ನಾಡಸುದ್ದಿ

ನಾಡಸುದ್ದಿ 📍ನಾಡಸುದ್ದಿ
ಕನ್ನಡ ಸುದ್ದಿ ಮಾಧ್ಯಮ
News & Entertainment Media
(ನಿಮ್ಮ ವಿಚಾರ ನಮ್ಮ ಪ್ರಚಾರ)

ಮೇ 30 — ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💥
30/05/2026

ಮೇ 30 — ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💥

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಡಾ. ಅಂಬರೀಷ್ ಅವರ ಜನ್ಮದಿನದ ಸವಿನೆನಪು 🙏🏻ಕರ್ನಾಟಕ ರಾಜಕೀಯ ರಂಗ ಹಾಗೂ ಕರ್ನಾಟಕ ಚಲನಚಿತ್ರ ರ...
29/05/2026

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಡಾ. ಅಂಬರೀಷ್ ಅವರ ಜನ್ಮದಿನದ ಸವಿನೆನಪು 🙏🏻
ಕರ್ನಾಟಕ ರಾಜಕೀಯ ರಂಗ ಹಾಗೂ ಕರ್ನಾಟಕ ಚಲನಚಿತ್ರ ರಂಗ ಎರಡರಲ್ಲೂ ಪ್ರಖ್ಯಾತಿ ಪಡೆದಿದ್ದರು.

ಕೊಹ್ಲಿಯನ್ನು ತವರು ತಂಡ ಡೆಲ್ಲಿ ಖರೀದಿ ಮಾಡಲಿಲ್ಲ ಏಕೆ..? 19 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ವೀರೂ..!ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲ...
26/05/2026

ಕೊಹ್ಲಿಯನ್ನು ತವರು ತಂಡ ಡೆಲ್ಲಿ ಖರೀದಿ ಮಾಡಲಿಲ್ಲ ಏಕೆ..? 19 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ವೀರೂ..!

ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು. 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎಂಬ ಹೆಸರಿನಲ್ಲಿ ಈ ತಂಡವು ತನ್ನ ಚೊಚ್ಚಲ ಪ್ರವೇಶ ಮಾಡಿತು. ಆದರೆ, 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ತನ್ನ ಹೆಸರು ಬದಲಿಸಿಕೊಂಡಿತು.

ಆದರೂ, ತಂಡದ ಅದೃಷ್ಟ ಮಾತ್ರ ಬದಲಾಗುತ್ತಿಲ್ಲ. ಒಂದೇ ಒಂದು ಟ್ರೋಫಿಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಎದುರು ನೋಡುತ್ತಿದೆ. ಇದೇ ಸಂದರ್ಭದಲ್ಲಿ, ಟೀಮ್​ ಇಂಡಿಯಾ ಮಾಜಿ ಸ್ಫೋಟಕ ಆಟಗಾರ ಮತ್ತು ಡೆಲ್ಲಿ ತಂಡ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಾಡಿದ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಆ ದಿನ ಡೆಲ್ಲಿ ಫ್ರಾಂಚೈಸಿ ಆ ಒಂದು ತಪ್ಪು ಮಾಡದಿದ್ದರೆ, ತಂಡಕ್ಕೆ ಇಂದು ಒಳ್ಳೆಯ ಕ್ರೇಜ್ ಇರುತ್ತಿತ್ತು ಎಂದಿದ್ದಾರೆ. ಹಾಗಾದರೆ, ವೀರೂ ಭಾಯ್ ಮಾತಿನ ಅರ್ಥವೇನು ಎಂಬುದನ್ನು ತಿಳಿಯೋಣ.

