ejagathu

ejagathu Contact information, map and directions, contact form, opening hours, services, ratings, photos, videos and announcements from ejagathu, News & Media Website, 176, 25th division, maruthi nagar, doddaballapur, Bangalore.

10/10/2025

ಅಂಬೇಡ್ಕರ್ ಆಶಯಗಳ ಪ್ರತಿಪಾದಕ, ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಸಂವಿಧಾನ ವಿರೋಧಿ ಸನಾತನಿ ವಕೀಲನ ಕೃತ್ಯವನ್ನು ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆ

10/10/2025

ದೇವಿಯಂತೆ ಮೇಕಪ್‌ ಮಾಡಿಸಿಕೊಳ್ಳುವಾಗಲೇ ದೇವಿ ಮೈಮೇಲೆ ಬಂದಂತೆ ಆವೇಷಗೊಂಡ ಯುವತಿ.

ಆವೇಷಗೊಂಡು ನನಗೆ‌ ಪೂಜೆ ಮಾಡಿಲ್ಲ ಮಾಡು ಎಂದು ಗದರಿದ ಯುವತಿ

ನಿಂಬೆಹಣ್ಣನ್ನು ಪಡೆದು ಕಚಕಚ ಅಗಿದು ತಿಂದ ಯುವತಿ

ದೇವಿಯಂತೆ ಆವೇಷಗೊಂಡು ಕೆನ್ನೆ ತುಂಬಾ ಅರಿಶಿಣ ಹಚ್ಚಿಸಿಕೊಂಡ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ,ಕೊಲೆ ಆರೋಪಿ ಕಾಲಿಗೆ ಗುಂಡು ಹೊಡೆದ ಪೊಲೀಸರುಮೈಸೂರು : ಬಲೂನ್ ಮಾರುತ್ತಿದ್ದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರ...
10/10/2025

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ,ಕೊಲೆ ಆರೋಪಿ ಕಾಲಿಗೆ ಗುಂಡು ಹೊಡೆದ ಪೊಲೀಸರು

ಮೈಸೂರು : ಬಲೂನ್ ಮಾರುತ್ತಿದ್ದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು.

ಮೈಸೂರಿನ ಮೇಟಗಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ.

ಬಂಧನಕ್ಕಾಗಿ ಬಲೆ ಬೀಸಿದ್ದ ಪೊಲೀಸರ ವಿಶೇಷ ತಂಡ.

ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ದುಷ್ಕರ್ಮಿ.

ಆರೋಪಿ ಮೇಲೆ ಗುಂಡು ಹಾರಿಸಿದ ಅಧಿಕಾರಿ ವಿಜಯನಗರ ಪೊಲೀಸ್ ಠಾಣೆ ಉಪ ನೀರಿಕ್ಷಕರಾದ ಆಯುಷ್ಮಾನ್ ಜೈ ಕೀರ್ತಿ.

ಅನಿವಾರ್ಯವಾಗಿ ಗುಂಡು ಹಾರಿಸಿದ ಪೊಲೀಸರು.

ಆರೋಪಿಯ ಕಾಲಿಗೆ ಗಾಯ, ಕೆ.ಆ‌ರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಪೊಲೀಸರು

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿಹಾಕಿದ ವ್ಯಕ್ತಿ !https://www.ejagathu.com/news/The-man-who-kidna...
10/10/2025

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿಹಾಕಿದ ವ್ಯಕ್ತಿ !
https://www.ejagathu.com/news/The-man-who-kidnapped-a-teacher-who-had-gone-to-conduct-a-socia-and-educational-survey-5257.html ಕ್ಷಣ ಕ್ಷಣದ ಮಾಹಿತಿಗಾಗಿ *ಈಜಗತ್ತು ನ್ಯೂಸ್* ವಾಟ್ಸಾಫ್ ಗುಂಪಿಗೆ ಸೇರಿರಿ
https://chat.whatsapp.com/DfrbOcepJUE6cvo1gv8qja

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯನ್ನು ಕೂಡಿಹಾಕಿದ ವ್ಯಕ್ತಿ !

