Cini Lahari

Cini Lahari It is an innovative website portal for news and article about the film industry. A dedicated web
(3)

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ 'ಕಾಟೇರ' ನಟಿ ಆರಾಧನಾ ರಾಮ್ ಜೋಡಿ!ರಿಯಲ್ ಸ್ಟಾ...
13/08/2026

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ 'ಕಾಟೇರ' ನಟಿ ಆರಾಧನಾ ರಾಮ್ ಜೋಡಿ!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ. ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ನೆರವೇರಿತು.

ಉಪೇಂದ್ರ ಅವರ ಪುತ್ರ ಆಯುಷ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಕೋರಿದರು. ಈ ಮುಹೂರ್ತ ಸಮಾರಂಭದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಹಿರಿಯ ನಟಿ ಮಾಲಾಶ್ರೀ ಸೇರಿದಂತೆ ಹಲವು ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಉಪ್ಪಿಗೆ ಜೋಡಿಯಾದ 'ಕಾಟೇರ' ನಟಿ ಆರಾಧನಾ ರಾಮ್!
ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಜೋಡಿಯಾಗಿದ್ದಾರೆ. ಬ್ಲಾಕ್‌ಬಸ್ಟರ್ 'ಕಾಟೇರ' ಚಿತ್ರದ ಮೂಲಕ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಿದ್ದ ಆರಾಧನಾ ಅವರಿಗೆ ಇದು ಎರಡನೇ ಸಿನಿಮಾವಾಗಿದೆ. ವಿಶೇಷವೆಂದರೆ, 'ಕಾಟೇರ' ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದ ಆರಾಧನಾ, ಈ ಚಿತ್ರದಲ್ಲಿ ತೀರಾ ಭಿನ್ನವಾದ ಬೋಲ್ಡ್ ಹಾಗೂ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿಯ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿಕ್ಕಪ್ಪ ಉಪ್ಪಿ ಜೊತೆ ರಂಗಕ್ಕಿಳಿದ ನಿರಂಜನ್!
ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಮತ್ತೊಂದು ವಿಶೇಷತೆಯಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಅವರ ಸಹೋದರನ ಮಗ, ನಟ ನಿರಂಜನ್ ಸುಧೀಂದ್ರ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದೇ ಸಿನಿಮಾದಲ್ಲಿ ಚಿಕ್ಕಪ್ಪ-ಮಗನ ಜುಗಲ್‌ಬಂದಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

'A', 'ಉಪೇಂದ್ರ' ಶೈಲಿಯ ಸಬ್ಜೆಕ್ಟ್
'ವಿಕ್ಟರಿ-2' ಮತ್ತು 'ಛೂ ಮಂತರ್'ನಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ತರುಣ್ ಶಿವಪ್ಪ, ತಮ್ಮದೇ 'ತರುಣ್ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ ಅತ್ಯಂತ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಉಪೇಂದ್ರ ಅವರ ಹಳೆಯ ಕ್ಲಾಸಿಕ್ ಹಿಟ್‌ಗಳಾದ 'ಎ', 'ಉಪೇಂದ್ರ' ಮತ್ತು 'ರಕ್ತಕಣ್ಣೀರು' ಶೈಲಿಯ ಸಿನಿಮಾವಾಗಿದ್ದು, ಇವತ್ತಿನ ಜನರೇಶನ್‌ಗೆ ತಕ್ಕಂತೆ ಉಪ್ಪಿ ಅವರ ವಿಶಿಷ್ಟ ಶೈಲಿಯ ಪಾತ್ರವನ್ನು ರೂಪಿಸಲಾಗಿದೆಯಂತೆ.

ಅತ್ಯಂತ ವೈವಿಧ್ಯಮಯ ಕಥಾಹಂದರ ಹಾಗೂ ತಾರಾಗಣವನ್ನು ಹೊಂದಿರುವ ‘ನೆಕ್ಟ್ಸ್ ಲೆವೆಲ್’ ಸಿನಿಮಾ, ಮೂಹೂರ್ತದ ಹಂತದಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.

*ಕ್ರಾಸಿಂಗ್ ಪಾತ್ಸ್  ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ಆಕ್ಷನ್ ಕಟ್'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್...
12/08/2026

*ಕ್ರಾಸಿಂಗ್ ಪಾತ್ಸ್ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ಆಕ್ಷನ್ ಕಟ್

'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್ಸ್' ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ ಮಾನವ-ಆನೆ ಸಂಘರ್ಷದ ಕುರಿತು ಬೆಳಕು ಚೆಲ್ಲುತ್ತದೆ. ಈ ಸಾಕ್ಷ್ಯಚಿತ್ರಕ್ಕೆ ಟೆಕಿಯಾನ್ (Tekion) ಸಂಸ್ಥೆಯ ಸಿಎಸ್‌ಆರ್‌ ಇನಿಶಿಯೇಟಿವ್ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆ ಮತ್ತು ಆ ರೋಚಾ ಇಂಡಿಯಾ, ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಇದಕ್ಕೆ ಸಹಯೋಗ ನೀಡಿವೆ.

ಕಾಡುಗಳು ಕಿರಿದಾಗುತ್ತಾ, ಮಾನವನ ಚಟುವಟಿಕೆಗಳಿಂದಾಗಿ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಆನೆಗಳು ಅನಿವಾರ್ಯವಾಗಿ ಮಾನವ ವಸತಿ ಪ್ರದೇಶಗಳಿಗೆ ಕಾಲಿಡುತ್ತಿವೆ. ಇದು ಸ್ಥಳೀಯ ಸಮುದಾಯಗಳು ಮತ್ತು ವನ್ಯಜೀವಿಗಳು ಇಬ್ಬರ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಂಘರ್ಷಕ್ಕೆ ಕಾರಣವಾಗಿದೆ. 'ಕ್ರಾಸಿಂಗ್ ಪಾತ್ಸ್' ಚಿತ್ರವು ಈ ಸಂಘರ್ಷವನ್ನು ಹಾಗೂ ಮಾನವ ಮತ್ತು ಪ್ರಾಣಿಗಳು ಸಹಬಾಳ್ವೆ ನಡೆಸಲು ಕಂಡುಕೊಳ್ಳಬೇಕಾದ ಸುಸ್ಥಿರ ಮಾರ್ಗಗಳ ತುರ್ತು ಅಗತ್ಯವನ್ನು ಪರಿಶೀಲಿಸುತ್ತದೆ.

ಈ ಸಾಕ್ಷ್ಯಚಿತ್ರವು 'ಆ ರೋಚಾ ಇಂಡಿಯಾ' ಸಂಸ್ಥೆಯು 'ಕರ್ನಾಟಕ ಅರಣ್ಯ ಇಲಾಖೆ'ಯ ಸಹಯೋಗದೊಂದಿಗೆ ನಡೆಸುತ್ತಿರುವ 'ಪ್ರಾಜೆಕ್ಟ್ ಇಎಡಿಡಿಎಸ್' (ಆನೆಗಳ ಉಪಟಳ ತಡೆಯುವ ಶ್ವಾನ ದಳ) ಯೋಜನೆಯನ್ನು ಹಿಂಬಾಲಿಸುತ್ತದೆ. ಈ ಯೋಜನೆಯು ಸಂರಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. 'ಆ ರೋಚಾ ಇಂಡಿಯಾ' ತಂಡದ ಅವಿನಾಶ್ ಕೃಷ್ಣನ್ ಅವರು ಈ ಇಎಡಿಡಿಎಸ್ ಕಾರ್ಯಕ್ರಮವನ್ನು ನಿಭಾಯಿಸುತ್ತಿದ್ದಾರೆ. 'ಗಂಧದ ಗುಡಿ' ಮತ್ತು '777 ಚಾರ್ಲಿ' ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪ್ರತೀಕ್ ಶೆಟ್ಟಿ ಅವರು ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.

