ಯ, ಯುವಜನತೆ ಮತ್ತು ಸಾಲದ ಸುಳಿ: ಹಣಕಾಸು ನಿರ್ವಹಣೆ ಬಗ್ಗೆ ಫಂಡಾ ಹುಡುಗಿ ಸ್ವಾತಿ ಕುಲಕರ್ಣಿ ಮಾತು
3-ಬಕೆಟ್ ಸೂತ್ರ:
ಆದಾಯ ಹೆಚ್ಚಿದ ತಕ್ಷಣವೇ ಜೀವನಶೈಲಿಯ ವೆಚ್ಚವನ್ನು ಅಥವಾ ದೀರ್ಘಾವಧಿಯ ಹೂಡಿಕೆಯನ್ನು ಹೆಚ್ಚಿಸುವ ಮುನ್ನ, ಪ್ರತಿಯೊಬ್ಬರೂ ತಮ್ಮ ಆರ್ಥಿಕ ಸುರಕ್ಷತಾ ಚಕ್ರವನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದು ಸಂಕಷ್ಟದ ಸಮಯದಲ್ಲಿ ಕುಟುಂಬವನ್ನು ಸ್ಥಿರವಾಗಿರಿಸುತ್ತದೆಯಲ್ಲದೇ, ಕುಟುಂಬದ ಆರ್ಥಿಕ ಯೋಜನೆಗಳಿಗೂ ಸಹಕಾರಿಯಾಗುತ್ತದೆ.

1. ತುರ್ತು ನಿಧಿ: ಯಾವುದೇ ಹೂಡಿಕೆ ಮಾಡುವ ಮೊದಲ ಹೆಜ್ಜೆಯಾಗಿ, ಕನಿಷ್ಠ 3 ರಿಂದ 6 ತಿಂಗಳ ಮೂಲಭೂತ ಜೀವನ ವೆಚ್ಚಕ್ಕೆ ಬೇಕಾಗುವ ಮೊತ್ತವನ್ನು ಪ್ರತ್ಯೇಕವಾಗಿರಿಸಬೇಕು. ಈ ಹಣವನ್ನು ತಕ್ಷಣ ಡ್ರಾ ಮಾಡಬಹುದಾದ ಉಳಿತಾಯ ಖಾತೆ ಅಥವಾ ಓವರ್‌ನೈಟ್/ಲಿಕ್ವಿಡ್ ಫಂಡ್‌ಗಳಲ್ಲಿ ಇಡಬೇಕು.

2. ವಿಮಾ ಸುರಕ್ಷತಾ ಕವಚ: ಕಂಪನಿ ನೀಡುವ ವಿಮೆಯ ಹೊರತಾಗಿ, ಕುಟುಂಬಕ್ಕೆ ಸ್ವತಂತ್ರ ಆರೋಗ್ಯ ವಿಮೆ ಮತ್ತು ಕನಿಷ್ಠ ವಾರ್ಷಿಕ ಆದಾಯದ ಶೇ. 10-15ರಷ್ಟು ಪಟ್ಟು ಟರ್ಮ್ ಇನ್ಶೂರೆನ್ಸ್ ಹೊಂದಿರುವುದು ಉತ್ತಮ ಆರ್ಥಿಕ ಸಂಪ್ರದಾಯ.

3. ಕ್ರಮಬದ್ಧ ಹೂಡಿಕೆ: ತುರ್ತು ನಿಧಿ ಮತ್ತು ವಿಮಾ ಸುರಕ್ಷತೆ ಸುಭದ್ರವಾದ ಬಳಿಕವಷ್ಟೇ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಎಸ್‌ಐಪಿ ಮತ್ತು ರಿಯಲ್ ಎಸ್ಟೇಟ್‌ನಂತಹ ದೀರ್ಘಾವಧಿ ಆಸ್ತಿ ಸೃಷ್ಟಿಗೆ ಆದಾಯವನ್ನು ನಿಯೋಜಿಸಬೇಕು.

ಒಟ್ಟಿನಲ್ಲಿ ಗೇಟೆಡ್ ಕಮ್ಯೂನಿಟಿಗಳ ಐಷಾರಾಮಿ ಜೀವನ, ಬ್ರ್ಯಾಂಡೆಡ್ ಗ್ಯಾಜೆಟ್‌ಗಳು ಮತ್ತು ಲಕ್ಷಾಂತರ ರೂಪಾಯಿ ಸಂಬಳವು, ಸಾಮಾಜಿಕವಾಗಿ ಶ್ರೀಮಂತಿಕೆಯನ್ನು ಲೇಬಲ್ ಮಾಡಬಹುದು. ಆದರೆ ಆಪತ್ತಿನ ಸಮಯದಲ್ಲಿ ತಕ್ಷಣವೇ ಸ್ಪಂದಿಸಬಲ್ಲ ನಗದು ಹಣ ಕೈಯಲ್ಲಿಲ್ಲದಿದ್ದರೆ, ಆ ಎಲ್ಲಾ ವೈಭವವೂ ಕ್ಷಣಮಾತ್ರದಲ್ಲಿ ಕರಗಿಹೋಗುತ್ತದೆ. ಹೂಡಿಕೆ ಮತ್ತು ಗಳಿಕೆಯ ನಡುವೆ ಲಿಕ್ವಿಡಿಟಿಯ ಬ್ಯಾಲೆನ್ಸ್ ಕಾಯ್ದುಕೊಳ್ಳುವುದೇ ನಿಜವಾದ ಆರ್ಥಿಕ ಸ್ವಾತಂತ್ರ್ಯ ಎಂಬುದು, ಬೆಂಗಳೂರಿನ ಟೆಕ್ಕಿಯೋರ್ವರ ಈ ಕಹಿ ಅನುಭವ ಸಾಬೀತುಪಡಿಸಿದೆ.
ನೀವೂ ಕೂಡ ನಿಮ್ಮ ಎಲ್ಲಾ ಗಳಿಕೆಯನ್ನು ಹೂಡಿಕೆಗೆ ಮೀಸಲಿಟ್ಟಿದ್ದೀರಾ? ಲಿಕ್ವಿಡ್‌ ಕ್ಯಾಶ್‌ ಅಲಭ್ಯತೆಯಿಂದ ಎಂದಾದರೂ ಸಂಕಟ ಎದುರಿಸಿದ್ದೀರಾ?