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆಚಿಕ್ಕಬಳ್ಳಾಪುರ : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ನವವಿವಾಹಿತೆ ಮನೆಯ ಬಾ...
09/10/2025

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ

ಚಿಕ್ಕಬಳ್ಳಾಪುರ : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ನವವಿವಾಹಿತೆ ಮನೆಯ ಬಾತ್ ರೂಂ ನಲ್ಲಿ ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ನಡೆದ ಘಟನೆ .

ಕೆ.ಎಸ್. ಜಯಶ್ರೀ (30) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ .

ತನ್ನ ತವರುಮನೆಯ ಕೊಂಡಾವಲಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ .

ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬ ಯುವಕನೊಂದಿಗೆ ಮದುವೆಯಾಗಿದ್ದ ಜಯಶ್ರೀ.

6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜಯಶ್ರೀ ದಂಪತಿಗಳು.

ಪತಿ ಚಂದ್ರಶೇಖರ್ ವಿರುದ್ಧ ತನ್ನ ಫೇಸ್ ಬುಕ್ ಖಾತೆಯಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ನವವಿವಾಹಿತೆ.

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿ ಚಂದ್ರಶೇಖರ್ ನಿಂದ ಕಿರುಕುಳ ಆರೋಪ .

ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖ .

ಚಂದ್ರಶೇಖರ್ ನನ್ನ ಬಂಧಿಸುವವರೆಗೆ ಶವ ಸಂಸ್ಕಾರ ಮಾಡಲು ಬಿಡುವುದಿಲ್ಲ ಅಂತ ಗ್ರಾಮಸ್ಥರ ಪಟ್ಟು...

ಕೊಂಡಾವಲಹಳ್ಳಿ ಗ್ರಾಮದಲ್ಲಿ ಮುಡುಗಟ್ಟಿದ ನೀರವ ಮೌನ .

ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಬೇಟಿ ಪರಿಶೀಲನೆ .

09/10/2025

ಉತ್ತರಪ್ರದೇಶ : ಸಿಜೆಐ ಮೇಲೆ ಶೂ ಎಸೆಯಲು ಪ್ರಯತ್ನಿಸಿದವನ ವಿರುದ್ಧ ಬಹುಜನ ಸಮಾಜ ಪಾರ್ಟಿ ವತಿಯಿಂದ ನಡೆದ ಪ್ರತಿಭಟನೆಯ ಒಂದು ದೃಶ್ಯ.

09/10/2025

ಹುಬ್ಬಳ್ಳಿಯಲ್ಲಿ ಹಾಡಹಗಲೇ ಗುತ್ತಿಗೆದಾರನ ಅಪಹರಣ

ಹಾಡಹಗಲೇ ಕುರಿಯಂತೆ ಎತ್ತೊಯ್ದ ಗುತ್ತಿಗೆದಾರನನ್ನು ದುಷ್ಕರ್ಮಿಗಳು

ಆರೆಂಜ್ ಕಲರ್ ಕಾರಿನಲ್ಲಿ ಬಂದು ಕಿಡ್ನ್ಯಾಪ್

ಅಪಹರಣದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ

ತಡೆಯಲು ಬಂದವರ ಮೇಲೆ ದುಷ್ಕರ್ಮಿಗಳ ದಾಳಿ

ಬುಧವಾರ ಮದ್ಯಾಹ್ನ ನಡೆದ ಗುತ್ತಿಗೆದಾರ ಮೋಹನ್ ಚವ್ಹಾಣ ಕಿಡ್ನ್ಯಾಪ್
ಏಕಾಏಕಿ ಕಛೇರಿಗೆ ನುಗ್ಗಿದ ದುಷ್ಕರ್ಮಿಗಳು
ಮಾತನಾಡುತ್ತಲೇ ಮೋಹನ್ ನನ್ನು ಎಳೆದೊಯ್ದ ದುಷ್ಕರ್ಮಿಗಳು.

ತೋಳನ ಕೆರೆ ಬಳಿ ಇರುವ ಗುತ್ತಿಗೆದಾರನ ಕಛೇರಿಯಿಂದ ಕಿಡ್ನ್ಯಾಪ್.