2008ರ ಐಪಿಎಲ್ ಉದ್ಘಾಟನಾ ಸೀಸನ್ ನನಗೆ ನೆನಪಿದೆ. ಆಗ ಶಿಖರ್ ಧವನ್ ಮತ್ತು ತಿಲಕರತ್ನೆ ದಿಲ್ಶಾನ್ ಕೂಡ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರು. ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿದ್ದರು. ಆದರೆ, ಗೌತಮ್ ಮತ್ತು ನಾನು ಇನ್ನಿಂಗ್ಸ್ ಆರಂಭಿಸುತ್ತಿದ್ದೆವು. ಹಾಗಾಗಿ, ಧವನ್ ಮತ್ತು ದಿಲ್ಶನ್ ತಡವಾಗಿ ಬರುತ್ತಿದ್ದರು. ಮನೋಜ್ ತಿವಾರಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ನಮ್ಮ ಅಗ್ರ ಕ್ರಮಾಂಕ ತುಂಬಿ ತುಳುಕುತ್ತಿತ್ತು. ಹಾಗಾಗಿ, ನಮಗೆ ಹೊಸ ಬ್ಯಾಟ್ಸ್‌ಮನ್ ಅವಶ್ಯಕತೆ ಇರಲಿಲ್ಲ.

ಐಪಿಎಲ್​ ಆರಂಭದ ಸಮಯದಲ್ಲಿ, ವಿರಾಟ್ ಕೊಹ್ಲಿ ಒನ್ ಡೌನ್ ಅಥವಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದ್ದರಿಂದ, ನಮ್ಮ ಫ್ರಾಂಚೈಸಿಯಿಂದ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಮಗೆ ಬೌಲರ್ ಬೇಕಾಗಿತ್ತು. ಅದಕ್ಕಾಗಿಯೇ ನಾವು ಕೊಹ್ಲಿ ಬದಲಿಗೆ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿದೆವು ಎಂದು ಜಿಯೋಸ್ಟಾರ್ ಚಾಂಪಿಯನ್ಸ್ ವಾಲಿ ಕಾಮೆಂಟರಿಯಲ್ಲಿ ಸೆಹ್ವಾಗ್​ ಹೇಳಿದರು.

ಸ್ಥಳೀಯ ಆಟಗಾರನಾಗಿದ್ದ ಕೊಹ್ಲಿ ಅವರನ್ನು ಡೆಲ್ಲಿ ತಂಡ ಖರೀದಿ ಮಾಡಲಿಲ್ಲ. ಅನ್​ಕ್ಯಾಪ್ಡ್​ ಆಟಗಾರನಾಗಿದ್ದ ಕೊಹ್ಲಿಯನ್ನು ಮೂಲ ಬೆಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಖರೀದಿ ಮಾಡಿತು. ಅಂದಿನಿಂದ ಕೊಹ್ಲಿ ಒಂದೇ ತಂಡಕ್ಕೆ ಆಡುತ್ತಿದ್ದಾರೆ. ಒಂದೇ ತಂಡಕ್ಕೆ ಆಡಿದ ಏಕೈಕ ಆಟಗಾರ ಕೊಹ್ಲಿ ಎಂಬ ದಾಖಲೆ ಇದೆ. ಐಪಿಎಲ್​ನಲ್ಲಿ ಕೊಹ್ಲಿ ಅವರ ಈ ಪ್ರಯಾಣ ಅವರನ್ನು ಕರ್ನಾಟಕದ ದತ್ತು ಪುತ್ರ ಭಾವನಾತ್ಮಕ ಬಂಧದೊಂದಿಗೆ ಬೆಸೆದಿದೆ. ಕೊಹ್ಲಿಗೂ ಕೂಡ ಕರ್ನಾಟಕ ತನ್ನ ಎರಡನೇ ಮನೆಯಾಗಿದೆ. ಸ್ವತಃ ಕೊಹ್ಲಿ ಅವರೇ ಇದನ್ನು ಹೇಳಿಕೊಂಡಿದ್ದಾರೆ.

ಅಂದಹಾಗೆ, ಕೊಹ್ಲಿ ಅವರು ನಾಯಕನಾಗಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಕಳೆದ ವರ್ಷ ರಜತ್ ಪಾಟೀದಾರ್ ನಾಯಕತ್ವದಲ್ಲಿ ಕೊಹ್ಲಿ ಮೊದಲ ಬಾರಿಗೆ RCB ಪರ ಕಪ್‌ಗೆ ಮುತ್ತಿಕ್ಕಿದರು.

