ISM News

ISM News Creator | Kannada Stories | Viral News
Daily Interesting Content
Follow for updates, visit https://ismkannadanews.com
(2)

ಕರುಳು ಹಿಂಡುವ ದುರಂತ: ನೀರಿನ ಸಂಪ್‌ಗೆ ಬಿದ್ದು 1.5 ವರ್ಷದ ಕಂದಮ್ಮ ಸಾವು! ಮರುಜೀವದ ಆಸೆಯಿಂದ ಮಗುವನ್ನು ಉಪ್ಪಿನಲ್ಲಿಟ್ಟ ಪೋಷಕರುಬಾಗಲಕೋಟೆಯ ನ...
08/06/2026

ಕರುಳು ಹಿಂಡುವ ದುರಂತ: ನೀರಿನ ಸಂಪ್‌ಗೆ ಬಿದ್ದು 1.5 ವರ್ಷದ ಕಂದಮ್ಮ ಸಾವು! ಮರುಜೀವದ ಆಸೆಯಿಂದ ಮಗುವನ್ನು ಉಪ್ಪಿನಲ್ಲಿಟ್ಟ ಪೋಷಕರು

ಬಾಗಲಕೋಟೆಯ ನವನಗರದ (ಸೆಕ್ಟರ್ 38) ಬಳಿ ಎದೆಗುಂದುವ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ 18 ತಿಂಗಳ ಹಸುಗೂಸು ಅಮೀನಾ ಪಟಾಣ್, ಎದುರು ಮನೆಯ ನೀರಿನ ಸಂಪ್‌ಗೆ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. 😭

ಕುರುಡು ನಂಬಿಕೆ ಮತ್ತು ಪೋಷಕರ ಕಣ್ಣೀರು:
ಮಗು ಸಾವನ್ನಪ್ಪಿದ್ದರೂ ಆ ಕಟು ಸತ್ಯವನ್ನು ಅರಗಿಸಿಕೊಳ್ಳಲಾಗದ ಪೋಷಕರು, "ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಮರಳಿ ಬದುಕುತ್ತಾರೆ" ಎಂಬ ನಂಬಿಕೆಯಿಂದ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆಯೇ ಮಗುವಿನ ದೇಹವನ್ನು ಉಪ್ಪಿನಲ್ಲಿ ಮುಚ್ಚಿಡಲಾಗಿತ್ತು. ಕೇವಲ ಮುಖವನ್ನು ಮಾತ್ರ ಹೊರಗಿಟ್ಟು, ಕಿವಿಯ ಬಳಿ ಮೊಬೈಲ್‌ನಲ್ಲಿ ಕುರಾನ್ ಪಠಣವನ್ನು ಪ್ಲೇ ಮಾಡಿ, 'ಮಗು ಹೇಗಾದರೂ ಬದುಕಿ ಬರಲಿ' ಎಂದು ಪೋಷಕರು ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.

ವೈದ್ಯರ ಸಾಂತ್ವನ:
ಸತತ 2 ಗಂಟೆಗಳ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲಿಟ್ಟ ನಂತರ, ಸ್ಥಳಕ್ಕಾಗಮಿಸಿದ ವೈದ್ಯರು ಪೋಷಕರಿಗೆ ವಾಸ್ತವವನ್ನು ಮನವರಿಕೆ ಮಾಡಿ ಸಾಂತ್ವನ ಹೇಳಿದರು. ವೈದ್ಯರ ತಿಳುವಳಿಕೆಯ ನಂತರ ಉಪ್ಪಿನಿಂದ ಮಗುವನ್ನು ಹೊರತೆಗೆದು, ಭಾರವಾದ ಹೃದಯದಿಂದಲೇ ಮರಣೋತ್ತರ ಪರೀಕ್ಷೆಗೆ (Post-mortem) ಪೋಷಕರು ಸಮ್ಮತಿಸಿದ್ದಾರೆ.