#ವಿಜಯಕರ್ನಾಟಕ

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!ಅನಯಾ ಈ ಹಿಂದೆ ಮುಂಬೈ ಪರ ವಯೋಮಿತಿ ಕ್ರಿ...
26/08/2026

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!
ಅನಯಾ ಈ ಹಿಂದೆ ಮುಂಬೈ ಪರ ವಯೋಮಿತಿ ಕ್ರಿಕೆಟ್ ಆಡಿದ್ದರು. ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಖಾನ್ ಅವರೊಂದಿಗೆ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ ಅನುಭವವೂ ಅವರಿಗೆ ಇದೆ.

Updated:25th Aug, 2026
Credit kannada prabha web

ಮುಂಬೈ: ಮಾಜಿ ಭಾರತ ಕ್ರಿಕೆಟಿಗ ಸಂಜಯ್ ಬಂಗರ್ ಅವರ ಪುತ್ರಿ(ತ್ರ) ಅನಯಾ ಬಂಗರ್ ಅವರಿಗೆ ಆಸ್ಟ್ರೇಲಿಯಾದಲ್ಲಿ ಮಹಿಳಾ ಕಮ್ಯುನಿಟಿ ಕ್ರಿಕೆಟ್ ಆಡುವುದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದೆ.

ಇದರಿಂದ ಲಿಂಗ ಪರಿವರ್ತನೆ ಮಾಡಿಕೊಂಡಿದ್ದ ಅನಯಾ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವ ಅವಕಾಶ ದೊರೆತಿದೆ. ಈ ವರ್ಷದ ಮಾರ್ಚ್‌ನಲ್ಲಿ ಅನಯಾ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇದೀಗ ಕ್ರಿಕೆಟ್ ಆಡಲು ಅನುಮತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅನಯಾು, “ನಾನು ಮತ್ತೆ ಕ್ರಿಕೆಟ್ ಆಡಲು ಸಾಧ್ಯವಾಗುತ್ತದೆ ಎಂದು ತಿಳಿದುಕೊಂಡಿರುವುದು ನನಗೆ ಬಹಳ ಸಂತಸದ ದಿನ. ಒಂದು ಹಂತದಲ್ಲಿ ಇನ್ನು ಮುಂದೆ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಮತ್ತೊಂದು ಅವಕಾಶ ನೀಡಿದೆ” ಎಂದು ತಿಳಿಸಿದ್ದಾರೆ.

ಅನಯಾ ಈ ಹಿಂದೆ ಮುಂಬೈ ಪರ ವಯೋಮಿತಿ ಕ್ರಿಕೆಟ್ ಆಡಿದ್ದರು. ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಖಾನ್ ಅವರೊಂದಿಗೆ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ ಅನುಭವವೂ ಅವರಿಗೆ ಇದೆ. ಆದರೆ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಂತಹ ‘ಎಲೈಟ್ ಕ್ರಿಕೆಟ್’ನಲ್ಲಿ ಆಡಲು ಅನಯಾ ಕ್ರಿಕೆಟ್ ಆಸ್ಟ್ರೇಲಿಯಾದ ಟೆಸ್ಟೋಸ್ಟೆರಾನ್ ಸಂಬಂಧಿತ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.

2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪುರುಷರ ಪ್ರೌಢಾವಸ್ಥೆಯನ್ನು ಅನುಭವಿಸಿರುವ ಟ್ರಾನ್ಸ್‌ಜೆಂಡರ್ ಆಟಗಾರರಿಗೆ ಎಲೈಟ್ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ನಿರ್ಬಂಧಿಸಿತ್ತು.

ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದ್ದೇಕೆ?

