ejagathu

ejagathu Contact information, map and directions, contact form, opening hours, services, ratings, photos, videos and announcements from ejagathu, News & Media Website, 176, 25th division, maruthi nagar, doddaballapur, Bangalore.

ಜೂನ್ ಐದರಂದು ಡಿಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ..!ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವ...
29/05/2026

ಜೂನ್ ಐದರಂದು ಡಿಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ..!

ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯದ ಮುಂದಿನ ಸಾರಥಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ತಮ್ಮ ಆಪ್ತ ಜ್ಯೋತಿಷಿಗಳ ಸಲಹೆಯ ಮೇರೆಗೆ ಡಿ.ಕೆ. ಶಿವಕುಮಾರ್ ಅವರು ಮುಂದಿನ ತಿಂಗಳು ಅಂದರೆ ಜೂನ್ 5 ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ರಾಜಕೀಯ ಬದಲಾವಣೆಯ ಈ ಹೊತ್ತಿನಲ್ಲಿ, ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಮುಹೂರ್ತದ ಕುರಿತಾದ ಸಂಪೂರ್ಣ ವಿವರಗಳು ಹೀಗಿವೆ:

ಜೂನ್ 5ರ ಶುಕ್ರವಾರ ಮಧ್ಯಾಹ್ನ 'ಅಭಿಜಿನ್ ಲಗ್ನ'ದಲ್ಲಿ ಪದಗ್ರಹಣ

ಭಾವಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಜೂನ್ 5ನೇ ತಾರೀಖಿನ ಶುಕ್ರವಾರದಂದು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಅವರು ಸೋಮವಾರ ಅಥವಾ ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಡಿಕೆಶಿ ಅವರ ಆಪ್ತ ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ವಿಶೇಷ ಸಲಹೆಯಂತೆ, ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಬರಲಿರುವ ಶುಭ 'ಅಭಿಜಿನ್ ಲಗ್ನ'ದಲ್ಲಿ ಪ್ರಮಾಣ ವಚನ ಸ್ವೀಕರಿಸಲು ದಿನ ನಿಗದಿಪಡಿಸಲಾಗಿದೆ ಎನ್ನಲಾಗಿದೆ.

ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ವಾಸ್ತು ಬದಲಾವಣೆ: ಎಕ್ಸಿಟ್‌ ಗೇಟ್ ಇನ್ಮುಂದೆ ಎಂಟ್ರಿ ಗೇಟ್!

ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ವಸತಿ ಗೃಹವಾಗಲಿರುವ 'ಕುಮಾರಕೃಪಾ ಗೆಸ್ಟ್‌ಹೌಸ್'ನ ಕಲ್ಲು ಬಿಲ್ಡಿಂಗ್‌ನಲ್ಲಿ ಸದ್ಯ ಭರದಿಂದ ನವೀಕರಣ ಕಾರ್ಯಗಳು ಸಾಗುತ್ತಿವೆ. ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ಸಲಹೆಯಂತೆ, ದೇವ ಮೂಲೆಯಿಂದಲೇ ವಸತಿ ಗೃಹಕ್ಕೆ ಪ್ರವೇಶ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಕುಮಾರಕೃಪಾದ 'ಎಕ್ಸಿಟ್ ಪಾಯಿಂಟ್' (ಹೊರಹೋಗುವ ದಾರಿ) ಅನ್ನು ಇನ್ಮುಂದೆ 'ಎಂಟ್ರಿ ಗೇಟ್' (ಪ್ರವೇಶ ದ್ವಾರ) ಆಗಿ ಬದಲಾಯಿಸಲು ಡಿಕೆಶಿ ಸೂಚಿಸಿದ್ದಾರೆ. ಈಗಾಗಲೇ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರು ಜ್ಯೋತಿಷಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪ್ರಮಾಣ ವಚನ

ಡಿ.ಕೆ. ಶಿವಕುಮಾರ್ ಅವರು ಕಂಠೀರವ ಕ್ರೀಡಾಂಗಣ ಅಥವಾ ರಾಜ್‌ಭವನದಲ್ಲಿ ಅಲ್ಲದೆ, ವಿಧಾನಸೌಧದ ಭವ್ಯ ಮುಂಭಾಗದ ಮೆಟ್ಟಿಲುಗಳ ಮೇಲೆ (Grand Steps) ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಈ ಭವ್ಯ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸ್ವತಃ ಡಿಕೆಶಿ ಅವರೇ ರಾಜ್ಯ ಮುಖ್ಯ ಕಾರ್ಯದರ್ಶಿಗೆ (Chief Secretary) ದೂರವಾಣಿ ಕರೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹೊಸ ಸಚಿವರು

ಜೂನ್ 5 ರಂದು ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ, ಅವರೊಂದಿಗೆ ಹೊಸ ಸಂಪುಟದ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಸಚಿವರ ಸಂಖ್ಯೆಯ ಬಗ್ಗೆ ಎರಡು ವಿಭಿನ್ನ ವರದಿಗಳು ಕೇಳಿಬರುತ್ತಿವೆ. ಒಂದು ಮೂಲಗಳ ಪ್ರಕಾರ ಡಿಕೆಶಿ ಜೊತೆಗೆ 7 ಮಂದಿ ಹಿರಿಯ ಮತ್ತು ಅನುಭವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದು ಮೂಲಗಳ ಪ್ರಕಾರ 12 ರಿಂದ 13 ಮಂದಿ ನೂತನ ಸಚಿವರು ಮೊದಲ ಹಂತದಲ್ಲೇ ಕ್ಯಾಬಿನೆಟ್ ಸೇರಲಿದ್ದಾರೆ ಎಂದು ವರದಿಯಾಗಿದೆ.





ಅಕ್ರಮ ಜಾನುವಾರು ವಧೆ : ಇಬ್ಬರ ಬಂಧನ, 6 ಜಾನುವಾರುಗಳ ರಕ್ಷಣೆ...ಪುತ್ತೂರು: ರಾತ್ರಿ, ಅಕ್ರಮ ಜಾನುವಾರು ವಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡ...
29/05/2026

ಅಕ್ರಮ ಜಾನುವಾರು ವಧೆ : ಇಬ್ಬರ ಬಂಧನ, 6 ಜಾನುವಾರುಗಳ ರಕ್ಷಣೆ...