🚨 ಪೋಷಕರಿಗೆ ಒಂದು ಕಳಕಳಿಯ ಮನವಿ:
ಮಕ್ಕಳನ್ನು ಆಟವಾಡಲು ಬಿಡುವಾಗ ಅಥವಾ ಮನೆಯ ಸುತ್ತಮುತ್ತ ಇರುವಾಗ ನೀರಿನ ಟ್ಯಾಂಕ್, ಸಂಪ್‌ಗಳ ಮುಚ್ಚಳ ಭದ್ರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಒಂದು ಸಣ್ಣ ನಿರ್ಲಕ್ಷ್ಯ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಎಚ್ಚರವಿರಲಿ! 🙏

🚨 ತುರ್ತು ಎಚ್ಚರಿಕೆ: ಇರಾನ್‌ನಲ್ಲಿರುವ ಭಾರತೀಯರು ತಕ್ಷಣವೇ ದೇಶ ತೊರೆಯುವಂತೆ ಕೇಂದ್ರ ಸರ್ಕಾರದ ಆದೇಶ! 🚨ಇರಾನ್ ಮತ್ತು ಇಸ್ರೇಲ್ ನಡುವೆ ಮಿಲಿಟರ...
08/06/2026

🚨 ತುರ್ತು ಎಚ್ಚರಿಕೆ: ಇರಾನ್‌ನಲ್ಲಿರುವ ಭಾರತೀಯರು ತಕ್ಷಣವೇ ದೇಶ ತೊರೆಯುವಂತೆ ಕೇಂದ್ರ ಸರ್ಕಾರದ ಆದೇಶ! 🚨

ಇರಾನ್ ಮತ್ತು ಇಸ್ರೇಲ್ ನಡುವೆ ಮಿಲಿಟರಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ವಿದೇಶಾಂಗ ಸಚಿವಾಲಯವು (MEA) ಮಹತ್ವದ ಭದ್ರತಾ ಸೂಚನೆಯನ್ನು ಹೊರಡಿಸಿದೆ.

🛑 ಪ್ರಮುಖ ಅಂಶಗಳು:
👉 ತಕ್ಷಣ ವಾಪಸ್ಸಾಗಿ: ಇರಾನ್ ಯಾವುದೇ ಕ್ಷಣದಲ್ಲಾದರೂ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆಯಿದೆ. ಹೀಗಾಗಿ ವಿಮಾನ ಸೇವೆ ಸ್ಥಗಿತಗೊಳ್ಳುವ ಮುನ್ನವೇ, ಅಲ್ಲಿರುವ ಭಾರತೀಯರು ತಕ್ಷಣವೇ ಭಾರತಕ್ಕೆ ಮರಳುವಂತೆ ಸೂಚಿಸಲಾಗಿದೆ.

👉 ಪ್ರಯಾಣ ರದ್ದುಗೊಳಿಸಿ: ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಭಾರತೀಯರು ಇರಾನ್‌ಗೆ ಪ್ರಯಾಣಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

⚠️ ಇರಾನ್‌ನಿಂದ ತಕ್ಷಣವೇ ಹೊರಬರಲು ಸಾಧ್ಯವಾಗದವರಿಗಾಗಿ ತುರ್ತು ಸೂಚನೆಗಳು:

📌 ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತಕ್ಷಣವೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
📌 ಇರಾನ್ ದೇಶದ ಒಳಗಡೆ ಅನಗತ್ಯವಾಗಿ ಪ್ರಯಾಣ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.
📌 ನಿಮ್ಮ ವಸತಿ ಪ್ರದೇಶಗಳಿಂದ ದೂರ ಹೋಗದೆ, ಸುರಕ್ಷಿತ ಕಟ್ಟಡಗಳು ಅಥವಾ ಆಶ್ರಯ ತಾಣಗಳಲ್ಲೇ (Shelters) ಇರಿ.

📞 24/7 ಸಹಾಯವಾಣಿ:
ಭಾರತೀಯ ರಾಯಭಾರ ಕಚೇರಿಯು ತುರ್ತು ಸಹಾಯವಾಣಿಯನ್ನು ತೆರೆದಿದ್ದು, ಯಾವುದೇ ಆಪತ್ತಿನ ಸಮಯದಲ್ಲಿ ಭಾರತೀಯರು ನೇರವಾಗಿ ಸಂಪರ್ಕಿಸಬಹುದಾಗಿದೆ.

ಪ್ರಸ್ತುತ ಇರಾನ್‌ನಲ್ಲಿ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ತೆರಳಿರುವ ಸುಮಾರು 7,500 ಭಾರತೀಯರಿದ್ದಾರೆ. ಭಾರತ ಸರ್ಕಾರವು ಅಲ್ಲಿರುವ ತನ್ನ ಪ್ರಜೆಗಳ ಸುರಕ್ಷತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.