ಕ್ರಿಕೆಟ್ ಆಸ್ಟ್ರೇಲಿಯಾದ ‘ಟ್ರಾನ್ಸ್‌ಜೆಂಡರ್ ಆ್ಯಂಡ್ ಜೆಂಡರ್ ಡೈವರ್ಸ್ ಪ್ಲೇಯರ್ಸ್ ಇನ್ ಎಲೈಟ್ ಕ್ರಿಕೆಟ್ ಪಾಲಿಸಿ’ ಪ್ರಕಾರ, ಎಲೈಟ್ ಕ್ರಿಕೆಟ್‌ನಲ್ಲಿ ಆಡಲು ಆಟಗಾರ್ತಿಯ ರಕ್ತದಲ್ಲಿನ ಸೀರಮ್ ಟೆಸ್ಟೋಸ್ಟೆರಾನ್ ಪ್ರಮಾಣ ಕನಿಷ್ಠ 12 ತಿಂಗಳ ಅವಧಿಗೆ ಪ್ರತಿ ಲೀಟರ್‌ಗೆ 10 ನ್ಯಾನೋಮೋಲ್‌ಗಿಂತ ಕಡಿಮೆ ಇರಬೇಕು.

ಕ್ರಿಕೆಟ್ ಆಸ್ಟ್ರೇಲಿಯಾದ ಇಂಟೆಗ್ರಿಟಿ ವಿಭಾಗದ ಮುಖ್ಯಸ್ಥೆ ಜಾಕಿ ಪಾರ್ಟ್ರಿಡ್ಜ್ ಅವರು ಅನಯಾಗೆ ಕಳುಹಿಸಿರುವ ಪತ್ರದಲ್ಲಿ, ಮಾರ್ಚ್ 2027ರಿಂದ ಎಲೈಟ್ ಕ್ರಿಕೆಟ್‌ನಲ್ಲಿ ಆಡುವ ಅರ್ಹತೆ ರಕ್ತ ಪರೀಕ್ಷೆಯಲ್ಲಿ ಟೆಸ್ಟೋಸ್ಟೆರಾನ್ ಮಟ್ಟ 10 nmol/Lಗಿಂತ ಕಡಿಮೆ ಇರುವುದನ್ನು ದೃಢಪಡಿಸುವುದರ ಜೊತೆಗೆ, ನೀತಿಯಲ್ಲಿನ ಇತರ ಅರ್ಹತಾ ಮಾನದಂಡಗಳನ್ನು ಮುಂದುವರಿಸಿಕೊಂಡು ಹೋಗುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದ್ದೇನು?

ಆದರೆ ಅನಯಾ ತಕ್ಷಣದಿಂದಲೇ ಕಮ್ಯುನಿಟಿ ಕ್ರಿಕೆಟ್‌ನಲ್ಲಿ ಆಡಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

“ಮಾರ್ಚ್ 2027ರವರೆಗೆ ಆಸ್ಟ್ರೇಲಿಯಾದ ಯಾವುದೇ ರಾಜ್ಯ ಅಥವಾ ಪ್ರಾಂತ್ಯದಲ್ಲಿ ನಡೆಯುವ ಪ್ರೀಮಿಯರ್ ಕ್ರಿಕೆಟ್ ಸ್ಪರ್ಧೆಗಳಲ್ಲಿ ನೀವು ಆಡಲು ಅರ್ಹರಾಗಿರುತ್ತೀರಿ.

ನೀತಿಯ ಪ್ರಕಾರ ಪ್ರೀಮಿಯರ್ ಕ್ರಿಕೆಟ್ ಅನ್ನು ಎಲೈಟ್ ಕ್ರಿಕೆಟ್ ಬದಲಿಗೆ ಕಮ್ಯುನಿಟಿ ಕ್ರಿಕೆಟ್ ಎಂದು ವರ್ಗೀಕರಿಸಲಾಗಿರುವುದರಿಂದ, ಈ ಸ್ಪರ್ಧೆಗಳಲ್ಲಿ ನಿಮ್ಮ ಭಾಗವಹಿಸುವಿಕೆಗೆ ಈ ನಿರ್ಧಾರ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಪಾರ್ಟ್ರಿಡ್ಜ್ ಪತ್ರದಲ್ಲಿ ತಿಳಿಸಿದ್ದಾರೆ.
#ಕನ್ನಡಪ್ರಭ

ತಮ್ಮ ಸುಖಾಗಮನ ಬಯಸುವ ❤️😍
26/08/2026

ತಮ್ಮ ಸುಖಾಗಮನ ಬಯಸುವ ❤️😍

26/08/2026

ಅಡಿಕೆ ಗಿಡಕ್ಕೆ ಪ್ಯೂರ್ ಸಾವಯವ ಗೊಬ್ಬರ ಅಂತ ಇದ್ರೆ ಅದು ಅಕ್ಷಯ ಸಮೃದ್ಧಿ ಕಾಂಪೋಸ್ಟ್ ಗೊಬ್ಬರ ರೈತರು ಇದನ್ನು ಉಪಯೋಗಿಸಿ ಹೆಚ್ಚಿನ ಲಾಭ ಪಡೆಯಿರಿ.
#ಅರೆಕಾಪ್ಲಾಂಟ್

ಇಂದಿರಾ ಕ್ಯಾಂಟೀನ್‌ಗಳಿಗೆ ಬೆಲೆ ಏರಿಕೆ ಬಿಸಿ! ಬಡವರ ಹಸಿವು ನೀಗಿಸುವ ಯೋಜನೆಗೆ ಗ್ರಹಚಾರ? ₹5ಕ್ಕೆ ಇಡ್ಲಿ, ₹10ಕ್ಕೆ ಬಿಸಿಯೂಟ ನೀಡಿ ಬಡವರು, ದಿ...
25/08/2026

ಇಂದಿರಾ ಕ್ಯಾಂಟೀನ್‌ಗಳಿಗೆ ಬೆಲೆ ಏರಿಕೆ ಬಿಸಿ!
ಬಡವರ ಹಸಿವು ನೀಗಿಸುವ ಯೋಜನೆಗೆ ಗ್ರಹಚಾರ?