ಪುತ್ತೂರು: ರಾತ್ರಿ, ಅಕ್ರಮ ಜಾನುವಾರು ವಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ನಗರ ಪೋಲೀಸರು ಬಂಟ್ವಾಳ ಸಜಿಪಮೂಡ ಗ್ರಾಮದ ಪಂಜಾಜೆ ಎಂಬಲ್ಲಿ ಮನೆಯೊಂದರ ಹಿಂಬದಿಯ ಕೊಟ್ಟಿಗೆಯಲ್ಲಿ ಮಾಂಸ ಕತ್ತರಿಸುತ್ತಿರುವುದನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿ 6 ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಬಂಟ್ವಾಳ ಸಜಿಪಮೂಡ ನಿವಾಸಿ ಮುಸ್ತಾಪ (33) ಹಾಗೂ ಬಂಟ್ವಾಳ ಬಿ ಕಸಬಾ ನಿವಾಸಿ ಮಹಮ್ಮದ್‌ ಸಾದೀಕ್‌ (30) ಬಂಧಿತ ಆರೋಪಿಗಳಾಗಿದ್ದು,

ಆರೋಪಿಗಳು ಪರವಾನಿಗೆ ಹೊಂದದೇ ಅಕ್ರಮವಾಗಿ ಕೃತ್ಯ ನಡೆಸುತ್ತಿರುವುದು ಧೃಢಪಟ್ಟಿದ್ದು, ಸ್ಥಳದಲ್ಲಿ ಒಂದು ಜಾನುವಾರನ್ನು ವಧೆ ಮಾಡಿ ಕತ್ತರಿಸಲಾದ ಮಾಂಸ, 06 ಜಾನುವಾರುಗಳು, ಒಂದು ಕಾರು ಹಾಗೂ ಕೃತ್ಯಕ್ಕೆ ಬಳಸಿದ ಸಾಮಾಗ್ರಿಗಳು ಪತ್ತೆಯಾಗಿದೆ.

ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 68/2026, ಕಲಂ: 4,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಎವರೆಸ್ಟ್‌ನಿಂದ ಮೃತರ ಶವ ಕೆಳಗೆ ತರಲು ₹1 ಕೋಟಿ ವೆಚ್ಚ! ಪರ್ವತಾರೋಯಿಯ ಶವ ಹಿಮದಲ್ಲೇ ಬಿಡಲು ಕುಟುಂಬ ನಿರ್ಧಾರ...ಹೈದರಾಬಾದ್‌: ವಿಶ್ವದ ಅತ್ಯಂತ...
29/05/2026

ಎವರೆಸ್ಟ್‌ನಿಂದ ಮೃತರ ಶವ ಕೆಳಗೆ ತರಲು ₹1 ಕೋಟಿ ವೆಚ್ಚ! ಪರ್ವತಾರೋಯಿಯ ಶವ ಹಿಮದಲ್ಲೇ ಬಿಡಲು ಕುಟುಂಬ ನಿರ್ಧಾರ...

ಹೈದರಾಬಾದ್‌: ವಿಶ್ವದ ಅತ್ಯಂತ ಎತ್ತರದ ಹಿಮಶಿಖರ ಎವರೆಸ್ಟ್‌ ಏರುವುದು ಪ್ರತಿಯೊಬ್ಬ ಚಾರಣಿಗರ ಕನಸು. ಆದರೆ ಸುರಕ್ಷಿತವಾಗಿ ಹೋಗಿ ಬಂದರೆ ತೊಂದರೆ ಇಲ್ಲ. ಆದರೆ ಹೋದವರ ಪೈಕಿ ಯಾರಾದರೂ ಅಲ್ಲೇ ಮೃತಪಟ್ಟರೆ ಅದು ಕುಟುಂಬದವರ ಪಾಲಿಗೆ ಅಥವಾ ಶವಗಳನ್ನು ಮರಳಿ ಕೆಳಗೆ ತರಲು ಹೋಗುವವರ ಪಾಲಿಗೂ ಭಾರೀ ಸವಾಲಿನ ಕೆಲಸ...

ಇದೇ ಕಾರಣಕ್ಕೆ ಇತ್ತೀಚೆಗೆ ಯಶಸ್ವಿಯಾಗಿ ಹಿಮಶಿಖರ ಏರಿ, ಕೆಳಗೆ ಇಳಿಯುವ ವೇಳೆ ಮೃತ ಪಟ್ಟ ಹೈದ್ರಾಬಾದ್‌ನ ಅರುಣ್ ಕುಮಾರ್‌ ದೇಹವನ್ನು ಅಲ್ಲೇ ಬಿಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ಸಾಹಸದ ಯಾತ್ರೆ:

8,848.86 ಮೀ. ಎತ್ತರದ ಮೌಂಟ್‌ ಎವರೆಸ್ಟ್‌ನ ಶಿಖರ ಏರುವ ಪ್ರಕ್ರಿಯೆ ಒಟ್ಟಾರೆ 2 ತಿಂಗಳಿನದ್ದು. ಇದಕ್ಕೆ ಆಗುವ ವೆಚ್ಚ ಅಂದಾಜು 50 ಲಕ್ಷ ರು.ನಿಂದ 90 ಲಕ್ಷ ರು. ಇದರಲ್ಲಿ ಶಿಖರ ಏರುವ ಶುಲ್ಕ, ತರಬೇತಿ, ಶೆರ್ಪಾಗಳ ವೆಚ್ಚ, ಶಿಖರ ಹತ್ತಲು ಬೇಕಾದ ಉಪಕರಣ, ವಿಮಾ ವೆಚ್ಚ ಸೇರಿರುತ್ತದೆ.