🙏 ದಯವಿಟ್ಟು ಈ ಮಾಹಿತಿಯನ್ನು ಶೇರ್ ಮಾಡಿ. ಇರಾನ್‌ನಲ್ಲಿರುವ ನಿಮ್ಮ ಸ್ನೇಹಿತರು, ಪರಿಚಯಸ್ಥರು ಅಥವಾ ಕುಟುಂಬದವರಿಗೆ ಈ ಸುದ್ದಿ ತಲುಪಲಿ.

Mother-in-law Marries Son-in-law : ಹೆಂಡತಿಯನ್ನು ಬಿಟ್ಟು ಅತ್ತೆಯನ್ನೇ ವರಿಸಿದ ಭೂಪ: ಯುಪಿಯಲ್ಲಿ ನಡೆದ ಈ ವಿಚಿತ್ರ ಮದುವೆ ಹಿಂದಿನ ಕಥೆ ಏ...
08/06/2026

Mother-in-law Marries Son-in-law : ಹೆಂಡತಿಯನ್ನು ಬಿಟ್ಟು ಅತ್ತೆಯನ್ನೇ ವರಿಸಿದ ಭೂಪ: ಯುಪಿಯಲ್ಲಿ ನಡೆದ ಈ ವಿಚಿತ್ರ ಮದುವೆ ಹಿಂದಿನ ಕಥೆ ಏನು?

ಪೂರ್ಣ ಸುದ್ದಿ ಓದಲು ism kannada news ವೆಬ್ ಸೈಟ್ ಗೆ ಭೇಟಿ ನೀಡಿ

ಡಿಕೆಶಿ ಸಂಪುಟದ (D K Shivakumar Cabinet) ಸಚಿವರಿಗೆ ಕೊಠಡಿ ಹಂಚಿಕೆ: ಅಸಮಾಧಾನಿತ ರಾಮಲಿಂಗಾರೆಡ್ಡಿಗೆ ಒಲಿದ ಬಂಪರ್ ಗಿಫ್ಟ್! ಯಾರಿಗೆ ಯಾವ ರ...
08/06/2026

ಡಿಕೆಶಿ ಸಂಪುಟದ (D K Shivakumar Cabinet) ಸಚಿವರಿಗೆ ಕೊಠಡಿ ಹಂಚಿಕೆ: ಅಸಮಾಧಾನಿತ ರಾಮಲಿಂಗಾರೆಡ್ಡಿಗೆ ಒಲಿದ ಬಂಪರ್ ಗಿಫ್ಟ್! ಯಾರಿಗೆ ಯಾವ ರೂಮ್?

ಪೂರ್ಣ ಸುದ್ದಿ ಓದಲು ISM Kannada News ವೆಬ್ ಸೈಟ್ ಗೆ ಭೇಟಿ ನೀಢಿ

Indore Hospital Incident : ಮಧ್ಯಪ್ರದೇಶದಲ್ಲಿ ಕರುಳು ಹಿಂಡುವ ಘಟನೆ: ಆಂಬ್ಯುಲೆನ್ಸ್‌ ಸಿಗದೆ ಸುಡುವ ಬಿಸಿಲಲ್ಲೇ ಮಗನ ಸ್ಟ್ರೆಚರ್‌ ತಳ್ಳಿದ ...
08/06/2026

Indore Hospital Incident : ಮಧ್ಯಪ್ರದೇಶದಲ್ಲಿ ಕರುಳು ಹಿಂಡುವ ಘಟನೆ: ಆಂಬ್ಯುಲೆನ್ಸ್‌ ಸಿಗದೆ ಸುಡುವ ಬಿಸಿಲಲ್ಲೇ ಮಗನ ಸ್ಟ್ರೆಚರ್‌ ತಳ್ಳಿದ ಅಸಹಾಯಕ ಪೋಷಕರು!

ಪೂರ್ಣ ಸುದ್ದಿ ಓದಲು ISM Kannada News ವೆಬ್ ಸೈಟ್ ಗೆ ಭೇಟಿ ನೀಡಿ

🙏🌺 ಶ್ರೀ ಬನಶಂಕರಿ ಅಮ್ಮನವರ ಇಂದಿನ ದಿವ್ಯ ದರ್ಶನ 🌺🙏ಭಕ್ತರ ಕಷ್ಟಗಳನ್ನು ಪರಿಹರಿಸುವ, ಕರುಣಾಮಯಿ ತಾಯಿ ಶ್ರೀ ಬನಶಂಕರಿ ದೇವಿಯವರ ಪವಿತ್ರ ದರ್ಶನವ...
08/06/2026