₹5ಕ್ಕೆ ಇಡ್ಲಿ, ₹10ಕ್ಕೆ ಬಿಸಿಯೂಟ ನೀಡಿ ಬಡವರು, ದಿನಗೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಈಗ ಸಂಕಷ್ಟದಲ್ಲಿವೆ
ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಗುತ್ತಿಗೆದಾರರು ಪರದಾಡುವಂತಾಗಿದೆ!

ರಾಜ್ಯದ 581ಕ್ಕೂ ಹೆಚ್ಚು ಕ್ಯಾಂಟೀನ್‌ಗಳ ಭವಿಷ್ಯವೇನು?
ನಿಮ್ಮ ಅಭಿಪ್ರಾಯವೇನು?

ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರಿ ಉದ್ಯಾನಗಳ ಭೂಮಿಯ 5 ಪ್ರತಿಶತ ಭೂಮಿ ಮಾರಾಟಕ್ಕೆ ಅನುವು ಮಾಡಿಕೊಡುವ ಮಸೂದೆಗೆ ಸಂಸದ ತೇಜಸ್ವಿ ಸೂರ್ಯ ತೀವ್ರ ವ...
25/08/2026

ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರಿ ಉದ್ಯಾನಗಳ ಭೂಮಿಯ 5 ಪ್ರತಿಶತ ಭೂಮಿ ಮಾರಾಟಕ್ಕೆ ಅನುವು ಮಾಡಿಕೊಡುವ ಮಸೂದೆಗೆ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ Credit Asi...
25/08/2026

Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ

Credit Asianet news web
Published : Aug 25, 2026,

ಟಾಲಿವುಡ್‌ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.

ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಳ
ಟಾಲಿವುಡ್‌ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಪಾಸಿಟಿವ್ ಪ್ರತಿಕ್ರಿಯೆ ಕೊಡುತ್ತಿರುವ ಕಾರಣ, ಸಿನಿಮಾಗೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.

105 ವರ್ಷಗಳಲ್ಲಿ ಇದೇ ಮೊದಲು!
ಇದರೊಂದಿಗೆ ಈ ಸಿನಿಮಾ ಹಲವು ದಾಖಲೆಯನ್ನು ನಿರ್ಮಿಸುತ್ತಿದೆ. 105 ವರ್ಷಗಳ ಟಾಲಿವುಡ್ ಸಿನಿಮಾ ದಾಖಲೆಗಳನ್ನು ಬ್ರೇಕ್ ಮಾಡಿದ್ದು, ಭಾನುವಾರ ತೆಲುಗು ರಾಜ್ಯಗಳಲ್ಲಿ ಹಾಕಿದ್ದ ಎಲ್ಲಾ ಶೋಗಳು ಹೌಸ್ ಫುಲ್ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಹೌದು, ಈ ರೀತಿ ನಡೆದಿರೋದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಬಾರಿಗೆ ಎಂದು ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ.

ಸಿನಿಮಾ ಚೆನ್ನಾಗಿದ್ದರೆ ಜನರು ಥಿಯೇಟರ್‌ಗೆ ಬರ್ತಾರೆ!
ಸಿನಿಮಾ ಕಥೆ ಉತ್ತಮವಾಗಿದ್ದರೆ ಜನರು ಈಗಲೂ ಥಿಯೇಟರ್‌ಗೆ ಬರ್ತಾರೆ ಅನ್ನೋದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ. ಚಿತ್ರಮಂದಿರಕ್ಕೆ ಬರುವುದನ್ನೇ ನಿಲ್ಲಿಸಿದ್ದ ಹಲವು ಮಂದಿಯನ್ನು ಕೈ ಹಿಡಿದು ಥಿಯೇಟರ್ ಮೆಟ್ಟಿಲು ಹತ್ತುವಂತೆ ಮಾಡಿದೆ. ಸದ್ಯ ಎರಡು ರಾಜ್ಯದಲ್ಲಿ ಸಿನಿಮಾ ಫೀವರ್ ಹೆಚ್ಚಾಗಿದೆ. ಇನ್ನು ಹಲವು ವರ್ಷಗಳಿಂದ ಸೂಪರ್ ಹಿಟ್ ಸಿನಿಮಾಗಾಗಿ ಕಾದುಕುಳಿತ್ತಿದ್ದ ರವಿತೇಜ ಅವರಿಗೂ ಇದು ಕಮ್‌ಬ್ಯಾಕ್ ಸಿನಿಮ ಎಂದು ಹೇಳಬಹುದು.