ಇಂದು ಐಪಿಎಲ್​ನಲ್ಲಿ ಆರ್​ಸಿಬಿ ತಂಡಕ್ಕಿರುವ ಕ್ರೇಜ್​ ಬೇರೆ ಯಾವುದೇ ತಂಡಕ್ಕಿಲ್ಲ. ಹೀಗಾಗಿ, ಅಂದು ಕೊಹ್ಲಿಯನ್ನು ಬಿಟ್ಟು ನಾವು ತಪ್ಪು ಮಾಡಿದೆವು. ಅಂದು ಕೊಹ್ಲಿಯನ್ನು ಬಿಡದೇ ಹೋಗಿದ್ದರೆ ಡೆಲ್ಲಿ ತಂಡಕ್ಕೆ ಒಳ್ಳೆಯ ಕ್ರೇಜ್​ ಇರುತ್ತಿತ್ತು ಎಂದು ವೀರೇಂದ್ರ ಸೆಹ್ವಾಗ್​ ಹೇಳಿದ್ದಾರೆ.

25-05-2026

ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ್ ರಾಘವೇಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
26/05/2026

ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ್ ರಾಘವೇಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

ಡಚ್ಚರು ಮೋದಿಯವರ ಕೈಗೆ ಕೊಟ್ಟಿರುವ ಲೈಡನ್ ಗ್ರಾಂಟ್ (ಅನೈಮಂಗಲ ತಾಮ್ರಶಾಸನ)ದಲ್ಲಿ ನಮ್ಮ ಕನ್ನಡ ನಾಡಿಗೆ ಸಂಬಂಧಿಸಿದ ಚಾರಿತ್ರಿಕ ದಾಖಲೆಯೂ ಇದೆ. ...
22/05/2026

ಡಚ್ಚರು ಮೋದಿಯವರ ಕೈಗೆ ಕೊಟ್ಟಿರುವ ಲೈಡನ್ ಗ್ರಾಂಟ್ (ಅನೈಮಂಗಲ ತಾಮ್ರಶಾಸನ)ದಲ್ಲಿ ನಮ್ಮ ಕನ್ನಡ ನಾಡಿಗೆ ಸಂಬಂಧಿಸಿದ ಚಾರಿತ್ರಿಕ ದಾಖಲೆಯೂ ಇದೆ.

ಹತ್ತನೇ ಶತಮಾನದ ಮಧ್ಯಭಾಗದಲ್ಲಿ ರಾಷ್ಟ್ರಕೂಟರ ಮೂರನೇ ಕೃಷ್ಣನು ಚೋಳ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಒಂದನೇ ಪರಾಂತಕ ಚೋಳನ ಮಗ ರಾಜಾದಿತ್ಯನನ್ನು ಕೊಂದು ಚೋಳ ರಾಜ್ಯವನ್ನು ಗೆದ್ದುಕೊಂಡ ಅಂಶವೂ ಇದರಲ್ಲಿ ದಾಖಲಾಗಿದೆ.

ತಮ್ಮ ಚರಿತ್ರೆಯನ್ನು ಆಸಕ್ತಿಯಿಂದ ತಿಳಿದುಕೊಂಡು ಹೆಮ್ಮೆಯಿಂದ ಹೇಳಿಕೊಳ್ಳುವ ತಮಿಳರು ಈ ಶಾಸನ ಭಾರತಕ್ಕೆ ವಾಪಸ್ ಬಂದಿದ್ದಕ್ಕೆ ಆನಂದಿಸುತ್ತಾರೆ. ಆದರೆ ಚೋಳ ರಾಜ್ಯವನ್ನು ಗೆದ್ದು ಮೂರು ದಶಕಗಳ ಕಾಲ ತನ್ನ ಅಧೀನದಲ್ಲಿ ಇಟ್ಟುಕೊಂಡ ಮೂರನೇ ಕೃಷ್ಣನ ಉಲ್ಲೇಖ ಇರುವ ಈ ಶಾಸನದ ಬಗ್ಗೆ ನಮ್ಮ ಕನ್ನಡಿಗರಿಗೆ ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ, ಹೆಮ್ಮೆ ಪಡುವ ಉತ್ಸಾಹವೂ ಇಲ್ಲ.