🙏🌺 ಶ್ರೀ ಬನಶಂಕರಿ ಅಮ್ಮನವರ ಇಂದಿನ ದಿವ್ಯ ದರ್ಶನ 🌺🙏

ಭಕ್ತರ ಕಷ್ಟಗಳನ್ನು ಪರಿಹರಿಸುವ, ಕರುಣಾಮಯಿ ತಾಯಿ ಶ್ರೀ ಬನಶಂಕರಿ ದೇವಿಯವರ ಪವಿತ್ರ ದರ್ಶನವನ್ನು ಪಡೆದು ಅಮ್ಮನವರ ಕೃಪೆಗೆ ಪಾತ್ರರಾಗೋಣ. 🙏❤️

"ಅಮ್ಮನ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ"

📍 ಶ್ರೀ ಬನಶಂಕರಿ ದೇವಸ್ಥಾನ, ಬೆಂಗಳೂರು

ಜೈ ಬನಶಂಕರಿ ತಾಯಿ! 🙏🌺

Wildlife Hunt : ಜೀವಂತ ಹಾವಿನ ಜೊತೆ ಫುಟ್‌ಬಾಲ್ ಆಡಿದ ಕೊಕ್ಕರೆ! ಬೆಚ್ಚಿಬೀಳಿಸುವ ಈ ವೈಲ್ಡ್‌ಲೈಫ್ ವಿಡಿಯೋ ನೋಡಿದ್ದೀರಾ?  ಸುದ್ದಿ ಓದಲು ism...
08/06/2026

Wildlife Hunt : ಜೀವಂತ ಹಾವಿನ ಜೊತೆ ಫುಟ್‌ಬಾಲ್ ಆಡಿದ ಕೊಕ್ಕರೆ! ಬೆಚ್ಚಿಬೀಳಿಸುವ ಈ ವೈಲ್ಡ್‌ಲೈಫ್ ವಿಡಿಯೋ ನೋಡಿದ್ದೀರಾ?

ಸುದ್ದಿ ಓದಲು ism kannada news ವೆಬ್ ಸೈಟ್ ಗೆ ಭೇಟಿ ನೀಡಿ

ಶ್ರೀ ಕಾಲಭೈರವ ಸ್ವಾಮಿಯವರ ಕೃಪೆ ಎಲ್ಲರ ಮೇಲೂ ಸದಾ ಇರಲಿ. 🙏🌸
08/06/2026

ಶ್ರೀ ಕಾಲಭೈರವ ಸ್ವಾಮಿಯವರ ಕೃಪೆ ಎಲ್ಲರ ಮೇಲೂ ಸದಾ ಇರಲಿ. 🙏🌸

Karnataka Police Recruitment 2026 : 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನ: ಇಂದೇ ಅಪ್ಲೈ ಮಾ...
08/06/2026

Karnataka Police Recruitment 2026 : 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನ: ಇಂದೇ ಅಪ್ಲೈ ಮಾಡಿ

ಸುದ್ದಿ ಓದಲು ISM Kannada News ವೆಬ್ ಸೈಟ್ ಗೆ ಭೇಟಿ ನೀಡಿ

Funny Boy : ಪುಟ್ಟ ಹುಡುಗಿಯ ಕೆನ್ನೆ ಸವರುವಷ್ಟರಲ್ಲಿ ಬಿತ್ತು ಬ್ರೇಕ್! ಈ ಪುಟ್ಟ ಪೋರನ ಎಕ್ಸ್‌ಪ್ರೆಶನ್ ನೋಡಿದ್ರೆ ನಗು ಬರೋದು ಪಕ್ಕಾ..!ಸುದ್...
08/06/2026

Funny Boy : ಪುಟ್ಟ ಹುಡುಗಿಯ ಕೆನ್ನೆ ಸವರುವಷ್ಟರಲ್ಲಿ ಬಿತ್ತು ಬ್ರೇಕ್! ಈ ಪುಟ್ಟ ಪೋರನ ಎಕ್ಸ್‌ಪ್ರೆಶನ್ ನೋಡಿದ್ರೆ ನಗು ಬರೋದು ಪಕ್ಕಾ..!

ಸುದ್ದಿ ಓದಲು ISM Kannada News ವೆಬ್ ಸೈಟ್ ಗೆ ಭೇಟಿ ನೀಡಿ

Address

Bangalore

Alerts

Be the first to know and let us send you an email when ISM News posts news and promotions. Your email address will not be used for any other purpose, and you can unsubscribe at any time.

Contact The Business

Send a message to ISM News:

Share