ಯೋಜನೆಯೊಂದಿಗೆ ಕೈಜೋಡಿಸಿರುವ ಪ್ರಮುಖ ವ್ಯಕ್ತಿಗಳು:

ಈಶ್ವರ್ ಬಿ. ಖಂಡ್ರೆ — ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು, ಕರ್ನಾಟಕ ಸರ್ಕಾರ
ಪುಷ್ಕರ್ ಕುಮಾರ್ — ಪಿಸಿವಿಎಫ್ (PCCF)
ಮನೋಜ್ ರಾಜನ್ — ಯೋಜನಾ ಮುಖ್ಯಸ್ಥರು, ಪ್ರಾಜೆಕ್ಟ್ ಎಲಿಫೆಂಟ್
ಸೌರಭ್ ಕುಮಾರ್ — ಉಪ ಅರಣ್ಯ ಸಂರಕ್ಷಣಾಧಿಕಾರಿ (DCF), ಹಾಸನ
ಅವಿನಾಶ್ ಕೃಷ್ಣನ್ — ರಾಷ್ಟ್ರೀಯ ನಿರ್ದೇಶಕರು, ಆ ರೋಚಾ ಇಂಡಿಯಾ

ಹವಾಮಾನ ವೈಪರೀತ್ಯ, ಪರಿಸರ ನಾಶ ಮತ್ತು ನಮ್ಮ ಸುತ್ತಲೂ ಹೆಚ್ಚುತ್ತಿರುವ ಹಿಂಸಾಚಾರದ ಈ ಕಾಲಘಟ್ಟದಲ್ಲಿ, 'ಕ್ರಾಸಿಂಗ್ ಪಾತ್ಸ್' ಅತ್ಯಂತ ತುರ್ತಾಗಿ ಗಮನಹರಿಸಬೇಕಾದ ಶಾಂತಿಯುತ ಸಂಘರ್ಷದ ಕಡೆಗೆ ಬೆಳಕು ಚೆಲ್ಲಲು ಹಾಗೂ ಸಹಬಾಳ್ವೆಯ ಸಾಧ್ಯತೆಯನ್ನು ಎತ್ತಿಹಿಡಿಯಲು ಆಶಿಸುತ್ತದೆ.

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ 'ಸ್ಲಮ್ ಡಾಗ್' ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧ...
12/08/2026

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ 'ಸ್ಲಮ್ ಡಾಗ್' ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ 'ಗೌರಿ ಹೆಗ್ಡೆ' ಪಾತ್ರದಲ್ಲಿ ಟಬು!*

ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟ ವಿಜಯ್ ಸೇತುಪತಿ ಪ್ರಥಮ ಬಾರಿಗೆ ಒಂದಾಗುತ್ತಿರುವ ಪ್ಯಾನ್-ಇಂಡಿಯಾ ಆಕ್ಷನ್ ಡ್ರಾಮಾ 'ಸ್ಲಮ್ ಡಾಗ್: 33 ಟೆಂಪಲ್ ರೋಡ್' ಸಿನಿಮಾವು ಭರ್ಜರಿ ಆಕ್ಷನ್ ಮತ್ತು ನಿಗೂಢತೆಯ ಮಿಶ್ರಣವನ್ನು ನೀಡುವ ಭರವಸೆ ಮೂಡಿಸಿದೆ. ಇತ್ತೀಚೆಗಷ್ಟೇ ಗೌರಿ ಹೆಗ್ಡೆ ಪಾತ್ರದಲ್ಲಿ ಟಬು ಅವರ ಫಸ್ಟ್ ಲುಕ್ ಅನಾವರಣಗೊಳಿಸಿದ್ದ ಚಿತ್ರತಂಡ, ಈಗ ಅವರ ಶಕ್ತಿಶಾಲಿ ಪಾತ್ರದ ಪರಿಚಯ ನೀಡುವ ಒಂದು ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆ ಮಾಡಿದೆ.

ನಗರದ ಕೊಳಚೆ ಪ್ರದೇಶಗಳ (ಸ್ಲಮ್) ಹಿನ್ನೆಲೆಯಲ್ಲಿ ಸಾಗುವ ಈ ಗ್ಲಿಂಪ್ಸ್, ಮೊದಲಿಗೆ ಸಿನಿಮಾದ ಕಚ್ಚಾ ಮತ್ತು ನೈಜ ಜಗತ್ತನ್ನು ಪರಿಚಯಿಸುತ್ತದೆ. ತದನಂತರ ಟಬು ಅವರ ಎಂಟ್ರಿಯನ್ನು ಅತ್ಯಂತ ಆಕರ್ಷಕವಾಗಿ ತೋರಿಸಲಾಗಿದೆ. ಕಾರಿನಲ್ಲಿ ಆಗಮಿಸುವ ಅವರು, ಸಿಗರೇಟ್ ಒಂದನ್ನು ಹಚ್ಚಿಕೊಂಡು ತಕ್ಷಣವೇ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಸ್ಥಳೀಯ ಗೂಂಡಾಗೆ ನೀಡುವ ಖಡಕ್ ಎಚ್ಚರಿಕೆ ಮತ್ತು ಆನಂತರ ನೀಡುವ ಒಂದು ಕಪಾಳಮೋಕ್ಷ, ಗೌರಿ ಹೆಗ್ಡೆ ಅಧಿಕಾರವನ್ನು ಕೇಳಿ ಪಡೆಯುವವಳಲ್ಲ, ಬದಲಾಗಿ ಅಧಿಕಾರವನ್ನು ತಾನೇ ಚಲಾಯಿಸುವ ಮಹಿಳೆ ಎಂಬುದನ್ನು ತೋರಿಸುತ್ತದೆ.

ಈ ಪಾತ್ರವನ್ನು ಕೇವಲ ಒಬ್ಬ ಶಕ್ತಿಶಾಲಿ ಅಧಿಕಾರಿಯಾಗಿ ಮಾತ್ರವಲ್ಲದೆ, ಸಂಪೂರ್ಣವಾಗಿ ಭಯವಿಲ್ಲದ ಮತ್ತು ಯಾವುದೇ ರಾಜಿ ಮಾಡಿಕೊಳ್ಳದ ವ್ಯಕ್ತಿಯಾಗಿ ತೋರಿಸಲಾಗಿದೆ. ಗೌರಿ ಹೆಗ್ಡೆ ಬೀದಿಗಳ ಮಧ್ಯದಲ್ಲೇ ಗೂಂಡಾಗಳನ್ನು ಎದುರಿಸುತ್ತಾಳೆ; ಅವರೊಂದಿಗೆ ಕಾದಾಡುತ್ತಾ ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತರುತ್ತಾಳೆ. ಸುತ್ತಲೂ ಪೊಲೀಸರು ಮತ್ತು ಜನರ ಗುಂಪೇ ಇದ್ದರೂ, ಅವಳು ಧೃತಿಗೆಡದೆ ತಮ್ಮ ಅಧಿಕಾರಕ್ಕೆ ಸವಾಲು ಹಾಕುವವರನ್ನು ಆಕ್ರಮಣಕಾರಿಯಾಗಿ ಹತೋಟಿಗೆ ತರುತ್ತಾಳೆ.

ಗ್ಲಿಂಪ್ಸ್ ಉದ್ದಕ್ಕೂ ಮೂಡಿಬರುವ ಪದಗಳಾದ- 'ಒನ್ ಫಿಯರ್‌ಲೆಸ್ ವುಮನ್' (ಒಬ್ಬ ಭಯವಿಲ್ಲದ ಮಹಿಳೆ), 'ಪವರ್‌ಫುಲ್ ಆಫೀಸರ್' (ಶಕ್ತಿಶಾಲಿ ಅಧಿಕಾರಿ), 'ರೂತ್‌ಲೆಸ್' (ಕ್ರೂರಿ), 'ಮರ್ಸಿಲೆಸ್' (ದಯೆಯಿಲ್ಲದವಳು) ಮತ್ತು 'ಡೆವಿಲ್ ಇನ್ ದಿ ಡಿಪಾರ್ಟ್‌ಮೆಂಟ್' (ಇಲಾಖೆಯ ರಾಕ್ಷಸಿ) - ಅವರ ಪಾತ್ರದ ಸ್ವರೂಪದ ಬಗ್ಗೆ ಸ್ಪಷ್ಟ ಸುಳಿವು ನೀಡುತ್ತವೆ.

ಗ್ಲಿಂಪ್ಸ್‌ನ ಕೊನೆಯಲ್ಲಿ ಅವರು ಸಂಪೂರ್ಣ ಅಧಿಕಾರದಿಂದ ತಮ್ಮನ್ನು ಪರಿಚಯಿಸಿಕೊಳ್ಳುವ ಸೀನ್ ಪ್ರಮುಖ ಹೈಲೈಟ್ ಆಗಿದೆ. "ಗೌರಿ ಹೆಗ್ಡೆ, ಡೆಪ್ಯುಟಿ ಕಮಿಷನರ್, ಆದಾಯ ತೆರಿಗೆ ಇಲಾಖೆ" - ಈ ಪರಿಚಯವು ಪೂರಿ ಜಗನ್ನಾಥ್ ಅವರ ಸಿನಿಮಾಗಳ ಶೈಲಿಯ ಪಕ್ಕಾ ಮಾಸ್ ಮತ್ತು ಪಂಚ್‌ನಿಂದ ಕೂಡಿದೆ. ಈ ಗ್ಲಿಂಪ್ಸ್‌ನಲ್ಲಿ ವಿಜಯ್ ಸೇತುಪತಿ ಅವರ ಕೆಲವು ದೃಶ್ಯಗಳೂ ಇವೆ.