ಮೊದಲ ಮಹಡಿಯ ಕಛೇರಿಯಿಂದ ಕೆಳಗೆ ಎಳೆತಂದ ದುಷ್ಕರ್ಮಿಗಳು
ನಂತರ ಕುರಿಯಂತೆ ಹೊತ್ತೊಯ್ದು ಕಾರಲ್ಲಿ ಹಾಕಿಕೊಂಡ ಕಿಡ್ನ್ಯಾಪರ್ಸ್
15 ರಿಂದ 20 ಜನರ ಗುಂಪಿನಿಂದ ಕಿಡ್ನ್ಯಾಪ್
ಕಿಡ್ನ್ಯಾಪ್ ತಡೆಯಲು ಸ್ಥಳೀಯರಿಂದ ಒಂದಷ್ಟು ಯತ್ನ

ಈ ವೇಳೆ ಬಡಿಗೆಗಳಿಂದ ಸ್ಥಳೀಯರ ಮೇಲೆ ದುಷ್ಕರ್ಮಿಗಳ ಹಲ್ಲೆ
ಹಲ್ಲೆ ನಡೆಯುತ್ತಿದ್ದಂತೆಯೇ ಕಿರುಚಿಕೊಂಡು ಓಡಿದ ಸ್ಥಳೀಯರು.

ನೂರಾರು ಮೀಟರ್ ದೂರ ಕಾರ್ ಡೋರ್ ಓಪನ್ ಮಾಡಿಕೊಂಡೇ ಶರವೇಗದಲ್ಲಿ ಎಸ್ಕೇಪ್ ಆದ ದುಷ್ಕರ್ಮಿಗಳು.

ಹುಬ್ಬಳ್ಳಿ ಜನತೆಯಲ್ಲಿ ಭೀತಿ ಸೃಷ್ಟಿಸಿದ ಕಿಡ್ನ್ಯಾಪ್ ಪ್ರಕರಣ.

ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.

ದೀಪಾವಳಿ ಹಬ್ಬ : ಐದು ದಿನ ಸುರಕ್ಷಿತ ಕ್ರಮಗಳೊಂದಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ; ಪಟಾಕಿ ಮಾರಾಟಕ್ಕೆ ಅನುಮತಿ ಕಡ್ಡಾಯ - ಜಿಲ್ಲಾಧಿಕಾರಿ ...
09/10/2025

ದೀಪಾವಳಿ ಹಬ್ಬ : ಐದು ದಿನ ಸುರಕ್ಷಿತ ಕ್ರಮಗಳೊಂದಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ; ಪಟಾಕಿ ಮಾರಾಟಕ್ಕೆ ಅನುಮತಿ ಕಡ್ಡಾಯ - ಜಿಲ್ಲಾಧಿಕಾರಿ ಬಸವರಾಜು

ಬೆಂಗಳೂರು : ದೀಪಾವಳಿ ಹಬ್ಬದ ಸಂಭ್ರಮ ಸಮೀಪಿಸಿದ್ದು, ಜಿಲ್ಲೆಯಲ್ಲಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ಕಲ್ಪಿಸಲಾಗಿದ್ದು ಸುರಕ್ಷಿತ ಕ್ರಮಗಳೊಂದಿಗೆ ಪಟಾಕಿ ಮಾರಾಟ ಮಾಡಲು ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಟಾಕಿ ಮಾರಾಟ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಯಾವುದೇ ಭಾಗದಲ್ಲಿ ಪಟಾಕಿ ದುರಂತಗಳು ಸಂಭವಿಸದಂತೆ ಪಟಾಕಿ ಮಾರಾಟಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಹಸಿರು ಪಟಾಕಿಯನ್ನು ಬಳಸಿ, ವಾಯುಮಾಲಿನ್ಯ ತಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ಮಾಡುತ್ತಿದ್ದಲ್ಲಿ, ಕೂಡಲೇ ಅದನ್ನು ಪರಿಶೀಲಿಸುವ ಜತೆಗೆ ಅಲ್ಲಿ ಹಸಿರು ಪಟಾಕಿಯಲ್ಲದೆ, ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು.