ಆ ಭಾಗದ ಇಂಗ್ಲಿಷ್ ಸಾರಾಂಶ:

'The heroic Rajaditya, the ornament of the solar race, having shaken in battle the unshakable with his forces , by means of sharp arrows flying in all directions was himself pierced in his heart while seated on the back of a large elephant by the sharp arrows of the enemy and (thus) winning the praise of the three worlds, he ascended to the heaven of heroes in a tall vimana'

The Chollas Second Edition
By- KA Neelakanta shasthri

ಕನ್ನಡ ಚಿತ್ರರಂಗದ ದೇವರು, ನಟಸಾರ್ವಭೌಮ ಕರ್ನಾಟಕ ರತ್ನ ಡಾ. ರಾಜಕುಮಾರ್ ಅವರ ಜನ್ಮದಿನದ ಸವಿನೆನಪು 🙏🏻
24/04/2026

ಕನ್ನಡ ಚಿತ್ರರಂಗದ ದೇವರು, ನಟಸಾರ್ವಭೌಮ ಕರ್ನಾಟಕ ರತ್ನ ಡಾ. ರಾಜಕುಮಾರ್ ಅವರ ಜನ್ಮದಿನದ ಸವಿನೆನಪು 🙏🏻

ಭಾರತೀಯ ಕ್ರಿಕೆಟ್ ಲೋಕದ ದೇವರು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐
24/04/2026

ಭಾರತೀಯ ಕ್ರಿಕೆಟ್ ಲೋಕದ ದೇವರು
ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರಿಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐

12ನೇ ಶತಮಾನದಲ್ಲಿ ಕರ್ನಾಟಕದ ಮಣ್ಣಿನಲ್ಲಿ ನಡೆದ ಸಾಮಾಜಿಕ ಚಳುವಳಿ ಇಂದಿಗೂ ಜಗತ್ತಿಗೆ ಮಾದರಿಯಾಗಿದೆ. ಈ ಚಳುವಳಿಯ ನಾಯಕತ್ವ ವಹಿಸಿದ್ದ "ಕ್ರಾಂತಿ...
20/04/2026

12ನೇ ಶತಮಾನದಲ್ಲಿ ಕರ್ನಾಟಕದ ಮಣ್ಣಿನಲ್ಲಿ ನಡೆದ ಸಾಮಾಜಿಕ ಚಳುವಳಿ ಇಂದಿಗೂ ಜಗತ್ತಿಗೆ ಮಾದರಿಯಾಗಿದೆ. ಈ ಚಳುವಳಿಯ ನಾಯಕತ್ವ ವಹಿಸಿದ್ದ "ಕ್ರಾಂತಿಕಾರಿ ಬಸವಣ್ಣ"ನವರು ಒಬ್ಬ ಜಗತ್ಪ್ರಸಿದ್ಧ ದಾರ್ಶನಿಕ, ಸಮಾಜ ವಿಜ್ಞಾನಿ ಮತ್ತು ಶ್ರೇಷ್ಠ ಅರ್ಥಶಾಸ್ತ್ರಜ್ಞ.

ಬಸವಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಜನಿಸಿದರು. ಬಾಲ್ಯದಲ್ಲೇ ಅವರು ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದ ಅಸಮಾನತೆಯನ್ನು ಪ್ರಶ್ನಿಸಿದರು.

ಶಿಕ್ಷಣ ಮುಗಿಸಿದ ನಂತರ ಬಸವಣ್ಣನವರು ಪ್ರಬಲ ಅರಸನಾಗಿದ್ದ ಬಿಜ್ಜಳನ ಆಸ್ಥಾನವಿದ್ದ ಮಂಗಳವಾಡಕ್ಕೆ (ನಂತರ ಕಲ್ಯಾಣಕ್ಕೆ) ಬಂದರು. ಮೊದಲಿಗೆ ಅರಮನೆಯಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿದ ಅವರು ತಮ್ಮ ಬುದ್ಧಿವಂತಿಕೆ ಮತ್ತು ಕರ್ತವ್ಯ ನಿಷ್ಠೆ ಗಳಿಂದ ಅರಸರ ಮನ ಗೆದ್ದು ಮಹಾಮಂತ್ರಿಯಾಗಿ ನಿಯೋಜನೆಗೊಂಡರು.

