PKJain Creations

PKJain Creations Yakshagana | Culture | Inspiration
Stories that inspire. Art that lives forever.

ಮಹಾನಗರದಲ್ಲಿ ಮಾತಿನ ಮಂಟಪ - 2ಕಲಾಕ್ಷೇತ್ರದಲ್ಲಿ ತಾಳಮದ್ದಳೆ ಕರ್ಣಬೇಧನ ಬೆಂಗಳೂರಿನಲ್ಲಿ ಅಪರೂಪ ಹಾಗೂ ಭೀಷ್ಮ ವಿಜಯ ತಾಳಮದ್ದಳೆ ಆಸಕ್ತರ ನೆಚ್ಚಿ...
06/05/2026

ಮಹಾನಗರದಲ್ಲಿ ಮಾತಿನ ಮಂಟಪ - 2

ಕಲಾಕ್ಷೇತ್ರದಲ್ಲಿ ತಾಳಮದ್ದಳೆ

ಕರ್ಣಬೇಧನ ಬೆಂಗಳೂರಿನಲ್ಲಿ ಅಪರೂಪ ಹಾಗೂ ಭೀಷ್ಮ ವಿಜಯ ತಾಳಮದ್ದಳೆ ಆಸಕ್ತರ ನೆಚ್ಚಿನ ಪ್ರಸಂಗ. ಜೂನ್ ತಿಂಗಳ ಮೊದಲ ಭಾನುವಾರ ಬಿಡುವು ಮಾಡಿಕೊಂಡು ಮಾತಿನ ಮಂಟಪದೆಡೆಗೆ ಬನ್ನಿ. ಮುಂಗಡ ಟಿಕೆಟ್ ಗಳಿಗಾಗಿ BookMyshow ಲಿಂಕ್ ಕೆಳಗಿದೆ. ಬನ್ನಿ, ಕಿವಿಯಾಗೋಣ.

BookMyshow Link:
https://in.bookmyshow.com/plays/talamaddale-karna-bedhana-amba-shapatha/ET00498348

ತೆನೆ ಬಗ್ಗಿದ್ದರೆ ಅದರಲ್ಲಿ ಧಾನ್ಯವಿದೆ ಎಂದರ್ಥ. ಮನುಷ್ಯನ ತಲೆ ಬಾಗುತ್ತಿದ್ದರೆ ಅವನಲ್ಲಿ ಸಂಸ್ಕಾರ ಇದೆ ಎಂದರ್ಥ.                         ...
05/05/2026

ತೆನೆ ಬಗ್ಗಿದ್ದರೆ ಅದರಲ್ಲಿ ಧಾನ್ಯವಿದೆ ಎಂದರ್ಥ. ಮನುಷ್ಯನ ತಲೆ ಬಾಗುತ್ತಿದ್ದರೆ ಅವನಲ್ಲಿ ಸಂಸ್ಕಾರ ಇದೆ ಎಂದರ್ಥ.

ಗುರು ವೀರಭದ್ರ ನಾಯಕರ ಪರಂಪರೆಯ ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ದಿಟ್ಟ ಮಾರ್ಗದರ್ಶನದಲ್ಲಿ ಬೆಂಗಳ...
03/05/2026

ಗುರು ವೀರಭದ್ರ ನಾಯಕರ ಪರಂಪರೆಯ ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ದಿಟ್ಟ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ನಡೆಯುವ ಈ ಯಕ್ಷಗಾನ ಶಿಬಿರ ಸಾಧ್ಯವಾದವರು ಪಡೆದುಕೊಳ್ಳಬಹುದು.

~ಎಲ್ಲಾ ಮಾಮೂಲಿ~ ... ಆದರೂ ಅಚ್ಚರಿಯ ಕಾಂಬಿನೇಷನ್...!!ಜೊತೆಗೆ ಮಳೆಗಾಲದ ಬೆಚ್ಚನೆಯ ಶನಿವಾರ...!!! ಪ್ರೇಕ್ಷಕರು ನೆನಪಿಡಬೇಕಾದ ಆಟ-ನಮ್ಮದಾಗಬೇಕ...
01/05/2026

~ಎಲ್ಲಾ ಮಾಮೂಲಿ~ ... ಆದರೂ ಅಚ್ಚರಿಯ ಕಾಂಬಿನೇಷನ್...!!
ಜೊತೆಗೆ ಮಳೆಗಾಲದ ಬೆಚ್ಚನೆಯ ಶನಿವಾರ...!!!
ಪ್ರೇಕ್ಷಕರು ನೆನಪಿಡಬೇಕಾದ ಆಟ-ನಮ್ಮದಾಗಬೇಕೆಂಬುದು ನಮ್ಮ ಗುರಿ.