ಟಬು ಅವರು ತಮ್ಮ ಸ್ಕ್ರೀನ್ ಪ್ರೆಸೆಂಟ್ ಮೂಲಕ ಈ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದು, ಅತ್ಯಂತ ಗಂಭೀರವಾಗಿ ಮತ್ತು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಗೌರಿ ಹೆಗ್ಡೆ ಪಾತ್ರಕ್ಕೆ ವಿಶಿಷ್ಟವಾದ ಅಧಿಕಾರ ಮತ್ತು ಭಯ ಹುಟ್ಟಿಸುವ ಗಾಂಭೀರ್ಯವನ್ನು ತಂದಿದ್ದು, ಪಾತ್ರದ ಮೇಲಿನ ಕುತೂಹಲವನ್ನು ತಕ್ಷಣವೇ ಹೆಚ್ಚಿಸುತ್ತಾರೆ. ಸ್ಮರಣೀಯ ಪಾತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಅವುಗಳನ್ನು ಪ್ರಭಾವಶಾಲಿಯಾಗಿ ಪರಿಚಯಿಸುವುದರಲ್ಲಿ ಪೂರಿ ಜಗನ್ನಾಥ್ ಅವರಿಗೆ ಯಾವಾಗಲೂ ವಿಶೇಷ ಕೌಶಲವಿದ್ದು, ಗೌರಿ ಹೆಗ್ಡೆ ಪಾತ್ರವು ಮತ್ತೊಂದು ಕುತೂಹಲಕಾರಿ ಸೇರ್ಪಡೆಯಂತೆ ಕಾಣುತ್ತಿದೆ.

ಚಿತ್ರದಲ್ಲಿ ಸಂಯುಕ್ತಾ ನಾಯಕಿಯಾಗಿದ್ದು, ದುನಿಯಾ ವಿಜಯ್ ನೆಗಟಿವ್ ಪಾತ್ರದಲ್ಲಿದ್ದಾರೆ. ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಕೂಡ ಪ್ರಮುಖ ತಾರಾಗಣದ ಭಾಗವಾಗಿದ್ದಾರೆ. ಸ್ಯಾಮ್ ಕೆ. ನಾಯ್ಡು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜಿಸುತ್ತಿದ್ದಾರೆ ಮತ್ತು ಸಂತೋಷ್ ನೂಜಿಲ್ಲ ಸಂಕಲನದ (ಎಡಿಟಿಂಗ್) ಹೊಣೆ ಹೊತ್ತಿದ್ದಾರೆ. 'ಸ್ಲಮ್ ಡಾಗ್: 33 ಟೆಂಪಲ್ ರೋಡ್' ಚಿತ್ರವನ್ನು ಪೂರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರು, ಜೆಬಿ ಮೋಷನ್ ಪಿಕ್ಚರ್ಸ್‌ನ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲಾ ಅವರ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ.

ಶೀರ್ಷಿಕೆ ಘೋಷಣೆ, ಫಸ್ಟ್ ಲುಕ್ ಪೋಸ್ಟರ್, ಟೀಸರ್ ಮತ್ತು ಈಗ ಬಿಡುಗಡೆಯಾಗಿರುವ ಈ ಅದ್ಭುತ ಗ್ಲಿಂಪ್ಸ್ ಮೂಲಕ ಚಿತ್ರವು ನಿರಂತರವಾಗಿ ನಿರೀಕ್ಷೆಯನ್ನು ಹೆಚ್ಚಿಸುತ್ತಿದ್ದು, ಪಾತ್ರಗಳು ಮತ್ತು ಅವುಗಳ ಜಗತ್ತಿನ ಸುತ್ತಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಿನಿಮಾವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಮಹಾನ್ ಸಿನಿಮಾದ ಹೊಸ ಅಪ್ ಡೇಟ್ ನಮ್ರತಾ ಗೌಡ, ಕಿರಣ್ ಶ್ರೀನಿವಾಸ್ ಫಸ್ಟ್ ಲುಕ್ ರಿಲೀಸ್ ಪಿ.ಸಿ.ಶೇಖರ್ ನಿರ್ದೇಶನದ,ಲ ಮತ್ತು ಆಕಾಶ್ ಪಿಕ್ಚರ್ಸ್ ...
11/08/2026

ಮಹಾನ್ ಸಿನಿಮಾದ ಹೊಸ ಅಪ್ ಡೇಟ್ ನಮ್ರತಾ ಗೌಡ, ಕಿರಣ್ ಶ್ರೀನಿವಾಸ್ ಫಸ್ಟ್ ಲುಕ್ ರಿಲೀಸ್

ಪಿ.ಸಿ.ಶೇಖರ್ ನಿರ್ದೇಶನದ,ಲ ಮತ್ತು ಆಕಾಶ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಪ್ರಕಾಶ್ ಬುದೂರು ಅವರು ನಿರ್ಮಿಸುತ್ತಿರುವ ಹಾಗೂ ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ಹಾಗೂ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ "ಮಹಾನ್" ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮೇರು ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರದ ಪ್ರಮುಖಪಾತ್ರದಲ್ಲಿ "ಬಿಗ್ ಬಾಸ್" ಖ್ಯಾತಿಯ ನಮ್ರತಾ ಗೌಡ ಹಾಗೂ "ಹಾಗೆ ಸುಮ್ಮನೆ" ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಕಿರಣ್ ಶ್ರೀನಿವಾಸ್ ನಟಿಸಿದ್ದಾರೆ. ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನ್ನು "ಮಹಾನ್" ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.

ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬುದು ನನ್ನ ಬಹುದಿನಗಳ ಆಸೆಯಾಗಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಇನ್ನೂ, ಪ್ರಕಾಶ್ ಬುದೂರು ಅವರ ನಿರ್ಮಾಣವಂತೂ ಬಹಳ ಅಚ್ಚುಕಟ್ಟಾಗಿದೆ. ನಾನು ನೋಡಿದ ಅತ್ತ್ಯುತ್ತಮ ನಿರ್ಮಾಣ ಸಂಸ್ಥೆ ಇದು. ಪಿ.ಸಿ.ಶೇಖರ್ ಅವರು ಈ ಚಿತ್ರದ ಕಥೆ ಹೇಳುತ್ತಿದ್ದಾಗಲೇ ನನ್ನ ಪಾತ್ರ ಹಾಗೂ ಕಥೆ ಬಹಳ ಇಷ್ಟವಾಯಿತು.

ನಾನು ಈ ಚಿತ್ರದಲ್ಲಿ ವಿದ್ಯಾವಂತ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಹಳ್ಳಿಯಲ್ಲಿ ರೈತರು ಕಷ್ಟಗಳಿಗೆ ಧ್ಚನಿಯಾಗುವ ಹೆಣ್ಣುಮಗಳು. ನಮ್ಮೆಲ್ಲರ ಮೆಚ್ಚಿನ ಶಿವಣ್ಣ, ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ ಹೀಗೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸಿರುವ ಈ ಚಿತ್ರದಲ್ಲಿ ಅಭಿನಯಿಸಿರುವುದು ನನಗೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಟಿ ನಮ್ರತಾ ಗೌಡ.

ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಟ ಕಿರಣ್ ಶ್ರೀನಿವಾಸ್ ಹೀಗೆ ಹೇಳಿದ್ದಾರೆ.. "ಮಹಾನ್" ಚಿತ್ರದ ನನ್ನ ಪಾತ್ರದ ಫಸ್ಟ್ ಲುಕ್ ಅನಾವರಣವಾಗಿದೆ. ಹಳ್ಳಿಯಿಂದ ನಗರಕ್ಕೆ ಬಂದು ವಿದ್ಯಾವಂತನಾದ ಹುಡುಗನಿಗೆ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಹಂಬಲ. ಆದರೆ ಅವನು ಹಳ್ಳಿಗೆ ಬಂದು ಏನು ಮಾಡುತ್ತಾನೆ ಎಂಬುದೆ ನನ್ನ ಪಾತ್ರದ ಕಥಾ ಸಾರಾಂಶ.