ರಾಜಾಶ್ರಯದ ಮೂಲಕ ಬಸವಣ್ಣನವರು ಕಲ್ಯಾಣದಲ್ಲಿ ಸ್ಥಾಪಿಸಿದ 'ಅನುಭವ ಮಂಟಪ' ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುತ್ತದೆ. ಇಲ್ಲಿ ರಾಜನಿಂದ ಹಿಡಿದು ಸಾಮಾನ್ಯ ಕಾರ್ಮಿಕನವರೆಗೆ ಮತ್ತು ಮಹಿಳೆಯರಿಗೆ ಸಮಾನವಾಗಿ ವಿಚಾರ ಮಂಡಿಸುವ ಅವಕಾಶವಿತ್ತು. ಸಮಾನ ಮನಸ್ಕ ಶರಣರು ಒಟ್ಟಾಗಿ ಕುಳಿತು ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಒಂದು ವೈಚಾರಿಕ ವೇದಿಕೆಯಾಗಿತ್ತು.

ಮಾದರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವರಂತಹ ಅಂದಿನ ಕಾಲದ ಕೆಳವರ್ಗದ ಶ್ರಮಜೀವಿಗಳು ಮತ್ತು ಅಕ್ಕಮಹಾದೇವಿ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮರಂತಹ ಅನೇಕ ಶರಣೆಯರು ಇಲ್ಲಿ ಸಮಾನವಾಗಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು.

"ಕಾಯಕವೇ ಕೈಲಾಸ" ಮತ್ತು "ದಾಸೋಹ" ಎಂಬ ತತ್ವಗಳು ಇಲ್ಲಿ ಚರ್ಚಿಸಲ್ಪಟ್ಟು ಸಮಾಜದಲ್ಲಿ ಜಾರಿಗೆ ಬಂದವು. ಇವು ಸಂಪತ್ತಿನ ಸಂಗ್ರಹಣೆಗಿಂತ ಹಂಚಿಕೆಗೆ ಪ್ರಾಮುಖ್ಯತೆ ನೀಡಿದವು. ಮನುಷ್ಯ ತಾನು ಗಳಿಸಿದುದರಲ್ಲಿ ಅಗತ್ಯಕ್ಕಿಂತ ಹೆಚ್ಚಾದುದನ್ನು ಸಮಾಜಕ್ಕೆ "ದಾಸೋಹ"ದ ಮೂಲಕ ಮರಳಿಸಬೇಕು ಎನ್ನುವ ನೀತಿ ಕಲಿಸುವ ಮೂಲಕ ಇಂದಿನ ಸಮಾಜವಾದಕ್ಕೆ ಅಡಿಪಾಯ ಹಾಕಿದವು.

ಹೀಗೆ ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಲು, 'ಕಾಯಕ' ತತ್ವದ ಮೂಲಕ ಶ್ರಮಜೀವಿಗಳಿಗೆ ಗೌರವ ತಂದುಕೊಡಲು ತಮಗೆ ಸಿಕ್ಕಿದ ಅಧಿಕಾರವನ್ನು ಬಸವಣ್ಣನವರು ಸಮರ್ಥವಾಗಿ ಬಳಸಿಕೊಂಡರು

ಅನುಭವ ಮಂಟಪದಲ್ಲಿ ಚರ್ಚಿಸಲ್ಪಡುತ್ತಿದ್ದ ವಿಚಾರಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಬಸವಣ್ಣನವರ ನೇತೃತ್ವದಲ್ಲಿ ಶರಣರು ಬಳಸಿದ ಮಾಧ್ಯಮವೇ "ವಚನಗಳು. ಇವು ಸಾಹಿತ್ಯದ ಪ್ರಜಾಪ್ರಭುತ್ವೀಕರಣಕ್ಕೆ ಕಾರಣವಾದವು.