ಮೃತಪಟ್ಟರೆ ಸಂಕಷ್ಟ:

ಒಂದು ವೇಳೆ ಶಿಖರ ಏರುವ ವೇಳೆ ಅಥವಾ ಇಳಿಯುವ ವೇಳೆ ಅಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರನ್ನು ಕರೆತರುವುದು ಬಹಳ ಕಷ್ಟದ ಕೆಲಸ. ಕಾರಣ ಸಮುದ್ರದ ಮಟ್ಟದಿಂದ 6400 ಅಡಿ ಎತ್ತರದವರೆಗೆ ಮಾತ್ರ ಹೆಲಿಕಾಪ್ಟರ್‌ಗಳು ಸಾಗಬಲ್ಲದು. ಆ ಎತ್ತರದಲ್ಲಿ ಸಿಕ್ಕಿಬಿದ್ದಿದ್ದರೆ ಜೀವಂತ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ಶವವನ್ನು ಕಾಪ್ಟರ್‌ ಮೂಲಕ ಕೆಳಗೆ ತರಬಹುದು. ಇದಕ್ಕೆ ವಿಮೆ ಹಣ ಲಭ್ಯವಿದೆ. ಆದರೆ ಕಾಪ್ಟರ್‌ ಬಿಟ್ಟು ಶೆರ್ಪಾಗಳೇ ಶವ ಎಳೆದು ತರಬೇಕೆಂದರೆ ಅದಕ್ಕೆ ವಿಮೆ ಹಣ ಲಭ್ಯವಿಲ್ಲ.

ಭಾರೀ ಹೊರೆ:

ಕಾಪ್ಟರ್‌ಗಳು ತೆರಳಲು ಸಾಧ್ಯವಾಗದ ಪ್ರಕರಣಗಳಲ್ಲಿ ಶೆರ್ಪಾಗಳೇ ಮೃತರ ಶವ ತರುತ್ತಾರೆ. ಆದರೆ ಇದಕ್ಕೆ ಕನಿಷ್ಠ 1 ಕೋಟಿ ರು.ಅಥವಾ ಅದಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಇದೀಗ ಅರುಣ್‌ ಪ್ರಕರಣದಲ್ಲೂ ಆಗಿದ್ದು ಇದೇ. ಅವರು ಸಾವನ್ನಪ್ಪಿದ ಪ್ರದೇಶ ಶಿಖರದ ತುದಿಯಿಂದ 60 ಮೀಟರ್‌ ಕೆಳಗಿದೆ. ಇಲ್ಲಿಂದ ಶವ ತರಬೇಕಾದರೆ ಕನಿಷ್ಠ 10-12 ಶೆರ್ಪಾಗಳು ತೆರಳಬೇಕು. ಅವರು ಆಕ್ಸಿಜನ್‌ ಸಿಲಿಂಡರ್‌ ಸೇರಿದಂತೆ ರಕ್ಷಣೆಗೆ ಬೇಕಾಗುವ ಇನ್ನಿತರೆ ಉಪಕರಣ ಹೊತ್ತುಕೊಂಡು ಹತ್ತಬೇಕಾದ ಕಾರಣ ಸಮಯವೂ ಜಾಸ್ತಿ ತಗುಲುತ್ತದೆ. ಬಳಿಕ ಶವ ಇರುವ ಜಾಗಕ್ಕೆ ತೆರಳಿ ಅಲ್ಲಿ ಶವ ಹುಡುಕಿ ಹೊರತೆಗೆದು, ಹಗ್ಗ ಕಟ್ಟಿ ದುರ್ಗಮ ಮಾರ್ಗದಲ್ಲಿ ಇಳಿಸಬೇಕು. ಸದಾ ನೀರ್ಗಲ್ಲು ಕುಸಿತದ ಅಪಾಯ ಇರುವ ಈ ಪ್ರದೇಶಕ್ಕೆ ತೆರಳುವುದು ಶೆರ್ಪಾಗಳ ಜೀವಕ್ಕೂ ಅಪಾಯ.

ಶವ ಅಲ್ಲೇ ಬಿಡಲು ನಿರ್ಧಾರ:

ಇದೇ ಕಾರಣಕ್ಕೆ ಕುಟುಂಬ ಸದಸ್ಯರು ಅರುಣ್‌ ಶವವನ್ನೇ ಶಿಖರದ ಹಿಮದ ನಡುವೆಯೇ ಬಿಡಲು ನಿರ್ಧರಿಸಿದ್ದಾರೆ. 'ದೇಹ ತರಲು ಮುಂದಾದರೂ ಅದು ನಮ್ಮನ್ನು ತಲುಪುವಷ್ಟರಲ್ಲಿ ಬಹಳ ಹಾನಿಯಾಗಿರುತ್ತದೆ. ಪರ್ವಾತಾರೋಹಿಯಾಗಿದ್ದ ತಿವಾರಿಯ ಬಯಕೆಯೂ ಹಿಮಾಲಯದೊಂದಿಗೆ ಹೀಗೆ ಸಂಪರ್ಕದಲ್ಲಿರುವುದೇ ಆಗಿತ್ತು' ಎಂದಿದ್ದಾರೆ.

ಮೃತಪಟ್ಟಿದ್ದು ಹೇಗೆ?:

ಪರ್ವತಾರೋಹಣದ ವೇಳೆಯೇ ಅರುಣ್‌ರ ಆರೋಗ್ಯ ಹದಗೆಟ್ಟಿದ್ದು, ಅಲ್ಲಿಂದಲೇ ಮರಳುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ, 'ಶಿಖರಕ್ಕೆ ಇಷ್ಟು ಸ್ಪಷ್ಟವಾಗಿ ಕಾಣುತ್ತಿರುವಾಗ ಹಿಂದಿರುಗುವ ಮಾತೇ ಇಲ್ಲ' ಎಂದು ಅವರದನ್ನು ತಿರಸ್ಕರಿಸಿ ತಮ್ಮಾಸೆಯಂತೆ ಪರ್ವತದ ತುದಿಯನ್ನೇರಿದ್ದರು. ಅಲ್ಲಿಂದ ಇಳಿಯುವ ವೇಳೆ ಅರುಣ್‌ ಇದ್ದಕ್ಕಿದ್ದಂತೆ ರಕ್ತದ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಕೂಡಲೇ ಜತೆಗಿದ್ದ ಶೆರ್ಪಾಗಳು ಆಕ್ಸಿಜನ್‌ ಮಾಕ್ಸ್‌ ನೆರವಿನಿಂದ ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಸಫಲರಾಗಲಿಲ್ಲ.