ಮಿಡಲ್ ಕ್ಲಾಸ್ ತಂದೆಯ ಜೀವನ, ಕಥೆಯಲ್ಲಿ ಟ್ವಿಸ್ಟ್!
ಒಂದು ಮಿಡಲ್ ಕ್ಲಾಸ್ ತಂದೆಯ ಪಾತ್ರದಲ್ಲಿ ರವಿತೇಜ್ ನಟಿಸಿದ್ದು, ನಿರ್ದೇಶಕ ತಾವು ಆಯ್ಕೆ ಮಾಡಿಕೊಂಡಿದ್ದ ಕಥೆಯನ್ನು ಯಾವುದೇ ಗೊಂದಲವಿಲ್ಲದೇ ಪ್ರೇಕ್ಷಕರು ಮುಂದಿಟ್ಟಿದ್ದಾರೆ. ಸಿನಿಮಾ ಕಥ ಹಲವರಿಗೆ ಗೊತ್ತಿದೆ ಅಂತ ಅನಿಸಿದರೂ, ಅದನ್ನು ವಿಶೇಷವಾಗಿ ಸಿನಿಮಾ ಪ್ರೇಮಿಗಳ ಮುಂದಿಟ್ಟಿದ್ದಾರೆ. ಒಂದು ಥ್ರಿಲ್ಲರ್ ಕಥೆಯನ್ನು ಭಕ್ತಿಪೂರ್ವಕವಾಗಿ ಹೊಸದಾಗಿ ಸಿನಿಮ್ಯಾಟಿಕ್ ರೂಪದಲ್ಲಿ ಹೇಳಲು ಯಶಸ್ವಿಯಾಗಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ.

ಇರುಮುಡಿ ಭರ್ಜರಿ ಗಳಿಕೆ
ಸಿನಿಮಾ ಕಲೆಕ್ಷನ್‌ಗಳು ಉತ್ತಮವಾಗಿದ್ದು, ಮೂರು ದಿನದಲ್ಲಿ 72 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕಳೆದ ಒಂದು ದಶಕದಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ, ಕೇವಲ ಒಂದೂವರೆ ದಿನದಲ್ಲಿಯೇ ಜಾಗತಿಕ ಮಟ್ಟದಲ್ಲಿ ಹೂಡಿಕೆಯ ವೆಚ್ಚವನ್ನು ಮರುಗಳಿಸಿದ (break-even) ಏಕೈಕ ಗಮನಾರ್ಹ ಚಿತ್ರವಾಗಿ 'ಇರುಮುಡಿ' (Irumudi) ಹೊರಹೊಮ್ಮಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯನ್ನು ಕಂಡು ಸ್ವತಃ ವಾಣಿಜ್ಯ ವಲಯದವರೇ ಅಚ್ಚರಿಗೊಂಡಿರುವುದು ನಿಜಕ್ಕೂ ಗಮನಾರ್ಹ ಸಂಗತಿಯಾಗಿದೆ.

262 ನೈಟ್ ಶೋಗಳು ಹೌಸ್ ಫುಲ್!
ಭಾನುವಾರ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಹಾಕಿದ್ದ ಶೋಗಳಲ್ಲಿ ಶೇಕಡಾ 97ರಷ್ಟು ಟಿಕೆಟ್‌ಗಳು ಮಾರಾಟವಾಗಿದ್ದು, ಅದರಲ್ಲೂ ಹೈದರಾಬಾದ್‌ ನಗರವೊಂದರಲ್ಲೇ ಹಾಕಿದ್ದ 262 ನೈಟ್ ಶೋಗಳು ಫುಲ್ ಆಗಿದೆ. ಮೈತ್ರಿ ಮ್ಯೂವಿ ಮೇಕರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ತೆಲುಗು ರಾಜ್ಯಗಳಾದ ಪ್ರಮುಖ ನಗರಗಳಾದ ಹೈದರಾಬಾದ್, ವಿಶಾಖಪಟ್ಟಣ, ವಿಜಯವಾಡ ಸೇರಿದಂತೆ ಹಲವು ನಗರಗಳಲ್ಲಿ 500 ಹೆಚ್ಚು ಶೋಗಳಲ್ಲಿ ವಾರಾಂತ್ಯದಲ್ಲಿ ಹೌಸ್ ಫುಲ್ ಶೋ ಪ್ರದರ್ಶನ ಕಂಡಿದೆ.

