ejagathu

ejagathu Contact information, map and directions, contact form, opening hours, services, ratings, photos, videos and announcements from ejagathu, News & Media Website, 176, 25th division, maruthi nagar, doddaballapur, Bangalore.

ವಿಧಾನ ಪರಿಷತ್ ಸದಸ್ಯರಾಗಿ ಚಿತ್ರ ನಟ V. ರವಿಚಂದ್ರನ್ ಕರ್ನಾಟಕ ವಿಧಾನಸಭೆ ಯಿಂದ ಪರಿಷತ್ ಗೆ ನಾಮ ನಿರ್ದೇಶತ ರಾಗಿ ವಿ. ರವಿಚಂದ್ರನ್ -ಸಿನಿಮಾ ಮ...
31/08/2026

ವಿಧಾನ ಪರಿಷತ್ ಸದಸ್ಯರಾಗಿ ಚಿತ್ರ ನಟ V. ರವಿಚಂದ್ರನ್

ಕರ್ನಾಟಕ ವಿಧಾನಸಭೆ ಯಿಂದ ಪರಿಷತ್ ಗೆ ನಾಮ ನಿರ್ದೇಶತ ರಾಗಿ
ವಿ. ರವಿಚಂದ್ರನ್ -ಸಿನಿಮಾ
ಮಂಜುಳಾ ನಾಯ್ಡು -ಸಮಾಜಸೇವೆ / ಮಹಿಳಾ ಕೋಟ
ಕೆ ವಿ ಪ್ರಭಾಕರ್ - ಪತ್ರಿಕೋದ್ಯಮ

ಪರಿಷತ್ ಸದಸ್ಯರನ್ನಾಗಿ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ಸಮ್ಮತಿ ಸೂಚಿಸಿದ್ದು ಅಧಿಕೃತ ಘೋಷಣೆಯಷ್ಟೇ ಉಳಿದಿದೆ.

ವಿ ರವಿಚಂದ್ರನ್
ಸಿನಿಮಾ ಕ್ಷೇತ್ರದ ಸಾಧನೆಗಾಗಿ ವಿ ರವಿ ಚಂದ್ರನ್ ರನ್ನ ಆಯ್ಕೆ ಮಾಡಿದ್ದು ಈ ಹಿರಿಯ ನಟ, ನಿರ್ದೇಶಕನಿಗೆ ಸಂದ ಗೌರವವಾಗಿದೆ. ತಡವಾಗಿ ಆದರೂ ಸಿಕ್ಕಿದೆ ರವಿಚಂದ್ರನ್ ಮಾನ್ಯ ಮುಖ್ಯಮಂತ್ರಿ ಗಳ ಬಾಲ್ಯ ಸ್ನೇಹಿತ ಕೂಡ ಹೌದು ಅನ್ನೋದು ಗಮನರ್ಹ. ಈ ಹಿಂದೆ ಇದೆ ಕೋಟಾದಲ್ಲಿ ಉಮಾಶ್ರೀ, ತಾರಾ, ಜಯಮಾಲಾ, ದೊಡ್ಡರಂಗೇಗೌಡ ಇನ್ನಿತರು ಪರಿಷತ್ ಸದಸ್ಯರಾಗಿದ್ದರು.

ಮಂಜುಳಾ ನಾಯ್ಡು

ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ಕೂಡ ಹಾಗಿದ್ದು ಜೊತೆಗೆ ಮಹಿಳಾ ಸಬಲೀಕರಣ ಕ್ಕೆ ಸಂಬಂಧಿಸಿದಂತೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕೆ ವಿ ಪ್ರಭಾಕರ್
ಮುದ್ರಣ ಮಾಧ್ಯಮದ ಪತ್ರಕರ್ತ ರಾಗಿರುವ ಪ್ರಭಾಕರ್ ನಿಕಟ ಪೂರ್ವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಮಾಧ್ಯಮ ಸಲಹೆಗಾರಗಿದ್ದರು ತಮ್ಮ ಸಲಹೆಗಾರನಿಗೆ ಪರಿಷತ್ ಸದಸ್ಯ ಸ್ಥಾನ ಕೊಡಿಸುವಲ್ಲಿ ಸಿದ್ದು ಯಶಸ್ವಿಯಾಗಿದ್ದಾರೆ.














31/08/2026

ಬಿಜೆಪಿ ಕಚೇರಿ ಮುತ್ತಿಗೆ ಯತ್ನ : ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ, ಬಂಧನ!

