Digital Varthe

Digital Varthe Your trusted source for breaking news, civic updates, and ground realities from Karnataka and beyond. Stay informed, stay empowered.
(3)

ಕನ್ನಡ ಸಿನಿಮಾದಲ್ಲಿ ನಟಿಸಿದ್ದ ವ್ಯಕ್ತಿ ಈಗ ಕರ್ನಾಟಕ ಹೈಕೋರ್ಟ್ ಜಡ್ಜ್..!ಚಿತ್ರರಂಗದಿಂದ ನ್ಯಾಯಾಂಗ ಕ್ಷೇತ್ರದವರೆಗೆ ನ್ಯಾಯಮೂರ್ತಿ ಎಂ. ನಾಗಪ್...
05/09/2026

ಕನ್ನಡ ಸಿನಿಮಾದಲ್ಲಿ ನಟಿಸಿದ್ದ ವ್ಯಕ್ತಿ ಈಗ ಕರ್ನಾಟಕ ಹೈಕೋರ್ಟ್ ಜಡ್ಜ್..!
ಚಿತ್ರರಂಗದಿಂದ ನ್ಯಾಯಾಂಗ ಕ್ಷೇತ್ರದವರೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಅಪರೂಪದ ಪಯಣ

ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಟಿಸಿದ್ದ ವ್ಯಕ್ತಿಯೊಬ್ಬರು ಇಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಹೂಮಳೆ’ ಸಿನಿಮಾದಲ್ಲಿ ನಟಿಸಿದ್ದರು ಎನ್ನಲಾಗಿದ್ದು, ಇದೀಗ ಅವರ ಸಿನಿಮಾದಲ್ಲಿನ ಹಳೆಯ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇತ್ತೀಚೆಗೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಒಂದೇ ದಿನ 550ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದರು. ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥದ ನಿಟ್ಟಿನಲ್ಲಿ ಅವರ ಕಾರ್ಯವೈಖರಿ ಗಮನ ಸೆಳೆದಿದೆ.

ನ್ಯಾಯಾಂಗ ಕ್ಷೇತ್ರದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಅವರ ಹಳೆಯ ಸಿನಿಮಾ ಬದುಕಿನ ವಿಚಾರ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಹೀರೋ ಆಗುವ ಅವಕಾಶವಿದ್ದ ವ್ಯಕ್ತಿ ಇಂದು ಹೈಕೋರ್ಟ್ ಜಡ್ಜ್..!
ನ್ಯಾಯಮೂರ್ತಿ ನಾಗಪ್ರಸನ್ನ ಅವರ ಅಪರೂಪದ ಪಯಣಕ್ಕೆ ನೆಟ್ಟಿಗರ ಮೆಚ್ಚುಗೆ..!

05/09/2026

ಕಲಬುರಗಿಯ ಠಾಣೆ ಮುಂದೆ ಹೈಡ್ರಾಮಾ!
ದೂರು ದಾಖಲಿಸುವ ವಿಚಾರಕ್ಕೆ ಕಿರಿಕ್!?

ಕರ್ತವ್ಯ ಲೋಪ ಆರೋಪ: ಪೊಲೀಸ್ ಕಾನ್ಸ್‌ಟೇಬಲ್ ಸೇವೆಯಿಂದ ಅಮಾನತು..!ಬಂಟ್ವಾಳ: ಕರ್ತವ್ಯದಲ್ಲಿ ಲೋಪ, ನಿರ್ಲಕ್ಷ್ಯ ಹಾಗೂ ಮೇಲಾಧಿಕಾರಿಯೊಂದಿಗೆ ಶಿಸ...
05/09/2026

ಕರ್ತವ್ಯ ಲೋಪ ಆರೋಪ: ಪೊಲೀಸ್ ಕಾನ್ಸ್‌ಟೇಬಲ್ ಸೇವೆಯಿಂದ ಅಮಾನತು..!