ಸಿನಿಮಾ ಕಥೆ ಎಲ್ಲರಿಗೂ ಗೊತ್ತಿದೆ, ಆದರೆ ನಿರ್ದೇಶಕರು ಗೆದ್ದಿದ್ದು ಎಲ್ಲಿ?
ಇನ್ನು, ಸಿನಿಮಾ ಕಥೆ ವಿಚಾರಕ್ಕೆ ಬಂದರೆ, ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಅರಣ್ಯ ಪ್ರದೇಶದ ಸಮೀಪದ ಪೊಲ್ಲೂರು ಗ್ರಾಮದಲ್ಲಿ ತ್ರಿನಾಥ್ ರಾಮ್, ಕಾವೇರಿ ದಂಪತಿಯ ಮಗಳು ಮಣಿಕಂಠ ಜೊತೆ ಜೀವನ ನಡೆಸುತ್ತಿರುತ್ತಾರೆ. ಮಗಳು ಎಂದರೆ ತಂದೆಗೆ ಪ್ರಾಣ, ತಾನು ನೋಡಿದ ಪ್ರತಿ ಹೆಣ್ಣು ಮಗಳಲ್ಲಿಯೂ ತನ್ನ ಮಗಳನ್ನು ನೋಡುವ ಭಾವನೆಯನ್ನು ತಂದೆ ಹೊಂದಿರುತ್ತಾನೆ. ಆದರೆ ಆತನಿಗೆ ಇರುವ ಕುಡಿತದಿಂದ ದೂರವಿರಲೂ ಆತ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ಮಾಲೆ ಧರಿಸುತ್ತಾನೆ. ಆ ಬಳಿಕ 41 ದಿನ ನಿಷ್ಠೆಯಿಂದ ಜೀವನ ನಡೆಸುತ್ತಾನೆ. ಇದೇ ಸಂದರ್ಭದಲ್ಲಿ ಗ್ರಾಮದ ಶಾಲೆಯಲ್ಲಿ ನಡೆದ ಘಟನೆ ಕಥೆಗೆ ಟ್ವಿಸ್ಟ್ ನೀಡುತ್ತದೆ. ಶಾಲೆಯ ಶಿಕ್ಷಕಿಯಿಂದ ಬಾಲಕಿಯೊಬ್ಬಳು ಸಾವನ್ನಪ್ಪುತ್ತಾಳೆ, ಟೀಚರ್ ಅಮಾನತು ಆಗುತ್ತಾಳೆ. ಆದರೆ ಆಕೆ ವಾಪಸ್ ಬಂದ ಬಳಿಕ ಏನೆಲ್ಲಾ ಟ್ವಿಸ್ಟ್‌ಗಳು ಸಿಗುತ್ತದೆ? ತ್ರಿನಾಥ್‌ಗೆ ಬಂದ ಸಮಸ್ಯೆ ಏನು? ಆತ ಮಾಲೆ ಏಕೆ ಧರಿಸುತ್ತಾನೆ? ಅನ್ನೋದನ್ನು ತಿಳಿದುಕೊಳ್ಳಲು ನೀವು ಸಿನಿಮಾ ನೋಡಬೇಕಿದೆ.

ಧನಾಗಮನ, ಅದೃಷ್ಟದ ಸಂಕೇತವೆಂದು ನಂಬಲಾಗುವ 5 ಕನಸುಗಳು.!ಪ್ರತಿಯೊಂದು ಕನಸುಗಳು ಪ್ರತ್ಯೇಕವಾದ ಅರ್ಥವನ್ನು ಒಳಗೊಂಡಿರುತ್ತದೆ ಎಂದು ಸ್ವಪ್ನ ಶಾಸ್ತ...
25/08/2026

ಧನಾಗಮನ, ಅದೃಷ್ಟದ ಸಂಕೇತವೆಂದು ನಂಬಲಾಗುವ 5 ಕನಸುಗಳು.!
ಪ್ರತಿಯೊಂದು ಕನಸುಗಳು ಪ್ರತ್ಯೇಕವಾದ ಅರ್ಥವನ್ನು ಒಳಗೊಂಡಿರುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕೆಲವೊಂದು ಕನಸುಗಳು ಭವಿಷ್ಯದಲ್ಲಿ ನಾವು ಪಡೆದುಕೊಳ್ಳುವಂತಹ ಹಣದ ಲಾಭವನ್ನು, ಅದೃಷ್ಟವನ್ನು, ಧನಾತ್ಮಕ ಬದಲಾವಣೆಯನ್ನು ಸಂಕೇತಿಸುತ್ತದೆ. ಯಾವೆಲ್ಲಾ ಕನಸುಗಳು ಧನಾಗಮನ, ಅದೃಷ್ಟದ ಸಂಕೇತವಾಗಿದೆ.? ಲಕ್ಷ್ಮಿ ಆಗಮನದ ಕನಸಿನ ಸೂಚನೆಯನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

Updated: 24 Aug 2026,
Credit Vijaya Karnataka Web

ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾನೇ ಕಠಿಣ. ನಾವು ನಿದ್ರಾವಸ್ಥೆಯಲ್ಲಿದ್ದಂತಹ ಸಂದರ್ಭದಲ್ಲಿ ಬೀಳುವ ಕನಸುಗಳು ನಮ್ಮ ಮನಸ್ಸಿನ ಆಳವನ್ನು ಪ್ರತಿನಿಧಿಸುತ್ತದೆ. ನಾವು ಕಾಣುವಂತಹ ಕನಸುಗಳು ನಮ್ಮ ಹಣೆಬರಹವನ್ನು, ವಿಧಿಯನ್ನು ಬದಲಾಗುತ್ತಿರುವ ಸೂಚನೆಯೂ ಆಗಿರುತ್ತದೆ. ಇಂತಹ ಕನಸುಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವ ಮೂಲಕ ನಮ್ಮ ಭವಿಷ್ಯದಲ್ಲಿ ಹೊಂದಬಹುದಾದ ಯಶಸ್ಸನ್ನು, ಹಣಕಾಸಿನ ಲಾಭವನ್ನು, ಎದುರಾಗಬಹುದಾದ ಸವಾಲನ್ನು ಮೊದಲೇ ತಿಳಿದುಕೊಳ್ಳಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ, ನಾವು ಶುಭ ಅಥವಾ ಮಂಗಳಕರ ಕನಸುಗಳನ್ನು ಕಂಡಾಗ ಅದನ್ನು ತಕ್ಷಣವೇ ಇತರರೊಂದಿಗೆ ಹಂಚಿಕೊಳ್ಳಲು ಹೋಗಬಾರದು. ಕೆಲವೊಂದು ಶುಭ ಕನಸುಗಳನ್ನು ನಾವು ಇತರರೊಂದಿಗೆ ಹಂಚಿಕೊಂಡಾಗ ಅದರ ಶುಭ ಫಲವು ಕಡಿಮೆಯಾಗಬಹುದು. ಈ ಕನಸುಗಳು ಭವಿಷ್ಯದಲ್ಲಿನ ಹಣಕಾಸಿನ ಲಾಭವನ್ನು, ಹೆಚ್ಚಾಗುವ ಅದೃಷ್ಟವನ್ನು ಸಂಕೇತಿಸುವುದು.