ನಿವೃತ್ತಿಗೆ ಮೂರು ದಿನ ಬಾಕಿ ಇರುವಾಗಲೇ ಇಒ ಅಮಾನತುತುಮಕೂರು..ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ಅಧಿಕಾರಿಗೆ ಶಾಕ್.ಕೋಟ್ಯಂತರ ರೂಪಾಯಿ ಅವ್ಯವ...
29/05/2026

ನಿವೃತ್ತಿಗೆ ಮೂರು ದಿನ ಬಾಕಿ ಇರುವಾಗಲೇ ಇಒ ಅಮಾನತು

ತುಮಕೂರು..ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ಅಧಿಕಾರಿಗೆ ಶಾಕ್.

ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ, ಇಒ ದೊಡ್ಡಸಿದ್ದಯ್ಯ ಸಸ್ಪೆಂಡ್.

ಭಾನುವಾರ ನಿವೃತ್ತಿಯಾಗಬೇಕಿದ್ದ ಚಿಕ್ಕನಾಯಕನಹಳ್ಳಿ ಇಒ ದೊಡ್ಡಸಿದ್ದಯ್ಯ ಅಮಾನತು.

ಮಧುಗಿರಿಯಲ್ಲಿ ಇಒ ಆಗಿದ್ದಾಗ ಬರೋಬ್ಬರಿ 4.5 ಕೋಟಿ ರೂ. ಭ್ರಷ್ಟಾಚಾರ ನಡೆಸಿದ ಆರೋಪ.

ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣದಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದ ದೊಡ್ಡಸಿದ್ದಯ್ಯ.

ಗಂಭೀರ ಆರೋಪ ಹಿನ್ನೆಲೆ ನಿನ್ನೆ ರಾತ್ರಿಯೇ ಅಮಾನತು ಆದೇಶ ಹೊರಡಿಸಿದ ಸರ್ಕಾರ.

ಚಿಕ್ಕನಾಯಕನಹಳ್ಳಿ ಇಒ ಹುದ್ದೆಗೆ ಸಿರಾ ಇಒ ಹರೀಶ್‌ಗೆ ಹೆಚ್ಚುವರಿ ಜವಾಬ್ದಾರಿ.

ಬ್ರಿಮ್ಸ್ ಆಸ್ಪತ್ರೆಯಲ್ಲಿ ಸ*ತ್ತ ಮಹಿಳೆಯರ ಬೆ*ತ್ತಲೆ ಪೋಟೋ ತೆಗೆಯುತ್ತಿದ್ದ ಅಟೆಂಡರ್...ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಾಗರಿಕ ಸಮಾಜ ತಲ...
29/05/2026

ಬ್ರಿಮ್ಸ್ ಆಸ್ಪತ್ರೆಯಲ್ಲಿ ಸ*ತ್ತ ಮಹಿಳೆಯರ ಬೆ*ತ್ತಲೆ ಪೋಟೋ ತೆಗೆಯುತ್ತಿದ್ದ ಅಟೆಂಡರ್...

ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆ ಬೆಳಕಿಗೆ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಸತ್ತ‌ ಮಹಿಳೆಯರ ಬೆತ್ತಲೆ ಫೋಟೋ ಶೂಟ್

ಬ್ರಿಮ್ಸ್ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಸತ್ತ ಮಹಿಳೆಯರ ಬೆತ್ತಲೆ ಫೋಟೋ ಶೂಟ್

ಶವಾಗಾರ ಕೋಣೆಯ ಅಟೆಂಡರ್ ಮುನೀರ್ ಅಹ್ಮದ್ ಎಂಬಾತನಿಂದ ಹೀನ ಕೃತ್ಯ

ಪಿಎಂಇ ಮಾಡುವ ಕಾಲಕ್ಕೆ ಅನುನತಿ ಇಲ್ಲದೇ ತನ್ನ ಮೊಬೈಲ್‌ನಲ್ಲಿ ಪೋಟೋ ಕ್ಲಿಕ್ಕಿಸಿಕೊಳ್ತಿದ್ದನಂತೆ ಮುನೀರ್

ಸತ್ತ ಮಹಿಳೆಯರ ಶವದ ಮೇಲಿನ ಬಟ್ಟೆ ತೆಗೆದು ಪೋಟೋ ತೆಗೆದುಕೊಳ್ತಿದ್ದ ಮುನೀರ್ ಅಹ್ಮದ್

ಮಹಿಳೆಯರ ಬೆತ್ತಲೆ ಪೋಟೋ ಕ್ಲಿಕ್ಕಿಸಿಕೊಂಡು ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದನಂತೆ ಮುನೀರ್

ಆರೋಪಿ ಮುನೀರ್ ಕೃತ್ಯದಿಂದ ಮಹಿಳೆಯರ, ಕುಟುಂಬಸ್ಥರ ಗೌರವ, ವೈದ್ಯಕೀಯ ಗೌಪ್ಯತೆಗೆ ಧಕ್ಕೆ

ಸಿಬ್ಬಂದಿಯ ಹೀನ‌ ಕೃತ್ಯ ಗಮನಕ್ಕೆ ಬರುತ್ತಿದ್ದಂತೆ
ನ್ಯೂ ಟೌನ್ ಪೊಲೀಸ್ ಠಾಣೆಗೆ ಶವಾಗಾರ ಆಸ್ಪತ್ರೆ ಮುಖ್ಯಸ್ಥ ಡಾ.ಮೋಸಿನ್ ಉಲ್ ಹಕ್ ದೂರು

ಕಲಂ 301, 62 ಬಿಎನ್‌ಎಸ್ ಕಾಯ್ದೆಯಡಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬ್ರಿಮ್ಸ್‌ನಲ್ಲಿ ಬದುಕಿದ್ದಾಗಲೂ ರೋಗಿಗಳು ಚಿಕಿತ್ಸೆಗೆ ಪರದಾಟ, ಸತ್ತ‌ ಮೇಲೂ ಶವಗಳಿಗೆ ಸಿಗದ ನೆಮ್ಮದಿ

ಮಹಿಳಾ ನಿರ್ದೇಶಕಿ ಇರುವ ಬ್ರಿಮ್ಸ್ ಆಸ್ಪತ್ರೆಯಲ್ಲೇ ಇಂತಹ ಹೀನ ಕೃತ್ಯ ಬೆಳಕಿಗೆ

ಕೆ‌ಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸವಾರ ಸಾ*ವು..ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ರ...
29/05/2026

ಕೆ‌ಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸವಾರ ಸಾ*ವು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟು. ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕು ಸುತ್ತುಕೋಟೆಯ ಪೆಟ್ರೋಲ್‌ ಬಂಕ್‌ ಮುಂಭಾಗ ಗುರುವಾರ ಸಂಜೆ ಘಟನೆ ಸಂಭವಿಸಿದೆ.