ಬಂಟ್ವಾಳ: ಕರ್ತವ್ಯದಲ್ಲಿ ಲೋಪ, ನಿರ್ಲಕ್ಷ್ಯ ಹಾಗೂ ಮೇಲಾಧಿಕಾರಿಯೊಂದಿಗೆ ಶಿಸ್ತುಬದ್ಧವಲ್ಲದ ರೀತಿಯಲ್ಲಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅರುಣ್ ಚೌಹಾನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ತವ್ಯ ನಿರ್ವಹಿಸುವ ವೇಳೆ ಅಗತ್ಯ ಎಚ್ಚರಿಕೆ ಹಾಗೂ ಜವಾಬ್ದಾರಿ ವಹಿಸದಿರುವುದು, ನಿರ್ಲಕ್ಷ್ಯ ತೋರಿರುವುದು ಮತ್ತು ಮೇಲಾಧಿಕಾರಿಯೊಂದಿಗೆ ಉದ್ಧಟತನದ ವರ್ತನೆ ತೋರಿದ ಆರೋಪಗಳ ಹಿನ್ನೆಲೆಯಲ್ಲಿ ಇಲಾಖಾ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಅಮಾನತು ಆದೇಶದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ನಿಯಮಾನುಸಾರ ಮುಂದಿನ ಕ್ರಮ ಹಾಗೂ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಕರ್ತವ್ಯ ಲೋಪ ಆರೋಪಕ್ಕೆ ಇಲಾಖೆಯಿಂದ ಕಠಿಣ ಕ್ರಮ – ಕಾನ್ಸ್‌ಟೇಬಲ್ ಅಮಾನತು..!

ಗಮನಿಸಿ: ಮೇಲಿನ ವಿವರಗಳು ಲಭ್ಯವಾಗಿರುವ ಮಾಹಿತಿ ಹಾಗೂ ಆರೋಪಗಳ ಆಧಾರದಲ್ಲಿವೆ. ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗುವವರೆಗೆ ಅವುಗಳನ್ನು ಆರೋಪಗಳೆಂದೇ ಪರಿಗಣಿಸಬೇಕು.

05/09/2026

ದಿನೇ ದಿನೇ ಹೆಚ್ಚಾಗುತ್ತಿರುವ ನೈಸ್ ರೋಡ್ ಟೋಲ್ ವಿವಾದ; ವಾಹನ ಸವಾರರಲ್ಲಿ ಆಕ್ರೋಶ!

05/09/2026

ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಭಾಗ್ಯ; ದೇವನಹಳ್ಳಿಯಿಂದ ಮುಂಬೈಗೆ ಪ್ರವಾಸ!
ಫ್ಲೈಟ್ ಹತ್ತಿದ ಸರ್ಕಾರಿ ಶಾಲಾ ಮಕ್ಕಳು; ಮುಂಬೈ ಪ್ರವಾಸಕ್ಕೆ ವಿದ್ಯಾರ್ಥಿಗಳು ಫುಲ್ ಖುಷ್!
200ಕ್ಕೂ ಹೆಚ್ಚು ಮಕ್ಕಳು–ಪೋಷಕರಿಗೆ ಮುಂಬೈ ಪ್ರವಾಸ; ದೇವನಹಳ್ಳಿ ಏರ್‌ಪೋರ್ಟ್‌ನಿಂದ ಹಾರಿದ ವಿದ್ಯಾರ್ಥಿಗಳು!
ಅನಾಥಾಶ್ರಮ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ವಿಶೇಷ ಪ್ರವಾಸ; ಮುಂಬೈನಲ್ಲಿ ಎರಡು ದಿನಗಳ ಪ್ರವಾಸ!

‘ಈ’ ಖಾತೆಗಾಗಿ ತನ್ನ ರ*ಕ್ತದಲ್ಲೇ ಸಿಎಂಗೆ ಪತ್ರ ಬರೆದ ಗ್ರಾಮಸ್ಥ ಮುನಿರಾಜು..!ಬೆಂಗಳೂರು ಉತ್ತರ: ರೆವೆನ್ಯೂ ಹಾಗೂ ಡಿಸಿ ಕನ್ವರ್ಷನ್ ಆಗಿರುವ ಜಮ...
05/09/2026

‘ಈ’ ಖಾತೆಗಾಗಿ ತನ್ನ ರ*ಕ್ತದಲ್ಲೇ ಸಿಎಂಗೆ ಪತ್ರ ಬರೆದ ಗ್ರಾಮಸ್ಥ ಮುನಿರಾಜು..!