ಜಿಲ್ಲೆಯಲ್ಲಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ಅನಧಿಕೃತವಾಗಿ ಪಟಾಕಿ ಸಂಗ್ರಹಣೆ ಮಾಡಿಕೊಂಡರೆ, ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡುವ ಮುನ್ನ ಸುರಕ್ಷತಾ ಕ್ರಮಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕು ಎಂದರು.

ಹಬ್ಬದ ಸಂದರ್ಭದಲ್ಲಿ ರಾತ್ರಿ 08 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದು ಸಂಪೂರ್ಣ ನಿಷೇಧಿಸಿದೆ. ಹಸಿರು ಪಟಾಕಿಗಳನ್ನು ಬಿಟ್ಟು ಯಾವುದೇ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಧಿಸಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಡಿವೈಎಸ್ಪಿ ರವಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಪ್ರಕರಣ : ಸಿರಪ್ ಕಂಪನಿ ಮಾಲೀಕನ ಬಂಧನhttps://www.ejagathu.com/news/Child-death-case-after-con...
09/10/2025

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಪ್ರಕರಣ : ಸಿರಪ್ ಕಂಪನಿ ಮಾಲೀಕನ ಬಂಧನ
https://www.ejagathu.com/news/Child-death-case-after-consuming-cough-syrup-Syrup-company-owner-arrested-5255.html
ಕ್ಷಣ, ಕ್ಷಣದ ಮಾಹಿತಿಗಾಗಿ *ಈ ಜಗತ್ತು ನ್ಯೂಸ್* ವಾಟ್ಸಾಪ್ ಗುಂಪಿಗೆ ಸೇರಿರಿ
https://chat.whatsapp.com/GByKOTtLkexIQXHOaxTOVi

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಪ್ರಕರಣ : ಸಿರಪ್ ಕಂಪನಿ ಮಾಲೀಕನ ಬಂಧನ

ಉನ್ನತ ಶಿಕ್ಷಣವು ಕೇವಲ ಪದವಿ ಪ್ರಮಾಣ ಪತ್ರ ಗಳಿಸಲು ಹಾಗೂ ಪ್ರತಿಷ್ಠೆಗಾಗಿ ಸೀಮಿತವಾಗಬಾರದು : ಕೋಡಿ ರಂಗಪ್ಪhttps://www.ejagathu.com/news/...
09/10/2025

ಉನ್ನತ ಶಿಕ್ಷಣವು ಕೇವಲ ಪದವಿ ಪ್ರಮಾಣ ಪತ್ರ ಗಳಿಸಲು ಹಾಗೂ ಪ್ರತಿಷ್ಠೆಗಾಗಿ ಸೀಮಿತವಾಗಬಾರದು : ಕೋಡಿ ರಂಗಪ್ಪ
https://www.ejagathu.com/news/Higher-education-should-nit-be-limited-to-just-earning-a-degree-certificate-and-presting-Kodi-Rangappa-5254.html
ಕ್ಷಣ ಕ್ಷಣದ ಮಾಹಿತಿಗಾಗಿ *ಈಜಗತ್ತು ನ್ಯೂಸ್* ವಾಟ್ಸಾಫ್ ಗುಂಪಿಗೆ ಸೇರಿರಿ
https://chat.whatsapp.com/DfrbOcepJUE6cvo1gv8qja

ಉನ್ನತ ಶಿಕ್ಷಣವು ಕೇವಲ ಪದವಿ ಪ್ರಮಾಣ ಪತ್ರ ಗಳಿಸಲು ಹಾಗೂ ಪ್ರತಿಷ್ಠೆಗಾಗಿ ಸೀಮಿತವಾಗಬಾರದು : ಕೋಡಿ ರಂಗಪ್ಪ

Address

176, 25th Division, Maruthi Nagar, Doddaballapur
Bangalore
561203

Alerts

Be the first to know and let us send you an email when ejagathu posts news and promotions. Your email address will not be used for any other purpose, and you can unsubscribe at any time.

Contact The Business

Send a message to ejagathu:

Share