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣ ಮಾಡಿ ಅಸ್ಪೃಶ್ಯತೆ, ಜಾತಿವಾದ ಆಚರಣೆ ಮಾಡಿರುವ ಮನುವಾದಿ ಬಿಜೆಪಿ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ಇಂದು ಬೆಂಗಳೂರಿನಲ್ಲಿ ಬಿಜೆಪಿ ಕಛೇರಿ ಮುತ್ತಿಗೆ ಹೋರಾಟ ನಡೆಸಲಾಯಿತು ಈ ಸಂದರ್ಭದಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಚಾರ್ಜ್ ನಡೆಸಿ ಅರೆಸ್ಟ್ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ (FIR) ದಾಖಲಿಸಬೇಕೆಂದು ನಮ್ಮ ಒತ್ತಾಯ.

ಮನುವಾದಕ್ಕೆ ಧಿಕ್ಕಾರ..ಜೈ ಸಂವಿಧಾನ.

* ವಾಸುದೇವರೆಡ್ಡಿ.ಕೆ
ಜಿಲ್ಲಾ ಉಪಾಧ್ಯಕ್ಷರು
ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ.




ಉತ್ತರ ಕರ್ನಾಟಕದಲ್ಲಿ 1,041 ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸ್ ದಾಳಿಬೆಳಗಾವಿ: ಅಪರಾಧ ಚಟುವಟಿಕೆಗಳ ತಡೆಗೆ ಸಂಬಂಧಿಸಿದಂತೆ ಉತ್ತರ ವಲಯದ ಐದು...
31/08/2026

ಉತ್ತರ ಕರ್ನಾಟಕದಲ್ಲಿ 1,041 ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸ್ ದಾಳಿ

ಬೆಳಗಾವಿ: ಅಪರಾಧ ಚಟುವಟಿಕೆಗಳ ತಡೆಗೆ ಸಂಬಂಧಿಸಿದಂತೆ ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಭಾನುವಾರ ಮುಂಜಾನೆ ಒಟ್ಟು 1,041 ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಈ ಕಾರ್ಯಚರಣೆಯನ್ನು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ನಡೆಸಲಾಯಿತು. ರೌಡಿ ಶೀಟರ್‌ಗಳ ಮನೆಗಳನ್ನು ತಪಾಸಣೆ ನಡೆಸಿದ ಪೊಲೀಸರು, ಅವರ ಇತ್ತೀಚಿನ ಚಟುವಟಿಕೆಗಳು ಹಾಗೂ ಸಂಪರ್ಕಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಉತ್ತರ ವಲಯದ ಐಜಿಪಿ ಸಂಸದೀಪ್ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲಾವಾರು ವಿವರ ನೋಡುವುದಾದರೆ: ಬೆಳಗಾವಿಯಲ್ಲಿ 201, ವಿಜಯಪುರದಲ್ಲಿ 482, ಬಾಗಲಕೋಟೆಯಲ್ಲಿ 117, ಧಾರವಾಡದಲ್ಲಿ 46 ಮತ್ತು ಗದಗದಲ್ಲಿ 195 ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಹಳೆಯ ಅಪರಾಧಿಗಳ ಮೇಲೆ ತೀವ್ರ ನಿಗಾ ಇರಿಸುವುದು ಮತ್ತು ಮುಂದಿನ ಅಪರಾಧ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಕಾರ್ಯಾಚರಣೆಯನ್ನು ನಡೆಸಿತು.

30/08/2026

ದಲಿತರನ್ನು ಕಂಡರೆ ಬಿಜೆಪಿಗೆ ಆಗೋಲ್ಲ ಎಂಬುದು ಕಾಂಗ್ರೆಸ್ ಪಕ್ಷದವರ ಆರೋಪ

-ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

30/08/2026

ಉದ್ಯಾನವನಗಳ ತಿದ್ದುಪಡಿ ಮಸೂದೆ ಜಾರಿಗೆ ರಾಜ್ಯ ಸರ್ಕಾರದ ಮುಂದಾಗಿರುವುದರ ಬಗ್ಗೆ ಸಂಸದ ಡಾ ಮಂಜುನಾಥ್ ಪ್ರತಿಕ್ರಿಯೆ.

30/08/2026

ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಹೊಸ ಬಾಂಬ್....

ಕೇಂದ್ರ ಸಚಿವ ಎಚ್.ಡಿ.ಕೆ ಹೇಳಿಕೆ.

ಇನ್ನು ಹತ್ತು ದಿನ ಬಿಟ್ಟು ರಾಜ್ಯಕ್ಕೆ ಬರುತ್ತೇನೆ..

ದೇಶದಲ್ಲೇ ಅಲ್ಲೋಲಕಲ್ಲೋಲ ಆಗುವಂತಹ ವಿಷಯ ತರುತ್ತೇನೆ ಎಂದ HDK....