ಬೆಂಗಳೂರು ಉತ್ತರ: ರೆವೆನ್ಯೂ ಹಾಗೂ ಡಿಸಿ ಕನ್ವರ್ಷನ್ ಆಗಿರುವ ಜಮೀನುಗಳಿಗೆ ‘ಈ’ ಖಾತೆ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರೊಬ್ಬರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ರ*ಕ್ತದಲ್ಲಿ ಪತ್ರ ಬರೆದು ಪೋಸ್ಟ್ ಮಾಡಿರುವ ಘಟನೆ ಗಮನ ಸೆಳೆದಿದೆ.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಮುನಿರಾಜು ಅವರು ಈ ವಿಭಿನ್ನ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ರೆವೆನ್ಯೂ ಹಾಗೂ ಡಿಸಿ ಕನ್ವರ್ಷನ್ ಜಮೀನುಗಳಿದ್ದು, ಅವುಗಳಿಗೆ ‘ಈ’ ಖಾತೆ ನೀಡದಿರುವುದರಿಂದ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮುನಿರಾಜು ತಿಳಿಸಿದ್ದಾರೆ.

ಈ ಖಾತೆ ನೀಡುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದ್ದರೂ, ಪ್ರಕ್ರಿಯೆ ವಿಳಂಬವಾಗುತ್ತಿದೆ. ಕೂಡಲೇ ‘ಈ’ ಖಾತೆ ನೀಡಿದರೆ ಲಕ್ಷಾಂತರ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ವಿಭಿನ್ನ ರೀತಿಯಲ್ಲಿ ಸರ್ಕಾರದ ಗಮನ ಸೆಳೆದ ಮುನಿರಾಜು ಅವರ ನಡೆ ಇದೀಗ ಚರ್ಚೆಗೆ ಕಾರಣವಾಗಿದೆ.

ತಮಾಷೆಗಾಗಿ
05/09/2026

ತಮಾಷೆಗಾಗಿ

05/09/2026

ಮಾದವಾರದಿಂದ ನೆಲಮಂಗಲ ವರೆಗೂ ಟ್ರಾಫಿಕ್ ಜಾಮ್

ನೆಲಮಂಗಲದಲ್ಲಿ ಶಾಂತಿ ಜಾಥಾ ಆಯೋಜನೆ ಹಿನ್ನೆಲೆ ಇಂದು ನಡೆದ ಪೂರ್ವಭಾವಿ ಸಭೆಯ ಛಾಯಾಚಿತ್ರಗಳು.ಸಭೆಯಲ್ಲಿ ಶಾಂತಿ ಜಾಥಾದ ಆಯೋಜನೆ, ಕಾರ್ಯಕ್ರಮದ ರೂ...
05/09/2026

ನೆಲಮಂಗಲದಲ್ಲಿ ಶಾಂತಿ ಜಾಥಾ ಆಯೋಜನೆ ಹಿನ್ನೆಲೆ ಇಂದು ನಡೆದ ಪೂರ್ವಭಾವಿ ಸಭೆಯ ಛಾಯಾಚಿತ್ರಗಳು.

ಸಭೆಯಲ್ಲಿ ಶಾಂತಿ ಜಾಥಾದ ಆಯೋಜನೆ, ಕಾರ್ಯಕ್ರಮದ ರೂಪುರೇಷೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಚರ್ಚೆ ನಡೆಯಿತು.

📸 ಸಭೆಯ ಪ್ರಮುಖ ಕ್ಷಣಗಳು | Digital Varthe

ಮಾದವಾರ ಇಂದ ನೆಲಮಂಗಲ ವೀಕೆಂಡ್ ಟ್ರಾಪಿಕ್ ಜಾಮ್
05/09/2026

ಮಾದವಾರ ಇಂದ ನೆಲಮಂಗಲ ವೀಕೆಂಡ್ ಟ್ರಾಪಿಕ್ ಜಾಮ್

Address

NELAMANGALA
Bangalore
562123

Alerts

Be the first to know and let us send you an email when Digital Varthe posts news and promotions. Your email address will not be used for any other purpose, and you can unsubscribe at any time.

Contact The Business

Send a message to Digital Varthe:

Shortcuts

Share

Category