*ತಿತ್ತಿತೈ - ಯಕ್ಷ ಪರ್ವ*

ಜೂನ್ 20, ಶನಿವಾರ ರಾತ್ರಿ 9:30ಕ್ಕೆ.

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ.

ಭೇಟಿಯ ಮೊದಲ ಕ್ಷಣದಿಂದ ಮರಣದ ಕೊನೆಯ ಕ್ಷಣದವರೆಗೆ ಹೃದಯದ ಭಾವನೆ ಬದಲಾಗದೆ ಇದ್ದರೆ ಅದು ನಿಜವಾದ ಪ್ರೀತಿ.                                 ...
26/04/2026

ಭೇಟಿಯ ಮೊದಲ ಕ್ಷಣದಿಂದ ಮರಣದ ಕೊನೆಯ ಕ್ಷಣದವರೆಗೆ ಹೃದಯದ ಭಾವನೆ ಬದಲಾಗದೆ ಇದ್ದರೆ ಅದು ನಿಜವಾದ ಪ್ರೀತಿ.

ಎಲ್ಲೋ ತೆರೆಮರೆಯಲ್ಲಿರುವ ನಮ್ಮಂತವರನ್ನ ಪರಿಚಯಿಸಿದ್ದಕ್ಕಾಗಿ ಮಹಾನ್ ವೀರ ತಂಡಕ್ಕೆ ಧನ್ಯವಾದಗಳು❤️🙏     https://www.facebook.com/share/p...
26/04/2026

ಎಲ್ಲೋ ತೆರೆಮರೆಯಲ್ಲಿರುವ ನಮ್ಮಂತವರನ್ನ ಪರಿಚಯಿಸಿದ್ದಕ್ಕಾಗಿ ಮಹಾನ್ ವೀರ ತಂಡಕ್ಕೆ ಧನ್ಯವಾದಗಳು❤️🙏



https://www.facebook.com/share/p/1anNDmJ2vg/

ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯ ಅಪ್ರತಿಮ ಕೊಂಡಿ – ಪ್ರಸನ್ನ ಕುಮಾರ್ ಜೈನ್

​ಕಲೆ-ತಂತ್ರಜ್ಞಾನದ ಸುಸಂಗಮ
​ಜಗತ್ತು ತಂತ್ರಜ್ಞಾನದ ವೇಗಕ್ಕೆ ಮಾರುಹೋಗಿ ತನ್ನ ಮೂಲ ಬೇರುಗಳನ್ನು ಮರೆಯುತ್ತಿರುವ ಈ ಕಾಲಘಟ್ಟದಲ್ಲಿ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಆಧುನಿಕತೆಯ ವೇದಿಕೆಯಲ್ಲಿ ರಾರಾಜಿಸುವಂತೆ ಮಾಡುತ್ತಿರುವ ಅಪರೂಪದ ವ್ಯಕ್ತಿತ್ವ ಪ್ರಸನ್ನ ಕುಮಾರ್ ಜೈನ್ ಚಪ್ಪರಿಕೆ. 'ಪಿ.ಕೆ. ಜೈನ್ ಚಪ್ಪರಿಕೆ' ಎಂದೇ ಕಲಾಭಿಮಾನಿಗಳ ಮನಗೆದ್ದಿರುವ ಇವರು, ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಕಲೆಯ ಆರಾಧಕ. ಜೈನ ಧರ್ಮದ ಅಹಿಂಸೆ ಮತ್ತು ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ಮಾದರಿಯಾಗಿ ನಿಂತಿರುವ ಸಾಧಕರಿವರು.