ವಚನ ಚಳುವಳಿಗಿಂತ ಮೊದಲು ದೇವರು ಕೇವಲ ಶ್ರೀಮಂತರ ಮತ್ತು ಮೇಲ್ವರ್ಗದವರ ಸೊತ್ತಾಗಿತ್ತು. ವಚನ ಚಳುವಳಿಯು ಸಂಕೀರ್ಣವಾದ ಯಜ್ಞ-ಯಾಗಾದಿಗಳನ್ನು ವಿರೋಧಿಸಿ, ಭಕ್ತಿಯನ್ನು ಸರಳೀಕರಿಸಿತು. ಪಂಡಿತರ ಭಾಷೆಯಾಗಿದ್ದ ಸಂಸ್ಕೃತವನ್ನು ಬಿಟ್ಟು, ಸಾಮಾನ್ಯ ಜನರ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆಯಾಯಿತು.

ದೇವಸ್ಥಾನಗಳಿಗೆ ಪ್ರವೇಶವಿಲ್ಲದ ಜನರಿಗಾಗಿ ಬಸವಣ್ಣನವರು 'ಇಷ್ಟಲಿಂಗ' ಎಂಬ ಕ್ರಾಂತಿಕಾರಿ ಪರಿಕಲ್ಪನೆಯನ್ನು ನೀಡಿದರು.

ಮನುಷ್ಯನ "ಕಾಲುಗಳೇ ಕಂಬ, ದೇಹವೇ ದೇಗುಲ" ಎಂದು ಸಾರುವ ಮೂಲಕ ಪ್ರತಿಯೊಬ್ಬರ ಆತ್ಮದಲ್ಲೂ ದೇವನಿದ್ದಾನೆ ಎಂದು ತೋರಿಸಿಕೊಟ್ಟರು.

ಆದರೆ ಹೀಗೆ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ತತ್ವಗಳು ಅಂದಿನ ಸಂಪ್ರದಾಯಬದ್ಧ ಸಮಾಜದಲ್ಲಿ ದೊಡ್ಡ ಸಂಚಲನ ಮೂಡಿಸಿದವು. ಇದು ಅಂತಿಮವಾಗಿ ದೊಡ್ಡದೊಂದು ಕ್ರಾಂತಿಗೆ (ಧರ್ಮಯುದ್ಧ) ದಾರಿ ಮಾಡಿಕೊಟ್ಟಿತು.

ಆ ಕ್ರಾಂತಿಗೆ ತಕ್ಷಣದ ಕಾರಣವಾದದ್ದು ಒಂದು ವಿಶಿಷ್ಟ ಅಂತರ್ಜಾತೀಯ ವಿವಾಹ. ಇದನ್ನು ಸಹಿಸದ ಸಂಪ್ರದಾಯವಾದಿಗಳು ರಾಜ ಬಿಜ್ಜಳನಿಗೆ ದೂರು ನೀಡಿದರು. ಸಂಪ್ರದಾಯವಾದಿಗಳ ಒತ್ತಡಕ್ಕೆ ಮಣಿದ ಬಿಜ್ಜಳ ರಾಜನು ವಧುವರರ ಪೋಷಕರಿಗೆ ಕಠಿಣ ಶಿಕ್ಷೆ ವಿಧಿಸಿದನು. ಈ ಘಟನೆಯು ಶರಣರನ್ನು ಕೆರಳಿಸಿತು. ಕಲ್ಯಾಣದಲ್ಲಿ ಅಶಾಂತಿ ಹರಡಿತು.