ನೀವು ನಿಮ್ಮ ಕನಸಿನಲ್ಲಿ ಕಮಲದ ಹೂವುಗಳನ್ನು ನೋಡುವುದು, ಶಂಖದ ಶಬ್ದವನ್ನು ಕೇಳುವುದು ಅಥವಾ ನಿಮ್ಮ ಕನಸಿನಲ್ಲಿ ಬೆಳ್ಳಿ ಅಥವಾ ಚಿನ್ನದ ನಾಣ್ಯಗಳನ್ನು ನೋಡುವುದು ಅತ್ಯಂತ ಶುಭ ಹಾಗೂ ಮಂಗಳಕರವಾಗಿದೆ. ಕಮಲದ ಹೂವುಗಳು ಲಕ್ಷ್ಮಿ ದೇವಿಯೊಂದಿಗೆ ಸಂಬಂಧವನ್ನು ಹೊಂದಿರುವ ಹೂವಾಗಿರುವುದರಿಂದ ಆಕೆಯ ಪೂಜೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕನಸಿನಲ್ಲಿ ನೀವು ಕಾಣುವಂತಹ ಕಮಲದ ಹೂವುಗಳು ನಿಮ್ಮ ಅದೃಷ್ಟ ಹೊಳೆಯಲಿದೆ ಎಂಬುದನ್ನು ಸಂಕೇತಿಸುತ್ತದೆ. ಈ ಕನಸು ನೇರವಾಗಿ ಹಠಾತ್ ಆರ್ಥಿಕ ಲಾಭ ಮತ್ತು ಆರ್ಥಿಕ ಸಮೃದ್ಧಿಯನ್ನು ಸೂಚಿಸುತ್ತದೆ. ನೀವು ವ್ಯವಹಾರ ಅಥವಾ ನಿಮ್ಮ ಕೆಲಸದಲ್ಲಿ ದೊಡ್ಡ ಯಶಸ್ಸನ್ನು ಕಾಯುತ್ತಿದ್ದರೆ, ಈ ಕನಸು ಅದರ ನೆರವೇರಿಕೆಯನ್ನು ತಿಳಿಸುತ್ತದೆ.

ಕನಸಿನಲ್ಲಿ ದೇವಸ್ಥಾನ, ಶಿವಲಿಂಗ ಅಥವಾ ದೇವತೆಗಳನ್ನು ನೋಡುವುದು
ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ನಿಮ್ಮ ಕನಸಿನಲ್ಲಿ ಪವಿತ್ರವಾದ ದೇವಾಲಯಗಳನ್ನು, ಎತ್ತರದ ಶಿಖರವನ್ನು, ಶಿವಲಿಂಗವನ್ನು, ಲಕ್ಷ್ಮಿ, ಕೃಷ್ಣ, ಸರಸ್ವತಿ, ಹನುಮಂತನಂತಹ ದೇವರು ಹಾಗೂ ದೇವತೆಗಳನ್ನು ನೋಡಿದರೆ ಅಂತಹ ಕನಸುಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುವುದು. ಇದರರ್ಥ ನೀವು ಶೀಘ್ರದಲ್ಲೇ ದೈವಿಕ ಅನುಗ್ರಹವನ್ನು ಪಡೆದುಕೊಳ್ಳುತ್ತಿದ್ದೀರಿ ಎಂಬುದಾಗಿದೆ. ಇದು ನಿಮ್ಮ ಜೀವನದಲ್ಲಿ ಎದುರಾಗುವಂತಹ ತೊಂದರೆಗಳನ್ನು ಕೊನೆಗೊಳಿಸುವುದು. ಪ್ರತಿಯೊಂದು ವಿಚಾರದಲ್ಲೂ ಯಶಸ್ಸನ್ನು ತಂದು ಕೊಡುವುದಕ್ಕಾಗಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡುವುದು.