​ವೈಯಕ್ತಿಕ ವಿವರ: ಸಂಸ್ಕಾರಯುತ ಹಿನ್ನೆಲೆ
​ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಪ್ರಕೃತಿ ರಮಣೀಯ ತಾಣ 'ಚಪ್ಪರಿಕೆ'ಯಲ್ಲಿ 13 ಅಕ್ಟೋಬರ್ 1990 ರಂದು ಜನಿಸಿದ ಪ್ರಸನ್ನ ಕುಮಾರ್, ಪುಷ್ಪರಾಜ್ ಜೈನ್ ಮತ್ತು ವಿಮಲಾ ಜೈನ್ ದಂಪತಿಗಳ ಸುಪುತ್ರ. ಗ್ರಾಮೀಣ ಭಾಗದ ಶಿಸ್ತು ಮತ್ತು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆದ ಇವರಿಗೆ ಪತ್ನಿ ಚೇತನಾ ಕುಮಾರಿ ಸಿ.ಡಿ ಮತ್ತು ಪುತ್ರ ಯುವಾಂಶ್ ಜೈನ್ ಅವರ ಕುಟುಂಬವೇ ದೊಡ್ಡ ಶಕ್ತಿ. ಪ್ರಸ್ತುತ ಬೆಂಗಳೂರಿನ ಚಂದಾಪುರದಲ್ಲಿ ನೆಲೆಸಿರುವ ಇವರು, ವೃತ್ತಿ ಮತ್ತು ಪ್ರವೃತ್ತಿಯ ನಡುವೆ ಸಮತೋಲನ ಕಾಯ್ದುಕೊಂಡಿದ್ದಾರೆ.
​ವೃತ್ತಿ ಜೀವನ ಮತ್ತು ಶೈಕ್ಷಣಿಕ ಸಾಧನೆ
​ಬಿ.ಸಿ.ಎ (BCA) ಪದವೀಧರರಾದ ಪ್ರಸನ್ನ ಕುಮಾರ್, ಇಂದು ಮಾಹಿತಿ ತಂತ್ರಜ್ಞಾನ ಲೋಕದ ಪ್ರತಿಷ್ಠಿತ ವಿಭಾಗವಾದ IT & DevOps Engineer ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಂತ್ರಿಕ ಕ್ಲಿಷ್ಟತೆಗಳನ್ನು ಸರಳಗೊಳಿಸುವ ಇವರ ಬೌದ್ಧಿಕ ಶಕ್ತಿಯು, ಕಲಾ ಪ್ರಪಂಚದ ಸೃಜನಶೀಲತೆಯನ್ನು ಡಿಜಿಟಲ್ ರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
​ಸಾಧನೆ ಮತ್ತು ಸಾಂಸ್ಕೃತಿಕ ಕೊಡುಗೆ: ಯಕ್ಷಗಾನದ ಡಿಜಿಟಲ್ ರಾಯಭಾರಿ
​ಪ್ರಸನ್ನ ಕುಮಾರ್ ಅವರ ಸಾಧನೆಗಳು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ:

​ಕಲಾ ಲೋಕದ ಯೂಟ್ಯೂಬರ್: ಯಕ್ಷಗಾನ ವಲಯದಲ್ಲಿ ಇವರ 'PK Jain Creations' ಚಾನೆಲ್ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಸಾವಿರಾರು ಕಲಾವಿದರ ಅಭಿನಯವನ್ನು, ಕಲಾ ಸೌಂದರ್ಯವನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
​ಛಾಯಾಗ್ರಹಣದ ಮಾಂತ್ರಿಕ: ಯಕ್ಷಗಾನದ ಬಣ್ಣದ ಲೋಕವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವಲ್ಲಿ ಇವರು ಸಿದ್ಧಹಸ್ತರು. ಇವರು ಕ್ಲಿಕ್ಕಿಸಿದ ಅದೆಷ್ಟೋ ಭಾವಪೂರ್ಣ ಚಿತ್ರಗಳು ಇಂದು ಕಲಾವಿದರ ಪ್ರಚಾರಕ್ಕೆ ಮತ್ತು ಅಭಿಮಾನಿಗಳ ಸಂಗ್ರಹಕ್ಕೆ ಆಧಾರವಾಗಿವೆ.
​ಪರಂಪರೆಯ ಸಂರಕ್ಷಣೆ: ಇಂದಿನ ಕಲೆಯ ವೈಭವವು ಮುಂದಿನ ತಲೆಮಾರಿಗೆ ಕೇವಲ ಕಥೆಯಾಗಬಾರದು ಎಂಬ ಹಂಬಲದಿಂದ ಇವರು ನಡೆಸುತ್ತಿರುವ ದಾಖಲೀಕರಣದ ಕಾರ್ಯ (Archiving) ನಿಜಕ್ಕೂ ಶ್ಲಾಘನೀಯ.

​ಸಮಾಜಕ್ಕೆ ಕೊಡುಗೆ: ಶಿಕ್ಷಣದತ್ತ ಕಿರುಹೆಜ್ಜೆ
​ಸಮಾಜಸೇವೆಯಲ್ಲಿ ತಮಗೆ ತಾವೇ ತೊಡಗಿಸಿಕೊಂಡಿರುವ ಇವರು **'ಜ್ಞಾನನಿಧಿ ಎಜುಕೇಷನಲ್ ಟ್ರಸ್ಟ್'**ನ ಸಕ್ರಿಯ ಸದಸ್ಯರು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಬೆಂಬಲ ನೀಡುವುದು, ಶಾಲೆಗಳ ದತ್ತು ನಿರ್ವಹಣೆ ಹಾಗೂ ಬಡ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುವಲ್ಲಿ ಇವರು ಸದ್ದಿಲ್ಲದೆ ಶ್ರಮಿಸುತ್ತಿದ್ದಾರೆ.