ಅಧಿಕಾರಕ್ಕಿಂತ ತತ್ವ ಮುಖ್ಯವೆಂದು ನಂಬಿದ್ದ ಬಸವಣ್ಣನವರು, ಈ ಹಿಂಸಾಚಾರ ಮತ್ತು ಅನ್ಯಾಯವನ್ನು ಪ್ರತಿಭಟಿಸಿ ತಮ್ಮ ಮಹಾಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಅವರು ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ಪ್ರಯಾಣ ಬೆಳೆಸಿದರು. .ಅವರು ಹೋಗುವ ಮುನ್ನ ಶರಣರಿಗೆ ಧೈರ್ಯ ತುಂಬಿದರು ಮತ್ತು ವಚನ ಸಾಹಿತ್ಯವನ್ನು ಉಳಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಈ ಮಧ್ಯೆ ಕಲ್ಯಾಣದಲ್ಲಿ ನಡೆದ ಗಲಭೆಗಳ ನಡುವೆ ಬಿಜ್ಜಳ ರಾಜನ ಕೊಲೆಯಾಯಿತು. ಇದು ಶರಣರ ಮೇಲೆ ಸೈನ್ಯದ ಆಕ್ರಮಣಕ್ಕೆ ಕಾರಣವಾಯಿತು.

ಸೈನ್ಯವು ಶರಣರ ಮೇಲೆರಗಿದಾಗ, ಅವರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯವನ್ನು ಪ್ರೀತಿಸಿದರು. ಮಡಿವಾಳ ಮಾಚಿದೇವ, ಚೆನ್ನಬಸವಣ್ಣನವರ ನೇತೃತ್ವದಲ್ಲಿ ವಚನಗಳ ಕಟ್ಟುಗಳನ್ನು ಹೊತ್ತು ಕಾಡು-ಮೇಡುಗಳ ಮೂಲಕ ಪಲಾಯನ ಮಾಡಿದರು.

ಅನೇಕ ಶರಣರು ಉತ್ತರ ಕನ್ನಡದ ಉಳವಿಗೆ ತೆರಳಿ ಅಲ್ಲಿ ಆಶ್ರಯ ಪಡೆದರು.

ಕಲ್ಯಾಣದ ರಾಜಕೀಯ ಮತ್ತು ಗದ್ದಲಗಳಿಂದ ದೂರ ಸರಿದ ಬಸವಣ್ಣನವರು, ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮದಲ್ಲಿ ತಮ್ಮ ಇಷ್ಟದೈವ ಕೂಡಲಸಂಗಮದೇವನ ಧ್ಯಾನದಲ್ಲಿ ಮುಳುಗಿದರು.

ಕಲ್ಯಾಣ ಕ್ರಾಂತಿಯು ವಿಫಲವಾಯಿತು ಎಂದು ಕೆಲವರು ಭಾವಿಸಬಹುದು, ಆದರೆ ಅದು ಬಹಳ ದೊಡ್ಡ ಯಶಸ್ಸನ್ನು ಕಂಡಿತು.

ಭಾರತದಲ್ಲಿ ಮೊದಲ ಬಾರಿಗೆ ಜಾತಿ ವ್ಯವಸ್ಥೆಯ ವಿರುದ್ಧ ಸಂಘಟಿತ ಹೋರಾಟ ನಡೆಯಿತು.

ಕಲ್ಯಾಣದಿಂದ ಚದುರಿದ ಶರಣರು ನಾಡಿನ ಉದ್ದಗಲಕ್ಕೂ ಬಸವಣ್ಣನವರ ತತ್ವಗಳನ್ನು ಮತ್ತು ವಚನಗಳನ್ನು ಹರಡಿದರು.

ಮನುಷ್ಯತ್ವವೇ ಶ್ರೇಷ್ಠ ಎಂಬ ಮೌಲ್ಯವು ಸಮಾಜದಲ್ಲಿ ಆಳವಾಗಿ ಬೇರೂರಿತು.

ಬಸವಣ್ಣನವರು ಜಗತ್ತಿಗೆ ನೀಡಿದ ಅತಿ ದೊಡ್ಡ ಸಂದೇಶ 'ದಯೆ'. "ದಯವಿಲ್ಲದ ಧರ್ಮವದೇವುದಯ್ಯಾ" ಎಂಬ ಅವರ ಪ್ರಶ್ನೆ ಇಂದಿಗೂ ಪ್ರಸ್ತುತ. ಮಾನವ ಕುಲ ಒಂದೇ ಎಂಬ ಭಾವನೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಿದ ಅವರು ವಿಶ್ವಗುರುವಾಗಿ ಎಂದಿಗೂ ಅಮರ. ಅವರ ತತ್ವಗಳನ್ನು ಪಾಲಿಸೋಣ, ಸಮಾನತೆಯ ಸಮಾಜವನ್ನು ನಿರ್ಮಿಸೋಣ.