ಸಮಾಜಕ್ಕೆ ಒಂದೊಳ್ಳೆ ಸಂದೇಶವಿರುವ ಚಿತ್ರದಲ್ಲಿ ಅಭಿನಯಿಸಿರುವುದು ಬಹಳ ಸಂತೋಷವಾಗಿದೆ. ಪಿ.ಸಿ.ಶೇಖರ್ ನಿರ್ದೇಶನದಲ್ಲಿ , ಪ್ರಕಾಶ್ ಬುದೂರು ಅವರ ನಿರ್ಮಾಣದಲ್ಲಿ ಹಾಗೂ ಅನೇಕ ಹಿರಿಯ ಅನುಭವಿ ಕಲಾವಿದರ ತಾರಾಬಳಗದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿಬರುತ್ತಿದೆ. ಅನೇಕ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿ ನನಗೆ ಬಹಳ ಖುಷಿಯಾಗಿದೆ ಎಂದಿದ್ದಾರೆ.
ನಮ್ಮ "ಮಹಾನ್" ಚಿತ್ರದಲ್ಲಿ ಕನ್ನಡದ "ಮಹಾನ್" ಕಲಾವಿದರು ಅಭಿನಯಿಸಿರುವುದು ನಿಜಕ್ಕೂ ಸಂತೋಷವಾಗಿದೆ. ನಮ್ಮ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದ್ದೇವೆ. ಈವರೆಗೂ ಮಾಡಿರದ ಪಾತ್ರಗಳಲ್ಲಿ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ "ಮಹಾನ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

ನಮ್ಮ ಆಕಾಶ ಪಿಕ್ಚರ್ಸ್‌ ಸಂಸ್ಥೆಯ ಮೊದಲ ನಿರ್ಮಾಣದ "ಮಹಾನ್", ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಚಿತ್ರ. ಇದೊಂದು ರೈತರ ಕುರಿತಾದ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವೂ ಹೌದು. ವಿಜಯ ರಾಘವೇಂದ್ರ ನಮ್ಮ ಚಿತ್ರದ ನಾಯಕರಾಗಿ ನಟಿಸಿದ್ದಾರೆ‌‌.

ವಿಶೇಷ ಪಾತ್ರದಲ್ಲಿ ಶಿವರಾಜಕುಮಾರ್ ಅವರು ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಅನುಭವಿ ಹಾಗೂ ಹೆಸರಾಂತ ಕಲಾವಿದರು ತಾರಾಬಳಗದಲ್ಲಿದ್ದಾರೆ. ಜನಪ್ರಿಯ ಕಲಾವಿದರಾದ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ ಎನ್ನುತ್ತಾರೆ ನಿರ್ಮಾಪಕ ‌ಪ್ರಕಾಶ್ ಬುದೂರು.

ಕೆಂಡದೋಕುಳಿ ಗಂಡನಾ ಹಾಡು ಬಂತು: ಇದು ಸಿಟಿಲೈಫ್ ಸಾಂಗು ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರ ‘ಸಿಟಿ ಲೈಟ್ಸ್’ ಬಿಡುಗಡೆಗೆ ಸಜ್ಜಾಗಿದೆ. ನಟ ...
07/08/2026

ಕೆಂಡದೋಕುಳಿ ಗಂಡನಾ ಹಾಡು ಬಂತು: ಇದು ಸಿಟಿಲೈಫ್ ಸಾಂಗು

ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರ ‘ಸಿಟಿ ಲೈಟ್ಸ್’ ಬಿಡುಗಡೆಗೆ ಸಜ್ಜಾಗಿದೆ. ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಈಗಾಗಲೇ ಎರಡು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿಟಿಲೈಟ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದೆ.

ಪ್ರತಿ ಬಾರಿ ಜಾನಪದ, ಬುಡಕಟ್ಟು ಹಾಡುಗಳಿಗೆ ಹೊಸ ರೂಪ ಕೊಟ್ಟು ಪ್ರೇಕ್ಷಕರ ಮುಂದಿಡುವ ದುನಿಯಾ ವಿಜಯ್‌, ಈ ಬಾರಿ ಮಾದಪ್ಪನ ಜಾನಪದ ಹಾಡುಗಳ ಸಾಲುಗಳನ್ನ ಬಳಸಿಕೊಂಡು ಈಗಿನ ಟ್ರೆಂಡ್‌ ಗೆ ತಕ್ಕಂತೆ ಹೊಸ ಸಾಂಗ್‌ ರಿಲೀಸ್‌ ಮಾಡಿದ್ದಾರೆ.

ಅದೇ ಕೆಂಡದೋಕುಳಿ ಗಂಡನಾ ಹಾಡನ್ನು ಜಾನಪದ ಕಲಾವಿದ ಕಂಸಾಳೆ ಧನುಷ್‌ ಹಾಡಿದ್ದಾರೆ. ಇನ್ನು ಹಾಡಲ್ಲಿ ಬರುವ ರ್ಯಾಪ್‌ ಸಾಲುಗಳನ್ನ ಅಮೋಘ್‌ ಬಾಲಾಜಿ ಹಾಡಿದ್ದಾರೆ…ಸಿಟಿಲೈಟ್ಸ್‌ ಸಿನಿಮಾಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕುಮಾರ್ ಅವರ ಕಿರಿಯ ಮಗಳು ಮೋನಿಷಾ ವಿಜಯ್ ಕುಮಾರ್‌ ಸ್ಯಾಂಡಲ್ ‌ವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಸಾಂಗ್‌ ರಿಲೀಸ್‌ ನಲ್ಲಿ ಮಾತನಾಡಿದ ವಿನಯ್ ರಾಜ್‌ಕುಮಾರ್, “ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸುವ ಸವಾಲುಗಳು ಮತ್ತು ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಈ ಸಿನಿಮಾದ ಮುಖ್ಯ ಕಥಾವಸ್ತು,

ಇನ್ನು ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡು ಚಿತ್ರೀಕರಣ ಮಾಡಲು ಅವಕಅಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು.

ತಮ್ಮ ಚೊಚ್ಚಲ ಅಭಿನಯದ ಕುರಿತು ಹಂಚಿಕೊಂಡ ಮೊನಿಷಾ, “ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ” ಎಂದರು.

ಅಣ್ಣಾವ್ರ ಕುಟುಂಬದ ಕುಡಿಯನ್ನ ನಿರ್ದೇಶಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ವಿಜಯ್ ಕುಮಾರ್, “ನಾನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ ತಂದಿದೆ”ಎಂದಿದ್ದಾರೆ.

‘ಸಲಗ’ ಮತ್ತು ‘ಭೀಮ’ ಚಿತ್ರಗಳಲ್ಲಿ ಹಿಟ್ ಜೋಡಿಯಾಗಿದ್ದ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಸಂಭಾಷಣೆಗಾರ ಮಾಸ್ತಿ ಈ ಚಿತ್ರದಲ್ಲೂ ಒಂದಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಕಂದಮ್ಮ’ ಮತ್ತು ‘ಬಾವ ಬಾವ’ (ರ್ಯಾಪ್) ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.

ವಿಜಯ್ ಕುಮಾರ್ ಮತ್ತು ವಿಕ್ರಮ್ ಆರ್ಯ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.. ಇನ್ನು ‘ಕೆಡಿ’, ‘ಜನನಾಯಗನ್’ ಹಾಗೂ ‘ಟಾಕ್ಸಿಕ್’ ನಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ‘ಸಿಟಿ ಲೈಟ್ಸ್’ ಚಿತ್ರವನ್ನು ವಿತರಣೆ ಮಾಡುತ್ತಿದೆ.

ಬಾಸ್ ಹೇಗಿದೆ ಗೊತ್ತಾ? ಕೇಳಿದ್ದೆಲ್ಲವೂ ನಿಜಾನ? ನೋಡಿದರೆ ಗೊತ್ತಾಗುತ್ತೆಚಿತ್ರ ವಿಮರ್ಶೆಚಿತ್ರ: ಬಾಸ್‌ನಿರ್ದೇಶನ: ವಿ.ಲವನಿರ್ಮಾಣ: ಸಿರಿ ಪ್ರೊಡ...
07/08/2026

ಬಾಸ್ ಹೇಗಿದೆ ಗೊತ್ತಾ? ಕೇಳಿದ್ದೆಲ್ಲವೂ ನಿಜಾನ? ನೋಡಿದರೆ ಗೊತ್ತಾಗುತ್ತೆ

ಚಿತ್ರ ವಿಮರ್ಶೆ

ಚಿತ್ರ: ಬಾಸ್‌
ನಿರ್ದೇಶನ: ವಿ.ಲವ
ನಿರ್ಮಾಣ: ಸಿರಿ ಪ್ರೊಡಕ್ಷನ್
ತಾರಾಗಣ: ತನುಷ್‌ ಶಿವಣ್ಣ, ವಂದಿತಾ ಗೌಡ, ಪಾಯಲ್‌ ಚೆಂಗಪ್ಪ, ಸಂದೀಪ್ ನಿನಾಸಂ, ಭಾವನಾ ಸತ್ಯ ಇತರರು.