ಮೃತನನ್ನು ಅಬ್ನಾನ್‌ (23) ಎಂದು ಗುರುತಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ಸು ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬೈಕಿನಲ್ಲಿದ್ದವರು ಶಿವಮೊಗ್ಗ ಕಡೆಯಿಂದ ಶಿಕಾರಿಪುರದ ಕಡೆಗೆ ತೆರಳುತ್ತಿದ್ದರು. ಸುತ್ತುಕೋಟೆಯ ಶ್ರೀ ಸಪ್ತಕೋಟಿ ಪೆಟ್ರೋಲ್‌ ಬಂಕ್‌ ಸಮೀಪ ಬೈಕ್‌ ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಅಬ್ನಾನ್‌ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪಲ್ಸರ್‌ ಬೈಕು ನೇರವಾಗಿ ಬಸ್ಸಿನ ಮುಂಭಾಗಕ್ಕೆ ಗುದ್ದಿದ್ದು, ಅಲಿಯೇ ಸಿಲುಕಿಕೊಂಡಿದೆ. ಅಪಘಾತದ ತೀವ್ರತೆಗೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇನ್ನು ಬೈಕಿನಲ್ಲಿದ್ದವರ ದೇಹಗಳಿಗೂ ಬೆಂಕಿ ಹೊತ್ತಿತ್ತು.

ಅಪಘಾತದಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಆಘಾತಕ್ಕೊಳಗಾಗಿ ಬಸ್ಸಿನ ಎಮರ್ಜನ್ಸಿ ಬಾಗಿಲು, ಕಿಟಕಿಗಳಿಂದ ಹೊರಗೆ ಜಿಗಿದಿದ್ದಾರೆ. ಘಟನೆಯಿಂದಾಗಿ ಸವಳಂಗ ರಸ್ತೆಯಲ್ಲಿ ಕೆಲ ನಿಮಿಷ ವಾಹನ ಸಂಚಾರ ಸ್ಥಗಿತವಾಗಿತ್ತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಸಂಜೀವ್‌ ಕುಮಾರ್‌, ಕುಂಸಿ ಠಾಣೆಯ ಪಿಎಸ್‌ಐ ಪಾರ್ವತಿ ಬಾಯಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂಬೇಡ್ಕರ್ ಪ್ರತಿಮೆ ಮುಂದೆ ಮದುವೆಯಾದ ಪ್ರೇಮಿಗಳುಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆ ಶನಿವಾರ ವಿಶೇಷ ವಿವಾಹಕ್ಕೆ ...
29/05/2026

ಅಂಬೇಡ್ಕರ್ ಪ್ರತಿಮೆ ಮುಂದೆ ಮದುವೆಯಾದ ಪ್ರೇಮಿಗಳು

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆ ಶನಿವಾರ ವಿಶೇಷ ವಿವಾಹಕ್ಕೆ ಸಾಕ್ಷಿಯಾಯಿತು.

ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಮನೋಜ್ (22), ಮೂಕಲಿ ಗ್ರಾಮದ ಪ್ರೀತಿ (19) ಇಬ್ಬರು ಪ್ರೇಮಿಗಳು ದಲಿತ ಮುಖಂಡರ ಸಮ್ಮುಖದಲ್ಲಿ ಅಂಬೇಡ್ಕರ್ ಪ್ರತಿಮೆ ಎದುರು ವಿವಾಹವಾದರು.

ಇಬ್ಬರೂ ಅನ್ಯ ಜಾತಿಗೆ ಸೇರಿದ್ದರಿಂದ ಮದುವೆಗೆ ಮನೆಯವರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಕೆಲ ದಲಿತ ಮುಖಂಡರ ಸಹಾಯದೊಂದಿಗೆ ವಿವಾಹವಾದರು.

ವಿವಾಹದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನವ ವಧು-ವರ, ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಜಾತಿ ಕಾರಣಕ್ಕೆ ನಮ್ಮಿಬ್ಬರ ಮದುವೆಗೆ ಮನೆಯವರ ವಿರೋವಿತ್ತು.

ಆದ್ದರಿಂದ ಇಬ್ಬರೂ ಮನೆಯಿಂದ ಹೊರಬಂದು ಪರಸ್ಪರ ಒಪ್ಪಿ ವಿವಾಹವಾಗಿದ್ದೇವೆ. ಯಾರಾದರೂ ತೊಂದರೆ ನೀಡಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಹೊಸ ಜೀವನ ಆರಂಭಿಸಿರುವ ನಮಗೆ ಯಾವುದೇ ತೊಂದರೆ ನೀಡಬೇಡಿ ಎಂದು ಮನವಿ ಮಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಮೇಶ್, ತಾಲೂಕು ಅಧ್ಯಕ್ಷ ಬಾಲಕೃಷ್ಣ ಮೂರ್ತಿ, ಜಿಲ್ಲಾ ಸಂಚಾಲಕ ಕೇಶವ ಮೂರ್ತಿ, ಸಹ ಕಾರ್ಯದರ್ಶಿ ಅಶೋಕ್ ಮೊಸಳೆ, ಖಜಾಂಚಿ ರಮೇಶ್ ಇದ್ದರು.

ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಯುವಕನ ಜೀವ ಉಳಿಸಿದ್ದು ₹34 ಕೋಟಿಯ ಬ್ಲಡ್ ಮನಿ!​ವಿಧಿ ಆಡಿದ ಆಟಕ್ಕೆ ಸೌದಿ ಅರೇಬಿಯಾದ ಜೈಲಿನಲ್ಲಿ ಮರಣದಂ...
29/05/2026

ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಯುವಕನ ಜೀವ ಉಳಿಸಿದ್ದು ₹34 ಕೋಟಿಯ ಬ್ಲಡ್ ಮನಿ!

ವಿಧಿ ಆಡಿದ ಆಟಕ್ಕೆ ಸೌದಿ ಅರೇಬಿಯಾದ ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಾ, ಕಳೆದ ಎರಡು ದಶಕಗಳಿಂದ ಕತ್ತಲಲ್ಲೇ ಕಳೆದಿದ್ದ ವ್ಯಕ್ತಿಯೊಬ್ಬರು ಕೊನೆಗೂ ಜೀವಂತವಾಗಿ ತಾಯ್ನಾಡಿಗೆ ಮರಳಿದ್ದಾರೆ! ಕೇರಳದ ಅಬ್ದುಲ್ ರಹೀಂ (44) ಎಂಬುವವರೇ ಸಾರ್ವಜನಿಕರು ಒಟ್ಟಾಗಿ ಸಂಗ್ರಹಿಸಿ ನೀಡಿದ ಬರೋಬ್ಬರಿ 34 ಕೋಟಿ ರೂಪಾಯಿ 'ಬ್ಲಡ್ ಮನಿ' (ಪರಿಹಾರ ಧನ) ನೆರವಿನಿಂದ ಮರಣದ ಹಾದಿಯಿಂದ ಮರಳಿ ಬಂದು ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.

​2006ರಲ್ಲಿ ಆಗಿದ್ದೇನು?
​ಕೇರಳದಲ್ಲಿ ಆಟೋ ಮತ್ತು ಬಸ್ ಚಾಲಕನಾಗಿದ್ದ ಅಬ್ದುಲ್ ರಹೀಂ, ಉತ್ತಮ ಭವಿಷ್ಯದ ಕನಸು ಹೊತ್ತು 2006ರಲ್ಲಿ ಸೌದಿ ಅರೇಬಿಯಾದ ರಿಯಾದ್‌ಗೆ ಚಾಲಕನ ಕೆಲಸಕ್ಕೆ ತೆರಳಿದ್ದರು. ಅಲ್ಲಿ ಅವರಿಗೆ ಮಾಲೀಕನ 17 ವರ್ಷದ ಮಗ ಫಯಾಸ್‌ನನ್ನು ನೋಡಿಕೊಳ್ಳುವ ಜವಾಬ್ದಾರಿ ಸಿಕ್ಕಿತ್ತು. ಆ ಹುಡುಗ ಪಾರ್ಶ್ವವಾಯು ಪೀಡಿತನಾಗಿದ್ದು, ಕುತ್ತಿಗೆಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟದ ಸಾಧನದ (Life Support) ಮೂಲಕ ಜೀವಿಸುತ್ತಿದ್ದ.

​ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಸಿಗ್ನಲ್ ದಾಟುವ ಗಲಾಟೆಯಲ್ಲಿ, ಆಕಸ್ಮಿಕವಾಗಿ ರಹೀಂ ಕೈ ತಗುಲಿ ಹುಡುಗನ ಕುತ್ತಿಗೆಯಲ್ಲಿದ್ದ ಉಸಿರಾಟದ ಉಪಕರಣ ಕಳಚಿ ಬಿದ್ದಿತ್ತು. ಕ್ಷಣಾರ್ಧದಲ್ಲೇ ಆ ಹುಡುಗ ಪ್ರಾಣ ಕಳೆದುಕೊಂಡಿದ್ದ. ಇದರಿಂದಾಗಿ ರಹೀಂ ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು.
​2011ರಲ್ಲಿ ಮರಣದಂಡನೆ ಶಿಕ್ಷೆ!
​ಸೌದಿ ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ 2011ರಲ್ಲಿ ಅಬ್ದುಲ್ ರಹೀಂಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಅಲ್ಲಿಂದ ರಹೀಂ ಪ್ರತಿ ದಿನವೂ ಸಾವಿನ ನೆರಳಿನಲ್ಲೇ ಕಳೆಯಬೇಕಾಯಿತು. ಆದರೆ, 2024ರಲ್ಲಿ ಮೃತ ಬಾಲಕನ ಕುಟುಂಬಸ್ಥರು ಒಂದು ಶರತ್ತು ವಿಧಿಸಿದರು; "₹34 ಕೋಟಿ ಬಿಡುಗಡೆ ಹಣ (Blood Money) ನೀಡಿದರೆ ನಾವು ಕ್ಷಮಿಸಲು ಸಿದ್ಧ" ಎಂದು ಒಪ್ಪಿಕೊಂಡರು.

​ಅಸಾಧ್ಯವನ್ನು ಸಾಧ್ಯವಾಗಿಸಿದ ಸಾರ್ವಜನಿಕರ ಶಕ್ತಿ!
​ಒಬ್ಬ ಸಾಮಾನ್ಯ ಚಾಲಕನ ಕುಟುಂಬಕ್ಕೆ 34 ಕೋಟಿ ರೂಪಾಯಿ ಹೊಂದಿಸುವುದು ಅಸಾಧ್ಯದ ಮಾತಾಗಿತ್ತು. ಆದರೆ ರಹೀಂ ಜೀವ ಉಳಿಸಲು ಇಡೀ ಕೇರಳ ಮತ್ತು ಪ್ರಪಂಚದಾದ್ಯಂತ ಇದ್ದ ಅನಿವಾಸಿ ಭಾರತೀಯರು ಒಂದಾದರು. ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ನಿಧಿ ಸಂಗ್ರಹಣೆ (Crowdfunding) ಅಭಿಯಾನ ನಡೆಸಿ, ಕೇವಲ ಕೆಲವೇ ದಿನಗಳಲ್ಲಿ ಬರೋಬ್ಬರಿ 47 ಕೋಟಿ ರೂಪಾಯಿ ಸಂಗ್ರಹವಾಯಿತು!