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು.ಭಾರತೀಯರ ಆತ್ಮಗೌರವವನ್ನೂ ಬಡಿದೆಬ್ಬಿಸಿದ ಅವರ ಚಿಂತನೆಗ...
14/04/2026

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು.

ಭಾರತೀಯರ ಆತ್ಮಗೌರವವನ್ನೂ ಬಡಿದೆಬ್ಬಿಸಿದ ಅವರ ಚಿಂತನೆಗಳು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿ ನೀಡುವ ಶಾಶ್ವತ ಪ್ರೇರಣೆ. ನಮ್ಮ ಶ್ರೇಷ್ಠ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಲವಾದ ಅಡಿಪಾಯ ಕಟ್ಟಿದ ಮಹಾನ್ ದಾರ್ಶನಿಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ.


ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಹಲವು ದಶಕಗಳಿಂದ ಸುಮಾರು 12,000ಕ್ಕೂ ಅಧಿ...
12/04/2026

ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಹಲವು ದಶಕಗಳಿಂದ ಸುಮಾರು 12,000ಕ್ಕೂ ಅಧಿಕ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ.

ತಮ್ಮ ಸುಮಧುರ ಧ್ವನಿ, ಸರಳ ನಡೆ ನುಡಿ, ವಾತ್ಸಲ್ಯ ತುಂಬಿದ ಮಾತುಗಳಿಂದ ಅವರು ಜನಮಾನಸದಲ್ಲಿ ಶಾಶ್ವತ. ಆಶಾ ಭೋಸ್ಲೆಯವರ ನಿಧನದಿಂದ ಹಳೆಯ ಮತ್ತು ಹೊಸ ತಲೆಮಾರಿನ ಸಂಗೀತದ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಬಂಧು ಮಿತ್ರರು ಹಾಗೂ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಇಂದು.... ಏಪ್ರಿಲ್ 12.... ಕನ್ನಡಿಗರ ಆರಾಧ್ಯ ದೈವ ನಟಸಾರ್ವಭೌಮ ಕರ್ನಾಟಕ ರತ್ನ ಡಾ. ರಾಜಕುಮಾರ್ ಅವರ ಸಂಸ್ಮರಣೆ ದಿನ.... ಕನ್ನಡ ಅಂದ್ರೇ ರಾಜಕ...
12/04/2026

ಇಂದು.... ಏಪ್ರಿಲ್ 12.... ಕನ್ನಡಿಗರ ಆರಾಧ್ಯ ದೈವ ನಟಸಾರ್ವಭೌಮ ಕರ್ನಾಟಕ ರತ್ನ ಡಾ. ರಾಜಕುಮಾರ್ ಅವರ ಸಂಸ್ಮರಣೆ ದಿನ....

ಕನ್ನಡ ಅಂದ್ರೇ ರಾಜಕುಮಾರ... ರಾಜಕುಮಾರ ಅಂದ್ರೇ ಕನ್ನಡ... ಅನ್ನೋ ಮಟ್ಟಿಗೆ ಅಣ್ಣಾವ್ರು ಕನ್ನಡಿಗರಲ್ಲಿ ಬೆರೆತು ಹೋಗಿದ್ದಾರೆ... ಅಂತಹ ಮಹಾನ್ ಸಾಧಕ ಇಹಲೋಕ ತ್ಯಜಿಸಿ ಇಂದಿಗೆ ಇಪ್ಪತ್ತು ವರ್ಷಗಳು ಕಳೆದವು... ಅವರ ಸಾಧನೆ, ಜೀವನ ನಮಗೆ ಸದಾಕಾಲ ಸ್ಫೂರ್ತಿಯಾಗಿರುತ್ತದೆ...

Address

Raja Rajeshwari Nagar
Bangalore
560098

Alerts

Be the first to know and let us send you an email when ನಾಡಸುದ್ದಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to ನಾಡಸುದ್ದಿ:

Share