"ನೋಡು ನಾನ್ ಸಾಯೋವರೆಗೂ ನಿನ್ನ‌‌ನ್ನು ಮಗು ಥರ ನೋಡ್ಕೋತೀನಿ. ಹೇಗಾದರೂ ಮಾಡಿ ಬಚಾವ್ ಮಾಡು..."
ಆಕೆ ತನ್ನ ಪ್ರಿಯಕರನ ಮುಂದೆ ಗೋಳಾಡುತ್ತಲೇ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು ಮರ್ಡರ್‌ ಆಗಿರುತ್ತೆ. ಆ ಕೊಲೆಯ ಹಿಂದೆ ಅವಳಿಗೆ ಹಾಗು ಅವನಿಗೆ ಗೊತ್ತಿರುವ ಗ್ಯಾಂಗ್‌ ಕೈವಾಡ ಇರುತ್ತೆ. ಒಬ್ಬ ಜನಪ್ರಿಯ ವ್ಯಕ್ತಿಯ ಪ್ರೇಯಸಿಗೆ ಅಸಹ್ಯ ಮೆಸೇಜ್‌ ಮಾಡಿದ ಅನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಆ ಗ್ಯಾಂಗ್ ಕಿಡ್ನಾಪ್‌ ಮಾಡಿ ಥಳಿಸಿ, ಸಾಯಿಸಿದ ಘಟನೆ ಕುರಿತಾದ ಸಿನಿಮಾ ಕಥೆ ಇದು.
ಇಷ್ಟು ಹೇಳಿದ ಮೇಲೆ ಕಥೆ ಯಾವುದು ಅಂತ ಸುಲಭವಾಗಿ ಅರ್ಥವಾದೀತು. ಯೆಸ್‌, ಇದು ನಟ ದರ್ಶನ್‌ ಅವರು ಜೈಲಿಗೆ ಸೇರಲು ಕಾರಣವಾದ ಒಂದು ಕೊಲೆಯ ಸುತ್ತ ನಡೆದ ಸಿನಿಮಾನಾ ಅನ್ನುವ ಪ್ರಶ್ನೆಗಳು ಅನೇಕರಿಗೆ ಇದ್ದವು. ದರ್ಶನ್‌ ವಿರುದ್ಧ ಮಾಡಿರುವ ಚಿತ್ರ ಇರಬಹುದಾ? ಅದು ಹಾಗಂತೆ, ಹೀಗಂತೆ ಅನ್ನುವ ಒಂದಷ್ಟು ಪ್ರಶ್ನೆಗಳಿದ್ದವು. ಆ ಚಿತ್ರ ಹೇಗೆಲ್ಲಾ ಮೂಡಿಬಂದಿರುತ್ತೆ ಎನ್ನುವ ಕುತೂಹಲವೂ ಇತ್ತು.

ಅಂತಹ ಪ್ರಶ್ನೆಗೆ ಈ "ಬಾಸ್‌" ಉತ್ತರ ಕೊಟ್ಟಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ದರ್ಶನ್‌ ಸಿಲುಕಿದ್ದು ಹೇಗೆ? ಅವರನ್ನು ಕಿಡ್ನಾಪ್‌ ಮಾಡಿ ಬೆಂಗಳೂರಿನವರೆಗೆ ಕರೆತಂದಿದ್ದು ಯಾರು? ಈ ಪ್ರಕರಣದ ಮೂಲ ರೂವಾರಿ ಯಾರು? ಆ ಸ್ಟಾರ್‌ ಸಿಲುಕಿದ್ದ ಹೇಗೆ? ಅನ್ನುವ ಸ್ಟೋರಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಕಥೆಗೆ ದೃಶ್ಯ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ. ವಿಶೇಷವೆಂದರೆ ಇಲ್ಲಿ ಪೊಲೀಸ್‌ ಇಲಾಖೆಯ ಕಾರ್ಯವೈಖರಿ! ಅಲ್ಲೂ ಒಂದಷ್ಟು ತಪ್ಪು ಒಪ್ಪುಗಳಿವೆ. ಅದನ್ನಿಲ್ಲಿ ನೀಟ್‌ ಆಗಿ ಪ್ರೆಸೆಂಟ್‌ ಮಾಡಲಾಗಿದೆ. ಇದೊಂದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ, ಈ ಚಿತ್ರದಲ್ಲಿ ದರ್ಶನ್‌ ಅವರ ನಿಜಗುಣವನ್ನು ಚಿತ್ರಿಸಲಾಗಿದೆ. ದರ್ಶನ್‌ ಮಾಡಿದ್ದೇನು ಅನ್ನುವುದನ್ನೂ ಇಲ್ಲಿ ಎಳೆಎಳೆಯಾಗಿ ಬಿಂಬಿಸಲಾಗಿದೆ. ಒಂದು ಹೆಣ್ಣಿನಿಂದ ಏನೆಲ್ಲಾ ಆಯ್ತು ಅನ್ನುವುದನ್ನು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಸಾರ್ಥಕ.

ಬಹುತೇಕ ಜನರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆಯ ಘಟನೆ ಬಗ್ಗೆ ಗೊತ್ತು. ಅದಕ್ಕೂ ಈ ಚಿತ್ರದ ಕಥೆಗೂ ಸಾಮ್ಯತೆ ಇದೆ. ಆದರೆ, ಚಿತ್ರತಂಡ ಆರಂಭದಿಂದಲೂ ಇದು ಅದಲ್ಲ, ಅದು ಇಲ್ಲಿರಲ್ಲ ಅಂದುಕೊಂಡೇ ಸಿನಿಮಾ ಮಾಡಿತ್ತು. ಕೊನೆಗೂ ಬಾಸ್‌ ದರ್ಶನವಾಗಿದೆ. ಇಲ್ಲಿ ಕೆಲವು ಸೂಕ್ಷ್ಮ ವಿಷಯಗಳಿವೆ. ಅದನ್ನು ತೆರೆಯ ಮೇಲೆ ನೋಡಬೇಕು. ಅಷ್ಟಕ್ಕೂ ಸಿನಿಮಾದ ಹೀರೋ ಪ್ರೇಯಸಿಗೆ ವ್ಯಕ್ತಿಯೊಬ್ಬ ಮೆಸೇಜ್‌ ಕಳಿಸಿ ಅಶ್ಲೀಲವಾಗಿ ಮಾತಾಡಿದ್ದು, ಕೆಟ್ಟದ್ದಾಗಿ ವರ್ತಿಸಿದ್ದು, ಆ ವ್ಯಕ್ತಿಯನ್ನು ಹುಡುಕಿ, ಸ್ಕೆಚ್‌ ಹಾಕಿ ಕಿಡ್ನಾಪ್‌ ಮಾಡಿಕೊಂಡು ಬಂದು, ಥಳಿಸಿದ್ದು, ನಂತರ ಆತ ಆ ಹೊಡೆತಕ್ಕೆ ಸತ್ತಿದ್ದು ಎಲ್ಲವನ್ನೂ ರೋಚಕವಾಗಿ ಇಲ್ಲಿ ತೋರಿಸಲಾಗಿದೆ.

ಇಲ್ಲಿ ಮೊದಲರ್ಧಕ್ಕಿಂತ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತೆ. ದ್ವಿತಿಯಾರ್ಧ ಮುಂದೇನಾಗುತ್ತೆ ಎಂಬ ಕುತೂಹಲಕ್ಕೆ ಕರೆದೊಯ್ಯುತ್ತೆ. ಚಿತ್ರಕಥೆ ಇನ್ನಷ್ಟು ವೇಗ ಪಡೆದುಕೊಳ್ಳಬೇಕಿತ್ತು. ಕೆಲವು ಸಣ್ಣಪುಟ್ಟ ಕಂಟಿನ್ಯುಟಿ ಮಿಸ್‌ ಆಗಿದೆಯಾದರೂ, ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಒಂದು ಕ್ರೈಮ್‌ ಥ್ರಿಲ್ಲರ್‌ ಕಥೆಯಲ್ಲಿ ಏನಿರಬೇಕು, ಹೇಗಿರಬೇಕು ಎಂಬ ಅರಿವು ನಿರ್ದೇಶಕರಿಗಿದೆ. ಹಾಗಾಗಿ ಬಾಸ್‌ ಒಂದು ಕುತೂಹಲದ ಸಿನಿಮಾವಾಗಿ ಮೂಡಿಬಂದಿದೆ. ಇಲ್ಲಿ ಆಕ್ಷನ್‌ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ. ಅಂತಹ ಸಂದರ್ಭವೇ ಇಲ್ಲಿಲ್ಲ. ಕಾರಣ, ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಮುಖ್ಯವಾಗಿ ಇಲ್ಲಿ ಅಚ್ಚರಿ ಎನ್ನುವ ಸಂಗತಿಗಳಿವೆ. ಅದೇ ಸಿನಿಮಾದ ಹೈಲೆಟ್.‌ ಆ ಸಂಗತಿ ಏನೆಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲು ಅಡ್ಡಿ ಇಲ್ಲ.