​ಸಾವಿನ ದವಡೆಯಿಂದ ಮುಕ್ತಿ: ಸಂಗ್ರಹವಾದ ಹಣದಲ್ಲಿ ₹34 ಕೋಟಿಯನ್ನು ಸೌದಿ ಕೋರ್ಟ್ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸೌದಿ ಆಡಳಿತವು ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ, ಮೇ 20ರಂದು ರಹೀಂರನ್ನು ಜೈಲಿನಿಂದ ಬಿಡುಗಡೆ ಮಾಡಿತು.

​ಬಕ್ರೀದ್ ಹಬ್ಬದ ದಿನವೇ ಮನೆಗೆ ಮರಳಿದ ಮಗ!
​ಕೊನೆಗೂ ಸುದೀರ್ಘ 20 ವರ್ಷಗಳ ಅಗ್ನಿಪರೀಕ್ಷೆ ಮುಗಿಸಿ, ಪವಿತ್ರ ಬಕ್ರೀದ್ ಹಬ್ಬದ ಸುದಿನದಂದೇ ಅಬ್ದುಲ್ ರಹೀಂ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಕಣ್ಣೀರು ಹಾಕುತ್ತಾ ತಾಯಿಯನ್ನು ಅಪ್ಪಿಕೊಂಡ ರಹೀಂ, "ನಾನು ಮತ್ತೆ ಜೀವಂತವಾಗಿ ಮರಳುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಜೀವ ಉಳಿಸಿದ ಪ್ರತಿಯೊಬ್ಬ ದೇವದೂತರಿಗೂ ಧನ್ಯವಾದಗಳು" ಎಂದು ಭಾವುಕರಾಗಿದ್ದಾರೆ.

​ಸದ್ಯ ಈ ಮಾನವೀಯತೆಯ ಮಹಾ ವಿಜಯದ ಸುದ್ದಿ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಒಗ್ಗಟ್ಟಿನ ಶಕ್ತಿಗೆ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ.
​ಸಹಾಯ ಹಸ್ತ ಚಾಚಿದ ಎಲ್ಲ ಹೃದಯಗಳಿಗೂ ಬಿಗ್ ಸಲ್ಯೂಟ್!

ಫ್ರೆಂಡ್ ರಿಕ್ವೆಸ್ಟ್ ರಿಜೆಕ್ಟ್ ಮಾಡಿದ್ದಕ್ಕೆ AI ಬಳಸಿ ತಾಯಿ-ಮಗಳ ಅಶ್ಲೀಲ ಭಾವಚಿತ್ರ ಸೃಷ್ಟಿಸಿದ್ದ 'ಪೂಜಾರಿ' ಬಂಧನ!​ದೆಹಲಿ: ಇನ್‌ಸ್ಟಾಗ್ರಾಮ...
29/05/2026

ಫ್ರೆಂಡ್ ರಿಕ್ವೆಸ್ಟ್ ರಿಜೆಕ್ಟ್ ಮಾಡಿದ್ದಕ್ಕೆ AI ಬಳಸಿ ತಾಯಿ-ಮಗಳ ಅಶ್ಲೀಲ ಭಾವಚಿತ್ರ ಸೃಷ್ಟಿಸಿದ್ದ 'ಪೂಜಾರಿ' ಬಂಧನ!

​ದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ತಾನು ಕಳುಹಿಸಿದ ಫ್ರೆಂಡ್ ರಿಕ್ವೆಸ್ಟ್ ಅನ್ನು ಮಹಿಳೆಯೊಬ್ಬರು ತಿರಸ್ಕರಿಸಿದ್ದಕ್ಕೆ, AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಆಕೆ ಮತ್ತು ಆಕೆಯ ತಾಯಿಯ ಅಶ್ಲೀಲ ಫೋಟೋ-ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಟ್ಟಿದ್ದ ಕಿರಾತಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

​ಬಂಧಿತ ಆರೋಪಿಯನ್ನು 27 ವರ್ಷದ ಸುಮಿತ್ ನೆಮಚಂದ್ ಶರ್ಮಾ ಎಂದು ಗುರುತಿಸಲಾಗಿದೆ. ವಿಶೇಷ ಎಂದರೆ, ಈತ ಸೋಷಿಯಲ್ ಮೀಡಿಯಾದಲ್ಲಿ ತಾನೊಬ್ಬ 'ಪೂಜಾರಿ' ಎಂದು ಹೇಳಿಕೊಂಡು ಧಾರ್ಮಿಕ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ!

​ಘಟನೆಯ ಹಿನ್ನೆಲೆ ಏನು?
​ಪರಿಚಯ ಮತ್ತು ರಿಕ್ವೆಸ್ಟ್: ಗುಜರಾತ್ ಮೂಲದ ಮಹಿಳೆಗೆ ಇನ್‌ಸ್ಟಾಗ್ರಾಮ್ ಮೂಲಕ ಸುಮಿತ್ ಪರಿಚಯವಾಗಿದ್ದ. ಆರಂಭದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ ಈತ, ಬಳಿಕ ಮಹಿಳೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಆದರೆ ಮಹಿಳೆ ಇದನ್ನು ನಿರಾಕರಿಸಿದ್ದಾರೆ.

​AI ದುರ್ಬಳಕೆ: ಇದರಿಂದ ತೀವ್ರ ಕೋಪಗೊಂಡ ಆರೋಪಿ, ಮಹಿಳೆಯ ಪ್ರೊಫೈಲ್‌ನಲ್ಲಿದ್ದ ಫೋಟೋಗಳನ್ನು ಕದ್ದು, ಗೂಗಲ್‌ನಲ್ಲಿ ಸಿಗುವ ವಿವಿಧ AI ಟೂಲ್‌ಗಳನ್ನು ಬಳಸಿ ತಾಯಿ ಮತ್ತು ಮಗಳ 100ಕ್ಕೂ ಹೆಚ್ಚು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿದ್ದಾನೆ.