ಅಪಾರ ಪ್ರಮಾಣದ ಚಿನ್ನ, ಕೆಜಿ ಗಟ್ಟಲೆ ಬೆಳ್ಳಿ ಸಿಕ್ಕರೂ ದುರಾಸೆ ಪಡದೆ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕ! ❤️🙏ಮಗಳ ಮದುವೆಗಾಗಿ ತಂದಿದ್ದ 16 ತೊ...
30/08/2026

ಅಪಾರ ಪ್ರಮಾಣದ ಚಿನ್ನ, ಕೆಜಿ ಗಟ್ಟಲೆ ಬೆಳ್ಳಿ ಸಿಕ್ಕರೂ ದುರಾಸೆ ಪಡದೆ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕ! ❤️🙏

ಮಗಳ ಮದುವೆಗಾಗಿ ತಂದಿದ್ದ 16 ತೊಲೆ ಚಿನ್ನ ಹಾಗೂ ಸುಮಾರು 1 ಕೆಜಿ ಬೆಳ್ಳಿ ಆಭರಣಗಳನ್ನು ಕಳೆದುಕೊಂಡು ಮಹಿಳೆಯೊಬ್ಬರು ಕಣ್ಣೀರಿಟ್ಟಿದ್ದರು.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಭರಣಗಳು ಕಳೆದುಹೋಗಿದ್ದು, ಅಮೂಲ್ಯ ಆಭರಣಗಳನ್ನು ಕಳೆದುಕೊಂಡ ನೋವಿನಲ್ಲಿ ಮಹಿಳೆ ದುಃಖಿತರಾಗಿದ್ದರು.

ಇದೇ ವೇಳೆ ರಸ್ತೆ ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕರೊಬ್ಬರಿಗೆ ಆಭರಣಗಳು ಸಿಕ್ಕಿವೆ. ಇಷ್ಟೊಂದು ಬೆಲೆಬಾಳುವ ಚಿನ್ನಾಭರಣ ಸಿಕ್ಕರೂ ಅದನ್ನು ತಮ್ಮದಾಗಿಸಿಕೊಳ್ಳುವ ಯೋಚನೆ ಮಾಡದೆ, ಅದರ ನಿಜವಾದ ಮಾಲೀಕರನ್ನು ಹುಡುಕಿ ಹಿಂತಿರುಗಿಸಲು ಮುಂದಾಗಿದ್ದಾರೆ.

ನಂತರ ಪೊಲೀಸರ ಸಮ್ಮುಖದಲ್ಲಿ ಆಭರಣಗಳನ್ನು ಮಾಲೀಕರಿಗೆ ಸಂಪೂರ್ಣವಾಗಿ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಮಾದರಿಯಾಗಿದ್ದಾರೆ. 👏❤️

ಇಂದಿನ ದಿನಗಳಲ್ಲಿ ಬೆಲೆಬಾಳುವ ವಸ್ತು ಸಿಕ್ಕಾಗ ಅದನ್ನು ಹಿಂದಿರುಗಿಸುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ. ಆದರೆ ಈ ಪೌರ ಕಾರ್ಮಿಕರು ತೋರಿದ ಪ್ರಾಮಾಣಿಕತೆ, ಮತ್ತು ಮಾನವೀಯತೆ ನಿಜಕ್ಕೂ ಶ್ಲಾಘನೀಯ.

ಹಣ ಮತ್ತು ಆಭರಣಕ್ಕಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟ ಇವರಿಗೆ ಹೃದಯಪೂರ್ವಕ ಅಭಿನಂದನೆಗಳು. 🙏❤️

ಪಂಚಾಯತಿ ಪಿಡಿಓ ಲೋಕಾ ಬಲೆಗೆ  ಮೆಹಬೂಬ್ ಪಟೇಲ್ ಲೋಕಾ ಬಲೆಗೆ ಬಿದ್ದ ಪಿ ಡಿ ಓ ಬಿರಾಳ್ ಗ್ರಾಮ ಪಂಚಾಯತಿ ಪಿಡಿಓ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕ...
30/08/2026