ಇದು ನಾವು-ನೀವೆಲ್ಲ ಕೇಳಿದ ಕಥೆಯಾದರೂ, ಸ್ವಲ್ಪ ಬದಲಾವಣೆಗಳು ಇಲ್ಲಿವೆ. ಇನ್ನು, ಸಿನಿಮಾದ ಆರಂಭ ಕೊಂಚ ವೇಗಮಿತಿ ಕಮ್ಮಿ ಎನಿಸುತ್ತೆ. ಇಲ್ಲಿ ಸಂಗೀತ ವೇಗವನ್ನು ಎತ್ತಿ ಹಿಡಿದಿದೆ. ಕ್ಯಾಮೆರಾ ಕೈಚಳಕದಲ್ಲೂ ಬಾಸ್‌ ಅಂದ-ಚೆಂದವಿದೆ. ತನುಷ್‌ ಶಿವಣ್ಣ ಇಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನುಕಂಪ, ಪಶ್ಚಾತ್ತಾಪ ಸಂದರ್ಭದ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ವಂದಿತಾ ಪ್ರೇಯಸಿ ಪಾತ್ರಕ್ಕೆ ಸರಿಹೊಂದಿದ್ದಾರೆ. ಪಾಯಲ್‌ ಚೆಂಗಪ್ಪ ಕೂಡ ಗಮನಸೆಳೆಯುತ್ತಾರೆ. ಸಂದೀಪ್‌ ಅಮಾಯಕನಂತಿದ್ದರೂ, ರೊಚ್ಚಿಗೇಳಿಸುವ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಪೊಲೀಸ್‌ ಅಧಿಕಾರಿ ಪಾತ್ರಗಳು ಸೈ ಎನಿಸಿಕೊಂಡರೆ, ಗ್ಯಾಂಗ್‌ನಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ನ್ಯಾಯ ಸಲ್ಲಿಸಿವೆ. ಮುಖ್ಯವಾಗಿ ಇಡೀ ಸಿನಿಮಾ ಥ್ರಿಲ್‌ ಎನಿಸುತ್ತೆ. ಕಾರಣ, ಮರ್ಡರ್‌ ಸ್ಟೋರಿ. ಒಟ್ಟಾರೆ ಕೇಳಿದ್ದ ಕಥೆಯನ್ನು, ನೋಡುವ ಮಜಾನೇ ಬೇರೆ.

ಮಹಾನ್" ಚಿತ್ರದ ಪ್ರಮುಖ ಆಕರ್ಷಣೆ ರಾಧಿಕಾ ನಾರಾಯಣ್ ! ಫಸ್ಟ್ ಲುಕ್ ಹೊರಬಂತು...ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರು...
04/08/2026

ಮಹಾನ್" ಚಿತ್ರದ ಪ್ರಮುಖ ಆಕರ್ಷಣೆ ರಾಧಿಕಾ ನಾರಾಯಣ್ ! ಫಸ್ಟ್ ಲುಕ್ ಹೊರಬಂತು...

ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬೂದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ "ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ "ರಂಗಿತರಂಗ" ಖ್ಯಾತಿಯ ರಾಧಿಕಾ ನಾರಾಯಣ್ ಹಾಗೂ ಖ್ಯಾತ ನಟ ಮಿತ್ರ ಅಭಿನಯಿಸಿದ್ದಾರೆ. ಇತ್ತೀಚೆಗೆ "ಮಹಾನ್" ಚಿತ್ರತಂಡ ರಾಧಿಕಾ ನಾರಾಯಣ್ ಹಾಗೂ ಮಿತ್ರ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

"ಮಹಾನ್" ಚಿತ್ರದಲ್ಲಿ ನನ್ನದು ನರ್ಸ್ ಪಾತ್ರ. ಪಕ್ಕಾ ಗ್ರಾಮೀಣ ಹೆಣ್ಣು ಮಗಳ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇನೆ. ನಾನು ನಗರ ಪ್ರದೇಶದಲ್ಲಿ ಬೆಳೆದವಳು. ಹಳ್ಳಿ ಹುಡುಗಿ ಪಾತ್ರ ಮಾಡಿರುವುದು ಬಹಳ ಖುಷಿಯಾಗಿದೆ. ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಪಾತ್ರವೂ ಹೌದು. ಇನ್ನೂ, ಪಿ.ಸಿ.ಶೇಖರ್ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಈ ಹಿಂದೆಯೇ ಅವರ ನಿರ್ದೇಶನದ ಚಿತ್ರದಲ್ಲಿ ನಾನು ನಟಿಸಬೇಕಿತ್ತು‌. ಈಗ ಕಾಲ ಕೂಡಿ ಬಂದಿದೆ. ನಿರ್ಮಾಪಕ ಪ್ರಕಾಶ್ ಬೂದೂರು ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರು ವಿಶೇಷಪಾತ್ರದಲ್ಲಿ ಅಭಿನಯಿಸಿರುವುದು ಈ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ವಿಜಯ ರಾಘವೇಂದ್ರ, ವರ್ಷ ಬೊಳ್ಳಮ್ಮ, ಮಿತ್ರ ಮುಂತಾದ ಕಲಾವಿದರ ಜೊತೆಗೆ ನಟಿಸಿರುವುದು ಹಾಗೂ ಚಿತ್ರೀಕರಣದ ಅನುಭವ ತುಂಬಾ ಸಂತೋಷ ತಂದಿದೆ. ನನ್ನ ಅಭಿಮಾನಿಗಳು ಅಭಿಮಾನ ಪಡುವ ಚಿತ್ರ "ಮಹಾನ್" ಆಗಲಿದೆ ಎಂದು ನಟಿ ರಾಧಿಕಾ ನಾರಾಯಣ್ ತಿಳಿಸಿದ್ದಾರೆ.
ನಾನು "ರಾಗ" ಚಿತ್ರದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಅವರೊಟ್ಟಿಗೆ ಈ ಚಿತ್ರ ಮಾಡುತ್ತಿದ್ದೇನೆ. "ರಾಗ" ಚಿತ್ರದ ನನ್ನ ಪಾತ್ರಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ "ಮಹಾನ್" ಚಿತ್ರದಲ್ಲೂ ಅಂತಹುದೇ ಒಂದು ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ನಾಯಕ ವಿಜಯ ರಾಘವೇಂದ್ರ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸದಾ ನಾಯಕನ ಜೊತೆಗೆ ಸಾಗುವ ಪಾತ್ರವಿದು. ನಾಯಕನದು ಸೌಮ್ಯ ಸ್ವಭಾವವಾದರೆ, ನನ್ನದು ಸ್ವಲ್ಪ ಮುಂಗೋಪಿಯ ಪಾತ್ರ. ಇದೊಂದು ರೈತರ ಕುರಿತಾದ ಚಿತ್ರ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಪ್ರಕಾಶ್ ಬೂದೂರು ಅವರು ಬಹಳ ಮುತುವರ್ಜಿಯಿಂದ ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರು ಸಹ ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಂತಹ ಅದ್ಭುತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಿದ್ದು ನನಗೆ ಬಹಳ ಖುಷಿಯಾಗಿದೆ. ನನ್ನಷ್ಟೆ ನನ್ನ ಪಾತ್ರವನ್ನು ಪ್ರೇಕ್ಷಕರು ಸಹ ಇಷ್ಟ ಪಡುತ್ತಾರೆ ಎಂಬ ನಂಬಿಕೆ ಇದೆ ಎಂದು ನಟ ಮಿತ್ರ ತಿಳಿಸಿದ್ದಾರೆ.
ಈ ಹಿಂದೆ ಅವರು ಮಾಡಿರದ ಪಾತ್ರದಲ್ಲಿ ಅವರು "ಮಹಾನ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ರಾಘವೇಂದ್ರ ಅವರದು ಈ ಚಿತ್ರದಲ್ಲಿ ಸಾಮಾಜಿಕ ಕಾಳಜಿ ಇರುವ ರೈತನ ಪಾತ್ರ. ಅವರ ಜೀವನದಲ್ಲಿ ಸಾಕಷ್ಟು ಏರಿಳಿತಗಳಿರುತ್ತದೆ‌. ಅವರ ಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಅವರನ್ನು ಹುರಿದುಂಬಿಸುವ ಪಾತ್ರದಲ್ಲಿ ಮಹಿಳೆ ಇದ್ದರೆ ಉತ್ತಮ ಎಂಬುದು ನನ್ನ ಅನಿಸಿಕೆ ಆಗಿತ್ತು. ಈ ಪಾತ್ರದಲ್ಲಿ ರಾಧಿಕಾ ಅವರು ನಟಿಸಿದ್ದಾರೆ. ನರ್ಸ್ ಆಗಿಯೂ, ಸಾಮಾಜಿಕ ಕಾಳಜಿ ಇರುವ ಹೆಣ್ಣಾಗಿ ರಾಧಿಕಾ ನಾರಾಯಣ್ ಅವರು ಅಭಿನಯಿಸಿದ್ದು, ವಿಜಯ ರಾಘವೇಂದ್ರ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನನ್ನ ಹಾಗೂ ಮಿತ್ರ ಅವರ ಕಾಂಬಿನೇಶನ್ ನಲ್ಲಿ ಬಂದ "ರಾಗ" ಚಿತ್ರ ಇಂದು ಕೂಡ ಜನಪ್ರಿಯ. ಈಗ "ಮಹಾನ್" ಚಿತ್ರದಲ್ಲಿ ನ್ಯಾಯದ ಪರ ಹೋರಾಡುವ ನಾಯಕ ವಿಜಯ ರಾಘವೇಂದ್ರ ಅವರಿಗೆ ಸದಾ ಬೆಂಗಾವಲಾಗಿ ಇರುವ, ನಾಯಕನ ಆಗುಹೋಗುಗಳಿಗೆ ಸ್ಪಂದಿಸುವ ಪಾತ್ರ ಮಿತ್ರ ಅವರದು. ಇಬ್ಬರ ನಡುವೆ ವಯಸ್ಸಿನ ಅಂತರ ಬಹಳ ಇದ್ದರೂ, ಈ ಸ್ನೇಹಿತರಂತೆ ಬಲವಾದ ನಂಟು ಇರುತ್ತದೆ. ಬಹಳ ಪ್ರಾಮುಖ್ಯತೆಯಿರುವ ಪಾತ್ರ‌. ಮಿತ್ರ ಅವರ ಪಾತ್ರ ಮತ್ತು ಅವರ ಅಭಿನಯ ಎಲ್ಲರ ಮನ ಮುಟ್ಟುತ್ತದೆ ಎಂದು ನಿರ್ದೇಶಕ ಪಿ‌‌.ಸಿ.ಶೇಖರ್ ತಿಳಿಸಿದ್ದಾರೆ. .