ಕನಸಿನಲ್ಲಿ ಪೊರಕೆ ಅಥವಾ ಖಾಲಿ ಮಡಕೆಯನ್ನು ನೋಡುವುದು
ನಿಮ್ಮ ಕನಸಿನಲ್ಲಿ ಪೊರಕೆ ಅಥವಾ ಖಾಲಿ ಮಣ್ಣಿನ ಮಡಕೆಯನ್ನು ನೋಡುವುದು ಧನಾಗಮನದ ಸೂಚನೆಯಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗಿದೆ. ಖಾಲಿ ಮಡಕೆಗಳು ಮನೆಗೆ ಸಂಪತ್ತಿನ ಆಗಮನವಾಗುವುದನ್ನು ಸೂಚಿಸುವುದು. ನಿಮ್ಮ ಮನೆಯ ಸದಸ್ಯರು ಅಥವಾ ನೀವು ಲಕ್ಷ್ಮಿ ದೇವಿಯ ಅನುಗ್ರಹದಿಂದ ಧನ, ಸಂಪತ್ತನ್ನು ಪಡೆದುಕೊಳ್ಳುವಿರಿ ಎಂಬುದು ಈ ಕನಸಿನ ಅರ್ಥವಾಗಿದೆ. ನೀವು ಪ್ರಸ್ತುತ ಅಥವಾ ಈ ಹಿಂದೆ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಶೀಘ್ರದಲ್ಲೇ ಕೊನೆಗೊಳ್ಳುವುದು ಎಂದು ಇದು ಹೇಳುತ್ತದೆ.

ಕನಸಿನಲ್ಲಿ ಹಣ್ಣಿನ ಮರಗಳು ಅಥವಾ ಮಾವಿನ ಹಣ್ಣುಗಳನ್ನು ನೋಡುವುದು
ಹಣ್ಣುಗಳು, ಮಾಗಿದ ಮಾವಿನ ಹಣ್ಣುಗಳನ್ನು ತುಂಬಿದ ಮರವನ್ನು ನೋಡುವುದು ಅಥವಾ ವಿಶೇಷವಾಗಿ ಬಿಳಿ ಹಸುವನ್ನು ಕನಸಿನಲ್ಲಿ ನೋಡುವುದು ಶುಭ ಮತ್ತು ಸಮೃದ್ಧಿಯ ಸಂಕೇತವೂ ಆಗಿದೆ. ಈ ಕನಸು ನಿಮ್ಮ ಜೀವನದಲ್ಲಿನ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ ಮತ್ತು ನೀವು ಪ್ರಗತಿ ಹೊಂದುತ್ತೀರಿ ಎಂದು ಸೂಚಿಸುತ್ತದೆ. ಹಸುವನ್ನು ನೋಡುವುದು ಜೀವನದಲ್ಲಿ ಸಂತೋಷ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಕನಸಿನಲ್ಲಿ ನೀರು, ಗಂಗಾ ನದಿ ಅಥವಾ ಮಳೆಯನ್ನು ನೋಡುವುದು
ಸ್ಪಷ್ಟ ನೀರಿನ ಕನಸು, ವಿಶೇಷವಾಗಿ ಗಂಗಾ ನದಿ, ಅಥವಾ ಮಳೆಯಲ್ಲಿ ನೀವು ಮುಳುಗಿರುವುದನ್ನು ನೋಡುವುದು ಮಂಗಳಕರ ಸಂಕೇತವಾಗಿದೆ. ಈ ಕನಸನ್ನು ಸಮೃದ್ಧಿ, ಯಶಸ್ಸು ಮತ್ತು ಸಕಾರಾತ್ಮಕ ಬದಲಾವಣೆಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಮಳೆಯನ್ನು ನೋಡುವುದು ಎಂದರೆ ನೀವು ಶೀಘ್ರದಲ್ಲೇ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಒಂದು ವೇಳೆ ನೀವು ನೀರಿನಲ್ಲಿ ಈಜುತ್ತಿರುವಂತೆ ಕನಸನ್ನು ನೋಡಿದರೆ ನೀವು ನಿಮ್ಮ ಸಮಸ್ಯೆಗಳನ್ನು ಯಶಸ್ವಿಯಾಗಿ ನಿವಾರಿಸುತ್ತಿದ್ದೀರಿ ಎಂಬುದರ ಸಂಕೇತವಾಗಿದೆ.

ಕಡೆಗೂ ತನಿಖೆಗೆ ಆದೇಶವಾಗಿದೆ. ತನಿಖೆ ಹೇಗೆ ನಡೆಯುತ್ತದೆ, ಆರೋಪಗಳನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ತನಿಖೆಯು ಪಾರದರ್ಶಕ,  ನಿಷ್ಪಕ್ಷಪಾತವಾಗಿರ...
24/08/2026

ಕಡೆಗೂ ತನಿಖೆಗೆ ಆದೇಶವಾಗಿದೆ. ತನಿಖೆ ಹೇಗೆ ನಡೆಯುತ್ತದೆ, ಆರೋಪಗಳನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ತನಿಖೆಯು ಪಾರದರ್ಶಕ, ನಿಷ್ಪಕ್ಷಪಾತವಾಗಿರಲಿದೆಯೇ...?

ನೋಡಿ

Address

Bangalore

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919844525820

Website

Alerts

Be the first to know and let us send you an email when Baraguru Tv posts news and promotions. Your email address will not be used for any other purpose, and you can unsubscribe at any time.

Shortcuts

Share