​ನಕಲಿ ಖಾತೆಗಳ ಹಾವಳಿ: ಅಷ್ಟಕ್ಕೇ ನಿಲ್ಲದ ಈತ, ಸಂತ್ರಸ್ತ ಮಹಿಳೆಯ ಹೆಸರಲ್ಲೇ 3 ನಕಲಿ ಇನ್‌ಸ್ಟಾಗ್ರಾಂ ಖಾತೆ ಹಾಗೂ ಯೂಟ್ಯೂಬ್ ಚಾನೆಲ್ ತೆರೆದು ಈ ಅಶ್ಲೀಲ ಕಂಟೆಂಟ್ ಅಪ್ಲೋಡ್ ಮಾಡಿದ್ದಾನೆ. ಕುಟುಂಬದ ಮಾನಹಾನಿ ಮಾಡಲು ಸೋಷಿಯಲ್ ಮೀಡಿಯಾದಲ್ಲಿ ಒಟ್ಟು 8 ರಿಂದ 10 ನಕಲಿ ಖಾತೆಗಳನ್ನು ಬಳಸಿದ್ದಾನೆ.

​ಪೊಲೀಸ್ ಆ್ಯಕ್ಷನ್: ಮಹಿಳೆಯ ದೂರಿನ ಮೇರೆಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹೆಡೆಮುರುcustom ಕಟ್ಟಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

​ ಸೋಷಿಯಲ್ ಮೀಡಿಯಾ ಬಳಕೆದಾರರೇ ಎಚ್ಚರ!
​AI ತಂತ್ರಜ್ಞಾನ ಬೆಳೆದಂತೆ ಈ ರೀತಿಯ 'ಡೀಪ್‌ಫೇಕ್' ಅಪರಾಧಗಳು ಹೆಚ್ಚುತ್ತಿವೆ. ನಿಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳನ್ನು ಲಾಕ್ ಮಾಡಿಡಿ ಮತ್ತು ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವ ಮುನ್ನ ಎಚ್ಚರ ವಹಿಸಿ. ದೌರ್ಜನ್ಯ ಎದುರಾದರೆ ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ.

ಕಾರು ಹಾಗೂ ಬೊಲೆರೋ ಪಿಕಪ್‌ ನಡುವೆ ಡಿಕ್ಕಿ: ಇಬ್ಬರ ಸಾ*ವು...!!!ಗೋವಾ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ತಿನೆಘಾಟ್ ಸಮೀಪದ ಗವೆಗಾಳಿ ಕ್ರಾಸ್ ಬಳ...
29/05/2026

ಕಾರು ಹಾಗೂ ಬೊಲೆರೋ ಪಿಕಪ್‌ ನಡುವೆ ಡಿಕ್ಕಿ: ಇಬ್ಬರ ಸಾ*ವು...!!!

ಗೋವಾ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ತಿನೆಘಾಟ್ ಸಮೀಪದ ಗವೆಗಾಳಿ ಕ್ರಾಸ್ ಬಳಿ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಕಾರು ಮತ್ತು ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃ. ತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಖಾನಾಪುರದಿಂದ ಕೋಳಿಗಳನ್ನು ಸಾಗಿಸಿಕೊಂಡು ಗೋವಾದತ್ತ ತೆರಳುತ್ತಿದ್ದ ಬೊಲೆರೋ ಪಿಕಪ್ ವಾಹನ ಹಾಗೂ ಗೋವಾದಿಂದ ಪ್ರವಾಸ ಮುಗಿಸಿ ಆಂಧ್ರಪ್ರದೇಶದತ್ತ ಮರಳುತ್ತಿದ್ದ ಸ್ವಿಫ್ಟ್ ಕಾರು ನಡುವೆ ಈ ಅಪಘಾತ ಸಂಭವಿಸಿದೆ.

ಡಿಕ್ಕಿಯ ತೀವ್ರತೆಗೆ ಸ್ವಿಫ್ಟ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಆಂಧ್ರಪ್ರದೇಶದ ಅನಂತಪುರ ಮೂಲದ ಮುರಳಿ ಹಾಗೂ ಮಹೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮಕ್ಕಳಿಗೆ ನಿದ್ರೆ ಮಾತ್ರೆ ಕೊಟ್ಟು, ₹1.5 ಕೋಟಿ ಬೆಲೆಯ ಚಿನ್ನಾಭರಣ ದೋಚಿದ ಮನೆ ಕೆಲಸದಾಕೆಕೆಲವೇ ನಿಮಿಷಗಳಲ್ಲಿ ಮನೆಯಲ್ಲಿದ್ದ 1.5 ಕೋಟಿ ರೂ. ಮೌ...
29/05/2026

ಮಕ್ಕಳಿಗೆ ನಿದ್ರೆ ಮಾತ್ರೆ ಕೊಟ್ಟು, ₹1.5 ಕೋಟಿ ಬೆಲೆಯ ಚಿನ್ನಾಭರಣ ದೋಚಿದ ಮನೆ ಕೆಲಸದಾಕೆ

ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾಳೆ...

ಮನೆ ಮಾಲೀಕರು ಮಾರುಕಟ್ಟೆಗೆ ಹೋಗಿರುವಾಗ ಮನೆ ಕೆಲಸದಾಕೆ ಮಕ್ಕಳಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ತಿನ್ನಿಸಿ ಮಲಗಿಸಿದ್ದಾಳೆ. ಬಳಿಕ ಆಕೆ ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾಳೆ.

ಈ ಇಡೀ ಆಘಾತಕಾರಿ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗಾಗಿ ಮನೆಯಲ್ಲಿ ಮಕ್ಕಳ ಜತೆ ಕೆಲಸದಾಕೆಯನ್ನು ಬಿಟ್ಟು ಹೋಗುವುದು ಅಥವಾ ಮನೆಯಲ್ಲಿ ಕೆಲಸದವರನ್ನು ಒಂಟಿಯಾಗಿರಲು ಬಿಡುವುದು
ಕಷ್ಟಕರವಾಗಿದೆ.

Address

176, 25th Division, Maruthi Nagar, Doddaballapur
Bangalore
561203

Alerts

Be the first to know and let us send you an email when ejagathu posts news and promotions. Your email address will not be used for any other purpose, and you can unsubscribe at any time.

Contact The Business

Send a message to ejagathu:

Share