"ಮಹಾನ್" ನಮ್ಮ ಆಕಾಶ ಪಿಕ್ಚರ್ಸ್‌ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ. ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡುವ ಹಂಬಲ ನಮ್ಮ ಸಂಸ್ಥೆಯದು. ಅದರ ಮೊದಲ ಪ್ರಯತ್ನವಾಗಿ ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ "ಮಹಾನ್" ಚಿತ್ರ ನಿರ್ಮಾಣವಾಗುತ್ತಿದೆ. "ರಂಗಿತರಂಗ" ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಹಾಗೂ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಮಿತ್ರ ಅವರಂತಹ ಅನುಭವಿ ನಟರು ಅಭಿನಯಿಸಿರುವುದು ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ಮಾಪಕ ‌ಪ್ರಕಾಶ್ ಬೂದೂರು.

ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿಯೇ  ರಾಮಾಯಣ ದಾಖಲೆ!ಕೇವಲ 4 ದಿನಗಳಲ್ಲಿ 800 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದ ನಿತೀಶ್‌ ತಿವಾರಿ ನಿರ್ದೇಶನ...
04/08/2026

ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿಯೇ ರಾಮಾಯಣ ದಾಖಲೆ!

ಕೇವಲ 4 ದಿನಗಳಲ್ಲಿ 800 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದ ನಿತೀಶ್‌ ತಿವಾರಿ ನಿರ್ದೇಶನದ 'ರಾಮಾಯಣ' ಟ್ರೇಲರ್

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹತ್ವಾಕಾಂಕ್ಷೆಯ ಚಿತ್ರವೆನಿಸಿರುವ 'ರಾಮಾಯಣ' ತನ್ನ ಮೊದಲ ಅಧಿಕೃತ ಟ್ರೈಲರ್ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವಿಶ್ವದಾದ್ಯಂತ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಚಿತ್ರದ ಟ್ರೈಲರ್, ಬಿಡುಗಡೆಯಾದ ಕೇವಲ 4 ದಿನಗಳಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 800 ಮಿಲಿಯನ್‌ ಗೂ ಅಧಿಕ ವೀಕ್ಷಣೆಗಳನ್ನು ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಹಾಲಿವುಡ್‌ನ ಹೆಮ್ಮೆಯ ಚಿತ್ರಗಳಾದ ಮಾರ್ವೆಲ್‌ನ 'ಅವೆಂಜರ್ಸ್: ಡೂಮ್ಸ್‌ಡೇ' (936 ಮಿಲಿಯನ್) ಮತ್ತು 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' (1.1 ಬಿಲಿಯನ್) ಚಿತ್ರಗಳ ಟ್ರೈಲರ್ ವೀಕ್ಷಣೆಗಳ ಸಾಲಿನಲ್ಲಿ 'ರಾಮಾಯಣ' ಚಿತ್ರವು ಹೆಮ್ಮೆಯಿಂದ ನಿಂತಿದ್ದು, ಭಾರತೀಯ ಸಿನಿಮಾದ ಶಕ್ತಿಯನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ದಿದೆ. ಈ ಜಾಗತಿಕ ಸಫಲತೆಯು ಭಾರತೀಯ ಸಿನಿಮಾದ ಸ್ಟ್ಯಾಂಡರ್ಡ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎನ್ನಬಹುದು.

ಈ ಮಹಾಕಾವ್ಯದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ರಣಬೀರ್ ಕಪೂರ್ ಶ್ರೀರಾಮನಾಗಿ, ನಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ, ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿದ್ದು, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು, ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ನಮಿತ್ ಮಲ್ಹೋತ್ರಾ ಹಾಗೂ ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ DNEG ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸುತ್ತಿದ್ದಾರೆ.

ಕಟಿಂಗ್-ಎಡ್ಜ್ ವಿಷುಯಲ್ಸ್ ಮತ್ತು ವಿಶ್ವ ದರ್ಜೆಯ ಕಥೆಗಾರಿಕೆಯೊಂದಿಗೆ ಈ ಸಿನಿಮಾ ರೂಪುಗೊಳ್ಳುತ್ತಿದೆ.
ಈ ಎರಡು ಭಾಗಗಳ ಬ್ರಹ್ಮಾಂಡ ಮಹಾಕಾವ್ಯವು ಐಮ್ಯಾಕ್ಸ್ (IMAX) ತಂತ್ರಜ್ಞಾನದೊಂದಿಗೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಇದರ ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಅದ್ದೂರಿಯಾಗಿ ತೆರೆಕಾಣಲಿದೆ. ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ವಿಶ್ವದ ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿರುವ 'ರಾಮಾಯಣ' ಚಿತ್ರವು ಅಂತರರಾಷ್ಟ್ರೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತವಾಗಿದೆ.

ತನುಷ್  ಅಭಿನಯದ ‘ಬಾಸ್’ ಚಿತ್ರ ಬಿಡುಗಡೆಗೆ ದರ್ಶನ್  ಒಪ್ಪಿಗೆ .                                                                  ...
04/08/2026

ತನುಷ್ ಅಭಿನಯದ ‘ಬಾಸ್’ ಚಿತ್ರ ಬಿಡುಗಡೆಗೆ ದರ್ಶನ್ ಒಪ್ಪಿಗೆ .
ಲವ ವಿ ನಿರ್ದೇಶನದ ಈ ಚಿತ್ರ ಆಗಸ್ಟ್ 7ಕ್ಕೆ ರಿಲೀಸ್

ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಲವ ವಿ ನಿರ್ದೇಶನದ 'ಬಾಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿತ್ತು. ಈ ಚಿತ್ರದ ಬಿಡುಗಡೆಗೆ ತಡೆ ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದರ್ಶನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ‘ಬಾಸ್’ ಚಲನಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಅಲ್ಲದೆ, ದರ್ಶನ್ ಅವರು ಸಹ "ಬಾಸ್" ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ಅವರ ಪರ ವಕೀಲರ ಮುಂದೆ ಹೇಳಿದ್ದಾರೆ. ಆಗಸ್ಟ್ 7 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹೈಕೋರ್ಟ್ ನಲ್ಲಿ ನಮ್ಮ ಚಿತ್ರ ಬಿಡುಗಡೆಗೆ ಅವಕಾಶ ಸಿಕ್ಕ ನಂತರ ನಾನು ವಿಜಯಲಕ್ಷ್ಮಿ ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ಪರ ವಕೀಲರಾದ ಪ್ರಥಮ್ ಅವರು ವಿಜಯಲಕ್ಷ್ಮಿ ಅವರ ಜೊತೆಗೆ ಮಾತನಾಡಿ, ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿಕೊಟ್ಟರು. ನಾನು ವಿಜಯಲಕ್ಷ್ಮಿ ದರ್ಶನ್ ಅವರ ಜೊತೆಗೆ ಮಾತನಾಡಿದೆ. ಅವರು ಮೊದಲು ಕೇಳಿದ ಪ್ರಶ್ನೆ, ನಿಮ್ಮ ಸಿನಿಮಾದಲ್ಲಿ ನಮ್ಮ ಕುಟುಂಬದ ಕುರಿತಾದ ಯಾವುದೇ ಸನ್ನಿವೇಶಗಳು ಇಲ್ಲ ತಾನೆ ಎಂದರು. ನಾನು ಇಲ್ಲ ಅಂತ ಹೇಳಿದೆ. ನಮ್ಮ ವಕೀಲರು ನಿಮ್ಮ ಚಿತ್ರವನ್ನು ನೋಡಿ ನಮಗೆ ತಿಳಿಸುತ್ತಾರೆ. ಯಾವುದಾದರೂ ಕುಟುಂಬಕ್ಕೆ ಸಂಬಂಧಿಸಿದ ಸನ್ನಿವೇಶಗಳಿದ್ದರೆ ನೀವು ಅದನ್ನು ತೆಗೆಯಬೇಕಾಗುತ್ತದೆ ಎಂದರು. ನಾನು ಆಗಲಿ ಎಂದೆ. ವಕೀಲರಾದ ಪ್ರಥಮ್ ಅವರು ಚಿತ್ರ ನೋಡಿ,‌ ವಿಜಯಲಕ್ಷ್ಮೀ ದರ್ಶನ್ ಹಾಗೂ ದರ್ಶನ್ ಅವರಿಗೆ ವಿಷಯ ತಿಳಿಸಿದ್ದಾರೆ. ಮೊದಲಿನಿಂದಲೂ ಹೊಸಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಹಾಗೂ ಒಂದು ಚಿತ್ರ ನಿರ್ಮಾಣದ ಹಿಂದೆ ಎಷ್ಟು ಕಷ್ಟಗಳಿದೆ ಎಂದು ಅರಿತಿರುವ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಹೋಗುವುದು ಬೇಡ. ಅವರು ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರು ಸಹ ಫೋನ್ ನಲ್ಲಿ ಮಾತನಾಡಿ ಚಿತ್ರ ಬಿಡುಗಡೆ ಮಾಡಿ. ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹ ನೀಡಿ ಎಂದು ಚಿತ್ರದ ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ತಿಳಿಸಿದರು.

ನಿರ್ದೇಶಕ ಲವ ಅವರು ಸಹ ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಿದರು. ನಾಯಕಿ ಪಾಯಲ್ ಚಂಗಪ್ಪ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಶರತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಗಲ್ಫ್ ಕಂಟ್ರಿಯಲ್ಲಿ ಕರಾವಳಿ ಕಂಪು!ಇದೇ ಶುಕ್ರವಾರದಿಂದ ಗಲ್ಫ್ ಕಂಟ್ರಿಯಲ್ಲಿ ಕರಾವಳಿ ಅಬ್ಬರ ಶುರು ಗುರು5 ಲಕ್ಷ ಪ್ರೇಕ್ಷಕರು ಮೆಚ್ಚಿದ ಕರಾವಳಿ ...
29/07/2026

ಗಲ್ಫ್ ಕಂಟ್ರಿಯಲ್ಲಿ ಕರಾವಳಿ ಕಂಪು!

ಇದೇ ಶುಕ್ರವಾರದಿಂದ ಗಲ್ಫ್ ಕಂಟ್ರಿಯಲ್ಲಿ ಕರಾವಳಿ ಅಬ್ಬರ ಶುರು ಗುರು

5 ಲಕ್ಷ ಪ್ರೇಕ್ಷಕರು ಮೆಚ್ಚಿದ ಕರಾವಳಿ ,ಫ್ಯಾಮಿಲಿ ಆಡಿಯನ್ಸ್ ಇಷ್ಟ ಪಟ್ಟ ಚಿತ್ರವಿದು


ಗುರುದತ್ ಗಾಣಿಗ ನಿರ್ದೇಶನದ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಂಬಳದ ಅದ್ಭುತ ಪ್ರಪಂಚವನ್ನು ಕಣ್ತುಂಬಿಕೊಂಡ ಕನ್ನಡ ಸಿನಿಪ್ರಿಯರು ಕರಾವಳಿ ಸಿನಿಮಾಗೆ ಭರಪೂರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಬಿಡುಗಡೆಯಾದ ಒಂದೇ ವಾರದಲ್ಲಿ ಕರಾವಳಿ ಸಿನಿಮಾ ಗಲ್ಫ್ ಕಂಟ್ರಿಗೆ ಎಂಟ್ರಿ ಕೊಡುತ್ತಿದೆ..

ಶುಕ್ರವಾರದಿಂದ ದುಬೈ ಹಾಗೂ ಅಬುದಾಬಿ ಸಿನಿಮಾ ಅಭಿಮಾನಿಗಳನ್ನು ರಂಜಿಸಲಿದೆ ಕರಾವಳಿ ಸಿನಿಮಾ. ಈಗಾಗಲೇ ಸರ್ವಂಮಯ, ಜನನಾಯಗನ್, ಬಾಲನ್, ಕರಪ್ಪು, ಪೆದ್ದಿ ಸೇರಿದಂತೆ ಸೌತ್ ನ ಬಹುತೇಕ ಹಿಟ್ ಸಿನಿಮಾಗಳನ್ನ ರಿಲೀಸ್ ಮಾಡಿದ್ದ ಪ್ರಖ್ಯಾತ ಫಾರಾಸ್ ಸಿನಿಮಾಸ್ ಕರಾವಳಿ ಸಿನಿಮಾದ ಓವರ್ ಸೀಸ್ ರೈಟ್ಸ್ ಖರೀದಿ ಮಾಡಿ ರಿಲೀಸ್ ಮಾಡುತ್ತಿರುವುದು ವಿಶೇಷ..

ಜುಲೈ 24ಕ್ಕೆ ರಿಲೀಸ್ ಆದ ಕರಾವಳಿ 175 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಆದರೀಗ ಸಿನಿಮಾಗೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ಹಾಗೂ ಹೌಸ್ ಫುಲ್ ಪ್ರದರ್ಶನ ಕಂಡು ಮತ್ತಷ್ಟು ಸ್ಟ್ರೀನಿಂಗ್ ಜಾಸ್ತಿ ಮಾಡಲಾಗಿದೆ.

ಮೊದಲ ದಿನ ಕರಾವಳಿ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಇದುವರೆಗೂ ಕರಾವಳಿ 6 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡ ಸಿನಿಮಾರಂಗದ ಈಗಿನ ಪರಿಸ್ಥಿತಿಗೆ ಇದು ಅತೀ ದೊಡ್ಡ ಕಲೆಕ್ಷನ್ ಅಂದರೆ ತಪ್ಪಾಗಲ್ಲ. ಈ ವರ್ಷ ಕನ್ನಡದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡ ಚಿತ್ರಗಳಲ್ಲಿ ಒಂದಾಗಿದೆ.. ಕರಾವಳಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದು ಹೆಚ್ಚು ಕಲೆಕ್ಷನ್ ಮಾಡುತ್ತ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ.

ಕರಾವಳಿ ರಿಲೀಸ್ ಆದ 6ನೇ ದಿನಕ್ಕೆ 5 ಲಕ್ಷಕ್ಕೂ ಹೆಚ್ಚು ಜನರು ಸಿನಿಮಾ ವೀಕ್ಷಣೆ ಮಾಡಿದ್ದಾರೆ . ರಾಜ್ಯದಲ್ಲಿ ಸಿನಿಮಾ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬಂದಿದೆ. ಮುಂದಿನ ವಾರ ಪಕ್ಕದ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಸಾಧ್ಯತೆ ಹೆಚ್ಚಾಗಿದೆ.

--------

Address

62, 4th Floor, Renukamba Studio, 4th Main Road, 18th Cross, Malleshwaram
Bangalore
560055

Alerts

Be the first to know and let us send you an email when Cini Lahari posts news and promotions. Your email address will not be used for any other purpose, and you can unsubscribe at any time.

Shortcuts

Share