ಪಂಚಾಯತಿ ಪಿಡಿಓ ಲೋಕಾ ಬಲೆಗೆ

ಮೆಹಬೂಬ್ ಪಟೇಲ್ ಲೋಕಾ ಬಲೆಗೆ ಬಿದ್ದ ಪಿ ಡಿ ಓ

ಬಿರಾಳ್ ಗ್ರಾಮ ಪಂಚಾಯತಿ ಪಿಡಿಓ

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿರಾಳ್ ಗ್ರಾಮ

ಸರ್ಕಾರಿ ಸ್ಥಳವನ್ನ ಮ್ಯೂಟೇಷನ್ ಮಾಡಿಕೊಡಲು ಹಣದ ಬೇಡಿಕೆ

ಮಲ್ಲಾ ಬಿ ಗ್ರಾಮದ ಜಾಗೆಯನ್ನ ಮ್ಯೂಟೇಷನ್ ಗಾಗಿ ೧೮೦೦೦ ಬೇಡಿಕೆ

೧೨೦೦೦ ಹಣ ಫೋನ್ ಪೇ ಮೂಲಕ ಪಡೆದಿದ್ದ

ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಪಿಡಿಓ

ದೂರುದಾರ ಶಿವರೆಡ್ಡಿ ದೂರಿನನ್ವಯ ದಾಳಿ

ಲೋಕಾ ಇನ್ಸ್ಪೆಕ್ಟರ್ ಅರುಣ್ ಮರಗುಂಡಿ ಯಿಂದ ದಾಳಿ

ಹಾಸನ: ದಬ್ಬಾಳಿಕೆ ಮಾಡಿದರೆ ಅದನ್ನು ಯಾವ ರೀತಿ ಸರಿಪಡಿಸಬೇಕು ಎಂಬುದು ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ, ಹಾಸನ ಜಿಲ್ಲಾಧಿಕಾರಿ ಕೆ.ಎ...
30/08/2026

ಹಾಸನ: ದಬ್ಬಾಳಿಕೆ ಮಾಡಿದರೆ ಅದನ್ನು ಯಾವ ರೀತಿ ಸರಿಪಡಿಸಬೇಕು ಎಂಬುದು ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ, ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲು ನಿಗದಿ ವಿಚಾರವಾಗಿ ಜಿಲ್ಲಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿದರು. ಮೀಸಲು ನಿಗದಿ ಸಂಬಂಧ ಜಿಲ್ಲಾಧಿಕಾರಿಗಳು ತಹಸೀಲ್ದಾರ್‌ಗೆ ಪತ್ರ ಬರೆದಿದ್ದು ಏಕೆ? ಅವರಿಂದ ವರದಿ ಪಡೆದ ಬಳಿಕ ಮೀಸಲು ನಿಗದಿಯಲ್ಲಿ ಬದಲಾವಣೆ ಮಾಡಿರುವುದು ಏಕೆ? ಬದಲಾವಣೆ ಮಾಡುವಾಗ ಅದಕ್ಕೆ ನಿರ್ದಿಷ್ಟ ಕಾರಣವನ್ನು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಎಡಿಸಿ ಹುದ್ದೆಯಲ್ಲಿ ಯಾರೂ ಉಳಿಯುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಒಬ್ಬೊಬ್ಬರಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಮೀಸಲು ನಿಗದಿಯಾಗಿರುವ ದೃಢೀಕೃತ ಪ್ರತಿಯನ್ನು ಕೇಳಿದರೂ ಇನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಲು ಬಿಡುವುದಿಲ್ಲ. ತಾನು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದೇನೆಯೇ, ಇಲ್ಲವೇ ಎಂಬುದನ್ನು ಹೇಳುವುದಿಲ್ಲ. ಆ.31ರ ಸೋಮವಾರದೊಳಗೆ ಮೀಸಲು ಬದಲಾವಣೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ರೇವಣ್ಣ ಎಚ್ಚರಿಕೆ ನೀಡಿದರು.
ಬೆಳೆ ನಷ್ಟದ ಬಗ್ಗೆಯೂ ಅಸಮಾಧಾನ

ಹಾಸನ ಜಿಲ್ಲೆಯಲ್ಲಿ 7.35 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಕೇವಲ 14 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಮಾಡಿರುವ ಬೆಳೆಗಳಲ್ಲಿಯೂ ಬಹುತೇಕ ನಾಶವಾಗಿದೆ. ರಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಬೇಲೂರು ಹಾಗೂ ಆಲೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಏಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದ ಅವರು, ರೇವಣ್ಣ ಮತ್ತು ಮಂಜಣ್ಣ ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ತಮ್ಮ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲದಂತಾಗಿದೆ. ಎಡಿಸಿಯನ್ನು ಎಲ್ಲಿಂದ ಕರೆತಂದಿದ್ದಾರೋ ಗೊತ್ತಿಲ್ಲ. ನಾನು ಹಳ್ಳಿ ಭಾಷೆಯಲ್ಲಿ ಮಾತನಾಡಿದರೆ ಅವರು ಬೈಯುತ್ತಾರೆ ಎಂದು ರೇವಣ್ಣ ಕಿಡಿಕಾರಿದರು.

30/08/2026

ಪ್ರೀತಿಯ ಏಕಲವ್ಯನ ಕಾಲು ಹಿಡಿದು ಬಿಕ್ಕಳಿಸಿ ಗೋಳಾಡಿದ ವರ್ತೂರು ಸಂತೋಷ್

Address

176, 25th Division, Maruthi Nagar, Doddaballapur
Bangalore
561203

Alerts

Be the first to know and let us send you an email when ejagathu posts news and promotions. Your email address will not be used for any other purpose, and you can unsubscribe at any time.

Contact The Business

Send a message to ejagathu:

Shortcuts

Share