​ಸಾಧಕನ ನುಡಿ - ಸಮಾಜದ ನಡೆ
​ಪ್ರಸನ್ನ ಕುಮಾರ್ ಜೈನ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಪರಿಶ್ರಮ ಮತ್ತು ಸೃಜನಶೀಲತೆಯ ಸಂಕೇತ. ವೃತ್ತಿಜೀವನದ ಒತ್ತಡದ ನಡುವೆಯೂ ನಮ್ಮ ಮಣ್ಣಿನ ಕಲೆ 'ಯಕ್ಷಗಾನ'ಕ್ಕಾಗಿ ಸಮಯ ಮೀಸಲಿಡುವ ಇವರ ಕಾರ್ಯ ದೊಡ್ಡ ಗೌರವಕ್ಕೆ ಅರ್ಹವಾಗಿದೆ.

​ನಮ್ಮ ಸಂಸ್ಕೃತಿಯೇ ನಮ್ಮ ಉಸಿರು. ತಂತ್ರಜ್ಞಾನವನ್ನು ನಾವು ನಮ್ಮ ಜ್ಞಾನವೃದ್ಧಿಗೆ ಮತ್ತು ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕು. ಕಲೆಯನ್ನು ಗೌರವಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ; ಶಿಕ್ಷಣದ ಮೂಲಕ ನಾಳಿನ ಪ್ರಜೆಗಳನ್ನು ಸಶಕ್ತಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ."

​ಸಂಪರ್ಕ ಕೊಂಡಿಗಳು:
​YouTube: PK Jain Creations
​Facebook: pkjaincreations
​Instagram: pkjainchapparike

ಇಂದು ಹೆನ್ನಾಬೈಲ್ ಯಕ್ಷೋತ್ಸವಬನ್ನಿ, ಪ್ರೋತ್ಸಾಹಿಸಿ.ಶುಭವಾಗಲಿ ವಿಶ್ವಣ್ಣ💐💐
25/04/2026

ಇಂದು ಹೆನ್ನಾಬೈಲ್ ಯಕ್ಷೋತ್ಸವ

ಬನ್ನಿ, ಪ್ರೋತ್ಸಾಹಿಸಿ.

ಶುಭವಾಗಲಿ ವಿಶ್ವಣ್ಣ💐💐

ನೀವು ಯಾವ ಬಾಗಿಲಿನಿಂದ ಅವಮಾನದ ಸರಪಳಿಯನ್ನು ದಾಟಿ ಬಂದಿದ್ದಿರೋ ನಂತರ ಆ ಬಾಗಿಲಿನಿಂದ ಎಷ್ಟೇ ಆಮಂತ್ರಣ ಬಂದರೂ ಹೋಗಬೇಡಿ.                    ...
23/04/2026

ನೀವು ಯಾವ ಬಾಗಿಲಿನಿಂದ ಅವಮಾನದ ಸರಪಳಿಯನ್ನು ದಾಟಿ ಬಂದಿದ್ದಿರೋ ನಂತರ ಆ ಬಾಗಿಲಿನಿಂದ ಎಷ್ಟೇ ಆಮಂತ್ರಣ ಬಂದರೂ ಹೋಗಬೇಡಿ.

ನಮ್ಮ ಒಲವಿನ ಆಳ ತಿಳಿಯಲಿಲ್ಲವೆಂದಮೇಲೆ ಬರಿ ದೂರುಗಳ ಪಟ್ಟಿ ಹಿಡಿದು ನಿಲ್ಲುವುದರಲ್ಲಿ ಅರ್ಥವೇನು?                                       ...
22/04/2026

ನಮ್ಮ ಒಲವಿನ ಆಳ ತಿಳಿಯಲಿಲ್ಲವೆಂದಮೇಲೆ ಬರಿ ದೂರುಗಳ ಪಟ್ಟಿ ಹಿಡಿದು ನಿಲ್ಲುವುದರಲ್ಲಿ ಅರ್ಥವೇನು?

21/04/2026

ಆಹಾ! ಮೊಗೆಬೆಟ್ಟು❤️ | ಸಂತೋಷ್ ಕುಲಾಲ್😍 | ಯಕ್ಷ ಸಂಕ್ರಾಂತಿ🔥 | ಚಿತ್ರಸೇನ ಕಾಳಗ👌 | ನೈಕಂಬ್ಳಿ

20/04/2026

ಆಹಾ!❤️ ರನ್ನದುಪ್ಪರಿಗೆ ಏರಿ🎶 | ಸೃಜನ್ ಗಣೇಶ್ ಹೆಗಡೆ🔥 । ಕಾರ್ತಿಕ್ ಚಿಟ್ಟಾಣಿ🔥

Address

Celebrity Classic Layout, Doddathogur
Bangalore
560099,560100,562107

Alerts

Be the first to know and let us send you an email when PKJain Creations posts news and promotions. Your email address will not be used for any other purpose, and you can unsubscribe at any time.

Share